Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ಬಕ್ರೀದ ಮುಸ್ಲಿಂ ಬಾಂಧವರ ಪ್ರಮುಖ ತ್ಯಾಗ ಮತ್ತು ಬಲಿದಾನದ ಹಬ್ಬವಾಗಿದೆ. ಅಲ್ಲಾಹನ ಮೇಲಿನ ಭಕ್ತಿಯಿಂದ ಪ್ರವಾದಿ ಮಹಮ್ಮದ ಇಬ್ರಾಹಿಂ ತನ್ನ ಮಗನನ್ನೇ ಬಲಿ ಕೊಡಲು ಮುಂದಾದಾಗ ಅವನ ತ್ಯಾಗಕ್ಕೆ ಮೆಚ್ಚಿ ಅಲ್ಲಾಹ ಮಗನ ಬದಲಾಗಿ ಕುರಿಯನ್ನು ಬಲಿ ನೀಡುವಂತೆ ಮಾಡಿದ ಪವಾಡ ನೆನಪಿಸುವ ಹಬ್ಬವೇ ಈ ಪವಿತ್ರ ಬಕ್ರೀದ್ ಹಬ್ಬ ಎಂದು ಇಸ್ಲಾಂ ಧರ್ಮಗುರು ಮೌಲಾನಾ ಶಾಕೀರ ಹುಸೇನ ಕಾಶ್ಮಿ ಹೇಳಿದರು.ನಗರದ ಹಂಜಗಿ ರಸ್ತೆಯ ಈದಗಾ ಮೈದಾನದಲ್ಲಿ ಬಕ್ರೀದ ಹಬ್ಬದ ನಿಮಿತ್ಯ ನಡೆದ ನಮಾಜ ಕ್ರಾರ್ಯಕ್ರಮದ ಮೊದಲು ಅವರು ಮಾತನಾಡಿದರು.ನಮಾಜ ಕಾರ್ಯಕ್ರಮದಲ್ಲಿ ಧರ್ಮಗುರು ಮುಫ್ತಿ ಅಬ್ದುಲ ರಹಮಾನ, ಧರ್ಮಗುರು ಹಾಪೀಜ, ಫಯರೋಜ ಬಾಗವಾನ, ಜಾವೇದ ಮೋಮಿನ, ಅಬ್ದುಲ ರಹಮಾನ ಬಾಗವಾನ , ಅಬ್ದುಲ ರಶಿದ ಮುಗಳಿ, ಷರೀಪ ಪಟೇಲ, ಹಸನ ಮುಜಾವರ, ಯುನುಶ ರೇವೂರಕರ, ಫಾರುಖ ತುರ್ಕಿ, ಫಯಾಜ ಬಾಗವಾನ, ರಫೀಕ ಇಂಡಿಕರ, ಅಬ್ದುಲ ರಶೀದ ಅರಬ, ಖಾಜಾ ಪಟೇಲ, ಹುಸೇನ ಜಮಾದಾರ, ಪುರಸಭೆ ಮಾಜಿ ಸದಸ್ಯರಾದ…

Read More

ಇಂಡಿ: ನಗರದ ಅಗರಖೇಡ ರಸ್ತೆಯಲ್ಲಿರುವ ಇವಣಿ ದಂತ ಆಸ್ಪತ್ರೆಯಲ್ಲಿ ಗುರುವಾರದಿಂದ ಉಚಿತ ದಂತ ತಪಾಸಣಾ ಶಿಬಿರ ಪ್ರಾರಂಭವಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ದಂತ ವೈದ್ಯ ಡಾ. ನಿಲೇಶ ಇವಣಿ ತಿಳಿಸಿದರು.ಅವರು ತಮ್ಮ ಆಸ್ಪತ್ರೆಯಲ್ಲಿ ೩ ದಿವಸಗಳ ಕಾಲ ದಂತ ರೋಗಿಗಳಿಗೆ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.ಶಿಬಿರದಲ್ಲಿ ಉಚಿತವಾಗಿ ಡಿಜಿಟಲ್ ಎಕ್ಸರೇ, ಔಷಧಿ ವಿತರಣೆ ಮಾಡಲಾಗುವುದು. ತಾಲ್ಲೂಕಿನ ದಂತ ರೋಗಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಅವರು ವಿನಂತಿಸಿದರು.