Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಎಲ್ಲ 13 ತಾಲೂಕುಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿ 2024-25ನೇ ಆರ್ಥಿಕ ವರ್ಷದಲ್ಲಿ ವಸತಿರಹಿತರಿಗೆ ಮನೆ ಕಟ್ಟಲು ಆಯ್ಕೆ ಪ್ರಕ್ರೀಯೆ ಪೂರ್ಣವಾದ ಫಲಾನುಭವಿಗಳ ಖಾತೆಗೆ ನೇರವಾಗಿ ಸರಕಾರದ ಅನುದಾನ ಜಮೆ ಆಗುತ್ತಿದೆ. ಆದರೆ ಗುರಿಗೆ ತಕ್ಕಂತೆ ಆಯ್ಕೆ ಪೂರ್ಣ ಆಗಿಲ್ಲ. ಈ ಹಿನ್ನಲೆಯಲ್ಲಿ ಕೂಡಲೇ ಫಲಾನುಭವಿಗಳ ಆಯ್ಕೆಯನ್ನು ಪೂರ್ಣಗೊಳಿಸಿ ಜಿ.ಪಿ.ಎಸ್ ಮಾಡಿಸಿ ಅನುದಾನ ಜಮೆ ಆಗುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿ.ಡಿ.ಓ)ಗಳಿಗೆ ನಿರ್ದೇಶನ ನೀಡುವಂತೆ ವಿಧಾನ ಪರಿಷತ್ ಶಾಸಕ ಸುನೀಲಗೌಡ ಬಿ. ಪಾಟೀಲ ವಿಜಯಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣ ಅಧಿಕಾರಿ(ಸಿ.ಇ.ಓ) ಅವರಿಗೆ ಪತ್ರ ಬರೆದಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 219 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 33074 ಗುರಿ ನಿಗದಿ ಪಡಿಸಲಾಗಿದೆ. ಅದರಂತೆ ವಿಜಯಪುರ ತಾಲೂಕಿನ 17 ಗ್ರಾ. ಪಂ ಗಳಲ್ಲಿ 2461, ಬಬಲೇಶ್ವರ ತಾಲೂಕಿನ 15 ಗ್ರಾ. ಪಂ ಗಳಲ್ಲಿ 2229, ತಿಕೋಟಾ ತಾಲೂಕಿನ 14 ಗ್ರಾ. ಪಂ ಗಳಲ್ಲಿ 2483, ಚಡಚಣ ತಾಲೂಕಿನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹೆಣ್ಣು ಸಮಾಜದ ಕಣ್ಣು. ಸಮಾಜಕ್ಕೆ ಮಹಿಳೆಯರ ಕೊಡುಗೆ ಸಾಕಷ್ಟಿದೆ. ಪ್ರತಿಯೊಬ್ಬರೂ ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂದು ವಿಜಯಪುರ ನ್ಯಾಯವಾದಿಗಳ ಸಂಘದ ಜಂಟಿ ಕಾರ್ಯದರ್ಶಿಗಳು ಹಾಗೂ ಹಿರಿಯ ವಕೀಲ ಉಸ್ಮಾನ ಭಾಷಾ ಆಲಗೂರ ಹೇಳಿದರು.ವಿಜಯಪುರದ ಅಂಜುಮನ್ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾಳೆ. ತಾಯಿಯಾಗಿ, ಹೆಂಡತಿಯಾಗಿ, ಅಕ್ಕ ತಂಗಿಯಾಗಿ ಅಥವಾ ಸ್ನೇಹಿತೆಯಾಗಿ ಪುರುಷರ ಏಳ್ಗಿಗೆಗಾಗಿ ಶ್ರಮಿಸುವ ಮಹಿಳೆಯರನ್ನು ನಾವು ಗೌರವಿಸಬೇಕು. ಹೆಣ್ಣಿನ ಮೇಲಾಗುತ್ತಿರುವ ಶೋಷಣೆಗಳು ನಮ್ಮ ಅರಿವಿಗೆ ಬಂದಾಗ ಕೂಡಲೇ ತಡೆಗಟ್ಟುವವರಾಗಬೇಕು. ಅಂದಾಗ ಮಾತ್ರ ಬಲಿಷ್ಠ ಭಾರತ ನಿರ್ಮಿಸಲು ಸಾಧ್ಯ ಎಂದರು.ಬಿ.ಎಚ್.ಅವಟಿ ಪ್ರಸ್ತಾವಿಕವಾಗಿ ಮಾತನಾಡಿದರು.ಶಾರದಾಮಣಿ ಹುನಶ್ಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಿಲ್ಪಾ ಭಸ್ಮೆ, ಡಾ.ದಿಲಶಾದ ನದಾಫ, ನಾಹೀದಾ ಅಂಜುಮ ಬಗಲಿ, ಆಸ್ಮಾ ಜಂಬಗಿ, ನ್ಯಾಯವಾದಿಗಳಾದ ಮುತ್ತು ಕಾಳೆ, ಅಬ್ದುಲ್ ನದಾಫ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಹೋಳಿ ಹಬ್ಬವನ್ನು ಶಾಂತಿ ಮತ್ತು ಸೌಹಾರ್ಧಯುತವಾಗಿ ಯಾರಿಗೂ ತೊಂದರೆ ನೀಡದೇ ಆಚರಿಸಬೇಕು ಎಂದು ಸಿಪಿಐ ಮೊಹಮ್ಮದ ಫಸಿಯುದ್ಧೀನ ಹೇಳಿದರು.ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಶಾಂತಿ ಸಭೆ ನಡೆಸಿ ಅವರು ಮಾತನಾಡಿದರು.ದೇಶದ ವಿಜಯದ ಸಂಕೇತವಾದ ಹೋಲಿ ಹಬ್ಬವನ್ನು ಎಲ್ಲ ಸಮಾದವರು ಒಂದಾಗಿ ಆಚರಿಸಿದರೆ ಯಾವುದೇ ತಪ್ಪಿಲ್ಲ. ಆದಷ್ಟು ಬೇಗ ಬಣ್ಣದಾಟವನ್ನು ಅಂತ್ಯಗೊಳಿಸಿ ಬೇರೆ ಕಾರ್ಯಕ್ರಮಗಳಿಗೆ ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸಿ ಕೊಡಬೇಕು ಎಂದರು.ಪಿಎಸ್ಐ ಸಂಜಯ ತಿಪರೆಡ್ಡಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಹೋರಾಟಗಾರ ಬಸಯ್ಯ ನಂದಿಕೇಶ್ವರಮಠ, ಬೋವಿ ಸಮಾಜದ ಮಾಜಿ ಅಧ್ಯಕ್ಷ ಪರಶುರಾಮ ನಾಲತವಾಡ, ಪ್ರಮುಖರಾದ ರಾಜಶೇಖ ಹೊಳಿ, ರಫೀಕ ಶಿರೋಳ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು.ಸಂಗಣ್ಣ ಮೇಲಿನಮನಿ, ಹುಸೇನ ಮುಲ್ಲಾ, ಸದಾಶಿವ ಮಠ, ಶರಣು ಚಲವಾದಿ, ಸಂಜು ಬಾಗೇವಾಡಿ, ರವೀಂದ್ರ ಬಿರಾದಾರ, ಸಂತೋಷ ಬಾದರಬಂಡಿ, ಬಲಭೀಮ ನಾಯಕಮಕ್ಕಳ, ಶಿವಾಜಿ ಬಿಜಾಪೂರ, ಉದಯಸಿಂಗ್ ರಾಯಚೂರ ಸೇರಿದಂತೆ ಮತ್ತೀತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಜಾತಿ-ಜಾತಿಗಳ ನಡುವಿನ ವೈಷಮ್ಯ ಮೀರಿ ಬೆಳೆದ ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶ ಕೊಟ್ಟವರು ರೇಣುಕಾಚಾರ್ಯರು ಎಂದು ಬಸಯ್ಯ ಘಾಳಿಮಠ ಅವರು ಹೇಳಿದ್ದರು ಪಟ್ಟಣದ ತಾಲೂಕಾ ದಂಡಾಧಿಕಾರಿಗಳ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರುಆಲಮೇಲ ತಾಲೂಕಾ ದಂಡಾದಿಕಾರಿಗಳಾದ ವಿಜಯಕುಮಾರ ಮಾತನಾಡಿ ಎಲ್ಲ ಧರ್ಮದವರು ಸಾಮರಸ್ಯದಿಂದ ಬದುಕಬೇಕು ಎಂದು ಹೇಳಿಕೊಟ್ಟವರು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ಎಲ್ಲರೂ ನಡೆಯೋಣ ಎಂದು ಹೇಳಿದರುಮುಖಂಡರಾದ ಶ್ರೀಶೈಲ ಮಠಪತಿ ಮಾತನಾಡಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಸಾರಿದವರು ರೇಣುಕಾಚಾರ್ಯರು ಸಾರಿದ್ದಾರೆ ಎಂದರುರೇಣುಕಾಚಾರ್ಯ ಪೋಟೋ ಪೂಜೆಯನ್ನು ಆಲಮೇಲ ಹೀರೇಮಠದ ಪೂಜ್ಯರಾದ ಶ್ರೀ ವಿರುಪಾಕ್ಷöಯ್ಯ ಹೀರೇಮಠ ಅವರು ನೇರವೇರಿಸಿದ್ದರುಈ ಕಾರ್ಯಕ್ರಮದಲ್ಲಿ ಮುಖಂಡರಾದ ಪ್ರಭು ವಾಲಿಕಾರ, ಮಲ್ಲು ಅಚಲೇರಿ, ವಿಶ್ವನಾಥ ಹೀರೇಮಠ, ಸಿದ್ದು ಮುಗಳಿ, ಈರಯ್ಯ ಮಠ, ಪ್ರಭುಗೌಡ ಪಾಟೀಲ, ಚನ್ನಯ್ಯ ಅಳೋಳ್ಳಿಮಠ, ರುದ್ರುಸ್ವಾಮಿ, ಸಿದಯ್ಯ ಮಠ, ಸಿದ್ದಪ್ಪ ಕುಂಬಾರ, ಕಾರ್ಯಲಯದ ಸಿಬ್ಬಂದಿಗಳು ಇದ್ದರು.
ಶಾಲಾ ಮಕ್ಕಳ ಆರೋಗ್ಯ ತಪಾಸಣೆ | ಪರೀಕ್ಷಾ ಸಮಯದಲ್ಲಿ ಆರೋಗ್ಯ ರಕ್ಷಣೆಗೆ ಸಲಹೆ ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಆರೋಗ್ಯ ಭಾಗ್ಯದ ಮುಂದೆ ಎಲ್ಲ ಭಾಗ್ಯಗಳು ನಗಣ್ಯ. ಪ್ರತಿಯೊಬ್ಬರಿಗೂ ಆರೋಗ್ಯ ಸಂಪತ್ತೇ ಸರ್ವಶ್ರೇಷ್ಠ ಸಂಪತ್ತು. ಬೇರೆ ಸಂಪತ್ತಿನ ವ್ಯಾಮೋಹದಲ್ಲಿ ಆರೋಗ್ಯವೆಂಬ ದಿವ್ಯತೆಯ ಆರೋಗ್ಯಕರ ಸಂಪತ್ತು ಕಳೆದುಕೊಳ್ಳದಿರಿ. ಈ ಅಮೂಲ್ಯ ಸಂಪತ್ತು ಬಹು ಎಚ್ಚರಿಕೆ, ಕಾಳಜಿಯಿಂದ ಸಂರಕ್ಷಿಸಿಕೊಂಡು ಬರಬೇಕು ಎಂದು ಜಮಖಂಡಿ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾಯಾ೯ಲಯದ ಡಾ.ಪ್ರಕಾಶ ಮುಚ್ಚಂಡಿ ಹೇಳಿದರು.ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಮಕ್ಕಳ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೀಗ ಬೇಸಿಗೆ ಆರಂಭಗೊಂಡಿದೆ ಜೊತೆಗೆ ಪರೀಕ್ಷೆಗಳು ಶುರುವಾಗಿವೆ ಆ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಆರೋಗ್ಯದ ಕಡೆಗೆ ಹೆಚ್ಚು ನಿಗಾ ವಹಿಸಬೇಕು ಎಂದರು.