Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ತಾಂಬಾ ಗ್ರಾಮದ ವಿವಿದೋದ್ದೇಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲುಗೈ ಸಾಧಿಸಿದೆ. ೧೨ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪೆನಲ್ ೧೧ ಸದಸ್ಯರು ಆಯ್ಕೆಯಾಗಿದ್ದಾರೆ ಕೇವಲ ಒಂದು ಸ್ಥಾನಕ್ಕೆೆ ಬಿಜೆಪಿ ಮುಖಂಡರು ತೃಪ್ತಿ ಪಡಬೇಕಾಗಿದೆ.ಗೆಲವು ಸಾಧಿಸಿದವರಲ್ಲಿ ಬಾಬುರಾವು ಯಲಗೊಂಡ ಪಾಟೀಲ, ಲಕ್ಷ್ಮಣ ನಂದಪ್ಪ ಹಿರೇಕುರಬರ, ಧರ್ಮಣ್ಣ ನಾಗಪ್ಪ ಮಸಳಿ, ಮೈಬೂಬ ಹುಸೇನಸಾಬ ಮುಲ್ಲಾ, ಅಮೋಘಿ ಸಿದ್ದಪ್ಪ ಕನ್ನಾಳ, ಗುರುಲಿಂಗವ್ವ ಗುರಪ್ಪ ಜೇವುರ, ಭಾರತಿ ಸಂಗಯ್ಯ ಅರೇಕಾರ, ಶಿವಪುತ್ರ ಸಿದ್ದಪ್ಪ ಗಗನಳ್ಳಿ, ಗುರಪ್ಪ ಸಿದ್ದಪ್ಪ ಮದಭಾವಿ, ಗೋಪಾಲ ಹುಚ್ಚಪ್ಪ ಸಿಂಗೆ, ಶಂಕ್ರೇಪ್ಪ ಸಿದ್ದಪ್ಪ ಶಿರಗೂರ, ಮಹಾದೇವಪ್ಪ ರಾಚಪ್ಪ ಗಳೇದ ಪ್ರಮುಖರು.ಚುನಾವಣಾ ಫಲಿತಾಂಶ ಘೋಷಣೆ ಮಾಡುತ್ತಿದ್ದಂತೆ ವಿಜಯೋತ್ಸವ ಆಚರಿಸಲಾಯಿತು .ಕಾಂಗ್ರೆಸ್ ಮುಖಂಡರಾದ ಅಪ್ಪಣ್ಣ ಕಲ್ಲೂರ, ರಾಚಪ್ಪ ಗಳೇದ, ರವಿಕುಮಾರ ಚವ್ಹಾಣ, ಮಹ್ಮದ ವಾಲಿಕಾರ, ಸಿದ್ದನಗೌಡ ಬೀರಾದಾರ, ಜೆ.ಎಸ್.ಹತ್ತಳ್ಳಿ, ಸಿದಗೋಂಡ ಹಿರೇಕುರಬರ, ಕಾಮೇಶ ಉಕ್ಕಲಿ, ಪರಸು ಬೀಸನಾಳ, ಸಿದ್ದು ಹತ್ತಳ್ಳಿ, ರಾಯಗೊಂಡ ನಾಟೀಕಾರ, ಮಹಾದೇವ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಇಲಾಖೆಯ ಭಾಗ್ಯಲಕ್ಷ್ಮಿ, ಮಾತೃವಂದನಾ, ಮಾತೃಪೂರ್ಣ ಯೋಜನೆಗಳು ಸಮುದಾಯಕ್ಕೆ ಬಹಳ ಉಪಯೋಗವಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಕೆ.ಚವ್ಹಾಣ ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದ ಚೌಕಿಮಠದಲ್ಲಿ ಸೋಮವಾರ ಜರುಗಿದ ಪೋಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಇನ್ನು ಮುಂದೆ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭವಾಗುತ್ತವೆ. ಮಗುವಿನ ಸಂಪೂರ್ಣ ಬೆಳವಣಿಗೆ ಅಂಗನವಾಡಿಯಲ್ಲಿಯೇ ಆಗುತ್ತದೆ ಎಂದರು.ಸಿಂದಗಿ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಕೆ.ಹಳ್ಳಿ ಮಾತನಾಡಿ, ಪೋಷಣ ಮಾಸಾಚಾರಣೆ ಕಾರ್ಯಕ್ರಮ ೨೦೧೮ ರಲ್ಲಿ ಪ್ರಾರಂಭವಾಗಿದೆ. ಈ ಕಾರ್ಯಕ್ರಮದಿಂದ ಕಿಶೋರಿಯರು, ಬಾಣಂತಿಯರು, ೬ ವರ್ಷದ ಮಕ್ಕಳಿಗೆ ಅನುಕೂಲವಾಗಿದೆ ಎಂದರು.ಗ್ರಾಮದ ರಾಜಶೇಖರಗೌಡ ಪೋ.ಪಾಟೀಲ ಮಾತನಾಡಿ, ನಮ್ಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಗಳು ಜಿಲ್ಲೆಗೆ ಮಾದರಿಯಾಗಿವೆ. ಸಮುದಾಯದ ಸಹಕಾರದಿಂದ ಮಕ್ಕಳ ಕಲಿಕೆ ಉತ್ತಮ ರೀತಿಯಲ್ಲಿ ಇದೆ ಎಂದರು.ಯೋಜನೆಯ ವಿವಿಧ ಕಾರ್ಯಕ್ರಮಗಳಾದ ಮೂರು ವರ್ಷದ ಮಕ್ಕಳಿಗೆ ಅಕ್ಷರ ಬರಹ, ಅನ್ನ ಪ್ರಾಶನ, ಹೆಣ್ಣು ಮಗುವಿನ ಹುಟ್ಟುಹಬ್ಬ, ಗರ್ಭಿಣಿಯರಿಗೆ ಸೀಮಂತ, ಮಕ್ಕಳ ನೃತ್ಯ, ಕುಣಿತ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು.ಇದೇ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮುಖ್ಯ ನ್ಯಾಯಾಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆತ ಪ್ರಕರಣ ಖಂಡಿಸಿ ತಾಲ್ಲೂಕು ಸಮಾನ ಮನಸ್ಕರ ಒಕ್ಕೂಟ ಸದಸ್ಯರು ಪ್ರತಿಭಟನಾ ಮೆರವಣಿಗೆ ಕೈಗೊಂಡು, ರಾಷ್ಟ್ರೀಯ ಹೆದ್ದಾರಿ ತಡೆದು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಲ್ಲಿ ಸೋಮವಾರ ತಾಲ್ಲೂಕು ಸಮಾನ ಮನಸ್ಕರ ಒಕ್ಕೂಟ ಸದಸ್ಯರು ಸಭೆ ಸೇರಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆತ ಪ್ರಕರಣ ಖಂಡಿಸಿ ಪ್ರತಿಭಟನಾ ಮೆರವಣಿಗೆ ಹೊರಟು ಮೊಹರೆ ಹಣಮಂತ್ರಾಯ ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿನ ಡಾ. ಅಂಬೇಡ್ಕರ್ ವೃತ್ತ ತಲುಪಿ ಹೆದ್ದಾರಿಯಲ್ಲಿ ಧರಣಿ ಕುಳಿತರು.ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ, ಬೆಳಗಾವಿ ವಿಭಾಗೀಯ ಸಂಚಾಲಕ ರಾವುತ ತಳಕೇರಿ, ರಾಜಕುಮಾರ ಸಿಂದಗೇರಿ, ರಾಘವೇಂದ್ರ ಗುಡಿಮನಿ, ರಮೇಶ ದಳವಾಯಿ, ಹುಯೋಗಿ ತಳ್ಳೋಳ್ಳಿ, ಅಜೀಜ್ ಯಲಗಾರ, ಲಕ್ಕಪ್ಪ ಬಡಿಗೇರ ಮಾತನಾಡಿದರು.