Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಳವಾರ ಸಮಾಜದ ಶ್ರೇಯೋಭಿವೃದ್ದಿಗೆ ಮಾಜಿ ಶಾಸಕ ರಮೇಶ ಭೂಸನೂರ ತಮ್ಮ ಅಧಿಕಾರ ಅವಧಿಯಲ್ಲಿ ವಯಕ್ತಿಕ ೩೧ಲಕ್ಷ ರೂ. ನೀಡಿದ್ದರು. ಆ ಹಣದಲ್ಲಿ ಖರೀದಿಸಿದ ೧೧ಗುಂಟೆ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಈಗಿನ ಶಾಸಕ ಅಶೋಕ ಮನಗೂಳಿ ಅವರು ಅನುದಾನ ಮಂಜೂರು ಮಾಡಬೇಕೆಂದು ತಳವಾರ ಮಹಾಸಭಾದ ನಗರ ಘಟಕ ಅಧ್ಯಕ್ಷ ಪ್ರಶಾಂತ ಕದ್ದರಕಿ ಮನವಿ ಮಾಡಿದರು.ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಶಾಸಕರು ನೀಡಿದ ಹಣದಲ್ಲಿ ಈಗಾಗಲೇ ಸಿಂದಗಿ ನಗರದಲ್ಲಿ ೧೧ಗುಂಟೆ ಜಾಗೆಯನ್ನು ಖರೀದಿಸಲಾಗಿದೆ. ಆ ಜಾಗದಲ್ಲಿ ಈಗಿನ ಶಾಸಕರು ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕು ಮತ್ತು ಸರ್ಕಾರದಿಂದ ಮಂಜೂರು ಮಾಡಿದ ೨೦ಗುಂಟೆ ಜಾಗದಲ್ಲಿ ೫ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಿಸಬೇಕು ಎಂದು ತಳವಾರ ಸಮಾಜದ ವತಿಯಿಂದ ಮನವಿ ಮಾಡಿಕೊಂಡರು.ಈ ವೇಳೆ ಸಮಾಜದ ಮುಖಂಡ ಪೀರು ಕೆರೂರ ಮಾತನಾಡಿ, ಸಮಾಜದ ಅಭಿವೃದ್ದಿಗೆ ಸರ್ಕಾರದಿಂದ ೨೦ಗುಂಟೆ ಜಾಗವನ್ನು ಮಂಜೂರು ಮಾಡಿದ ಪ್ರಸ್ತುತ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಆಲಮೇಲ ಶಾಲೆಯಲ್ಲಿ ಸಂಭ್ರಮದ 35ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದ ಮಕ್ಕಳ ಹಿರಿಯ ಸಾಹಿತಿ ಹಾಗೂ ರಾಷ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಹ.ಮ.ಪೂಜಾರ ರವರು, ಇಂದಿನ ಮಕ್ಕಳಿಗೆ ಒಳ್ಳೆಯ ಊಟ, ಬಟ್ಟೆ ಹಾಗೂ ಆಹಾರ ಕ್ಕಿಂತಲೂ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ಅತ್ಯವಶ್ಯಕವಾಗಿದೆ. ಹಾಗಾಗಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಗುಣಗಳನ್ನು ನೀಡಿ ಇಲ್ವಾದರೆ ಮುಂದಿನ ದಿನಮಾನಗಳಲ್ಲಿ ವೃಧ್ಧಾಶ್ರಮಗಳ ಸಂಖ್ಯೆ ಹೆಚ್ಚಾಗಲಿವೆ. ಇಂದು ಮಕ್ಕಳಿಗೆ ತಂದೆ , ತಾಯಿ ಹಾಗೂ ಗುರುಗಳು ಸಾಕ್ಷಾತ್ ದೇವರು ಇದ್ದಂತೆ. ಮಕ್ಕಳಿಗೆ ರಾಷ್ಟ್ರಕ್ಕೆ ಉತ್ತಮ ಪ್ರಜೆ ನೀಡುವ ಸಲುವಾಗಿ ಉತ್ತಮ ಸಂಸ್ಕಾರ ನೀಡಿ ಎಂದರು,ಜ್ಯೋತಿ ಬೆಳಗಿಸಿ ಮಾತನಾಡಿದ ಶಿಕ್ಷಕರ ಕ್ಷೇತ್ರದ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಇವತ್ತು ಜಗತ್ತು ವಿಜ್ಞಾನ, ತಂತ್ರಜ್ಞಾನದ ಫಲವಾಗಿ ಸಂಕುಚಿತ ವಾಗುತ್ತಿದೆ ಹಾಗಾಗಿ ಇನ್ನೂ ಹಲವು ತರಹದ ಸಂಶೋಧನೆ…
ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಟಕ್ಕೆಯಲ್ಲಿರುವ ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರಿಗೆ ಸಂಬಂಧಿಸಿದ ಇಲಾಖೆಗಳು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ನಿರಾಶ್ರಿತರಿಗೆ ಆಶ್ರಯ ಒದಗಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ ೧೯೭೫ರ ಸೆಕ್ಷನ್ ೫ರ ಪ್ರಕಾರ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮದಂತೆ ಭಿಕ್ಷಾಟನೆ ಮಾಡುತ್ತಿರುವವರನ್ನು ರಕ್ಷಿಸಿ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗುತ್ತದೆ. ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳು ಒಳಗೊಂಡಂತೆ ನಗರದಲ್ಲಿ ಪರಿಹಾರ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರದಲ್ಲಿ ೧೫೦ ನಿರಾಶ್ರಿತರಿಗೆ ಆಶ್ರಯ ಒದಗಿಸಲಾಗಿದ್ದು, ಈ ಪೈಕಿ ೯೧ ಬೇರೆ ರಾಜ್ಯದವರಾಗಿದ್ದಾರೆ.ಆಶ್ರಯ ಪಡೆದವರಲ್ಲಿ ೪೫ ಜನ ಮಾನಸಿಕ ಅಸ್ವಸ್ಥರಿದ್ದು, ಕೆಲವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕಾಲಕಾಲಕ್ಕೆ ಕೌನ್ಸೆಲಿಂಗ್…
ಲೇಖನ- ವೀಣಾ ಹೇಮಂತಗೌಡ ಪಾಟೀಲಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ “ಹೆಣ್ಣಲ್ಲವೇ ನಮ್ಮನೆಲ್ಲ ಹಡೆದ ತಾಯಿ ಹೆಣ್ಣಲ್ಲವೇ ನಮ್ಮನೆಲ್ಲ ಪೊರೆದವಳು.. ಹೆಣ್ಣು ಹೆಣ್ಣೆಂದೇತಕ್ಕೆ ಬೀಳುಗೈವರು ಕಣ್ಣು ಕಾಣದ ಗಾವಿಲರು”ಎಂದು ಸಂಚಿಯ ಹೊನ್ನಮ್ಮ ತನ್ನ ಹದಿಬದೆಯ ಧರ್ಮ ಎಂಬ ಕೃತಿಯಲ್ಲಿ ಬರೆದಿದ್ದಾಳೆ.