Author: editor.udayarashmi@gmail.com

ಇಂಡಿ : ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆಂದು ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ವಿರುದ್ಧ ಬಹುಜನ ಸಮಾಜ ಪಕ್ಷದ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಯದರ್ಶಿ ನಾಗೇಶ ಶಿವಶರಣ ಚುನಾವಣೆ ಅಧಿಕಾರಿ, ತಹಶಿಲ್ದಾರ ‌ನಾಗಯ್ಯ ಹಿರೇಮಠ ಅವರಿಗೆ ದೂರು ಸಲ್ಲಿಸಿದ್ದಾರೆ. ತಾಲ್ಲೂಕಿನ ಲಚ್ಯಾಣ ಗ್ರಾಮದ ಶ್ರೀ ಸಿದ್ಧಲಿಂಗ ಮಹಾರಾಜರ ದೇವಸ್ಥಾನದ ಒಳಗಡೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ತಮ್ಮ ಪರವಾಗಿ ಮತಯಾಚನೆ ಮಾಡಿದ್ದಾರೆ. ಮಾ.31ರಂದು ಮಧ್ಯಾಹ್ನ 12 ಗಂಟೆಯಿಂದ 1:30 ಗೆ ಮತಯಾಚನೆ ಮಾಡಿದ್ದಾರೆ. ಮುಖ್ಯ ಚುನಾವಣೆ ಅಧಿಕಾರಿಗಳ ಸೂಚನೆ ‌ಮೇರೆಗೆ ಯಾವುದೇ ಗುಡಿ ಗುಂಡಾರ, ಮಜೀದಿ ಮುಂತಾದ ಧಾರ್ಮಿಕ ಸ್ಥಳದಲ್ಲಿ ಯಾವುದೇ ವ್ಯಕ್ತಿ ತಮ್ಮ ಪರ ಮತ ಯಾಚನೆ ಪ್ರಚಾರ ಮಾಡುವಂತಿಲ್ಲ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಮತ್ತು ಇತರೆ ಸೇರಿ ನೀತಿಸಂಹಿತೆ ಉಲ್ಲಂಘಿಸಿ ಸಭೆ ಮತ್ತು ಮತಯಾಚನೆ ಮಾಡಿದ್ದಾರೆ. ಇದು ಸಾವಿರಾರು ಭಕ್ತರ ಮನಸ್ಸಿಗೆ ಘಾಸಿ ಉಂಟು ಮಾಡುವುದರ ಜೊತೆಗೆ…

Read More

ಬಸವನಬಾಗೇವಾಡಿ: ತಾಲೂಕಿನ ಮಣ್ಣೂರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ರೇಣುಕಾ ಮಸೂತಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಜರುಗಿದ ಚುನಾವಣೆಯಲ್ಲಿ ನಿಲುಫರ್ ಬಂದೇನವಾಜ ವಾಲೀಕಾರ ಅವರು ಅವಿರೋಧವಾಗಿ ಆಯ್ಕೆಯಾದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ನಿಲುಫರ ಬಂದೇನವಾಜ ವಾಲೀಕಾರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದಾಗಿ ನಿಲುಪರ ವಾಲೀಕಾರ ಅವಿರೋಧವಾಗಿ ಆಯ್ಕೆಯಾದರು. ಗ್ರಾಮ ಪಂಚಾಯಿತಿ ಒಟ್ಟು ೨೩ ಸದಸ್ಯ ಬಲ ಹೊಂದಿದೆ. ಇಂದು ಜರುಗಿದ ಚುನಾವಣೆಯಲ್ಲಿ ೧೫ ಸದಸ್ಯರು ಹಾಜರಿದ್ದರು. ೮ ಜನ ಸದಸ್ಯರು ಗೈರು ಇದ್ದರು. ಕೋರಂ ಭರ್ತಿ ಇದ್ದ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದಾಗಿ ಈ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾಽಕಾರಿಗಳಾಗಿ ಕಾರ್ಯನಿರ್ವಹಿಸಿದ ತಾಪಂ ಇಓ ಬಿ.ಎಸ್.ಭಾರತಿ ಚಲುವಯ್ಯ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಾಪಂ ಸಹಾಯಕ ಅಽಕಾರಿ ಶಶಿಧರ ಪಾಟೀಲ, ಪಿಡಿಓ ಎಸ್.ಆರ್.ತೋಳನೂರ ಇದ್ದರು.ಸಂಭ್ರಮಾಚರಣೆಃ ಅಧ್ಯಕ್ಷ ಸ್ಥಾನಕ್ಕೆ…

