Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪುರುಷರಷ್ಟೆ ಸಮಾನತೆಯ ಹಕ್ಕು ಮಹಿಳೆಯರಿಗೂ ಸ್ವಾತಂತ್ರ್ಯವಿದೆ ಎಂದು ಮಹಿಳೆಯರು ದುರಪಯೋಗ ಪಡೆಸಿಕೊಳ್ಳಬಾರದು. ಪುರುಷರ ಸಹಕಾರದಿಂದ ಮಾತ್ರ ಮಹಿಳೆಯರ ಅಭಿವೃದ್ದಿ ಸಾದ್ಯ ಎಂದು ಸಿಂದಗಿ ಶಾಸಕರ ಪತ್ನಿ ನಾಗರತ್ನ ಅಶೋಕ ಮನಗೂಳಿ ಹೇಳಿದರು.ಗುರುವಾರ ಪಟ್ಟಣದ ನಿರ್ಮಲಾಲಯ ಸಂಸ್ಥೆ ಹಾಗೂ ಬಾಧವ್ಯ ಮಹಿಳಾ ಸ್ವಸಾಹಯ ಸಂಘಗಳ ಒಕ್ಕೊಟದ ಸಹಯೋದಲ್ಲಿ ಅಂರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಯಾವ ಮಹಿಳೆ ಮೊದಲು ತನ್ನ ಕುಟುಂಬವನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುತ್ತಾಳೆ ಅವಳು ಸಮಾಜವನ್ನು ಬದಲಾವಣೆ ಮಾಡಲು ಸಾದ್ಯ. ಸಮಾಜದಲ್ಲಿ ನಡೆಯುತ್ತಿರುವ ತಪ್ಪುಗಳು ತಡೆಗಟ್ಟಲು ಮುಂದಾಗಬೇಕು ಅಂದಾಗ ಮಾತ್ರ ತಪ್ಪುಗಳು ನಡೆಯುವದಿಲ್ಲ. ಮೊದಲು ನಾವು ಬದಲಾದರೆ ಸಮಾಜ ಬದಲಾವಣೆಯಾಗಲು ಸಾದ್ಯ. ನಮ್ಮ ಜೊತೆಯಲ್ಲಿ ಇರುವವರ ಕಷ್ಟಗಳಿಗೆ ಸಹಕಾರ ನೀಡುವ ಮನೋಬಾವ ಬೆಳಿಸಿಕೊಳ್ಳಬೇಕು ಅಂದಾಗ ಎಲ್ಲರು ಸಮಾನರಾಗಿ ಮುಂದೆ ಬರಲು ಸಾದ್ಯವಾಗುತ್ತದೆ ಎಂದು ಹೇಳಿದರು.ಮಂಡ್ಯದ ಮಲ್ಲಿಗೆ ಸಿರಿಮನೆ ಮಾತನಾಡಿ, ಯಾವುದೆ ಪಕ್ಷದ ಸರ್ಕಾರವಿರಲಿ ಮಹಿಳೆಯರಿಗೆ ಸ್ವಾಲಂಬಿಗಳಾಗಲು ಸಾಲದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಸ್ತೆ ದಾಟುವಾಗ ಹಾಗೂ ವಾಹನ ಚಾಲನೆ ಮಾಡುವಾಗ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಅವರು ಹೇಳಿದರು.ಅವರು, ಮಾ.೬ ರಂದು ಸಾರಿಗೆ ಇಲಾಖೆಯಿಂದ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಸಡಕ ಸುರಕ್ಷಾ ಜೀವನ ರಕ್ಷಾ ಎಂಬ ಘೋಷ ವಾಕ್ಯದಡಿ ನಗರದ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾಲ್ನಡಿಗೆ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಸಾರಿಗೆ ಹಾಗೂ ಪೊಲೀಸ್ ಇಲಾಖೆ ಈಗಾಗಲೇ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಪೋನ್ ಬಳಕೆ ಮಾಡಬಾರದು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು. ವಿದ್ಯಾರ್ಥಿಗಳು ರಸ್ತೆ ಸುರಕ್ಷತೆ ಬಗ್ಗೆ ಜನರಿಗೆ ತಿಳಿ ಹೇಳಬೇಕು. ವಾಹನವನ್ನು ನಿಗದಿತ ವೇಗದಲ್ಲಿ ಚಲಾಯಿಸಬೇಕು ಎಂದು ಅವರು ಹೇಳಿದರು.ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಕಾಲ್ನಡಿಗೆ ಜಾಥಾವು…