ನಿಜ ಹೆಣ್ಣು ನಮ್ಮನ್ನೆಲ್ಲ ಹಡೆದ ತಾಯಿ, ಭೂಮಿ ತೂಕದ ಸಹನೆಯನ್ನು ಹೊಂದಿರುವ ಸಹನಶೀಲೆ, ಮನದಲ್ಲಿ ಜ್ವಾಲಾಮುಖಿಯಷ್ಟು ನೋವುಗಳು ಇದ್ದರೂ ಕೂಡ ಹೊರಗೆ ನಸು ನಗುವ ಸುಹಾಸಿನಿ, ಗಂಡ ನೂರೊಂದು ತಪ್ಪು ಮಾಡಿದರೂ ಕ್ಷಮಿಸುವ ಕ್ಷಮಯಾಧರಿತ್ರಿ, ಮನೆಯ ಮತ್ತು ಹೊರಗಿನ ಹತ್ತು ಹಲವು ಕೆಲಸಗಳನ್ನು ಮಾಡುವ ಕಾರ್ಯೇಷು ದಾಸಿ,ತನ್ನ ಕೈಯಲ್ಲಿ ಬಿಡಿಗಾಸನ್ನು ಉಳಿಸಿಕೊಳ್ಳದಿದ್ದರೂಮನೆಯ ಎಲ್ಲಾ ಚಿಕ್ಕ ಪುಟ್ಟ ಆಯವ್ಯಯಗಳನ್ನುನಿಭಾಯಿಸಿಕೊಂಡು ಹೋಗುವ ಕರಣೇಶು ಮಂತ್ರಿ,ತನ್ನ ಹೊಟ್ಟೆ ಹಸಿದಿದ್ದರೂ ಕೂಡ ಹಸಿವಿನ ಸಂಕಟದಿಂದ ತಲೆ ತಿರುಗುತ್ತಿದ್ದರೂ ಕೂಡ ಕುಟುಂಬದ ಎಲ್ಲ ಸದಸ್ಯರಿಗೂ, ಅತಿಥಿ, ಅಭ್ಯಾಗತರಿಗೂ ಉಣ ಬಡಿಸುವ ಭೋಜ್ಯೇಶು ಮಾತಾ, ಮನಸ್ಸು ಅದೆಷ್ಟೇ ನೋವಿನಲ್ಲಿ ಅದ್ದಿ ತೆಗೆದಂತಿದ್ದರೂ ಸುಂದರವಾಗಿ ಅಲಂಕರಿಸಿಕೊಂಡು ನೋಡುವವರ ಕಣ್ಣಿಗೆ ತಂಪನ್ನೆರೆಯುವ ರೂಪೇಶು ಲಕ್ಷ್ಮಿ.…
ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಅದು ಕೊರೋನಾ ಮಹಾಮಾರಿಯು ಅಟ್ಟಹಾಸಗೈಯುತ್ತಿದ್ದ ಸಮಯವದು. ಯಾವುದೋ ಕೆಲಸ ನಿಮಿತ್ತ ಮಹಾನಗರದ ಕಡೆಗೆ ತೆರಳಿ ಅಲ್ಲೇನೋ ಹೋಟೇಲ್ ಊಟದಲ್ಲಿ ತಿಂದ ಪೂರಿಯಿಂದ ನನಗೆ ಫುಡ್ ಪಾಯಿಸನ್ ಆಗಿ ಮಾರನೇ ದಿನದಿಂದ ವಿಪರೀತ ಜ್ವರವಿತ್ತು. ಅಂದು ವಿಪರೀತವಾದ ಚಳಿ ಮತ್ತು ಜ್ವರದಿಂದ ನಾನು ಲೋಕದ ಅರಿವಿಲ್ಲದಂತೆ ಮಲಗಿದ್ದೆ. ಮೈಯೆಲ್ಲೆಲ್ಲಾ ಗಾಢ ಕೆಂಪು ಬಣ್ಣದ ಮಚ್ಚೆಗಳು ಉಂಟಾಗಿ ಕಾಲುಗಳೆರಡೂ ಆನೆ ಕಾಲು ರೋಗ ಪೀಡಿತರಂತೆ ವಿಪರೀತ ದಪ್ಪಗಾಗಿದ್ದವು. ಕೋವಿಡ್ ಹಾವಳಿ ಜಾಸ್ತಿ ಇದ್ದುದರಿಂದ ಅಂದು ಆಸ್ಪತ್ರೆಗೂ ಹೋಗಲು ಭಯವಾಗಿತ್ತು. ಆದರೆ ಆತ್ಮವಿಶ್ವಾಸದ ಖನಿಯಂತೆ ನನ್ನ ಪತ್ನಿಯು ನನ್ನ ಪಕ್ಕದಲ್ಲಿಯೇ ಕುಳಿತುಕೊಂಡು ನನ್ನ ತಲೆಯನ್ನು ಸವರುತ್ತಾ ಜ್ವರ ಏರದಂತೆ ತಲೆಗೆ ತಣ್ಣೀರ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಅದ್ದಿ ಇಡುತ್ತಿದ್ದಳು. ತಣ್ಣೀರಿನ ಬಟ್ಟೆಯ ಲೇಪನವು ತುಸು ಹಿತವೆನಿಸಿ ನಾನು ನಿದ್ರಿಸಿದ್ದೆ.ಮಧ್ಯ ರಾತ್ರಿ ಎರಡು ಗಂಟೆಗೆ ಎಚ್ಚರವಾದಾಗ ಆಕೆ…