Read More

ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ ಸಿಂದಗಿ: ಜೆಡಿಎಸ್ ಘೋಷಿತ ಅಭ್ಯರ್ಥಿಯ ಧೋರಣೆಯ ವಿಚಾರದಲ್ಲಿ 13 ಜನ ಪದಾಧಿಕಾರಿಗಳು ಅಸಮಾಧಾನಗೊಂಡು ರಾಜೀನಾಮೆ ಸಲ್ಲಿಸಿದ್ದೇವೆ ಎಂದು ತಾಲೂಕಾಧ್ಯಕ್ಷ ದಾನಪ್ಪಗೌಡ ಚನಗೊಂಡ ಹೇಳಿದರು.ಶನಿವಾರದಂದು ಈ ಕುರಿತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ಅಭ್ಯರ್ಥಿಯಾಗಿ ಘೋಷಿತರಾದ ವಿಶಾಲಾಕ್ಷಿ ಪಾಟೀಲ ಅವರು ಪಕ್ಷದಲ್ಲಿ ಪದಾಧಿಕಾರಿಗಳು ಮಾಡುವ ಸಂಘಟನಾತ್ಮಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿಲ್ಲ. ಅಲ್ಲದೆ ಸಲಹೆ ಸೂಚನೆಗಳನ್ನು ನೀಡಿದರೂ ಅವುಗಳನ್ನು ಆಲಿಸುತ್ತಿಲ್ಲ. ಪಕ್ಷದ ಪದಾಧಿಕಾರಿಗಳನ್ನು ಸಮಾಧಾನ ಪಡಿಸುವಲ್ಲಿ ರಾಜ್ಯ ನಾಯಕರು ಮತ್ತು ಜಿಲ್ಲಾ ನಾಯಕರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.ಅಭ್ಯರ್ಥಿಯು ಗೆಲುವು ಸಾಧಿಸಬೇಕಾದರೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಗೆಲುವಿಗೆ ಶ್ರಮಿಸುತ್ತೇವೆ. ಇಲ್ಲವಾದಲ್ಲಿ ಜೆಡಿಎಸ್ ಕಾರ್ಯಕರ್ತರೆಲ್ಲ ಜೊತೆಗೂಡಿ, ಪಕ್ಷದ ಕಾರ್ಯಕರ್ತೆಯಾದ ಜ್ಯೋತಿ ಗುಡಿಮನಿಯವರನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ, ಅವರನ್ನು ಜಯಗೊಳಿಸಲು ಪಣ ತೊಡುವುದಾಗಿ ಎಚ್ಚರಿಕೆ ನೀಡಿದರಲ್ಲದೆ ಜೆಡಿಎಸ್ ಗೆಲುವಿಗೆ ತಾವು ಸದಾ ಬದ್ಧರಾಗಿರುವುದಾಗಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ನಿಂಗರಾಜು ಬಗಲಿ, ಶಿವರಾಜ ಪೊಲೀಸ್ ಪಾಟೀಲ, ಸಿ.ಎಸ್.ಕುಂಬಾರ, ಶಿವಶರಣ ಹೆಗ್ಗಣದೊಡ್ಡಿ, ಮ ಬಾಬುಪಟೇಲ ಬಿರಾದಾರ…

