Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ಪ್ರಶಾಂತ ಕುಲಕರ್ಣಿಉಪನ್ಯಾಸಕರುಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯಸಿಂದಗಿ. ಜಿಲ್ಲಾ: ವಿಜಯಪುರPh:9845442237 ಉದಯರಶ್ಮಿ ದಿನಪತ್ರಿಕೆ ಮಕ್ಕಳ ಜೀವನವನ್ನು ಕಟ್ಟಿಕೊಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂಬುದು ನಾವು ಹಲವು ಬಾರಿ ಕೇಳಿರುವ ಸತ್ಯ. ಆದರೆ ಪೋಷಕರ ಪಾತ್ರವು ಕೇವಲ ಆಹಾರ, ಬಟ್ಟೆ, ಶಿಕ್ಷಣ ನೀಡುವುದಕ್ಕೆ ಸೀಮಿತವಲ್ಲ; ಅದು ಇನ್ನಷ್ಟು ಆಳವಾಗಿ, ಇನ್ನಷ್ಟು ಮೃದುವಾಗಿ, ಇನ್ನಷ್ಟು ಜವಾಬ್ದಾರಿಯಾಗಿ ಮಕ್ಕಳ ಮನಸ್ಸಿನಲ್ಲಿ ರೂಪುಗೊಳ್ಳುತ್ತದೆ ಮಗು ಜನಿಸಿದ ಕ್ಷಣದಿಂದಲೇ ಪೋಷಕರ ಕಣ್ಣಿನಲ್ಲಿ ಜಗತ್ತನ್ನು ನೋಡುವುದನ್ನು, ಅವರ ಹೃದಯದಲ್ಲಿ ಭಾವನೆಗಳನ್ನು ಅನುಭವಿಸುವುದನ್ನು, ಅವರ ನಡೆ–ನುಡಿಯಲ್ಲಿ ಜೀವನದ ಅರ್ಥವನ್ನು ಹುಡುಕುವುದನ್ನು ಆರಂಭಿಸುತ್ತದೆ.ಮನೆಯೇ ಮಕ್ಕಳ ಮೊದಲ ಪಾಠ ಶಾಲೆ; ಪೋಷಕರು ಮೊದಲ ಮತ್ತು ಅತ್ಯಂತ ಪರಿಣಾಮಕಾರಿ ಗುರುಗಳು. ಮನೆಯೊಳಗಿನ ಒಡನಾಟ, ಪ್ರೀತಿ, ಶಾಂತಿ, ಮಾತಿನ ಮಧುರತೆ—ಇವು ಮಕ್ಕಳ ಮನಸ್ಸಿನಲ್ಲಿ ಮೌಲ್ಯಗಳ ಬೀಜ ಬೀಳಿಸುತ್ತವೆ. ಸಲಹೆಗಳು, ಗದರಿಕೆಗಳು, ಪಾಠಗಳಿಗಿಂತಲೂ ಹೆಚ್ಚು, ಪೋಷಕರು ಹೇಗೆ ಬದುಕುತ್ತಾರೆಂಬುದೇ ಮಕ್ಕಳಿಗೆ ಜೀವನದ ದೊಡ್ಡ ಪಾಠ. ಹೀಗಾಗಿ ಮೌಲ್ಯಗಳನ್ನು ಕೇವಲ ಕಲಿಸುವುದಲ್ಲ; ಜೀವನದಲ್ಲಿ ನಾವೇ ಪಾಲಿಸುವುದರಿಂದಲೇ ಮಕ್ಕಳು ಅವನ್ನು ಸಹಜವಾಗಿ…
ಲೇಖನ- ವೀಣಾ ಹೇಮಂತಗೌಡ ಪಾಟೀಲಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಈ ಪ್ರಪಂಚದ ಎಷ್ಟೋ ವಿಷಯಗಳು ನಮಗೆ ಗೊತ್ತಿಲ್ಲ. ಎಲ್ಲರಿಗೂ ಎಲ್ಲವೂ ಗೊತ್ತಿರಲೇಬೇಕು ಎಂದಿಲ್ಲ. ಈ ವಿಷಯದಲ್ಲಿ ಈ ಭೂಮಿಯ ಮೇಲಿರುವ ಯಾವೊಬ್ಬ ವ್ಯಕ್ತಿಯೂ ಪರಿಪೂರ್ಣನಲ್ಲ. ಎಲ್ಲರೂ ತಮಗೆ ಆಸಕ್ತಿ ಇರುವ ಒಂದಲ್ಲ ಒಂದು ವಿಷಯದಲ್ಲಿ ಪರಿಪೂರ್ಣತೆಯನ್ನು ಸಾಧಿಸಬಹುದೇ ಹೊರತು ಎಲ್ಲ ವಿಷಯಗಳಲ್ಲಿ ಒಂದೇ ಮಟ್ಟದ ಪರಿಣತಿಯನ್ನು ಸಾಧಿಸುವುದು ಖಂಡಿತವಾಗಿಯೂ ಅಸಾಧ್ಯ.