Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಬರುವ ಡಾ.ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ (ರಿ), ಧಾರವಾಡ ಹಾಗೂ ಕಲಬುರ್ಗಿ, ಫೌಂಡೇಶನ್, ವಿಜಯಪುರ ಸಂಯುಕ್ತಾಶ್ರಯದಲ್ಲಿ ಜನವರಿ 4ರಂದು ಜಿಲ್ಲೆಯ ಸಿಂದಗಿ ಮಾಂಗಲ್ಯ ಭವನದಲ್ಲಿ ಡಾ.ಎಂ.ಎಂ ಕಲಬುರ್ಗಿಯವರ ಸೃಜನ ಸಾಹಿತ್ಯ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ.ಕಾರ್ಯಕ್ರಮವನ್ನು ಡಾ.ಲಿಂಗಣ್ಣ ಕಲಬುರ್ಗಿ ಉದ್ಘಾಟಿಸುವರು. ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸುವರು. ವಿಚಾರ ಸಂಕಿರಣದಲ್ಲಿ ಡಾ.ಎಂ.ಎಂ.ಕಲಬುರ್ಗಿ ಅವರ ‘ಕೆಟ್ಟಿತ್ತು ಕಲ್ಯಾಣ’ ನಾಟಕ ಕುರಿತು ಡಾ.ಎಂ.ಎಸ್.ಮಾಗಣಗೇರಿ ಹಾಗೂ ‘ನೀರು ನೀರಡಿಸಿತ್ತು’ ಮತ್ತು ‘ನೀರಾಗ ನಿಂತೀನಿ ನೀರಡಿಸಿ’ ಕವನ ಸಂಕಲನದ ಕುರಿತು ಮನು ಪತ್ತಾರ ಕಲಕೇರಿ ಪ್ರಬಂಧ ಮಂಡಿಸುವರು.ಕಾರ್ಯಕ್ರಮದ ನಿರೂಪಣೆಯನ್ನು ಡಾ.ಎಂ. ಎಂ. ಪಡಶೆಟ್ಟಿ ಮಾಡುವರು. ಕೊನೆಯಲ್ಲಿ ಎಂ. ಎಂ.ಕಲಬುರ್ಗಿಯವರ ಕುರಿತು ರಚನೆಯಾದ ‘ರಕ್ತ ವಿಲಾಸ’ ನಾಟಕ ಪ್ರದರ್ಶನೆ ಮಾಡಲಾಗುವುದು ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆಯ 2025-26 ಸಾಲಿನ ಬಜೆಟ್ ಅಂದಾಜು ಪತ್ರ ತಯಾರಿಸಲು ಜನವರಿ 4 ರ ಮಧ್ಯಾಹ್ನ 4ಗಂಟೆಗೆ ಪಾಲಿಕೆಯ ಮುಖ್ಯ ಕಛೇರಿಯಲ್ಲಿ ಮೊದಲ ಸುತ್ತಿನ ಬಜೆಟ್ ಪೂರ್ವಭಾವಿ ಸಭೆ ಕರೆಯಲಾಗಿದೆ.ಸಭೆಯಲ್ಲಿ ಮಹಾನಗರ ಪಾಲಿಕೆಯ ಸಾರ್ವಜನಿಕರು, ಕಲ್ಯಾಣ ಸಂಸ್ಥೆಯ ಪದಾಧಿಕಾರುಗಳು, ವ್ಯಾಪಾರ ಮತ್ತು ಕೈಗಾರಿಕಾ ಸಂಸ್ಥೆ ಒಕ್ಕೂಟದ ಸದಸ್ಯರು ಹಾಗೂ ಇತರ ಸಂಘ-ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿ ತಮ್ಮ ಸಲಹೆ- ಸೂಚನೆ ನೀಡಬಹುದಾಗಿದೆ ಎಂದು ವಿಜಯಪುರ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ಸಿ.ಎಸ್.ಷಡಕ್ಷರಿ ಅವರು ಜನೇವರಿ 3 ಶುಕ್ರವಾರದಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಜಿಲ್ಲಾ ನೌಕರರ ಸಂಘದ ವತಿಯಿಂದ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.ಬೆಳಗ್ಗೆ 10 ಗಂಟೆಗೆ ಇಂಡಿ ಪಟ್ಟಣದ ನೌಕರರ ಭವನದಲ್ಲಿ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 5 ಗಂಟೆಗೆ ವಿಜಯಪುರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಏರ್ಪಡಿಸಿದ ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವದ ಸಮಾರಂಭ ಹಾಗೂ ಎರಡನೇ ಬಾರಿ ಆಯ್ಕೆಯಾದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಸಿ.ಎಸ್.ಷಡಕ್ಷರಿ ನೆರವೇರಿಸುವರು. ಅಧ್ಯಕ್ಷತೆಯನ್ನು ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ವಹಿಸುವರು. ಸ್ವಾಗತವನ್ನು ಖಜಾಂಚಿ ಜುಬೇರ ಕೆರೂರ, ರಾಜ್ಯ ಪರಿಷತ್ ಸದಸ್ಯ ವಿಜಯಕುಮಾರ ಹತ್ತಿ ನೆರವೇರಿಸುವರು. ಜಿಲ್ಲಾ ಕಾರ್ಯದರ್ಶಿ ಎಂ.ಡಿ.ಪಾಟೀಲ, ಸದಾಶಿವ ದಳವಾಯಿ, ಶಿವಾನಂದ ಮಂಗನವರ, ಅಶೋಕ ತೆಲ್ಲೂರ, ಬಿ.ಎಸ್.ಮಜ್ಜಗಿ, ಅರವಿಂದ ಹೂಗಾರ, ಬಸವರಾಜ ರಾವೂರ, ಬಿ.ಟಿ.ಗೌಡರ ಭಾಗವಹಿಸುವರು.ಸಮಸ್ಯ ರಾಜ್ಯ ಸರ್ಕಾರಿ ನೌಕರರ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ವಲಯ ಕನ್ನಡ ಸಾಹಿತ್ಯ ಪರಿಷತ್ತು ನೂತನವಾಗಿ ಆರಂಭಿಸಿದ “ವರ್ಷದ ವ್ಯಕ್ತಿ ಪ್ರಶಸ್ತಿ” ಯನ್ನು ಹಿರಿಯರಾದ ಬಸಣ್ಣ ಬೂದೂರು ನಗನೂರವರಿಗೆ ಪಟ್ಟಣದಲ್ಲಿ ರವಿವಾರ ಸಂಜೆ ಗೃಹ ಸನ್ಮಾನದ ಜೊತೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಸಣ್ಣ ಬೂದೂರು, ಪ್ರಸಕ್ತ ಸಾಲಿನಿಂದ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವ ಮೂಲಕ ಅಳಿಲು ಸೇವೆ ಪರಿಗಣಿಸಿ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಕೊಡಮಾಡಿದ ವಲಯ ಕಸಾಪ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.ಇದೇ ವೇಳೆ ಸಾಹಿತಿ ನಿಂಗನಗೌಡ ದೇಸಾಯಿ ಸುರಪುರ ತಾಲ್ಲೂಕಿನ ಕಸಾಪ ಅಧ್ಯಕ್ಷ ಶರಣಬಸವ ಯಾಳವಾರ, ಪದಾಧಿಕಾರಿಗಳಾದ ಹೆಚ್ಚ್ ರಾಠೋಡ್, ದೇವು ಹೆಬ್ಬಾಳ, ವೆಂಕಟೇಶ, ವಲಯ ಕಸಾಪ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ ಹೆಗ್ಗನದೊಡ್ಡಿ, ಗುಂಡಭಟ್ ಜೋಶಿ, ಮಹಿಪಾಲರಡ್ಡಿ ಡಿಗ್ಗಾವಿ, ಶಿವರಾಜು ಬೂದೂರು, ಪಾರ್ವತಿ ಬೂದೂರು, ಜ್ಯೋತಿ ದೇವಣಗಾವ್, ಡಿ ಸಿ ಪಾಟೀಲ್, ಪರುಶುರಾಮ ಬಳಬಟ್ಟಿ, ನಂದಪ್ಪ ಕವಲ್ದಾರ, ಬಂದೇನವಾಜ್ ನಾಲತವಾಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದು ಶುಭ ಹಾರೈಸಿ ಅಭಿನಂದಿಸಿದರು.

