Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಂದಾಯ ಇಲಾಖೆಯ ಆಯುಕ್ತಾಲಯ ತನ್ನ ಇಲಾಖೆಯಲ್ಲಿ ಡಿಜಿಟಲ್ ಆಡಳಿತಕ್ಕಾಗಿ ನೀಡಿರುವ ಕ್ರೋಮ್ ಬುಕ್ ಗಳನ್ನು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವರಾದ ಶಿವಾನಂದ ಪಾಟೀಲ ಅವರು ಗ್ರಾಮ ಆಡಳಿತಾಧಿಕಾರಿಗಳಿಗೆ ವಿತರಿಸಿದರು.ತಾವು ಪ್ರತಿನಿಧಿಸುವ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿಡಗುಂದಿ ಹಾಗೂ ಕೊಲ್ಹಾರ ತಾಲೂಕಗಳ ಗ್ರಾಮ ಆಡಳಿತಾಧಿಕಾರಿಗಳಿಗೆ ನಗರದಲ್ಲಿರುವ ಗೃಹ ಕಛೇರಿಯಲ್ಲಿ ಕ್ರೋಬ್ ಬುಕ್ ವಿತರಿಸಿದರು. ಬಸವನಬಾಗೇವಾಡಿ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳಿಗೆ ಈಗಾಗಲೇ ಕ್ರೋಮ್ ಬುಕ್ ವಿತರಿಸಲಾಗಿದೆ.ಕಿರು ಲ್ಯಾಪ್‍ಟ್ಯಾಪ್ ಸದರಿ ಕ್ರೋಮ್ ಬುಕ್‍ಗಳಲ್ಲಿ ಕಂದಾಯ ಇಲಾಖೆಯಿಂಧ ನಡೆಸುವ ಬಗರ ಹುಕುಂ, ಬೆಳೆ ಸಮೀಕ್ಷೆ, ಕೆ-ಜೆಐಸಿ, ಡಿಬಿಟಿ ಆ್ಯಪ್ ಹಾಗೂ ಭೂಮಿ, ಅಟಲ್ ಜೀ ಜನಸ್ನೇಹಿ, ಇ-ಆಫೀಸ್ ಸೇರಿದಂತೆ ಇತರೆ ತಂತ್ರಜ್ಞಾನ ಅಳವಡಿಸಲಾಗಿದೆ.ಈ ಸಂದರ್ಭದಲ್ಲಿ ನಿಡಗುಂದಿ ತಹಸೀಲ್ದಾರ ಅಮರವಾಡಗಿ, ಕೊಲ್ಹಾರ ತಹಸೀಲ್ದಾರ ನಾಯ್ಕಲಮಠ ಸೇರಿದಂತೆ ಉಭಯ ತಾಲೂಕಗಳ ಗ್ರಾಮ ಆಡಳಿತಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಬರುವ ಅಗಸ್ಟ೧ ಹಾಗೂ ೨ ರಂದು ಎರಡು ದಿನಗಳ ಕಾಲ ಪ್ರಸ್ತುತ ೨೦೨೫-೨೬ ನೇ ಸಾಲಿನ ನಿಡಗುಂದಿ ಎ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಆಲಮಟ್ಟಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲಾ ಮೈದಾನದಲ್ಲಿ ಜರುಗಲಿವೆ.ಅತಿಥೇಯ ಶಾಲೆಯಲ್ಲಿ ಕ್ರೀಡಾಕೂಟದ ರೂಪರೇಷೆಗಳನ್ನು ಚರ್ಚಿಸಿ ಸಿದ್ದತೆ ಕೈಗೊಳ್ಳಲು ಕರೆಯಲಾಗಿದ್ದ ನಿಡಗುಂದಿ ವ್ಯಾಪ್ತಿಯಲ್ಲಿನ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಪೂರ್ವಭಾವಿ ಸಭೆಯಲ್ಲಿ ಕ್ರೀಡಾಕೂಟದ ದಿನಾಂಕ ನಿಗದಿಪಡಿಸಲಾಗಿದೆ.ಕ್ರೀಡಾಕೂಟದ ಸಂಘಟನಾ ಅಧ್ಯಕ್ಷರಾದ ಹಳಕಟ್ಟಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ರೀಡಾಕೂಟದ ಯಶಸ್ಸಿಗೆ ಪೂರ್ವ ತಯಾರಿ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ದೈಹಿಕ ಶಿಕ್ಷಕರ ಸೂಕ್ತ ಸಲಹೆ,ಸೂಚನೆಗಳನ್ನು ಆಲಿಸಿ ಕ್ರೀಡಾಕೂಟದ ದಿನಾಂಕ ನಿಗದಿ ಸೇರಿದಂತೆ ಹಲವಾರು ವಿಷಂಯಗಳನ್ನು ಚರ್ಚಿಸಿ ಕ್ರೀಡಾಕೂಟ ಯಶಸ್ಸಿಯಾಗಿ ಜರುಗಿಸಲು ನಿರ್ಣಯ ಕೈಗೊಳ್ಳಲಾಯಿತು.ಈ ವೇಳೆ ಮಾತನಾಡಿದ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ದೈಹಿಕ ಶಿಕ್ಷಕರ ಬಳಗದ ಸಹಕಾರ ಕ್ರೀಡಾಕೂಟ ಯಶಸ್ಸಿಗೆ ಅತ್ಯಗತ್ಯ. ಅಚ್ಚುಕಟ್ಟಾಗಿ, ಯಾವುದೇ ಸಮಸ್ಯೆಗಳಾಗದಂತೆ ಕೂಟ ನೆರವೇರಿಸಿಕೊಡಲು ಮನವಿ ಮಾಡಿದರು. ಸ್ವಾಗತ ಸಮಿತಿ, ನ್ಯಾಯದಾನ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಶ್ರೀ ಷಣ್ಮುಖ ಶಿವಯೋಗಿಗಳು ಮತ್ತು ಈರಯ್ಯ ಶರಣರು ನುಡಿದಂತೆ ನಡೆಯುವ ಮೂಲಕ ಸಮಾಜದ ಅಂಕು ಡೊಂಕು ತಿದ್ದಿದ್ದಾರೆ ಎಂದು ಸಾನಿದ್ಯ ವಹಿಸಿದ ವಿರಕ್ತಮಠದ ತಿಕೋಟಾದ ಚೆನ್ನಮಲ್ಲಿಕಾರ್ಜುನ ಶ್ರೀಗಳುಹೇಳಿದರು.ತಾಲೂಕಿನ ಅಥರ್ಗಾ ಗ್ರಾಮದ ಶ್ರೀ ಷಣ್ಮುಖ ಶಿವಯೋಗಿಗಳ ಗುರುದೇವಾಶ್ರಮದಲ್ಲಿ ನಡೆದ ಷಣ್ಮುಖ ಶಿವಯೋಗಿಗಳು ಮತ್ತು ಈರಯ್ಯ ಶ್ರೀಗಳ ಪುಣ್ಯಾರಾಧನೆ ಗುರು ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ನೇತೃತ್ವ ವಹಿಸಿದ ಗುರುದೇವಾಶ್ರಮ ಅಥರ್ಗಾದ ಈಶ ಪ್ರಸಾದ ಶ್ರೀಗಳು ಮಾತನಾಡಿ, ಮನುಷ್ಯ ಜೀವನ ಶ್ರೇಷ್ಠವಾದುದು. ಇಂತಹ ಶ್ರೇಷ್ಠ ಬದುಕಿನ ಸಾರ್ಥಕತೆ ಪರೋಪಕಾರ ಮತ್ತು ಸಹಬಾಳ್ವೆ ಯಿಂದ ಸಾದ್ಯ ಎಂದರು.ಷಣ್ಮುಖ ಶಿವಯೋಗಿಗಳು ಮತ್ತು ಈರಯ್ಯ ಶರಣರು ಸಮಾಜದಲ್ಲಿನ ಜಾತಿ ಮತಗಳ ಅಂತರ ತೊಡೆದುಹಾಕಿ ಸಮಾನತೆಯನ್ನು ಪ್ರತಿಪಾದಿಸಿದರು. ಪ್ರತಿಯೊಂದು ವೃತ್ತಿಗೂ ಗೌರವ ಬರುವಂತೆ ಬಾಳಿ ತೋರಿಸಿದರು ಎಂದರು.ಚಡಚಣ ಗುರುದೇವಾಶ್ರಮದ ಯೋಗಾನಂದ ಶ್ರೀಗಳು ಮಾತನಾಡಿ, ವಚನಗಳ ಮೂಲಕ ಶಿವಶರಣರು ಜೀವನ ಮೌಲ್ಯವನ್ನು ಜನರಲ್ಲಿ ಬಿತ್ತಿದ್ದಾರೆ. ಈ ಮೌಲ್ಯಗಳು ಇಂದಿಗೂ ಉಳಿಯಲು ಅದರ ನೈಜತೆಯೇ ಕಾರಣವಾಗಿದೆ. ಇಂದಿನ ದಿನಗಳಲ್ಲಿ ವಚನಗಳಲ್ಲಿನ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಪ್ರತಿ ಹಳ್ಳಿ ಹಳ್ಳಿಗಳಲ್ಲಿ ರೈತ ಸಂಘದ ಸಂಘಟನೆ ಬಲಪಡಿಸಿರಿ ಉತ್ತಮ ರೈತಪರ ಸಂಘಟನೆಯಾಗಿ ಬೆಳೆಯುತ್ತಿರುವುದು ಅದ್ಭುತ ಬೆಳವಣಿಗೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಹೇಳಿದರು.ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದ ಹನುಮಾನ ಮಂದಿರ ಆವರಣದಲ್ಲಿ ಶನಿವಾರ ನಡೆದ ರಾಜ್ಯ ರೈತ ಸಂಘದ ಘಟಕವನ್ನು ಉಧ್ಘಾಟಿಸಿ ಮಾತನಾಡಿದ ಅವರು, ರೈತರ ಬಗ್ಗೆ ಯಾರಿಗೂ ಯಾವ ಪಕ್ಷಗಳಿಗೂ ಕಾಳಜಿ ಇರುವುದಿಲ್ಲ. ರೈತನನ್ನು ಯಾವ ಸರ್ಕಾರವೂ ಇಲ್ಲಿಯವರೆಗೆ ಉಧ್ಧಾರ ಮಾಡಿಲ್ಲ ಮತ್ತು ಮಾಡುವುದಿಲ್ಲ. ಸರ್ಕಾರ ರೈತರಿಗೆ ನಿರಂತರವಾಗಿ ವಿದ್ಯುತ್, ನೀರು ನೀಡುವಲ್ಲಿ ವಿಫಲವಾಗಿದೆ. ರೈತರು ಬ್ಯಾಂಕ್‌ನವರ ಮುಂದೆ ಭೀಕ್ಷುಕನಂತೆ ನಿಲ್ಲುವದು ತಪ್ಪಿಲ್ಲ. ರೈತರಿಗೆ ಯಾವುದೇ ಸರ್ಕಾರವಿರಲಿ ರೈತರಿಗೆ ಬೆಳೆದ ಬೆಳೆಗೆ ಉತ್ತಮ ಬೆಲೆ ನೀಡಬೇಕು. ಈ ಭಾಗದ ಎಲ್ಲಾ ರೈತರು ಸಂಘಟಿತರಾಗಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಿವಪ್ಪಗೌಡ ಮಳಗೊಂಡ, ಸಿದ್ದನಗೌಡ ಬಿರಾದಾರ, ಪ್ರಕಾಶ ಆಲಕುಂಟಿ, ಶಂಕರೇಪ್ಪ ನಾವಿ, ಗುಡುಸಾಬ ಬರಡೋಲ, ಧರೇಪ್ಪ ಕೋಳಿ, ಶರಣಪ್ಪ ಹಡಪದ, ಶಿವಪ್ಪ ಕೋಟಿ,…

Read More

ವಚನಗಳು ಮತ್ತು ಬಸವ ತತ್ವಗಳನ್ನು ವಿಶ್ವದ ಐದಾರು ಪ್ರಮುಖ ಭಾಷೆಗಳಿಗೆ ಭಾಷಾಂತರಿಸಲು ರೂ.5 ಕೋ. ಆರ್ಥಿಕ ನೆರವು ಘೋಷಿಸಿದ ಸಚಿವ ಎಂ.ಬಿ.ಪಾಟೀಲ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಚನಗಳು ಮತ್ತು ಬಸವ ತತ್ವಗಳನ್ನು ಜಗತ್ತಿನ ಪ್ರಮುಖ ಐದಾರು ಭಾಷೆಗಳಿಗೆ ಭಾಷಾಂತರಿಸಲು ರೂ.5 ಕೋ. ಆರ್ಥಿಕ ನೆರವು ನೀಡುವುದಾಗಿ ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆರವಿವಾರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ My Me is Thee (ನನ್ನೊಳಗಿನ ನಾನು ನೀನೇ) ಬಸವಣ್ಣನವರ ವಚನಗಳನ್ನು ಇಂಗ್ಲಿಷ್ ಗೆ ಅನುವಾದಿಸಿರುವ ಡಿವೈಎಸ್ಪಿ ಬಸವರಾಜ ಯಲಿಗಾರ ಅವರ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.ಬಸವಾದಿ ಶರಣರು ಜಗತ್ತಿನಲ್ಲಿ ಮೊದಲ ಸಂಸತನ್ನು ಸ್ಥಾಪಿಸಿ ಎಲ್ಲ ಕಾಯಕ ವರ್ಗದವರಿಗೆ ಪ್ರಾತಿನಿಧ್ಯ ನೀಡಿ ಸಮ ಮತ್ತು ಸುಂದರ ಸಮಾಜ ನಿರ್ಮಿಸುವ ಕನಸು ಕಂಡಿದ್ದರು. ಲಿಂಗಾಯಿತ ಜಾತಿಯಲ್ಲ. ಅದು ಜಾತಿ ರಹಿತ ಧರ್ಮ. ಅಂದು ಕಲ್ಯಾಣ ಕ್ರಾಂತಿ ನಡೆಯದಿದ್ದರೆ ಇಂದು ಇಂದು ಇಡೀ ದೇಶವೇ ಬಸವ…

Read More

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯದಲ್ಲಿಯೇ ಅತೀ ಹೆಚ್ಚು ಬಬಲೇಶ್ವರ ಮತಕ್ಷೇತ್ರಕ್ಕೆ ಅನುದಾನ ತಂದು ನೀರು, ರಸ್ತೆ, ವಿದ್ಯುತ್, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ರಾತ್ರಿ ಬಬಲೇಶ್ವರ ತಾಲೂಕಿನ ಕಂಬಾಗಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರಾಜ್ಯ ಹೆದ್ದಾರಿ ನವೀಕರಣ ಯೋಜನೆಯಡಿ ರೂ. 980 ಲಕ್ಷ ವೆಚ್ಚದ ಯರಗಟ್ಟಿ- ಬಬಲೇಶ್ವರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 15ರಲ್ಲಿ ಬರುವ 88.90 ಕಿ. ಮೀ. ಯಿಂದ 11.82 ಕಿ. ಮೀ. ವರೆಗೆ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಬಬಲೇಶ್ವರ ಮತಕ್ಷೇತ್ರದಲ್ಲಿ ಅಂದಾಜು ಪ್ರತಿ ಒಂಬತ್ತು ಕಿ. ಮೀ. ಒಂದರಂತೆ 110 ಕೆ. ವಿ. ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಿಂದಾಗಿ ಬಬಲೇಶ್ವರ ಮತ್ತು ತಿಕೋಟಾ ಎರಡೂ ತಾಲೂಕುಗಳಲ್ಲಿ ತಲಾ ಒಂಬತ್ತರಂತೆ ಒಟ್ಟು 18…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲ್ಲೂಕಿನ ಮರೇಗುದ್ದಿ ಗ್ರಾಮದ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ 1997-98 ಸಾಲಿನ 7 ನೇ ತರಗತಿಯ ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನದ ಕಾರ್ಯಕ್ರಮದಲ್ಲಿ ವಿದ್ಯೆಯನ್ನು ಕಲಿಸಿದ ಗುರುವಿಗೆ ಹೂವಿನ ಸುರಿಮಳೆಗೈದು ತೆರೆದ ವಾಹನದಲ್ಲಿ ವಾದ್ಯ ಮೇಳದೊಂದಿಗೆ ಅದ್ದೂರಿಯಾಗಿ ಮೆರವಣಿಗೆಯನ್ನು ಮಾಡಿದರು.70 ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುವಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ಸನ್ಮಾನಿಸಿ ಗೌರವಿಸಿದರು.ನಿವೃತ್ತ ಶಿಕ್ಷಕ ಎಸ್.ಪಿ.ಮಠಪತಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಶಾಲಾ ಮುಖ್ಯ ಶಿಕ್ಷಕಿ ಆರ್.