Author: editor.udayarashmi@gmail.com

ವಿಜಯಪುರದ ಎಕ್ಸಲಂಟ್ ಕಾಲೇಜಿನಲ್ಲಿ ರಾಷ್ಟ್ರೀಯ ಯುವದಿನ | ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜ್ಞಾನವನ್ನು ಹೊರತುಪಡಿಸಿ ಎಲ್ಲವನ್ನು ತೊರೆದವನು ಸನ್ಯಾಸಿಯಾಗುತ್ತಾನೆ. ಆದರೆ ಎಲ್ಲ ಸನ್ಯಾಸಿಗಳು ಸಹ ವೀರ ಸನ್ಯಾಸಿಗಳು ಆಗುವುದಕ್ಕೆ ಸಾಧ್ಯವಿಲ್ಲ. ಇಂದ್ರಿಯಗಳ ಮೇಲೆ ಗೆಲುವು ಸಾಧಿಸಿ, ಭಾರತದ ಜ್ಞಾನ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದರು ವೀರ ಸನ್ಯಾಸಿ ವಿವೇಕಾನಂದ ಎಂದು ಕರೆಸಿಕೊಂಡರು. ಅಂದಿನಿಂದ ಇಂದಿನ ವರೆಗೂ ಯುವಕರ ಪಾಲಿನ ಚೈತನ್ಯವಾಗಿ ಗುರುತಿಸಿಕೊಂಡರು ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ ಹೇಳಿದರು.ವೀರ ಸನ್ಯಾಸಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ನಗರದ ಎಕ್ಸಲಂಟ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಧಾರವಾಡದ ಎಕ್ಸಲಂಟ್ ನೀಟ್ ಅಕಾಡೆಮಿಯ ಪ್ರಾಂಶುಪಾಲ ಡಾ.ಜಗದೀಶ ಚಿತ್ತರಗಿ; ಯುವಕರಲ್ಲಿ ಜಾಗೃತಿ ಮೂಡಿಸಿದ ಸ್ವಾಮಿ ವಿವೇಕಾನಂದರು ಇಂದು ದೇಹದಿಂದ ದೂರಾಗಿದ್ದರು ಸಹ ಅವರ ವಿಚಾರ…

Read More

ನಮ್ಮಲ್ಲಿ ಯಾವ ಗೊಂದಲ ಇಲ್ಲ | ಊಹಾಪೋಹ ಚರ್ಚೆ ಕೇವಲ ಮಾಧ್ಯಮದ ಸೃಷ್ಟಿ | ಸಿಎಂ ಸಿದ್ದರಾಮಯ್ಯ ಹೇಳಿಕೆ ಮೈಸೂರು: ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ಜೋರಾಗಿದ್ದು, ಒಂದು ಕಡೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೊಟ್ಟ ಮಾತು ನೆನಪಿಸುತ್ತಿದ್ದರೆ ಮತ್ತೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರ ಮಾತೇ ಅಂತಿಮ ಎನ್ನುತ್ತಿದ್ದಾರೆ.ಸಿಎಂ ಕುರ್ಚಿ ಕಾಳಗದ ನಡುವೆಯೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಮಂಗಳವಾರ ಮೈಸೂರಿನ ಮಂಡಕಳ್ಳಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯನ್ನ ಅವರನ್ನು ಜಂಟಿಯಾಗಿ ಸ್ವಾಗತಿಸಿದರು.ತಮಿಳುನಾಡಿಗೆ ತೆರಳಲು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಆಗಮಿಸಿದ ರಾಹುಲ್ ಗಾಂಧಿ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿ, ಮೈಸೂರು ಅರಮನೆ ಮಾದರಿಯನ್ನು ಉಡುಗೊರೆಯಾಗಿ ನೀಡಿದರು. ಈ ವೇಳೆ ಸಿಎಂ ಹಾಗೂ ಡಿಸಿಎಂ ಕೆಲ ನಿಮಿಷಗಳ ಕಾಲ ರಾಹುಲ್ ಗಾಂಧಿ ಜತೆ ಮಹತ್ವದ ಚರ್ಚೆ ನಡೆಸಿದ್ದಾರೆ…

