ಗಿಡ ಬೆಳೆಸಿ, ಪರಿಸರ ಉಳಿಸಿ-ಹೆಗ್ಗಳಗಿ. ಚಿಮ್ಮಡದಲ್ಲಿ ಸಸಿ ನೆಡುವ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ, ಮನೆ, ಮಂದಿರ, ಶಾಲೆ ಸೇರಿದಂತೆ ಪ್ರತಿಯೊಂದು ಸ್ಥಳಗಳಲ್ಲಿ ಸಸಿ ನೆಟ್ಟು ಅವುಗಳನ್ನು ಪೋಷಿಸಲು ಪ್ರತಿಯೊಬ್ಬರು ಪಣ ತೊಡಬೇಕೆಂದು ಸಮೀರವಾಡಿಯ ಗೋದಾವರಿ ಬಯೋರಿಫೈನರೀಜ್ನ ರಬಕವಿ ವಲಯ ಕಬ್ಬು ಬೆಳೆಯ ನಿರೀಕ್ಷಕ ಎನ್.ಎಂ.ಹೆಗ್ಗಳಗಿ ಹೇಳಿದರು.
ಗ್ರಾಮದ ಪ್ರಭುಲಿಂಗೇಶ್ವರ ಕೈಗಾರಿಕಾ ತರಬೇತಿ ಕೇಂದ್ರದ ಆವರಣದಲ್ಲಿ ಗಾಂಧಿ ಜಯಂತಿ ಪ್ರಯುಕ್ರ ಸೆ.೧೭ರಿಂದ ಅ. ೨ರ ವರೆಗೆ ಹಮ್ಮಿಕೊಳ್ಲಲಾದ ಸ್ವಚ್ಛತೇಯೆ ಸೇವೆ ಆಂದೋಲನದ ಸಸಿ ನಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನ ಮಂತ್ರಿಗಳ ತಾಯಿಯ ಹೆಸರಿನಲ್ಲಿ ಒಂದು ಗಿಡ ಅಭಿಯಾನದ ಭಾಗವಾಗಿ ಚಿಮ್ಮಡ ಹಾಗೂ ಹೊಸೂರ ಪಟ್ಟಣಗಳಲ್ಲಿ ಹಲವು ಸ್ಥಳಗಳಲ್ಲಿ ಸಸಿಗಳನ್ನು ನೆಡಲಾಗಿದ್ದು ಅವುಗಳನ್ನು ಪೋಸಿಸಿ ಬೆಳೆಸಲು ಪ್ರತಿಯೊಬ್ಬರು ಸಹಕಾರ ನೀಡಬೇಕೆಂದರು.
ಗ್ರಾಮ ಪಂಚಯತಿ ಮಾಜಿ ಅಧ್ಯಕ್ಷ ಆನಂದ ಕವಟಿ, ಐಟಿಐ ಕಾರ್ಯದರ್ಶಿ ಅಶೋಕ ಧಡೂತಿ ಮಾತನಾಡಿದರು
ವಲಯ ಕೃಷಿ ಹಿರಿಯ ವ್ಯವಸ್ಥಾಪಕ ಎಸ್.ಎಲ್. ಪಲ್ಲೇದ, ಐಟಿಐ ಅಧ್ಯಕ್ಷ ರಾಮಣ್ಣ ಮುಗಳಖೋಡ, ಬಿ.ಎಸ್. ಪಾಟೀಲ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಆರ್.ಎಂ. ಬಗನಾಳ, ಗುರಪ್ಪಾ ಬಳಗಾರ, ರಾಚಯ್ಯ ಮಠಪತಿ, ಗ್ರಾ,ಪಂ. ಮಾಜಿ ಅಧ್ಯಕ್ಷ ಬೀರಪ್ಪಾ ಹಳೆಮನಿ, ಸದಸ್ಯ ಪ್ರಕಾಶ ಪಾಟೀಲ, ಪ್ರಕಾಶ ಪಾಲಭಾವಿ, ಪ್ರಾಚಾರ್ಯ ಎಸ್.ಎಸ್. ರೇವಡಿ, ಕಬ್ಬು ಬೆಳೆಯ ನಿರೀಕ್ಷಕ ಎಚ್.ಎಂ. ಮೇಟಿ ಸೇರಿದಂತೆ ಹಲವು ಪ್ರಮುಖರು ಆಗಮಿಸಿದ್ದರು.
ಕಾರ್ಯಕ್ರಮಕ್ಕೆ ಕಬ್ಬು ಬೆಳೆಯ ನಿರೀಕ್ಷಕ ಪಿ.ಆರ್. ಕೊಳಕಿ ಸ್ವಾಗತಿಸಿದರು, ವಿ.ಸಿ. ಗದ್ದೆಪ್ಪನವರ ನಿರೂಪಿಸಿದರು, ಪಿ.ಜೆ. ಘಟ್ನಟ್ಟಿ ವಂದಿಸಿದರು.

