Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿದೇಶಕ್ಕೆ ಹೊರಟ ಗ್ರಾಮೀಣ ಪ್ರತಿಭೆ ಪ್ರೀತಿ ಆನೆಗುಂದಿ

ನಬಿರೋಶನ್ ಪ್ರಕಾಶನದಿಂದ ಮಹಾಂತೇಶ ಅವರಿಗೆ ನುಡಿ ನಮನ

ನ.೨೯ ರಂದು ಡಾ.ಅಂಬೇಡ್ಕರ್ ವಿಚಾರಗಳ ಅನಾವರಣ, ಹೊಸ ಬೆಳಕು ಕಾರ್ಯಕ್ರಮ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅಯೂಬ ಮನಿಯಾರ ಸಮಾಜಸೇವೆಗೆ ಶ್ಲಾಘನೆ
(ರಾಜ್ಯ ) ಜಿಲ್ಲೆ

ಅಯೂಬ ಮನಿಯಾರ ಸಮಾಜಸೇವೆಗೆ ಶ್ಲಾಘನೆ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮುದ್ದೇಬಿಹಾಳ: ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಕಳೆದ 35 ವರ್ಷಗಳಿಂದ ಬಡವರಿಗೆ ದಿನಸಿ ಕಿಟ್ ನೀಡುತ್ತ ಬಂದಿರುವ ಸಮಾಜ ಸೇವಕ ಅಯೂಬ ಮನಿಯಾರ ಈ ವರ್ಷವೂ ಕೂಡ ತಮ್ಮ ನಿವಾಸದ ಎದುರು ೨೫೦ ದಿನಸಿ ಕಿಟ್‌ಗಳನ್ನು ಮತ್ತು ಹಾಲು ಖರೀದಿಸಲೆಂದು ಪ್ರತೀ ಕಿಟ್ ನ ಜೊತೆಗೆ 100 ರೂ.ಗಳನ್ನು ವಿತರಿಸಿ ಮಾನವೀಯತೆ ಮೆರೆದರು.
ವಿತರಣಾ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ ಮಾತನಾಡಿ, ಸಾಕಷ್ಟು ಜನರಲ್ಲಿ ಅಪಾರ ಹಣವಿದ್ದರೂ ದಾನ ಮಾಡುವ ಗುಣ ಇರಲ್ಲ. ಕೆಲವರು ದಾನ ಮಾಡಬೇಕೆಂದರೂ ಸ್ವೀಕರಿಸಲು ಯಾರೂ ಮುಂದೆ ಬರಲ್ಲ. ಇಂಥವರ ಮಧ್ಯೆ ಮನಿಯಾರ ಅವರ ಸೇವೆಯನ್ನು ಸ್ವೀಕರಿಸಲು ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ತಾಯಂದಿರು ಆಗಮಿಸುತ್ತಿರುವುದು ಮನಿಯಾರ್ ಅವರ ನಿಸ್ವಾರ್ಥ ಸೇವೆಯನ್ನು ಎತ್ತಿ ತೋರಿಸುತ್ತದೆ ಎಂದರು.
ಲಾಲ್ ಹುಸೇನ ಕಂದಗಲ್,
ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಎಂ.ಎಚ್.ಕ್ವಾರಿ ಮಾತನಾಡಿ,
ನ್ಯಾಯವಾದಿ ವಿ.ಎಸ್.ಸಾಲಿಮಠ ಮನಿಯಾರ ಅವರ ಪರೋಪಕಾರ ಕುರಿತು ಶ್ಲಾಘಿಸಿದರು.
ಸಮಾಜ ಸೇವಕ ಅಯೂಬ್ ಮನಿಯಾರ್ ಮಾತನಾಡಿ, ಬಡತನದ ಬೇಗೆಯಿಂದ ಬಳಲಿದ ನಾನು ಹಬ್ಬದ ದಿನಗಳು ಬಂದಾಗ ಮೊದಲು ನೆನಪಾಗುವುದೇ ಬಡವರು. ಅವರಿಗೆ ಏನಾದರೂ ಸಹಾಯ ಮಾಡಬೇಕು ಎನ್ನುವ ಹಂಬಲ ನನ್ನದು. ನಾನೊಬ್ಬನೇ ಹಬ್ಬ ಆಚರಿಸಿದರೆ ದೇವರು ಮೆಚ್ಚಲಾರ. ಹಾಗಾಗಿ ಪ್ರತೀ ವರ್ಷ ನನ್ನ ಕುಟುಂಬಕ್ಕೆ ಹಬ್ಬದ ದಿನಸಿ ಖರೀದಿಸುವಾಗಲೇ ನನ್ನವರಿಗೂ ಖರೀದಿಸಿ ಅವರಿಗೆ ತಲುಪಿಸಿದ ನಂತರವೇ ನನಗೆ ಸಮಾಧಾನ. ಇದರ ಹಿಂದೆ ಯಾವುದೇ ಉದ್ದೇಶವಿಲ್ಲ. ನನ್ನ ಕುಟುಂಬಕ್ಕೆ ಆಶೀರ್ವದಿಸಿದರೆ ಸಾಕು ಎಂದರು.
ಶಿಕ್ಷಕಿ ಗೀತಾ ಹುರಕಡ್ಲಿ ಮಾತನಾಡಿ, ತಮ್ಮ ಪತಿಯ ಕಿಡ್ನಿ ಆಪರೇಶನ್ ನಲ್ಲಿ ಸಹಾಯ ಮಾಡಿದ ಕ್ಷಣಗಳನ್ನು ನೆನೆದರು.
ಮೌಲಾನಾ ಅಫ್ತಾಬ್ ಮುಫ್ತಿ ದಿವ್ಯ ಸಾನಿಧ್ಯ ವಹಿಸಿದ್ದರು. ಮೌಲಾನಾ ಅಲ್ಲಾಭಕ್ಷ ಖಾಜಿ ಸಾನಿಧ್ಯ ವಹಿಸಿದ್ದರು. ಗಣ್ಯ ವ್ಯಾಪಾರಸ್ಥರಾದ ಬಸವರಾಜ ಮೋಟಗಿ, ನಿವೃತ್ತ ಪ್ರಾಶುಪಾಲ ಎಲ್.ಎಚ್.ಮಮದಾಪೂರ, ಡಾ|| ವಿರೇಶ ಇಟಗಿ, ಅಯೂಬ್ ಮನಿಯಾರ್ ಅವರ ಪತ್ನಿ ಪರ್ವೀನ್ ಮನಿಯಾರ್, ಮಗ ಅಫ್ತಾಬ್ ಮನಿಯಾರ್, ಶಿಕ್ಷಕ ಜೆ.ಡಿ.ಮುಲ್ಲಾ ಸೇರಿದಂತೆ ಇತರರು ಭಾಗಿಯಾಗಿದ್ದರು.
ಮುಜಾಹೀದ್ ನಮಾಜಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