Read More

ಲೇಖನ- ಮಲ್ಲಪ್ಪ ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಬಸವಾದಿ ಶರಣರು ಸಮಾಜದಲ್ಲಿ ಸಮಾನತೆ, ಸಮಷ್ಠಿ ಭಾವ ಮತ್ತು ಭಾವೈಕ್ಯತೆಯನ್ನು ಮೂಡಿಸುತ್ತಾ, ಸಾಮಾಜಿಕ ಸುಧಾರಣೆ ಮಾಡುವಲ್ಲಿ ಶ್ರಮಿಸಿದವರು. ವಚನಕಾರರು ತಮ್ಮ ವಚನ ಸಿದ್ದಾಂತದ ಮೂಲಕ ಸಮಾಜದಲ್ಲಿನ ಲಿಂಗ, ಜಾತಿ, ಮತ, ಪಂಥ, ಪಂಗಡಗಳ ಭೇದಗಳನ್ನು ತೊಲಗಿಸುವಲ್ಲಿ ಹೋರಾಡಿದರು. ಸಾಮಾಜಿಕ ಅರಿವು, ಧರ್ಮತತ್ವ ಮತ್ತು ವೈಯಕ್ತಿಕ ಬದುಕಿನ ಆಳವಾದ ಚಿಂತನೆಗಳನ್ನು ಪ್ರತಿಪಾದಿಸುತ್ತಾ, ಸಮುದಾಯದ ಒಳಿತಿಗಾಗಿ ಕೆರೆ ಕಟ್ಟೆ ನಿರ್ಮಾಣದಂತಹ ಕರ್ಮಯೋಗವನ್ನು ಮರೆದ ಶ್ರೇಷ್ಠ ಶರಣರೆಂದರೆ ಶಿವಯೋಗಿ ಸಿದ್ದರಾಮೇಶ್ವರರು.ಮಹಾರಾಷ್ಟçದ ಸೋಲಾಪೂರ ಜಿಲ್ಲೆಯ ಸೊನ್ನಲಿಗೆ ಎಂಬ ಗ್ರಾಮದಲ್ಲಿ ಮುದ್ದುಗೌಡ-ಸುಗ್ಗಲೆ ದಂಪತಿಗೆ ಧೂಳಿ ಮಾಕಾಳ ರೇವಣಸಿದ್ದ ದೇವರ ವರದಿಂದ ಜನಿಸಿದ ಶಿವಯೋಗಿ ಸಿದ್ದರಾಮೇಶ್ವರ ಅವರು ಬಾಲ್ಯದಲ್ಲಿಯೇ ಒಬ್ಬ ಮುಗ್ಧ ಭಕ್ತನಾಗಿದ್ದರು. ಶಿವಭಕ್ತನಾಗಿದ್ದ ಇವರು ಶಿವಯೋಗ ಮಾರ್ಗದಿಂದ ಪರಮಶಿವನ ದರ್ಶನ ಪಡೆಯಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಸೊನ್ನಲಿಗೆಯಿಂದ ಶ್ರೀಶೈಲದತ್ತ ನಡೆದುಕೊಂಡ ತೆರಳಿ ಕೊನೆಗೆ ಮಲ್ಲಿಕಾರ್ಜುನ ದರ್ಶನ ಪಡೆದವರು. ಕೊಡುಗೆಗಳುಬಡವರ ಕಷ್ಟ-ಕಾರ್ಪಣೆಗಳ ನಿವಾರಣೆ, ಸಾಮೂಹಿಕ ವಿವಾಹಗಳ ಜಾರಿಯಂತಹ ಪ್ರಗತಿಪರವಾದ ವಿಚಾರಧಾರೆಗಳನ್ನು ಹೊಂದಿದ್ದ ಶಿವಯೋಗಿ…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಗೆಲುವು ಮರೀಚಿಕೆ ಎನಿಸುತ್ತಿದೆ. ಸೋಲುಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದೇನೆ. ನನ್ನ ಸೋಲಿಗೆ ಯಾರು ಕಾರಣರು ಎಂಬ ಪ್ರಶ್ನೆಗೆ ಮನಸ್ಸು ಬೇರೆಯವರನ್ನು ಹೆಸರಿಸುತ್ತದೆ. ಕೆಲವೊಮ್ಮೆ ಪರಿಸ್ಥಿತಿಯ ಹೆಸರು ಹೇಳಿ ಬಾಯಿ ಮುಚ್ಚಿಸುತ್ತದೆ. ನಾನು ಬಡವ ನನ್ನ ಶಿಕ್ಷಣ ಸರಿಯಿಲ್ಲ ಎಂಬ ನೆಪಗಳು ಬೇರೆ ಈ ಸಾಲಿನಲ್ಲಿ ಬಂದು ನಿಲ್ಲುತ್ತವೆ. ನನಗಿಂತ ಹೀನಾಯ ಸ್ಥಿತಿಯಲ್ಲಿರುವವರು ಗೆದ್ದ ಪ್ರಸಂಗಗಳನ್ನು ನೋಡಿದಾಗ ನನ್ನನ್ನು ಹಿಂದಿಕ್ಕಿದ ಅಂಶಗಳಾದರೂ ಯಾವವು ಎಂದು ತಿಳಿದುಕೊಳ್ಳಲು ಗುರು ಹಿರಿಯರು ತಿಳಿಸುತ್ತಾರೆ. ಕೆಲ ದಿನ ಅತ್ತ ಮುಖ ಮಾಡಿ ನಿಂತು ನಾಯಿ ಬಾಲದಂತೆ ಮತ್ತೆ ಮುದುಡಿ ನಿಲ್ಲುತ್ತದೆ. ಇವು ಗೆಲುವಿನ ಆಕಾಂಕ್ಷೆಯಲ್ಲಿರುವ ಹಲವರ ನೋವಿನ ವಿಚಾರಗಳು. ಗೆಲುವಿನ ಹಾದಿಯಲ್ಲಿರುವ ಮುಳ್ಳುಗಳು ಯಾವವು ಅವುಗಳನ್ನು ತೆಗೆಯುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವಾಗಿ ಇಲ್ಲಿ ಕೆಲ ಅಂಶಗಳಿವೆ ನೋಡೋಣ ಬನ್ನಿ ದುರ್ಬಲತೆ ನಿರ್ವಹಿಸಿಪ್ರತಿಯೊಬ್ಬರಲ್ಲೂ ಶಕ್ತಿ ಮತ್ತು ದೌರ್ಬಲ್ಯಗಳು ಇದ್ದೇ ಇರುತ್ತೇವೆ. ಕೇವಲ ದೌರ್ಬಲ್ಯಗಳಿರುವ ಇಲ್ಲವೇ ಶಕ್ತಿಯನ್ನು ಮಾತ್ರ…

Read More

ಲೇಖನ- ಶಿಲ್ಪಾ ಮೃತ್ಯುಂಜಯ ಮಿಣಜಿಗಿಶಿಕ್ಷಕರು ಕೆ. ಇ. ಬೋರ್ಡ್. ಸೆಂಟ್ರಲ್ ಸ್ಕೂಲ್ಧಾರವಾಡ ಉದಯರಶ್ಮಿ ದಿನಪತ್ರಿಕೆ ವರ್ಷದ ಮೊದಲ ಹಬ್ಬಮಕರ ಸಂಕ್ರಾಂತಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು, ಇದು ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸಂಕ್ರಮಿಸುವ ದಿನವಾಗಿದೆ. ಈ ಹಬ್ಬವು ಉತ್ತರಾಯಣ ಪುಣ್ಯಕಾಲದ ಆರಂಭವನ್ನು ಸೂಚಿಸುತ್ತದೆ. ಮತ್ತು ಈ ಹಬ್ಬವನ್ನು ಭಾರತದಾದ್ಯಂತ ವಿಭಿನ್ನ ನಾಮಗಳಲ್ಲಿ ಆಚರಿಸಲಾಗುತ್ತದೆ.ಹಬ್ಬದ ಮಹತ್ವ ಮಕರ ಸಂಕ್ರಾಂತಿ ಸೌರಮಾನದ ಪರ್ವವಾಗಿದ್ದು, ಸೂರ್ಯ ದೇವರ ಆರಾಧನೆಗೆ ಮೀಸಲಾಗಿದೆ. ಈ ದಿನ ಪವಿತ್ರ ಸ್ನಾನ, ದಾನ ಮತ್ತು ಪೂಜೆಗಳು ಮಹತ್ವದ್ದು; ಎಳ್ಳು-ಬೆಲ್ಲವನ್ನು ಹಂಚುವ ಸಂಪ್ರದಾಯವಿದೆ. ಗಂಗಾ ಸಂಗಮದಲ್ಲಿ ಸ್ನಾನ ಮಾಡುವುದು ಪಾಪ ನಿವೃತ್ತಿಗೆ ಫಲದಾಯಕ ಎಂದು ಪರಸ್ಪರ ಎಲ್ಲ ಕುಟುಂಬದವರು ಸೇರಿ ಬಂಧು ಮಿತ್ರರೊಂದಿಗೆ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಥವಾ ಪವಿತ್ರ ಸ್ಥಳದಲ್ಲಿ ಊಟ ಮಾಡಿ ಬರುವುದು ಐತಿಹ್ಯವಿದೆ ಎಂದು ನಂಬಲಾಗಿದೆ. ಇದೇ ಸಮಯದಲ್ಲಿ ದೇಶಾದ್ಯಂತ ಅನೇಕ ದೇವರ ಜಾತ್ರೆಗಳು ಜರುಗುತ್ತವೆ. ಈ ಆಚರಣೆ ಕರ್ನಾಟಕದಲ್ಲಿ ಎಳ್ಳಿನ ಹಬ್ಬ ಎಂದೇ ಪ್ರಸಿದ್ಧವಾದ ಈ…

