Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಮಕ್ಕಳಿಗೆ ನಮ್ಮ ಭಾಷೆ, ಸಂಸ್ಕೃತಿ, ಸಂಸ್ಕಾರ ಕಲಿಸಿ. ಆಗ ಮಕ್ಕಳು ಸುಸಂಸ್ಕೃತರಾಗಿ ನಾಡಿನ ಸತ್ಪ್ರಜೆಗಳಾಗಿ ದೇಶದ ಪ್ರಗತಿಗೆ ಬೆನ್ನುಲುಬಾಗಿ ನಿಲ್ಲುತ್ತಾರೆ’ ಎಂದು ಸುಸಂಸ್ಕೃತ ಸಂಸ್ಕಾರ ಸೇವಾ ಮಂಚ ಅಧ್ಯಕ್ಷ ಪಾರ್ಶ್ವನಾಥ ಉಪಾಧ್ಯ ಹೇಳಿದರು.ಜಮಖಂಡಿ ತಾಲೂಕಿನ ಸಾವಳಗಿ ನಗರದ ಮಾಳಿ ಭವನದಲ್ಲಿ ನಡೆದ ಶ್ರೀ ಗುರುಕುಲ ಪಬ್ಲಿಕ್ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಅವರು ಪಾಲಕರು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ನಿತ್ಯ ಬದುಕಿನ ಕೆಲ ಸಮಯ ಮೀಸಲಿಡುವುದು ಅವಶ್ಯ ಎಂದರು.ನಂತರ ಮಾತನಾಡಿದ ಶ್ರೀ ಭವಾನಿ ಕೋ ಆಪ್ ಕ್ರೇಡಿಟ ಸೊಸಾಯಿಟಿ ಅಧ್ಯಕ್ಷ ಉಮೇಶ್ ಜಾಧವ್ ಅವರು, ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಸಂಸ್ಕಾರದ ಪಠ್ಯದ ಜತೆಗೆ ಸ್ಪರ್ಧಾತ್ಮಕ ವಿಷಯಾಧಾರಿತ ಶಿಕ್ಷಣ ನೀಡಿದಾಗ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಲು ಸಾಧ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ತಮ್ಮಣ್ಣಾಚಾರಿ ಜೋಷಿ ಅವರು ಆರ್ಶೀವಚನ ನೀಡಿ ವಿದ್ಯಾರ್ಥಿಗಳ ಜೀವನ ಉಜ್ವಲವಾಗಲಿ ಎಂದು ಆರ್ಶೀವಾದ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಜೋರು ಗಾಳಿ ಹಾಗೂ ಮಳೆಯು ದ್ರಾಕ್ಷಿ ಬೆಳೆಗಾರರಿಗೆ ಕಹಿ ಉಣಿಸಿದೆ. ಮತ್ತೊಮ್ಮೆ ಪರಿಹಾರಕ್ಕಾಗಿ ಸರ್ಕಾರದ ಎದುರು ಕೈಒಡ್ಡುವಂತೆ ಮಾಡಿದೆ. ತಾಲೂಕಿನ ಸಾವಳಗಿ ಹೋಬಳಿಯಲ್ಲಿ ಸೋಮವಾರ ಬಿರುಗಾಳಿ, ಹಾಗೂ ಮಳೆಯಿಂದಾಗಿ ಹಾನಿಯಾದ ದ್ರಾಕ್ಷಿಯನ್ನು ತಹಶೀಲ್ದಾರ್ ಸದಾಶಿವ ಮಕ್ಕೊಜಿ ಮಂಗಳವಾರ ಭೇಟಿ ಪರೀಶೀಲನೆ ನಡೆಸಿದರು.ಜಮಖಂಡಿ ತಾಲೂಕಿನ ಸಾವಳಗಿ ಹೋಬಳಿಯಲ್ಲಿ ಹಾನಿಯಾದ ಸ್ಥಳಕ್ಕೆ ಮಂಗಳವಾರ ತೊದಲಬಾಗಿ, ತುಂಗಳ, ಸೇರಿದಂತೆ ಅನೇಕರು ಗ್ರಾಮಗಳಲ್ಲಿ ದ್ರಾಕ್ಷಿಯನ್ನು ವೀಕ್ಷಿಸಿದರು.