ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ), ಜಮಖಂಡಿಯಲ್ಲಿ ನಾಟಕ ಮತ್ತು ರಂಗಭೂಮಿ ಕಲೆ ವಿಭಾಗದ ಅಡಿಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವಾಗಿ “ಮಧುರಚೆನ್ನ” ಕುರಿತ ಏಕವ್ಯಕ್ತಿ ನಾಟಕ ಪ್ರದರ್ಶನ ಭರ್ಜರಿಯಾಗಿ ನಡೆಯಿತು.
ಮೈಸೂರಿನ ಕವಿತಾ ಕಲಾ ತಂಡವು 20ನೇ ಶತಮಾನದ ಪ್ರಸಿದ್ಧ ಕವಿ ಮಧುರಚೆನ್ನ ಅವರ ಜೀವನ ಮತ್ತು ಸಾಹಿತ್ಯ ಸಾಧನೆಯನ್ನು ಆಧರಿಸಿದ ಈ ನಾಟಕವನ್ನು ಅತ್ಯಂತ ಮನೋಜ್ಞವಾಗಿ ಪ್ರದರ್ಶಿಸಿತು. ನಾಟಕದ ಪ್ರಸ್ತುತಿಯನ್ನು ಮಧುರಚೆನ್ನ ಅವರ ಮೊಮ್ಮಗನಾದ ಜಗದೇವ ಗಲಗಲಿ ಅವರು ಭಾವಪೂರ್ಣವಾಗಿ ನಿರ್ವಹಿಸಿ ಪ್ರೇಕ್ಷಕರ ಮನತನಿಸಿತು.
ಈ ನಾಟಕದ ರಚನೆ ಮತ್ತು ನಿರ್ದೇಶನವನ್ನು ಗಣೇಶ ಅಮಿನಗಡ ಅವರು ಸಮರ್ಥವಾಗಿ ಮಾಡಿದ್ದು, ಸಂಗೀತ ಸೇವೆಯನ್ನು ಬಿ.ಆರ್. ಬನಸೋಡೆ ಅವರು ನೀಡಿದರು. ನಾಟಕದ ಪ್ರತಿಯೊಂದು ಅಂಗವೂ ಪ್ರೇಕ್ಷಕರಿಗೆ ಆಕರ್ಷಕ ಅನುಭವವನ್ನು ನೀಡಿತು.