Read More

ದೇವರಹಿಪ್ಪರಗಿ: ಸುರಕ್ಷತೆ ಹಾಗೂ ಜಾಗೃತಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದು ಪೊಲೀಸ್ ಠಾಣೆ ಆರಕ್ಷಕ ಉಪನಿರೀಕ್ಷಕ ಪಿ.ಎಮ್.ಚೌರ ಹೇಳಿದರು.ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಶನಿವಾರ ಕಾನೂನು ಸೇವಾ ಸಮೀತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಂದಗಿ ಇವರ ಅಡಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಜರುಗಿದ ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ವಿದ್ಯಾರ್ಥಿಗಳು ರಸ್ತೆಯ ಕುರಿತಾದ ನಿಯಮಗಳನ್ನು ಅರಿತು ಇತರರಿಗೂ ತಿಳುವಳಿಕೆ ನೀಡಬೇಕು ಎಂದು ಹೇಳುತ್ತಾ, ತುರ್ತು ಸೇವೆಗೆಂದು ಇರುವ ವಿವಿಧ ಸೇವೆಗಳ ಬಗ್ಗೆ ಸವಿವರವಾಗಿ ಮಕ್ಕಳಿಗೆ ಮಾಹಿತಿ ನೀಡಿದರು.ವಕೀಲ ಕಾಶೀನಾಥ ಚವ್ಹಾಣ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಅಹಿತಕರ ಘಟನೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ತಿಳಿಸುತ್ತಾ, ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಅವಶ್ಯಕತೆಯನ್ನು ತಿಳಿಸಿದರು.ವಕೀಲರುಗಳಾದ ರವಿ ನಾಯಕ, ರಾಜಕುಮಾರ ಬಿರಾದಾರ, ಪ್ರೌಢಶಾಲೆ ಮುಖ್ಯಶಿಕ್ಷಕ ಈರಣ್ಣ ನರೂಣಿ ಹಾಗೂ ಶಿಕ್ಷಕ ಜಿ.ಪಿ.ಬಿರಾದಾರ ಮಾತನಾಡಿದರು.ವಕೀಲ ಮಲ್ಲಿಕಾರ್ಜುನ ಪಡಗಾನೂರ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಏಳಿ ಏದ್ದೇಳಿ ! ಎಂದು ವಿವೇಕಾನಂದರು ದೇಶದ ಯುವಕರು ಜಾಗೃತಗೊಳ್ಳಲು ಹೇಳಿದ ಮಾತು ಎಂದು ಜಿ ಆರ್ ಕುಲಕರ್ಣಿ ಹೇಳಿದರು.ಜ.11 ರಂದು ನಗರದ ಪಿಡಿಜೆ ಹೈಸ್ಕೂಲ್ ಸಭಾ ಭವನದಲ್ಲಿ ನಡೆದ ವಿವೇಕಾನಂದ 163 ನೇ ಜಯಂತೋತ್ಸವ ಅಂಗವಾಗಿ ಆನಂದ ಗೋಡಸೆ ದಂಪತಿಗಳ ಪ್ರಾಯೋಜಿತ, “ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು (ರಿ) ವಿಜಯಪುರ ಜಿಲ್ಲಾ ಸಮಿತಿ” ಆಯೋಜನೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತಾಡಿದ ಅವರು ‘ ವಿವೇಕಾನಂದರಿಗೆ ಹಿಂದೂಧರ್ಮ ಆಳ ಅಧ್ಯಯನ ಜೊತೆಗೆ ಅಪರಿಮಿತವಾದ ದೇಶಭಕ್ತಿ , ರಾಷ್ಟ್ರೀಯ ಕಲ್ಪನೆ ಇತ್ತು. ಮಹಾತ್ಮ ಗಾಂಧಿಜೀ , ಅರವಿಂದರು , ಸುಭಾಷ್ ಚಂದ್ರ ಬೋಸ್ , ಡಾ.ಹೆಡ್ಗೆವಾರ್ , ಸಾವರ್ಕರ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು , ರವೀಂದ್ರನಾಥ್ ಟಾಗೋರ್ ಅವರಿಗೂ ವಿವೇಕಾನಂದರು ಪ್ರೇರಣೆಯಾಗಿದ್ದರು. ಅಮೆರಿಕದ ಶಿಕ್ಯಾಗೊ ಭಾಷಣದಿಂದ ಹಿಂದೂಧರ್ಮದ ಸಂಸ್ಕಾರ, ತತ್ವಗಳು ಜಗತ್ತಿಗೆ ಅನಾವರಣವಾದವು. ಅವರ ಗುರುಭಕ್ತಿ, ವಿನಯ , ಸಂಸ್ಕಾರ, ಶ್ರದ್ಧೆ – ಸಂಕಲ್ಪಗಳಿಂದ ಅವರು ಆಧ್ಯಾತ್ಮಿಕ ಸಾಧನೆ…

