Author: editor.udayarashmi@gmail.com

ಪೊಲೀಸರಿಂದ ರೂ.೬೨ ಲಕ್ಷಕ್ಕೂ ಅಧಿಕ ನಗದು, ೫೫ ಗ್ರಾಂ ಚಿನ್ನ ಸೇರಿದಂತೆ ಅನೇಕ ದಾಖಲೆಗಳ ವಶ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಕಿರುಸಾಲ, ಬಡ್ಡಿ ವ್ಯವಹಾರ ನಡೆಸುವವರ ಮೇಲೆ ದಾಳಿ ಮಾಡಿ ಶೋಧನೆ ಕೈಕೊಂಡು ರೂ.೬೨ ಲಕ್ಷ ನಗದು, ೫೫ ಗ್ರಾಂ ಚಿನ್ನ ಸೇರಿದಂತೆ ಅನೇಕ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರು ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿ, ಈಗಾಗಲೇ ಜಾರಿಯಲ್ಲಿರುವ ಕಾನೂನುಗಳ ಅಡಿ ಮತ್ತು ಮೈಕ್ರೋ ಫೈನಾನ್ಸ್‌ ಗಳಿಗೆ ಸಂಬಂಧಿಸಿದಂತೆ, ಇತ್ತೀಚೆಗೆ ಜಾರಿಗೆ ಬಂದಿರುವ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ, 2025 ರ ಅಧಿಸೂಚನೆಯ ಹಿನ್ನೆಲೆಯಲ್ಲಿ, ವಿಜಯಪುರ ಜಿಲ್ಲೆಯಾದ್ಯಂತ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಿರುಸಾಲ, ಬಡ್ಡಿ ವ್ಯವಹಾರ (ಲೇವಾದೇವಿ) ನಡೆಸುತ್ತಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಬಂದ ಆಧಾರದಲ್ಲಿ ಅಂತವರ ಮನೆ/ಕಚೇರಿ/ಸಂಸ್ಥೆಗಳ ಮೇಲೆ ದಾಳಿ ನಡೆಸಿ, ಅವರು ಬಡ್ಡಿ ವ್ಯವಹಾರದಲ್ಲಿ ಬಲವಂತದ ಕ್ರಮ…

Read More

ವಿಜಯಪುರದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ 31ನೇ ರಾಜ್ಯಮಟ್ಟದ ಸಮ್ಮೇಳನವನ್ನು ಈ ಬಾರಿ ಶರಣ ನಾಡು ವಿಜಯಪುರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಫೆಬ್ರುವರಿ 22 ಮತ್ತು 23 ಎರಡು ದಿನಗಳ ಕಾಲ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬೆಳಿಗ್ಗೆ 12.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಸಿ.ಎಂ.ತಾಳಿಕೋಟಿ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ 30 ವರ್ಷಗಳ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ವಿಜಯಪುರದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲು ಕೇಂದ್ರ ಸಮಿತಿ ಸಮ್ಮತಿಸಿದೆ. ರಾಜ್ಯದ ಯಾವುದೇ ವೈದ್ಯಾಧಿಕಾರಿಗೆ ತೊಂದರೆಯಾದರೆ ಅವರ ಬೆನ್ನಿಗೆ ನಿಂತು ಸಹಕಾರ ನೀಡಿ ಸಮಸ್ಯೆ ಬಗೆಹರಿಸುವ ಹಾಗೂ ವೈದ್ಯಾಧಿಕಾರಿಗಳ ಹಿತಪರ ಸಂಘಟನಾತ್ಮಕವಾಗಿ ಧ್ವನಿಯಾಗಲು ಸಂಘ ರಚಿಸಿಕೊಂಡಿದ್ದೇವೆ ಎಂದರು.ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದೊಂದು ಜಿಲ್ಲೆ ಆಯ್ಕೆ ಮಾಡಿ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯ ಸಮ್ಮೇಳನ ನಡೆಸಲಾಗುವುದು. ಕಳೆದ 2022…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಭೂತನಾಳ ತಾಂಡಾದಲ್ಲಿ ಜನಿಸಿದ ಅಶೋಕ ಸೋಮುಲು ವಾಲೀಕಾರ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು 2023-2024ನೇ ಸಾಲೀನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಅಶೋಕ ವಾಲೀಕಾರ ಅವರು ತಮ್ಮ 12 ನೇ ವಯಸ್ಸಿನಿಂದ ಹಲಿಗೆ ಬಾರಿಸುವ ಕಾಯಕದಲ್ಲಿ ತೊಡಗಿದ್ದಾರೆ. ತಂದೆಯಿಂದ ಹಲಿಗೆ ಬಾರಿಸುವುದನ್ನು ಕಲಿತು, ಮಹಾರಾಷ್ಟ್ರ, ಕೆರಳ ಹಲವು ರಾಜ್ಯಗಳಲ್ಲಿ ವೈವಿದ್ಯಮಯವಾಗಿ ಹಲಿಗೆ ಬಾರಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ತಮ್ಮದೇ ಆದ ಒಂದು ತಂಡವನ್ನು ಕಟ್ಟಿಕೊಂಡು, ಜನನ, ಮರಣ, ಮದುವೆ ಸಮಾರಂಭಗಳಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅತ್ತ್ಯುತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಲ್ಲಿ ಮತ್ತು ಮೈಸೂರು ದಸಾರ ಹಬ್ಬ ದಲ್ಲಿಯೂ ಕೂಡ ಪ್ರದರ್ಶನ ನೀಡಿದ್ದಾರೆ.ಇವರ ಕಲೆಯನ್ನು ಗುರುತಿಸಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು 2023-2024ನೇ ಸಾಲೀನ ವಾರ್ಷಿಕ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.

