Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರ ಸಾವಿರಾರು ಎಕರೆ ವಿಸ್ತಾರದಲ್ಲಿ ನಿರ್ಮಾಣಗೊಂಡಿದ್ದು, ನಗರದ ಅಭಿವೃದ್ಧಿಗೆ ನಗರ ಯೋಜನಾ ಪ್ರಾಧಿಕಾರ ಸೂಕ್ತ ಯೋಜನೆ ರೂಪಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಶಾಸಕ ಅಶೋಕ ಮನಗೂಳಿ ಶುಭ ಹಾರೈಸಿದರು.ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಛೇರಿಗೆ ವರುವವರಿಗೆ ಯಾವುದೇ ರೀತಿಯ ತೊಂದರೆ ಇಲ್ಲದಂತೆ ಭ್ರಷ್ಠಾಚಾರ ರಹಿತವಾಗಿ ಕಾರ್ಯನಿರ್ವಹಿಸಬೇಕು. ನಗರದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದರು.ಈ ವೇಳ ನೂತನ ಅಧ್ಯಕ್ಷ ಹಣಮಂತ ಸುಣಗಾರ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಶಾಸಕರ ಮೂಲಕ ಸರಕಾರದಿಂದ ಸಿಂದಗಿ ಯೋಜನಾ ಪ್ರಾಧಿಕಾರದ ಜವಾಬ್ದಾರಿಯನ್ನು ನನಗೆ ವಹಿಸಿದ್ದಾರೆ. ಉತ್ತಮವಾಗಿ, ಬಡವರ ಕಾರ್ಯಗಳನ್ನು ನಡೆಸುವಂತೆ ಶಾಸಕರು ಕಿವಿಮಾತು ಹೇಳಿದ್ದು ಅವರ ಮಾತಿಗೆ ಚ್ಯುತಿ ಬಾರದಂತೆ ಶಿರಸಾ ವಹಿಸಿ ಪಾಲಿಸುತ್ತೇನೆ. ಸಿಂದಗಿ ತಾಲೂಕಿನ ಜನತೆ ಏನನ್ನು ಬಯಸುತ್ತಾರೆಯೋ ಅದನ್ನು ನಡೆಸಲಾಗುವುದು. ನನಗೆ ಆಯ್ಕೆ ಮಾಡಿದ ಸಿಎಂ, ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಸಾಹಿತಿ, ಶಿಕ್ಷಕಿ, ಶಾಂತಾ ಎಂ. ಮೊಸಲಗಿ ಅವರು ಕರ್ನಾಟಕ ರಾಜ್ಯ ಸಾಹಿತಿಗಳ ಬಳಗ ಕೇಂದ್ರ ಘಟಕ ಕಲಬುರಗಿ (ರಿ) ಇವರ ವತಿಯಿಂದ ನಡೆದ ಚುಟುಕು ಸಾಹಿತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಈ ಬಳಗದ ಗೌರವಾಧ್ಯಕ್ಷ ಬಾಬುಮಿಯಾ ಫುಲಾರಿ, ಸಂಚಾಲಕರಾದ ಮಹಾನಂದಾ ಮುಗಳಿ, ವಿಮರ್ಶಕರಾದ ರಾಜಶ್ರೀ ಬಿದರಿ, ಪ್ರಧಾನ ಕಾರ್ಯದರ್ಶಿ ಕುದುರತ್ಅಲಿ ಭೂಸನೂರ ಅವರು ಅಭಿನಂದಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಅಧ್ಯಕ್ಷತೆಯ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನವಾಗಿ ಜಾರಿಗೆ ತರಲಾದ ಜೆಎಸ್ಎಸ್ ಲಕ್ಷ್ಮಿಪುತ್ರಿ ಸುರಕ್ಷಾ ಯೋಜನೆಗೆ ಸಿದ್ಧಸಿರಿ ಬಹುರಾಜ್ಯ ಬಹುಉದ್ದೇಶ ಸಹಕಾರಿ ಸೊಸೈಟಿ ನಿಯಮಿತ ನಿರ್ದೇಶಕರಾದ ಶೈಲಜಾ ಬಸನಗೌಡ ಪಾಟೀಲ ಯತ್ನಾಳ ಹಾಗೂ ಅಬೋಲಿ ರಾಮನಗೌಡ ಪಾಟೀಲ ಯತ್ನಾಳ ಅವರು ಗುರುವಾರ ಚಾಲನೆ ನೀಡಿದರು.ಅತ್ಯಾಧುನಿಕ ತಂತ್ರಜ್ಞಾನ, ತಜ್ಞ ವೈದ್ಯರುಗಳೊಂದಿಗೆ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಒದಗಿಸಿ, ಅತ್ಯುತ್ತಮ ಆರೈಕೆಗೆ ಹೆಸರುವಾಸಿಯಾದ, ನಮ್ಮ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ, ಸುರಕ್ಷತೆ ಹೆರಿಗೆ ನಮ್ಮ ಬದ್ದತೆ ಎಂಬ ಸಾಮಾಜಿಕ ಕಾಳಜಿ ಯೊಂದಿಗೆ ಇದೀಗ ಜಾರಿಗೆ ತಂದಿರುವ ಜೆಎಸ್ಎಸ್ ಲಕ್ಷ್ಮಿಪುತ್ರಿ ಸುರಕ್ಷಾ ಯೋಜನೆಯಡಿ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದರೆ ತಾಯಿಗೆ ಉಚಿತ ಆರೈಕೆ ಮಾಡಲಾಗುತ್ತದೆ. ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗೆ ಇಂತಹ ಯೋಜನೆಗಳು ಸಹಕಾರಿ ಆಗಲಿವೆ.ಈ ಸಂದರ್ಭದಲ್ಲಿ ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರವಿ ಆರ್.ಬಿ (ನಾಯ್ಕ), ವೈದ್ಯರುಗಳಾದ ಡಾ.ವೀಣಾ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ವಚನಗಳ ಆಧಾರದ ಮೇಲೆ ನಮ್ಮ ಜೀವನ ನಡೆದರೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಒಂದು ವೇಳೆ ಕಷ್ಟಗಳು ಬಂದರೂ ಅವುಗಳನ್ನು ಎದುರಿಸುವ ಧೈರ್ಯ ನಮಗೆ ವಚನ ಸಾಹಿತ್ಯದಿಂದ ಸಿಗುತ್ತದೆ, ಆದ್ದರಿಂದ ಯಾವುದಕ್ಕೂ ದೃತಿಗೇಡಬಾರದು ಎಂದು ಡಾ. ಸಂಗಮೇಶ್ವರಿ ಪ್ರಮೋದ ಮಹಾಜನ ಅವರು ಅಭಿಪ್ರಾಯಪಟ್ಟರು.ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡದ ಮೊದಲ ಮಹಿಳಾ ಕವಿಯತ್ರಿ ಅಕ್ಕಮಹಾದೇವಿ ಅವರ 896ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, 12ನೇ ಶತಮಾನದಲ್ಲಿ ಅಕ್ಕಮಹಾದೇವಿಯವರು ತೋರಿದ ವೈರಾಗ್ಯ ಮತ್ತು ಧೈರ್ಯ ಇಂದಿನ ಮಹಿಳೆಯರಿಗೆ ಹಾಗೂ ಇಡೀ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಸ್ಮರಿಸಿದರು.ಈ ಸಂಭ್ರಮದ ಕಾರ್ಯಕ್ರಮದಲ್ಲಿ ಬಣಜಿಗ ಸಮಾಜದ ಅಧ್ಯಕ್ಷ ಸಿದ್ದಲಿಂಗ ಸುಬೇದಾರ,ಕಾಂಗ್ರೇಸ ಮುಖಂಡ ಮಲ್ಲಿಕಾರ್ಜುನ ಅಚಲೇರಿ,ಡಾ.ಪ್ರಮೋದ ಮಹಾಜನ, ಶಿವಪ್ಪ ಜಂಗಮಶೆಟ್ಟಿ, ಬಸವರಾಜ ಜಾನಾ, ಮಲ್ಲಿಕಾರ್ಜುನ ಜೋಗೋರ, ಪ್ರಶಾಂತ ನಾಶಿ, ಸೋಮಶೇಖರ ಬಂದೆ, ವಿಶ್ವನಾಥ ಕೊರಳ್ಳಿ, ಈರಪ್ಪ ತೆಲ್ಲೂರ, ಆಕಾಶ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ‘ಐತಿಹಾಸಿಕ ಪರಂಪರೆ ಉಳಿಸಿ’ ಅಭಿಯಾನದಡಿಅಖಿಲ ಭಾರತೀಯ ಸಾಹಿತ್ಯ ಪರಿಷದ್(ನೋಂ). ವಿಜಯಪುರ ಜಿಲ್ಲಾ ಸಮಿತಿಯು ಆಲಮೇಲ ತಾಲ್ಲೂಕಿನ ಕಡ್ಲೇವಾಡ ಗ್ರಾಮದ ಕಲ್ಯಾಣ ಚಾಳುಕ್ಯರ ಕಾಲದ ಪುರಾತನ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿತು.ಶಾಸನ ತಜ್ಞರಾದ ಡಾ. ದೇವರಕೊಂಡಾರೆಡ್ಡಿ, ಅಭಾಸಾಪ ಪದಾಧಿಕಾರಿಗಳಾದ ವಿವೇಕ ಕುಲಕರ್ಣಿ, ಸುಕಾಂತ ಕುಲಕರ್ಣಿ, ಶ್ರೀರಂಗ ಪುರಾಣಿಕ, ಆನಂದ ಗೋಡಸೆ , ಮಹಾಂತೇಶ , ಶ್ರೀರಂಗ ಕುಲಕರ್ಣಿ, ಪ್ರದೀಪ ಹೂಗಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ಸಾಲೋಟಗಿಯ ಶ್ರೀ ಶಿವಯೋಗೀಶ್ವರ ಜಾತ್ರಾ ಮಹೋತ್ಸವದ ಪ್ರಸಿದ್ದ ನೀರಾಟ ಏ.೬ ರಂದು ನಡೆಯಲಿದೆ ಎಂದು ಜಾತ್ರಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಏ ೩ ರಿಂದ ೫ ನೇ ತಾರಿಖಿನ ರವಿವಾರದ ವರೆಗೆ ದಿನ ನಿತ್ಯ ಊರ ಒಳಗಿನ ದೇವಾಲಯದಲ್ಲಿ ಬೆಳಗ್ಗೆ ರುದ್ರಾಭಿಷೇಕ ಪೂಜೆ ನಡೆಯುವದು.ಸೋಮವಾರ ೬ರಂದು ಶ್ರೀ ಶಿವಯೋಗೀಶ್ವರರು ರಾತ್ರಿ ೯ ಗಂಟೆಗೆ ಊರ ಒಳಗಿನ ದೇವಸ್ಥಾನದಿಂದ ವಿಶೇಷ ತರಹದ ಮದ್ದು ಸುಡುತ್ತ ಉತ್ಸವದಿಂದ ಹೊರಟು ಹೊರಗಿನ ದೇವಸ್ಥಾನದಲ್ಲಿ ವಾಸ್ತವ್ಯ, ಹಾಗೂ ರಾತ್ರಿ ಒಂದು ಗಂಟೆಯಿಂದ ಬೆಳಗ್ಗೆ ೬ ಗಂಟೆಯ ವರೆಗೆ ನೀರಾಟ ಉತ್ಸವ ಜರಗುವದು.ಏ ೭ ರಿಂದ ಏ ೧೩ ರ ವರೆಗೆ ಹೊರಗಿನ ದೇವಸ್ಥಾನದಲ್ಲಿ ಮುಂಜಾನೆ ೫ ಗಂಟೆಯಿAದ ಬೆಳಗ್ಗೆ ೭ ಗಂಟೆಯ ವರೆಗೆ ಹಾಗೂ ಸಂಜೆ ೪ ಗಂಟೆಯಿಂದ ೬ ಗಂಟೆಯ ವರೆಗೆ ನಿತ್ಯ ಶಿವ ಪೂಜೆ ಜರಗುವದು.೧೩ ರಂದು ಸೋಮವಾರ ಮಹಾ ಪ್ರಸಾದ, ರಾತ್ರಿ ೧೦ ಗಂಟೆಯಿಂದ ಗೀ ಗೀ ಪದಗಳು, ೧೪…
ಉದಯರಶ್ಮಿ ದಿನಪತ್ರಿಕೆ ಇಂಡಿ: ಮಠ ಮಾನ್ಯಗಳಿಂದಲೇ ತಾಲೂಕು ಪ್ರಸಿದ್ದಿ ಪಡೆದಿದೆ. ಹಲವಾರು ಮಠಗಳು ಅನ್ನ ಪ್ರಸಾದ, ಉಚಿತ ಶಿಕ್ಷಣ ಹುಣ್ಣಿಮೆ ಕಾರ್ಯಕ್ರಮದಂತಹ ಸಂಸ್ಕಾರ ನೀಡುತ್ತಿವೆ. ಸತ್ಸಂಗದಿಂದ ಜೀವನದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಶಿರಶ್ಯಾಡದ ಅಭಿನವ ಮುರಗೇಂದ್ರ ಶ್ರೀಗಳು ಹೇಳಿದರು.ನಗರದ ಶಿರಶ್ಯಾಡದ ಅಭಿನವ ಮುರಗೇಂದ್ರ ಶ್ರೀಗಳ ಶಾಖಾ ಮಠದಲ್ಲಿ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ ೬೦ ವರ್ಷ ದಾಟಿದ ಹಿರಿಯರಿಗೆ ಆದರ್ಶ ದಂಪತಿಗಳಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಇತಿಹಾಸ ಸಾಂಸ್ಕೃತಿಕ ಧಾರ್ಮಿಕ ಭಜನೆ ಪುರಾಣ ಹಾಗೂ ಪ್ರವಚನ ಮಾಡುತ್ತಿರುವ ಮಠಗಳ ಕಾರ್ಯ ಶ್ಲಾಘನೀಯ ಎಂದರು.ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಧಾರ್ಮಿಕತೆಯನ್ನು ಬೆಳೆಸಿಕೊಂಡು ಹೋಗಲು ಇಂದಿನ ಯುವ ಪೀಳಿಗೆ ಮುಂದಾಗಬೇಕಿದೆ. ಯಾವದೇ ಕೆಲಸ ವಿರಲಿ ಕೀಳಾಗಿ ನೋಡದೆ ಕಾರ್ಯಗಳನ್ನು ಮಾಡಿದಾಗ ನೆಮ್ಮದಿ ಬದುಕು ಸಾಗಿಸಲು ಸಾದ್ಯ ಎಂದರು.ರಾಘವೇಂದ್ರ ಕುಲಕರ್ಣಿ, ರಾಜೇಶ್ವರಿ ಕ್ಷತ್ರಿ, ಅನೀಲ ಪ್ರಸಾದ ಏಳಗಿ ಮಾತನಾಡಿದರು.ವೇದಿಕೆಯ ಮೇಲೆ ನೀಲಕಂಠಗೌಡ ಪಾಟೀಲ, ಅರವಿಂದ ಕುಲಕರ್ಣಿ ವೇದಿಕೆಯ ಮೇಲೆ ಇದ್ದರು.ಶ್ರೀಮತಿ…
SSLC ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ಪಟ್ಟಣದಲ್ಲಿರುವ ಶ್ರೀ ವಿಶ್ವಭಾರತಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯು, ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿರುವ ಹೆಚ್ ಡಿ ಕೋಟೆ ಹಾಗೂ ಸರಗೂರು ತಾಲೂಕಿನ ವಿದ್ಯಾರ್ಥಿಗಳಿಗೆ ಒಂದು ಸುವರ್ಣಾವಕಾಶ ಕಲ್ಪಿಸಿಕೊಟ್ಟಿದೆ. 2026-27ನೇ ಸಾಲಿನ ಪಿಯು ಪ್ರವೇಶ ಪಡೆಯಲು ಇದೇ ಎಪ್ರಿಲ್ 6 ರಂದು ಪ್ರವೇಶಾತಿ ಪರೀಕ್ಷೆ ನಡೆಸಲಿದ್ದು, ಅದರಲ್ಲಿ ಅತಿ ಹೆಚ್ಚು ಅಂಕ ಪಡೆದ ಐವರು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ಶ್ರೀ ವಿಶ್ವಭಾರತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥ ಭರತ್ ಚಾಮರಾಜಣ್ಣ ಹೇಳಿದರು.ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭರತ್ ಚಾಮರಾಜಣ್ಣ ಅವರು, ಸೋಮವಾರ ಬೆಳಗ್ಗೆ 9:30ಕ್ಕೆ ಪ್ರವೇಶಾತಿ ಪರೀಕ್ಷೆ ಆರಂಭವಾಗಲಿದೆ. ಒಟ್ಟು 50 ಅಂಕಗಳಿಗೆ ಪರೀಕ್ಷೆ ಇರಲಿದ್ದು, ಎಸ್ ಎಸ್ ಎಲ್ ಸಿ ಯಲ್ಲಿರುವ ವಿಜ್ಞಾನ ಹಾಗೂ ಗಣಿತ ಸಂಬಂಧಿತ ಪ್ರಶ್ನೆಗಳು ಇರಲಿದೆ. ಕಳೆದ ಮೂರು ವರ್ಷಗಳಿಂದಲೂ ಪ್ರವೇಶಾತಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಹಾಶಿವಶರಣೆ ಅಕ್ಕಮಹಾದೇವಿಯು ಪ್ರಥಮ ಕನ್ನಡ ಕವಯತ್ರಿ ಹಾಗೂ ಅಪ್ರತಿಮ ವಚನಗಾರ್ತಿಯಾಗಿದ್ದಳು. ೩೫೪ ಅವರ ವಚನಗಳು ದೊರಕಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ಅವರದ್ದಾಗಿದೆ ಎಂದು ಶರಣ ಚಿಂತಕಿ ಜಗದೇವಿ ಬಿರಾದಾರ ಹೇಳಿದರು.ಸಿಂದಗಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜರುಗಿದ ಮಹಾಶಿವಶರಣೆ ಅಕ್ಕಮಹಾದೇವಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಕ್ಕಮಹಾದೇವಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಬಸವಾದಿ ಶರಣರೊಂದಿಗೆ ಅನುಭವ ಮಂಟಪದಲ್ಲಿ ಚರ್ಚೆ, ಅನುಭಾವ ಹಂಚಿಕೆಯ ಸಂವಾದ ಮಾಡಿ ಶೈ ಎನೆಸಿಕೊಂಡವಳು. ಬಸವಣ್ಣ ಹಾಗೂ ಅಲ್ಲಮಪ್ರಭುದೇವರು ಅವರ ಆಗಾದವಾದ ಜ್ಞಾನವನ್ನು ಗಮನಿಸಿ ಮಹಾದೇವಿಗೆ ಅಕ್ಕ ಎಂದು ಕರೆದರು ಎಂದರು.ಈ ವೇಳೆ ನ್ಯಾಯವಾದಿ ವಿ.ಜಿ.ಮಾನವಿ ಮಾತನಾಡಿ, ಅಲ್ಲಮಪ್ರಭುದೇವರು, ಬಸವಣ್ಣ, ಚನ್ನಬಸವ, ಮಾದಾರ ಚನ್ನಯ್ಯ, ಅಂಬಿಗೇರ ಚೌಡಯ್ಯ ಸೇರಿದಂತೆ ಮುಂತಾದವರೊAದಿಗೆ ಚರ್ಚಿಸಿದ ನಂತರ ಅಕ್ಕಮಹಾದೇವಿ ಅವರ ಜ್ಞಾನದ ಅರಿವು ಎಲ್ಲರಿಗಾಯಿತು. ವೈರಾಗ್ಯ ನಿಧಿ ಅಕ್ಕಮಹಾದೇವಿ ಆಧ್ಯಾತ್ಮಿಕ ಜೀವನಕ್ಕೆ ಹೊಸ ಭಾಷ್ಯ ಬರೆದರು. ಶಿವನೇ…
‘ಮುಸ್ಲಿಮರನ್ನು ದೇಶಬಿಟ್ಟು ಓಡಿಸೋಕೆ ಆಗುತ್ತಾ? | ವಿಪಕ್ಷ ನಾಯಕರ ಹೇಳಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ಬಾಗಲಕೋಟೆ: ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷ ನಾಯಕರ ಹೇಳಿಕೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಸಭ್ಯ ಪದ ಬಳಸಿದ ಬಿಜೆಪಿ ನಾಯಕ ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟಿದ್ದಾರೆ.ಯುಗಾದಿ, ದೀಪಾವಳಿ, ಶಿವರಾತ್ರಿಯಂತಹ ಹಬ್ಬದ ಸಮಯದಲ್ಲಿ ನಾನು ಮಾಂಸ ತಿನ್ನುವುದು ನಿಜ, ಆಹಾರ ಸೇವನೆ ನನ್ನ ಹಕ್ಕು, ನಾನು ಯಾಕೆ ತಿನ್ನಬಾರದು, ಅದರಲ್ಲೇನು ತಪ್ಪು ಎಂದು ಕೇಳಿದರು.ಬಿಜೆಪಿ ಪರ ಪ್ರಚಾರದ ವೇಳೆ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ ಹೇಳಿಕೆಗಳನ್ನೂ ಖಂಡಿಸಿದರು. ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳು ಮತ್ತು ಸಾಮಾಜಿಕ ಬದ್ಧತೆಯ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಮತ ಕೇಳುವುದಾಗಿ ಹೇಳಿದರು.ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ, ತಾವು ಮುಖ್ಯಮಂತ್ರಿಯಾದರೆ ಮಹಿಳೆಯರಿಗೆ 3000 ರೂಪಾಯಿ. ನೀಡುವುದಾಗಿ ಮತ್ತು ಕಲ್ಲು ತೂರಾಟ ನಡೆಸಿದರೆ ಅಂತಹ ಮತ್ತು…
