ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಫೆ೧೫ ರಿಂದ ೨೦ರ ಒಳಗೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ನಿರ್ಧರಿಸಿದ್ದೇವೆ. ಎಲ್ಲ ಸಾಹಿತಿಗಳು ಸಾಹಿತ್ಯಾಸಕ್ತರು ಸೂಕ್ತ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಸಮ್ಮೇಳನದ ಯಶಸ್ವಿಗೆ ಶ್ರಮಿಸಬೇಕು ಎಂದು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ವಿನಂತಿಸಿದರು.
ಪಟ್ಟಣದ ಶಾರದಾ ವಿದ್ಯಾಮಂದಿರದಲ್ಲಿ ಈ ಕುರಿತು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಅವಧಿ ಕಡಿಮೆ ಇರುವದರಿಂದ ಸಮಿತಿ ರಚನೆ, ಲಾಂಛನ ಸಿದ್ಧಪಡಿಸುವಿಕೆ, ಕವಿಗೋಷ್ಟಿಗಳಿಗೆ ಹೆಸರುಗಳ ಬಿಡುಗಡೆ, ಸಂಪನ್ಮೂಲ ಕ್ರೂಢಿಕರಣ ಹೀಗೆ ಹಲವು ಕಾರ್ಯಗಳು ತುರ್ತಾಗಿ ಆಗಬೇಕಾಗಿರುವದರಿಂದ ಎಲ್ಲ ಹಿರಿಯ ಸಾಹಿತಿಗಳ, ಅನುಭವಿಗಳ ಮಾರ್ಗದರ್ಶನ, ಸಲಹೆಗಳು ಅತೀ ಅವಶ್ಯ. ಪೂರ್ವಭಾವಿ ಸಭೆ ಕರೆದಾಗ ಎಲ್ಲರೂ ತಪ್ಪದೇ ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದಲ್ಲಿ ಮಾತ್ರ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಾಧ್ಯ. ಬರುವ ದಿನಗಳಲ್ಲಿ ಮತ್ತೊಮ್ಮೆ ಪೂರ್ವಭಾವಿ ಸಭೆ ಕರೆಯಲಾಗುವದು. ತಪ್ಪದೇ ಭಾಗಿಯಾಗುವಂತೆ ಮನವಿ ಮಾಡಿಕೊಂಡರು.
ಈ ವೇಳೆ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ಮಾಜಿ ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಹಿರಿಯ ಸಾಹಿತಿಗಳಾದ ಅಬ್ದುಲ್ ರಹೆಮಾನ್ ಬಿದರಕುಂದಿ, ಎಸ್.ಎಸ್.ಹೂಗಾರ, ಬಸವರಾಜ ನಾಲತವಾಡ, ಎಚ್.ಆರ್.ಬಾಗವಾನ, ಐ.ಬಿ.ಹಿರೇಮಠ, ಎ.ಆರ್.ಮುಲ್ಲಾ, ಜೆ.ಡಿ.ಮುಲ್ಲಾ, ಪ್ರಕಾಶ ನರಗುಂದ, ಎಸ್.ಎ.ಬೇವಿನಗಿಡದ, ವಾಯ್.ಎಚ್.ವಿಜಯಕರ, ಎಸ್.ಎಸ್.ಕರಡ್ಡಿ ಮತ್ತೀತರರು ಮಾತನಾಡಿ ಸಮ್ಮೇಳನದ ಯಾವುದೇ ಜವಾಬ್ದಾರಿ ವಹಿಸಿದರೂ ಕಾಯಾ, ವಾಚಾ, ಮನಸಾ ಪಾಲಿಸಿ ಕನ್ನಡಾಂಬೆಯ ರಥವನ್ನು ಎಳೆಯುವಲ್ಲಿ ಹಗಲಿರುಳು ಶ್ರಮಿಸುವದಾಗಿ ತಿಳಿಸಿದರು.
ಸಿದ್ದನಗೌಡ ಬಿಜ್ಜೂರ, ಚಂದ್ರು ಕಲಾಲ, ಹುಸೇನ ಮುಲ್ಲಾ ಕಾಳಗಿ, ಶ್ರೀಶೈಲ ಹೂಗಾರ, ಸರಸ್ವತಿ ಪೀರಾಪೂರ, ಪ್ರಭುಗೌಡ ರಾರೆಡ್ಡಿ, ಶ್ರೀಶೈಲ ಕತ್ತಿ, ಶ್ರೀಶೈಲ ಪೂಜಾರಿ, ಸದು ಮಠ, ಹುಸೇನ ಮುಲ್ಲಾ, ಸಿದ್ದಣ್ಣ ಹಡಲಗೇರಿ, ಜಹಾಂಗೀರ ಮುಲ್ಲಾ, ಅರವಿಮದ ಕಾಶಿನಕುಂಟಿ, ದೇವೆಂದ್ರ ವಾಲಿಕಾರ, ಗಂಗಾಧರ ಪವಾಡಶೆಟ್ಟಿ, ಎಂ.ಬಿ.ಪಾಟೀಲ, ನರಸಮ್ಮ ಗುಬಚಿ ಸೇರಿದಂತೆ ಹಲವರು ಇದ್ದರು.