Read More

ಅಂಗನವಾಡಿಗಳಿಗೆ ಕಳಪೆ ದವಸ-ಧಾನ್ಯ ವಿತರಿಸುತ್ತಿರುವ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಬಬಲೇಶ್ವರ ಖಡಕ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಕ್ಕಳೇ ನಿಜವಾದ ದೇವರು. ಅವರೊಂದಿಗೆ ಕಳೆಯುವ ಸಮಯವೇ ಸುಸಮಯ, ಮಕ್ಕಳನ್ನು ಭೇಟಿ ಮಾಡುವುದು ಅವರೊಂದಿಗೆ ಸಂವಾದ ನಡೆಸುವುದು ನನಗೆ ಅತ್ಯಂತ ಇಷ್ಟವಾದ ಕೆಲಸ. ಹಾಗಾಗಿ ನನ್ನ ನೂತನ ವರ್ಷಾರಂಭವನ್ನು ಅಂಗನವಾಡಿಯ ಮುದ್ದು ಮಕ್ಕಳಿಗೆ ಸಿಹಿ ವಿತರಿಸುವುದರೊಂದಿಗೆ ಹಾಗೂ ಅವರೊಂದಿಗೆ ಸಂವಾದ ನಡೆಸುವುದರ ಮೂಲಕ ಪ್ರಾರಂಭಿಸಿರುವುದಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಅವರು ಬುಧವಾರ ವಿಜಯಪುರ ತಾಲೂಕಿನ ಉಕುಮನಾಳ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಅಲ್ಲಿರುವ ವ್ಯವಸ್ಥೆಯನ್ನು ಪರಿಶೀಲಿಸಿ ಮಾತನಾಡಿದರು.ಮಕ್ಕಳಿಗೆ ಗುಣಮಟ್ಟದ ಆಹಾರ ವಿತರಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದ ಬಬಲೇಶ್ವರ ಅವರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಸಮ್ಮುಖದಲ್ಲಿ ಹೆಸರು ಬೆಳೆ, ಕಡಲೆ ಬೆಳೆ, ವಿವಿಧ ದವಸ ಧಾನ್ಯಗಳನ್ನು ಪರಿಶೀಲಿಸಿ ಅತ್ಯಂತ ಕಳಪೆ ಮಟ್ಟದ ದವಸ ಧಾನ್ಯಗಳು ಇರುವುದನ್ನು ದೃಢಪಡಿಸಿಕೊಂಡ ಅವರು, ಅಧಿಕಾರಿಗಳ ಸಮ್ಮುಖದಲ್ಲಿ…

Read More

ಲೇಖನ- ಭರಣಿ ನಕ್ಷತ್ರನಿಡಗುಂದಿ, ವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಭಕ್ತಿ, ಆರಾಧನೆ ಅಂದರೇನು?