ಉದಯರಶ್ಮಿ ದಿನಪತ್ರಿಕೆ
ಆಲಮೇಲ: ನಾನು ಸನ್ಯಾಸಿ ಆಗಬೇಕು, ನಾನು ಈ ಭಾರತದಲ್ಲಿ ಕ್ರಾಂತಿಕಾರಿಯಾಗಬೇಕು, ಭಾರತಕ್ಕಾಗಿ ನಾನು ಏನಾದರು ಮಾಡಬೇಕು. ಸಮಸ್ತ ಭಾರತವನ್ನು ಜಗತ್ತಿನ ಎದುರಿಗೆ ತೋರಿಸಬೇಕು ಎಂಬ ಆಸೆಯನ್ನು ಹೊತ್ತು ಸನ್ಯಾಸಿ ಆಗಲು ಹೋದವನನ್ನು ನೀನು ಸನ್ಯಾಸಿ ಆಗಬೇಡ ಬ್ರಿಟಿಷರ ಹುಟ್ಟಡಗಿಸುವ ಹೋರಾಟಗಾರನಗಬೇಕು ದಾರಿತಪ್ಪಿದ ಭಾರತದ ಯುವಕರಿಗೆ ದಾರಿದೀಪವಾಗಬೇಕು. ದೆಶದ ಒಳಗಡೆ ಸಂಘಟನೆ ಮಾಡುವದಕಿಂತ ದೇಶದ ಹೋರಗಡೆ ಸಂಘಟನೆ ಮಾಡಿ ಶತ್ರು ರಾಷ್ಟ್ರಗಳಿಗೆ ಹೋಗಿ ಅಲ್ಲಿ ಸಂಘಟನೆಮಾಡಿ ಸೈನ್ಯವನ್ನು ಕಟ್ಟಿ ಭಾರತಕ್ಕೆ ಬಂದು ಬ್ರೀಟಿಷ ಅಧಿಕಾರವನ್ನ ಹೋಡೆದೊಡಿಸಿ ಶಾಂತಿಯಿಂದ ಸ್ವಾತಂತ್ರ್ಯ ಇಲ್ಲಾ ಕ್ರಾಂತಿಯಿಂದ ಸ್ವಾತಂತ್ರ್ಯ ನಾನು ತೋರಿಸುತ್ತೆನೆ ಎಂದು ಜೈ ಹಿಂದ ಘೋಷಣೆ ಕೂಗಿದ ಅಖಂಡ ಭಾರತದ ಮೊಟ್ಟ ಮೊದಲ ಪ್ರಧಾನ ಮಂತ್ರಿ ನೇತಾಜಿ ಸುಭಾಷಚಂದ್ರ ಭೋಸರಿಗೆ ಆದರ್ಶ ಪ್ರಾಯರಾದವರು ಸ್ವಾಮಿ ವಿವೇಕಾನಂದರು ಎಂದು ಉಪನ್ಯಾಸಕಿ ಅಕ್ಷಯ ಗೋಖಲೆ ಹೇಳಿದರು.
ಇವರು ಪಟ್ಟಣದಲ್ಲಿ ನಡೆದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಯುವಕ ಸಂಘ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ೧೬೨ನೇ ಜಂಯತೋತ್ಸವದ ಅಂಗವಾಗಿ ಉಪನ್ಯಾಸ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖಂಡರಾದ ಹರೀಶ ಯಂಟಮಾನ, ಸ್ವಾಮಿ ವಿವೇಕಾನಂದರ ಬಗ್ಗೆ ನಾವು ನೀವೆಲ್ಲರು ಅಧ್ಯಯನ ಮಾಡಿ ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕಿದೆ. ಆದರೆ ಆ ಅವಕಾಶ ನಮ್ಮೂರಲ್ಲು ನಿರ್ಮಾಣ ವಾಗಬೇಕಾದರೆ ನಮ್ಮೂರಲ್ಲು ಗ್ರಂಥಾಲಯ ನಿರ್ಮಾಣವಾಗಬೇಕಿದೆ ಆದಷ್ಟು ಬೇಗ ಈ ಗ್ರಂಥಾಲಯ ನಿರ್ಮಾಣವಾಗಲಿ ಎಂದು ಹೇಳಿದರು.
ಭರತ ಅಶೋಕ ಮನಗೂಳಿ ಮಾತನಾಡಿ, ಭಾರತದಲ್ಲಿ ಹುಟ್ಟಿದ ಸ್ವಾಮಿ ವಿವೇಕಾನಂದರು ಇಡಿ ಜಗತ್ತಿಗೆ ಸ್ವಾಮಿ ವಿವೇಕಾನಂದರು ಆದರ್ಶವಾಗಿದಾರೆ. ನಾವು ನೀವೆಲ್ಲರು ಅವರ ನಡೆ ನುಡಿಗಳನ್ನು ಪಾಲಿಸೋಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಾನಿದ್ಯವನ್ನು ಶ್ರೀಶೈಲಯ್ಯ ಅಳೋಳ್ಳಿಮಠ ಬಸವಲಿಂಗ ಶರಣರು, ಮುಖಂಡರಾದ ಅಶೋಕ ಕೋಳಾರಿ ಡಾ|| ರಾಜೇಶ ಪಾಟೀಲ, ಸಂಗಮೇಶ ಮುಂಡಾಸ, ಬಸವರಾಜ ಹೂಗಾರ, ಸೋಮು ಮೇಲಿನಮನಿ, ಪ್ರಶಾಂತ ನಾಶಿ, ಹಿರಿಯರಾದ ಗಾಂಧಿಗೌಡ ಪಾಟೀಲ, ಸಂಘದ ಅಧ್ಯಕ್ಷ ಹಣಮಂತ ಸಿಂಗ ರಜಪೂತ, ಅಶೋಕ ಪರೀಟ, ಮಹಾಂತಗೌಡ ಹಳೇಮನಿ, ವಿಶ್ವನಾಥ ಅಮರಗೊಂಡ, ಶ್ರೀಶೈಲ ಜೋಗುರ, ಶರಣು ತಳವಾರ, ಆಕಾಶ ಗಂದಗೆ, ರತನ ಟಾಟ ಒಣಕುದರಿ ಇತರರಿದ್ದರು.