Read More

ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ, ಗಣಿಹಾರ ಆರೋಪ ವಿಜಯಪುರ: ಮುಸ್ಲಿಮರ 2ಬಿ ಮೀಸಲಾತಿಯನ್ನು ರದ್ದುಪಡಿಸಿದ ಸರಕಾರದ ಉದ್ದೇಶ, ಸಮಾಜಗಳಲ್ಲಿ ಒಡಕುಂಟು ಮಾಡುವುದಲ್ಲದೆ ಇದರಿಂದ ಮುಸ್ಲಿಮರು ಪ್ರಚೋದನೆಗೆ ಒಳಗಾಗಿ ಗಲಭೆ, ದಾಂಧಲೆ ಮಾಡಲಿ ಎನ್ನುವುದಾಗಿತ್ತು. ಇದರಿಂದ ರಾಜ್ಯದಲ್ಲಿ ಅಶಾಂತಿ, ಗೊಂದಲ ಸೃಷ್ಟಿಸಿ ಚುನಾವಣೆಯಲ್ಲಿ ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ಹೊಂದಿತ್ತು ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಆರೋಪಿಸಿದರು.ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರಕಾರ ಮುಸ್ಲಿಮರ ಶೇಕಡ ನಾಲ್ಕು ಮೀಸಲಾತಿ ರದ್ದುಪಡಿಸಿ ಅದರಲ್ಲಿ ಪಂಚಮಸಾಲಿಗೆ ಶೇಕಡ 2 ಒಕ್ಕಲಿಗರಿಗೆ ಶೇಕಡ 2 ಹಂಚಿದ್ದಾರೆ. ನಮ್ಮ ಅನ್ನವನ್ನು ಕಸಿದುಕೊಂಡು ಇನ್ನೊಬ್ಬರಿಗೆ ಹಂಚಿದ್ದಾರೆ. ಇದು ಯಾವ ನ್ಯಾಯ? ಯಾವ ಧರ್ಮವೂ ಹೀಗೆ ಹೇಳುವುದಿಲ್ಲ. ಎಲ್ಲ ಧರ್ಮಗಳ ಸಾರ ಒಂದೇ ಆಗಿರುವಾಗ ಚುನಾವಣೆ ಹೊತ್ತಲ್ಲಿ ಕೇವಲ ರಾಜಕೀಯ ಮತ ಬೇಟೆಗೋಸ್ಕರ ಸರಕಾರ ಈ ನಾಟಕವಾಡಿದೆ. ಆದರೆ ಮುಸ್ಲಿಂ ಸಮುದಾಯವು ಬಿಜೆಪಿ ಸರ್ಕಾರದ ಹುನ್ನಾರಕ್ಕೆ ಬಲಿಯಾಗದೆ ಪ್ರತಿಭಟನೆ, ಗಲಭೆಗೆ ಕೈಹಾಕದೆ ಕಾನೂನು ಹೋರಾಟಕ್ಕೆ ಮುಂದಾಗಿದ್ದು…

