ಮುದ್ದೇಬಿಹಾಳ: ಭಕ್ತರ ಆರಾಧ್ಯ ದೇವತೆ, ಬೇಡಿದ ಇಷ್ಟಾರ್ಥಗಳನ್ನು ಕರುಣಿಸುವ ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಶ್ರೀ ಪದ್ಮಾವತಿ ದೇವಿಯ ರಥೋತ್ಸವ ವೈಭವದೊಂದಿಗೆ ನೆರವೇರಿತು.
ಪಟ್ಟಣದ ಪ್ರಮುಖ ಜಾತ್ರೆಗಳಲ್ಲೊಂದಾದ ದೇವಿಯ ಜಾತ್ರೆಗೆ ಪ್ರತೀ ವರ್ಷದಂತೆ ಈ ವರ್ಷವೂ ಕೂಡಾ ಬೇರೆ ರಾಜ್ಯಗಳಿಂದ ಭಕ್ತರು ಕುಟುಂಬ ಸಮೇತ ಆಗಮಿಸಿದ್ದರು. ರಥೋತ್ಸವದ ವೇಳೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ತಮ್ಮ ಕೋರಿಯನ್ನು ಶ್ರೀ ದೇವಿಯ ಮುಂದಿಟ್ಟರು. ಬೆಳಿಗ್ಗೆಯಿಂದಲೇ ಸಕಲ ಪೂಜಾ ವಿಧಿ ವಿಧಾನಗಳು, ತೀರ್ಥ ಪ್ರಸಾದ ಕಾರ್ಯಕ್ರಮಗಳು ಜರುಗಿದವು.
Subscribe to Updates
Get the latest creative news from FooBar about art, design and business.
Related Posts
Add A Comment