ನಂತರ ಮಾತನಾಡಿದ ತಹಶೀಲ್ದಾರ್ ಸದಾಶಿವ ಮಕ್ಕೊಜಿ, ಶೆಡ್‌ಗಳಲ್ಲಿ ಒಣ ದ್ರಾಕ್ಷಿ ಸಿದ್ಧಪಡಿಸಲು ಹಾಕಿದ್ದ ದ್ರಾಕ್ಷಿ ಹಾಳಾಗಿ, ದ್ರಾಕ್ಷಿ ಹಾನಿಯಾದ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ತಿಳಿಸಿದರು.ರೈತ ಉಮೇಶ್ ಜಾಧವ ಮಾತನಾಡಿ, ಅಕಾಲಿಕ ಮಳೆ ತೀವ್ರ ಆರ್ಥಿಕ ಹೊಡೆತ ನೀಡಿದೆ. ಹೋದ ವರ್ಷವೂ ನಷ್ಟ ಅನುಭವಿಸಿ ಉಳಿಸಿಕೊಂಡಿದ್ದ ಅಲ್ಪಸ್ವಲ್ಪ ಬೆಳೆಯೂ ಈಗ ಹಾಳಾಗಿದೆ. ಶೆಡ್‌ಗಳಲ್ಲಿ ಒಣ ದ್ರಾಕ್ಷಿ ಸಿದ್ಧಪಡಿಸಲು ಹಾಕಿದ್ದ ದ್ರಾಕ್ಷಿ ಹಾಳಾಗಿ, ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆಯಂತೆ ನಮ್ಮಬದುಕು ಆಗಿದೆ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತದ ಮೂಲಕ ಏಪ್ರಿಲ್ ೦೨ ರಂದು ದೇವರ ದಾಸಿಮಯ್ಯ ಹಾಗೂ ಏಪ್ರಿಲ್ ೧೦ ರಂದು ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗೆಣ್ಣೂರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಏಪ್ರಿಲ್ ೦೨ ರಂದು ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ಉಪನ್ಯಾಸ ಜರುಗಲಿವೆ. ಏಪ್ರಿಲ್ ೧೦ರಂದು ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರ ವರೆಗೆ ವಿವಿಧ ಕಲಾ ತಂಡದೊಂದಿಗೆ ಭಾವಚಿತ್ರದ ಮೆರವಣಿಗೆ, ನಂತರ ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.ಈ ಮಹನೀಯರ ಆದರ್ಶ ವಿಚಾರಧಾರೆಗಳ ಕುರಿತು ಬೆಳಕು ಚೆಲ್ಲಲು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡುವ ಕುರಿತ ಸಾಮಾಜಿಕ ಭದ್ರತಾ ಯೋಜನೆಯಡಿಯ ಜಿಲ್ಲೆಯ ೧೩ ಗ್ರಾಮಗಳಲ್ಲಿ ಏಪ್ರಿಲ್ ೫ರ ಬೆಳಿಗ್ಗೆ ೧೧ ಗಂಟೆಗೆ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ಅಂದು ವಿಜಯಪುರದ ಉಪ ವಿಭಾಗಾಧಿಕಾರಿಗಳು ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ, ಇಂಡಿ ಉಪವಿಭಾಗಾಧಿಕಾರಿಗಳು ಇಂಡಿ ತಾಲೂಕಿನ ಶಿರಗೂರ ಇನಾಂ ಗ್ರಾಮದ ಶ್ರೀ ಸದ್ಧಬೀರ ದೇವಸ್ಥಾನದಲ್ಲಿ, ವಿಜಯಪುರದ ಗ್ರೇಡ್-೨ ತಹಶೀಲ್ದಾರ ಅವರು ವಾರ್ಡ ನಂ.