Read More

ಸೀರೆ ಮತ್ತು ನೀರೆಗೆ ಅವಿನಾಭಾವ ಸಂಬಂಧವಿದೆ.ನೀರೆಗೆ ಸೀರೆಯೇ ಸೊಬಗು ನಮ್ಮ ಭಾರತ ದೇಶದ ಸಂಸ್ಕೃತಿ ಕೂಡ ಹೌದು.ಸೀರೆಯಿಂದ ನಾರಿಯ ಸೌಂದರ್ಯ ಇಮ್ಮಡಿಗೊಳ್ಳುವುದರಲ್ಲಿ ಎರಡು ಮಾತಿಲ್ಲ.ಪಾರಂಪರಿಕ ಉಡುಪು ಕೂಡ ಹೌದು.ಸೀರೆಯಲ್ಲಿ ನೀರೆಯ ಅಂದವೇ ಚಂದ.ಸೀರೆ ನಮ್ಮ ದೇಶದ ಸಂಸ್ಕೃತಿಯ ಜೀವಾಳ.ನೀರೆಗೆ ಸೀರೆಯ ಮೇಲೆ ಮೋಹ ಹೆಚ್ಚು ಅದರಿಂದ ಅವಳ ಮೆರಗೂ ಕೂಡ ಹೆಚ್ಚಾಗುವುದು.ನವಿಲಿನ ನಾಟ್ಯ ಚಂದಕೋಗಿಲೆಯ ಗಾನ ಚಂದನೀರೆಗೆ ಸೀರೆ ಬಲು ಅಂದ..ಹೆಣ್ಣು ತೆಳ್ಳಗಿರಲಿ, ಬೆಳ್ಳಗಿರಲಿ, ದಪ್ಪಗಿರಲಿ , ಉದ್ದವಿರಲಿ, ಗಿಡ್ಡವಿರಲಿ,ಪ್ರತಿಯೊಬ್ಬರ ತನು ಮನವನ್ನು ಅಪ್ಪಿ ಬಳಸಿ ಎಲ್ಲರಿಗೂ ಖುಷಿ ಕೊಡುವುದು ಈ ಸೀರೆ.ಬಣ್ಣ ಬಣ್ಣದ ಬಗೆ ಬಗೆಯ ಸೀರೆಗೆ ಸೆಳೆಯುವ ಗುಣವಿದೆ.ಎಲ್ಲ ಭಾವಗಳನ್ನು ಸಂಬಂಧಗಳನ್ನು ಬೆಸೆದುಕೊಂಡಿದೆ.ಪ್ರಾಚೀನ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗೂ ಎಷ್ಟೇ ಉಡುಪುಗಳು ಬಂದರು ಸೀರೆಯ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.ಅತಿ ಉದ್ದದ ಉಡುಪಾದರು ಎಲ್ಲ ಸಭೆ ಸಮಾರಂಭಗಳಲ್ಲಿ ಆಕರ್ಷಣೀಯ ಮೆರಗು ಕೊಡುವುದು ಸೀರೆ ಮಾತ್ರ. ಸೀರೆಯ ಮಹಿಮೆ ಅಪಾರನಮ್ಮ ರೀ ಯನ್ನು ಸೆಳೆಯುವ ಗುರಿಕಾರ.ಚಂದವಾಗಿ ಸೀರೆಯುಟ್ಟು ಜಡೆಗೆ ಮಲ್ಲಿಗೆ ಮುಡಿದು…

Read More

ಹುಚ್ಚು ಮನಸಿದು ನಿನ್ನಹಚ್ಚಿಕೊಂಡಿದೆ ನಲ್ಲತುಚ್ಛವೆಣಿಸೇ ಕನಸುನುಚ್ಚು ನೂರೆಲ್ಲ ರಚ್ಚೆ ಹಿಡಿದಿದೆ ಹೃದಯಹೆಚ್ಚಿ ಪ್ರೀತಿಯ ಕಾವುಮುಚ್ಚು ಮರೆಯಿಲ್ಲದೆಬಿಚ್ಚಿಹುದು ಭಾವ ಹಚ್ಚೆ ಹಾಕಿಸಿಕೊಂಡೆಮೆಚ್ಚಿ ನಿನ್ನಯ ಹೆಸರವೆಚ್ಚವೇ ಇಲ್ಲದೆಯೆಸ್ವಚ್ಛ ಮನಸಾರ… ಕೊಚ್ಚಿಹೋಗುವೆ ನಾನುನೆಚ್ಚಿ ನೀಡಲು ಸ್ಥಾನಮುಚ್ಚಿ ನಿನ್ನೆದೆಯೊಳಗೆಬೆಚ್ಚಗಿರಿಸೆನ್ನ……