ದೈನಂದಿನ ಜೀವನದಲ್ಲಿಂದು ಬಹುತೇಕ ಜನರು ಹತಾಶೆ,ನಿರಾಸೆ,ದುಗುಡ, ಆತಂಕದ ಛಾಯೆಯಲ್ಲಿ ನಲುಗುತ್ತಿರುವುದು ಹೆಚ್ಚಾಗಿದೆ. ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಒತ್ತಡದ ಜೀವನದಿದ ಹಲ ಬಗೆಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರೇಣುಕಾಚಾರ್ಯರ ಶ್ರಮ, ಭಕ್ತಿ, ನೈತಿಕತೆ ಮತ್ತು ಸಮಾನತೆಯ ತತ್ವಗಳು ಇಂದಿನ ಸಮಾಜದ ಸಮಾನತೆ, ಧಾರ್ಮಿಕ ಸಮರಸತೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ದಾರಿದೀಪದಂತಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಬುಧವಾರದಂದು ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ‘ಜಗದ್ಗುರು ರೇಣುಕಾಚಾರ್ಯರ ಜಯಂತಿ’ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.ಜಗದ್ಗುರು ರೇಣುಕಾಚಾರ್ಯರು ಶೈವ ತತ್ವಶಾಸ್ತ್ರವನ್ನು ಜನಸಾಮಾನ್ಯರಿಗೆ ಪರಿಚಯಿಸಿ, ಅದನ್ನು ಜೀವನದ ಭಾಗವನ್ನಾಗಿ ಮಾಡಿದ ಮಹಾನ್ ಶರಣರು. ಅವರ ಬದುಕು ಮತ್ತು ತತ್ವಗಳು ಇಡೀ ವಿಶ್ವಕ್ಕೆ ಆದರ್ಶಪ್ರಾಯವಾಗಿವೆ ಎಂದು ಹೇಳಿದರು.ರೇಣುಕಾಚಾರ್ಯರು ಬಾಲ್ಯದಲ್ಲೇ ಭಕ್ತಿಯಿಂದ ಪರಿಪೂರ್ಣರಾಗಿ, ಋಷಿಗಳ ಜೊತೆಯಲ್ಲಿ ನಿರಂತರ ಜ್ಞಾನಸಾಧನೆ ನಡೆಸಿದರು. ಇಂದಿನ ಪೀಳಿಗೆ ಅವರ ಜೀವನ ಸಂದೇಶ, ತತ್ವಜ್ಞಾನವನ್ನು ಅರ್ಥೈಸಿಕೊಂಡು ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, “ಸಮಾನತೆ” ಎಂಬ ತತ್ವಕ್ಕೆ ಮಹತ್ವ ನೀಡಿದ ರೇಣುಕಾಚಾರ್ಯರು ಅದರಲ್ಲಿ ಎಲ್ಲಾ ವರ್ಣಗಳು ಸಮಾನವೆಂಬ ನಂಬಿಕೆಯನ್ನು ಇಡೀ ವಿಶ್ವಕ್ಕೆ ಹರಡಿದರು.ಅವಮಾನಿತ ವರ್ಗಗಳನ್ನು ಪ್ರೀತಿಸಿ, ಅವರಿಗೆ ತತ್ವಶಾಸ್ತ್ರ ಮತ್ತು ಧಾರ್ಮಿಕ…
ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕನ್ನಡ ಫಿಲಂ ಚೇಂಬರ್ ಸಂಸ್ಥೆ ವತಿಯಿಂದ ದಿ ಡಾ.ಪುನೀತ್ ರಾಜಕುಮಾರ್ ಜನ್ಮದಿನದ ಅಂಗವಾಗಿ ಮಾರ್ಚ್ 23 ಭಾನುವಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.