ಈ ಒಂದು ಪ್ರಶ್ನೆ ದೇವರಿಗೆ ಕೈ ಮುಗಿದಾಗ ಅಥವಾದೇವಸ್ಥಾನದಲ್ಲಿ ಸೇವೆ ಸಲ್ಲಿಸುವಾಗ ಮೂಡುತ್ತದೆಭಕ್ತಿ ಅಂದರೆ ಶಿಸ್ತು, ಶ್ರದ್ಧೆ ಸ್ನಾನ ಮಾಡಿಯೇ ದೇವರಿಗೆ ಪೂಜೆ ಮಾಡಬೇಕು ಅನ್ನೋದು ಶಿಸ್ತು, ಯಾಕೆಂದರೆ ದೇವರು ಅಂದರೆ ಭಯ ಇರುತ್ತದೆ ಶಿಸ್ತಾಗಿದ್ದು ಪೂಜೆ ಮಾಡಿದರೆ ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂಬಭಾವನೆ ನಮ್ಮಲ್ಲಿ ಜಾಗೃತವಾಗಿದ್ದಾಗ ನಾವು ಶುಚಿಯಾಗಿ ದೇವರಲ್ಲಿ ಬೇಡ್ಕೋತೀವಿ ಶುಚಿತ್ವ ಅನ್ನೋದು ಮನಸು ದೇಹ ಎರಡಕ್ಕೂ ಸಂಬಂಧಿಸಿದೆ. ಇನ್ನು ಶ್ರದ್ಧೆ ಅಂದರೆ ಬೆಳಿಗ್ಗೆ ಸೂರ್ಯ ಮೂಡುವ ಮೊದಲೇ ಎದ್ದು ಪೂಜೆ ಮಾಡಬೇಕು ಎಂಟು ಗಂಟೆಯ ಒಳಗೆ ಮಾಡುವ ಪೂಜೆ ಶ್ರೇಷ್ಠ ಅಂತಾರೆ ನಮ್ಮ ಪೂರ್ವಿಕರು. ಉದಾಹರಣೆ ಅಂದರೆ “ಸೂರ್ಯದೇವ”ನ ಪೂಜೆ ಮಾಡುವವರು ಎದ್ದ ಕೂಡಲೇ ಬಾಯಿಗೆ ಹನಿ ನೀರು ಕೂಡ ಹಾಕದೆ ಶುಚಿರ್ಭೂತರಾಗಿ ಸೂರ್ಯ ಹುಟ್ಟುವ ಮೊದಲೇ ಪೂರ್ವ ದಿಕ್ಕಿಗೆ ಪೂಜೆ ಮಾಡಿದರೆ ಫಲ ದೊರೆಯುತ್ತದೆ.ಇಷ್ಟೆಲ್ಲ ಮಾಡಬೇಕಾದರೆ ಶ್ರದ್ಧೆ, ಶಿಸ್ತು ಮುಖ್ಯ. ಭಕ್ತಿಯ ಅರ್ಥ ಏನೆಂದರೆ ಆರಾಧನೆಗೆ ಶಿಸ್ತು,…

Read More

ಲೇಖನ- ಭರಣಿ ನಕ್ಷತ್ರನಿಡಗುಂದಿ, ವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಭಕ್ತಿ, ಆರಾಧನೆ ಅಂದರೇನು?ಈ ಒಂದು ಪ್ರಶ್ನೆ ದೇವರಿಗೆ ಕೈ ಮುಗಿದಾಗ ಅಥವಾದೇವಸ್ಥಾನದಲ್ಲಿ ಸೇವೆ ಸಲ್ಲಿಸುವಾಗ ಮೂಡುತ್ತದೆಭಕ್ತಿ ಅಂದರೆ ಶಿಸ್ತು, ಶ್ರದ್ಧೆ ಸ್ನಾನ ಮಾಡಿಯೇ ದೇವರಿಗೆ ಪೂಜೆ ಮಾಡಬೇಕು ಅನ್ನೋದು ಶಿಸ್ತು, ಯಾಕೆಂದರೆ ದೇವರು ಅಂದರೆ ಭಯ ಇರುತ್ತದೆ ಶಿಸ್ತಾಗಿದ್ದು ಪೂಜೆ ಮಾಡಿದರೆ ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂಬಭಾವನೆ ನಮ್ಮಲ್ಲಿ ಜಾಗೃತವಾಗಿದ್ದಾಗ ನಾವು ಶುಚಿಯಾಗಿ ದೇವರಲ್ಲಿ ಬೇಡ್ಕೋತೀವಿ ಶುಚಿತ್ವ ಅನ್ನೋದು ಮನಸು ದೇಹ ಎರಡಕ್ಕೂ ಸಂಬಂಧಿಸಿದೆ. ಇನ್ನು ಶ್ರದ್ಧೆ ಅಂದರೆ ಬೆಳಿಗ್ಗೆ ಸೂರ್ಯ ಮೂಡುವ ಮೊದಲೇ ಎದ್ದು ಪೂಜೆ ಮಾಡಬೇಕು ಎಂಟು ಗಂಟೆಯ ಒಳಗೆ ಮಾಡುವ ಪೂಜೆ ಶ್ರೇಷ್ಠ ಅಂತಾರೆ ನಮ್ಮ ಪೂರ್ವಿಕರು.