Read More

ಲೇಖನ- ಡಾ. ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಕಲ್ಯಾಣ ಕ್ರಾಂತಿಯ ಕೊನೆಯ ಹೆಜ್ಜೆ ಗುರುತುಗಳು ಎಂಬ ನನ್ನ ಸಂಶೋಧನಾ ಲೇಖನ ಸಿದ್ಧ ಪಡಿಸುವಲ್ಲಿ ಮತ್ತು ಕ್ಷೇತ್ರ ಕಾರ್ಯ ಮಾಡುವಲ್ಲಿ ಹಲವಾರು ಶರಣರ ಸಮಾಧಿ ಕುರುಹುಗಳನ್ನು ಗುರುತಿಸಲು ಸಹಾಯಕವಾದದ್ದು ಜನರ ನಂಬಿಕೆ, ಜನಪದಿಗರ ಹೇಳಿಕೆ ಸಮಾಧಿಗಳನ್ನು ಪತ್ತೆ ಹಚ್ಚುವಲ್ಲಿ ಸಾಧ್ಯವಾಯಿತು.ಬಸವಣ್ಣನವರು ಕಲ್ಯಾಣವನ್ನು ತೊರೆದ ಮೇಲೆ ಸೋಮಿದೇವ ಶರಣರ ಹತ್ಯೆಗೆ ಆದೇಶಿಸುತ್ತಾನೆ. ಬಸವಣ್ಣನವರ ಗಡಿಪಾರಿನ ನಂತರ ಕಲ್ಯಾಣ ಕ್ರಾಂತಿಯ ರಕ್ತ ಸಿಕ್ತ ಹೋರಾಟದಲ್ಲಿ ಚೆನ್ನ ಬಸವಣ್ಣನವರ ನೇತೃತ್ವದಲ್ಲಿ ಮಡಿವಾಳ ಮಾಚಿದೇವರು ಶರಣ ಸೇನೆಯನ್ನು ಹುರುದುಂಬಿಸಿ ಶರಣರ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಸೋವಿದೇವನ ಸೈನಿಕರಿಗೆ ಪ್ರತಿರೋಧ ತೋರಿಸುತ್ತಾ. ಮಾದನ ಹಿಪ್ಪರಗಿ, ಬೆಳಗಾವಿ , ಕಾದ್ರೊಳ್ಳಿ , ಹುಣಶೀಕಟ್ಟಿ , ಮೂಗಬಸವ ,ಮುರಗೋಡ ,ತಲ್ಲೂರು ,ಕಾರಿಮನಿ , ಕಟಕೋಳ , ಚಂದರಗಿ, ಗೊಡಚಿಗೆ ಬಂದು ಮಾಚಿದೇವರು ಐಕ್ಯರಾಗುತ್ತಾರೆ. ಮುದಿ ವೀರಣ್ಣನ ಗುಡಿ ಶರಣ ಮಡಿವಾಳ ಮಾಚಿದೇವರ ಐಕ್ಯಸ್ಥಳ. ಮುದಿ ವೀರಣ್ಣನ ಕೈಯಲ್ಲಿ ಖಡ್ಗ ಮತ್ತು ಎದೆಯ…

