ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ನ್ಯಾಯವಾದಿಗಳ ಸಂಘದ ಅಽಕೃತ ಅಧ್ಯಕ್ಷರ, ಉಪಾಧ್ಯಕ್ಷರ,ಪ್ರಧಾನ ಕಾರ್ಯದರ್ಶಿಗಳ, ಪದಾಽಕಾರಿಗಳ ಆಯ್ಕೆ ಪ್ರಕ್ರಿಯೆ ಸಂಘದ ನಿಯಮಾವಳಿಯಂತೆ ಚುನಾವಣಾಧಿಕಾರಿ, ವಕೀಲ ಜಿ.ಆರ್.ಬೀಳಗಿ ಅವರು ಜರುಗಿಸಿ ಎಲ್ಲ ಸ್ಥಾನಗಳಿಗೆ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಎಲ್ಲ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ೨೦೧೩-೧೪, ೨೦೨೩-೨೫ ರ ಅವಽಯಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಕಳೆದ -.೨೧ ರಂದು ನನ್ನ ಅಧ್ಯಕ್ಷ ಅವಽ ಮುಕ್ತಾಯವಾಗಿದೆ. ಮುಂದೆ -.೧೦ ರಂದು ಚುನಾವಣೆಯ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿತ್ತು. ಕೆಲ ಸದಸ್ಯರು ಸಹಕಾರ ಕೊಡಲಿಲ್ಲ. ಮುಂದೆ ಮಾ.೧೨ರಂದು ಮತ್ತೊಂದು ಸಭೆ ಕರೆದಾಗ ೧೫೧ ಸದಸ್ಯರ ಪೈಕಿ ೭೧ ಸದಸ್ಯರು ಹಾಜರಿದ್ದರು. ಆಗ ಚುನಾವಣಾಧಿಕಾರಿಯಾಗಿ ಜಿ.ಆರ್.ಬೀಳಗಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಆಯ್ಕೆಯಾದ ಚುನಾವಣಾಽಕಾರಿಗಳು ಸಂಘದ ೨೦೨೫-೨೭ ನೇ ಸಾಲಿನ ಅವಽಯ ಚುನಾವಣೆಯ ಪ್ರಕ್ರಿಯೆ ಆರಂಭಿಸಿ ಏ.೪ ರಂದು ಮತದಾನಕ್ಕೆ ಅರ್ಹರಾದ ಸದಸ್ಯರ ಪಟ್ಟಿಯನ್ನು ಪ್ರಕಟಿಸಿದರು. ಅದರಂತೆ ೧೧೧ ಸದಸ್ಯರ ಅರ್ಹ ಮತದಾರರು ಪಟ್ಟಿಯಲ್ಲಿದ್ದರು. ಚುನಾವಣೆಗೆ ನಾಮಪತ್ರ ಸಲ್ಲಿಸಲು ಏ.೭ ರಿಂದ ೯ ರೊಳಗೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಅವಽಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಎಸ್.ಗುರಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ಸಜ್ಜಲಶ್ರೀ.ಎಲ್.ಗೊಳಸಂಗಿ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ವೈ.ಎನ್.ಲಂಕೆನ್ನವರ, ಸಹಕಾರ್ಯದರ್ಶಿ ಸ್ಥಾನಕ್ಕೆ ಶಿಲ್ಪಾ. ಎಸ್.ಮುಚಖಂಡಿ, ಖಜಾಂಚಿ ಸ್ಥಾನಕ್ಕೆ ಆರ್.ಬಿ.ಕೆಂಬಾವಿ, ಗ್ರಂಥಪಾಲಕ ಸ್ಥಾನಕ್ಕೆ ವಿಜಯಲಕ್ಷ್ಮೀ.ಜೆ.ಪತ್ತಾರ, ಐದು ಕಾರ್ಯಕಾರಿ ಸ್ಥಾನಗಳಿಗೆ ಒಬ್ಬರಾದ ಎ.ಜಿ.ನದಾಫ ಮಾತ್ರ ನಾಮಪತ್ರ ಸಲ್ಲಿಸಿದರು. ಉಳಿದ ನಾಲ್ಕು ಕಾರ್ಯಕಾರಿ ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಲಿಲ್ಲ. ಏ.೧೫ ರಂದು ನಾಮಪತ್ರ ಪರಿಶೀಲಿಸಲಾಯಿತು. ಸಲ್ಲಿಕೆಯಾದ ನಾಮಪತ್ರಗಳೆಲ್ಲವೂ ಉರ್ಜಿತವಾದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿ ಏ.೧೬ ರೊಳಗೆ ನಾಮಪತ್ರ ಹಿಂಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಯಾವುದೇ ನಾಮಪತ್ರ ಮರಳಿ ಹಿಂಪಡೆಯದೇ ಇರುವದರಿಂದಾಗಿ ಸಲ್ಲಿಕೆಯಾದ ಏಳು ಹುದ್ದೆಗಳ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಽಕಾರಿಗಳಾದ ಜಿ.ಆರ್.ಬೀಳಗಿ ಘೋಷಿಸಿದ್ದಾರೆ ಎಂದರು.
ಮೂರನೆ ಬಾರಿಗೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿದ್ದು. ನಾನು ನನ್ನ ಅವಽಯಲ್ಲಿ ಯುವನ್ಯಾಯವಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೇಕಾದ ಯೋಜನೆಗಳನ್ನು ರೂಪಿಸಲಾಗುವದು.ಈಗಾಗಲೇ ನಾನು ಪಟ್ಟಣದಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಸಾಕಷ್ಟು ಶ್ರಮಿಸಿದ್ದೇನೆ. ಶೀಘ್ರದಲ್ಲಿ ಈಗಿರುವ ನ್ಯಾಯಾಲಯದ ಕಟ್ಟಡದಲ್ಲಿ ಇದು ಕಾರ್ಯಾರಂಭವಾಗಲಿದೆ. ಹಳೆಯ ನ್ಯಾಯಾಲಯದ ಜಾಗೆಯಲ್ಲಿ ಜಿಲ್ಲಾ ನ್ಯಾಯಾಲಯದ ಕಟ್ಟಡ, ವಕೀಲರ ಭವನ, ಗ್ರಂಥಾಲಯ ಕಟ್ಟಡ, ನೋಟರಿ ಭವನ, ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಹೊಸ ಕಟ್ಟಡಗಳು ಪೂರ್ಣಗೊಂಡ ನಂತರ ಜಿಲ್ಲಾ ನ್ಯಾಯಾಲಯ ಇಲ್ಲಿಗೆ ಸ್ಥಳಾಂತರವಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಎನ್.ಲಂಕೆನ್ನವರ, ಸಹ ಕಾರ್ಯದರ್ಶಿ ಶಿಲ್ಪಾ ಮುಚಖಂಡ ಇದ್ದರು.