ಈ ಸಂದರ್ಭದಲ್ಲಿ ಡಾ. ಪಿ.ಎ. ಬಿರಾದಾರ, ಡಾ. ರಾಜಶೇಖರ ತೋಳನೂರ, ಡಾ. ಸೋಮನಾಥ ಮರಗೂರ, ಡಾ. ರವಿ ತಾಂಬೆ, ಡಾ. ತನ್ಮಯ ಧನಶೆಟ್ಟಿ, ಡಾ. ಅಕ್ಷಯ ಬಿರಾದಾರ, ಡಾ. ರಾಕೇಶ ದೇಸಾಯಿ, ಡಾ. ಅಕ್ಷತಾ ಬೋಳಸೂರೆ, ಡಾ. ಸುನಿಲ್ ಕರಾಳೆ, ವಿರುಪಾಕ್ಷಿ ಧನಶ್ರೀ, ಸಿದ್ದು ಲಬ್ಬಾ, ಸತೀಶ ಝಂಪಾ, ಶಿವಾನಂದ ಕೊಪ್ಪಾ, ಮಹೇಶ ಝಂಪಾ ಸೇರಿದಂತೆ ಮತ್ತಿತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಸರ್ವರ್ ಕೊರತೆಯಿಂದ ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಪಡಿತರ ಪಡೆಯಲು ಜನರು ಹರಸಾಹಸ ಪಡುತ್ತಿರುವ ಘಟನೆ ನಡೆದಿದೆ.ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಪಿಕೆಪಿಎಸ್ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗುವ ಅಕ್ಕಿ ಪಡೆಯಲು ಜನರು ಸಾಲುಗಳಲ್ಲಿ ಇಡೀ ದಿನ ನಿಂತರೂ ಅಕ್ಕಿ ಪಡೆಯಲು ಆಗುತ್ತಿಲ್ಲ. ಈ ತಿಂಗಳ ೩೧ರೊಳಗೆ ಅಕ್ಕಿ ಪಡೆದುಕೊಳ್ಳದಿದ್ದರೆ ಅಕ್ಕಿ ಕೈತಪ್ಪಿ ಹೋಗುತ್ತದೆ. ಆದರೆ, ಬಿಪಿಲ್ ಕಾರ್ಡುದಾರರು ಹೆಬ್ಬೆಟ್ಟು ಕೊಡಲು ಹೋದಾಗ ಸರ್ವರ್ ಸಮಸ್ಯೆ ಆಗುತ್ತಿದೆ.ಇದರಿಂದ ಇಡೀ ದಿನ ಸರತಿಯಲ್ಲಿ ನಿಂತರೂ ಅಕ್ಕಿ ಸಿಗದೆ ಜನರು ನಿರಾಸೆಯಿಂದ ಮನೆಗೆ ಮರಳುವಂತಾಗಿದೆ. ‘ಸರ್ವರ್ ಸಮಸ್ಯೆಯಿಂದಾಗಿ ಮೂರು ದಿನಗಳಿಂದ ನಮಗೆ ಪಡಿತರ ಪಡೆಯಲು ಆಗುತ್ತಿಲ್ಲ. ತೋಟದ ಕೆಲಸಕ್ಕೆ ರಜೆ ಮಾಡಿ ರೇಷನ್ ಪಡೆಯಲು ಬರುತ್ತೇವೆ. ಬಿಸಿಲಲ್ಲಿ ಇಡೀದಿನ ಕಾದರೂ ಅಕ್ಕಿ ಸಿಗುತ್ತಿಲ್ಲ’ ಎಂದು ಜನರು ಬೇಸರ ಹೊರಹಾಕಿದ್ದಾರೆ.ತಡವಲಗಾ ಗ್ರಾಮದಲ್ಲಿ ಸುಮಾರು ೨೪೦೦ ಬಿಪಿಎಲ್ ಕಾರ್ಡ್ ದಾರರು ಹಾಗೂ ೩೦೦ ಎಪಿಎಲ್ ಕಾರ್ಡ್ ದಾರರು ಇದ್ದು.ಇನ್ನು ಸುಮಾರು ಏಳುನೂರು ಕಾರ್ಡುದಾರರಿಗೆ ಸರ್ವರ್…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿಗಳು ಬದಲಾಗುತ್ತಿರುವ ಕಾರ್ಪೊರೇಟ್ ಜಗತ್ತಿಗೆ ಅಗತ್ಯವಾಗಿರುವ ಕೌಶಲ್ಯಗಳನ್ನು ಒಡಮೂಡಿಸಿಕೊಂಡಾಗ ಮಾತ್ರ ಕಂಪನಿಗಳ ಆಡಳಿತ ನಿರ್ವಹಣೆ, ವ್ಯವಸ್ಥಾಪನೆ ಹಾಗೂ ಮಾರುಕಟ್ಟೆ, ಫೈನಾನ್ಸ್, ವಿಮೆ, ಸಾರಿಗೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ, ಮಾನವ ಸಂಪನ್ಮೂಲ ನಿರ್ವಹಣೆ, ಬ್ಯಾಂಕಿಂಗ್‌ ನಂತಹ ಕ್ಷೇತ್ರಗಳಲ್ಲಿ ಅರ್ಹತೆಯನ್ನು ಪಡೆಯಲು ಸಾಧ್ಯ. ವಿಷಯ ಜ್ಞಾನದ ಜತೆಗೆ ಪ್ರಾಯೋಗಿಕತೆ, ತಾಂತ್ರಿಕ ಜ್ಞಾನ, ಗಣಕವಿಜ್ಞಾನದ ಬಳಕೆ ಮತ್ತು ಬಹು ಮುಖ್ಯವಾಗಿ ಸಂಪರ್ಕ-ಸಂವಹನ ಕಲೆಯಂತಹ ವಿಶೇಷ ಕೌಶಲ್ಯಗಳನ್ನು ಹೊಂದುತ್ತಾ ದೊರೆಯುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ದರಬಾರ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಶ್ರೀ ಎಸ್.ಬಿ.ಕುಂಬಾರ ಅವರು ಅಭಿಪ್ರಾಯಪಟ್ಟರು.ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂ.ಕಾಂ. ವಿಭಾಗದಡಿಯಲ್ಲಿ ಜರುಗಿದ “ಇವೋಕ್-೨ಕೆ೨೬; ಬೀಳ್ಕೊಡುಗೆ ಸಮಾರಂಭ” ದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.ಗ್ರಾಮೀಣ ಹಾಗೂ ಆರ್ಥಿಕ-ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಸಂದರ್ಶನ ಕಲೆ, ಸಂವಹನ ಕೌಶಲ್ಯ ಮತ್ತು ಕಾರ್ಯತತ್ಪರತೆ ಮತ್ತು ಸೃಜನಾತ್ಮಕತೆ ಬ್ಯಾಂಕಿಂಗ್, ಫೈನಾನ್ಸ್, ಮಾರ್ಕೆಟಿಂಗ್, ವಿಮೆ ಮತ್ತು ಸ್ಟಾಕ್ ಮಾರುಕಟ್ಟೆ, ವ್ಯವಹಾರ ನಿರ್ವಹಣೆ, ಅಕೌಂಟಿಂಗ್ ಮತ್ತು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇದೇ ಮೇ-೨೭ ರಂದು ಬಿಜೆಪಿಯ ಜಿಲ್ಲಾಧ್ಯಕ್ಷರ ಸೂಚನೆಯ ಮೇರೆಗೆ ಈ ಕೆಳಕಂಡ ಪ್ರಮುಖರನ್ನು ವಿಜಯಪುರ ನಗರ ಮಂಡಲದ ಭಾರತೀಯ ಜನತಾ ಪಕ್ಷದ ಸಂಘಟನಾತ್ಮಕ ಪ್ರಮುಖ ಜವಾಬ್ದಾರಿಗಳಿಗೆ ನಿಯುಕ್ತಿ ಮಾಡಲಾಗಿರುವ ವಿವರ ಹೀಗಿದೆ.ಶ್ರೀಮತಿ ಜಯಶ್ರೀ ಅಫಝಲಪುರ-ಉಪಾಧ್ಯಕ್ಷರು, ಶ್ರೀಮತಿ ಮೀನಾ ಕುಂದನಗಾರ-ಉಪಾಧ್ಯಕ್ಷರು, ಶ್ರೀಮತಿ ಅನಿತಾ ರಾಠೋಡ-ಉಪಾಧ್ಯಕ್ಷರು, ಶ್ರೀಮತಿ ಮೀತಾ ದೇಸಾಯಿ-ಪ್ರಧಾನ ಕಾರ್ಯದರ್ಶಿಗಳು, ಕು.ಸ್ವಾತಿ ಕುಲಕರ್ಣಿ-ಕಾರ್ಯದರ್ಶಿಗಳು, ಶ್ರೀಮತಿ ರೇಖಾ ಚವ್ಹಾಣ- ಕಾರ್ಯದರ್ಶಿಗಳು, ಶ್ರೀಮತಿ ಬಸಮ್ಮ ಗುಜರಿ-ಕೋಶಾಧ್ಯಕ್ಷರು, ಈಗ ಕಾರ್ಯಕಾರಿಣಿ ಸದಸ್ಯರುಗಳಾದ ಶ್ರೀಮತಿ ರೋಹಿಣಿ ಚಾಮಕರ, ಶ್ರೀಮತಿ ಸುಶೀಲಾ ತಳ್ಳೊಳ್ಳಿ, ಶ್ರೀಮತಿ ಶ್ರೀದೇವಿ ಅವಧಿ, ಶ್ರೀಮತಿ ಶಾಂತಾ ಯಳಮೇಲಿ, ಶ್ರೀಮತಿ ದೀಪಾ ದುತ್ತರಗಾವಿ, ಶ್ರೀಮತಿ ಅಶ್ವಿನಿ ಕಬಾಡೆ, ಶ್ರೀಮತಿ ರಾಧಾ ಕುಲಕರ್ಣಿ, ಶ್ರೀಮತಿ ಸುಜಾತಾ ಕುಲಕರ್ಣಿ, ಶ್ರೀಮತಿ ವಂದನಾ ನಾಯಕ, ಶ್ರೀಮತಿ ಮಂಜುಳಾ ಕಲಬುರ್ಗಿ, ಶ್ರೀಮತಿ ಶ್ರೀದೇವಿ ಯಂಡಿಗೇರಿ, ಶ್ರೀಮತಿ ಅಶ್ವಿನಿ, ಚವ್ಹಾಣ, ಶ್ರೀಮತಿ ವೀಣಾ ಸೂರ್ಯವಂಶಿ, ಶ್ರೀಮತಿ ಸೋನಾಲಿ ಮಸ್ಕಿ, ಶ್ರೀಮತಿ ಕಾಶೀಬಾಯಿ ಕೂಡಗಿ, ಶ್ರೀಮತಿ ಜಯಶ್ರೀ ಬಿರಾದಾರ, ಶ್ರೀಮತಿ, ಕಲ್ಪನಾ…

Read More

ಲೇಖನ- ಡಾ. ಶಶಿಕಾಂತ ಪಟ್ಟಣರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ ಹನ್ನೆರಡನೆಯ ಶತಮಾನದ ಶರಣರನ್ನು ಸಂತರನ್ನು ಹೊಂದಿರುವ ಕನ್ನಡದ ಈ ನೆಲದಲ್ಲಿ ಏಳು ಬೆಟ್ಟಗಳ ಮಲೆಯ ಮಹದೇಶ್ವರರು ಹುಟ್ಟಿ ಬರುತ್ತಾರೆ.