Author: editor.udayarashmi@gmail.com

ಲೇಖನ- ವಿವೇಕಾನಂದ. ಎಚ್. ಕೆ.ಬೆಂಗಳೂರುಮೊ: 966375045 ಉದಯರಶ್ಮಿ ದಿನಪತ್ರಿಕೆ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಂದರೆ ಸುಮಾರು 75/76 ವರ್ಷಗಳ ಅಧಿಕಾರ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಅತಿ ಹೆಚ್ಚು ದಿನ ಅಧಿಕಾರ ಚಲಾಯಿಸಿದವರ ಪಟ್ಟಿಯಲ್ಲಿ ಈಗಲೂ ಇನ್ನೂ ಮುಂದುವರಿಯುತ್ತಿರುವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ದಾಖಲೆಗೆ ಪಾತ್ರರಾಗಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಹೇಳುತ್ತಾ.. ಈ ರೀತಿಯ ಚುನಾವಣಾ ರಾಜಕೀಯದಲ್ಲಿ ಮುಖ್ಯಮಂತ್ರಿಗಳ, ಅದರಲ್ಲೂ ಇನ್ನೂ ಅಧಿಕಾರದಲ್ಲಿ ಮುಂದುವರಿಯುತ್ತಿರುವ ವ್ಯಕ್ತಿಯ ಬಗ್ಗೆ ವಿಮರ್ಶೆ ಮಾಡುವುದು ಒಂದು ದೊಡ್ಡ ಸವಾಲು. ಇದು ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ಇದರ ವಿಮರ್ಶೆಯ ಮಾನದಂಡಗಳೇನು ? ವಿಮರ್ಶೆಯನ್ನು ಯಾವ ದೃಷ್ಟಿಕೋನದಲ್ಲಿ ತೆಗೆದುಕೊಂಡು ಹೋಗಬೇಕು ? ಯಾವ ಆಧಾರದ ಮೇಲೆ ಇವರ ಕೊಡುಗೆಗಳನ್ನು ಹೇಗೆ ವಿಮರ್ಷಿಸಬೇಕು ? ಹಾಗೆಯೇ ಇವರ ದೌರ್ಬಲ್ಯಗಳನ್ನು ಹೇಗೆ ಪಟ್ಟಿ ಮಾಡಬೇಕು ಎಂಬುದು ಒಂದು ಸವಾಲಾಗಿಯೇ ಉಳಿಯುತ್ತದೆ. ಜೊತೆಗೆ ಸಹಜವಾಗಿಯೇ ಇಂದಿನ ಚುನಾವಣಾ ರಾಜಕೀಯದಲ್ಲಿ ಮನಸ್ಸುಗಳು ಒಡೆದು ಸೈದ್ಧಾಂತಿಕವಾಗಿಯೂ, ಪಕ್ಷವಾಗಿಯೂ ಎರಡು ಭಿನ್ನ ನೆಲೆಗಳು ಸೃಷ್ಠಿಯಾಗಿವೆ. ಒಂದು ಸೈದ್ಧಾಂತಿಕತೆ…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಅದೆಷ್ಟೋ ದಿನಗಳಿಂದ ಹಗಲು ರಾತ್ರಿ ಪ್ರಯತ್ನಿಸಿದರೂ ನಿನ್ನನ್ನು ಮರೆಯಲಾಗುತ್ತಿಲ್ಲ. ನಿನ್ನ ನೆನಪುಗಳು ತಲೆಯಿಂದ ಆಚೀಚೆ ಕದಲದೇ ಕರಗದ ಗುಡ್ಡದಂತೆ ಕುಳಿತುಕೊಂಡು ಬಿಟ್ಟಿವೆ. ಅದ್ಯಾಕೋ ಮರೆಯಲಾಗುತ್ತಿಲ್ಲ. ಮರೆಯಬೇಕೆಂದಷ್ಟು ಹಟ ಹಿಡಿದರೂ ನಾ ಮುಂದು ತಾ ಮುಂದು ಎಂದು ಮನಃಪಟಲದ ಮೇಲೆ ನೆನಪಿಗೆ ಬಂದು ಕಾಡುತ್ತವೆ. ಹೀಗೇಕೆ? ಅಂತ ಹೃದಯ ನೂರಾರು ಬಾರಿ ಪ್ರಶ್ನಿಸಿದರೂ ಮನಸ್ಸು ತನ್ನ ಮತುಗಳನ್ನು ಹೇಳಲಾಗದೇ ತನ್ನ ನಾಲಿಗೆಗೆ ದೊಡ್ಡದೊಂದು ಬೀಗ ಹಾಕಿಕೊಂಡು ತನ್ನೊಳಗೆ ಮಾತುಗಳನ್ನು ಬಂಧಿಸಿಟ್ಟು ಮೌನದಲ್ಲೇ ಕ್ಷಣ ಕ್ಷಣವೂ ನನ್ನನ್ನು ಕೊಲ್ಲುತ್ತಿದೆ. ನಿನ್ನೊಂದಿಗೆ ಕಳೆದ ಒಲವಿನ ನೆನಪುಗಳನು ಬಿಟ್ಟು ಬಿಡದೇ ಮನದಾಗಸದಿಂದ ಮಳೆಯ ಹನಿಗಳಂತೆ ಸುರಿಯುತ್ತಿವೆ. ನೀ ದೂರವಿದ್ದರೂ ನಿನ್ನ ನೆನಪುಗಳು ಮಾತ್ರ ಹೃದಯಕ್ಕೆ ತೀರಾ ತೀರಾ ಹತ್ತಿರ ಬದುಕಿನ ಪಯಣದಲ್ಲಿ ಸಿಹಿ ಜೇನಿನಂಥ ನಿನ್ನ ಪ್ರೀತಿಯ ನೆನಪುಗಳು ನನ್ನವು.ಬದುಕಲು ಅದೆಷ್ಟೊ ದಾರಿಗಳಿವೆ. ಪ್ರೀತಿಯಲ್ಲಿ ಕವಲು ದಾರಿಯಲ್ಲಿ ನಿಂತ ನನಗೆ ನನ್ನ ಕಂಗಳಿನ ತುಂಬ ನೀನೇ ಬಂದೇ…

Read More

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ರಾಜ್ಯದ ಅತಿ ಎತ್ತರದ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಅನಾವರಣ | ದಕ್ಷಿಣ ಭಾರತದ ಮೊಟ್ಟ ಮೊದಲ ಸೈಕ್ಲಿಂಗ್ ವೆಲೋಡ್ರೋಮ್ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಜನರ ಒತ್ತಾಸೆಯಂತೆ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಹಾಗೂ ವಿಜಯಪುರ ನಗರದಲ್ಲಿ 160 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭರವಸೆ ನೀಡಿದರು.ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ವಿಜಯಪುರ ನಗರ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಪ್ರತಿಷ್ಠಾಪಿಸಲಾದ ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರತಿಮೆ ಅನಾವರಣ, ಬಸ್ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ ನಾಮಕರಣ, ಸೈಕ್ಲಿಂಗ್ ವೆಲೋಡ್ರೋಮ್ ಉದ್ಘಾಟನೆ, ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಅವರು ಮಾತನಾಡಿದರು.ಈಗಾಗಲೇ ಘೋಷಿಸಿದಂತೆ ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕ್ರಮ ವಹಿಸಲಾಗುವುದು. ರಾಜ್ಯದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಮಕ್ಕಳಲ್ಲಿ ಸಾಕ್ಷರತೆ ಅಡಿಪಾಯ, ಭಾವನಾತ್ಮಕ ಬೆಳವಣಿಗೆಗೆ ಪೂರಕವಾದ ಕಲೆ, ಸಂಗೀತ ಮತ್ತು ಆಟಗಳ ಮೂಲಕ ಮಕ್ಕಳು ಪರಸ್ಪರ ಕಲಿಕೆಯ ಅನುಭವಗಳನ್ನು ಹಂಚಿಕೊಳ್ಳುವಂತೆ ಪ್ರೋತ್ಸಾಹಿಸುವುದು ಕಲಿಕಾ ಹಬ್ಬದ ಉದ್ದೇಶಗಳಾಗಿವೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸುನೀಲ್ ನಾಯಕ ಹೇಳಿದರು.