ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಬಲೇಶ್ವರ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಅಶೋಕ್ ಎಂ ಬೂದಿಹಾಳ ಆಯ್ಕೆಯಾಗಿದ್ದಾರೆ.
ಅದರಂತೆ ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಗುಡ್ಡಾಪಗೋಳ, ಉಪಾಧ್ಯಕ್ಷರಾಗಿ ಪರಸಪ್ಪ ಕಾಳಗಿ, ಹಾಗೂ ಮಹಿಳಾ ಉಪಾಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮಿ ತೊರವಿ, ಹಾಗೆಯೇ ಖಜಾಂಚಿಯಾಗಿ ಸಿದ್ದರಾಯ ಅಥಣಿ ಸಹಕಾರ್ಯದರ್ಶಿಯಾಗಿ ಪರಸಪ್ಪ ಗಂಗೂರ್ ಹಾಗೂ ಮಹಿಳಾ ಸಹಕಾರ್ಯದರ್ಶಿಯಾಗಿ ಶ್ರೀಮತಿ ದೀಪ್ತಿ ದೇವಕತೆ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ವೆಂಕಟರೆಡ್ಡಿ ನಿಂಗರೆಡ್ಡಿ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ದೀಪ ಹಿರೇಮಠ ಆಯ್ಕೆಯಾಗಿದ್ದಾರೆ ಅದರಂತೆ ಗೌರವ ಅಧ್ಯಕ್ಷರಾಗಿ ಜಿ ಎನ್ ಬಾಲಸಿಂಗ್ ನೇಮಕಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಎಸ್ ಬಿ ಹಲಸಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