ಈ ಸಮಾರಂಭದಲ್ಲಿ ನಮ್ಮ ದಾವಣಗೆರೆಯ ಜಿಲ್ಲೆಯ ಯುವ ಪ್ರತಿಭೆ ಹಾಗೂ ಸಹ ನಿರ್ದೇಶಕ ವೀರೇಶ್ ಮಲ್ಲಾಬಾದಿ ರವರಿಗೆ ಯುವರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕನ್ನಡ ಫಿಲಂ ಚೇಂಬರ್ ಅಧ್ಯಕ್ಷ ಎಂ ಎಸ್ ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಪ್ರತಿವಾರ ನೇತ್ರ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಪತ್ ಎಂ. ಗುಣಾರಿ ಹೇಳಿದರು.ಬುಧವಾರ ನಗರದ ಬಿ.ಎಲ್.ಡಿ.ಇ ಡಿಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನೇತ್ರಚಿಕಿತ್ಸಾ ವಿಭಾಗದ ವತಿಯಿಂದ ಆಯೋಜಿಸಲಾಗಿರುವ ಗ್ಲೂಕೊಮಾ ಜಾಗೃತಿ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಿ.ಎಲ್.ಡಿ.ಇ ಸಂಸ್ಥೆ ನೇತ್ರರೋಗಿಗಳಿಗಾಗಿ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ರೋಗಿಗಳಿಗೆ ನೆರವಾಗುತ್ತಿದೆ. ಈಗ ಆಯೋಜಿಸಲಾಗಿರುವ ಉಚಿತ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.ಆಸ್ಪತ್ರೆಯ ನೇತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥೆ ಡಾ. ರೇಖಾ ಮುಧೋಳ ಮಾತನಾಡಿ, ದೇಶದಲ್ಲಿ 4.50 ಮಿಲಿಯನ್ ಮತ್ತು ವಿಶ್ವದಲ್ಲಿ 78 ಮಿಲಿಯನ್ ಜನರು ಗ್ಲೊಕೋಮಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಬಗ್ಗೆ ನಿರ್ಲಕ್ಷ್ಯ ಮಾಡದೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ದೃಷ್ಠಿದೋಷ ಸರಿಪಡಿಸದಿದ್ದರೆ ನರಗಳ…
ಲೇಖನ:- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಆತನ ದೇಹ ಪ್ರಕೃತಿಗಳು ವಿಭಿನ್ನವಾಗಿರುತ್ತದೆ. ಅದರಲ್ಲಿ ಪ್ರಮುಖವಾಗಿ ಉಷ್ಣ ಪ್ರಕೃತಿ, ವಾತ ಪ್ರಕೃತಿ, ಪಿತ್ತ ಪ್ರಕೃತಿ ಮತ್ತು ಶೀತ ಪ್ರಕೃತಿ ಇವೇ ಮುಂತಾದ ನಾಲ್ಕು ವಿಧದ ದೇಹ ಪ್ರಕೃತಿಗಳಿವೆ. ಅದರಲ್ಲೂ ಉಷ್ಣ ದೇಹ ಪ್ರಕೃತಿಯನ್ನು ಹೊಂದಿರುವವರ ಪಾಡಂತೂ ಹೇಳತೀರದು. ಯಾವುದೇ ಆಹಾರ ಉಷ್ಣ ಪ್ರಕೃತಿಯಿರುವ ಆಹಾರ ಪದಾರ್ಥಗಳನ್ನು ಸೇವಿಸಿದರೂ ಕೂಡಲೇ ಅವರ ದೇಹದಲ್ಲಿ ಅದರ ಪರಿಣಾಮ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಮುಖ್ಯವಾಗಿ ಬೆರಳಿನ ಉಗುರಿನ ಮೇಲ್ಭಾಗದಲ್ಲಿ ಸಿಪ್ಪೆ ಏಳುವುದು, ಉರಿಮೂತ್ರ, ಹೊಟ್ಟೆ ಉರಿ ಮತ್ತು ನೋವು, ಬಾಯಿಯಲ್ಲಿ ಹುಣ್ಣಾಗುವುದು ಇವೇ ಮೊದಲಾದ ವಿವಿಧ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಬೇಸಗೆಯಲ್ಲಿ ಇನ್ನಷ್ಟು ಹೆಚ್ಚಾಗಿರುತ್ತದೆ. ನಾಲಿಗೆಗೆ ಹೆಚ್ಚು ರುಚಿ ಎನಿಸುವ ಆಹಾರಗಳನ್ನು ಬೇಕಾಬಿಟ್ಟಿ ತಿಂದರೆ ತಕ್ಷಣದಲ್ಲಿ ದೇಹವು ಉಷ್ಣಗೊಳ್ಳುತ್ತದೆ. ದೇಹದ ಉಷ್ಣವನ್ನು ಕಡಿಮೆಗೊಳಿಸುವ ಆಹಾರ ಪದಾರ್ಥಗಳನ್ನು ಅಥವಾ ತಂಪು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಸಾರಸ್ವತ ಲೋಕಕ್ಕೆ ವಚನಕಾರರ ಮತ್ತು ಹರಿದಾಸರ ಕೊಡುಗೆ ಅನನ್ಯ. ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರ ಕಾಲ ಮುಗಿದ ಮೇಲೆ ಶ್ರೀ ವಿಜಯದಾಸರು ಬರುವವರೆಗೆ ದಾಸಸಾಹಿತ್ಯದ ಕಾಲ ಶೂನ್ಯಘಟ್ಟವೆಂದು ತಜ್ಞರ ಅಂಬೋಣವಾಗಿತ್ತು.ಆದರೆ ಈ ಮಧ್ಯದ ಅವಧಿಯಲ್ಲಿಯೂ ದಾಸಸಾಹಿತ್ಯವನ್ನು ಜೀವಂತವಾಗಿಟ್ಟವರು ವಿಜಯಪುರ ಜಿಲ್ಲೆಯ ಕಾಖಂಡಕಿಯ ಶ್ರೀ ಮಹಿಪತಿದಾಸರು.ಶ್ರೀ ಮಹಿಪತಿದಾಸರು ಕನ್ನಡ ಭಾಷೆಯಲ್ಲಿ ಅಲ್ಲದೆ ದಖನಿ ಉರ್ದು ಭಾಷೆಯಲ್ಲಿಯೂ ಕೀರ್ತನೆಗಳನ್ನು ರಚಿಸಿದವರು.ಮುಂಡಿಗೆಗಳುದಾಸಸಾಹಿತ್ಯದ ವಿಶಿಷ್ಟ ರಚನೆಗಳು. ಮುಂಡಿಗೆಗಳು ಎಂದ ಕೂಡಲೇ ನೆನಪಾಗುವರು ಶ್ರೀ ಕನಕದಾಸರು. ಕನಕನನ್ನು ಕೆಣಕಬೇಡ ಎಂಬ ಮಾತು ಜನಜನಿತವಿದೆ. ಮುಂಡಿಗೆಗಳೆಂದರೆ ಮೇಲ್ನೋಟಕ್ಕೆ ಅರ್ಥವಾಗದ ರಚನೆಗಳು. ವಚನಸಾಹಿತ್ಯದಲ್ಲಿ ಬೆಡಗಿನ ವಚನಗಳಿದ್ದಂತೆ ದಾಸಸಾಹಿತ್ಯದಲ್ಲಿ ಮುಂಡಿಗೆಗಳು.ಶ್ರೀ ಮಹಿಪತಿದಾಸರ ಕೀರ್ತನೆಗಳಲ್ಲಿಯೂ ಹಲವು ಮುಂಡಿಗೆಗಳಿದ್ದು ಅವುಗಳಿಗೆ ಅಲ್ಲೊಂದು ಇಲ್ಲೊಂದು ಅರ್ಥಗಳನ್ನು ಬರೆಯುವ ಪ್ರಯತ್ನಗಳಾಗಿವೆ.ಕಾಖಂಡಕಿ ಗ್ರಾಮದವರೇ ಆದ ಸಾಹಿತಿ ನಾರಾಯಣ ಬಾಬಾನಗರ ಇವರು ಈಗ ಶ್ರೀ ಮಹಿಪತಿರಾಯರ ಅನೇಕ ಮುಂಡಿಗೆಗಳನ್ನು ಗುರುತಿಸಿ ಅವುಗಳಿಗೆ ಮೊತ್ತ ಮೊದಲ ಬಾರಿಗೆ ಅರ್ಥಗಳನ್ನು ಬರೆಯುವ ಪ್ರಯತ್ನ ಮಾಡಿದ್ದಾರೆ.ಮುಂಡಿಗೆಗಳ ಪರಿಚಯಾತ್ಮಕ ಲೇಖನವೊಂದನ್ನು…
