ವಿಜಯಪುರ: ಶನಿವಾರದಂದು ಸಂಜೆ ಸುರಿದ ಮಳೆ ಹಾಗೂ ವಿಪರಿತ್ ಗಾಳಿಯಿಂದ ಜಿಲ್ಲೆಯಲ್ಲಿ ಸಾಕಷ್ಟು ನಷ್ಟವಾಗಿದೆ, ಸಮೀಪದ ಜಂಬಗಿ(ಆ)s ಗ್ರಾಮದಲ್ಲಿ ಸುಮಾರು ೫೦ ಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಲಿಂಬೆ ಗಿಡಗಳು ಬುಡಸಮೇತ ಕಿತ್ತುಬಿದ್ದು ನಷ್ಟಗೊಂಡ ನಡೆದಿದೆ.
ಬರಗಾಲದಿಂದ ಇರುವ ಅಲ್ಪ ಸ್ವಲ್ಪ ನೀರು ಸಾಲದೇ ಟ್ಯಾಂಕರ್ ಮೂಲಕ ಹೆಚ್ಚಿನ ಹಣ ಕೊಟ್ಟು ನೀರು ಹಾಕಿಸಿಕೊಂಡು ಲಿಂಬೆ ಗಿಡವನ್ನು ಕಾಪಾಡಿಕೊಂಡು ಬಂದಿರುವ ರೈತರಿಗೆ ನಿನ್ನೆಯ ದಿನ ಬೆಳಗಾಗುವುದರೊಳಗೆ ಎಲ್ಲಾ ಲಿಂಬೆ ಗಿಡಗಳು ಗಾಳಿಯಿಂದ ನೆಲಕ್ಕೆ ಊರುಳಿರುವುದನ್ನು ನೋಡಿ ದಿಕ್ಕು ತೋಚದಂತಾಗಿ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ, ಬೆಳಿಗ್ಗೆ ರೈತರು ಕರೆ ಮಾಡಿದಾಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಒತಿಯಿಂದ ನಷ್ಗೊಂಡ ರೈತರ ಹೊಲಕ್ಕೆ ಬೇಟಿ ನೀಡಿ ಸರಕಾರಕ್ಕೆ ಪರಿಹಾರಕ್ಕಾಗಿ ಒತ್ತಾಯಿಸಲಾಗುವುದು ಎಂದು ವಿಜಯಪುರ ತಾಲೂಕಾ ಉಪಾಧ್ಯಕ್ಷ ಮಹಾದೇವಪ್ಪ ತೇಲಿ ಹೇಳಿದರು.
ಲಿಂಬೆಗೆ ಬೇಸಿಗೆಯಲ್ಲಿ ಒಳ್ಳೆಯ ಬೆಲೆ ಬರುವ ವೇಳೆಯಲ್ಲಿ ಈ ರೀತಿ ಅವಘಡಕ್ಕೆ ಸಿಲುಕಿ ಈ ಭಾಗದ ಹಲವಾರು ರೈತರಿಗೆ ನಷ್ಟವಾಗಿದೆ, ಕೂಡಲೇ ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆ ನಷ್ಟಗೊಂಡ ರೈತರಿಗೆ ಪರಿಹಾರ ನೀಡಬೇಕು, ಇಂದು ರವಿವಾರ ಇರುವುದರಿಂದ ಎಲ್ಲಾ ಅಧಿಕಾರಿಗಳಿಗೆ ಕರೆ ಮಾಡಿದರೆ ಯಾರು ಕರೆ ಸ್ವೀಕರಿಸಲಿಲ್ಲ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment

