ರಸ್ತೆ ಡಾಂಬರೀಕರಣಕ್ಕೆ ಗ್ರಾಮಸ್ಥರ ಆಗ್ರಹ | ವಾಹನ ಸವಾರರಿಗೆ ಸಂಚಾರಕ್ಕೆ ಸಂಚಕಾರ B
ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಮೀಪದ ಜೀರಂಕಲಗಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಜೀರಂಕಲಗಿ ಗ್ರಾಮದಿಂದ ಮಹಾರಾಷ್ಟ್ರದ ಗಡಿಗ್ರಾಮ ಸೊನ್ನಲಗಿ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಸಂಪೂರ್ಣ ಜಲಾವೃತಗೊಂಡು ವಾಹನ ಸವಾರರಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
೧೨ ವರ್ಷಗಳ ಹಿಂದೆ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದ್ದು, ಸಧ್ಯ ಈ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಈಗಿನ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅವರೇ ನಿರ್ಮಾಣ ಮಾಡಿದ ರಸ್ತೆ ಇದಾಗಿದೆ. ಆದರೆ ಮತ್ತೆ ಶಾಸಕರಾದ ನಂತರ ಈ ರಸ್ತೆಯನ್ನು ಪುನಃ ಡಾಂಬರೀಕರಣ ಮಾಡುತ್ತೇನೆ ಎಂದು ಹೇಳಿದ ಶಾಸಕರು ಈವರೆಗೂ ಇತ್ತ ಕಡೆ ಗಮನ ಹರಿಸಿಲ್ಲ.
ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಈ ರಸ್ತೆ ಸಂಪೂರ್ಣ ಜಲಾವೃತವಾಗಿ ಇದು ರಸ್ತೆಯೋ ಅಥವಾ ನದಿಯೋ ಎಂಬಂತಾಗಿದೆ. ಇನ್ನಾದರೂ ಶಾಸಕ ವಿಠ್ಠಲ ಕಟಕಧೋಂಡ ಅವರು ಚಡಚಣ ತಾಲೂಕಿನ ಕಡೆ ಗಮನ ಹರಿಸಿ ರಸ್ತೆಗಳ ಡಾಂಬರೀಕರಣ ಮಾಡಬೇಕು ಎಂದು ದೇವರನಿಂರಗಿ, ಜೀರಂಕಲಗಿ ಗ್ರಾಮದ ಮುಖಂಡರಾದ ಭೀಮಾಶಂಕರ ಬಿರಾದಾರ, ಕಮಲಾಬಾಯಿ ಪರಗೊಂಡ ಬಾಲಗಾಂವ, ಶ್ರೀಶೈಲ ಧಂದರಗಿ, ಸಾವಿತ್ರಿಬಾಯಿ ನಿಂಬರಗಿ, ಭಾರತಿ ಮಹಾದೇವ ಕರ್ಲಮಳ, ಅಮೋಘಸಿದ್ಧ ಕೋಟಿ, ಸಂತೋಷ ಧಂದರಗಿ, ಮಲ್ಲಪ್ಪ ಬಡಿಗೇರ, ರೈತರಾದ ಈರಪ್ಪ ಉಮರಣಿ, ಭೀಮಾಶಂಕರ ಉಮರಾಣಿ, ರವಿಕುಮಾರ ಕಳ್ಳಿ, ವಿಠ್ಠಲ ನಾವಿ, ಶರಣಪ್ಪ ನಂದಗೊಂಡ, ಭೀಮಣ್ಣ ಕರ್ಲಮಳ, ಕೆ. ಎಸ್. ಬಿರಾದಾರ ಸೇರಿದಂತೆ ಗ್ರಾಮದ ರೈತರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.