Read More

ಸ್ವಾಮಿ ವಿವೇಕಾನಂದ ಜಯಂತಿ | ಪುತ್ಥಳಿಗೆ ಮಾಲಾರ್ಪಣೆ ಮೂಲಕ ಶಾಸಕ ಯತ್ನಾಳರಿಂದ ಗೌರವ ನಮನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪಸರಿಸಿದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರು ಹೇಳಿದರು.ನಗರದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಅವರು ಮಾತನಾಡಿದರು.ಭಾರತದ ಸಂಸ್ಕೃತಿ, ಪರಂಪರೆ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪಸರಿಸಿದ ಸ್ವಾಮಿ ವಿವೇಕಾನಂದರು ಯುವ ಮನಸ್ಸುಗಳಿಗೆ ಪ್ರೇರಣಾಶಕ್ತಿ. ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಭವ್ಯ ಭಾರತ ನಿರ್ಮಾಣ ಮಾಡೋಣ ಎಂದು ಹೇಳಿದರು.ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಸದಸ್ಯರುಗಳಾದ ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ರಾಜಶೇಖರ ಕುರಿಯವರ, ಜವಾಹರ ಗೋಸಾವಿ, ವಿಠ್ಠಲ ಹೊಸಪೇಟ, ಕುಮಾರ ಗಡಗಿ, ಗಿರೀಶ ಬಿರಾದಾರ, ಮಳುಗೌಡ ಪಾಟೀಲ, ಅಶೋಕ ನ್ಯಾಮಗೌಡ, ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ಚಂದ್ರಶೇಖರ ಚೌದರಿ, ಮುಖಂಡರಾದ ರಾಜು…