ಬಸವರಾಜ ಇಂಗಳಗಿ, ಶರಣು ಜಮಖಂಡಿ, ಭೀರು ಹಳ್ಳಿ, ಪರಶುರಾಮ ನಾಯ್ಕೋಡಿ, ಬಸವರಾಜ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಸಕಲ ಜೀವಿಗಳಲ್ಲೂ ಅಹಿಂಸೆಯಿಂದ ಜೀವಿಸುವ ಸಕಲ ಜೀವರಾಶಿಯಲ್ಲೂ ಪ್ರೇಮಭಾವ ಹೊಂದುವ ಗುಣವೇ ನೈಜ ಧರ್ಮವಾಗಿದೆ ಎಂದು ಹಳಿಂಗಳಿ ಭದ್ರಗಿರಿಯ ಆಚಾರ್ಯ 108 ಮುನಿ ಕುಲರತ್ನಭೂ ಷಣ ಮಹಾರಾಜರು ಆಶೀರ್ವಚನ ನೀಡಿದರು.ಸಮೀಪದ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕ ಮಠದಲ್ಲಿ ನಡೆದ ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ-2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯ ಸೇರಿದಂತೆ ಎಲ್ಲ ಸ್ತರದ ಜೀವಿಗಳಿಗೂ ಭೂಮಿಯಲ್ಲಿ ಬದುಕಲು ಸಮಾನ ಹಕ್ಕಿದೆ. ನಾವು ನೈಜ ಬದುಕುವ ಕಲೆ ಅಳವಡಿಸಿಕೊಂಡು ಯಾರಲ್ಲಿಯೂ ದೋಷ ಕಾಣದೇ ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ನಾವು ಧರ್ಮವನ್ನು ರಕ್ಷಿಸಿದರೆ ಖಂಡಿತ ನಮ್ಮನ್ನು ಧರ್ಮ ರಕ್ಷಿಸುತ್ತದೆ. ನಮ್ಮ ಸಂಸ್ಕೃತಿಯ ಶ್ರೀಮಂತ ಮೌಲ್ಯಗಳನ್ನು ಮುಂದಿನ ತಲೆಮಾರಿಗೂ ಕಲಿಸಿ ನಿಸರ್ಗದ ಜೊತೆಗೆ ಮಿತ್ಪತ್ವದಿಂದ ಬದುಕುವ ಮತ್ತು ದ್ವೇಷಯುತ ವಿಚಾರಗಳನ್ನುತ್ಯಜಿಸಲು ಏಕಾಗ್ರತೆಯ ಮನಸ್ಸಿಗೆ ಧ್ಯಾನ, ಪೂಜೆ ಮೊದಲಾದ ಉಪಕ್ರಮಗಳನ್ನು ಚಾಚು ತಪ್ಪದೇ ರೂಢಿಸಿಕೊಳ್ಳಬೇಕೆಂದರು.ಬೆಂಗಳೂರಿನ ಹಜರತ್ ಮಹಮ್ಮದ ತನ್ನೀರ್ ಹತ್ತಿ ಮಾತನಾಡಿ, ಸರ್ವರೂ ಒಂದು ಎಂಬ ಭಾವ ಬೆಳೆಸುವ ಮೂಲಕ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಇತಿಹಾಸ, ಸಂಸ್ಕೃತಿ, ಜನಶ್ರದ್ಧೆ ಹಾಗೂ ಸೇವಾಪರಂಪರೆಯ ಕುರಿತಾಗಿ ಬೆಳಕು ಚೆಲ್ಲುವ ಕೃತಿ ರಚಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಅತ್ಯಂತ ಹೆಮ್ಮೆ ಹಾಗೂ ಸಮಯೋಚಿತವಾಗಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ಕಲ್ಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಸೈನಿಕ ನೆಲೆ ಪ್ರಕಾಶನ ಬೆಂಗಳೂರು ಮೂಲಕ ನಿವೃತ್ತಯೋಧ ರಾಜೇಂದ್ರ ನಾಡಗೌಡರ ಸಂಪಾದಕತ್ವದಲ್ಲಿ ರಚಿತಗೊಂಡ ‘ನಮ್ಮ ಊರು ನಮ್ಮ ಹೆಮ್ಮೆ ದೇವರಹಿಪ್ಪರಗಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ನಮ್ಮ ಗ್ರಾಮ, ಪಟ್ಟಣದ ಪರಂಪರೆ ಅಧ್ಯಯನಕ್ಕೆ ಯುವಜನತೆಗೆ ಭವಿಷ್ಯದಲ್ಲಿ ಇಂತಹ ಕೃತಿಗಳು ಸಹಕಾರಿಯಾಗಬಲ್ಲವು ಎಂದರು.ಸಿಂದಗಿ ಸದ್ಗುರು ಭೀಮಾಶಂಕರ ಸಂಸ್ಥಾನಮಠದ ದತ್ತಪ್ಪಯ್ಯ ಸ್ವಾಮೀಜಿ ಹಾಗೂ ಸ್ಥಳೀಯ ಗದ್ದುಗೆಮಠದ ಮಡಿವಾಳೇಶ್ವರ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಕೃತಿ ರಚನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ವಿಶ್ರಾಂತ ತಹಶೀಲ್ದಾರ್ ಆರ್.ಆರ್.ಮಣ್ಣೂರ ಕೃತಿ ಪರಿಚಯಸಿದರು. ವಿಶ್ರಾಂತ ಪ್ರಾಚಾರ್ಯ ಡಾ.ಮಹಾಂತೇಶ ಗುಬ್ಬೇವಾಡ ಗ್ರಂಥಾವಲೋಕನಗೊಳಿಸಿ ಮಾತನಾಡಿದರು.ರಾಜೇಂದ್ರ ನಾಡಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ಸಂಸ್ಕಾರವಂತ ವ್ಯಕ್ತಿ ನಿರ್ಮಾಣವಾದಾಗ ಮಾತ್ರ ಈ ದೇಶ ಉಳಿಯಲು ಸಾಧ್ಯ ಎಂಬ ಉದ್ದೇಶದಿಂದ ಡಾ.ಹೆಡಗೆವಾರ್ ಹುಟ್ಟು ಹಾಕಿದ ಆರ್‌ಎಸ್‌ಎಸ್‌ನ ನೂರನೇ ವರ್ಷದ ಸಂಭ್ರಮದಲ್ಲಿದ್ದೇವೆ ಎಂದು ವಿಜಯಪುರ ವಿಭಾಗ ಪ್ರಚಾರಕ ರಾವಸಾಹೇಬ ಹೇಳಿದರು.ಪಟ್ಟಣದ ಕರಿಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಜರುಗಿದ ವಿಜಯದಶಮಿ ಉತ್ಸವ ಹಾಗೂ ಸಂಘಶತಾಬ್ದಿ ಸಂದರ್ಭದಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಮಾತನಾಡಿದರು.ದೇಶ, ಧರ್ಮ, ಗ್ರಾಮ, ಮನೆ ಚೆನ್ನಾಗಿ ಇರಬೇಕೆಂದರೆ ಉತ್ತಮ ವ್ಯಕ್ತಿಯಿಂದ ಮಾತ್ರ ಸಾಧ್ಯ. ಅದಕ್ಕಾಗಿ ಆರ್‌ಎಸ್‌ಎಸ್ ಪ್ರತಿ ಗ್ರಾಮದಲ್ಲಿ ಶಾಖೆ ಆರಂಭಿಸಿ ವ್ಯಕ್ತಿನಿರ್ಮಾಣ ಕಾರ್ಯ ಮಾಡುತ್ತಿದೆ. ಇದರ ಪರಿಣಾಮ ಪ್ರತಿಯೊಬ್ಬ ಸ್ವಯಂಸೇವಕನು ಕೂಡ ಭಾರತಮಾತೆ ನನ್ನ ತಾಯಿ, ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ನನ್ನ ಸಹೋದರ, ಸಹೋದರಿ ಇದ್ದಂತೆ. ಇವರ ಜೊತೆ ಯಾವುದೇ ತರದ ಬೇಧ ಭಾವ ಇಲ್ಲದೆ ಸಮಾನತೆಯಿಂದ ನಾವೆಲ್ಲರೂ ಹಿಂದೂ ನಾವೆಲ್ಲರೂ ಬಂಧು ಎಂಬ ಭಾವದಿಂದ ದೇಶ, ಧರ್ಮಕ್ಕೋಸ್ಕರ ಸೇವೆ ಸಲ್ಲಿಸುತ್ತಿದ್ದಾನೆ. ಇಡೀ ವಿಶ್ವದಲ್ಲಿಯೇ ನೂರುವರ್ಷ ಪೂರೈಸಿದ ಏಕೈಕ ಸಂಘಟನೆ ರಾಷ್ಟ್ರೀಯ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಈ ಬೀಳ್ಕೊಡುಗೆ ಸಮಾರಂಭ ಕೇವಲ ವಿದಾಯದ ಕಾರ್ಯಕ್ರಮವಲ್ಲ. ಅದು ಸ್ನೇಹ ಕೃತಜ್ಞತೆ ಮತ್ತು ಪ್ರೇರಣೆಯ ಹಬ್ಬವಾಗಿದೆ ಎಂದು ವಿಜಯಪುರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಾಯಕ ಯೋಜನಾ ಸಂಯೋಜಕ ಎನ್.ಪಿ.ಹೊನ್ನಾಕಟ್ಟಿ ಹೇಳಿದರು.ಸಿಂದಗಿ ಪಟ್ಟಣದ ಶ್ರೀಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಬಿ.ಇಡಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಸರ್ಕಾರಗಳು ಮಾಡದೇ ಇರುವ ಕಾರ್ಯಗಳನ್ನು ಮಠ-ಮಂದಿರಗಳು ಮಾಡುತ್ತಿರುವುದು ಶ್ಲಾಘನಿಯವಾಗಿದೆ. ಸಿಂದಗಿಯ ಸಾರಂಗಮಠ ಶೈಕ್ಷಣಿಕ ಕ್ಷೇತ್ರದಲ್ಲಿ ಬಹುದೊಡ್ಡ ಕಾರ್ಯ ಮಾಡುತ್ತಿರುವುದು ಸಂತಸ ತಂದಿದೆ. ಶಿಕ್ಷಕರಾಗುವವರು ಸದಾ ಅಧ್ಯಯನಶೀಲರಾಗಬೇಕು. ಮತ್ತು ಸಮುದಾಯವನ್ನು ಒಗ್ಗೂಡಿಸಿ ಕೆಲಸ ಮಾಡಬೇಕು ಎಂದರು.ಸಮಾರಂಭದ ಸಮ್ಮುಖ ವಹಿಸಿದ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಹಾಘೂ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ಗಂಗಾಧರ ಜೋಗೂರ, ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ, ಪ್ರಾಚಾರ್ಯೆ ಜೆ.ಸಿ.ನಂದಿಕೋಲ, ಕಾರ್ಯಾಧ್ಯಕ್ಷ ಸುಧಾಕರ ಚವ್ಹಾಣ, ಪ್ರಧಾನ ಕಾರ್ಯದರ್ಶಿ ರಮೇಶ ನಾರಾಯಣಪೂರ, ಬಿ.ಎಮ್.ಸಿಂಗನಳ್ಳಿ, ಡಾ.ಶರಣಬಸವ…

Read More

ವಿಜಯಪುರದಲ್ಲಿ ಆರ್‌ಎಸ್‌ಎಸ್ ಅಭಿಯಾನಕ್ಕೆ ಚಾಲನೆ | ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯಾರು ಭಾರತವನ್ನು ಪ್ರೀತಿಸುತ್ತಾರೋ ಅವರು ಆರ್‌ಎಸ್‌ಎಸ್ ಪ್ರೀತಿಸುತ್ತಾರೆ ಎಂಬ ಅಭಿಯಾನದ ಅಂಗವಾಗಿ ಈ ಸಂದೇಶವುಳ್ಳ ಪೋಸ್ಟರ್ ಅಂಟಿಸುವ ಕಾರ್ಯಕ್ಕೆ ಬಿಜೆಪಿ ನಗರ ಮಂಡಳ ವತಿಯಿಂದ ಅಧ್ಯಕ್ಷರಾದ ಸಂದೀಪ್ ಪಾಟೀಲ್ (ಝಳಕಿ) ನೇತೃತ್ವದಲ್ಲಿ ವಿಜಯಪುರದ ವಾರ್ಡ್ ನಂ.೭ ರಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.ಅಭಿಯಾನದಲ್ಲಿ ಪಾಲ್ಗೊಂಡ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಆರ್‌ಎಸ್‌ಎಸ್ ನಿಷೇಧ ಮಾಡುವ ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಬಾಲಿಷತನದಿಂದ ಕೂಡಿದೆ, ಈ ದೇಶದಲ್ಲಿ ಸ್ವತಂತ್ರವಾಗಿ ಮಾತನಾಡುವ, ಸಂಘ-ಸಂಸ್ಥೆಗಳ ಚಟುವಟಿಕೆಗಳನ್ನು ನಡೆಸುವ, ಸಂಘ-ಸಂಸ್ಥೆ ಸ್ಥಾಪಿಸುವ ಅಧಿಕಾರವನ್ನು ಭಾರತೀಯ ಸಂವಿಧಾನ ಕರುಣಿಸಿದೆ, ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ಸಂಘ ಸಂಸ್ಥೆ ನಿಷೇಧ ಮಾಡಿ ಎಂದು ಹೇಳುವ ಮೂಲಕ ಭಾರತೀಯ ಸಂವಿಧಾನ ನೀಡಿರುವ ಹಕ್ಕುಗಳನ್ನೇ ಕಸಿದುಕೊಳ್ಳಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ…

Read More

ರಂಗಕರ್ಮಿ ರಾಜು ತಾಳಿಕೋಟೆ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಕಂಬನಿ ಉದಯರಶ್ಮಿ ದಿನಪತ್ರಿಕೆ ಸಿಂದಗಿ (ವಿಜಯಪುರ): ರಂಗದ ಮೇಲೆ ಹಾಸ್ಯದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿ ಜನಮನ್ನಣೆ ಗಳಿಸಿದ್ದ ರಾಜು ತಾಳಿಕೋಟಿ ಎಂಬ ಅದ್ಬುತ ಕಲಾವಿದ ನಗುತ್ತಲೇ ಜೀವನ ರಂಗಕ್ಕೆ ವಿದಾಯ ಹೇಳಿದ್ದಾರೆ. ರಂಗಭೂಮಿ ಇಂಥ ಅದ್ಭುತ ಪ್ರತಿಭೆಯನ್ನು ಕಳೆದುಕೊಂಡು ಬಡವಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ವಿಷಾದಿಸಿದರು.