BIJAPUR NEWS MUDDEBIHAL NEWS public news udaya rashmi
Share. Facebook Twitter Pinterest Email Telegram WhatsApp
  • Website

Related Posts

ವಿದೇಶಕ್ಕೆ ಹೊರಟ ಗ್ರಾಮೀಣ ಪ್ರತಿಭೆ ಪ್ರೀತಿ ಆನೆಗುಂದಿ

ನಬಿರೋಶನ್ ಪ್ರಕಾಶನದಿಂದ ಮಹಾಂತೇಶ ಅವರಿಗೆ ನುಡಿ ನಮನ

ನ.೨೯ ರಂದು ಡಾ.ಅಂಬೇಡ್ಕರ್ ವಿಚಾರಗಳ ಅನಾವರಣ, ಹೊಸ ಬೆಳಕು ಕಾರ್ಯಕ್ರಮ

ಮನಗೂಳಿ ಮನೆತನದಿಂದ ಶಿಕ್ಷಣ ಕ್ಷೇತ್ರಕ್ಕೆ ಅಗಾಧ ಕೊಡುಗೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿದೇಶಕ್ಕೆ ಹೊರಟ ಗ್ರಾಮೀಣ ಪ್ರತಿಭೆ ಪ್ರೀತಿ ಆನೆಗುಂದಿ
    In (ರಾಜ್ಯ ) ಜಿಲ್ಲೆ
  • ನಬಿರೋಶನ್ ಪ್ರಕಾಶನದಿಂದ ಮಹಾಂತೇಶ ಅವರಿಗೆ ನುಡಿ ನಮನ
    In (ರಾಜ್ಯ ) ಜಿಲ್ಲೆ
  • ನ.೨೯ ರಂದು ಡಾ.ಅಂಬೇಡ್ಕರ್ ವಿಚಾರಗಳ ಅನಾವರಣ, ಹೊಸ ಬೆಳಕು ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಮನಗೂಳಿ ಮನೆತನದಿಂದ ಶಿಕ್ಷಣ ಕ್ಷೇತ್ರಕ್ಕೆ ಅಗಾಧ ಕೊಡುಗೆ
    In (ರಾಜ್ಯ ) ಜಿಲ್ಲೆ
  • ದಿ:೨೯ ರಂದು ಕೋರವಾರೇಶನ ಕಾರ್ತಿಕೋತ್ಸವ
    In (ರಾಜ್ಯ ) ಜಿಲ್ಲೆ
  • ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆ :ಶಾಸಕ ಯಶವಂತರಾಯಗೌಡ
    In (ರಾಜ್ಯ ) ಜಿಲ್ಲೆ
  • ಚಿಮ್ಮಡದಲ್ಲಿ “ಸಂವಿಧಾನ ದಿವಸ್” ಆಚರಣೆ
    In (ರಾಜ್ಯ ) ಜಿಲ್ಲೆ
  • ಬೋಧನೆ ಜತೆಗೆ ಚಟುವಟಿಕೆ ಆಧಾರಿತ ಕಲಿಕೆ ಅಗತ್ಯ :ಪ್ರೊ.ಖೊದ್ನಾಪೂರ
    In (ರಾಜ್ಯ ) ಜಿಲ್ಲೆ
  • ಚಾಣಕ್ಯ ಆಡಳಿತ ತರಬೇತಿ ಯೋಜನೆಯಡಿ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿಸಿದರೆ ನಿಮಗೇ ಅಪಾಯ!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.