ಕರ್ನಾಟಕದ ಅತ್ಯಂತ ಪ್ರಸಿದ್ಧ ಮತ್ತು ಪವಿತ್ರ ಲಿಂಗಾಯತ ಧಾರ್ಮಿಕ ಕ್ಷೇತ್ರಗಳಲ್ಲಿ ಮಲೆಯ ಮಹದೇಶ್ವರ ಬೆಟ್ಟ ಒಂದಾಗಿದೆ. ಇದು ದಕ್ಷಿಣ ತುದಿಯ ಗಡಿ ಜಿಲ್ಲೆಯಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿದೆ.ಜನಪದ ಕಾವ್ಯಗಳು ಮತ್ತು ಸ್ಥಳ ಪುರಾಣಗಳ ಪ್ರಕಾರ, ಶ್ರೀ ಮಲೆ ಮಹದೇಶ್ವರ ಸ್ವಾಮಿಯ ತಂದೆ ತಾಯಿಗಳ ವಿವರತಂದೆ: ಚಂದ್ರಶೇಖರ ಮೂರ್ತಿ (ಕೆಲವು ಕಡೆ ಚಂದ್ರಶೇಖರ ಗುರುಗಳು ಎಂದೂ ಕರೆಯಲಾಗುತ್ತದೆ).ತಾಯಿ: ಉತ್ತರಾಜಮ್ಮ (ಕೆಲವು ಜನಪದ ಕಥೆಗಳ ಪ್ರಕಾರ ಇವರನ್ನು ಸುಗುಣಾದೇವಿ ಎಂದೂ ಗುರುತಿಸಲಾಗುತ್ತದೆ).ಹಿನ್ನೆಲೆ ಮತ್ತು ನಂಬಿಕೆಗಳು ದೈವಿಕ ಜನನ: ಜನಪದ ಚರಿತ್ರೆಯ ಪ್ರಕಾರ, ಉತ್ತರಾಜಮ್ಮನಿಗೆ ದೀರ್ಘಕಾಲ ಮಕ್ಕಳಾಗದಿದ್ದಾಗ ಅವರು ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ. ಭಕ್ತಿಗೆ ಮೆಚ್ಚಿದ ಶಿವನು ಅವಳ ಕನಸಿನಲ್ಲಿ ಬಂದು ಗಂಡು ಸಂತಾನದ ವರವನ್ನು ನೀಡುತ್ತಾನೆ. ಅದರಂತೆ ಜನಿಸಿದ ಬಾಲಕನೇ ಮುಂದೆ…

Read More

ಲೇಖನ- ವೀಣಾ ಹೇಮಂತಗೌಡ ಪಾಟೀಲ್,ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಹವ್ಯಾಸಗಳು ನಮ್ಮ ಬದುಕನ್ನು ರೂಪಿಸುತ್ತವೆ. ಮಕ್ಕಳ ಬಾಲ್ಯಾವಸ್ಥೆ ಅವರ ಬದುಕಿಗೆ ಅತ್ಯವಶ್ಯಕವಾದ ಮೂಲಭೂತ ಬುನಾದಿಯನ್ನು ಹಾಕಿದರೆ ಪ್ರೌಢಾವಸ್ಥೆಯಲ್ಲಿ ಅವುಗಳನ್ನು ಪರಿಪಾಲಿಸುವುದು ಸರಳವಾಗುತ್ತದೆ.ನಾವು ಚಿಕ್ಕಂದಿನಲ್ಲಿ ಮಕ್ಕಳಿಗೆ ನಿತ್ಯವಿಧಿಗಳನ್ನು ಸರಿಯಾದ ಕ್ರಮದಲ್ಲಿ ಅನುಸರಿಸಲು ಅಭ್ಯಾಸ ಮಾಡಿಸಬೇಕು ಎಂಬುದನ್ನು ಈ ಹಿಂದಿನ ಸಂಚಿಕೆಯಲ್ಲಿ ಅರಿತಿದ್ದೇವೆ. ಹಾಗೆ ಮಕ್ಕಳಲ್ಲಿ ನಿತ್ಯ ಕರ್ಮಗಳನ್ನು, ಒಳ್ಳೆಯ ಆಹಾರದ ಅಭ್ಯಾಸಗಳನ್ನು ಚಿಕ್ಕಂದಿನಲ್ಲಿಯೇ ಅವರ ಜೀವನದ ಭಾಗವಾಗಿ ರೂಢಿಸಬೇಕು. ಆಹಾರದ ರುಚಿ, ಸತ್ವ, ಹಣ್ಣು ತರಕಾರಿಗಳ ಸೇವನೆಯಿಂದಾಗುವ ಪ್ರಯೋಜನಗಳು ನಾರಿನ ಪದಾರ್ಥಗಳ, ದ್ವಿದಳ ಧಾನ್ಯಗಳ ಕುರಿತ ಜ್ಞಾನವನ್ನು ಪಾಲಕರಾದವರು ಪ್ರತಿದಿನ ಮಾಹಿತಿಯ ರೂಪದಲ್ಲಿ ಮಕ್ಕಳೊಂದಿಗೆ ಹಂಚಿಕೊಳ್ಳಬೇಕು.