Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಪೋಷಕರು ಮಕ್ಕಳನ್ನು ಒಳ್ಳೆಯ ಸಂಸ್ಕಾರಯುತ ವಾತಾವರಣದಲ್ಲಿ ಬೆಳೆಸಬೇಕು. ಮಕ್ಕಳು ಬಾಲ್ಯದಲ್ಲಿ ಕಲಿತುಕೊಳ್ಳುವ ಸಂಸ್ಕಾರ ಅವರ ಬದುಕಿಗೆ ಮುನ್ನುಡಿಯಾಗುತ್ತದೆ ಎಂದು ವಿಜಯಪುರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕೋಶಾಧ್ಯಕ್ಷರಾದ ಡಾ ಸಂಗಮೇಶ ಮೇತ್ರಿ ಹೇಳಿದರು.ಅವರು ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಸಂತೋಷ ಬಂಡೆ ಅವರ ಮಕ್ಕಳಾದ ಅನುಶ್ರೀ-ಶ್ರೀನಿಧಿ ಅವರ 5ನೇ ವರ್ಷದ ಜನ್ಮದಿನದ ನಿಮಿತ್ತ ‘ಮೂಲ’-ಕಥಾ ಸಂಕಲನದ ಲೋಕಾರ್ಪಣೆ, ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಜಯಂತಿ, ವಿಶ್ವ ಕೈತೊಳೆಯುವ ದಿನ ಹಾಗೂ ಒಂದು ನೂರು ಸಸಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.’ಮೂಲ’ ಕಥಾ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದ ನಾದ ಕೆ ಡಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಚಿದಂಬರ ಬಂಡಗರ, ಒಳ್ಳೆಯ ಪುಸ್ತಕಗಳು ನಮ್ಮ ಮನೆಯ ಸಂಪತ್ತು ಎಂಬ ಭಾವನೆ ಬೆಳೆದು ನಾಡಿನಾದ್ಯಂತ ಪುಸ್ತಕ ಸಂಸ್ಕ್ರತಿ ವ್ಯಾಪಿಸಬೇಕು…
ವಿಜಯಪುರ: ಔದ್ಯೋಗಿಕ ಕ್ರಾಂತಿಯ ಮೂಲಕ ರಾಜ್ಯದ ಅಭಿವೃದ್ಧಿಗೆ ಪಣ ತೊಟ್ಟಿದ್ದು, ಜಿಲ್ಲೆಯ ಪ್ರಗತಿಗೂ ಆದ್ಯತೆ ನೀಡುವುದಾಗಿ ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ ಬಿ ಪಾಟೀಲ ಹೇಳಿದರು.ಬಂಡವಾಳ ಹೂಡಿಕೆಗಾಗಿ ಹಲವಾರು ದೇಶಗಳಿಗೆ ಭೇಟಿ ನೀಡಿ ನಗರಕ್ಕಾಗಮಿಸಿದ ಸಂದರ್ಭದಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಂಡವಾಳ ಹೂಡಲು ಹಲವಾರು ದೇಶದ ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಇನ್ನು ಐದು ವರ್ಷಗಳಲ್ಲಿ ನಮ್ಮ ರಾಜ್ಯ ಸಾಕಷ್ಟು ಬದಲಾವಣೆಯಾಗಲಿದೆ. ಮುಂಬರುವ ದಿನಗಳಲ್ಲಿ ದುಡಿಯುವ ಕೈಗಳಿಗೆ ಇಲ್ಲಿಯೇ ಉದ್ಯೋಗ ಸಿಗಲಿದ್ದು, ಒಂದಿಷ್ಟು ನಿರುದ್ಯೋಗ ಸಮಸ್ಯೆ ಪರಿಹಾರವಾಗಲಿದೆ. ಈಗ ಸದ್ಯ ರಾಜ್ಯದಲ್ಲಿ ಬರಗಾಲ ಕಾಡುತ್ತಿದ್ದು, ಜಿಲ್ಲೆಯಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ, ಮೇವು ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕುಡಿಯುವ ನೀರಿಗಾಗಿ ಕಾಲುವೆಗಳಿಗೆ ನೀರು ಹರಿಸಲು ತಿಳಿಸಿಲಾಗಿದೆ. ಕೆರೆಗಳ ಸಂರಕ್ಷಣೆ ಜೊತೆಗೆ ತುಂಬಿಸುವ ಕಾರ್ಯ ಮಾಡಲಾಗುವುದು ಎಂದರು.ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಬಿ ಎಸ್ ಪಾಟೀಲ…
Updated: April 2026 — All steps verified and tested Download Helldivers 2 Cheat Engine Official The official Helldivers 2 Cheat Engine download is safe and fast — this free version works flawlessly on Windows 10 and 11 platforms. Helldivers 2 Cheat Engine offers quick installation and fast setup with detailed instructions provided to avoid any errors during the process. Secure sources hosting the latest 2026 release ensure users avoid malware or corrupt files while downloading Helldivers 2 Cheat Engine. This guide helps users download Helldivers 2 Cheat Engine free and install it safely without risking bans during gameplay. With, players…
ಚಡಚಣ: ರಾಜ್ಯದ ಕಟ್ಟ ಕಡೆಯ ಹಳ್ಳಿ, ಹಾಲುಮತ ಸಮಾಜದವರ ಕಾಶಿ, ಹಾಲುಮತ ಸಮಾಜ ಬಾಂಧವರ ಆರಾಧ್ಯ ದೈವ ಬೀರಲಿಂಗೇಶ್ವರ ದೇವಾಲಯವು ಬೀರಲಿಂಗೇಶ್ವರನು ಐಕ್ಯವಾದ ಸ್ಥಳವಾಗಿರುವುದರಿಂದ ಸಹಸ್ರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಧಾರ್ಮಿಕ ಕ್ಷೇತ್ರ ಎಂದು ಐತಿಹ್ಯವಿದೆ. ಸುಂದರ ಪರಿಸರದ ನಡುವೆ ಈ ಕ್ಷೇತ್ರವಿದ್ದು, ಪ್ರತಿನಿತ್ಯ ಸ್ಥಳೀಯರಲ್ಲದೆ, ರಾಜ್ಯ, ಹೊರ ರಾಜ್ಯಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಅದಕ್ಕಾಗಿ ಯಾತ್ರಿ ನಿವಾಸವು ಈ ಕ್ಷೇತ್ರಕ್ಕೆ ಅವಶ್ಯಕತೆ ಇದೆ ಎಂದು ಶಾಸಕರಾದ ವಿಠ್ಠಲ ಕಟಕದೊಂಡರವರು ಹೇಳಿದರು.