Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮಾಜಿ ಸಿಎಂ ಹೆಚ್ಡಿಕೆ ಓಪನ್ ಆಫರ್ ಟೆಂಪ್ರವರಿ ಸಿಎಂ & ಡೂಪ್ಲಿಕೇಟ್ ಸಿಎಂ ಕಾಂಗ್ರೆಸ್ ಸರ್ಕಾರ | ಎಚ್ಡಿಕೆ ವ್ಯಂಗ್ಯ ಬೆಂಗಳೂರು: ಡಿ.ಕೆ ಶಿವಕುಮಾರ್ ನಾಳೆಯೇ ಸಿಎಂ ಆಗುವುದಾದರೆ ಜೆಡಿಎಸ್ ಬೆಂಬಲ ನೀಡುತ್ತದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.ಜೆಡಿಎಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್ ನಾಳೆ ಬೆಳಗ್ಗೆ ಸಿಎಂ ಆದರೆ ಜೆಡಿಎಸ್ ಪಕ್ಷದ 19 ಶಾಸಕರು ಬೆಂಬಲ ನೀಡುತ್ತಾರೆ ಎಂದು ಓಪನ್ ಆಫರ್ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ನೋಡಿದರೆ ಎಲ್ಲರೂ ತಾವು ಸಿಎಂ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದರು.ಹೀಗಾಗಿ ರಾಜ್ಯ ಕಾಂಗ್ರೆಸ್ ಅನ್ನು ಟಿಸಿಎಂ, ಡಿಸಿಎಂ ಸರ್ಕಾರ ಎಂದು ಕರೆಯಬಹುದು. ಟಿಸಿಎಂ ಅಂದರೆ ಟೆಂಪ್ರವರಿ ಸಿಎಂ, ಡಿಸಿಎಂ ಅಂದ್ರೆ ಡೂಪ್ಲಿಕೇಟ್ ಸಿಎಂ ಎಂದು ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.ವಿದೇಶ ಪ್ರವಾಸ ಮುಗಿಸಿ ರಾಜ್ಯಕ್ಕೆ ಮರಳಿರುವ ಎಚ್ ಡಿ ಕುಮಾರಸ್ವಾಮಿ ಅವರು ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗಿದ್ದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ತಂಡದಿಂದ ಬರ ಅಧ್ಯಯನ ವಿಜಯಪುರ: ತಿಕೋಟಾ ತಾಲೂಕಿನ ಜಾಲಗೇರಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಶನಿವಾರ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ನೇತೃತ್ವದ ತಂಡ ಬರ ಅಧ್ಯಯನ ನಡೆಸಿ ಪರಿಸ್ಥಿತಿ ಅವಲೋಕಿಸಿತು. ತೊಂದರೆ ಎದುರಿಸುತ್ತಿರುವ ರೈತರ ಅಹವಾಲು ಆಲಿಸಿತು. ಅನೇಕ ರೈತರು ತಾವು ಎದುರಿಸುತ್ತಿರುವ ನೋವನ್ನು ತಂಡದ ಸದಸ್ಯರ ಎದುರು ತೋಡಿಕೊಂಡರು.ಜಿಲ್ಲೆಯ ತಿಕೋಟಾ ಹೊರತುಪಡಿಸಿ ಉಳಿದೆಲ್ಲ ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿವೆ, ತಿಕೋಟಾ ತಾಲೂಕಿನಲ್ಲಿಯೂ ಸಹ ಬರ ಭೀಕರವಾಗಿದೆ ಎಂದು ಕಟೀಲ್ ಮೊದಲಾದ ತಂಡದ ಸದಸ್ಯರು ತಿಕೋಟಾ ತಾಲೂಕನ್ನೇ ಆಯ್ಕೆ ಮಾಡಿ ಬರ ಅಧ್ಯಯನ ನಡೆಸಿದರು.ಜಾಲಗೇರಿಯಲ್ಲಿ ಮೆಕ್ಕೆಜೋಳ ಬೆಳೆ ಸಂಪೂರ್ಣವಾಗಿ ಬಾಡಿ ಹೋಗಿರುವುದನ್ನು ಗಮನಿಸಿದರು. ಈ ವೇಳೆ ಅಳಲು ತೋಡಿಕೊಂಡ ಅನೀಲ್ ಲಮಾಣಿ, ಸಿದ್ಧು ಒಡೆಯರ ಮೊದಲಾದ ರೈತರು `ನಮಗೆ ಆಗುತ್ತಿರುವ ತೊಂದರೆ ಅಷ್ಟಿಷ್ಟಲ್ಲ, ಯಾವ ರೀತಿಯ ಸ್ಪಂದನೆಯೂ ಸಹ ನಮಗೆ ದೊರಕದಂತಾಗಿದೆ, ನಮ್ಮ ಸಂಕಷ್ಟ ಯಾರಿಗೂ ಬರಬಾರದು, ಸಾಲ ಸೋಲ ಮಾಡಿದ…
ವಿಜಯಪುರ: ಯಾವುದೇ ಕಾರ್ಯ ಮಾಡಿ ಅದನ್ನು ಸಿದ್ದಿಸಲು ಧರ್ಮದ ಅನುಸರಣೆ ಅಗತ್ಯವಾಗಿದೆ ಅದನ್ನು ಎಲ್ಲ ರಂಗಗಳಲ್ಲಿ ಜಯ ಪಡೆದುಕೊಳ್ಳಲು ಸಾಧ್ಯ ಎಂದು ಮುತ್ತಗಿಯ ಅರ್ಚಕ ಪಂ. ನರಹರಿ ಆಚಾರ್ಯ ಜೋಶಿ ಅವರು ಹೇಳಿದರು.ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ವಿಜಯಪುರ ಇದರ ಆಶ್ರಯದಲ್ಲಿ ಪ್ರತಿತಿಂಗಳು ನಡೆಸುತ್ತಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂತ ಕನಕದಾಸರ ಮೋಹನ ತರಂಗಿಣಿ ಕುರಿತು ಉಪನ್ಯಾಸ ನೀಡುತ್ತದ್ದ ಅವರು ಕನಕದಾಸರ ಈ ಕೃತಿಯಲ್ಲಿಯೂ ಕೂಡಾ ಅನಿರುದ್ದ-ಉಷೆ ಇವರ ಮದುವೆ ರಸಾನು ಸಂದರ್ಭದಲ್ಲಿಯೂ ಧರ್ಮದ ತಳಹದಿಯ ಮೇಲೆ ನಿಂತ ಪ್ರಸಂಗದ ವಿವರಣೆಯನ್ನು ನೀಡಿ ಶಿಕ್ಷಕರು ಮತ್ತು ಪಾಲಕರು ಮಕ್ಕಳಿಗೆ ಕೊಡುವದನ್ನು ಕಲಿಸಬೇಕು ಅಂದಾಗ ಮಾತ್ರ ಹೊಸದನ್ನು ಅವರಲ್ಲಿ ಬಂದು ಸೇರುತ್ತದೆ. ಮತ್ತೇ ಅವನು ದೊಡ್ಡವನಾಗುವದರೊಂದಿಗೆ ಸಮಾಜದ ಅರಿವು ಆಗು-ಹೋಗುಗಳಿಗೆ ಅವನಲ್ಲಿ ಜ್ಞಾನ ಬರಲು ಸಾಧ್ಯ ಎಂದವರು ಹೇಳಿದರು.ಕನಕದಾಸರು ದಾಸನಾಗುವ ಹಾಗೂ ವ್ಯಾಸತೀರ್ಥರಲ್ಲಿ ಶಿಷ್ಯನಾಗುವ ಮೊದಲು ರಚಿಸಿದ ಕೃತಿ ಮೊಹನ ತರಂಗಿಣಿ ಇದರಲ್ಲಿ ೪೨ ತರಂಗಗಳು ಬರುತ್ತಿದ್ದು ಇದೊಂದು ಅದ್ಬುತ ಗ್ರಂಥವಾಗಿದೆ. ಪ್ರದ್ಯುಮ್ನನ…
ವಿಜಯಪುರ: ನಗರದ ಬುದ್ಧವಿಹಾರ ನಿರ್ಮಾಣ ಸಮಿತಿ ಹಾಗೂ ಭಾರತೀಯ ಬೌದ್ಧ ಮಹಾಸಭಾ ಆಶ್ರಯದಲ್ಲಿ ಕಳೆದ ಮೂರು ತಿಂಗಳುಗಳಿಂದ ನಡೆಸಿಕೊಂಡು ಬಂದ ವರ್ಷಾವಾಸ ಕಾರ್ಯಕ್ರಮದ ಸಮಾರೋಪ ಸಮಾರಂಭವು ನ. ೫ ರಂದು ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಜರುಗಲಿದೆ ಎಂದು ಬುದ್ಧವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಮತ್ತು ಪ್ರಧಾನ ಕಾರ್ಯದರ್ಶಿ ನಾಗರಾಜ ಲಂಬು ಅವರು ತಿಳಿಸಿದ್ದಾರೆ.ಅಂದು ಬೆಳಿಗ್ಗೆ ೯ ಗಂಟೆಗೆ ನಗರದ ಆಯುಷ್ ಆಸ್ಪತ್ರೆಯ ಹತ್ತಿರದ ಡಾ. ಬಾಬಾಸಾಹೇಬ ಅಂಬೇಡ್ಕರ್ ಭವನದಿಂದ ಸಾರಿಪುತ್ರ- ಬೋಧಿಧಮ್ಮ ಬುದ್ಧವಿಹಾರದವರೆಗೆ ಬೆಳ್ಳಿರಥದಲ್ಲಿ ತಥಾಗತ ಗೌತಮ ಬುದ್ಧರ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಗಳ ಮೆರವಣಿಗೆ ಪೂಜ್ಯ ಭಿಕ್ಖುಸಂಘದ ಉಪಸ್ಥಿತಿಯಲ್ಲಿ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.ನಂತರ ೧೦ ಗಂಟೆಗೆ ಬುದ್ಧವಿಹಾರದಲ್ಲಿ ಧಮ್ಮ ಪ್ರವಚನ ನಡೆಯಲಿದ್ದು, ಪೂಜ್ಯ ಭಿಕ್ಖುಸಂಘಕ್ಜೆ ಅಷ್ಟಪರಿಷ್ಕಾರ ಚೀವರದಾನ, ಬೌದ್ಧ ವಿಹಾರ ನಿರ್ಮಾಣ ಸಮಿತಿಯ ನೂತನ ಸಲಹಾ ಸಮಿತಿಯ ಸದಸ್ಯರಿಗೆ ಸನ್ಮಾನ ಸಮಾರಂಭ ಜರುಗಲಿದೆ.ಕಾರಣ ಬುದ್ಧವಿಹಾರ ನಿರ್ಮಾಣ ಸಮಿತಿ ನಿರ್ದೇಶಕರುಗಳು, ಸಲಹಾ ಸಮಿತಿ ಸದಸ್ಯರು,…
ಬಸವನಬಾಗೇವಾಡಿ: ಪಟ್ಟಣದ ನ್ಯಾಯಾಲಯವು ಕಾಲುವೆ ನಿರ್ಮಿಸುವ ಗುತ್ತಿಗೆ ಕೆಲಸ ಹಿಡಿದ ಗುತ್ತಿಗೆದಾರ ನೀಲಕಂಠ ಸಿದ್ದಪ್ಪ ಪೂಜಾರಿ(ಮದರಿ) ಅವರ ನಿರ್ಲಕ್ಷತನ ಸಾಬೀತು ಆಗಿರುವುದರಿಂದ ಅ.೩೧ ರಂದು ಸಿವ್ಹಿಲ್ ನ್ಯಾಯಾಧೀಶೆ ತೇಜಶ್ವಿನಿ ಸೊಗಲದ ಅವರು ಆರೋಪಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ, ರೂ. ೧೦ ಸಾವಿರ ದಂಡ ಹಾಗೂ ೨೮೩ ಐಪಿಸಿಗೆ ರೂ.೨೦೦ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿ ಆದೇಶ ನೀಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಪಿಐ ಶರಣಗೌಡ ನ್ಯಾಮಣ್ಣನವರ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾಲೂಕಿನ ದಿಂಡವಾರ-ಹೂವಿನಹಿಪ್ಪರಗಿ ರಸ್ತೆಯಲ್ಲಿ ದುಂಡಪ್ಪ ಕುದರಕರ ಅವರ ಜಮೀನು ಹತ್ತಿರ ಗುತ್ತಿಗೆದಾರ ಕಾಲುವೆ ಸೇತುವೆ ನಿರ್ಮಿಸುವಾಗ ರಸ್ತೆಯಿಂದ ಅಗೆದ ಮಣ್ಣನ್ನು ರಸ್ತೆಯ ಮಧ್ಯದಲ್ಲಿ ಎರಡು ಬದಿಗೆ ಹಾಕಿದ್ದರಿಂದಾಗಿ ೭.೧೦.೨೦೧೯ ರಂದು ರಾತ್ರಿ ಮುದ್ದೇಬಿಹಾಳ ತಾಲೂಕಿನ ಪಡೇಕನೂರ ಗ್ರಾಮದ ಶಿವಪ್ಪ ನಿಂಗಪ್ಪ ರೆಬಿನಾಳ ಮೋಟಾರ್ ಸೈಕಲ್ ಮೇಲೆ ಹೋಗುವಾಗ ಅಗೆದ ತೆಗ್ಗಿನಲ್ಲಿ ಬಿದ್ದು ಬಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತನಾಗಿದ್ದನು. ರಸ್ತೆಯ ಮಧ್ಯದಲ್ಲಿ ಎರಡು…
ದೇವರಹಿಪ್ಪರಗಿ: ಸಾತಿಹಾಳ ಗ್ರಾಮ ಪಂಚಾಯಿತಿಯಲ್ಲಿ ಐಇಸಿ ಚಟುವಟಕೆಯ ಅಂಗವಾಗಿ ಉದ್ಯೋಗ ಜಾಗೃತಿ ರಥಯಾತ್ರೆ ವಾಹನಕ್ಕೆ ಚಾಲನೆ ನೀಡಲಾಯಿತು. ತಾಲ್ಲೂಕಿನ ಸಾತಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ೨೦೨೪-೨೫ ನೇಸಾಲಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಕ್ರೀಯಾ ಯೋಜನೆ ಸಿದ್ಧಪಡಿಸುವ ಉದ್ದೇಶದಿಂದ ಸಾರ್ವಜನಿಕರಿಂದ ವೈಯಕ್ತಿಕ ಕಾಮಗಾರಿಗಳ ಅರ್ಜಿಗಳನ್ನು ಆಹ್ವಾನಿಸಲು ಉದ್ಯೋಗ ರಥ ಯಾತ್ರೆ ವಾಹನಕ್ಕೆ ಶನಿವಾರ ಹಸಿರು ನಿಶಾನೆ ತೋರುವುದರ ಮೂಲಕ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆನಂದ ಅಡಹಳ್ಳಿ ಚಾಲನೆಗೊಳಿಸಿ ಮಾಹಿತಿ ನೀಡಿದರು. ನರೇಗಾ ಯೋಜನೆ ಅಡಿಯಲ್ಲಿ ವೈಯಕ್ತಿಕ ಕಾಮಗಾರಿ ಕೃಷಿ ಹೊಂಡ, ಬದು ನಿರ್ಮಾಣ, ಕುರಿ ಅಥವಾ ಆಡು, ದನದ ಕೊಟ್ಟಿಗೆ ಹೀಗೆ ಹಲವು ಕಾಮಗಾರಿಗಳನ್ನು ಪಡೆದುಕೊಂಡು ಸುಸ್ಥಿರತೆಯ ಜೀವನ ನಡೆಸಲು ನರೇಗಾ ಯೋಜನೆ ನೆರವಾಗುತ್ತದೆ ಎಂದು ಐಸಿ ಸಂಯೋಜಿಕ ಸಿದ್ದು ಕಾಂಬಳೆ ತಿಳಿಸಿದರು,ಉದ್ಯೋಗ ರಥ ವಾಹನವು ಗ್ರಾಮದ ಬೀದಿಬೀದಿಗಳಲ್ಲಿ ಸಂಚರಿಸಿ ನರೇಗಾ ಯೋಜನೆಯ ಮಾಹಿತಿ ನೀಡಿತು. ಸಾರ್ವಜನಿಕರಿಂದ ಫಾರ್ಮ್ ನಂಬರ್ ೬ನ್ನು ತುಂಬಿ ಕೆಲಸದ ಬೇಡಿಕೆ ಡಬ್ಬದಲ್ಲಿ ಕೆಲಸದ ಬೇಡಿಕೆ ಪಡೆಯಲಾಯಿತು.ಪರಶುರಾಮ ಚವ್ಹಾಣ, ತಾಂಡ ರೋಜ್ಗಾರ್ ಮಿತ್ರ…
ವಿಜಯಪುರ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದಲ್ಲಿ ಯೋಗಉಚಿತ ಶಿಬಿರ ವಿಜಯಪುರ: ದಿನಂಪ್ರತಿ ಮಾಡುವ ಯೋಗದ ಅನುಷ್ಠಾನ ನಮ್ಮ ದೇಹ, ಮನಸ್ಸು ಹಾಗೂ ಭಾವನೆಗಳನ್ನು ಆರೋಗ್ಯವಾಗಿರಿಸಿ ವಿಶ್ರಾಂತಿ, ರೋಗ ನಿರೋಧಕ ಶಕ್ತಿ, ಏಕಾಗ್ರತೆ, ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಅಂತರಾಷ್ಟ್ರೀಯ ವಿಪಸ್ಸನ ಸಾಧಕ ಯೋಗ ಗುರು ಎಂ.ಪಿ.ದೊಡಮನಿಯವರು ಹೇಳಿದರು.