ಮಕ್ಕಳು ಆಟ ಪಾಠಗಳಲ್ಲಿ ಭಾಗಿಯಾಗಬೇಕು. ಆಟಗಳು ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಹೊಂದಾಣಿಕೆ, ಅಭಿಮಾನ ಮತ್ತು ಆತ್ಮಸ್ಥೈರ್ಯಗಳನ್ನು ಬೆಳೆಸುತ್ತವೆ. ಮಕ್ಕಳು ಸರಿಯಾದ ಸಮಯಕ್ಕೆ ನಿದ್ರೆ ಮಾಡಲು ಕೂಡ ರೂಢಿಸಬೇಕು. ನಿಯಮಿತವಾದ ಆಹಾರ ಸೇವನೆ, ಒಳ್ಳೆಯ ನಿದ್ರೆ, ಆಟೋಟಗಳು ಮತ್ತು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡರೆ ಒಳ್ಳೆಯ ಜೀವನವನ್ನು ಸಾಗಿಸಲು ಸಹಕಾರಿಯಾಗುತ್ತದೆ.…

Read More

ಪ್ರಧಾನಿ ಮೋದಿ ಸರ್ಕಾರಕ್ಕೆ ಈ ಭಾಗದ ಜನರ ಪರವಾಗಿ ಸಂಸದ ರಮೇಶ ಜಿಗಜಿಣಗಿ ಅಭಿನಂದನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿದ್ದ ಬೆಂಗಳೂರು- ಹುಬ್ಬಳ್ಳಿ-ಗದಗ ಬೈಪಾಸ್ ವಿಜಯಪುರ ಮಾರ್ಗವನ್ನು ಶಾಶ್ವತ ಮಾಡುವ ವಿಚಾರಕ್ಕೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ.ಜನರ ಬಹುದಿನದ ಬೇಡಿಕೆಯನ್ನು ಆಧರಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಮಂತ್ರಿ ವಿ. ಸೋಮಣ್ಣ ಅವರಿಗೆ ಸತತವಾಗಿ ಪತ್ರ ವ್ಯವಹಾರ ನಡೆಸಲಾಗಿತ್ತಲ್ಲದೇ ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ ಫಲವಾಗಿ ಇದೀಗ ಕೇಂದ್ರ ಸರ್ಕಾರ ಒಲವು ತೋರಿದೆ.