Read More

೩ನೇ ಬೃಹತ್ ರೈತ ಜಾಗೃತಿ ಸಮಾವೇಶದ ಸಿದ್ಧತೆಗೆ ಚಾಲನೆ ನೀಡಿದ ಮುಗಳಖೋಡ/ಜಿಡಗಾ ಮುರುಘರಾಜೇಂದ್ರ ಶ್ರೀ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಪ್ರಿಲ್ ೨೬,೨೭,೨೮ ರಂದು ವಿಜಯಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಯೋಜಿಸಿರುವ ೩ನೇ ಬೃಹತ್ ರೈತ ಜಾಗೃತಿ ಸಮಾವೇಶದ ಲೋಗೊ (ಲಾಂಚನ) ಬಿಡುಗಡೆಗೊಳಿಸಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಮುಗಳಖೋಡ/ಜಿಡಗಾದ ಡಾ.ಮುರುಘರಾಜೇಂದ್ರ ಸ್ವಾಮೀಜಿ ಶುಭಹಾರೈಸಿದರು.ಇಡೀ ಜಗತ್ತಿಗೆ ಯಾವುದೇ ಫಲಾಫೇಕ್ಷೇ ಇಲ್ಲದೇ ಅನ್ನ ನೀಡುವ ಏಕೈಕ ಜೀವಿ ನಮ್ಮ ಹೆಮ್ಮೆಯ ರೈತರು, ಅವರೇ ಅನ್ನದಾತರು, ಸಮಸ್ತ ರೈತರು ಒಗ್ಗಟ್ಟಾಗಿ ಕೃಷಿಯಲ್ಲಿ ಆಗುತ್ತಿರುವ ಅನೇಕ ಅವಿಷ್ಕಾರಗಳ ಬಗ್ಗೆ, ಹೊಸ ಹೊಸ ತಂತ್ರಜ್ಞಾನಗಳ ಬಗ್ಗೆ ಅರಿತು ಕೃಷಿಯ ಜೊತೆಗೆ ಹತ್ತು ಹಲವಾರು ಉಪಕಸುಬುಗಳನ್ನು ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಿ ತಮ್ಮ ಕುಟುಂಬದವರೊಡನೆ ಯಾವುದೇ ಸಾಲವಿಲ್ಲದೇ ಸಂತಸದಿಂದ ಇದ್ದರೆ ಮಾತ್ರ ನಾವೂ ರೈತರಿಗೆ ಕೊಡುವ ಗೌರವ ನಿಜವಾದ ಗೌರವ, ಆವಾಗ ರೈತ ದೇಶದ ಬೆನ್ನೆಲುಬು ಎಂಬುದು ಸರ್ವಶ್ರೇಷ್ಠವಾಗುತ್ತದೆ ಎಂದರು.ಈ ವೇಳೆ ರೈತ ಸಂಘದ ರಾಜ್ಯ…

Read More

ತಿಡಗುಂದಿಯ ಫಲವತ್ತಾದ ಭೂಮಿಯಲ್ಲಿ ಕೈಗಾರಿಕಾ ಕಾರ್ಖಾನೆ ಸ್ಥಾಪನೆಗೆ ರೈತರ ವಿರೋಧ | ಸದನದಲ್ಲಿ ರೈತಪರ ಧ್ವನಿ ಎತ್ತಲು ಶಾಸಕರಿಗೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ನಾಗಠಾಣ ಹೊಬಳಿಯ ತಿಡಗುಂದಿ ಸಮೀಪದ ರೈತರ ಕಪ್ಪು ಮಣ್ಣಿನ ಫಲವತ್ತಾದ ೧೨೦೩ ಎಕರೆ ಭೂಮಿಯಲ್ಲಿ ಕೈಗಾರಿಕೆಗಾಗಿ ಬಳಸಿಕೊಳ್ಳಲು ಹೊಂಚು ಹಾಕುತ್ತಿರುವುದನ್ನ ವಿರೋಧಿಸಿ ರೈತರು ರಾಜ್ಯಪಾಲರ ಆಪ್ತ ಕಾರ್ಯದರ್ಶಿಯವರಿಗೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮೂಲ ಸಚೇತಕ ಎನ್. ರವಿಕುಮಾರ, ನಗರ ಶಾಸಕ ಬಸನಗೌಡ ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಠಕದೊಂಡ ಅವರಿಗೆ ಮನವಿ ಸಲ್ಲಿಸಿ ಒಟ್ಟಾರೆಯಾಗಿ ರೈತರ ಜೀವ ಹೋದರು ಪರವಾಗಿಲ್ಲ ಕೃಷಿ ಭೂಮಿಯನ್ನು ಕೈಬೀಡುವುದಿಲ್ಲ ಎಂದು ಆಗ್ರಹಿಸಿ ಸದನದಲ್ಲಿ ರೈತಪರ ಧ್ವನಿ ಎತ್ತಿ ಆ ಯೋಜನೆಯನ್ನು ಕೈಬೀಡುವಂತೆ ಅಥವಾ ಬೇರೆಡೆಗೆ ಸ್ಥಳಾಂತರಿಸುವಂತೆ ಸದನದಲ್ಲಿ ಮಾತನಾಡಲು ಮನವಿ ಸಲ್ಲಿಸಲಾಯಿತು.ಈ ವೇಳೆ ರೈತ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಾರು ಎಕರೆ ಕೃಷಿಗೆ ಯೋಗ್ಯವಲ್ಲದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಕಾಂಗ್ರೇಸ ಸರಕಾರ ನೀಡಿದ್ದ ಗ್ಯಾರಂಟಿ ಯೋಜನೆಗಳ ವಿಳಂಬ ನೀತಿ ಹಾಗೂ ಬಸ್ಸದರ ವಿವಿದ ವಸ್ತುಗಳ ಬೆಲೆ ಏರಿಕೆ ಖಂಡಿಸಿ ವಿಜಯಪುರ ಜಿಲ್ಲಾ ಜನತಾದಳ (ಜಾತ್ಯಾತೀತ) ವಿಜಯಪುರ ವತಿಯಿಂದ ರಾಜ್ಯದ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಪ್ರತಿಭಟನೆ ಮಾಡುವುದರ ಮೂಲಕ ಮನವಿ ಸಲ್ಲಿಸಲಾಯಿತು.ರಾಜ್ಯ ಕಾಂಗ್ರೇಸ ಸರಕಾರ ವಿಧಾನ ಸಭೆಯ ಚುನಾವಣೆ ಪೂರ್ವದಲ್ಲಿ ಪಂಚ ಗ್ಯಾರಂಟಿ ಯೋಜನೆಯ ಭರವಸೆ ನೀಡಿ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳಿಗೆ ನೀಡುತ್ತಿದ್ದ ಗೃಹ ಲಕ್ಷ್ಮಿ ಹಣವಾದ ೨೦೦೦ ಪ್ರತಿ ತಿಂಗಳು ಸರ್ಮಕವಾಗಿ ನೀಡದೆ ಲೋಕಸಭೆ ಹಾಗೂ ಉಪ ಚುನಾವಣೆ ಸಂದರ್ಭದಲ್ಲಿ ಹಣಹಾಕಿ ರಾಜಕೀಯಕ್ಕೆ ಸೀಮಿತ ಮಾಡುತ್ತಿದ್ದು, ಸರಕಾರ ಹೇಳಿದಂತೆ ತಿಂಗಳ ಹಣವನ್ನು ಯಾವ ದಿನಾಂಕದಂದು ನೀಡುತ್ತಾರೆ ಎಂದು ಘೋಷಿಸಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಯುವ ನಿಧಿ ಹಣವನ್ನು ನೀಡುತ್ತಿಲ್ಲ. ಸದ್ಯ ಏಕಾಯಕಿ ಬಸ್ಸುದರ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಸಿ ರಾಜ್ಯದ ಜನತೆ ಹೊರೆ ಹಾಕುವದರ ಮೂಲಕ ದ್ರೋಹ ಮಾಡುತ್ತಿದೆ. ರಾಜ್ಯ ಸರಕಾರದ ಈ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಗ್ರಾಮ ಪಂಚಾಯಿತಿ ಅಧಿಕಾರಿ ೧೫ನೇ ಹಣಕಾಸು ಯೋಜನೆಯ ಹಾಗೂ ವರ್ಗ ೧ ರಲ್ಲಿ ವಸೂಲಿ ಮಾಡಲಾದ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರು ಆರೋಪಿಸಿದ್ದಾರೆ.