Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ದೇವರಹಿಪ್ಪರಗಿ ಪತ್ತಿನ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭ ಇದೇ ದಿ:೨೮ ರಂದು ಭಾನುವಾರ (ನಾಳೆ) ಬೆಳಿಗ್ಗೆ ೧೨ ಗಂಟೆಗೆ ಇಂಡಿ ರಸ್ತೆಯ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಜರುಗಲಿದೆ ಎಂದು ಅಧ್ಯಕ್ಷ ರಾಜೀವ ಗುತ್ತೇದಾರ ಹೇಳಿದರು.ಪಟ್ಟಣದ ಸಂಘದ ಕಟ್ಟಡದಲ್ಲಿ ಗುರುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.೨೦೦೦ನೇ ಡಿಸೆಂಬರ್ ೨ರಂದು ಆರಂಭಗೊಂಡ ನಮ್ಮ ಸಹಕಾರಿ ಸಂಘ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದು ತನ್ನ ದಶಮಾನೋತ್ಸವ ಸಮಯದಲ್ಲಿ ಸ್ವಂತ ಕಟ್ಟಡ ಹೊಂದಿತು. ಈಗ ರಜತ ಮಹೋತ್ಸವ ಆಚರಿಸಿಕೊಳ್ಳುವ ಸಂದರ್ಭದಲ್ಲಿ ಎರಡು ನೂತನ ಶಾಖೆಗಳನ್ನು ವಿಜಯಪುರ ನಗರ ಹಾಗೂ ಶಿವಣಗಿ ಗ್ರಾಮದಲ್ಲಿ ಆರಂಭಿಸಿ ಒಟ್ಟು ೩ ಶಾಖೆಗಳ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ನಾಳೆ ಜರುಗಲಿರುವ ಸಮಾರಂಭದಲ್ಲಿ ಸಚಿವರು, ಜಿಲ್ಲೆಯ ಆಹ್ವಾನಿತ ಗಣ್ಯರು, ನಿರ್ದೇಶಕರು, ಸರ್ವಸದಸ್ಯರು ಹಾಗೂ ಗ್ರಾಹಕರು ಆಗಮಿಸಲಿದ್ದಾರೆ ಎಂದರು.ಸಂಘದ ಮುಖ್ಯ ಕಾರ್ಯನಿರ್ವಾಹಕ ಮಹಾದೇವ ಹಿರೇಕುರುಬರ ಮಾತನಾಡಿ, ಸಂಘ ಕಳೆದ ೨೫ ವರ್ಷಗಳಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೊಡಮಾಡುವ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಸಿದ್ದೇಶ್ವರ ಶ್ರೀಗಳು ಜ್ಞಾನದ ಸುವಾಸನೆಯನ್ನು ಭಾರತ ದೇಶದಲ್ಲಿ ಇಷ್ಟೇ ಅಲ್ಲ, ಬೇರೆ ದೇಶಕ್ಕೂ ಹರಿವಿದ ದಿವ್ಯತೆಯ ಅನುಭಾವಿ ಎಂದು ಅಮೃತಾನಂದ ಶ್ರೀಗಳು ಹೇಳಿದರು,ತಾಲೂಕಿನ ಶಿರಶ್ಯಾಡ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಜ್ಞಾನಯೋಗಿ ಶ್ರೀ ಸಿದ್ದೇಶ್ವರಶ್ರೀಗಳ ಗುರು ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾಲೋಟಗಿಯ ಸಂಗಮೇಶ್ವರ ಶ್ರೀಗಳು ಮಾತನಾಡಿ ಸಿದ್ದೇಶ್ವರ ಶ್ರೀಗಳು ಆಧ್ಯಾತ್ಮ ಲೋಕದ ಸೂರ್ಯ, ಶ್ರೀಗಳು ಗಳಿಸಿದ ಜ್ಞಾನಕ್ಕೆ ಜಗತ್ತಿನ ಯಾವ ಸಿರಿ ಸಂಪತ್ತು ಸರಿ ಆಗುವದಿಲ್ಲ. ಅವರು ಯುಗಪುರುಷರು, ಅವರದು ಯಾವದೇ ಕುರುಹು ಇಲ್ಲ, ಸಮಾಧಿ ಇಲ್ಲ ಜ್ಞಾನವೇ ಅವರ ಕುರುಗು ಎಂದರು.