ಪಟ್ಟಣದ ಕೆಜಿಎಸ್ ಶಾಲೆಯಲ್ಲಿ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಬಸವನ ಬಾಗೇವಾಡಿ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಸಹಯೋಗದಲ್ಲಿ ಮಕ್ಕಳ ಕಲಿಕಾ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮುದಾಯದ ಭಾಗವಹಿಸುವಿಕೆ, ಪೋಷಕರು, ಶಿಕ್ಷಕರು ಮತ್ತು ಸಮುದಾಯದ ಸದಸ್ಯರನ್ನು ಶಿಕ್ಷಣ ಪ್ರಕ್ರಿಯೆಯಲ್ಲಿ ತೊಡಗಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.ಶಿಕ್ಷಕ ಸಂಘದ ಜಿಲ್ಲಾ ಉಪಾಧ್ಯಕ್ಷ ಅಶೋಕ ಗಿಡ್ಡಪ್ಪಗೋಳ ಮಾತನಾಡಿ ಕಲಿಕಾ ಹಬ್ಬ ಇದರಿಂದ ಮಕ್ಕಳಿಗೆ ಆನಂದದಾಯಕ ಕಲಿಕೆಯ ಕೌಶಲ್ಯಗಳನ್ನು ನೀಡಿ, ಸೃಜನಶೀಲತೆ ಮತ್ತು ಸಹಯೋಗವನ್ನು ಬೆಳೆಸುವ ಒಂದು ಶೈಕ್ಷಣಿಕ ಉತ್ತಮ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಎನ್. ತಡಲಗಿ ಮಾತನಾಡಿ ಇಂತಹ ಕಲಾಜಾತಾಗಳು, ಅಕ್ಷರ ಬಂಡಿಗಳು, ಮಕ್ಕಳ ನೃತ್ಯಗಳು…

Read More

ಉದಯರಶ್ಮಿ ದಿನಪತ್ರಿಕೆ ಗದಗ: ಉತ್ತರ ಕರ್ನಾಟಕ ಕಲಾವಿದರ ಮತ್ತು ಕಲಾ ಪೋಷಕರ ಸಂಘಟನೆಯಾದ ಕಲಾ ವಿಕಾಸ ಪರಿಷತ್ ಗದಗ ಮತ್ತು ರೋಟರಿ ಗದಗ ಸೆಂಟ್ರಲ್ ಗದಗ. ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಲಾ ವಿಕಾಸ ಪರಿಷತ್ ರಜತ ಮಹೋತ್ಸವ ಕಾರ್ಯಕ್ರಮ ೬ ನೆಯ ಕಾರ್ಯಕ್ರಮವಾದ, ಜ್ಯುಗಲಬಂದಿ ಸಂಗೀತದೊಂದಿಗೆ ರೋಟರಿ ಪರಿವಾರ ಸಭೆ ಸಮಾರಂಭವು ೧೦ ನೇ ಜನೇವರಿ ೨೦೨೬ ಶನಿವಾರ ಸಂಜೆ ೬ ಗಂಟೆಗೆ ಸೇವಾಲಾಲ ನಗರದ ‘ರೋಟರಿ ಭವನ’ ದಲ್ಲಿ ಹಮ್ಮಿಕೊಳ್ಳಲಾಗಿದೆ.ಸಭೆಯ ಅಧ್ಯಕ್ಷತೆಯನ್ನು ರೋಟರಿ ಗದಗ ಸೆಂಟ್ರಲ್ ಅಧ್ಯಕ್ಷರಾದ ರೋ. ಚೇತನ ಬಿ. ಅಂಗಡಿ ಇವರು ವಹಿಸಿಕೊಳ್ಳುವರು. ರೋಟರಿ ಅಸಿಸ್ಟೆಂಟ್ ಗೌರ್ನರ್ ಗದಗ ಡಿಸ್ಟಿಕ್ ಮತ್ತು ಕಲಾ ವಿಕಾಸ ಪರಿಷತ್ ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ ರೋ. ವಿ. ಕೆ. ಗುರುಮಠ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಅಧ್ಯಕ್ಷರಾದ ಶ್ರೀ ವಿವೇಕಾನಂದಗೌಡ ಪಾಟೀಲ್, ಮಾಜಿ, ರೋಟರಿ ಅಸಿಸ್ಟೆಂಟ್ ಗೌರ್ನರ್ ಗದಗ ಡಿಸ್ಟಿಕ್, ರೋ. ಮಲ್ಲಿಕಾರ್ಜುನ ಐಲಿ, ಕಲಾ ವಿಕಾಸ ಪರಿಷತ್…

Read More

ಲೇಖನ- ಡಾ.ಸಂತೋಷ ನವಲಗುಂದ (ಮಳ್ಳಿ) ಪತ್ರಕರ್ತ-ಸಾಹಿತಿವಿಜಯಪುರ ಉದಯರಶ್ಮಿ ದಿನಪತ್ರಿಕೆ ಅದೊಂದು ದಿನ. ಸಾಯಂಕಾಲದ ಹೊತ್ತು. ತೋಟದಲ್ಲಿ ಫಲ ತುಂಬಿಕೊಂಡ ಮಾವಿನ ಮರಕ್ಕೆ ಎಲ್ಲೋ ದೂರದಿಂದ ಬಾಲಕನೊಬ್ಬ ಎಸೆದ ಕಲ್ಲು ಗುರಿತಪ್ಪಿ ಅಲ್ಲೇ ತೋಟದ ಬದುವಿನಲ್ಲಿ ವಾಯುವಿಹಾರದಲ್ಲಿದ್ದ ತೋಟದ ಮಾಲೀಕನ ಹಣೆಗೆ ಬಡೆದ ಕಲ್ಲು ಗಾಯ ಮಾಡಿತು. ಕಲ್ಲು ಎಸೆದ ಬಾಲಕನಿಗೆ ಎಲ್ಲಿಲ್ಲದ ಭಯ ಕಾಡತೊಡಗಿತು. ಮಾಲೀಕ ಅತ್ಯಂತ ವಿನಯದಿಂದಲೇ ಆ ಬಾಲಕನನ್ನು ತಮ್ಮತ್ತ ಕರೆದು ಹಣ್ಣು ತಿನ್ನುವ ಆಸೆಯಿಂದ ಮರಕ್ಕೆ ಎಸೆದ ಕಲ್ಲು ನನ್ನನ್ನು ತಾಗಿತು. ನೀನೇನು ಬೇಕು ಅಂತ ಹೊಡೆದಿಲ್ಲ ಎನ್ನುವುದು ನನಗೆ ಗೊತ್ತು ಎಂದು ಬಾಲಕನಿಗೆ ತಿಳಿ ಹೇಳಿ, ನಿನ್ನ ತಂದೆಯನ್ನು ಕರೆದುಕೊಂಡು ಬಾ ಎಂದು ಹೇಳಿದರು. ಓಡೋಡಿ ಹೋದ ಬಾಲಕ ತನ್ನ ತಂದೆಯೊಂದಿಗೆ ತೋಟದ ಮಾಲೀಕನಲ್ಲೆ ಮರಳಿ ಬಂದ. ಆಗ ತಂದೆ, ಮಗ ಮಾಡಿದ ತಪ್ಪನ್ನು ತಿಳಿದು, ಭಯದಿಂದಲೇ ‘ಒಡೆಯ! ಮಗು ಮರದಲ್ಲಿನ ಮಾವಿನ ಹಣ್ಣಿಗೆ ಹೊಡೆದ ಕಲ್ಲು ತಮಗೆ ಬಡೆದಿದೆ. ಅದಕ್ಕೆ ನಾನು ಕ್ಷಮೆಯಾಚಿಸುವೆ. ಏನೂ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಬೆಂಗಳೂರಿನ ಕವಾಯತ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು ಹೊಯ್ಸಳ-26 ವಾಹನದ ಪೊಲೀಸ್‌ರಾಗಿ ಕಾರ್ಯನಿರ್ವಹಿಸುತ್ತಿರುವ ಶಂಕರಲಿಂಗ ಯಲ್ಲಪ್ಪ ಕುಂಬಾರ ಅವರಿಗೆ ಬೆಂಗಳೂರು ನಗರ ಭಾ.ಪೊ.ಸೇ. ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್ ಅವರಿಂದ ಅಭಿನಂದಿನಾ ಪ್ರಶಂಸಾ ಪ್ರಮಾಣ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.ಶಂಕರಲಿಂಗ ಯಲ್ಲಪ್ಪ ಕುಂಬಾರ ಎ.ಹೆಚ್.ಸಿ-22064 ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬರಗುಡಿ ಗ್ರಾಮದವರಾದ ಮತ್ತು ಸುಮಾರು 15 ವರ್ಷ ಈ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿದ್ದು,ಬೆಂಗಳೂರು ಹಲಸೂರು ಗೇಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು 2 ತಿಂಗಳ (ಹಸಗೂಸು) ಶಿಶುವನ್ನು ಸುರಕ್ಷೀತವಾಗಿ ರಕ್ಷಿಸಿ, ವಾಣಿವಿಲಾಸ್ ಆಸ್ಪತ್ರೆಗೆ ಆರೈಕೆಗಾಗಿ ದಾಖಲಿಸಿ ಉತ್ತಮ ಕಾರ್ಯ ನಿರ್ವಹಿಸಿರುವ ಪ್ರಯುಕ್ತ ಅವರಿಗೆ ಅಭಿನಂದಿಸಿ ಈ ಪ್ರಶಂಸಾ ಪ್ರಮಾಣ ಪತ್ರವನ್ನು ಸೀಮಾಂತ್ ಕುಮಾರ್ ಸಿಂಗ್, ಭಾ.