Author: editor.udayarashmi@gmail.com

ಉದಯರಶ್ಮಿದಿನಪತ್ರಿಕೆ ಚಡಚಣ : ಸಮೀಪದ ಹಾವಿನಾಳ ಗ್ರಾಮದ ಶ್ರೀ ದತ್ತ ಇಂಡಿಯಾ ಶುಗರ್ಸ್ ಸಕ್ಕರೆ ಕಾರ್ಖಾನೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.ಕಾರ್ಖಾನೆಯಲ್ಲಿ ಶೇಖರಿಸಿಟ್ಟಿದ್ದ ಅಪಾರ ಪ್ರಮಾಣದ ಬಗ್ಯಾಸ್ (ಕಬ್ಬಿನ ಸಿಪ್ಪೆ)ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಬೆಂಕಿ ತನ್ನ ಕೆನ್ನಾಲಿಗೆಯಿಂದ ಕ್ಷಣಾರ್ಧದಲ್ಲಿ ಬಾಯಲರ್ ಅಗ್ನಿ ಪ್ರದೀಪನ ಯಂತ್ರೋಪಕರಣಗಳಿಗೂ ಕೂಡ ಬೆಂಕಿ ಆವರಿಸಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ನಷ್ಟವಾಗಿರುವ ಶಂಕೆ ವ್ಯಕ್ತವಾಗಿದೆ ನಿಖರ ಹಾನಿಯ ಅಂದಾಜನ್ನು ತಜ್ಞರ ಪರಿಶೀಲನೆಯ ಬಳಿಕ ತಿಳಿದುಬರಲಿದೆ.ಬೆಂಕಿಹೊತ್ತಿಕೊಳ್ಳಲು ಶಾರ್ಟ ಸಕ್ಯೂಟ್ ಅಥವಾ ತಾಂತ್ರೀಕ ದೋಷ ಕಾರಣವಿರಬಹುದು ಅಥವಾ ಕಿಡಿಗೇಡಿಗಳ ಪಾಲು ಇದೆ ಎಂಬುದನ್ನು ತನಿಖೆಯ ನಂತರ ತಿಳಿದು ಬರಲಿದೆ.ಆದರೆ, ಎರಡು ದಿನಗಳ ಹಿಂದೆಯಷ್ಟೇ ಕಬ್ಬು ನುರಿಸಲು ಸಾಗಿಸುವ ಬೆಲ್ಟ್ ತುಂಡಾಗಿದ್ದರಿಂದ ಕಾರ್ಖಾನೆಯ ಎಲ್ಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದ್ದರಿಂದ ಕಾರ್ಖಾನೆಯಲ್ಲಿ ಹೆಚ್ಚು ಕಾರ್ಮಿಕರಿಲ್ಲದ್ದರಿಂದ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ, ಭಾರೀ ಪ್ರಮಾಣದ ನಷ್ಟ…

Read More

B……ಅತೀ ಶೀಘ್ರದಲ್ಲಿಯೇ ನಗರದಲ್ಲಿ ರೂ.30ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆಗಳಿಗೆ ಚಾಲನೆ: ಶಾಸಕ ಮನಗೂಳಿ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರ ಮತ್ತು ಸಿಂದಗಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ತಂದು ಅಭಿವೃದ್ಧಿ ಪಡಿಸಲಾಗುತ್ತಿದೆ. ಇನ್ನು ನನ್ನ ಅಧಿಕಾರದ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ನಗರದ ಸ್ವಾಮಿ ವಿವೇಕಾನಂದ ವೃತ್ತದಿಂದ ಕನಕದಾಸ ವೃತ್ತದವವರೆಗಿನ ರೂ.2ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಡಾಂಬರ್ ರಸ್ತೆ ಹಾಗೂ ವಿದ್ಯುತ್ ದೀಪಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವೇಶ್ವರ ವೃತ್ತದಿಂದ, ಸ್ವಾಮಿ ವಿವೇಕಾನಂದ ವೃತ್ತದವರೆಗೆ, ಚಿಕ್ಕಸಿಂದಗಿ ಬೈಪಾಸ್‌ದಿಂದ ಅಂಬೇಡ್ಕರ್ ವೃತ್ತದವರೆಗೆ, ಅಂಬೇಡ್ಕ‌ರ ವೃತ್ತದಿಂದ ಗಾಂಧಿ ವೃತ್ತದವರೆಗೆ, ಮೊರಟಗಿ ಬೈಪಾಸ್‌ವರೆಗೆ ಸೇರಿದಂತೆ ಸಿಂದಗಿ ನಗರದ ಸುತ್ತಲೂ ಬೀದಿ ದೀಪಗಳ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.ಹೆಗ್ಗೆರೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ರೂ.1ಕೋಟಿ 15ಲಕ್ಷ ಡಾಂಬರೀಕರಣಕ್ಕೆ ಅನುದಾನ ಮಂಜೂರಾಗಿದೆ. ಸೋಂಪುರ ರಸ್ತೆಯಿಂದ ಹಳೆಯ ಚಾಂದಕವಟೆ ಮಾರ್ಗಕ್ಕೆ ಸೇರುವ ರಸ್ತೆ ಹಾಗೂ ಬಂದಾಳ ರಸ್ತೆಗಳಿಗೆ ಬೀದಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕೃಷಿ ಪತ್ತಿನ ಸಹಕಾರಿ ಸಂಘ ಆಲಮೇಲ ನೂತನವಾಗಿ ಆಯ್ಕೆಯಾದ ಎಲ್ಲಾ ಸದಸ್ಯರಿಗೆ ಬಿಜೆಪಿಯ ಜಿಲ್ಲಾ ಮುಖಂಡರಾದ ಹಾಗೂ KPR ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಮಲ್ಲಿಕಾರ್ಜುನ ಜೋಗುರ ಇವರು ಇಂದು ಆಲಮೇಲ ಕೆಪಿಆರ್ ಆಫೀಸ್ ನಲ್ಲಿ ಎಲ್ಲಾ ಸದಸ್ಯರಿಗೆ ಗೌರವ ಸನ್ಮಾನ ಸಮಾರಂಭ ನೆರವೇರಿಸಿದರು. ಸಂದರ್ಭದಲ್ಲಿ ಗೊಲ್ಲಾಳ ಉಪ್ಪಿನ ಸಿದ್ದಲಿಂಗ ಸುಬೇದಾರ್ ಬಾಬು ಮೇಟಿ ಮುತ್ತು ನಣದಿ ಪ್ರಶಾಂತ್ ನಾಸಿ ನಾಗರಾಜ್ ಆಳೂರ ಬಸವರಾಜ ನಂದೂರ ಕೃಷ್ಣಕುಮಾರ ಗೌಂಡಿ ವಿಜಯಕುಮಾರ್ ಶ್ರೀ ಗಿರಿ ಹಾಗೂ ಕೆಪಿಆರ್ ಸಿಬ್ಬಂದಿಗಳು ಭಾಗಿಯಾಗಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ : ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಮಂಗಳವಾರ ಬಬಲೇಶ್ವರ ತಾಲೂಕಿನ ಕಾಖಂಡಕಿ ಹಾಗೂ ಕಾರಜೋಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಬಬಲೇಶ್ವರ ತಾಲೂಕಾ ಪಂಚಾಯತಿ ಸಭಾಗಂಣದಲ್ಲಿ ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಇ-ಹಾಜರಾತಿ, ನರೇಗಾ, ವಸತಿ, ಎಸ್ ಬಿಎಂ,ಇ-ಖಾತಾ, ಗ್ರಂಥಾಲಯ,ಕರ ವಸೂಲಾತಿ ಸೇರಿ ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಿ, ಗ್ರಾಮಗಳ ಅಭಿವೃದ್ಧಿಯಲ್ಲಿ ಪಿಡಿಓಗಳ ಪಾತ್ರ ಮುಖ್ಯವಾಗಿದ್ದು, ನೀರಿಕ್ಷೀತ ಪ್ರಗತಿಗೆ ಶ್ರಮವಹಿಸುವಂತೆಯೂ, ಅದರಲ್ಲೂ,ಪ್ರತಿನಿತ್ಯ ಎಲ್ಲಾ ಅಧಿಕಾರಿ,ಸಿಬ್ಬಂದಿ ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗಿ ಇ ಹಾಜರಾತಿ ಮೂಲಕ ಹಾಜರಾತಿ ಸಲ್ಲಿಸಲು ಸೂಚಿಸಿದರು. ಬಬಲೇಶ್ವರ ಕಳೆದ ವರ್ಷ ಉತ್ತಮ ಸಾಧನೆ ಮಾಡಿದ್ದು, ಪ್ರಸಕ್ತ ಸಾಲಿಗೂ ಉತ್ತಮ ಪ್ರಗತಿ ಕಾಣಬೇಕೆಂದು ಸಲಹೆ ನೀಡಿದರು. ತಾಲೂಕಿನ ಕಾಖಂಡಕಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ, ಆರೋಗ್ಯ ಕೇಂದ್ರದಲ್ಲಿನ ತಪಾಸಣಾ ಕೊಠಡಿ, ಪ್ರಯೋಗಾಲಯ, ಹೆರಿಗೆ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ : ತಾಲೂಕಿನ ಚಿಕ್ಕಪಡಸಲಗಿ ಪುನರ್ವಸತಿ ಕೇಂದ್ರದಲ್ಲಿ ಹೊಸದಾಗಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾರಂಭಿಸಲು ಕೆಪಿಸಿಸಿ ಉಪಾಧ್ಯಕ್ಷ, ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರಿಗೆ ಮನವಿ ಸಲ್ಲಿಸಿದರು. ಕ್ಷೇತ್ರದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಚಿಕ್ಕಪಡಸಲಗಿ ಪುನರ್ವಸತಿ ಕೇಂದ್ರದಲ್ಲಿ ಸರ್ಕಾರದಿಂದ ನಿರ್ಮಾಣಗೊಂಡಿರುವ ಸುಮಾರು 12 ರೂಮಗಳ ಸುಸಜ್ಜಿತವಾದ ನೂತನ ಕಟ್ಟಡದ ಜೊತೆಗೆ 3 ಎಕರೆ ಆಟದ ಮೈದಾನ ಹೊಂದಿದೆ. ಜಿಲ್ಲೆಯ ಉಪ ನಿರ್ದೇಶಕರು ಶಾಲಾ ಶಿಕ್ಷಣ ಪದವಿ ಪೂರ್ವ ಇಲಾಖೆ ಖುದ್ದಾಗಿ ವೀಕ್ಷಣೆ ಮಾಡಿ, ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪ.ಪೂ) ಬೆಂಗಳೂರು ಇವರಿಗೆ ವರದಿಯನ್ನು ಸಲ್ಲಿಸಿರುತ್ತಾರೆ, ಕಾರಣ ತಾವುಗಳು ಚಿಕ್ಕಪಡಸಲಗಿ ಪುನ‌ರ್ ವಸತಿ ಕೇಂದ್ರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸ್ಥಾಪಿಸಲು ಅತ್ಯವಶ್ಯವಾಗಿರುವುದರಿಂದ ತಾವುಗಳು ಅನುಮತಿ ಕೊಡಬೇಕೆಂದು ಮನವಿ ಮಾಡಿದರು. ಜೋತೆಗೆ ಚಿಕ್ಕಪಡಸಲಗಿ ಗ್ರಾಮಸ್ಥರಾದ ಪರಮಗೊಂಡ ದಾನಗೌಡˌ ಗಿರಮಲ್ಲ ನಂದಗಾಂವˌ ಮಲ್ಲು ಪಟ್ಟಣಶೆಟ್ಟಿˌ ಸದಾಶಿವ ದಾನಗೌಡˌ ಮಲ್ಕಯ್ಯ ಮಠಪತಿˌ ಸೇರಿದಂತೆ ಇತರರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಗುರಿಯ ದಾರಿಯಲ್ಲಿ ಅನೇಕ ಅಡೆತಡೆಗಳು ಎದುರಾಗುತ್ತವೆ ಆದರೆ ಅವುಗಳ ಕಡೆ ಗಮನಕೊಡದೆ ಗುರಿಯತ್ತಲೇ ನಿಮ್ಮ ದೃಷ್ಟಿ ಕೇಂದ್ರೀಕರಿಸಬೇಕು ಎಂದು ಉಪನ್ಯಾಸಕ ಸಿದ್ದಲಿಂಗ ಕಿಣಗಿ ಹೇಳಿದರು.