ರೋಡಗಿಯ ಶಿವಲಿಂಗೇಶ್ವರ ಶ್ರೀಗಳು ಮಾತನಾಡಿ, ಮಾನವನ ಸ್ವಾರ್ಥಕ ಬದುಕಿಗೆ ಬೇಕಾಗುವ ಸಂಸ್ಕಾರ ಸಾಮರಸ್ಯ ಉತ್ತಮ ಆಚಾರ ವಿಚಾರ ಮೌಲ್ಯಗಳು ಶ್ರೀಗಳ ಪ್ರವಚನದಲ್ಲಿದ್ದು ಅವರ ಪ್ರವಚನ ಮನುಕುಲಕ್ಕೆ ದಾರಿದೀಪವಾಗಿದ್ದವು ಎಂದರುಧಾರವಾಡದ ಬಸವಾನಂದ ಶ್ರೀಗಳು ಮಾತನಾಡಿ, ಸತ್ಯ ದರ್ಶನಗಳ ಪಾರಂಪರಿಕ ಹಾದಿಯನ್ನು ಹುಟ್ಟು ಹಾಕಿ ಜನರನ್ನು ಆಧ್ಯಾತ್ಮಿಕತೆಯ ಕಡೆಗೆ ಪಯಣಿಸಲು ದಾರಿಯನ್ನು ನಿರ್ಮಿಸಿ ತಾವು ಸಹ ಆಧ್ಯಾತ್ಮಿಕತೆಯ ಮೇರು…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಹೆಮ್ಮೆಯ ಮಾಜಿಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ಉದಾತ್ತ ರಾಜಕೀಯ ಚಿಂತನೆಗಳ ಮೂಲಕ ದೇಶದ ರಾಜಕೀಯ ರಂಗದಲ್ಲಿ ಅಜಾತಶತ್ರು ಎನಿಸಿದ್ದರು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ) ಹೇಳಿದರು.ಪಟ್ಟಣದ ಕರಿಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಜರುಗಿದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ( ಸ್ಮೃತಿದಿನ)ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಮುಖ್ಯಸ್ಥರಾಗಿ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿ ಎರಡು ಬಾರಿ ಪ್ರಧಾನಿಯಾಗಿ ಭಾರತವನ್ನು ಅಭಿವೃದ್ಧಿ ಪಥದತ್ತ ಸಾಗಿಸಿದ ಕೀರ್ತಿ ವಾಜಪೇಯಿ ಅವರದ್ದಾಗಿದೆ ಎಂದರು.ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದು ಬುಳ್ಳಾ(ಕೆರೂಟಗಿ) ಹಾಗೂ ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ ಮಾತನಾಡಿ, ವಾಜಪೇಯಿ ಲೋಕಸಭೆಗೆ ಒಂಬತ್ತು ಬಾರಿ, ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ ಮಹಾನ್ ಮುತ್ಸದ್ಧಿ ಎಂದರು.ಇದೇ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ದೊಡ್ಡಮನಿ, ಮಹಾಂತೇಶ ಬಿರಾದಾರ,…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ಪ್ರದೇಶ ಕುರುಬ ಸಂಘದ ನೂತನ ಅಧ್ಯಕ್ಷರಾಗಿ ಮೋರಟಗಿ ಗ್ರಾಮದ ಸಿದ್ದು ಕೆರಿಗೊಂಡ ಅವರನ್ನು ಆಯ್ಕೆ ಮಾಡಿ ಸಮಾಜದ ಹಿರಿಯರು ಹಾಗೂ ಯುವಕರು ಸನ್ಮಾನಿಸಿದರು.ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಹಾಲುಮತ ಸಮಾಜದ ಹಿರಿಯರಿಗೆ ಹಾಗೂ ಯುವಕರಿಗೆ ಕರೆ ನೀಡಿ ಸಭೆ ಕರೆಯಲಾಗಿತ್ತು.ಸಭೆಯಲ್ಲಿ ಹಿರಿಯರ ಒಪ್ಪಿಗೆ ಮೇಲೆ ಅಧ್ಯಕ್ಷರಾಗಿ ಸಿದ್ದು ಕೆರಿಗೊಂಡ, ಉಪಾಧ್ಯಕ್ಷರಾಗಿ ಚಂದ್ರಮ ಕತ್ನಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಕಟ್ಟಿಮನಿ, ಸಹ ಕಾರ್ಯದರ್ಶಿಯಾಗಿ ಸಂಗಪ್ಪ ಪೂಜಾರಿ, ಖಜಾಂಚಿಯಾಗಿ ಸೋಮು ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ ಪೂಜಾರಿ, ನಿರ್ದೇಶಕರುಗಳಾಗಿ ಸಿದ್ದು ಪೂಜಾರಿ ಕಾಶಿರಾಮ ಬಿರಾದಾರ, ಅಶೋಕ ಪೂಜಾರಿ, ಸಂತೋಷ ಪೂಜಾರಿ, ಕನ್ನಯ್ಯ ಪೂಜಾರಿ, ಹಾವಣ್ಣ ಹಿರೇಹಾವಳಗಿ, ಮಾಳಪ್ಪ ಪೂಜಾರಿ, ರಾಜು ಪೂಜಾರಿ, ಭೀಮಾಶಂಕರ ಪೂಜಾರಿ, ಅವರನ್ನು ಆಯ್ಕೆ ಮಾಡಿದ್ದಾರೆ.ನಂತರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಿ ಮುಖಂಡ ರಮೇಶ ಭಂಟನೂರ ಮಾತನಾಡಿ, ಇಂದಿನ ರಾಜಕೀಯ ನಾಯಕರುಗಳು ನಮ್ಮ ಸಮುದಾಯವನ್ನು ಉಪಯೋಗಿಸ್ಕೊಂಡು ನಮ್ಮನ್ನು ವಡೆದಾಳುತ್ತಿದ್ದಾರೆ ವಿಷ ಕೊಟ್ಟವರಿಗೆ ಹಾಲುಣಿಸುವ…
ಬಿ.ಎಲ್.ಡಿ.ಇ ಸಂಸ್ಥೆಯ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ನಡೆದ ಪ್ರಧಾನ ಮಂತ್ರಿ ರಾಷ್ಡ್ರೀಯ ಶಿಶಿಕ್ಷು(ಅಂಪ್ರೆಂಟಿಸ್) ಮೇಳ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ನಡೆದ ಪ್ರಧಾನ ಮಂತ್ರಿ ರಾಷ್ಡ್ರೀಯ ಶಿಶಿಕ್ಷು(ಅಂಪ್ರೆಂಟಿಸ್) ಮೇಳದಲ್ಲಿ 350ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನಾನಾ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.ಮಂಗಳವಾರ ಬಿ.ಎಲ್.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆ, ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಯ ಸರಕಾರಿ, ಅನುದಾನಿತ ಮತ್ತು ಖಾಸಗಿ ಐಟಿಐ ಹಾಗೂ ಉದ್ಯೋಗ ವಿನಿಮಯ ಕಚೇರಿ, ಕೌಶಾಲ್ಯಾಭಿವ್ಯದ್ಧಿ ಇಲಾಖೆ ಇವರ ಸಹಯೋಗದಲ್ಲಿ ನಡೆದ ಈ ಪ್ರಧಾನಮಂತ್ರಿ ರಾಷ್ಟೀಯ ಶಿಶಿಕ್ಷು ಮೇಳವನ್ನು ವಿಜಯಪುರ ಸರಕಾರಿ ಐಟಿಐ ಪ್ರಾಚಾರ್ಯ ರಮೇಶ ದೇಸಾಯಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಐಟಿಐ ತರಬೇತಿ ಪೂರ್ಣಗೊಳಿಸಿದರೆ ಸಾಲದು. ಕೈಗಾರಿಕೆಗಳಲ್ಲಿ ಒಂದು ವರ್ಷದ ಅಪ್ರೆಂಟಿಸ ತರಬೇತಿಯನ್ನು ಕೈಗಾರಿಕೆಗಳಲ್ಲಿ ಮುಗಿಸಿ ಸಂಪೂರ್ಣ ಕೌಶಲ್ಯ ಹೊಂದಬೇಕು ಎಂದು ಹೇಳಿದರು.ಒಟ್ಟು 650 ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಅಪ್ರೆಂಟಿಸ್ ಮೇಳದಲ್ಲಿ ಅದರಲ್ಲಿ 350ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು 20 ನಾನಾ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯಿರ್ವೇದ, ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಭಾಗದ ವತಿಯಿಂದ ಡಿಸೆಂಬರ್ 29 ರಿಂದ ಜನೇವರಿ 03ರ ವರೆಗೆ ಡಿಸ್ಮೆನೋರಿಯಾ(ಮಾಸಿಕ ಧರ್ಮದ ನೋವು ಮತ್ತು ತೊಂದರೆ) ಕುರಿತು ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ.ಇಂಥ ಸಮಸ್ಯೆಯನ್ನು ಎದುರಿಸುತ್ತಿರುವ ಸ್ತ್ರೀಯರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯ ಆಡಳಿತಾಧಿಕಾರಿಗ ಡಾ. ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೊ. ನಂ. 9380093550 ಮತ್ತು 9448664406 ಸಂಪರ್ಕಿಸಬಹುದಾಗಿದೆ.
100 ನೇ ದಿನ ತುಂಬಿದ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ಅನಿರ್ಧಿಷ್ಟ ಧರಣಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: 100 ದಿನ ತುಂಬಿದರೂ ಕೂಡ ಸರಕಾರ ವಿಜಯಪುರಕ್ಕೆ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸುತ್ತಿಲ್ಲ. ಅದಕ್ಕಾಗಿ ಶುಕ್ರವಾರ ನಗರದ ಗಾಂಧಿವೃತ್ತದಲ್ಲಿ 20000 ಕ್ಕೂ ಹೆಚ್ಚು ಸಾರ್ವಜನಿಕರು ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವಿಜಯಪುರದ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಕಾರ್ಮಿಕರು, ರೈತರು, ವಿಕಲ ಚೇತನರು, ಮುದ್ದು ಮಕ್ಕಳು ಸಹಿ ಹಾಕುವುದರ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸರಕಾರದ ಈ ನೀತಿಯನ್ನು ಖಂಡಿಸಿ ಕಳೆದ ನೂರು ದಿನಗಳಿಂದ ಅನಿರ್ದಿಷ್ಟ ಧರಣಿ ಹಾಗೂ 8 ದಿನಗಳಿಂದ ಅಹೋರಾತ್ರಿ ಧರಣಿ ನಡೆಯುತ್ತಿದ್ದು ಸರಕಾರ ಇನ್ನು ಜನಗಳ ಹೋರಾಟಕ್ಕೆ ಸ್ಪಂದಿಸದಿದ್ದಕ್ಕಾಗಿ ಜಿಲ್ಲೆಯ ಜನ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ 100 ಮೀಟರ್ ಬ್ಯಾನರ್ ಮೇಲೆ ಸಾವಿರಾರು ಸಹಿಯನ್ನು ದಿನವಿಡಿ ಸಹಿ ಸಂಗ್ರಹ ಮಾಡಲಾಯಿತು.100 ಮೀಟರ್ ಬ್ಯಾನರ್ ಅನ್ನು ಹಿಡಿದು ನಗರದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯ ಮೂಲಕ ಗಾಂಧಿವೃತ್ತಕ್ಕೆ ಆಗಮಿಸಿ…
ಲಿಂಗಾಯತ–ಪಂಚಮಸಾಲಿ ಸಮಾಜಕ್ಕೆ ಗುತ್ತಿಗೆದಾರ ಪ್ರಭುಗೌಡ ಬಿರಾದಾರ ಮನವಿ ಉದಯರಶ್ಮಿ ದಿನಪತ್ರಿಕೆ ಚಡಚಣ: ಮರ್ಯಾದೆ ಕೊಟ್ಟವರಿಗೆ ಬೆಂಬಲಿಸುವುದೇ ನಮ್ಮ ಧರ್ಮ ಎಂದು ಅಹಿರಸಂಗ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಪ್ರಭುಗೌಡ ಬಿರಾದಾರ ಹೇಳಿದ್ದಾರೆ.ಬುಧವಾರ ಝಳಕಿಯ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿ ತಾಲೂಕಿನ ರಾಜಕೀಯ ಪರಿಸ್ಥಿತಿ ಕಳೆದ 12 ವರ್ಷಗಳಿಂದ ಸೂಕ್ಷ್ಮವಾಗಿ ಸಾಗುತ್ತಿದ್ದು, ಈ ರಾಜಕೀಯ ಪ್ರವಾಹದಲ್ಲಿ ಲಿಂಗಾಯತ ಸಮುದಾಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಇಂಡಿ ತಾಲೂಕಿನ ಲಿಂಗಾಯತ ಸಮುದಾಯದವರಿಗೆ, ವಿಶೇಷವಾಗಿ ಪಂಚಮಸಾಲಿ ಸಮುದಾಯದವರಿಗೆ ಮನವಿ ಮಾಡಿಕೊಂಡ ಅವರು, “ನಮಗೆ ಯಾರು ಗೌರವ ನೀಡುತ್ತಾರೆ, ಮರ್ಯಾದೆ ಕೊಟ್ಟವರಿಗೆ ಬೆಂಬಲವಾಗಿ ನಿಲ್ಲುವುದೇ ನಮ್ಮ ಧರ್ಮ” ಎಂದು ಹೇಳಿದರು.ಸಮಾಜದ ಕೆಲವರ ತಪ್ಪುಗಳಿಂದ ಸಂಪೂರ್ಣ ಸಮುದಾಯ ಟೀಕೆಗೆ ಗುರಿಯಾಗುತ್ತಿರುವುದು ದುಃಖಕರ ವಿಷಯವಾಗಿದ್ದು, ಇದಕ್ಕೆ ಯಾರು ಕಾರಣ ಎಂಬ ಬಗ್ಗೆ ಆತ್ಮಪರಿಶೀಲನೆ ಅಗತ್ಯವಿದೆ ಎಂದರು.ಶಾಸಕ ಯಶವಂತರಾಯಗೌಡ ಪಾಟೀಲರು ಕಳೆದ 12 ವರ್ಷಗಳಿಂದ ಲಿಂಗಾಯತ ಸಮಾಜಕ್ಕೆ ಅಪಾರ ಗೌರವ ನೀಡುತ್ತಾ ಬಂದಿದ್ದಾರೆ. ಅವರು…