ಬಿ. ಪಾಟೀಲ ಮಾತನಾಡಿ, ಶಿಕ್ಷಕರ ಕಣ್ಣಿನಲ್ಲಿ ತಾವುಗಳು ಕಲಿಸಿದ ಮಕ್ಕಳ ಚಿತ್ರಣ ಕಾಣಿಸುತ್ತದೆ. ಇಂತಹ ಕಾರ್ಯಕ್ರಮ ಮಾಡುವದರಿಂದ ಮುಂದಿನ ಮಕ್ಕಳಿಗೆ ಮಾರ್ಗದರ್ಶನವಾಗುತ್ತದೆ. ನಮ್ಮ ಶಾಲೆಯಲ್ಲಿ 72 ಮಕ್ಕಳು 7 ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು. ಎಲ್ಲ ಮಕ್ಕಳಿಗೋಸ್ಕರ ಶಾಲೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಿಗಾಗಿ, ನಮ್ಮ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಧನ ಸಹಾಯ ಹಾಗೂ ಸಹಕಾರವನ್ನು ನೀಡಿದರೆ ಮಾತ್ರ ಶಾಲೆಯು ಅಭಿವೃದ್ಧಿಯಾಗಲು ಸಾಧ್ಯ…

Read More

ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಬ್ಯಾಂಕ್ ಪಡೆದ ನಿಖಿಲ ಸೊನ್ನದ ಸಲಹೆ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅಂಕಗಳ ಬೆನ್ನತ್ತಿ ಹೋಗದೇ ನಿಮ್ಮ ಹಿಂದೆಯೇ ಓಡೋಡಿ ಬರುವ ರೀತಿಯಲ್ಲಿ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ‌ರ್ಯಾಂಕ್ ಪಡೆದ ವಿದ್ಯಾರ್ಥಿ ನಿಖಿಲ ಸೊನ್ನದ ಹೇಳಿದರು.ನಗರದ ರಾಯಲ್ ಪ್ಯಾಲೇಸ್ ಲೇಸ್ ಕಾಲೇಜಿನ ಸಭಾಭವನದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಅಧ್ಯಯನದಲ್ಲಿ ವಿದ್ಯಾರ್ಥಿಗಳ ಆಸಕ್ತಿ ಕಾರ್ಯಾಗಾರದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ವಿಷಯಗಳು ಅರ್ಥವಾಗದೇ ಇದ್ದಲ್ಲಿ ಹುಡುಕಿ ಅಧ್ಯಯನ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಡಾ.ಸಿದ್ದು ಸೊನ್ನದ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿಕೊಂಡರೆ ಮಾತ್ರ ಯಶಸ್ವಿ ಪಡೆಯಲು ಸಾಧ್ಯ. ಮಕ್ಕಳ ಸಾಧನೆಗಾಗಿ ತಂದೆ-ತಾಯಿ ಪೂರ್ಣಾವಧಿ ಶಿಕ್ಷಕರಾಗಬೇಕು. ಮಕ್ಕಳ ಬೆಳವಣಿಗೆ ಕೂಡ ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ. ಮಕ್ಕಳ ಶಿಕ್ಷಣ ಕೆಳಮಟ್ಟದಲ್ಲಿಯೇ ಗಟ್ಟಿಯಾಗಿರಬೇಕು. ವಿದ್ಯೆ ಅರಿತುಕೊಂಡ ವಿದ್ಯಾರ್ಥಿಗಳ ಜೀವನಮಟ್ಟ ಸುಧಾರಣೆಯಾಗಲಿದೆ. ఎల్ల ಗಿಡಮರಗಳು ಹೂವುಗಳನ್ನು ಬಿಡುತ್ತದೆ. ಕೆಲವೊಂದು ಅರಳದೇ ಧರೆಗೆ ಬೀಳುತ್ತವೆ. ಕೆಲವೊಂದು ಅರಳುವ ಮೂಲಕ…

Read More