ಶನಿವಾರದಂದು ವಿಜಯಪುರ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಜಿಯವರ ಗುರು ನಮನ ಕಾರ್ಯಕ್ರಮದ ನಿಮಿತ್ಯವಾಗಿ ‘ಯೋಗಾಸನ ಪ್ರಾಣಾಯಾಮ ಮತ್ತು ಧ್ಯಾನ ತರಬೇತಿ’ ಶಿಬಿರ ಕಾರ್ಯಾಕ್ರಮದಲ್ಲಿ ವಿದ್ಯಾರ್ಥಿಗಳಿಗೆ “ಉಚಿತ ಧ್ಯಾನ ಮತ್ತು ಯೋಗ” ತರಬೇತಿಯನ್ನು ನೀಡಿ ಮಾತನಾಡಿದ ಅವರು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆಹಾರ ಮತ್ತು ವ್ಯಾಯಾಮ ಹೆಚ್ಚು ಉಪಕಾರಿ. ಇನ್ನು ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗಾಭ್ಯಾಸ ಹೆಚ್ಚು ಸೂಕ್ತ. ಹಾಗಾಗಿ ನಾವಿಲ್ಲಿ ಯಾವೆಲ್ಲಾ ಆಸನಗಳನ್ನು ಮಾಡಿದರೆ ಮಕ್ಕಳ ಮತ್ತು ವಿದ್ಯಾರ್ಥಿಗಳ ಏಕಾಗ್ರತೆ…
ಕೊಲ್ಹಾರ: ರಾಜ್ಯದ ಹಾಗೂ ರೈತರ ಹಿತ ಕಾಪಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಬಿಜೆಪಿ ಸಂಸದ ನಳಿನಕುಮಾರ ಕಟೀಲ್ ಹರಿಹಾಯ್ದರು.ಶನಿವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಬರ ಅಧ್ಯಯನ ಸಂದರ್ಭ ಬ.ಬಾಗೇವಾಡಿ ತಾಲೂಕಿನ ವಿವಿಧ ರೈತರ ಹೊಲಗಳಿಗೆ ತೆರಳಿ ಪರಿಶೀಲನೆ ನಡೆಸಿ ಕೊಲ್ಹಾರ ಪಟ್ಟಣದ ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳನ್ನು ಪರಿಶೀಲನೆ ನಡೆಸಿದ್ದೆವೆ ಬರಗಾಲದಿಂದ ಸಂಪೂರ್ಣ ಬೆಳೆಗಳು ಹಾನಿಯಾಗಿವೆ. ಇಂತಹ ಸಂದರ್ಭದಲ್ಲಿ ಪರಿಹಾರ ನೀಡಿ ರೈತರಿಗೆ ಆತ್ಮಸ್ಥೈರ್ಯ ತುಂಬಬೇಕಾದ ರಾಜ್ಯದ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹರಿಹಾಯ್ದರು.ಸಿದ್ದರಾಮಯ್ಯನವರ ಸರಕಾರ ಸಮರ್ಪಕವಾಗಿ ವಿದ್ಯುತ್ ನೀಡದ ಕಾರಣ ಪೂರ್ಣ ಪ್ರಮಾಣದಲ್ಲಿ ಫಸಲು ಬರದೇ ಬೆಳೆಗಳು ಒಣಗಿ ಹೋಗಿವೆ. ಸರ್ಕಾರ ರೈತರಿಗೆ ವಿದ್ಯುತ್ ನೀಡಿದ್ದರೆ ರೈತಾಪಿ ವರ್ಗ ತಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುತ್ತಿದ್ದರು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಂದು ಗುಡುಗಿದರು.ಸಿದ್ದರಾಮಯ್ಯನವರು ತಮ್ಮ ಸರ್ಕಾರ ಭದ್ರ…
