ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದ್ರಾಕ್ಷಿ ಬೆಳೆಯ ವಿಮೆ ತುಂಬಿದ ರೈತರಿಗೆ ಅವಧಿ ಮುಗಿದರೂ ಕೂಡ ಹಣ ಬಿಡುಗಡೆ ಆಗದೇ ಇರುವದರಿಂದ ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ್ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ನಾಂದ್ರೇಕರ್, ಈಗಾಗಲೇ ನಮ್ಮ ನೆರೆ ಜಿಲ್ಲೆಯಾದ ಬೆಳಗಾವಿ ದ್ರಾಕ್ಷಿ ಬೆಳೆಗಾರರಿಗೆ ಪ್ರತಿ ಹೆಕ್ಟರಗೆ ₹ 1,80 ಲಕ್ಷ (ಒಂದು ಲಕ್ಷ ಎಂಬತ್ತು ಸಾವಿರ) ಜಮೆಯಾಗಿರುವುದದು. ಹವಾಮಾನ ವಿಜಯಪೂರ ಮತ್ತು ಬಾಗಲಕೋಟದಲ್ಲಿ ಅದೆ ಮಾದರಿಯಲ್ಲಿರುವದರಿಂದ, ಈ ಜಿಲ್ಲೆಗಳಿಗೆ ಅದೇ ರೀತಿ ಹಣ ಸಂದಾಯವಾಗಬೇಕು. 2023-24ರಲ್ಲಿ ರೈತರು ವಿಮಾ ತುಂಬಿದ ಹಣ ಜಮಾ ಆಗಬೇಕಾಗಿತ್ತು ಎಪ್ರೀಲ್ 31ಕ್ಕೆ ವಿಮಾ ಅವಧಿ ಮುಕ್ತಾಯವಾಗಿರುತ್ತದೆ. ಆದರೆ 6 ತಿಂಗಳು ಕಳೆದರೂ ಕೂಡಾ ರೈತರಿಗೆ ಹಣ ಜಮೆಯಾಗಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಹಣವನ್ನು ತ್ವರಿತವಾಗಿ ಜಮಾ ಮಾಡುವ ವ್ಯವಸ್ಥೆ ಮಾಡಬೇಕು. ಪಕ್ಕದ ಜಿಲ್ಲೆಯಾದ ಬೆಳಗಾವಿಯ ಎಲ್ಲ ದ್ರಾಕ್ಷಿ ಬೆಳೆಗಾರರಿಗೆ ವಿಮಾ ತುಂಬಿದ ರೈತರ ಖಾತೆಗೆ ಹಣ ಸಂದಾಯವಾಗಿದೆ.
ಬೆಳಗಾವಿ ಜಿಲ್ಲೆಯ ದ್ರಾಕ್ಷಿ ವಿಮಾ ಕಂಪನಿಯು ಟಾಟಾ ಇರುವುದು ವಿಜಯಪೂರ ಹಾಗೂ ಬಾಗಲಕೋಟ ಜಿಲ್ಲೆಗಳ ದ್ರಾಕ್ಷಿ ವಿಮಾ ಕಂಪನಿಯು ಅಗ್ರಿಕಲ್ಟರ್ ವಿಮಾ ಕಂಪನಿ ಇರುವುದು, ಆದು ಏನೇ ಇರಲಿ ವಿಮಾ ಅವಧಿ ಮುಗಿದ ತಕ್ಷಣ ರೈತರಿಗೆ ವಿಮಾ ಹಣ ಸಂದಾಯವಾಗಬೇಕಾಗಿತ್ತು. ಆದರೆ ಇಲ್ಲಿವರೆಗೆ ಆಗಿಲ್ಲ. ವಿಮಾ ಕಂಪನಿಯವರ ಕಾರ್ಯಾಲಯವು ಬೆಂಗಳೂರಿನಲ್ಲಿ ಇರುವುದು ಅವರನ್ನು ಸಂಪರ್ಕಿಸಲು ರೈತರಿಗೆ ತೊಂದರೆಯಾಗುತ್ತದೆ. ಅದಕ್ಕಾಗಿ ವಿಮಾ ಕಂಪನಿಯ ಕಾರ್ಯಾಲವು ವಿಜಯಪೂರ ಜಿಲ್ಲೆಯಲ್ಲಿ ಆಗಬೇಕು ಅವರನ್ನು ಸಂಪರ್ಕಿಸಲು ರೈತರಿಗೆ ಅನೂಕುಲವಾಗುತ್ತದೆ.
ನಮ್ಮ ಬೇಡಿಕೆಗಳನ್ನು ವಿಮಾ ಕಂಪನಿಯು ಹಾಗೂ ತೋಟಗಾರಿಕಾ ಇಲಾಖೆಯ ನಿರ್ದೇಶಕರ ಜೋತೆ ಮಾತನಾಡಿ ತ್ವರಿತವಾಗಿ ನಮಗೆ ಹಣ ಸಂದಾಯ ಮಾಡುವ ವ್ಯವಸ್ಥೆ ಮಾಡಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಂಜಯ ಪಾಟೀಲ ಕನಮಡಿ, ಎಂ.ಎಸ್.ರುದ್ರಗೌಡರ, ಎಸ್.ಎಚ್.ನಾಡಗೌಡ, ಎಂ.ಎಸ್.ಲೋಣಿ, ಮಲ್ಲಿಕಾರ್ಜುನ ತುಳಜಾಣ, ಸಿದಗೊಂಡ ರುದ್ರಗೌಡರ, ಆರ್.ಆರ್.ಲೋಣಿ, ಪಿ.ಡಿ.ಮುಲ್ಲಾ, ಜೆ.ಎ.ಬಾವಿ ಜಿಲ್ಲೆಯ ಎಲ್ಲ ದ್ರಾಕ್ಷಿ ಬೆಳೆಗಾರರಿದ್ದರು.