ಸಿಂದಗಿ ತಾಲೂಕಿನ ರಾಂಪೂರ ಪಿಎ ಗ್ರಾಮದ ಜ್ಞಾನ ಸಿಂಚನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ಸುಲಭದ ಕೆಲಸವಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇದ್ದುಕೊಂಡು ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸುವುದು ದೊಡ್ಡ ಸಾಧನೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿದರೆ ಯಶಸ್ಸು ನಿಮ್ಮದಾಗುತ್ತದೆ ಎಂದರು.ಕಾರ್ಯಕ್ರಮವನ್ನು ಬಬಲೇಶ್ವರದ ಶ್ರೀ ಶಾಂತವೀರ ಪಪೂ ಕಾಲೇಜಿನ ಉಪನ್ಯಾಸಕ ಮಲ್ಲಿಕಾರ್ಜುನ ಅವಟಿ ಉದ್ಘಾಟಿಸಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ, ಇದು ಕೇವಲ ಬೀಳ್ಕೊಡುಗೆ ಸಮಾರಂಭವಲ್ಲ. ನಿಮ್ಮ ಬದುಕಿನ ಹೊಸ ಅಧ್ಯಾಯದ…

Read More

ಕೊಲ್ಹಾರ: ವಿಜಯಪುರ ಜಿಲ್ಲೆಯ ಕೊಲ್ದಾರ, ಬ. ಬಾಗೇವಾಡಿ, ಬಬಲೇಶ್ವರ, ವಿಜಯಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ರೈತರ ಜಮೀನುಗಳಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಅಂತರ್ಜಲ ಹೆಚ್ಚಿಸುವ ಸಲುವಾಗಿ ಮುಳವಾಡ ಏತ ನೀರಾವರಿ ಬಿ, ಸ್ಕೀಂ ಪ್ರಾರಂಭಿಸಿ ಕೆರೆ ಮತ್ತು ಹಳ್ಳ ತುಂಬಿಸುವ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ತಹಶೀಲ್ದಾರ ಸಂತೋಷ ಮ್ಯಾಗೇರಿ ಅವರ ಮೂಲಕ ಮತಕ್ಷೇತ್ರದ ಸಚಿವರಾದ ಶಿವಾನಂದ ಎಸ್. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರವರುಗಳಿಗೆ ಹಾಗೂ ಆಲಮಟ್ಟಿ ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರರಿಗೆ ತಾಲೂಕಿನ ಮಸೂತಿ ಜಾಕ್ವೆಲನಲ್ಲಿ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೆಬಿಜೆಎನ್ಎಲ್ ಅಧಿಕಾರಿಗಳಾದ ಗೋವಿಂದ್ ರಾಥೋಡ, ಎನ್ ಟಿಪಿಸಿ ಪಿಎಸ್ಐ ಯತೀಶ್ ಕೆ ಎನ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಸೋಮು ಬಿರಾದಾರ, ಸಂತೋಷ ಚನಗೊಂಡ, ಶಶಿಕಾಂತ ಬಿರಾದಾರ,…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ಎನ್‌ಟಿಪಿಸಿ ಕೂಡಗಿಯಲ್ಲಿ ರವಿವಾರ, ಸೋಮವಾರದಂದು ಮಹಾಶಕ್ತಿನಗರ ಟೌನ್‌ಶಿಪ್‌ನಲ್ಲಿ ಎರಡು ದಿನಗಳ ಆನಂದ ಉತ್ಸವ–2026 ಅನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ಮಿತಾಲಿ ಮಹಿಳಾ ಸಮಿತಿ, ಎನ್‌ಟಿಪಿಸಿ ಕೂಡಗಿ ಭವ್ಯವಾಗಿ ಆಯೋಜಿಸಿದ್ದು, ಸಾಂಸ್ಕೃತಿಕ ಪರಂಪರೆ, ಸಮುದಾಯ ಬಾಂಧವ್ಯ ಮತ್ತು ಸಾಮಾಜಿಕ ಸಬಲೀಕರಣವನ್ನು ಆಚರಿಸುತ್ತಿದೆ.ಉತ್ಸವವನ್ನು ಎನ್‌ಟಿಪಿಸಿ ಕೂಡಗಿಯ ಯೋಜನಾ ಮುಖ್ಯಸ್ಥ ಮಧು ಎಸ್. ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಮತ್ತು ಮಿತಾಲಿ ಮಹಿಳಾ ಸಮಿತಿಯ ಸದಸ್ಯರು ಇದ್ದರು. ಉದ್ಘಾಟನಾ ಕಾರ್ಯಕ್ರಮವು ಆಕರ್ಷಕ ಸಾಂಪ್ರದಾಯಿಕ ಸ್ಥಳೀಯ ಜಾನಪದ “ಢೋಲು ನೃತ್ಯ” ದಿಂದ ಗುರುತಿಸಲ್ಪಟ್ಟಿತು, ಇದು ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಿತು ಮತ್ತು ಪ್ರೇಕ್ಷಕರಿಗೆ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿತು. ಎನ್‌ಟಿಪಿಸಿ ಕೂಡಗಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಉಪಕ್ರಮಗಳ ಭಾಗವಾಗಿ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ ಹತ್ತಿರದ ಗ್ರಾಮೀಣ ಪ್ರದೇಶಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ಕರ್ಷ್ ವಿದ್ಯಾರ್ಥಿವೇತನವನ್ನು ನೀಡಲಾಯಿತು. ಮಹಿಳಾ ಸಬಲೀಕರಣದ ಕಡೆಗೆ ತನ್ನ ಬದ್ಧತೆಯನ್ನು…

Read More

ಉದಯರಶ್ಮಿ ದಿನಪತ್ರಿಕೆಕೊಲ್ದಾರ: ಉಡಿತುಂಬಿಸಿಕೊಳ್ಳುವ ಕಾರ್ಯಕ್ರಮವೆಂದರೆ ಹೆಣ್ಣುಮಕ್ಕಳಿಗೆ ಹಬ್ಬವಿದ್ದಂತೆ. ಇಂಥಹ ಕಾರ್ಯಕ್ರಮಗಳು ಜರುಗುತ್ತಿರುವದರಿಂದ ನಮ್ಮ ಭಾರತೀಯ ಪರಂಪರೆ ವಿಶ್ವದಲ್ಲಿಯೇ ಮಾದರಿಯಾಗಿದ್ದು, ಮಹಿಳೆಯರು ಸಮಾಜದಲ್ಲಿ ಜಾಗೃತಿಯಿಂದ ನಡೆದುಕೊಂಡು ಕುಟುಂಬ ವ್ಯವಸ್ಥೆಯು ಅಲುಗಾಡದಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದಾರಿ ನಿಭಾಯಿಸಬೇಕು ಎಂದು ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ಪಟ್ಟಣದಲ್ಲಿ ಜರುಗುತ್ತಿರುವ ತೆರಪಿ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಅವರು ಮಾತನಾಡಿದರು. ನಮ್ಮ ಹಿರಿಯರು ಹಾಕಿಕೊಟ್ಟ ಸನಾತನ ಧರ್ಮ ಪರಂಪರೆಯನ್ನು ಸಂಸ್ಕೃತಿಯನ್ನು ಸಂಸ್ಕಾರವನ್ನು ನಿತ್ಯ ಪಾಲಿಸುವ ಪರಿಪಾಠವನ್ನು ಮಹಿಳೆಯರು ಹಿಂದಿನಿಂದಲೂ ಆಚರಿಸುತ್ತಾ ಬಂದಿದ್ದು ಮುಂದೆಯೂ ಕೂಡಾ ನಮ್ಮ ಮಕ್ಕಳಿಗೆ ಧರ್ಮ ಭೋಧನೆಯ ತತ್ವವನ್ನು ಉಳಿಸಲು ಸದಾವಕಾಲ ಆಚರಣೆಯಲ್ಲಿ ಉಳಿಯಬೇಕಾದರೆ ಜಾತ್ರೆ ಉತ್ಸವ ಪುರಾಣ ಪ್ರವಚನ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಸಾಗಬೇಕು ಎಂದರು. ಪ್ರತಿಯೊಬ್ಬ ಮಹಿಳೆಯೂ ತನ್ನ ಜೀವಿತಾ ಅವಧಿಯು ಮುತ್ತೈದೆಯಾಗಿರಬೇಕು ಎಂದು ಬಯಸುತ್ತಾಳೆ. ಅದರ ಸಂಕೇತವಾಗಿಯೇ ಮಹಿಳೆಯರು ಕುಂಕುಮ, ಬಳೆ, ಕಾಲುಂಗುರ, ತಾಳಿ,…

Read More

ಸ್ವಸ್ತ ಸ್ವಸ್ತ, ಎಚ್ಚರ ಎಚ್ಚರ, ಸುಖಿ ಸುಖಿ ಮಳೆಗಾಲ ಘೂಳೇಶ್ವರರಿಂದ ಈ ವರ್ಷದ ಹೇಳಿಕೆ ಚಡಚಣ :ಸಮೀಪದ ಉಮರಜ ಗ್ರಾಮದ ರೇವಣಸಿದ್ಧೇಶ್ವರ ಜಾತ್ರೆಯ ನಿಮಿತ್ಯ ರವಿವಾರ ನಸುಕಿನ ಜಾವ 4 ರಿಂದ 5 ಗಂಟೆಯವರೆಗೆ ರುದ್ರಾವತಾರಿ ಶ್ರೀ ಘೂಳೇಶ್ವರ ಮಹಾರಾಜರು ನುಡಿಮುತ್ತುಗಳು ಹೇಳಿದರು, ಅಲ್ಲದೇ ರುದ್ರಕಟ್ಟೆಯ ಮೇಲೆ ದೇವಾಸ್ಥಾನದ ಗರ್ಭ ಗುಡಿಯಲ್ಲಿರುವ ಶ್ರೀ ರೇವಣಸಿದ್ದೇಶ್ವರರ ಬೃಹತ್ ಲಿಂಗದ ಕಡೆ ಕೈಮುಗಿದು ನಿಂತಿರುವುದು ಭಕ್ತರಲ್ಲಿ ಆತಂಕ ಮೂಡಿಸಿರುವುದು ಕಂಡು ಬಂದಿತು.ಇವರ ನುಡಿಮುತ್ತುಗಳನ್ನು ಕೇಳುತ್ತಲೆ ಸೇರಿದ ಸಹಸ್ರಾರು ಭಕ್ತಾಧಿಗಳು ಸಂತಸ ಚಪ್ಪಾಳೆ ಹೊಡೆದು ಆನಂದ ಪಟ್ಟರು.ಶನಿವಾರ ರಾತ್ರಿ 12:30 ಗಂಟೆಗೆ ಗ್ರಾಮದಿಂದ ವಿವಿಧ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ, ನಂದಿ ಧ್ವಜ ಭವ್ಯ ಮೆರವಣಿಗೆಯು ದೇವಸ್ಥಾನಕ್ಕೆ ತಲುಪಿತು. ಅಲ್ಲದೆ ಮದ್ದು ಸುಡುವುದರೊಂದಿಗೆ ನಂತರ ನುಡಿಮುತ್ತುಗಳು ಜರುಗಿದವು. ಇದನ್ನು ಆಲಿಸಲು ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಟದಿಂದ ಸುಮಾರು 30 ರಿಂದ 40 ಸಾವಿರ ಭಕ್ತಾಧಿಗಳು ಶಾಂತ ರೀತಿಯಿಂದ ನುಡಿಮುತ್ತುಗಳನ್ನು ಆಲಿಸಿದರು.ಸಹಸ್ರಾರು ಭಕ್ತರು ನೆರೆದಿದ್ದರು.

Read More