ವಿಜಯಪುರ: ನಗರದ ಕೃಷಿ ಮಹಾವಿದ್ಯಾಲಯದಲ್ಲಿ ಸಿನಿಯರ್ ರಿಸರ್ಚ್ ಫೆಲೋ ಹುದ್ದೆಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ನವೆಂಬರ್ ೧೦ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಕೃಷಿ ಮಹಾವಿದ್ಯಾಲಯದ ಡೀನ್ ಸಂದರ್ಶನ ಕೊಠಡಿಯಲ್ಲಿ ಸಂದರ್ಶನ ಏರ್ಪಡಿಸಲಾಗಿದೆ.ನೇಮಕಾತಿ ಪಡೆಯಲಿಚ್ಚಿಸುವರು, ಫಾರ್ಮ ಮೆಶಿನರಿ ಮತ್ತು ಪಾವರ ಇಂಜಿನಿಯರ್ ನಲ್ಲಿ ಸ್ನಾತಕ ಪದವಿ ಹೊಂದಿರಬೇಕು. ಬಿ.ಟೆಕ್ (ಕೃಷಿ ಇಂಜಿನಿಯರ್) ನಾಲ್ಕು ವರ್ಷದ ಪದವಿ ಜೊತೆಗೆ ಮೆಶಿನರಿ ಟೆಸ್ಟಿಂಗ್ನಲ್ಲಿ ಅನುಭವ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗೆ ಪ್ರತಿ ತಿಂಗಳು ೩೧ ಸಾವಿರ ರೂ. ಹಾಗೂ ಎಚ್ಆರ್ಎ, ಟಿಎ & ಡಿಎ ಸೌಲಭ್ಯ ಒದಗಿಸಲಾಗುವುದು.ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಮೂಲ ದಾಖಲೆಗಳ ಎರಡು ಝರಾಕ್ಸ್ ಪ್ರತಿ ಮತತು ಭಾವಚಿತ್ರದೊಂದಿಗೆ ಹಾಜರಾಗಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ: ೦೮೩೫೨-೨೩೦೫೭೮ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯಪುರ: ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ವಿವಿಧ ವೃಂದಗಳ ಹುದ್ದೆಗಳನ್ನು ಗುತ್ತಿಗೆ ರೋಸ್ಟರ್ ಕಂ ಮೆರಿಟ್ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಜಿಲ್ಲಾ ಗುಣಮಟ್ಟ ಭರವಸೆ ಸಲಹೆಗಾರ, ಸೋಷಿಯಲ್ ವರ್ಕರ್ (ಎನ್.ಎಂ.ಎಚ್.ಪಿ), ಆಡಿಯೋಲಾಜಿಸ್ಟ್/ಸ್ಫೀಚ್ಥೆರಪಿಸ್ಟ್, ಶುಶ್ರೂಷಣಾಧಿಕಾರಿ, ಕಿರಿಯ ಪ್ರಯೋಗಶಾಲಾ ತಂತ್ರಜ್ಞರು, ನೇತ್ರ ಸಹಾಯಕರು, ಟೆಂಟಲ್ ಹೈಜಿನಿಸ್ಟ್, ಆಡಿಯೋಮೆಟ್ರಿಕ್ ಅಸಿಸ್ಟಂಟ್, ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ನಿಗದಿತ ಅರ್ಜಿ ನಮೂನೆಗಳನ್ನು NIC Website : http://vijayapura.nic.in ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ದಿನಾಂಕ : ೦೬-೧೧-೨೦೨೩ರೊಳಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ಹಳೇ ಆಸ್ಪತ್ರೆ ಆವರಣ, ಶಿವಾಜಿ ವೃತ್ತ, ಅಥಣಿ ರಸ್ತೆ, ವಿಜಯಪುರ ವಿಳಾಸಕ್ಕೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