ಉದಾಹರಣೆ ಅಂದರೆ “ಸೂರ್ಯದೇವ”ನ ಪೂಜೆ ಮಾಡುವವರು ಎದ್ದ ಕೂಡಲೇ ಬಾಯಿಗೆ ಹನಿ ನೀರು ಕೂಡ ಹಾಕದೆ ಶುಚಿರ್ಭೂತರಾಗಿ ಸೂರ್ಯ ಹುಟ್ಟುವ ಮೊದಲೇ ಪೂರ್ವ ದಿಕ್ಕಿಗೆ ಪೂಜೆ ಮಾಡಿದರೆ ಫಲ ದೊರೆಯುತ್ತದೆ.ಇಷ್ಟೆಲ್ಲ ಮಾಡಬೇಕಾದರೆ ಶ್ರದ್ಧೆ, ಶಿಸ್ತು ಮುಖ್ಯ. ಭಕ್ತಿಯ ಅರ್ಥ ಏನೆಂದರೆ ಆರಾಧನೆಗೆ ಶಿಸ್ತು, ಶ್ರದ್ಧೆ…

Read More

ರಚನೆ- ಮಂಜುನಾಥ ನಾಯಕ ಎನ್.ಆರ್ಕಾವ್ಯನಾಮ: ಶ್ರೀರತ್ನತನಯಊರು: ನುಗ್ಗಿಹಳ್ಳಿ, ದಾವಣಗೆರೆ ಉದಯರಶ್ಮಿ ದಿನಪತ್ರಿಕೆ ಕವಿಯ ಭಾವವ ಹೊಕ್ಕು ತಾ ಮೇಳೈಸಿಭಾವನೆಗೊಳಗೂಡಿ ನಿಂದೆನ್ನ ಬಡಿದೆಬ್ಬಿಸಿಕಣ್ಣಿಗೆ ಕಟ್ಟುತಲಿ ಕಲ್ಪನೆಗಳ ಮತಿಗಿಳಿಸಿಪದ ಪೋಣಿಸಿ ರಚಿತವಾದಳು ನನ್ನ ಕವಿತೆ ಸ್ವರ್ಗವನು ಧರೆಗಿಳಿಸಿ ಮನವನು ತುಂಬುತಏಕಾಂತಕೆ ಜೊತೆಯಾಗೆ ಪ್ರತಿಪದ ಬಿಂಬಿಸುತಮಿಂಚ ವೇಗದಿ ಬಂದು ಮತಿಯಲ್ಲಿ ನೆಲೆಸುತಅರ್ಥಪೂರ್ಣ ವಾಸ್ತವವಾದಳಿಂದು ನನ್ನ ಕವಿತೆ ಮತಿಯನು ಮಂಥನಗೈಯೇ ಸರ್ವ ಸದಾಸುಧೆಯಾಗಿ ಜ್ಞಾನ ಹರಿಸಿ ತೆರೆಯುತಲಿ ಕದಕಾವ್ಯಕನ್ನಿಕೆಯ ಸೌಂದರ್ಯ ಮನಕೆ ಮುದಕೊನೆಗೊಮ್ಮೆ ಕೃತಿಯಾಗಿ ನಿಲುವಳೆನ್ನ ಕವಿತೆ

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಆಲಮಟ್ಟಿ-ಯಾದಗೀರ ಹಾಗೂ ಆಲಮಟ್ಟಿ-ಚಿತ್ರದುರ್ಗ ಮಾರ್ಗ ನಿರ್ಮಾಣಕ್ಕೆ ಆಗ್ರಹಿಸಿ ಆಲಮಟ್ಟಿ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿಯ ಸದಸ್ಯರು ಸಕ್ಕರೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಅವರಿಗೆ ಮಂಗಳವಾರ ವಿಜಯಪುರದಲ್ಲಿ ಮನವಿ ಸಲ್ಲಿಸಿದರು.