Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇತ್ತೀಚಿನ ದಿನಗಳಲ್ಲಿ ಬಸವನಬಾಗೇವಾಡಿಯಲ್ಲಿ ಜರುಗಿದ ಪ್ರತಿಭಟನೆಯಲ್ಲಿ ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ (ಯತ್ನಾಳ) ಇವರ ಪರವಾಗಿ ಹಾಗೂ ಬಿಜೆಪಿಯ ವಿರುದ್ದವಾಗಿ ಮಾತನಾಡುವ ಸಮಯದಲ್ಲಿ ಲಕ್ಷ್ಮಿ ಪಾಟೀಲ ಎಂಬುವಳು ಸರಕಾರದ ನಿಷೇಧಿತ ಪದವನ್ನು ಬಳಸಿದ್ದರ ಕುರಿತು ವಿಜಯಪುರ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ, ವಿಜಯಪುರ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಿ ಜಿ.ಕತ್ನಳ್ಳಿ ಮಾತನಾಡಿ, ಲಕ್ಷ್ಮಿ ಪಾಟೀಲ ಎಂಬುವಳು ಸರಕಾರದ ನಿಷೇಧಿತ ಪದವಾದ ಹಜಾಮ ಎನ್ನುವ ಪದವು ಎಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುವದನ್ನು ನೋಡಿ ನಮ್ಮ ಕೌರಿಕ ಸ್ವಾಭಿಮಾನಿ ಸಮಾಜಕ್ಕೆ ಮುಜುಗರವನ್ನುಂಟು ಮಾಡಿದೆ. ಹಾಗೂ ಕ್ಷೌರಿಕ ವೃತ್ತಿಗೆ ಅವಮಾನಿಸಲಾಗಿದೆ ಎಂದರು.ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಡಪದ (ಉತ್ನಾಳ) ಮಾತನಾಡಿ, ಹಡಪದ ಅಪ್ಪಣ್ಣ ಸಮಾಜದ ಕುರಿತು ಲಕ್ಷ್ಮಿ ಪಾಟೀಲ ಎಂಬುವಳು ಮಾತನಾಡಿದ ನಿಷೇಧಿತ ಪದದಿಂದ ಹಡಪದ ಸಮಾಜಕ್ಕೆ ತೀವ್ರ ತರಹದ ನೋವುಂಟಾಗಿದೆ. ಕಾರಣ ಕೂಡಲೇ ಲಕ್ಷ್ಮಿ ಪಾಟೀಲ ಇವರನ್ನು ಬಂಧಿಸಿ ಇವರ ಮೇಲೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ರಂಗಭೂಮಿಯಲ್ಲಿ ಜಾನಪದ ಕಲೆಗೆ ಶ್ರೇಷ್ಠ ಸ್ಥಾನವಿದೆ. ಸಣ್ಣಾಟ, ದೊಡ್ಡಾಟ, ಯಕ್ಷಗಾನ ಎಂಬ ಆಟಗಳು ಜಾನಪದ ರಂಗಭೂಮಿಯನ್ನು ಶ್ರೀಮಂತಗೊಳಿಸಿವೆ ಎಂದು ಕತಕನಹಳ್ಳಿ ಗುರು ಚಕ್ರವರ್ತಿ ಬಬಲಾದಿ ಸದಾಶಿವ ಮಠದ ಶಿವಯ್ಯ ಸ್ವಾಮೀಜಿ ಹೇಳಿದರುಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿ ಸಹಯೋಗದಲ್ಲಿ ಏರ್ಪಡಿಸಿದ “ಶ್ರೀ ಕೃಷ್ಣ ಪಾರಿಜಾತ ಪ್ರದರ್ಶನ ” ಉದ್ಘಾಟಿಸಿ ಮಾತನಾಡುತ್ತಾ ಜಾನಪದ ಕಲೆ ನಮ್ಮ ಬದುಕಿನ ಭಾಗವಾಗಿದೆ. ನಮ್ಮ ಸಂಸಾರದ ಗುಟ್ಟು ಜಾನಪದ ಕಲೆಯಲ್ಲಿ ಅಡಗಿದೆ. ಅದಕ್ಕಾಗಿ ಜಾನಪದ ಕಲೆ ಮತ್ತು ಸಾಹಿತ್ಯವನ್ನು ಬೆಳೆಸಬೇಕು ಎಂದು ಕರೆ ನೀಡಿದರು.