ಉದಯರಶ್ಮಿ ದಿನಪತ್ರಿಕೆ ಚಡಚಣ: ದಿನಾಲು ಸಾವಿರಾರು ವಿದ್ಯಾರ್ಥಿಗಳು, ನೂರಾರು ಅಧಿಕಾರಿಗಳು, ಹಿರಿಯರು, ಸಾರ್ವಜನಿಕರು ಹಲವಾರು ಗ್ರಾಮಗಳಿಂದ ಬಂದು ಇಂಡಿ ಮತ್ತು ಚಡಚಣ ತಿರುಗಾಡುವದು ಇಲ್ಲಿನ ಅನಿವಾರ್ಯ, ಕಾರಣ ಇಂಡಿ ಮತ್ತು ಚಡಚಣ ತಾಲೂಕಾ ಕೇಂದ್ರಗಳಾಗಿದ್ದು ಹಲವಾರು ಕೆಲಸಕ್ಕೆ ರೈತರು, ಸಾರ್ವಜನಿಕರು ಬಸ್ಸಿಗಾಗಿ ಕಾದು, ಕಾದು ಬೇಸತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಇಂಡಿ ತಾಲೂಕು ಉಪಾಧ್ಯಕ್ಷರು ಪ್ರಕಾಶ ಬಿರಾದಾರ ಆಕ್ರೋಶ ಹೊರಹಾಕಿದ್ದಾರೆ.ಇಂಡಿ, ಚಡಚಣ ಮತ್ತು ವಿಜಯಪುರ, ಸೋಲಾಪುರ್ ಮಧ್ಯದಲ್ಲಿರುವ ಝಳಕಿ ಬಸ್ಸ ನಿಲ್ದಾಣಕ್ಕೆ, ಬಸ್ಸಿಗಾಗಿ ಜನರು ಪರಡುವ ಪರಿಸ್ಥಿತಿ ಎದುರಾಗಿದೆ ಎಂದು ಝಳಕಿ ವಲಯದ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಾಲೂಕಾ ಅಧ್ಯಕ್ಷ ಪ್ರಕಾಶ ಬಿರಾದಾರ್ ಹಾಗೂ ಝಳಕಿ ಅಧ್ಯಕ್ಷ ರವಿಕುಮಾರ್ ಹೂಗಾರ ನೇತೃತ್ವದಲ್ಲಿ ಇಂದು ಝಳಕಿ ಬಸ್ಸ ನಿಲ್ದಾಣದ ವಿಭಾಗೀಯ ಕಂಟ್ರೋಲರ್ ರುದ್ರು ಗಜಾಕೋಶ್ ಇವರ ಮೂಲಕ ತಾಲೂಕು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲದವರೆಗೆ ಬಸ್ಸಿಗಾಗಿ ಬಡವರು, ನೀರಿದ್ಯೋಗಿಗಳು ಇಂಡಿ ಮತ್ತು ಚಡಚಣಕ್ಕೆ ಬಸ್ಸಿನ ಮೇಲೆ ಅವಲಂಬಿತಾರಾಗಿದ್ದು,…
ಕೆಂಭಾವಿ ತಾಲೂಕಿನಲ್ಲಿ ಶೀತಗಾಳಿ-ಚಳಿಗೆ ಸುಸ್ತಾದ ಜನಜೀವನ | ರಕ್ತ ಸಂಚಾರಕ್ಕೆ ಸಂಚಕಾರ | ವೃದ್ಧರು, ಮಕ್ಕಳಲ್ಲಿ ನಡುಕ ಉದಯರಶ್ಮಿ ದಿನಪತ್ರಿಕೆ ವಿಶೇಷ ವರದಿ: ಡಾ.ಯಂಕನಗೌಡ ಪಾಟೀಲ ಕೆಂಭಾವಿ: ಚಳಿಗಾಲ ಎಂದರೆ ವರ್ಷದ ನಾಲ್ಕು ತಿಂಗಳು ಅತ್ಯಂತ ತಂಪಾದ ಋತು, ಇದು ಶರತ್ಕಾಲ ಮತ್ತು ವಸಂತ ಕಾಲದ ನಡುವೆ ಬರುತ್ತದೆ, ಭೂಮಿಯ ಅಕ್ಷದ ಓರೆಗೊಂಡು ಸೂರ್ಯನಿಂದ ದೂರವಿರುವಾಗ ಸಂಭವಿಸುತ್ತದೆ, ಈ ಸಮಯದಲ್ಲಿ ಹಗಲು ಕಡಿಮೆಯಾಗಿ ರಾತ್ರಿಗಳು ದೀರ್ಘವಾಗಿ ಇರುವುದು, ನಿಸರ್ಗದ ಬದಲಾವಣೆಯ ಜೊತೆಗೆ ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ತರುವ ಋತುವಾಗಿರುವುದು ನಿಜ. ಆದರೆ ಈ ಬಾರಿ ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ, ಶೀತಗಾಳಿ, ಮಾಗಿ ಚಳಿಯ ಥಂಡಿಗೆ ಥಂಡಾ ಹೊಡೆದ ಜನಜೀವನ.ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿ ವಲಯದಲ್ಲಿ ವಿಪರೀತ ಚಳಿಯೋ.. ಚಳಿ.. ದಿನ ಬೆಳಗಿನ ಜಾವ ಹಾಗೂ ಸಾಯಂಕಾಲ ಸಮಯ ಮೈನಡುಗಿಸುವ ಚಳಿ ಹೇಳ ತೀರದು. ತೀವ್ರವಾಗಿ ಬೀಸುವ ಶೀತ…