Read More

ಲೇಖನ- ಮಮತಾ ಸತೀಶ್ ಹೆಗಡೆಶಿರಸಿ ಉದಯರಶ್ಮಿ ದಿನಪತ್ರಿಕೆ ತಡವಾಗಿ ಆದರೂ ತಪ್ಪಿನ ಅರಿವಾಗಿದ್ದಕ್ಕೆ ಮತ್ತೆ ಸಂತೃಪ್ತಿಯ ನಿಟ್ಟುಸಿರುಬಿಟ್ಟರು. ಮತ್ತೆ ಛಲದಿಂದ ಫೇಕ್ಟರಿಯನ್ನ ಕಟ್ಟಿ ನಡೆಸತೊಡಗಿದರು. ಮನೆಯಲ್ಲಿ ಸಂತೃಪ್ತಿ ನೆಮ್ಮದಿ ಆಗಮಿಸತೊಡಗಿತು. ಹಾಗಾಗಿ ಸಂತೃಪ್ತಿ ಯೇ ಶ್ರೇಷ್ಟ ಸಂಪತ್ತು ಅನ್ನುವುದರಲ್ಲಿ ಎರಡು ಮಾತಿಲ್ಲ. ನಾವು ನಮ್ಮಿಷ್ಟದಂತೆ ಅತಿಯಾಸೆ ಮಾಡದೆ ಇದ್ದುದರಲ್ಲೆ ನೆಮ್ಮದಿಯನ್ನ ಪಡೆದುಕೊಳ್ಳುವುದನ್ನ ಕಲಿತು ನಡೆಸುವ ಜೀವನವೇ ಸಂತೃಪ್ತ ಜೀವನ ಶ್ರೇಷ್ಟ ಜೀವನ ಸಂತೃಪ್ತಿಯಿಲ್ಲದ ಐಶ್ವರ್ಯ ನರಕಕ್ಕೆ ಸಮಾನ. ಓಡಹುಟ್ಟಿದವರ ಸಹಕಾರ ಸಹನೆ ಹಿರಿಕಿರಿಯರ ಸ್ನೇಹಪರತೆಯ ಒಡನಾಟ ಮಮಕಾರ ಬಂಧನವೆ ಶ್ರೇಷ್ಟ ಸಂಪತ್ತು. ಕಷ್ಟನಷ್ಟಗಳಲಿ ಜೊತೆಯಾಗಿ ನಡೆವವರೆ ನಮ್ಮ ಹಿತೈಷಿಗಳು.ಇಲ್ಲದ ದಾಹಗಳಿಗೆ ಮಾರುಹೋಗದೆ ಸಂಗ ಜೀವನ ನಡೆಸಿ ಹಿಡಿತದ ಬದುಕೆ ಶ್ರೇಷ್ಟ ಸಂತೃಪ್ತ ಬದುಕು. ಸುಖವ ಹಂಚಿ ಬಾಳಿದರೆ ಜೀವನ ನಂದನವನ. ಅರಿತು ನಡೆವ ಬಾಳೆ ಸಂತೃಪ್ತ ಜೀವನ.

Read More

ರಚನೆ- ವಿನಯ ಉದಯರಶ್ಮಿ ದಿನಪತ್ರಿಕೆ ಹರೆಯದ ಬದುಕೆಲ್ಲ ಚಂದಇರಲು ಅನುರಾಗ ಬಂಧಬೆಸೆದು ಭಾವದಾನುಬಂಧಒಲವಿನ‌ ನವರಾಗದಿಂದ ನವ್ಯ ಕನಸಿಗೆ ರೆಕ್ಕೆ ಮೂಡಿಹೃದಯ ಸುಸ್ವರದಿ ಹಾಡಿಸಪ್ತಪದಿಯಲಿ ಜೊತೆಗೂಡಿಮನದಿ ಸಪ್ತವರ್ಣ ಮೂಡಿ ಉಲ್ಲಾಸ ಉತ್ಸಾಹದ ಕಾಲಯೌವ್ವನ ಆಶಿಸಿ ಅನುಗಾಲಯುವಮನದಿ ಮೋಹಜಾಲಜಗದಿ ಪ್ರೇಮಸ್ವರ್ಗದ ಹಂಬಲ

