ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಜ್ಯದಲ್ಲಿ ಬ್ರಾಹ್ಮಣ ಸಮಾಜದಲ್ಲಿ ಒಳಪಂಗಡಗಳನ್ನು ಬ್ರಾಹ್ಮಣ ಸಮಾಜದಲ್ಲಿ ಒಳಪಂಗಡಗಳನ್ನು ಬೇರ್ಪಡಿಸಿ ಜನಗಣತಿ ಮಾಡಿಸಿದೆಯೆಂದು ರಾಜ್ಯ ಸರ್ಕಾರದ ವಿರುದ್ಧ ಬ್ರಾಹ್ಮಣ ಅರ್ಗನೈಜೇಷನ್ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಗುಂಡು ಕುಲಕರ್ಣಿ ಹೇಳಿದರು.
ಈ ವೇಳೆ ಪತ್ರಿಕಾ ಹೇಳಿಕೆ ನೀಡಿದ ಅವರು, ರಾಜ್ಯದಲ್ಲಿ ಬ್ರಾಹ್ಮಣ ಸಮಾಜ ಕಡಿಮೆಯಿದೆ. ಆದರೆ ಅದರಲ್ಲೇ ಒಳ ಪಂಗಡಗಳನ್ನು ವಿಂಗಡಿಸಿದ್ದು ಯಾವ ನ್ಯಾಯ. ಎಲ್ಲ ಸಮಾಜದಲ್ಲೂ ಒಳ ಪಂಗಡಗಳಿವೆ. ಅದನ್ನು ಬಿಟ್ಟು ಕೆಲವು ಸಮಾಜಗಳಲ್ಲಿ ಮಾತ್ರ ಒಳ ಪಂಗಡಗಳು ತೋರಿಸಿದ್ದಾರೆ ಮತ್ತು ಹಿಂದೆ ಮಾಡಿಸಿದ ಜಾತಿ ಗಣತಿಯನ್ನು ಈಗ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಜಾತಿ ಗಣತಿಯನ್ನು ಕೈ ಬಿಡಬೇಕು. ನಿಮಗೆ ಬೇಕಾದಂತೆ ಜಾತಿ ಗಣತಿ ಮಾಡಿಸಿದ್ದೇರೆಂದು ಆಕ್ರೋಶ ಹೊರಹಾಕಿದರು.
ಕೂಡಲೇ ಜಾತಿ ಗಣತಿಯನ್ನು ಕೈ ಬಿಡದೆ ಹೋದರೆ ಬ್ರಾಹ್ಮಣ ಸಮುದಾಯ ಕೂಡ ಬಿದಿಗಿಳಿದು ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ಬ್ರಾಹ್ಮಣರ ಜನಸಂಖ್ಯೆ ಈ ಜಾತಿ ಗಣತಿ ಪ್ರಕಾರ ೧೫,೬೪,೭೪೧ ಎಂದು ತೋರಿಸಿದ್ದಾರೆ. ಮತ್ತೆ ಅದರಲ್ಲೇ ಹವ್ಯಕ ಬ್ರಾಹ್ಮಣರು ೮೫.೫೯೫ ಮತ್ತು ಶ್ರೀವೈಷ್ಣವ ೧೬,೨೮೬ ಎಂದು ಹೇಳಿದ್ದಾರೆ. ನಮ್ಮ ವಿಜಯಪುರ ಮತ್ತು ಕಲಬುರಗಿ ಎರಡು ಜಿಲ್ಲೆಯಲ್ಲೇ ಸುಮಾರು ೧ಲಕ್ಷಕ್ಕಿಂತ ಅಧಿಕ ಬ್ರಾಹ್ಮಣರಿದ್ದಾರೆ. ಅಂದ ಮೇಲೆ ರಾಜ್ಯದಲ್ಲಿ ಬರಿ ೧೫ಲಕ್ಷ ಆಗಲು ಸಾಧ್ಯವೇ? ರಾಜ್ಯ ಸರ್ಕಾರ ಕೂಡಲೇ ಜಾತಿ ಗಣತಿಯನ್ನು ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ.