ನಗರದ ಇಬ್ಬರು ಒಂದೇ ಸಮನೆ ಮಳೆ ಬರುತ್ತಿದ್ದರೆ ಅಯ್ಯೋ ಹಾಳು ಮಳೆ! ಒಂದೇ ಸಮನೆ ಹಿಡಿದಿದೆ. ಯಾವಾಗ ನಿಲ್ಲುತ್ತದೆಯೋ ಏನೋ? ಸಾಕಾಗಿ ಹೋಗಿದೆ ಎಂದು ಮಾತನಾಡಿದರೆ ಅಲ್ಲಿಯೇ ನಿಂತ ಮತ್ತೋರ್ವ ವ್ಯಕ್ತಿ ಹವಾಮಾನ ವೈಪರೀತ್ಯದಿಂದಾಗಿ ವಾತಾವರಣ ಹೀಗಿದ್ದು ಮಳೆ ಹುಯ್ಯುತ್ತಿದೆ. ಈ ಮಳೆ ಇನ್ನೂ ನಾಲ್ಕು ದಿನಗಳ ಕಾಲ ಹೀಗೆಯೇ ಸುರಿಯುತ್ತದೆ ಎಂದು ಹೇಳಬಹುದು. ಇದಕ್ಕೆ ಕಾರಣ ಮಳೆಯ ಕುರಿತು ಆತನಿಗೆ ಇರಬಹುದಾದ ಜ್ಞಾನ ಮತ್ತು ಮತ್ತು ಉಳಿದವರಿಗೆ ಅದರ ಕುರಿತಾದ ಮಾಹಿತಿ ಅಷ್ಟಾಗಿ ಇಲ್ಲದೆ ಇರುವುದು.ಇದರ ಅರ್ಥ ಇಷ್ಟೇ.. ಎಲ್ಲವನ್ನು…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: 2025 ರಿಂದ 2028 ರ ಅವಧಿಗೆ ನಡೆದ ಕೊಲ್ಹಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಪತ್ರಕರ್ತ ಅರುಣಕುಮಾರ ಬ ಔರಸಂಗ ಅವರು ನೂತನ ತಾಲ್ಲೂಕಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಉಸ್ತುವಾರಿಗಳಾದ ರಾಜ್ಯ ಕಾರ್ಯಕಾರಿ ಸದಸ್ಯ ಪ್ರಕಾಶ ಬೆಣ್ಣೂರ ಹಾಗೂ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ತಿಳಿಸಿದ್ದಾರೆ.ಪಟ್ಟಣದ ಯುಕೆಪಿ ಬಳಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾ ನಿ ಪ ಸಂಘ ಹಾಗೂ ಕೊಲ್ಹಾರ ತಾಲೂಕು ಘಟಕದ ಸಹಯೋಗದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚುನಾವಣೆ ಪ್ರಕ್ರಿಯೆ ಜರುಗಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಎಲ್ಲಾ ಐದು ಪದಾಧಿಕಾರಿಗಳ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು. ತಾಲೂಕು ಅಧ್ಯಕ್ಷರಾಗಿ ಅರುಣಕುಮಾರ ಬ ಔರಸಂಗ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಬ ಗಣಿ, ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ ತುಪ್ಪದ, ಕಾರ್ಯದರ್ಶಿಯಾಗಿ ಸಿದ್ದಪ್ಪ ಗಣಿ, ಖಜಾಂಚಿಯಾಗಿ ಹಣಮಂತ ಛಬ್ಬಿ ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಚುನಾವಣಾಧಿಕಾರಿ ಪ್ರಕಾಶ ಬೆನ್ನೂರ, ಉಸ್ತುವಾರಿ ಬಸವರಾಜ ಉಳ್ಳಾಗಡ್ಡಿ ಆದೇಶ ಪತ್ರ ನೀಡಿ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಸತ್ಯ ಮಾರ್ಗ ಮನುಷ್ಯನನ್ನು ಬದಲಿಸುತ್ತದೆ. ಮನುಷ್ಯನ ನಡೆ ನುಡಿಗಳು ಜೀವನ ವಿಕಾಸಕ್ಕೆ ಅಡಿಪಾಯ. ಸಾಧನೆಯ ಹಾದಿಯಲ್ಲಿ ಎಷ್ಟೇ ಸಂಕಷ್ಟ ಬಂದರೂ ಬಿಡದಿರುವುದೇ ನಿಜವಾದ ಸಾಧನೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಬುಧವಾರ ಇಂಡಿ ನಗರದ ಸದಾಶಿವ ನಗರದ ಶಿರಶ್ಯಾಡ ಶಾಖಾ ಮಠದಲ್ಲಿ ನಿರ್ಮಾಣವಾಗುತ್ತಿರುವ ಬಡಮಕ್ಕಳ ಶಿಕ್ಷಣ ಹಾಗೂ ಉಚಿತ ಅನ್ನಪ್ರಸಾದ ಮತ್ತು ವಸತಿ ನಿಲಯದ ಮಹಾಧ್ವಾರದ ಪ್ರಥಮ ಹೊಸ್ತಿಲ (ಶಿಲಾಧ್ವಾರ)ದ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಬದುಕು ಸುಖ, ದು:ಖ, ನೋವು-ನಲಿವು, ಮಾನ-ಅಪಮಾನ, ಜಯ-ಅಪಜಯ ಮೊದಲಾದ ದ್ವಂದ್ವಗಳಿAದ ಕೂಡಿದೆ. ಸುಖ ಬಯಸುವುದು ಮನುಷ್ಯನ ಸಹಜ ಗುಣ. ಆದರೆ ಸುಖದ ಬದುಕಿಗೆ ಆಚರಿಸುವ ಮೌಲ್ಯಗಳನ್ನು ಮನುಷ್ಯ ಮರೆಯುತ್ತಿದ್ದಾನೆ. ಅಧಿಕಾರ ಕೀರ್ತಿ ಧನ ಕನಕ ವಸ್ತು ವಾಹನ ಮತ್ತು ದೇಹ ಸೌಖ್ಯಕ್ಕಾಗಿ ಬಡಿದಾಡಿ ಮಡಿದವರೆಷ್ಟೋ ಜನ. ಜಗದ ಜನರಿಗೆ ಬೆಳಕು ತೋರುವ ಜೀವನ ಸಾಗಿಸಿದ ಆಚಾರ್ಯರ ಮತ್ತು ಋಷಿ ಮುನಿಗಳ ಮಾತುಗಳನ್ನು ಯಾರೂ ಮರೆಯುವುದಿಲ್ಲ.…
ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಜಿ.ಆರ್.ಗಾಂಧಿ ಕಲಾ, ವೈ.ಎ.ಪಾಟೀಲ ವಾಣಿಜ್ಯ ಹಾಗೂ ಎಂ.ಎಫ್ ದೋಶಿ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ಡಿ ೧೪ ರಿಂದ ೩೧ ರವರೆಗೆ ಪ್ರತೀದಿನ ಬೆಳಿಗ್ಗೆ ೬.೩೦ ರಿಂದ ೭.೩೦ ರ ವರೆಗೆ ಕಾತ್ರಾಳ ಬಾಲಗಾಂವ ಮಠದ ಪೀಠಾಧಿಪತಿ ಅಮೃತಾನಂದ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ಪ್ರಾರಂಭವಾಗಲಿದೆ.ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಮೃತಾನಂದ ಶ್ರೀಗಳ ವಾಣಿಯನ್ನು ಆಲಿಸಿ ಪುನೀತರಾಗಬೇಕೆಂದು ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ಗುರುವಾರ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡಿದೆ.ಈಗಾಗಲೇ ಕಾಲೇಜಿನ ಆವರಣ ಸ್ವಚ್ಛಗೊಳಿಸಿದ್ದು ಪ್ರತಿ ದಿನವೂ ಪ್ರವಚನ ಮುಗಿದ ನಂತರ ತಕ್ಷಣವೇ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಪ್ರಸಾದ ಸೇವನೆ ಮಾಡಿ ಆಧ್ಯಾತ್ಮಿಕ ಪ್ರವಚನದ ಸ್ಥಳ ಸ್ವಚ್ಛವಾಗಿಡಲು ಸಹಕಾರ ನೀಡಬೇಕೆಂದು ಮನವಿ ಮಾಡಿದರುಕೊನೆಯ ದಿನ ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಶ್ರೀಗಳ ೩ ನೇ ವರ್ಷದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಸಮಿತಿ ತಿಳಿಸಿದೆ. ಆಧ್ಯಾತ್ಮ ಪ್ರವಚನ ನೀಡಲಿರುವ ಅಮೃತಾನಂದ ಶ್ರೀಗಳು ತಮ್ಮ ಬಾಲ್ಯದಲ್ಲಿಯೇ ತಂದೆ ತಾಯಿ…
ಬಿಜೆಪಿ ಯುವ ಮೋರ್ಚಾ ನಿಕಟ ಪೂರ್ವ ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ಹೂಗಾರ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಜನತೆಗೆ ವೈದ್ಯಕೀಯ ಕಾಲೇಜು ಅತ್ಯಂತ ಅಗತ್ಯ. ಈ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆಸರ್ಕಾರಿ ಮಾದರಿಯಲ್ಲಿ ಬರಬೇಕೋ,ಅಥವಾ ಪಿಪಿಪಿ ಮಾದರಿಯಲ್ಲಿ ಬರಬೇಕೋ ಎಂಬ ಅಭಿಪ್ರಾಯ ಬೇರೆಬೇರೆ. ಆದರೆ ನಮ್ಮ ನಿಲುವು ಒಂದೇ ಯಾವುದೇ ಮಾದರಿಯಾದರೂ ಪರವಾಗಿಲ್ಲ, ಜಿಲ್ಲೆಗೆ ಬೇಕಾದ ವೈದ್ಯಕೀಯ ಕಾಲೇಜು ಬೇಗ ಪ್ರಾರಂಭವಾಗಬೇಕು ಎಂದು ಬಿಜೆಪಿ ಯುವ ಮೋರ್ಚಾ ನಿಕಟ ಪೂರ್ವ ಜಿಲ್ಲಾ ಅಧ್ಯಕ್ಷ ಬಸವರಾಜ ಹೂಗಾರ ಆಗ್ರಹಿಸಿದ್ದಾರೆ.ಗುರುವಾರ ಈ ಕುರಿತು ಪ್ರಕಟಣೆ ನೀಡಿದ ಅವರು, ಸರ್ಕಾರಿ ಕಾಲೇಜಿಗೆ ಒಂದು ರೀತಿಯ ಲಾಭಗಳಿವೆ, ಜನಸಾಮಾನ್ಯರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ, ಸೇವಾ ಧೋರಣೆ. ಪಿಪಿಪಿ ಮಾದರಿಗೆ ಬೇರೆ ಲಾಭಗಳಿವೆ, ವೇಗವಾಗಿ ಕಟ್ಟುವ ಸಾಮರ್ಥ್ಯ, ಉತ್ತಮ ಸೌಲಭ್ಯಗಳು, ಉತ್ತಮ ತಂತ್ರಜ್ಞಾನ. ಆದರೆ ಇಂದು ಜನರಿಗೆ ಮುಖ್ಯವಾಗಿರುವುದು ಮಾದರಿ ಅಲ್ಲ ಕಾಲೇಜು ಆರಂಭವಾಗೋದು ಯಾವಾಗ ಎಂಬುದು. ವೈದ್ಯಕೀಯ ಕಾಲೇಜು ವಿಷಯದಲ್ಲಿ ಈಗಾಗಲೇ ಬಹಳಷ್ಟು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ದ್ರಾಕ್ಷಿ ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರಿ ಸಂಘದ ಜಿಲ್ಲಾ ಆದ್ಯಕ್ಷರಾಗಿ ಪೀರಗೊಂಡ ಮಲಕಪ್ಪ ಗದ್ಯಾಳ (ಮೂರನೇ ಬಾರಿ) ಹಾಗೂ ಉಪಾಧ್ಯಕ್ಷರಾಗಿ ಮಲ್ಲಪ್ಪ ರಾಮಣ್ಣಾ ತುಂಗಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಆಡಳಿತ ಮಂಡಳಿ ನಿರ್ದೇಶಕರಾಗಿ ಸುರೇಶ ಬಿರಾದಾರ, ಮಲ್ಲಪ್ಪ ಬಂಡಿ, ಪ್ರಕಾಶ ಚಿನಗುಂಡಿ, ಮಹಾವೀರ ಕುಸನಾಳ, ಇಂದಿರಾಬಾಯಿ ಪಾಟೀಲ, ಶಾಂತಾಬಾಯಿ ಹಿರೇಮಠ, ಭೀಮರಾಯ ಹಂಗರಗಿ, ಯಲ್ಲಪ್ಪ ಹೊನಕಟ್ಟಿ, ಸಂಜಯ ಬಸನಗೌಡ ಪಾಟೀಲ, ವಿಠ್ಠಲ ಪೂಜಾರಿ, ಚನ್ನಪ್ಪ ದಯಗೊಂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಆರ್.ಎನ್.ಆಳೂರ ಪ್ರಕಟಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಯಾಣಿಕರ ಬೇಡಿಕೆಯಂತೆ, ವಿಜಯಪುರ-ಬೆಂಗಳೂರ ಮಾರ್ಗದ ಕಲ್ಯಾಣ ರಥ ವೊಲ್ಲೋ ಮಲ್ಟಿ ಎಕ್ಸಲ್ ಎಸಿ ಸ್ಲಿಪರ್ ಬಸ್ ಪ್ರಯಾಣ ದರದಲ್ಲಿ ರೂ.100 ಅಂದರೆ, ಶೇ 6% ರಷ್ಟು ರಿಯಾಯಿತಿ ನೀಡಲಾಗಿದೆ.ವಿಜಯಪುರ-ಬೆಂಗಳೂರ ಕಲ್ಯಾಣ ರಥ ಬಸ್ಸಿನ ದರ ರೂ. 1,399 ನಿಗದಿಪಡಿಸಲಾಗಿದ್ದು, ಪ್ರಯಾಣಿಕರು ಈ ರಿಯಾಯತಿ ದರದ ಉಪಯೋಗ ಪಡೆದುಕೊಳ್ಳುವಂತೆಕೆಕೆಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣಪ್ಪ ಕುರುಬರ ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.
ನಿಯಮ ಉಲ್ಲಂಘಿಸಿದರೆ 3 ವರ್ಷ ಜೈಲು | ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಮಂಡನೆ ಬೆಳಗಾವಿ: ಸಭೆ- ಪಂಚಾಯ್ತಿ ಮೂಲಕ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದನ್ನು ನಿಷೇಧಿಸುವ ಮತ್ತು ಅಪರಾಧೀಕರಿಸುವ ಮಸೂದೆಯನ್ನು ರಾಜ್ಯ ಸರ್ಕಾರ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದೆ.ಈ ಮಸೂದೆಯು ನಿಯಮಗಳನ್ನು ಉಲ್ಲಂಘಿಸಿ ಸಾಮಾಜಿಕ ಬಹಿಷ್ಕಾರ ಹಾಕುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲು ಅವಕಾಶ ನೀಡುತ್ತದೆ.ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಇಂದು ವಿಧಾನಸಭೆಯಲ್ಲಿ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ(ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಮಸೂದೆ, 2025’ ಅನ್ನು ಮಂಡಿಸಿದ್ದು, ಅದರಲ್ಲಿ 20 ರೀತಿಯ ಸಾಮಾಜಿಕ ಬಹಿಷ್ಕಾರಗಳನ್ನು ಪಟ್ಟಿ ಮಾಡಿದ್ದಾರೆ.ಮಸೂದೆಯಲ್ಲಿ ಯಾವುದೇ ವ್ಯಕ್ತಿ, ಕುಟುಂಬದೊಂದಿಗೆ ವ್ಯವಹರಿಸಲು ನಿರಾಕರಿಸುವುದು, ಅವರ ಕೆಲಸ ಮಾಡಲು ಅಥವಾ ವ್ಯಾಪಾರ ಮಾಡಲು ನಿರಾಕರಿಸುವುದು; ಸೇವೆಗಳನ್ನು ನಿರಾಕರಿಸಿದರೆ ಜೈಲು ಶಿಕ್ಷ ಗ್ಯಾರಂಟಿ ಎಂದು ಹೇಳಲಾಗಿದೆ.ರಾಜ್ಯದ ವಿವಿಧ ಸಮುದಾಯಗಳಲ್ಲಿ ಸಾಮಾಜಿಕ ಬಹಿಷ್ಕಾರ ಹಾಕುವುದು, ಜಾತಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ೬ನೇ ತರಗತಿ ಪ್ರವೇಶಕ್ಕಾಗಿ ಡಿ.೧೩. ಶನಿವಾರದಂದು ಬೆಳಿಗ್ಗೆ ೧೧ ರಿಂದ ೧:೩೦ಗಂಟೆಯವರೆಗೆ ಜರುಗುವ ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯು ಸಿಂದಗಿ ಪಟ್ಟಣದ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜು, ಜಿ.ಪಿ.ಪೋರವಾಲ ಕಾಲೇಜು, ಹೆಚ್.ಜಿ ಪದವಿ ಪೂರ್ವ ಕಾಲೇಜ್, ಸಿ.ಎಮ್.ಮನಗೂಳಿ ಪದವಿ ಕಾಲೇಜು, ಸರ್ಕಾರಿ ಆದರ್ಶ ವಿದ್ಯಾಲಯ, ಅಂಜುಮನ್ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಎಲೈಟ್ ಆಂಗ್ಲ ಮಾಧ್ಯಮ ಶಾಲೆ, ಜ್ಞಾನಭಾರತಿ ಪ್ರೌಢ ಶಾಲೆ, ಶ್ರೀ ಚೆನ್ನವೀರ ಸ್ವಾಮೀಜಿ ಪ್ರೌಢಶಾಲೆ ಸೇರಿದಂತೆ ೧೦ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ ತಿಳಸಿದ್ದಾರೆ.ಈ ಪರೀಕ್ಷೆಗೆ ಒಟ್ಟು ೩೦೪೮ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಪರೀಕ್ಷೆಗೆ ಅಗತ್ಯವಾದ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಪರೀಕ್ಷೆಗೆ ನೊಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು ಪ್ರವೇಶ ಪತ್ರ ಹಾಗೂ ತಮ್ಮ ಆಧಾರ ಕಾರ್ಡಿನೊಂದಿಗೆ ಬೆಳಿಗ್ಗೆ ೧೦ಗಂಟೆಗೆ ಹಾಜರಿರಬೇಕು ಎಂದು ಪರೀಕ್ಷೆಯ ನೋಡಲ್ ಅಧಿಕಾರಿಂ ಎಸ್.ಎಂ.ಕಪನಿಂಬರಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