ಸೋಮವಾರದಂದು ಶಿರಾಡೋಣ ಗ್ರಾಮದ ಬೀರಲಿಂಗೇಶ್ವರ ದೇವಾಸ್ಥಾದ ಆವರಣದಲ್ಲಿ ಯಾತ್ರಿ ನಿವಾಸಕ್ಕೆ ಭೂಮಿಪೂಜೆಯ ನೇರವೇರಿಸಿ ಮಾತನಾಡಿದ ಅವರು. ರೈತರಿಗೆ ಶಕ್ತಿ ತುಂಬಲು ಚಡಚಣ ಏತ ನೀರಾವರಿ ಯೋಜನೆಯ ಕಾಮಗಾರಿ ಬೇಗನೆ ಪೂರ್ಣಗೊಳಿಸಿ ನೀರು ಹರಿಸಿ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡುತ್ತೇನೆಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಮದ ಹೆಮ್ಮೆಯ ಸೈಕರಿಗೆ ಗೌರವಿಸುವ ಮೂಲಕ ದೇಶಪ್ರೇಮ ಮೆರೆದರು.ಈ ವೇಳೆಯಲ್ಲಿ ಬೀರಲಿಂಗೇಶ್ವರ ಪೂಜಾರಿಯವರಾದ ಬೀರಪ್ಪ ಮಹಾರಾಯರು, ಯಶವಂತ ಮಾಡಕರೆ,…
ಆಲಮಟ್ಟಿ: ಬೆಳ್ಳಂ ಬೆಳಿಗ್ಗೆ ಕೆಂಪು ಕಲರವದ ನಾದ ಘಮಘಮಿಸಿ ಪರಿಮಳಿಸಿತ್ತು. ದೇಗುಲದ ಅಂಗಳದಲ್ಲಿ ಕೆಂಪು ನಾರಿಯರ ದಂಡವೇ ನೆರದಿತ್ತು. ಭಕ್ತಿಭಾವ ಮೇಳೈಸಿತ್ತು.ಮಂಗಳವಾರ ನಸುಕಿನಲ್ಲೇ ಆಲಮಟ್ಟಿಗೆ ಸನಿಹದ ಚಿಮ್ಮಲಗಿ ಭಾಗ-1 ಎ ಗ್ರಾಮದ ಅಂಬಾಭವಾನಿ ದೇವಸ್ಥಾನದಲ್ಲಿ ಈ ವಿಶೇಷ ಭಕ್ತಿ ಅನುವರಣದ ದೃಶ್ಯ ವೈಭವ ಗೋಚರಿಸಿತು.ಗ್ರಾಮದ ಹಾಗೂ ಸುತ್ತಲಿನ ಮಹಿಳೆಯರು ನವರಾತ್ರಿ ಹಬ್ಬದ ಮೂರನೇ ದಿನದಂದು ಕೆಂಪು ಸೀರೆಯನ್ನುಟ್ಟು ಅಂಬಾಭವಾನಿ ದರ್ಶನಕ್ಕಾಗಿ ದೇವಸ್ಥಾನಕ್ಕೆ ಪೂಜ್ಯ ಭಾವದಿ ಲಗ್ಗೆಯಿರಿಸಿ ತಮ್ಮ ಮನದಾಳದ ಭಕ್ತಿ ತರ್ಪಣ ಸಮಪಿ೯ಸಿದರು.ನವರಾತ್ರಿ ಹಿನ್ನೆಲೆಯಲ್ಲಿ ಒಂಬತ್ತು ದಿನಗಳ ಕಾಲ ನಾನಾ ವಿಧವಾಗಿ ನವದುಗಾ೯ ಮಾತೆಯನ್ನು ಎಲ್ಲೆಡೆ ಭಜಿಸಲಾಗುತ್ತಿದೆ. ಇಲ್ಲಿಯೂ ನಿತ್ಯ ಅಧಿಪತ್ಯದ ದೇವತೆಯಾಗಿರುವ ಅಂಬಾಭವಾನಿ ಜಗನ್ಮಾತೆಯ ಪೂಜಾ-ಪುನಸ್ಕಾರ ಶ್ರದ್ಧಾ ಭಕ್ತಿಗಳಿಂದ ಮಹಿಳೆಯರು ನೆರವೇರಿಸುತ್ತಲ್ಲಿದ್ದಾರೆ. ತಾಯಿ ರೂಪದಲ್ಲಿ ಅಂಬಾಭವಾನಿ ದೇವಿಯನ್ನು ಆರಾಧಿಸಿ ಧ್ಯಾನ ಸ್ತುತಿ, ಆರ್ಚನೆ, ಭಜನೆ, ಪೂಜೆ ಸಲ್ಲಿಸುತ್ತಿದ್ದಾರೆ.ಈ ವೇಳೆ ದೇವಸ್ಥಾನದ ಅರ್ಚಕ ರವಿ ಮಹೇಂದ್ರಕರ, ಗ್ರಾಮದ ಪ್ರಮುಖರಾದ ರಾಜೇಂದ್ರ ಬೊಮ್ಲೇಕರ್, ಕಾಶೀನಾಥ್ ಮಹೇಂದ್ರಕರ, ಜಗದೀಶ್ ಮಹೇಂದ್ರಕರ, ಶಂಕರ ರಾಠೋಡ, ಮಾತೆಯರಾದ…
ಯಡ್ರಾಮಿ: ಪಟ್ಟಣದ ಗ್ರಾಮದೇವತೆ ಮಹಿಳಾ ಮಂಡಳಿಯ ಸದಸ್ಯರು ನವರಾತ್ರೋತ್ಸವದ ಮೂರನೆಯ ದಿನವಾದ ಮಂಗಳವಾರ ಕೆಂಪು ವರ್ಣದ ಸೀರೆಯನ್ನುಟ್ಟು ಸಂಭ್ರಮಿಸಿದರು.ಮಹಿಳಾ ಮಂಡಳಿಯ ರೂಪಾ ಶಿವಪ್ರಸಾದ್, ನಿಂಗಮ್ಮ ಬೆಲ್ಲದ, ಜಯ ಪುರಾಣಿಕ, ಆರತಿ ನೆಲ್ಲಗಿ, ರಶ್ಮಿ ಹೂಗಾರ್, ಅನಿತಾ ಯಾಳಗಿ, ಶರಣಮ್ಮ ಸೋಮಪ್ಪಾಗೋಳ ಸೇರಿದಂತೆ ಮಂಡಳಿಯ ಅನೇಕ ಸದಸ್ಯರು ಪಾಲ್ಗೊಂಡಿದ್ದರು.