ನಿಧನರಾಗಿರುವ ರಂಗಕರ್ಮಿ, ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ರಾಜು ತಾಳಿಕೋಟಿ ಅವರ ಅಂತಿಮ ದರ್ಶನ ಪಡೆದು ಸಿಂದಗಿ ಕನ್ನಡ ಸಾಹಿತ್ಯ ಬಳಗ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಸಚಿವರು, ಹಾಸ್ಯದ ಮೂಲಕ ಸಮಾಜದ ಲೋಪ ತಿದ್ದುವ ಮಹತ್ವದ ಸೇವೆ ಮಾಡಿದ್ದರು. ಸಾವಿರಾರು ಪ್ರತಿಭೆಗಳಿಗೆ ಮಾರ್ಗದರ್ಶನ ಮಾಡಿ, ರಂಗಭೂಮಿ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ನೀಡಿದ್ದರು ಎಂದು ವಿವರಿಸಿದರು.ಬಡತನದಲ್ಲಿ ಹುಟ್ಟಿ, ತಾಳಿಕೋಟೆಯ ಶ್ರೀಖಾಸ್ಗತೇಶ್ವರ ಮಠದಲ್ಲಿ ತ್ರಿವಿಧ ದಾಸೋಹ ಮಾಡಿ, ಸ್ವಂತ ನಾಟಕ ಕಂಪನಿ ಕಟ್ಟಿ ಬೆಳೆಸಿದ್ದರು. ತಮ್ಮ…

Read More

“When Teachers Breakdown Silently: The Hidden Cost of Disrespect” ಲೇಖನದ ಭಾವಾನುವಾದ ಅನುವಾದ- ಪ್ರಶಾಂತ ಕುಲಕರ್ಣಿಶಿಕ್ಷಕ, ಲೇಖಕಶ್ರೀ ಪದ್ಮರಾಜ ಬಿ.ಎಡ್ ಕಾಲೇಜ್ಸಿಂದಗಿವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಇಂದಿನ ಸಮಾಜದಲ್ಲಿ ಹಿಂಸಾಚಾರ, ಸುಲಿಗೆ, ಮೋಸ, ನೈತಿಕ ಕುಸಿತ ಇತ್ಯಾದಿ ಘಟನೆಗಳು ಹೆಚ್ಚುತ್ತಿವೆ. ಪ್ರತೀ ಸಾರಿ ಇಂತಹ ಘಟನೆಗಳು ಸಂಭವಿಸಿದಾಗ ಜನರ ಮೊದಲ ಪ್ರತಿಕ್ರಿಯೆ — “ಈಗಿನ ಮಕ್ಕಳು ಸರಿಯಿಲ್ಲ!” ಎನ್ನುವುದು. ಆದರೆ ಮಕ್ಕಳು ಅಂಥವರಾಗಲು ಕಾರಣವೇನು ಎನ್ನುವುದರ ಬಗ್ಗೆ ಯಾರೂ ಆಳವಾಗಿ ಚಿಂತಿಸೋದಿಲ್ಲ.ಮಕ್ಕಳ ನಡೆ-ನುಡಿಗಳ ಹಿಂದೆ ಮನೆಯ ವಾತಾವರಣ, ಪೋಷಕರ ಧೋರಣೆ ಮತ್ತು ಶಿಕ್ಷಣ ವ್ಯವಸ್ಥೆಯ ಪ್ರಭಾವ ಅಡಗಿದೆ. ಇವೆಲ್ಲದರಲ್ಲಿಯೂ ಶಿಕ್ಷಕರು ಪ್ರಮುಖ ಪಾತ್ರವಹಿಸುತ್ತಾರೆ ಎಂಬುದು ನಿಸ್ಸಂಶಯ. ಆದರೆ ತಪ್ಪು ನಡೆದರೆ ಎಲ್ಲರ ತೋರು ಬೆರಳು ನೇರವಾಗಿ ಶಿಕ್ಷಕರತ್ತ ತಿರುಗುತ್ತದೆ.ಒಂದು ಕಾಲದಲ್ಲಿ ಶಿಕ್ಷಕರು ದೇವರಷ್ಟೇ ಗೌರವಿಸಲ್ಪಡುತ್ತಿದ್ದರು. ರಸ್ತೆ ಮೇಲೆ ಶಿಕ್ಷಕರು ಎದುರಾದರೆ ಮಕ್ಕಳು ಮಾತ್ರವಲ್ಲದೆ ಅವರ ಪೋಷಕರೂ ಸಹ ಗೌರವದಿಂದ ನಮನ ಮಾಡುತ್ತಿದ್ದರು. “ಗುರು ಬ್ರಹ್ಮ, ಗುರು ವಿಷ್ಣು, ಗುರು…

Read More