ತಾಲೂಕು ಮಟ್ಟದ ಕಾಯಕ ಬಂಧುಗಳ ತರಬೇತಿಯ ಸಮಾರೋಪ ಸಮಾರಂಭ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲೂಕು ಪಂಚಾಯತ ಸಬಾಭವನದಲ್ಲಿ ಗ್ರಾಮ ಸ್ವರಾಜ್ ಅಭಿಯಾನ ಹಾಗೂ ತಾಲೂಕು ಪಂಚಾಯತಿ ತಿಕೋಟಾ ಅವರ ವತಿಯಿಂದ ಹಮ್ಮಿಕೊಂಡ ತಾಲೂಕು ಮಟ್ಟದ ಕಾಯಕ ಬಂಧುಗಳ ತರಬೇತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ತಾಲೂಕು ಪಂಚಾಯತಿಯ ಮನರೇಗಾ ಸಹಾಯಕ ನಿರ್ದೇಶಕ ಬಸವರಾಜ ಸಂಕಗೊಂಡ ಅವರು ಮಾತನಾಡಿದರು.ನರೇಗಾ ಯೋಜನೆಯ ಅನುಷ್ಠಾನದಲ್ಲಿ ಕಾಯಕ ಬಂದುಗಳ ಪಾತ್ರ ಅತೀ ಮಹತ್ವದ್ದಾಗಿದೆ ಹಾಗೂ ಪ್ರಾಥಮಿಕ ಅವಶ್ಯಕತೆಯಾಗಿದೆ. ಹೀಗಾಗಿ ತಾಲೂಕು ಪಂಚಾಯತಿ ಹಾಗೂ ಗ್ರಾಮ ಸ್ವರಾಜ್ ಅಭಿಯಾನದ ಸಹಯೋಗದಲ್ಲಿ ಈ ತರಬೇತಿಯನ್ನು ನೀಡಲಾಗಿದೆ. ಈಗಾಗಲೇ ಎಲ್ಲಾ ೦೭ ಬ್ಯಾಚ್ಗಳಲ್ಲಿ ಪೂರ್ಣಗೊಳ್ಳುವುದರ ಜೊತೆಗೆ ತರಬೇತಿ ಯಶಸ್ವಿಯಾಗಿದೆ ಎಂದರು.ಎಲ್ಲಾ ಕಾಯಕಬಂಧುಗಳು ಈ ತರಬೇತಿಯನ್ನು ಅತ್ಯಂತ ಜಾಗೃಕತೆಯಿಂದ ತರಗತಿಗಳನ್ನು ಆಲಿಸಿದ್ದಾರೆ, ಸಂಪನ್ಮೂಲ ವ್ಯಕ್ತಿಗಳು ಸಹ ಅತ್ಯಂತ ಕ್ರೀಯಾಶೀಲರಾಗಿ ತರಹತಿಗಳನ್ನು ನಡೆಸಿಕೊಟ್ಟಿದ್ದಾರೆ ಎಂದರು. ಈ ತರಬೇತಿಯು ಸರಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳ ನಡುವೆ ನಡೆದ ಪ್ರಥಮ ತರಬೇತಿಯಾಗಿದೆ. ಈ ತರಬೇತಿಯಲ್ಲಿ ನೀವು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿರುವ ಗಾಂಧಿ ಚೌಕ್ ಚರ್ಚ್ ಸಭಾಂಗಣದಲ್ಲಿ ಅನೌಪಚಾರಿಕ ಶಿಕ್ಷಣ ಸಂತೆ ಮತ್ತು ದಲಿತ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬರ ಅಂಬೇಡ್ಕರ್ ರವರ ೧೩೪ ನೇ ಜನ್ಮ ಜಯಂತಿ ನಿಮಿತ್ಯ ಕೊಡುಗೆಯಾಗಿ ನಾಡಿನ SSಐಅ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಶಿಕ್ಷಕ ಶಕರುಂದ ಸಿದ್ದಗೊಳಿಸಿರುವ SSಐಅ ಪರೀಕ್ಷಾ ಸಹಾಯಕ ಕೈಪಿಡಿ ಬಿಡುಗಡೆಗೊಳಿಸಿ ಒಂದುದಿನದ ಕಾರ್ಯಾಗಾರ ಏರ್ಪಡಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಫಾದರ್ ಟಿಯೋಲೋ ಮೆಚಾಡೊ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿಯನ್ನ ಸಾಧಿಸಬೇಕಾದರೆ ಛಲ ಬಿಡದೆ ಓದಬೇಕು, ಅವಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.