ದೇವರಹಿಪ್ಪರಗಿ: ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪದವಿಪೂರ್ವ ಕಾಲೇಜು(ಮಾಧ್ಯಮಿಕ ವಿಭಾಗ) ವಿದ್ಯಾರ್ಥಿ ವಿಶಾಲ ಜಾಧವ ವಿಜಯಪುರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ವಿದ್ಯಾರ್ಥಿನಿಯ ಸಾಧನೆಗೆ ಉಪಪ್ರಾಚಾರ್ಯ ವ್ಹಿ.ಎಮ್.ಪಾಟೀಲ ಹಾಗೂ ದೈಹಿಕ ಶಿಕ್ಷಕ ಈಶ್ವರ ಬಿದರಿ, ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಂಸ್ಥೆಯ ಅಧ್ಯಕ್ಷರು, ಆಡಳಿತಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ತೋರಲೆಂದು ಶುಭ ಹಾರೈಸಿದ್ದಾರೆ.
ದೇವರಹಿಪ್ಪರಗಿ: ನೂತನ ನಿರ್ದೇಶಕ ಮಂಡಳಿಯ ಆಡಳಿತಾವಧಿಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇನ್ನೂ ಹೆಚ್ಚೆಚ್ಚು ಜನಪರ ಕಾರ್ಯ ಮಾಡುವಂತಾಗಲಿ ಎಂದು ತಾಲ್ಲೂಕು ಬಣಜಿಗ ಸಂಘದ ಅಧ್ಯಕ್ಷ ಬಸವರಾಜ ತಾಳಿಕೋಟಿ ಹೇಳಿದರು.ನಗರದಲ್ಲಿ ಇತ್ತೀಚಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಗೆ ಆಯ್ಕೆಯಾದ ನೂತನ ನಿರ್ದೇಶಕರಾದ ಹಣಮಂತ್ರಾಯಗೌಡ ಪಾಟೀಲ(ಪಡಗಾನೂರ), ಗುರುಶಾಂತ ನಿಡೋಣಿ, ರಾಜಶೇಖರ ಗುಡದಿನ್ನಿ, ಶೇಖರ ದಳವಾಯಿ, ಕಲ್ಲನಗೌಡ ಪಾಟೀಲ, ಬಿ.ಎಸ್.ಪಾಟೀಲ(ಯಾಳಗಿ), ಸುರೇಶಗೌಡ ಬಿರಾದಾರ, ಅರವಿಂದ ಪೂಜಾರಿ, ಚಂದ್ರಶೇಖರ ಪಾಟೀಲ ಅವರನ್ನು ದೇವರಹಿಪ್ಪರಗಿ ತಾಲ್ಲೂಕು ಬಣಜಿಗ ಸಂಘದ ಅಡಿಯಲ್ಲಿ ಸನ್ಮಾನಿಸಿ, ಮಾತನಾಡಿದರು.ತಾಲ್ಲೂಕು ಬಣಜಿಗ ಸಂಘದ ಉಪಾಧ್ಯಕ್ಷ ಜಿ.ಎಸ್.ಕೋರಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ಬಬಲೇಶ್ವರ, ವಿನುತ ಕೋರಿ ಇದ್ದರು.