ತಾಲ್ಲೂಕಿನ ಹರನಾಳ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಸೇರಿ ಅಧ್ಯಕ್ಷ ಶಿವಾನಂದ ಯಾತಗೇರಿ ಈ ಆರೋಪ ಮಾಡಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸಮ್ಮ ದೊಡಮನಿ ಇವರು ಅಧಿಕಾರ ದುರುಪಯೋಗ ಮಾಡಿಕೊಂಡು ಅಂದಾಜು ೧೯ ಲಕ್ಷ ೨೨ ಸಾವಿರ ಎಂಟನೂರ ರೂ.ಗಳನ್ನು ದಿ:೧೮ ಫೆಬ್ರುವರಿ ಹಾಗೂ ದಿ:೧ ಮಾರ್ಚ ಒಳಗಾಗಿ ತೆಗೆದಿರುತ್ತಾರೆ.ಗ್ರಾಮ ಪಂಚಾಯಿತಿಯಲ್ಲಿ ದಿ:೩ ಜನೇವರಿಯಂದು ಅಧ್ಯಕ್ಷರ ಅವಿಶ್ವಾಸ ಗೊತ್ತುವಳಿ ಮಂಡನೆ ಆಗಿರುತ್ತದೆ. ನಂತರ ದಿ: ೨೭ ಫೆಬ್ರುವರಿಯಂದು ನೂತನ ಅಧ್ಯಕ್ಷರ ಆಯ್ಕೆಯಾಗಿದೆ. ಈ ಎರಡರ ನಡುವಿನ ಅವಧಿಯಲ್ಲಿ ಈ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣರಾದ ಪಿಡಿಓ ಹಾಗೂ ತಾಲ್ಲೂಕು ಪಂಚಾಯಿತಿ ೧೫ನೇ ಹಣಕಾಸು ಯೋಜನೆಯ ಅಧಿಕಾರಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕೂಡಲೇ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಇಂಗಳಗಿ ಮತ್ತು ಆಳೂರ ಗ್ರಾಮದ ರೈತರು ಕೃಷಿಗೆ ಬೆಳಗ್ಗೆ ಹಗಲು ಹೊತ್ತಿನಲ್ಲಿ ಏಳು ಗಂಟೆ ಮತ್ತು ರಾತ್ರಿ ವಿಧ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲವಾಗಲು ಸಿಂಗಲೆ ಫೆಜ್ ವಿದ್ಯುತ್ ನೀಡಬೇಕೆಂದು ಆಗ್ರಹಿಸಿ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಎ,ಎ.ಪವಾರ, ಎ.ಐ.ಜಾಧವ ಮಾತನಾಡಿ ಹಗಲು ಮತ್ತು ರಾತ್ರಿ ಸೇರಿ ೭ ಗಂಟೆ ವಿದ್ಯುತ್ ಕೊಡುವದರಿಂದ ರೈತರಿಗೆ ತೊಂದರೆ ಯಾಗುತ್ತದೆ. ಅದಲ್ಲದೆ ತಾಲೂಕಿನ ಅನೇಕ ಕಡೆ ಹಗಲು ಏಳು ಗಂಟೆ ವಿದ್ಯುತ್ ನೀಡುತ್ತಾರೆ ಮತ್ತು ಪರೀಕ್ಷೆಗಳು ನಡೆದಿದ್ದು ವಿದ್ಯಾರ್ಥಿಗಳಿಗೆ ಸಿಂಗಲ್ ಫೇಜ್ ವಿದ್ಯುತ ನೀಡಬೇಕೆಂದು ಆಗ್ರಹಿಸಿದರು.ಹೆಸ್ಕಾ ಎಇಇ ಎಸ್.