ವಿದ್ಯಾರ್ಥಿ ಪರಷತ್ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಶ್ರೀನಾಥ್ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಭವಿಷ್ಯತ್ತಿನ ಪ್ರಜೆಗಳು. ಸೈನಿಕರು ಯುದ್ಧಕ್ಕೆ ಹೋಗಬೇಕಾದರೆ ಯಾವ ರೀತಿ ತಯಾರಿ ಮಾಡುತ್ತಾರೋ ಆ ರೀತಿ ಪರೀಕ್ಷೆ ಬರೆಯಲು ತಾವು ತಯಾರಿ ಮಾಡಬೇಕು ಎಂದು ಸಲಹೆ ನೀಡಿದರು.ವಿಜಯಪುರ ನಗರದ ಮಹಿಳಾ ಪೊಲೀಸ್ ಠಾಣೆ ಪಿಎಸ್ಐ ನಿಂಗಪ್ಪ…
ವಿಜಯಪುರದಲ್ಲಿ “ವಿಜಯಪುರ ಬೆಸ್ಟೀಸ್” ಸ್ನೇಹಿತೆಯರ ಬಳಗದಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆದಿಯಿಂದಲೂ ಸೃಷ್ಟಿಯ ಮೂಲ ಸ್ತ್ರೀಯಾಗಿದ್ದಾಳೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಅವಳದೇ ಆದ ಗೌರವ, ಸ್ಥಾನಮಾನಗಳಿದ್ದು, ಇಂದು ಎಲ್ಲ ಕ್ವೇತ್ರಗಳಲ್ಲೂ ಪುರುಷರಿಗಿಂತ ತಾನು ಕಡಿಮೆಯೇನಲ್ಲ ಎಂದು ಸಾಧಿಸಿ ತೋರಿಸಿದ್ದಾಳೆ ಎಂದು ’ಉದಯರಶ್ಮಿ’ ದಿನಪತ್ರಿಕೆಯ ಪ್ರಕಾಶಕಿ ಶ್ರೀಮತಿ ಶೈಲಾ ಇಂದುಶೇಖರ ಮಣೂರ ಹೇಳಿದರು.ಶನಿವಾರ ನಗರದ ಲೀಗ್ರ್ಯಾಂಡ್ ಹೋಟೆಲ್ ನಲ್ಲಿ “ವಿಜಯಪುರ ಬೆಸ್ಟೀಸ್” ಸ್ನೇಹಿತೆಯರ ಬಳಗ ಏರ್ಪಡಿಸಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ, ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿ ತೂಕದ ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೂ ಮಹಿಳೆಯರನ್ನು ಹಿಂದಿನಿಂದಲೂ ಈ ಸಮಾಜ ಅಬಲೆಯಂದೇ ಕಡೆಗಣಿಸಲಾಗುತ್ತಿತ್ತು. ಒಂದು ಜೀವವನ್ನು ಸೃಷ್ಟಿ ಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ ಖಂಡಿತವಾಗಿ ಅವಳಲ್ಲಿ ಅಗಾಧವಾದ ಶಕ್ತಿ ಇದೆ ಎಂದರ್ಥ ಎಂದು ಶ್ರೀಮತಿ ಶೈಲಾ ಮಣೂರ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಬ್ಯಾಂಕಿನ ಸಾಲ ಪ್ರಕರಣಗಳು ಸೇರಿದಂತೆ ಒಟ್ಟು ೮ ಕೋಟಿ ರೂ ವಸೂಲಾತಿಯಾಗಿದೆ. ಇದೇ ಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ವಸೂಲಾತಿಯಾಗಿದೆ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ ಕೋಟಪ್ಪ ಕಾಂಬಳೆ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ ನಂತರ ಮಾತನಾಡಿದ ಅವರು,ಲೋಕ ಅದಾಲತ್ನಲ್ಲಿ ೩೩೨೮ ಪ್ರಕರಣಗಳಲ್ಲಿ ೨೪೯೬ ಪ್ರಕರಣಗಳು ಇತ್ಯರ್ಥ ಗೊಂಡಿವೆ. ಕಳೆದ ಬಾರಿ ನಡೆದ ಲೋಕ ಅದಾಲತ್ನಲ್ಲಿ ೧೯೯೧ ಪ್ರಕರಣಗಳು ಇತ್ಯರ್ಥ ಗೊಂಡಿದ್ದವು. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನು ಪ್ರಕಾರ ರಾಜಿ ಆಗಬಹುದಾದ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ್ಯ ಪಡಿಸಿ ಇಬ್ಬರಿಗೂ ನ್ಯಾಯ ಒದಗಿಸಿದೆ ಎಂದು ಕಾಂಬಳೆ ತಿಳಿಸಿದರು.ಕ್ರಿಮಿನಲ್ ಪ್ರಕರಣಗಳು, ಕುಡಿದು ವಾಹನ ನಡೆಸಿದ ಪ್ರಕರಣ, ಸಾರ್ವಜನಿಕ ಸ್ಥಳದಲ್ಲಿ ಶಾಂತತೆ ಭಂಗ ಉಂಟು ಮಾಡಿದ್ದು, ಅಪಘಾತ ಪ್ರಕರಣ, ಸಿವಿಲ್ ಪಾಲು, ವಾಟ್ನಿ ದಾವೆ, ನಿರ್ಭಂದಕಾಜ್ಞೆ ದಾವೆ, ವಾಹನ ಅಪಘಾತ ಪರಿಹಾರ ದಂತಹ ಪ್ರಕರಣ ಇತ್ಯರ್ಥ…
ಉದಯರಶ್ಮಿ ದಿನಪತ್ರಿಕೆ ಇಂಡಿ: ರಾಜ್ಯದ ಮುಖ್ಯಮಂತ್ರಿಯವರು ಬಜೆಟ್ ನಲ್ಲಿ ಇಂಡಿಗೆ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರವನ್ನು ನೂತನವಾಗಿ ನೀಡಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.ಕರ್ನಾಟಕ ಸರಕಾರ ಮತ್ತು ಡೆನ್ಮಾರ್ಕ ಸರಕಾರ ಜೊತೆಗೂಡಿ ಈಗಾಗಲೇ ರಾಜಾಜಿನಗರದಲ್ಲಿ ಪ್ರಾರಂಭಿಸಿದ್ದು ಮೈಸೂರದಲ್ಲಿಯೂ ಇದೆ.ಈಗ ಎರಡು ಜಿಟಿಟಿಸಿ ಕಾಲೇಜು ನೀಡಿದ್ದು ಮಧುಗಿರಿ ಮತ್ತು ಇಂಡಿಗೆ ಕಾಲೇಜು ನೀಡಿದ್ದಾರೆ.ಎಸ್ಸೆಸ್ಸೆಲ್ಸಿ ಮುಗಿದ ನಂತರ ನಾಲ್ಕು ವರ್ಷದ ಕೋರ್ಸು ಇದಾಗಿದ್ದು ವಿದ್ಯಾರ್ಥಿಗಳಿಗೆ ಸುಲಭವಾಗಿ ನೌಕರಿ ಪಡೆಯಲು ಅವಕಾಶವಿದೆ ಎಂದರು.ರೇವಣಸಿದ್ದೇಶ್ವರ ನೀರಾವರಿ ಯೋಜನೆ ಬಜೆಟ್ಟಿನಲ್ಲಿ ಎರಡು ಮತ್ತು ಮೂರನೆಯ ಹಂತದ ಕಾಮಗಾರಿಗೆ ರೂ ೩೦೦೦ ಕೋಟಿ ಬಜೆಟ್ಟಿನಲ್ಲಿ ನೀಡಿದ್ದಾರೆ. ಅದಲ್ಲದೆ ಕೃಷ್ಣಾ ಮೇಲ್ದಂಡೆ ಯೋಜನೆಯ ಆಣೆಕಟ್ಟಿನ ಎತ್ತರ ೫೨೪ ಮೀ ಗೂ ಸಹಕಾರ ನೀಡಿ ಯೋಜನೆ ಪೂರ್ಣ ಗೊಳಿಸಲು ಅಶ್ವಾಸನೆ ನೀಡಿದ್ದಾರೆ ಎಂದರು.ಶ್ರೀ ರೇವಣ ಸಿದ್ದೇಶ್ವರ ಕಾಮಗಾರಿ ಮುಗಿದರೆ ಇಂಡಿ ಮತ್ತು ಚಡಚಣ ತಾಲೂಕಿನ ೨೮೦೦೦ ಹೇಕ್ಟರ್ ಪ್ರದೇಶಕ್ಕೆ ನೀರು ಬರಲಿದೆ. ಅದರಲ್ಲಿ ಇಂಡಿಗೆ ೨೧೦೦೦ ಹೇ ಮತ್ತು ಚಡಚಣದ…