ಬ್ರಹ್ಮದೇವನಮಡು: ಧಮ೯ಸ್ಥಳ ಗ್ರಾಮಾಭಿವೃದ್ದಿ ಯೋಜನೆಗಳು ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡಲಾಗುತ್ತಿದ್ದು, ಅಭಿವೃದ್ದಿ ಪರ ಯೋಜನೆಗಳು ಹೆಚ್ಚಿಸಿವೆ ಎಂದು ಸಿಂದಗಿ ತಾಲೂಕು ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಗಿರೀಶಕುಮಾರ ಹೇಳಿದರು.ಸಿಂದಗಿ ತಾಲೂಕು ಗೋಲಗೇರಿ ವಲಯದ ಯಂಕಂಚಿ ಕಾಯ೯ಕ್ಷೇತ್ರದಲ್ಲಿ ಧಮ೯ಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ನೂತನ ಸಿಎಸ್ ಸಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.ಸಾಲ ವಿತರಣೆ, ಲಾಭಾಂಶಗಳ ಸಂಗ್ರಹದ ಮೂಲಕ ಆಥಿ೯ಕ ಅಭ್ಶುದಯಕ್ಕೆ ಸಂಘದ ಸದಸ್ಶರು ಬದ್ದರಾಗಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕ, ಕೆರೆ ಹೂಳೆತ್ತುವದು, ನಿಗ೯ತಿಕರಿಗೆ ಮಾಶಾಸನ, ವಾತ್ಸಲ್ಶ ಕಿಟ್ಟ್, ದೆವಸ್ಥಾನ ಕಟ್ಟಡಗಳ ಸಹಾಯಧನ, ಸಂಘದ ಸದಸ್ಶರ ಮಕ್ಕಳಿಗೆ ಸುಜ್ಞಾನನಿಧಿ ಶಿಷ್ಶವೇತನ ನೀಡಲಾಗುತ್ತಿದೆ. ಸಿ.ಎಸ್.ಸಿ.ಕೇಂದ್ರದಲ್ಲಿ ಸಿಗುವ ಕೇಂದ್ರ ಹಾಗೂ ರಾಜ್ಶ ಸಕಾ೯ರದ ಈ ಸೌಲಭ್ಶಗಳ ಬಗ್ಗೆ ಮಾಹಿತಿ ನೀಡಿದರು. ಈ. ಮೇಲ್ವಿಚಾರಕ ಮಂಜುನಾಥ ಸಜ್ಜನ, ಸೇವಾ ಪ್ರತಿನಿಧಿಗಳಾದ ರೂಪಾ ಕುಲಕಣಿ೯,ರೇಖಾ ಹಳ್ಳಿ, ಒಕ್ಕೂಟದ ಅಧಕ್ಷರು, ಪದಾಧಿಕಾರಿಗಳು, ಸಂಘದ ಸದಸ್ಶ ಸುರೇಶ ಕಿರಣಗಿ ಸೇರಿದಂತೆ ಇತರರಿದ್ದರು.
ಸಿಂದಗಿ: ನಗರದ ಶಿಕ್ಷಕರ ಸಭಾಭವನದಲ್ಲಿ ತಾಲೂಕು ಪಂಚಾಯತ್ ವತಿಯಿಂದ ಎರಡು ದಿನಗಳ ಕಾಲ ಪಂಚತಂತ್ರ ೨.೦ ತರಬೇತಿ ಕಾರ್ಯಗಾರವು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಗಣಕ ಯಂತ್ರ ಸಹಾಯಕರಿಗೆ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಆಡಳಿತಾಧಿಕಾರಿ, ಜಿಲ್ಲಾ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಟೆ, ಇಓ ತಾಪಂ ರಾಮು ಅಗ್ನಿ, ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಸಿದ್ದು ಅಂಕಲಗಿ, ಸಂಪನ್ಮೂಲ ವ್ಯಕ್ತಿಗಳಾಗಿ ಎ.ಎ ದುರ್ಗದ, ಐಇಸಿ ಸಂಯೋಜಕ ಭೀಮರಾಐ ಚೌಧರಿ ಸೇರಿದಂತೆ ಎಲ್ಲ ಗ್ರಾಪಂ ಪಿಡಿಒ, ಕಾರ್ಯದರ್ಶಿ, ಗಣಕಯಂತ್ರ ಸಹಾಯಕರು ಸೇರಿದಂತೆ ಅನೇಕರು ಇದ್ದರು.