ಲೇಖನ- ಸುಧಾ ಪಾಟೀಲ್ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಕೇರಳ ರಾಜ್ಯಕ್ಕೆ ಸೇರಿದ ಪಿ. ಟಿ. ಉಷಾ ಅವರು ಭಾರತದ ಪ್ರಖ್ಯಾತ ಕ್ರೀಡಾಪಟು ಎಂದು ಎಲ್ಲರಿಗೂ ಚಿರಪರಿಚಿತರು.ಪಿ. ಟಿ ಉಷಾ ಅವರು 1979 ರಿಂದಲೂ ಭಾರತದ ಕ್ರೀಡಾ ವಲಯದೊಂದಿಗೆ ತಮ್ಮ ಒಡನಾಟ ಹೊಂದಿದ್ದಾರೆ. ಭಾರತದಲ್ಲಿ ಹುಟ್ಟಿದ ಅದ್ವಿತೀಯ ಕ್ರೀಡಾಪಟುವೆಂದು ಅವರನ್ನು ಪರಿಗಣಿಸಲಾಗುತ್ತದೆ. ಅವರನ್ನು ಭಾರತದ ಓಟದ ರಾಣಿ ಮತ್ತು ಪಯ್ಯೋಲಿ ಎಕ್ಸ್ಪ್ರೆಸ್ ಎಂದು ವರ್ಣಿಸಲಾಗುತ್ತದೆ.ಸಧ್ಯ ಅವರು ಕೊಯಿಲ್ಯಾಂಡ್ ನಲ್ಲಿ ಉಷಾ ಸ್ಕೂಲ್ ಆಫ್ ಅಥ್ಲೆ ಟಿಕ್ಸ್ ಎಂಬ ಸಂಸ್ಥೆ ನಡೆಸುತ್ತಿದ್ದಾರೆ.ಪಿ. ಟಿ. ಉಷಾ ಕೇರಳದ ಉತ್ತರ ಮಲಬಾರ ನ ಕರಾವಳಿ ಕೊಚ್ಚಿಕೋಡ ಜಿಲ್ಲೆಯ ಪಯ್ಯೋಲಿ ಹಳ್ಳಿಯಲ್ಲಿ ಜನಿಸಿದರು. ಆಗ 1976 ರಲ್ಲಿ ಕೇರಳ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಕ್ರೀಡಾ ಶಾಲೆ ಒಂದನ್ನು ತೆರೆಯಿತು. ಆಗ ಉಷಾ ಅವರನ್ನು ತಮ್ಮ ಜಿಲ್ಲೆಯನ್ನು ಪ್ರತಿನಿಧಿಸುವಂತೆ ಕ್ರೀಡೆಗಳಿಗಾಗಿ ಆಯ್ಕೆಗೊಳಿಸಿದರು.ನಂತರ ಅವರು 1979 ರಲ್ಲಿ ನಡೆದ ನ್ಯಾಷನಲ್ ಸ್ಕೂಲ್ ಗೇಮ್ಸ್ ನಲ್ಲಿ ಭಾಗವಹಿಸಿದರು ಆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಅವರು ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾದರು.ಆಯ್ಕೆ ಕುರಿತು ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಸಭೆಯಲ್ಲಿ ಪಿಂಜಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಎಂ.ಡಿ.ಮಾಗಿ, ಪ್ರ.ಕಾರ್ಯದರ್ಶಿಯಾಗಿ ಬಿ.ಎಂ.ಕಡಿ, ಉಪಾರ್ಧಯಕ್ಷರಾಗಿ ಎಚ್.ಬಿ.ಕೊಣ್ಣೂರ, ರಾಜ್ಯ ಪರಿಷತ್ ಸದಸ್ಯರಾಗಿ ಬಸಯ್ಯ ಹಿರೇಮಠ, ಖಜಾಂಚಿಯಾಗಿ ಎಸ್.ಎಸ್. ಸುಧಾಕರ, ಸಹ ಕಾರ್ಯದರ್ಶಿಯಾಗಿ ಆರ್.ಜಿ.ಗುಣಕಿ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಬಿ.ಜಿ.ಬಿರಾದಾರ ಆಯ್ಕೆಯಾಗಿದ್ದಾರೆ.ಈ ವೇಳೆ ಶಾಲೆಯ ಮುಖ್ಯೋಪಾದ್ಯಾಯ ಎಂ.ಎಸ್.ಕವಡಿಮಟ್ಟಿ, ಸಂಘದ ಸದಸ್ಯರಾದ ದಯಾನಂದ ಪಾಟೀಲ, ಶಿವಾನಂದ ಮುತ್ತಗಿ, ಸಂಗಣ್ಣ ಹೂಗಾರ, ಜಿ.ಟಿ.ಮಂಗಳೂರ, ಎಸ್.ಎಸ್.ಪಾಟೀಲ, ಎಂ.ಎನ್.ಮೆರೆಖೋರ, ವಿ.ಪಿ.ಮಠ, ಮಹಾಂತೇಶ ತುರಡಗಿ, ಬಿ.ಜಿ.ಬೇನಾಳ, ಪಿ.ಬಿ.ಕುಂಟರೆಡ್ಡಿ, ಪ್ರಭುಗೌಡ ರಾರಡ್ಡಿ, ಸುಧಾರಾಣಿ, ಆರ್.ವೈ.ಸಜ್ಜನ ಇದ್ದರು.

Read More