Read More

ಮನೆಯಲ್ಲಿ ಮಕ್ಕಳಿದ್ದರೆ ಆ ಮನೆಗೆ ಒಂದು ಕಳೆ. ಹೊರಗಡೆ ಹೋಗಿ ಎಷ್ಟೇ ಸುಸ್ತಾಗಿದ್ದರೂ ಮನೆಗೆ ಬಂದ ಕೂಡಲೇ ಮಗುವಿನ ಮುದ್ದಾದ ಮಾತು ಕೇಳಿದೊಡನೆ ಸುಸ್ತೆಲ್ಲಾ ಹೊರಟು ಹೋಗಿ ನವ ಚೈತನ್ಯ ಮೂಡುತ್ತದೆ. ಮುಗ್ಧ ಮನಸ್ಸಿನ ತೊದಲು ನುಡಿಯು ಜೀವ ಚೈತನ್ಯದ ಚಿಲುಮೆ. ಹೆಣ್ಣಿರಲಿ ಗಂಡಿರಲಿ ಮಕ್ಕಳು ಎಲ್ಲ ಒಂದೆ. ಆದಾಗ್ಯೂ ತುಲನಾತ್ಮಕವಾಗಿ ನೋಡಿದಾಗ ಹೆಣ್ಣು ಮಕ್ಕಳೇ ತುಸು ಹೆಚ್ಚು ತೂಗುತ್ತಾರೆ ಎಂದರೆ ತಪ್ಪಾಗಲಾರದೇನೋ.ಹೆಣ್ಣು ಚೆಲುವಿನ ಗಣಿಯು, ಸಂತಸದ ನಿಧಿಯು. ಹೆಣ್ಣು ಮಗುವಿನ ಶಾರೀರಿಕ ವಿನ್ಯಾಸ ಗಂಡು ಮಗುವಿಗಿಂತ ಹೆಚ್ಚು ಸುಂದರ. ಸ್ವರವೂ ಕೋಮಲವಾಗಿರುತ್ತದೆ. ಚೋಟುದ್ದ ಜಡೆ ಬಿಟ್ಟು ಮನೆ ತುಂಬಾ ಓಡಾಡುತ್ತ ತನ್ನ ಚುರುಕುತನದಿಂದ ಮನೆ ಹಾಗೂ ಸುತ್ತಲಿನ ಎಲ್ಲರ ಮನವನ್ನು ಬಹು ಬೇಗ ಗೆಲ್ಲುತ್ತಾಳೆ. ಪಕ್ಕದ ಮನೆಯವರು ” ನಿಮ್ಮ ಮಗಳು ತುಂಬಾ ಚೂಟಿಯಾಗಿದ್ದಾಳೆ, ಎಷ್ಟು ಶಾಂತ ಸ್ವಭಾವ ” ಅಂದಾಗ ತಾಯಿಯ ಹೃದಯ ತುಂಬಿ ಬರುತ್ತದೆ. ಇನ್ನು ಅಲಂಕಾರ ಮಾಡುವುದೂ ಅಷ್ಟೆ. ಗಂಡು ಮಕ್ಕಳಿಗೆ ಒಂದು ಚಡ್ಡಿ ಅಂಗಿ…

Read More

ಕಾದಿಹೆನು ನಲ್ಲ.. ನಿನಗಾಗಿ ಹಾದಿಗೆ ಹೂವ ಚೆಲ್ಲಿ…ಬೇಧಿಸಿ ಬಾ ಅಡೆತಡೆದಳ ನನ್ನೆಡೆಗೆ ನಗುವ ಚೆಲ್ಲಿ…ಕನಸು ಮನಸಲೂ ನಿನ ಹೊರತು ಬೇರಾರೂ ಇಲ್ಲ…ಮನಸು ಹಾರುತಿದೆ ಹಕ್ಕಿಯೊಲು ನಿನ್ನದೇ ಗುಂಗಲ್ಲಿ.‌. ತನು ನಿನ್ನದು ಮನ ನಿನ್ನದು,ಈ ಜೀವವೂ ನಿನ್ನದು…ಕ್ಷಣಕ್ಣಣವೂ ಕಾತರಿಸಿದೆ ನಿನ್ನ ಕಾಣಲು ಕಣ್ಣಿದು…ಅಣಿಯಾಗಿಹೆ ನಾ ಸ್ವಾಗತಿಸಲು ಸಿಂಗಾರಗೊಂಡು..ಹಣೆಬೆವರಿದೆ ಮೈನಡುಗಿದೆ ನಿನ್ನದೇ ಗುಂಗಲ್ಲಿ ನೋಡು ಬರಬಾರದೇ ಇನಿಯ ಬೇಗನೆ ರಾಧೆಯ ಶ್ಯಾಮನಂತೆ..ಇರಬಾರದೇ ಎನ್ನ ಸನಿಹ ಜಾನಕಿಯ ರಾಮನಂತೆ…ತೋರಬಾರದೇ ಒಲವ ನನ್ನೆಡೆಗೆ ಗಿರಿಜಾರಮಣನಂತೆ.ಅರಿಯದೇ ಕಾದಿಹೆ ನಿನ್ನದೇ ಗುಂಗಿನಲ್ಲಿ ವಿರಹಿಯಂತೆ.

Read More