೧೮ರ ಹಕೀಮ ಚೌಕನ ಗೋಲಗುಂಬಜ್ ಹತ್ತಿರದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ, ತಿಕೋಟಾ ಗ್ರೇಡ್-೨ ತಹಶೀಲ್ದಾರ ಅವರು, ಬರಟಗಿ ಗ್ರಾಮದ ಶ್ರೀ ಅಮೋಘ ಸಿದ್ದೇಶ್ವರ ದೇವಸ್ಥಾನದಲ್ಲಿ, ಬಸವನ ಬಾಗೇವಾಡಿಯ ಗ್ರೇಡ್-೨ ತಹಶೀಲ್ದಾರ ಹತ್ತರಕಿಹಾಳ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.ನಿಡಗುಂದಿ ಗ್ರೇಡ್-೨ ತಹಶೀಲ್ದಾರ ಬ್ಯಾಲ್ಯಾಳ ಗ್ರಾಮದ ಸಮುದಾಯ ಭವನದಲ್ಲಿ, ಕೊಲ್ಹಾರ ತಹಶೀಲ್ದಾರ ಮಟ್ಟಿಹಾಳ ಗ್ರಾಮದ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ರವರಿಗೆ ಶೈಕ್ಷಣಿಕ, ಸಂಘಟನೆ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ವರ್ಷದ ಕರ್ನಾಟಕ ರತ್ನ ಪುನಿತ್ ರಾಜಕುಮಾರ ಸ್ಪೂರ್ತಿ ಪ್ರಶಸ್ತಿಯನ್ನು ಹಾಗೂ ಮಹಿಳಾ ದಿನಾಚರಣೆಯ ಅಂಗವಾಗಿ ವಸುಂಧರಾ ರಾಷ್ಟ್ರೀಯ ಮಹಿಳಾ ಪ್ರಶಸ್ತಿ ಯನ್ನು ಶಿಕ್ಷಕಿ ಲಕ್ಷ್ಮೀಬಾಯಿ ಹಳೇಮನಿ ರವರಿಗೆ ಧಾರವಾಡದ ಸುವರ್ಣ ಸಮ್ಮುಚಾಯ ಭವನ ರಂಗಾಯಣದಲ್ಲಿ ಪ್ರಧಾನ ಮಾಡಲಾಯಿತು.ಪ್ರಶಸ್ತಿ ಸಮಾರಂಭವು ಕರ್ನಾಟಕ ಸೋಶಿಯಲ್ ಕ್ಲಬ್ ಧಾರವಾಡ ಹಾಗೂ ವಿಶ್ವಾಸ ಫೌಂಡೇಶನ್ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಸಾಯಂಕಾಲ ಜರುಗಿತು.ಪ್ರಶಸ್ತಿ ಪ್ರಧಾನವನ್ನು ಡಾ.ರಮೇಶ ಮಹದೇವಪ್ಪನವರ ಉದ್ಯಮಿಗಳು ಹುಬ್ಬಳ್ಳಿ, ಸಾಹಿತಿಗಳಾದ ಸುರೇಶ ಕೋರಕೊಪ್ಪ , ತೆರಿಗೆ ಅಧೀಕಾರಿಗಳು , ವೀಣಾ ಹೊಸಮನಿ , ಡಾ.ಶಿವಣ್ಣ ಜಿ,ಜಯಶ್ರೀ ಪಾಟೀಲ, ಮೃತ್ಯುಂಜಯ ಹಿರೇಮಠ, ಅನುಪಮಾ ಹಂಸಭಾವಿ, ಮಂಜುಳಾ ಬೆಣ್ಣಿ , ಪಂಡಿತ ಅವಜಿ ಹಾಗೂ ಡಾ.ಚಂದ್ರಶೇಖರ ಮಾಡಲಗೇರಿ ಸಂಸ್ಥಾಪಕ ಅಧ್ಯಕ್ಷರು ಕರ್ನಾಟಕ ಚಲನಚಿತ್ರ ಮಂಡಳಿ ಬೆಂಗಳೂರು ರವರಿಂದ ಮಾಡಲಾಯಿತು.ಪ್ರಶಸ್ತಿಗೆ ಆಯ್ಕೆ ಆಗಿದಕ್ಕೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫-೨೬ ನೇ ಸಾಲಿನ ಜವಾಹರ ನವೋದಯ ಶಾಲೆಗಳಲ್ಲಿ ೬ನೇ ವರ್ಗದ ಪ್ರವೇಶಕ್ಕಾಗಿ ಜನೇವರಿ ೧೮ ರಂದು ಜರುಗಿದ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು ವಿಜಯಪುರ ನಗರದ ಪ್ರತಿಷ್ಠಿತ ಎಕ್ಸಲಂಟ್ ಕೋಚಿಂಗ್ ಕ್ಲಾಸ್‌ನ ೩೫ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಎಕ್ಸಲಂಟ್ ಕೋಚಿಂಗ್ ಕ್ಲಾಸ್‌ಗೆ ಕೀರ್ತಿ ತಂದಿದ್ದಾರೆ.ಸ್ವರೂಪ ಶಿವೂರ, ಪಣ್ಯಶ್ರೀ ಪಾಟೀಲ, ರಾಹುಲ್ ಪಾಟೀಲ, ಶ್ರೇಯಸ್ ಡಂಬಳಿ, ಸಂಗಮೇಶ ನಾಗರಾಳ, ಅಜೇಯಕುಮಾರ ಹೊಸಮನಿ, ಅಯಾನ ನಾಗೂರೆ, ಅಭಿಷೇಕ್ ಜಗದಾಳ, ಮನೋಜ ಅಮೆತಪ್ಪನವರ, ಪ್ರತೀಕ ಜಿಡ್ಡಿಮನಿ, ಸುಹಾಸಗೌಡ ಎಸ್, ಸಂಪ್ರೀತ ಪರ್ವತಿಮಠ, ಅರ್ಚಿತ ಶೆಂದಗಿ, ದಿಶಾ ಪಾಟೀಲ, ಪೂಜಾ ಹೂಗಾರ, ರುಕ್ಮಿಣಿ ಹಳೆಗೌಡರ, ಅಭಿಶೇಕ್ ಮಳಗಿ, ಅಭಿಷೇಕ್ ಬಿಡಾರಿ, ನಿತಿನ ಬುರ್ಲಿ, ಶಿವಕುಮಾರ ಬೆಳ್ಮಗಿ, ವಿಹಾನ್‌ಕುಮಾರ ಪಿ, ಕಾರ್ತಿಕ್ ಬಳೂರಗಿ, ಸ್ವರೂಪ್ ಮಹೇಂದ್ರಕರ, ಹೃತಿಕ್ ಕೋಟಿಮನಿ, ಪಿಯುಶ ಎಮ್ಮೆ, ಉದಯಕಿರಣ ಕೆ, ಗಿರೀಶ ರಾಠೋಡ, ಸುಬ್ರಮಣ್ಯ ಗೊಂಡಿ, ಆದೀಶ ರಾಠೋಡ, ಆರ್ಯನ್ ರಾಠೋಡ, ಭುವನ ಆರ್, ಪೃಥ್ವಿರಾಜ್ ಲಮಾಣಿ, ಸಮರ್ಥ ನಾಯ್ಕೋಡಿ, ಶ್ರೇಯಾ…

Read More

ಮೋರಟಗಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ | ಶಾಸಕ ಅಶೋಕ ಮನಗೂಳಿ ಮನವಿ ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಅಧಿಕಾರ ಶಾಶ್ವವಲ್ಲ ನಮ್ಮ ಅಧಿಕಾರದ ಅವಧಿಯಲ್ಲಿ ಜಾತ್ಯತೀತವಾಗಿ ಮಾಡಿದಂತ ಅಭಿವೃದ್ಧಿ ಕಾರ್ಯಗಳು ಶಾಶ್ವತ, ಅಭಿವೃದ್ಧಿ ಕಾಮಗಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕ ಅಶೋಕ ಮನಗೂಳಿ ಮನವಿ ಮಾಡಿದರು.