ಪೊ.ಸೇ. ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಅವರು ಸರಳ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು.ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಉತ್ತಮ ಕೆಲಸ ಮಾಡಿ ಸಾಧನೆಗೈದ ಪೊಲೀಸ್‌ರಿಗೆ ಪ್ರಶಸ್ತಿ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಸರ್ಕಾರದ ಪಂಚ್ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಮಟ್ಟದಲ್ಲಿ ವ್ಯವಸ್ಥಿತವಾಗಿ ಅನುಷ್ಠಾನಗೊಂಡಿದ್ದು, ಇನ್ನೂ ಹೆಚ್ಚಿನ ಫಲಾನುಭವಿಗಳಿಗೆ ಸರ್ಕಾರದ ಪಂಚ ಗ್ಯಾರಂಟಿಗಳನ್ನು ತಲುಪಿಸಲು ತಾಲ್ಲೂಕು ಮಟ್ಟದ ಅಧಿಕಾರಿಗಳು ಶ್ರಮಿಸಬೇಕೆಂದು ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಪ್ರಶಾಂತ ಕಾಳೆ ಸೂಚನೆ ನೀಡಿದರು. ಅವರು ಗುರುವಾರ ಇಂಡಿ ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾ ಭವನದಲ್ಲಿ ಏರ್ಪಡಿಸಿದ್ದ ಪಂಚ್ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಭೆಯಲ್ಲಿದ್ದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಭೀಮಾಶಂಕರ ಕನ್ನೂರ ಮಾತನಾಡಿ, ಗೃಹಲಕ್ಷ್ಮೀ, ಗ್ರಹ ಜ್ಯೋತಿ, ಶಕ್ತಿ ಯೋಜನೆ, ಯುವ ನಿಧಿ ಹಾಗೂ ಅನ್ನ ಭಾಗ್ಯ ಯೋಜನೆಗಳ ಪ್ರಗತಿಯ ಮಾಹಿತಿಯನ್ನು ಸಭೆಗೆ ತಿಳಿಸಿದರು.ಸಭೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರಾದ ಮಹೇಶ ಹೊನ್ನಬಿಂದಗಿ, ಸಂಜೀವಕುಮಾರ ನಾಯ್ಕೊಡಿ, ಸತೀಶ ಹತ್ತಿ, ನಿರ್ಮಲಾ ತಳಕೇರಿ, ಶೈಲಜಾ ಜಾಧವ, ಶಶಿಕುಮಾರ ಮಠ, ಸಿದ್ದು ಕಟ್ಟೀಮನಿ, ಪ್ರಭು ಕುಂಬಾರ, ಸಂಕೇತ ಜ್ಯೋಶಿ, ಮಲ್ಲೇಶ ಬೋಸಗಿ, ರುದ್ರುಗೌಡ ಅಳಗೊಂಡ, ಭೀಮರಾಯ ಮೇತ್ರಿ, ಸೋಮಣ್ಣ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ದ್ವಿಚಕ್ರ ವಾಹನದ ಮೇಲೆ ಕುರಿ ಕದ್ದುಕೊಂಡು ಸಾಗುತ್ತಿದ್ದ ಕಳ್ಳರನ್ನು ರೈತನೋರ್ವ ಸಿನಿಮಿಯ ರೀತಿಯಲ್ಲಿ ವಾಹನದ ಮೇಲೆ ಬೆನ್ನಟ್ಟಿದಾಗ ಕುರಿಯನ್ನು ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ಶಾಂತಿ ನಗರದಲ್ಲಿರುವ ಶ್ರೀನಿವಾಸ ತಳವಾರ ಎಂಬ ರೈತನ ಮನೆಯ ಮುಂದೆ ಕಟ್ಟಿರುವ ಕುರಿಯನ್ನು ಬಿಚ್ಚಿಕೊಂಡು ಕಳ್ಳರು ದ್ವಿಚಕ್ರವಾಹನದಲ್ಲಿ ಓಡಿ ಹೋಗುತ್ತೀರುವ ಸಂದರ್ಭದಲ್ಲಿ ಅವರನ್ನು ರೈತ ಶ್ರೀನಿವಾಸ್ ತಳವಾರ ದ್ವಿಚಕ್ರದ ವಾಹನದ ಬೆನ್ನಟ್ಟಿ ಅವರನ್ನು ಹಿಡಿಯಲು ಪ್ರಯತ್ನ ಮಾಡಿದ್ದಾರೆ.ಆದರೆ ಕಳ್ಳರು ಇಂಡಿ ನಗರದ ಅಗ್ನಿಶಾಮಕ ಠಾಣೆ ಹತ್ತಿರ ಕುರಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.ಒಂದೇ ದ್ವೀಚಕ್ರವಾಹನದಲ್ಲಿದ್ದ ಮೂವರು ಕಳ್ಳರು ವೆಹಿಕಲ್ ಸಂಖ್ಯೆ ಕೆಎ 28 ಕ್ಯೂ 5523 ಹೊಂದಿದ್ದು ಇಂಡಿ ನಗರ ಸೇರಿಕೊಂಡು ಪರಾರಿಯಾಗಿದ್ದಾರೆ.ಇಂಡಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಹೆಚ್ ಡಿ ಕೋಟೆ ತಾಲೂಕು ಅಭಿವುದ್ಧಿಯತ್ತ ಸಾಗುತ್ತಿದೆಯಾ? | ಕಾಂಗ್ರೆಸ್ಸಿಗರೇ ಕೇಳುತ್ತಿರುವ ಪ್ರಶ್ನೆ ಉದಯರಶ್ಮಿ ದಿನಪತ್ರಿಕೆ ವರದಿ: ಶ್ರೀಕಂಠ ಈಶ್ವರ್ಹೆಚ್ ಡಿ ಕೋಟೆ: ಅಪಾರ ವನಜನ ಸಂಪತ್ತು ಹೊಂದಿರುವ ಹೆಚ್ ಡಿ ಕೋಟೆ ತಾಲೂಕು ಕೊಂಚ ಮಟ್ಟಿಗೆಯಾದರೂ ಅಭಿವೃದ್ಧಿ ಕಂಡಿದ್ದೀಯಾ? ಶಾಸಕ ಅನಿಲ್ ಚಿಕ್ಕಮಾದು ಕೊಟ್ಟ ಭರವಸೆಗಳಲ್ಲಿ ಕೆಲ ಭರವಸೆಗಳನ್ನಾದರೂ ಈಡೇರಿಸಿದ್ದಾರಾ? ಎರಡು ಬಾರಿ ಗೆದ್ದು ಇತಿಹಾಸ ನಿರ್ಮಿಸಿರುವ ಶಾಸಕರು, ಮತದಾರರ ಋಣ ತೀರಿಸುವ ಪ್ರಯತ್ನ ಮಾಡುತ್ತಿದ್ದಾರಾ? ಇಲ್ಲ ನನಗೆ ಈ ಕ್ಷೇತ್ರದಲ್ಲಿ ವೋಟ್ ಬ್ಯಾಂಕ್ ಇದೆ. ವಿಪಕ್ಷಗಳು ವೀಕ್ ಆಗಿವೆ. ಯಾರು ಕೂಡ ನನ್ನ ವಿರುದ್ಧ ಧ್ವನಿಯೆತ್ತಿ ಮಾತನಾಡಲ್ಲ ಎಂದು ಜವಾಬ್ದಾರಿ ಮರೆತು ಕೇವಲ ಸಭೆ, ಸಮಾರಂಭ, ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿದ್ದಾರಾ? ಇದು ನಾವಲ್ಲ, ಜನರೇ, ಅದರಲ್ಲಿ ಬಹುತೇಕ ಮಂದಿ ಕಾಂಗ್ರೆಸ್ಸಿಗರೇ ಕೇಳುತ್ತಿರುವ ಪ್ರಶ್ನೆ.ಕಬಿನಿ ಡ್ಯಾಂನಿಂದ ಸದ್ದು ಮಾಡುತ್ತಿದ್ದ ಹೆಚ್ ಡಿ ಕೋಟೆ ಹಾಗೂ ಸರಗೂರು ತಾಲೂಕುಗಳನ್ನು ಒಳಗೊಂಡಿರುವ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರ, 2025ರಲ್ಲಿ ಹುಲಿ ದಾಳಿಯಿಂದ ರಾಷ್ಟ್ರ…

Read More