Read More

ಉದಯರಶ್ಮಿ ದಿನಪತ್ರಿಕೆ ಹೊನವಾಡ: ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪಸರಿಸಿದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು. ಯುವ ಮನಸ್ಸುಗಳ ಪ್ರೇರಣಾ ಶಕ್ತಿಯಾದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ ಇದು ಅತ್ಯಂತ ಸಂತೋಷದ ವಿಷಯ ಎಂದು ಶಿಕ್ಷಕ ಧರೆಪ್ಪ ಸಿದ್ನಾಥ ಹೇಳಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಬಸವಂತರಾಯ ಪದವಿ ಪೂರ್ವ ಕಾಲೇಜಿನಲ್ಲಿ ಸಿಡಿಲ ಸಂತ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 163ನೇ ಜಯಂತಿಯನ್ನು ಆಚರಿಸಲಾಯಿತು.ವಿವೇಕಾನಂದರ ಆದರ್ಶ, ಬೋಧನೆಗಳು ಯುವ ಜನಾಂಗಕ್ಕೆ ಇಂದಿಗೂ, ಎಂದಿಗೂ ಅನುಪಾಲನಾ ಸೂತ್ರಗಳು. ಅವರ ನಡೆ- ನುಡಿ, ಅವರ ಜೀವನದ ಪ್ರಸಂಗಗಳು ದಂತಕಥೆಗಳಾಗಿ ಬೆಳಗುತ್ತಿವೆ ಎಂದು ಉಪನ್ಯಾಸಕರಾದ ಕೃಷ್ಣಾ ಕಾಳೆ ಮಾತನಾಡಿದರು.ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ಎಂ ಜಿ ಕುಲಕರ್ಣಿ ಎಂ ಎಸ್ ಹಿರೇಮಠ ಎಸ್ ಎ ವಾಲಿಕಾರ ಮಂಜುನಾಥ ಪಾತ್ರೊಟ ನಿವೇದಿತಾ ಹಿರೇಮಠ ಐ ಕೆ ನದಾಪ ನವೀನ ಹಿರೇಮಠ ರಜನಿ ಗುದಗೇನವರ ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಂದೆ ತಾಯಿಗಳ ಸೇವೆಮಾಡುವುದೇ ಬಹಳ ಮುಖ್ಯ ಅವರನ್ನು ಅನಾಥಾಶ್ರಮದಲ್ಲಿಟ್ಟು ನೂರಾರು ದೇವರಿಗೆ ಹರಕ್ಕೆ ಮಾಡಿದರೆ ಪ್ರಯೋಜನವಿಲ್ಲಾ ಎಂದು ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಹೇಳಿದರು.ತಾಲ್ಲೂಕಿನ ಕೋಟ್ಯಾಳ ಗ್ರಾಮದಲ್ಲಿ ಭಾನುವಾರ ಲಿಂಗೈಕ್ಯ ನಿಜಲಿಂಗಪ್ಪ ಅಳ್ಳೊಳ್ಳಿ ಅವರ ತೃತೀಯ ಪುಣ್ಯಸ್ಮರಣಿ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.ಖ್ಯಾತ ಪ್ರವಚನಕಾರ ಬಾಬುರಾವ ಮಹಾರಾಜ ಮಾತನಾಡಿ ಗ್ರಾಮದ ಮಹಾಮಹಿಮ ಮುಕ್ತಂಕಾರದ ಪುಣ್ಯ ಭೂಮಿ ಆದಿಶೇಷ ಕೂಸಾದ ಮಹಾತ್ಮ ಅವತರಿಸಿದ ಈ ಭೂಮಿಯಲ್ಲಿ ನ್ಯಾಯವಾದಿ ಅಳ್ಳೊಳ್ಳಿ ಜನಿಸಿ ಹಲವಾರು ರಚನಾತ್ಮಕ ಕಾರ್ಯಮಾಡಿದ್ದಾರೆ. ಅವರ ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಳಿಯಂದಿರಾದ ಡಿವೈಎಸ್ಪಿ ಬಸವರಾಜ ಯಲಗಾರ ಹಾಗೂ ಡಾ. ಗಜೇಂದ್ರ ಮಹಿಶ್ಯಾಳೆ ಅವರು ಅಳ್ಳೊಳ್ಳಿ ಅವರ ನೆನಪಿನಲ್ಲಿ ಉಚಿತ ತಪಾಸಣಾ ಶಿಬಿರ ಏರ್ಪಡಿಸಿ ಬಿಪಿ ಶುಗರ ಮುಂತಾದ ರೋಗಗಳ ಮುಂಜಾಗ್ರತಾ ಕ್ರಮಗಳ ಕುರಿತು ನುರಿತ ವೈದ್ಯರಿಂದ ಪ್ರಾತ್ಯಕ್ಷೀಕೆ ಮೂಲಕ ಮಾಡಿ ತೋರಿಸಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಶೈಲಜಾ ಅಳ್ಳೊಳ್ಳಿ, ದೀಪಾ ಮಹಿಶಾಲೆ ಶಿಲ್ಪಾ ಯಲಿಗಾರ, ಕಾಶಿನಾಥ ಶರಣರು,…

Read More