ಮಂಗಳವಾರ ಗ್ರಾಮದ ಜನತಾ ಕಾಲೋನಿಯಲ್ಲಿ ೨೦೨೩-೨೪ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನದ ಅಡಿಯಲ್ಲಿ ಮಂಜೂರಾದ ೪೦ ಲಕ್ಷ ರೂ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಈ ಗ್ರಾಮದಲ್ಲಿ ಈಗಾಗಲೇ ಕೆರೆ ಅಭಿವೃದ್ಧಿಗಾಗಿ ೧.೫೦ ಕೋಟಿ, ಶಾದಿ ಮಹಲ್ ನಿರ್ಮಾಣಕ್ಕಾಗಿ ೧ ಕೋಟಿ, ಮಂಜೂರಾಗಿದ್ದು ಕಾರ್ಯ ಪ್ರಗತಿಯಲ್ಲಿವೆ ಸದ್ಯಕ್ಕೆ ಜನತಾ ಕಾಲೋನಿಗೆ ಹೋಗುವ ಸಿಸಿ ರಸ್ತೆಗೆ ೪೦ ಲಕ್ಷ ರೂ, ಸಮುದಾಯ ಅರೋಗ್ಯ ಕೇಂದ್ರಕ್ಕೆ ಹೋಗುವ ಮುಖ್ಯ ರಸ್ತೆಗೆ ೧೫ ಲಕ್ಷ ರೂ ಹಾಗೂ ಶ್ರೀ ಸಿದ್ದರಾಮೇಶ್ವ ಸಮುದಾಯ ಭವನ ನಿರ್ಮಾಣಕ್ಕೆ ೧೫ ಲಕ್ಷ ಮಂಜುರು ಮಾಡಿಸಿದ್ದು ಇನ್ನುಳಿದ ಕಾಮಗಾರಿಗಳನ್ನು ಹಂತ ಹಂತವಾಗಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಇಲ್ಲಿಯ ಉದ್ಯಾನದ ಹೊರಬಾಜು ಪ್ರಿವೆಡ್ಡಿಂಗ್ ಸೇರಿದಂತೆ ನಾನಾ ಫೋಟೋಶೂಟ್ ಗೆ ೧೦೦೦ ರೂ ಶುಲ್ಕ ನಿಗದಿಪಡಿಸಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬುಧವಾರ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿಯ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು.ಆಲಮಟ್ಟಿಯ ಡ್ಯಾಂ ಸರ್ಕಲ್ ನಿಂದ ಆಲಮಟ್ಟಿಯ ಪೆಟ್ರೋಲ್ ಪಂಪ್ ವರೆಗೆ ರಸ್ತೆಯುದ್ದಕ್ಕೂ ಹಚ್ಚಿರುವ ವಿವಿಧ ಗಿಡಗಳ ಸುಂದರ ಜಾಗವಿದೆ. ಸುಮಾರು ಒಂದೂವರೆ ಕಿ.ಮೀವರೆಗೂ ಈ ನೋಟ ಅದ್ಭುತವಾಗಿದೆ. ಇಲ್ಲಿ ಫೋಟೋಶೂಟ್ ಗೆ ಹೇಳಿ ಮಾಡಿಸಿದ ತಾಣ ಇದಾಗಿದೆ. ಅದಕ್ಕಾಗಿ ನಿತ್ಯ ಹಲವಾರು ಜೋಡಿಗಳ ಪ್ರಿವೆಡ್ಡಿಂಗ್ ಫೋಟೋ ಶೂಟ್ ನಡೆಯುತ್ತವೆ.ಉದ್ಯಾನದ ಹೊರಗಡೆ ಇದ್ದದ್ದರಿಂದ ಇಲ್ಲಿಯವರೆಗೆ ಫೋಟೋ ಶೂಟ್ ಗೆ ಶುಲ್ಕ ಇರಲಿಲ್ಲ. ಆದರೆ ಕಳೆದ ಫೆ.೧೫ ರಿಂದ ಪ್ರಿವೆಡ್ಡಿಂಗ್ ಶೂಟಿಂಗ್ ಗೆ ಒಂದು ಜೋಡಿ ಒಂದು ಸಾವಿರ ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ, ಉದ್ಯಾನದ ಹೊರಗಡೆಯ ಸೌಂದಯ್ಯಕ್ಕೆ ಶುಲ್ಕ ಯಾಕೆ? ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.ಆಲಮಟ್ಟಿಯ ಫೋಟೋಶೂಟ್ ನಿಂದ ಆಲಮಟ್ಟಿಯ ಉದ್ಯಾನಗಳ ಬಗ್ಗೆ ಪ್ರಚಾರ ಆಗುತ್ತದೆ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರದ ಬಿಜೆಪಿ ನಾಯಕ ವಿಕ್ರಮ ಗಾಯಕವಾಡ ಅವರು ರಾಷ್ಟ್ರೀಯ ಮಾಂಗ ಗಾರುಡಿ ಕ್ರಾಂತಿ ಸೇನಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ.ಇತ್ತಿಚೆಗೆ ಪೂನಾದಲ್ಲಿ ಜರುಗಿದ ರಾಷ್ಟ್ರೀಯ ಮಾಂಗ ಗಾರುಡಿ ಕ್ರಾಂತಿ ಸೇನಾ ಸಭೆಯಲ್ಲಿ ಸೇನಾದ ರಾಷ್ಟ್ರೀಯ ಸಂಸ್ಥಾಪಕರಾದ ಉತ್ತಮ‌ ಶಂಕರ ಮಾನಕರ ಹಾಗೂ ರಾಷ್ಟ್ರೀಯ ಅಧ್ಯಕ್ಷ ಬಾಳಾಸಾಹೇಬ್ ಕಾಂತಾ ರಾಖಪಸರೆ ಅವರು ವಿಕ್ರಮ ಗಾಯಕವಾಡ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಪ್ರಮಾಣಪತ್ರ ವಿತರಿಸಿದರು ಎಂದು ವಿಕ್ರಮ ಗಾಯಕವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ರಚನೆಗುರಾನಿಜಿ.ಆರ್.ನಿಂಗೋಜಿ ರಾವ್2000/35, ಮಾತೃಚಾಯತರಳಬಾಳು ಬಡಾವಣೆ11ನೇ ಕ್ರಾಸ್ದಾವಣಗೆರೆ-577005ಮೋ 9036389240 ಉದಯರಶ್ಮಿ ದಿನಪತ್ರಿಕೆ ದಟ್ಟಡವೀಯನಡುವೆದುಂಡನೆ ಮಲ್ಲಿಗೆಜಾಜಿ ಸಂಪಿಗೆಹೊಂಗೆ ಬೇವಿನಗಿಡಗಳ ಸಾಲು ಸಾಲುಎಲ್ಲೆಡೆ ಸೂಸಿಹುದುಕಂಪು ಕಂಪು ನಲಿದಾಡಿನರ್ತಿಸಿಸುವ ನವಿಲುಗಳುಝೆಂಕರಿಸಿಮಕರಂದ ಹೀರುವ ದುಂಬಿಗಳುಸುವಾಸನೆ ಸ್ವಾದಿಸಲುಸುಯ್ಗುಡುವ ಸುಳಿಗಾಳಿಭೂ ಒಡಲ ಗರ್ಭಕೆ ಮಳೆಯ ಸಿಂಚನಟಿಸಿಲೊಡೆವ ಪರ್ವಕಾಲ ಪಸರಿಸುವಬೇರು ಬೀಜಕೆಪಕ್ಷಿಗಳ ಕಲರವತುತ್ತು ಕೊಡುವ ತಾಯಿಗೆನಲಿವ ಮರಿಗಳುರೆಕ್ಕೆ ಬಿಚ್ಚುವುದನೋಡುವ ಸಂಭ್ರಮ ವೃಕ್ಷ ರಾಜನನಲಿವು, ವರುಷಕಳೆದ ಹುಟ್ಟು ಹಬ್ಬದನೆನಪು, ಹೊಸ ಚಿಗುರುಹಳೇ ಬೇರು ಕೂಡಿರಲುಹೊಸ ಸೊಗಡುಕಾದಿಹುದು ನೀಡಲುಹೊಸ ವರುಷದಹೊನಲು ಬೇವು ಬೆಲ್ಲವಸವಿಯಲುಕಹಿ ಸಿಹಿಗಳ ನೆನಹುಮರೆತರೆ ಮರೆತೇನುಕಹಿಯ ನೆನಪುಗಳನೆನೆದರೆ ನೆನೆದೇನುಸಿಹಿಯ ಸೊಬಗನುಬಾ ಯುಗಾದಿಯೇಯುಗದ ಆದಿಯೇಮನು ಕುಲದಕಷ್ಟವ ನೀಗಿಸು ಬಾ

Read More