ಕರ್ಣಾಟಕ ಬಯಲಾಟ ಅಕಾಡೆಮಿ ಸದಸ್ಯೆ ಶ್ರೀಮತಿ ಅನಸೂಯಾ ವಡ್ಡರ ಮಾತನಾಡಿ ಜಾನಪದ ಕಲಾವಿದರು ಕಲೆಯನ್ನು ಬೆಳೆಸುತ್ತಾ ಬಡತನದಲ್ಲಿ ಬದುಕು ಕಳೆಯುತ್ತಿದ್ದಾರೆ. ಸರಕಾರ ಮತ್ತು ಸಮಾಜದವರು ಕಲಾವಿದರಿಗೆ ಸಹಾಯ ಮಾಡಬೇಕು ಎಂದರು.ಬಬಲೇಶ್ವರದ ವೆಂಕಟೇಶ್ವರ ಪಾರಿಜಾತ ತಂಡದ ಮುಖ್ಯಸ್ಥೆ ಅಂಜಲಿ ಪವಾರ ಹಾಗೂ ತಂಡದ ಕಲಾವಿದರಿಂದ ಇಡಿ ರಾತ್ರಿ ಪಾರಿಜಾತ ಪ್ರದರ್ಶನ ನಡೆಯಿತು.

Read More

ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಗದ್ದೆಯ ಬದುವಿನಲ್ಲಿ ತೋಟದ ಕಡೆಗೆ ನಾನು ಮತ್ತು ನನ್ನ ತಮ್ಮ ಸಂದೇಶ್ ತೋಟದ ಕಡೆಗೆ ಸಾಗುತ್ತಿದ್ದೆವು. ಸ್ವಲ್ಪ ದೂರ ಬದುವಿನಲ್ಲಿ ಸಾಗಿದ್ದೆವಷ್ಟೇ, ತಮ್ಮ ಸಂದೇಶ್ ಅಲ್ಲೇ ನಿಂತು ಅಣ್ಣಾ ನಿನಗೆ ಚೆಂಡು ಬೇಕೇ ಎಂದು ಕೇಳಿದ. ಆಗ ನಾನು ಈ ಗದ್ದೆಯ ಬದುವಿನಲ್ಲಿ ಅದ್ಯಾವ ಬಾಲ್ ಎಂದು ಕೇಳುತ್ತಿದ್ದಂತೆಯೇ ತಮ್ಮ ಅಲ್ಲಿದ್ದ ಚೆಂಡನ್ನು ಎತ್ತಿಕೊಂಡು ಬಿಟ್ಟಿದ್ದ. ಆಗ ಜೊತೆಗಿದ್ದ ನನ್ನಪ್ಪ ಅದು ಬಾಲ್ ಅಲ್ಲಪ್ಪಾ, ಅದು ಒಂದು ಹುಳ. ಆದರೆ ಆ ಹುಳ ಚೆಂಡಿನಂತೆಯೇ ಇದೆ ಎಂದು ಅವರೂ ಅದನ್ನು ಕೈಯಿಂದ ಎತ್ತಿಕೊಂಡು ತೋರಿಸಿದರು.ಹತ್ತಿರ ಹೋಗಿ ನೋಡಿದೆ, ಹೌದು, ಕಪ್ಪು ಬಣ್ಣದ ಚೆಂಡಿಗೆ ಅಲ್ಲಲ್ಲಿ ಬಿಳಿ ಬಣ್ಣವನ್ನು ಹಚ್ಚಿದ ಅಂದದ ಚೆಂಡಿನಂತೆ ಇತ್ತು. ಅದುವರೆಗೆ ತೋಟವನ್ನು ತಲುಪುವ ಧಾವಂತದಲ್ಲಿದ್ದ ನಮ್ಮೆಲ್ಲರ ಚಿತ್ತ ಒಮ್ಮಿಂದೊಮ್ಮೆಲೇ ಚೆಂಡು ಹುಳುವಿನ ಕಡೆಗೆ ತಿರುಗಿತು. ಚೆಂಡನ್ನು ಅಲ್ಲೇ ಬಿಟ್ಟು ಮುಂದಡಿ…

Read More

ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ನಗರದ ಆಡುಗೋಡಿಯ ಪೊಲೀಸ್ ಕಾನ್ ಸ್ಟೇಬಲ್ ತುಕಾರಾಮ ಜಮಾದಾರ 2024 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.ಪ್ರತಿ ವರ್ಷ ಪೋಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಹಾಗೂ ವಿಶೇಷ ಸಾಧನೆಗೈದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಏಪ್ರಿಲ್ 2ರ ಪೊಲೀಸ್ ಧ್ವಜ ದಿನಾಚರಣೆಯಂದು ಮಾನ್ಯ ಮುಖ್ಯಮಂತ್ರಿಗಳು ಈ ಪದಕ ಪ್ರದಾನ ಮಾಡಲಿದ್ದಾರೆ.