ಆಲಮಟ್ಟಿಯಿಂದ ಯಾದಗೀರ ಮಾರ್ಗ ಹಾಗೂ ಆಲಮಟ್ಟಿಯಿಂದ ಚಿತ್ರದುರ್ಗ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆಲಮಟ್ಟಿ ರೈಲ್ವೆ ನಿಲ್ದಾಣದಲ್ಲಿ ಅಂಡರಪಾಸ್ ನಿರ್ಮಿಸುವುದು, ಹುಬ್ಬಳ್ಳಿ-ನಿಜಾಮುದ್ದಿನ್ ರೈಲನ್ನು ಆಲಮಟ್ಟಿ ಸ್ಟೇಷನ್ ಗೆ ನಿಲುಗಡೆ ಕಲ್ಪಿಸುವುದು, ಆಲಮಟ್ಟಿ ರೈಲ್ವೆ ನಿಲ್ದಾಣಗಳಲ್ಲಿ ಹೊಸದಾಗಿ ಸುಸಜ್ಜಿತವಾಗಿ ಕೋಣೆಗಳನ್ನು ನಿರ್ಮಿಸಬೇಕು ಎಂದು ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಹೋರಾಟ ಸಮಿತಿಯ ಅಧ್ಯಕ್ಷ ಭರತರಾಜ ದೇಸಾಯಿ , ರಮೇಶ ರೇಶ್ಮಿ, ಎನ್.ಎ. ಪಾಟೀಲ, ರಮೇಶ ಆಲಮಟ್ಟಿ, ಭೀಮಾಶಂಕರ ಉದಂಡಿ, ಮಹಾಂತೇಶ ಹಿರೇಮಠ, ಮುರಳಿ ಬಡಿಗೇರ, ಬಿ.ಕೆ. ಬಾಗವಾನ, ಸಿದ್ದು ಗೊಳಸಂಗಿ, ಮಲ್ಲು ರಾಠೋಡ, ಎಸ್.ಎಂ. ಜಲ್ಲಿ, ಪರಶುರಾಮ ಮಾದರ, ಎಂ.ಡಿ. ಬಾಗಲಕೋಟೆ ಮತ್ತೀತರರು ಇದ್ದರು.ಸಚಿವರ ಪಾಟೀಲ ಮನವಿ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಕೇಂದ್ರ ಸರ್ಕಾರ ಬರ್ಮಾದಿಂದ ಸಾವಿರಾರು ಟನ್ ತೊಗರಿ ಆಮದು ಮಾಡಿಕೊಳ್ಳುವ ಮೂಲಕ ತೊಗರಿ ಬೆಳೆಗೆ ರೂ. ೧೨ ಸಾವಿರ ಇದ್ದ ದರವನ್ನು ಕೇಂದ್ರ ಸರ್ಕಾರ ದಿಢೀರನೆ ಕಡಿಮೆ ಮಾಡುವ ಮೂಲಕ ರೈತ ಬಾಂಧವರ ಗಾಯದ ಮೇಲೆ ಬರೆ ಎಳೆದಿದೆ. ರೈತ ಬಾಂಧವರ ಬೆಳೆದ ತೊಗರಿಗೆ ಯೋಗ್ಯ ಬೆಲೆ ನೀಡಿದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಸರಿಯಾದ ಬೆಲೆ ಸಿಗದೇ ಹೋದರೆ ರೈತರು ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.ತಾಲೂಕಿನ ಹೂವಿನಹಿಪ್ಪರಗಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೊಗರಿ ಕಟಾವು ಮಾಡಿ ರಾಶಿ ಮಾಡುವ ಮೊದಲು ಪ್ರತಿ ಕ್ವಿಂಟಲ್‌ಗೆ ತೊಗರಿಗೆ ರೂ. ೧೨ ಸಾವಿರ ಮಾರುಕಟ್ಟೆ ದರವಿತ್ತು. ರೈತರು ತೊಗರಿ ರಾಶಿ ಮಾಡಿ ಮಾರುಕಟ್ಟೆಗೆ ಸಾಗಿಸುವಷ್ಟರಲ್ಲಿ ದೀಢಿರನೆ ಬೆಲೆ ಇಳಿಸಿ ಪ್ರತಿ ಕ್ವಿಂಟಾಲ್‌ಗೆ ರೂ. ೭,೫೫೦ ನಿಗದಿ ಮಾಡಿದ್ದು ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ತೊಗರಿ…

Read More