ಈ ಹಿಂದೆ ಕ್ರಿಸ್ ಮಸ್ ಸೇರಿದಂತೆ ಹಲವು ಹಬ್ಬದ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಪ್ರಾಯೋಗಿಕ ವಾಗಿ ರೈಲು ಸೇವೆ ಆರಂಭಿಸಲಾಗಿತ್ತು. ಪರಿಣಾಮ ಜನರಿಂದ ವ್ಯಾಪಕವಾಗಿ ಸ್ಪಂದನೆ ವ್ಯಕ್ತವಾಯಿತಲ್ಲದೇ ಆಯಾ‌ಭಾಗದ ಸಂಸದರು, ರೈಲ್ವೆ ಮಂತ್ರಿ ಮತ್ತು ಪ್ರಧಾನಿ ಮೋದಿ ಸರ್ಕಾರದ ಕಾರ್ಯವನ್ನು ಕೊಂಡಾಡಿದ್ದರು. ಜನರ ಈ ನಾಡಿಮಿಡಿತ ಅರಿತು ಈ ಮಾರ್ಗವನ್ನು ಶಾಶ್ವತಗೊಳಿಸುವಂತೆ ದುಂಬಾಲು ಬಿದ್ದ ಫಲವಾಗಿ ರೈಲ್ವೆ ಮಂತ್ರಿಗಳು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿಎಸ್‌ಎನ್‌ಎಲ್ ನೆಟವರ್ಕ್ ಸಮಸ್ಯೆಯಾಗಿ ಜನರಿಗೆ ವ್ಯಾಪಕ ತೊಂದರೆಯಾಗಿದೆ, ಈ ನೆಟವರ್ಕ್ ಸಮಸ್ಯೆಯನ್ನು ನಿವಾರಣೆ ಮಾಡುವಂತೆ ನಾನೇ ಸ್ವತ: ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿರುವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಎಸ್‌ಎನ್‌ಎಲ್ ನೆಟವರ್ಕ್ ತೊಂದರೆ ವಿಜಯಪುದಲ್ಲಿಯೂ ವ್ಯಾಪಕವಾಗಿದೆ, ಈ ಬಗ್ಗೆ ಅನೇಕ ಗ್ರಾಹಕರು ತೊಂದರೆ ಎದುರಿಸುತ್ತಿದ್ದಾರೆ, ಈ ಸಮಸ್ಯೆಯ ಬಗ್ಗೆ ಅನೇಕ ಗ್ರಾಹಕರು ಸಹ ನನ್ನ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಅಧಿಕಾರಿಗಳನ್ನು ನಾನು ಈ ವಿಷಯವಾಗಿ ತರಾಟೆಗೆ ತೆಗೆದುಕೊಂಡಿದ್ದು, `ಇಂದು ದೂರ ಸಂಪರ್ಕ ಒಂದು ಜೀವನದ ಅವಿಭಾಜ್ಯ ಅಂಗವಾಗಿದೆ, ಕೇವಲ ಸಂಪರ್ಕ ಅಷ್ಟೇ ಅಲ್ಲದೇ ದೈನಂದಿನ ವ್ಯಾಪಾರ-ವಹಿವಾಟುಗಳು ಅಂತರ್ಜಾಲ ಕೇಂದ್ರಿತವಾಗಿವೆ, ಜನಸಾಮಾನ್ಯರು ಸಹ ಯುಪಿಐ ಮೂಲಕವೇ ಪೇಮೆಂಟ್ ಮಾಡುವುದು ಸಾಮಾನ್ಯವಾಗಿದೆ, ಆದರೆ ನೆಟವರ್ಕ್ ಇಲ್ಲದೇ ಗ್ರಾಹಕರು ಎದುರಿಸುತ್ತಿರುವ ಸಂಕಷ್ಟ ನಿಮಗೆ ಅರ್ಥವಾಗುವುದಿಲ್ಲವೇ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿರುವೆ, ಶೀಘ್ರದಲ್ಲಿಯೇ ಎದುರಾಗಿರುವ ತಾಂತ್ರಿಕ ಸಮಸ್ಯೆ…

Read More