ತುಕಾರಾಮ ಜಮಾದಾರ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ 67 ನೇ ಅಖಿಲ ಭಾರತ ಪೊಲೀಸ್ ಕರ್ತವ ಕೂಟದಲ್ಲಿ ಸ್ಫೋಟಕ ಪತ್ತೆ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕವನ್ನು ಗೆದ್ದು, ಪೊಲೀಸ್ ಇಲಾಖೆಯ ಘನತೆಯನ್ನು ಹೆಚ್ಚಿಸಿದ್ದಾರೆ. ಅಲ್ಲದೇ 2 ಲಕ್ಷ ನಗದು ಬಹುಮಾನ ಕೂಡಾ ಪಡೆದಿದ್ದಾರೆ.ಇವರ ಈ ಸೇವಾ ಸಾಧನೆಯನ್ನು ಗುರುತಿಸಿ ಸರ್ಕಾರ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆ ಮಾಡಿದೆ. ಮೂಲತಃ ಕರ್ನಾಟಕ ಗಡಿ ಭಾಗದ ಅಕ್ಕಲಕೋಟೆಯ ತುಕಾರಾಮ ಜಮಾದಾರ ಕಳೆದ 6 ವರ್ಷಗಳಿಂದ ಬೆಂಗಳೂರು ನಗರದ ಪೊಲೀಸ್ ಶ್ವಾನದಳದಲ್ಲಿ ಸ್ಪೋಟಕ ಪತ್ತೆ ವಿಭಾಗದ ಐಸು ಶ್ವಾನದ ಪರಿಚಾಲಕರಾಗಿ ಕರ್ತವ್ಯ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಕಾಲುವೆ ಜಾಲಗಳ ಮೂಲಕ ಕೆರೆ ತುಂಬಿಸುವ ಸಂದರ್ಭದಲ್ಲಿ ಕುಡಿಯುವ ನೀರು ಅನ್ಯ ಕಾರ್ಯಕ್ಕೆ ಬಳಕೆ ಹಾಗೂ ನೀರು ಪೋಲಾಗದಂತೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.ಜಿಲ್ಲೆಯ ವಿವಿಧ ತಾಲೂಕಾ ತಹಶೀಲ್ದಾರ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಮಂಗವಾರ ಸಂಜೆ ವಿಡಿಯೋ ಸಂವಾದದ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿದ ಅವರು, ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು. ಲಭ್ಯವಿರುವ ನೀರನ್ನು ಸದ್ಭಳಕೆ ಮಾಡಿಕೊಂಡು ಮುಂದಿನ ಜೂನ್‌ವರೆಗೆ ಯಾವುದೇ ಸಮಸ್ಯೆಯಾಗದಂತೆ ನೀರನ್ನು ಕಾಯ್ದಿಟ್ಟುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಯಾವುದೇ ಅಭಾವವಾಗದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ಜಿಲ್ಲೆಯಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ಅವಶ್ಯಕತೆ ಇದ್ದಲ್ಲಿ ಮುಂಚಿವಾತವಾಗಿ ಮಾಹಿತಿ ಸಲ್ಲಿಸಬೇಕು. ಅಗತ್ಯವಿದ್ದಲ್ಲಿ ಮಾತ್ರ ಟ್ಯಾಂಕರ್…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಶ್ರೀ ಗುರು ಚಕ್ರವರ್ತಿ ಸದಾಶಿವ ಚಂದ್ರಗಿರಿ ದೇವಿ ಜಾತ್ರಾ ಮಹೋತ್ಸವ ಹಾಗೂ ಹನುಮಾನ ದೇವರ ಓಕಳಿಯ ನಿಮಿತ್ತ ಹಾಲೋಕಳಿ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.ಕುಂಬಾರ ಹಳ್ಳ ಗ್ರಾಮದ ಮಾಳಿ ಮತ್ತು ಮಾರಾಯ ಸಿದ್ದ ಓಣಿಯ ಯುವಕರ ಮಧ್ಯ ಜರುಗಿದ ಓಕಳಿಯು ಅತ್ಯಂತ ತುರಿಸಿನಿಂದ ಕೂಡಿತ್ತು, ಯುವಕರು ಓಕಳಿಯ ಕಂಬ ಏರುವುದು ಅತ್ಯಂತ ರೋಚಕವಾಗಿತ್ತು.ಜಾತ್ರಾ ಮಹೋತ್ಸವ ಹಾಗೂ ಓಕಾಳಿಯ ಮುಂದಾಳತ್ವವನ್ನು ಹಿರಿಯರಾದ ನ್ಯಾಯವಾದಿ ಸದಾಶಿವ ನ್ಯಾಮಗೌಡ, ಪಿಕೆಪಿಎಸ್ ಸದಸ್ಯ ದುಂಡಪ್ಪ ಬಾಡಗಿ, ನಾಗಪ್ಪ ಸೊನ್ನದ, ಪಿ ಎಲ್ ಡಿ ಇ ಬ್ಯಾಂಕ್ ನಿರ್ದೇಶಕ ಬಸವರಾಜ್ ಮರನೂರ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಧರೆಪ್ಪ ಮಂಟೂರ, ಚಾರ್ಟೆಡ್ ಅಕೌಂಟ್ ಧರೆಪ್ಪ ಮರನೂರ, ಗ್ರಾಮ ಪಂಚಾಯತ್, ಪಿಕೆಪಿಎಸ್, ಹಾಲು ಉತ್ಪಾದಕ ಮಂಡಳಿ, ಹಾಗೂ ಸಂಕಲ್ಪ ಸಮಿತಿಯ ಸದಸ್ಯರು ವಹಿಸಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸ್ವ- ಸಹಾಯ ಸಂಘಗಳು ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಮತ್ತು ಸಕಾಲದಲ್ಲಿ ಆರ್ಥಿಕ ಸಹಾಯ ಒದಗಿಸುವಲ್ಲಿ ತುಂಬಾ ಅನುಕೂಲಕರವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವಿಜಯಪುರ ಜಿಲ್ಲಾ ನಿರ್ದೇಶಕರು ಸಂತೋಷ್ ಕುಮಾರ್ ತಿಳಿಸಿದರುತಾಲೂಕಿನ ಕಾಶಿನಕುಂಟಿ ಗ್ರಾಮದಲ್ಲಿ ೨೮೫೧ನೇ ನೂತನ ಸ್ವ ಸಹಾಯ ಸಂಘ ಉದ್ಘಾಟನೆ ಮಾಡಿ ದಾಖಲಾತಿ ಹಸ್ತಾಂತರಿಸಿ ಅವರು ಮಾತನಾಡಿದರು.ಸಮ್ಮ ಸಂಸ್ಥೆಯ ಯೋಜನೆ ಕಾರ್ಯಕ್ರಮಗಳಾದ ಅರೋಗ್ಯ ರಕ್ಷಾ, ಸಂಪೂರ್ಣ ರಕ್ಷಾ, ನಿರ್ಗತಿಕರಿಗೆ ಮಾಶಾಸನ ದೊರಕಿಸಿ ಕೊಡುವುದು, ದೇವಸ್ಥಾನಗಳಿಗೆ ಅನುದಾನ ವಿತರಣೆ, ಕೆರೆ ಕಾಮಗಾರಿ ಹೀಗೆ ಅನೇಕ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದರ ಜೊತೆಗೆ ಸ್ವ ಸಹಾಯ ಸಂಘಗಳನ್ನು ರಚಿಸಿ ಗ್ರಾಮೀಣ ಭಾಗದ ಜನತೆಯ ಜೀವನ ಸುಧಾರಿಸುವ ಕಾರ್ಯವನ್ನು ನಮ್ಮ ಸಂಸ್ಥೆ ಮಾಡುತ್ತಿದೆ ಎಂದರು.ತಾಲೂಕಿನ ಯೋಜನಾಧಿಕಾರಿ ನಾಗೇಶ ಎನ್.ಪಿ ಮಾತನಾಡಿ ಸಂಘ ಗಳನ್ನು ಸಮರ್ಪಕವಾಗಿ ನಡೆಸುವಲ್ಲಿ ಆಯಾ ಭಾಗದ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಬೇಕು. ಸಂಘದ ಎಲ್ಲ ಸದಸ್ಯರು ಸಂಘದ ಉಳಿತಾಯ ಮತ್ತು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಲೋಣಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಬೇಕು ಎಂದು ಜಿಲ್ಲಾ ಗಾಣಿಗ ಸಮಾಜದ ಮುಖಂಡರು ಒತ್ತಾಯಿಸಿದರು.ಈ ಕುರಿತು ನಗರದಲ್ಲಿ ಜಿಲ್ಲಾ ಗಾಣಿಗ ಸಮಾಜ ಸಂಘದಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಬಾಬು ಸಜ್ಜನ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಒಬ್ಬ ಅತ್ಯುತ್ತಮ ಸಂಘಟಕರಾಗಿದ್ದು, ಈ ಹಿಂದೆ ಜಿಲ್ಲಾ ಪಂಚಾಯತ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಹಾಗೂ ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿ ಪಕ್ಷದ ಬಲವರ್ಧನೆಗೆ ತಮ್ಮದೇ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ.ಈ ಹಿಂದೆ ಲೋಣಿಯವರು ಸ್ಥಳೀಯ ಸಂಸ್ಥೆಗಳ ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೇಟ್ ವಂಚಿತರಾದಾಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬೆರಳಣಿಕೆ ಮತಗಳಿಂದ ಪರಭಾವಗೊಂಡರೂ ತೀವ್ರ ಸ್ಪರ್ಧೆ ನೀಡಿ ತಮ್ಮ ಸಾಮರ್ಥ್ಯ ಸಾಭೀತುಪಡಿಸಿದ್ದರು. ತದ ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ, ಎಂಎಲ್ಸಿ ಸುನೀಲಗೌಡ ಪಾಟೀಲ ಹಾಗೂ ಇನ್ನಿತರ ಕಾಂಗ್ರೆಸ್ ನಾಯಕರು ಅವರನ್ನು ಸಿಎಂ,ಡಿಸಿಎಂ ಸಮ್ಮುಖದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಗಣೇಶ ನಗರ ನಗರದಲ್ಲಿ ಮಂಗಳವಾರ ಆರೋಗ್ಯ ಇಲಾಖೆಯ 15 ನೇ ಹಣಕಾಸು ಆಯೋಗದ ಅಡಿಯಲ್ಲಿ ನಮ್ಮ ಕ್ಲಿನಿಕ್ ಅನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ನಮ್ಮ ಕ್ಲಿನಿಕ್ಗಳು ನಗರ ಪ್ರದೇಶದ ಬಡವರ ಆರೋಗ್ಯ ಸಂಜೀವಿನಿಯಾಗಿದ್ದು. ರಾಜ್ಯದಲ್ಲಿ ಒಟ್ಟು 817 ನಮ್ಮ ಕ್ಲಿನಿಕ್ಗಳು ಅನುಮೋದನೆಯಾಗಿವೆ. ಮೊದಲನೇ ಹಂತದಲ್ಲಿ 2021-22 ರಲ್ಲಿ 438, ಎರಡನೇ ಹಂತದಲ್ಲಿ 2022-23 ರಲ್ಲಿ 125, ಮೂರನೇ ಹಂತದಲ್ಲಿ 2024-25 ರಲ್ಲಿ 254 ನಮ್ಮ ಕ್ಲಿನಿಕ್ಗಳು ಅನುಮೋದನೆಯಾಗಿವೆ. ಮತಕ್ಷೇತ್ರದಲ್ಲಿ ಈಗಾಗಲೇ ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿಯಲ್ಲಿ ಮೊದಲ ಹಂತದಲ್ಲಿ ನಮ್ಮ ಕ್ಲಿನಿಕ್ಗಳು ಆರಂಭವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇದೀಗ ಬಸವನಬಾಗಾವಾಡಿ, ಮನಗೂಳಿಯಲ್ಲಿ ಒಂದೊಂದು ನಮ್ಮ ಕ್ಲಿನಿಕ್ಗಳು ಆರಂಭಿಸಲಾಗುತ್ತಿದೆ. ಪಟ್ಟಣ ಪ್ರದೇಶದ ಜನರಿಗೆ ನಮ್ಮ ಕ್ಲಿನಿಕ್ ನಿಂದ ಉತ್ತಮ ಆರೋಗ್ಯ ಸೌಲಭ್ಯ ದೊರೆಯಲೆಂದು ಹಾರೈಸಿದರು.ಈ ಸಂದರ್ಭದಲ್ಲಿ ಸಹಕಾರ ಮಹಾಮಂಡಳ ನಿರ್ದೇಶಕ ಐ. ಸಿ. ಪಟ್ಟಣಶೆಟ್ಟಿ, ಪುರಸಭೆ ನೂತನ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿರುವುದನ್ನು ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಬಿ.ಕೆ.ಕಲ್ಲೂರ ಖಂಡಿಸಿದ್ದಾರೆ.ಬಿಜೆಪಿ ಪಕ್ಷ ಕಟ್ಟಿ ಬೆಳೆಸುವಲ್ಲಿ ಇತರ ನಾಯಕರೊಂದಿಗೆ ಶ್ರಮಿಸುವುದರೊಂದಿಗೆ ಭ್ರಷ್ಟಾಚಾರ, ಜನರ ಮೇಲೆ ನಡೆಯುವ ಅನ್ಯಾಯದ ವಿರುದ್ದ ಧ್ವನಿ ಎತ್ತುವ ಮೂಲಕ ರಾಜ್ಯದಲ್ಲಿ ತಮ್ಮದೇಯಾದ ಛಾಪು ಮೂಡಿಸಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.ಬಸನಗೌಡರಂತಹ ಜನನಾಯಕನನ್ನು ಬಿಜೆಪಿ ಪಕ್ಷ ಆರು ವರ್ಷಗಳ ಕಾಲ ಉಚ್ಚಾಟಿಸಿರುವ ಬಿಜೆಪಿ ಕಾರ್ಯಕರ್ತರಿಗಲ್ಲದೇ ಪಕ್ಷಾತೀತ, ಜಾತ್ಯತೀತವಾಗಿ, ಹಿಂದೂ ಬಾಂಧವರಿಗೆ ನೋವನ್ನುಂಟು ಮಾಡಿದೆ. ಬಿಜೆಪಿ ಹೈಕಮಾಂಡ್ ಕೂಡಲೇ ಪರಿಶೀಲಿಸಿ ಉಚ್ಚಾಟನೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ಹೈಕಮಾಂಡ್ ಮತ್ತು ರಾಜ್ಯ ಕಮಿಟಿ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Read More