ಆರ್. ಮೆಂಡೆಗಾರ ಮಾತನಾಡಿ ಮುಂದಿನ ದಿನಗಳಲ್ಲಿ ಹಗಲು ಹೊತ್ತು ವಿದ್ಯುತ್ ೭ ಗಂಟೆ ನೀಡಲಾಗುತ್ತಿದೆ. ಅದಲ್ಲದೆ ವಿದ್ಯಾರ್ಥಿಗಳಿಗೆ ಈಗಾಗಲೇ ಟೂ ಫೆಜ್ ವಿದ್ಯುತ್ ನೀಡಲಾಗುತ್ತಿದೆ. ಇದೇ ವೇಳೆ ರೈತರು ಮೋಟಾರು ಚಾಲು ಮಾಡಿದರೆ ವಿದ್ಯುತ್ ಟ್ರೇಸ್ ಆಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ದೃಷ್ಠಿಯಿಂದ ರೈತರು ನೀರಾವರಿ ರಾತ್ರಿ ಬಳಸದಿರಲು ವಿನಂತಿಸಿದರು.ಪ್ರತಿಭಟನೆಯಲ್ಲಿ ಎಸ್.ಟಿ.ಪವಾರ, ಬಿ.ಟಿ.ಪವಾರ, ಎಸ್.ಪಿ.ಕುಂಬಾರ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೆಂಗಳೂರಿನಲ್ಲಿರುವ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕಳೆದ ವರ್ಷ ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧ (ಫಾರ್ಮಸಿ) ಮಹಾವಿದ್ಯಾಲಯದ ಐದು ಜನ ವಿದ್ಯಾರ್ಥಿಗಳು ಸ್ನಾತಕೋತ್ತರ ಮತ್ತು ನಾಲ್ಕು ಜನ ವಿದ್ಯಾರ್ಥಿಗಳು ಪದವಿ ವಿಭಾಗಗಳಲ್ಲಿ ರಾಜ್ಯ ಮಟ್ಟದಲ್ಲಿ ರ‍್ಯಾಂಕ್ ಗಳಿಸುವ ಮೂಲಕ ಗಮನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಸ್ನಾತಕೋತ್ತರ ಎಂ. ಫಾರ್ಮಾ ಪರೀಕ್ಷೆಯಲ್ಲಿ ನಾನಾ ವಿಷಯಗಳ ಒಟ್ಟು 2325 ಅಂಕಗಳಿಗೆ ಪರೀಕ್ಷೆ ನಡೆದಿತ್ತು. ಎಂ. ಫಾರ್ಮಾ ಕೆಮೆಸ್ಟ್ರಿ ವಿಭಾಗದಲ್ಲಿ ಹಣಮಂತ ಬಿ. ಸಣ್ಣಕ್ಕಿ ಅವರು 3ನೇ ರ‍್ಯಾಂಕ್ (2090 ಅಂಕ), ಎಂ. ಫಾರ್ಮ್ ಕ್ವಾಲಿಟಿ ಅಶೂರನ್ಸ್ ವಿಭಾಗದಲ್ಲಿ ಜಗದೇವಿ 7ನೇ ರ‍್ಯಾಂಕ್ (2033 ಅಂಕ), ಎಂ. ಫಾರ್ಮ್ ಫಾರ್ಮಸಿ ಪ್ರ‍್ಯಾಕ್ಟಿಸ್ ವಿಭಾಗದಲ್ಲಿ ಪ್ರಜ್ವಲ ಸಿ. ಮಠ 3ನೇ ರ‍್ಯಾಂಕ್ (2005 ಅಂಕ), ಮಲ್ಲಿಕಾರ್ಜುನ್ ಎಸ್. ಇರಣಿ 7ನೇ ರ‍್ಯಾಂಕ್ (1930 ಅಂಕ), ಮುರುಗೇಶ ದೇವೂರ 10ನೇ ರ‍್ಯಾಂಕ್ (1897…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಆಸ್ತಿ ನಂ.೧೦೨೯ರ ಖವರಸ್ಥಾನ ಜಾಗೆಯಲ್ಲಿ ವಕ್ಫ್ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡ ೧೭ನೆಯ ದಿನದ ದರಣಿ ಸತ್ಯಾಗ್ರಹಕ್ಕೆ ಆಗಮಿಸಿದ್ದ ನ್ಯಾಯವಾದಿ ಎಸ್.ಎ.ಖಾದ್ರಿ ಪ್ರತಿಭಟನಾಕಾರರ ಮನವೊಲಿಸಿ ಸತ್ಯಾಗ್ರಹವನ್ನು ಕೊನೆಗೊಳಿಸುವಲ್ಲಿ ಸಫಲರಾದರು.ಪಟ್ಟಣದ ಆಸ್ತಿ ನಂ.