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ನಮ್ಮ ಮನಸ್ಸು ಯಾವದನ್ನು ಮಾಡಬೇಕೆಂಬುದನ್ನು ಸಂಕಲ್ಪ ಮಾಡಿಕೊಂಡರೆ ಮನಸ್ಸು ಆ ಕೆಲಸವನ್ನು ಮಾಡಿ ಅದರಲ್ಲಿ ಯಶಸ್ವಿಯಾಗುತ್ತದೆ. ಜೀವನದಲ್ಲಿ ನಾವೆಲ್ಲರೂ ಪ್ರತಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಜೀವನವನ್ನು ಸಂತೋಷವಾಗಿ, ಆರೋಗ್ಯಕರವಾಗಿ ಕಳೆಯಬೇಕೆಂದು ಸಂಚಾರಿ ಯೋಗ ಗುರು ಪರಮಪೂಜ್ಯ ನಿರಂಜನ ಶ್ರೀಗಳು ಹೇಳಿದರು.ಪಟ್ಟಣದ ವೀರಭದ್ರೇಶ್ವರ ನಗರದ ಉದ್ಯಾನವನದಲ್ಲಿ ಬುಧವಾರ ಸಂಜೆ ಕಳೆದ ಹನ್ನೊಂದು ದಿನಗಳ ಕಾಲ ಜರುಗಿದ ಯೋಗ ಶಿಬಿರ, ಸಾಮೂಹಿಕ ಭಜನೆ, ಆಧ್ಯಾತ್ಮಿಕ ಪ್ರವಚನ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಾವು ಪ್ರತಿದಿನ ಬೆಳಗ್ಗೆ ಬೇಗ ಏಳುವ ಮೂಲಕ ನಿತ್ಯವೂ ಗರಿಷ್ಠ ಒಂದು ಗಂಟೆ ಇಲ್ಲವೇ ಕನಿಷ್ಠ ಅರ್ಧಗಂಟೆಯಾದರೂ ಪ್ರಾಣಾಯಾಮ, ಯೋಗ, ವಾಯುವಿಹಾರ ನಿರಂತರವಾಗಿ ಮಾಡಿದರೆ ಆರೋಗ್ಯಕರ ಬದುಕು ಸಾಗಿಸಬಹುದು. ಇದಾದ ನಂತರ ಲಿಂಗಪೂಜೆ ಇಲ್ಲವೇ ಧ್ಯಾನ ಮಾಡಬೇಕು. ರಾತ್ರಿ ಬೇಗ ಮಲಗಬೇಕು. ಇದು ಜೀವನದಲ್ಲಿ ನಿರಂತತೆಯಿಂದ ಇದ್ದರೆ ಚೈತನ್ಯಮಯವಾದ ಜೀವನ ನಮ್ಮದಾಗುತ್ತದೆ ಎಂದರು.ನಾವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತಿರಲಿ ಆ ಕೆಲಸವನ್ನು ಖುಷಿಯಾಗಿ, ನಗು…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಇತಿಹಾಸದ ಪುಟಗಳಲ್ಲಿ ಸಾಕಷ್ಟು ರಾಜರು ಕಾಣಿಸುತ್ತಾರೆ. ಅವರಲ್ಲಿ ನಮ್ಮ ಭಾಗದಲ್ಲಿ ಅತ್ಯಂತ ವೀರರು, ಶೂರರು, ಪರಾಕ್ರಮಿಗಳು ಶಿವಾಜಿ ಮಹಾರಾಜರು ಆಗಿದ್ದರು ಎಂದು ತಹಸೀಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಾಷ್ಟç ನಿರ್ಮಾಣಕ್ಕೆ ಮರಾಠರ ಪಾತ್ರ ದೊಡ್ಡದು ಎಂದು ಹೇಳಲಾಗುತ್ತೆ. ಆರೆ ಸಧ್ಯ ಮರಾಠರು ಹಿಂದುಳಿದ ಬಗ್ಗೆ ಮರಾಠಾ ನಾಯಕರು ಮಾತನಾಡುತ್ತಾರೆ. ಯಾರೇ ಹಿಂದುಳಿಯಲು ಕಾರಣ ಶಿಕ್ಷಣದ ಕೊರತೆ. ಯುವ ಪೀಳಿಗೆಯನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಸರ್ಕಾರ ಸಾಕಷ್ಟು ಸವಲತ್ತುಗಳನ್ನು ನೀಡಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ, ಆರ್‌ಎಸ್‌ಎಸ್ ನ ಪ್ರಮುಖರಾದ ಪರಶುರಾಮ ಪವಾರ, ಮರಾಠಾ ಸಮಾಜದ ಅಧ್ಯಕ್ಷ ಭರತ ಭೋಸಲೆ ಪ್ರಮುಖರಾದ ರಾಜೇಂದ್ರ ಭೋಸಲೆ, ಅಶೋಕ ನಾಡಗೌಡ, ಸಂಗಣ್ಣ ಬಿರಾದಾರ ಜಿಟಿಸಿ, ಪರಶುರಾಮ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದಲ್ಲಿ ಬೆಳ್ಳಬೆಳಿಗ್ಗೆ ಲೇವಾದೇವಿ ವ್ಯವಹಾರಿಗಳೆನ್ನಲಾದ ಇಬ್ಬರ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.ಜಿಲ್ಲಾಧಿಕಾರಿಗಳ ಆದೇಶದ ಮೇಲೆ ಕಿರು ಸಾಲ, ಅಧಿಕ ಬಡ್ಡಿ ಅನಧೀಕೃತ ಕಾಗದ ಪತ್ರಗಳನ್ನು ಪಡೆಯುವದು ಹೀಗೆ ಅಮಾಯಕ ಸಾರ್ವಜನಿಕರ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯಲು ದಿಢೀರ ಕಾರ್ಯಾಚರಣೆ ನಡೆಸಿದ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದಲ್ಲಿ ಮರಾಠಾ ಸಮಾಜ ಬಾಂಧವರು ಬುಧವಾರ ಛತ್ರಪತಿ ಶಿವಾಜಿ ಜಯಂತಿಯನ್ನು ಸಂಭ್ರಮ,ಸಡಗರದಿಂದ ಆಚರಿಸಿದರು.ವಿಜಯಪುರ ರಸ್ತೆಯಲ್ಲಿರುವ ವಿಠ್ಠಲ ಮಂದಿರದಲ್ಲಿ ಬೆಳಗ್ಗೆ ಮಹಿಳೆಯರು ಶಿವಾಜಿ ಮಹಾರಾಜರ ತೊಟ್ಟಿಲೋತ್ಸವ ಕಾರ್ಯಕ್ರಮ ನೆರವೇರಿಸಿದರು. ಶಿವಾಜಿ ಮಹಾರಾಜರ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೂರ್ತಿಯ ಮೆರವಣಿಗೆಗೆ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಮುಖಂಡ ಸಂಗಮೇಶ ಓಲೇಕಾರ ಚಾಲನೆ ನೀಡಿದರು.ನಂತರ ಮೂರ್ತಿಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.ಮೆರವಣಿಗೆಯಲ್ಲಿ ಬಸವರಾಜ ಬಿಜಾಪುರ, ಅನಿಲ ಪವಾರ, ಜೋತಿಬಾ ಪವಾರ, ತಾನಾಜಿ ಸೂರ್ಯವಂಶಿ, ಅಮರ ಗಾಯಕವಾಡ,ಪ್ರದೀಪ ಸಾಳುಂಕೆ, ರವಿ ಖಾಡೆ, ಶಿವಾಜಿ ಜಗತಾಪ, ಬಾಬು ನಿಕ್ಕಂ, ವೆಂಕಟೇಶ ಕರಾಡೆ, ಮಾರುತಿ ಗಾಯಕವಾಡ, ಸುಜಾತಾ ಬಂಡಾರಿ, ಸುನಂದಾ ಗಾಯಕವಾಡ, ಪ್ರಿಯಾ ರಜಪುತ, ನಾಣಿಬಾಯಿ ನಿಕ್ಕಂ, ತೇಜಸ್ವಿನಿ ಗಾಯಕವಾಡ, ಪೂಜಾ ಗಾಯಕವಾಡ, ರೂಪಾ ಜಾಧವ ಸೇರಿದಂತೆ ಇತರರು ಭಾಗವಹಿಸಿದ್ದರು.

Read More