೧೦೨೯ರ ಖವರಸ್ಥಾನ ಜಾಗೆಯಲ್ಲಿ ವಕ್ಫ್ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡ ದರಣಿ ಸತ್ಯಾಗ್ರಹಕ್ಕೆ ಬೇಟಿ ನೀಡಿ ಮಾತನಾಡಿದ ಅವರು, ಸದರಿ ಆಸ್ತಿ ನಂ. ಜಾಗೆಯು ಖಬರಸ್ಥಾನ ಜಾಗೆಯಾಗಿದ್ದು, ಅದು ಇಂದು ಮುಂದು ಎಂದೆಂದು ಖಬರಸ್ಥಾನ ಮೀಸಲಾದ ಜಾಗೆ ಇರುತ್ತದೆ. ಇದು ಅಧಿಕೃತ ಸರಕಾರದ ಘೋಷಣೆ ಎಂದೇ ಸಿಂದಗಿ ನಗರದ ಸಮಸ್ತ ಮುಸ್ಲಿಂ ನಾಗರಿಕರು ಬರೆದಿಟ್ಟುಕೊಳ್ಳಬೇಕೆಂದು ಹೇಳಿದ ಅವರು, ಸದರಿ ಆಸ್ತಿಗೆ ಸಂಬಂಧಿಸಿದ ಒಂದು ಇಂಚು ಜಾಗವು ಸಮಸ್ತ ಸಿಂದಗಿ ನಾಗರಿಕರ ಒಪ್ಪಿಗೆ ಇಲ್ಲದೇ ಯಾರೋಬ್ಬ ವ್ಯಕ್ತಿಯಾಗಲಿ, ಯಾವುದೇ ಕಮಿಟಿಗಳಾಗಲಿ ಪರಭಾರೆ ಅಥವಾ ಉಪಭೋಗ ಮಾಡುವಂತಿಲ್ಲ ಎಂಬುದು ಸರಕಾರದ ಸ್ಪಷ್ಟ ನಿಲುವಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಅನಧಿಕೃತ ಖಬರಸ್ಥಾನ ಕಮಿಟಿಯ ಸತ್ಯಾಸತ್ಯತೆಯನ್ನು ಪರಿಗಣಿಸಿ ಆದಷ್ಟು ಅದರ ರದ್ದತಿಗೆ ಕ್ರಮವಹಿಸಿಲು ವಕ್ಫ್…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಪುರಸಭೆಯ ಸರಹದ್ದಿನಲ್ಲಿ ಸುಮಾರು ವರ್ಷಗಳಿಂದ ಅನಧಿಕೃತವಾಗಿ ಅಂಗಡಿಗಳನ್ನು ಕಟ್ಟಿ ಅವುಗಳಿಂದ ಬಾಡಿಗೆ ಪಡೆಯುತ್ತಿದ್ದು, ಅಂತಹ ಅಂಗಡಿಗಳನ್ನು ತೆರವುಗೊಳಿಸಲು ಪುರಸಭೆಯಲ್ಲಿ ಠರಾವು ಪಾಸು ಮಾಡಲಾಗಿದೆ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತವಾಗಿ ಉತಾರಿಗಳನ್ನು ಸೃಷ್ಠಿಸಿಕೊಂಡು ಪ್ರತಿ ತಿಂಗಳು ಹತ್ತಾರು ಸಾವಿರ ಬಾಡಿಗೆ ಪಡೆಯುತ್ತಿರುವುದರಿಂದ ಪುರಸಭೆಗೆ ಬರಬೇಕಾದ ಆದಾಯಕ್ಕೆ ಕೊಕ್ಕೆ ಬೀಳುತ್ತಿದ್ದು, ಅಂತಹ ಅಂಗಡಿಗಳಿಗೆ ಪುರಸಭೆಗೆ ಹಸ್ತಾಂತರ ಮಾಡಿಕೊಂಡು ಟೆಂಡರ್ ಮೂಲಕ ಬಾಡಿಗೆಯನ್ನು ನಿರ್ಧರಿಸಲಾಗುವುದು. ಒಂದು ವೇಳೆ ಪ್ರಸ್ತುತ ಅಂಗಡಿಕಾರರು ಒಪ್ಪದೇ ಇದ್ದ ಪಕ್ಷದಲ್ಲಿ ಅಂತಹ ಅಂಗಡಿಗಳನ್ನು ನೆಲಸಮ ಮಾಡಿ ಪುರಸಭೆಯಿಂದ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ಕೊಡಲಾಗುವುದು ಎಂದರು.ಈ ವೇಳೆ ಪೌರ ಕಾರ್ಮಿಕರಿಗೆ ನಿವೇಶನಗಳ ಹಕ್ಕು ಪತ್ರವನ್ನು ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ನಬಿರಸೂಲ್ ಉಸ್ತಾದ, ಸಿದ್ದು ಅಂಗಡಿ, ಅಬ್ಬಾಸಲಿ ಖಾಕಂಡಕಿ, ಅಭಿಯಂತರ ಸಚಿನ ಮೋರಟಗಿ ಸೇರಿದಂತೆ ಅನೇಕರು ಇದ್ದರು.

Read More