Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ನಡೆದ ಶೃಂಗಸಭೆ | ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ | ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ಬೆಂಗಳೂರು: ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆ (WEF) ಯಲ್ಲಿ 46 ಜಾಗತಿಕ ಮತ್ತು ಭಾರತೀಯ ಕಂಪನಿಗಳು, ಹೂಡಿಕೆದಾರರು ಮತ್ತು ದೇಶದ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿರುವುದಾಗಿ ಬೃಹತ್ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಶನಿವಾರ ಹೇಳಿದ್ದಾರೆ.ಹೂಡಿಕೆ ಉದ್ದೇಶಗಳ ಕುರಿತು ಚರ್ಚೆಗಳು ನಡೆದಿವೆ. ಆದರೆ, ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಅವರು ಹೇಳಿದರು.’ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಜಾಗತಿಕ ಮತ್ತು ಭಾರತೀಯ ಕಂಪನಿಗಳು, ಹೂಡಿಕೆದಾರರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ನಾಯಕರು ಸೇರಿದಂತೆ ವಿವಿಧ ಸಂಸ್ಥೆಗಳೊಂದಿಗೆ 46 ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ್ದೇವೆ’ ಎಂದು ಪಾಟೀಲ್ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಕರ್ನಾಟಕದಿಂದ ತೆರಳಿದ್ದ ನಿಯೋಗಗಳು ಏರೋಸ್ಪೇಸ್ ಮತ್ತು ರಕ್ಷಣೆ, ಸುಧಾರಿತ ಉತ್ಪಾದನೆ, ಪಾನೀಯಗಳು ಮತ್ತು ಆಹಾರ ಸಂಸ್ಕರಣೆ, ಬಾಹ್ಯಾಕಾಶ ತಂತ್ರಜ್ಞಾನ, ದತ್ತಾಂಶ ಕೇಂದ್ರ ಮತ್ತು ಡಿಜಿಟಲ್ ಮೂಲಸೌಕರ್ಯ ಸೇರಿದಂತೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ವಿಜಯಪೂರ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಜಿಲ್ಲಾ ಸಮಿತಿ ವಿಜಯಪೂರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ ಕಚೇರಿಗೆ ಬೃಹತ್ ಪ್ರತಿಭಟನೆ ಮುಖಾಂತರ ತೆರಳಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳಲ್ಲಿ ೨೧ ದಿನಗಳ ವರೆಗೂ ಸತತ ಕೆಲಸಕೊಡಬೇಕೆಂದು ಇತರ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಜಿಲ್ಲಾ ಕೃಷಿ ಕೂಲಿ ಕಾರ್ಮಿಕ ಸಂಘದ ಮುಖಂಡರಾದ ರಮೇಶ್ ತಳವಾರ ಮಾತನಾಡಿ, ಹೆಚ್ಚು ಕೆಲಸದ ಬೇಡಿಕೆಗಾಗಿ ಪಂಚಾಯತಿ ಹಾಗೂ ತಾಲೂಕಾ ಪಂಚಾಯತ ಕಾರ್ಯಲಯಕ್ಕೆ ಕೃಷಿ ಕೂಲಿ ಕಾರ್ಮಿಕರು ಈ ಹಿಂದೆ ಅಲೆದಾಡಿದರೂ ಹೆಚ್ಚು ಕೆಲಸ ಕೊಡಲಿಲ್ಲ. ಆದ್ದರಿಂದ ಈ ವರ್ಷ ಹೆಚ್ಚು ಕೆಲಸ ಒದಗಿಸಬೇಕು ಎಂದು ಲಿಖಿತ ಉತ್ತರ ಒದಗಿಸಬೇಕು ಎಂದರು.ರಾಜ್ಯ ಜಂಟಿ ಕಾರ್ಯದರ್ಶಿ ದಾವಲಸಾಬ್ ನಧಾಫ ಮಾತನಾಡಿ, ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳಿಗೆ ೨೦೦೧ ೨೬ಮನೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಅಂಜುಮನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ವರಕವಿ ಡಾ. ದ.ರಾ.ಬೇಂದ್ರೆ ಅವರ 130 ನೆ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಮಹಾವಿದ್ಯಾಲಯದ ಡಾ. ಫ.ಗು.ಹಳಕಟ್ಟಿ ಕನ್ನಡ ಸಂಘದ ವತಿಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಶಿಕ್ಷಕರು ಮತ್ತು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಬೇಂದ್ರೆ ಅವರ ಕವನಗಳು ಯುವಜನರಲ್ಲಿ ಚೈತನ್ಯ, ದೇಶ ಭಕ್ತಿ, ಮತ್ತು ಬದುಕಿನ ನೈಜ ಪ್ರೀತಿಯನ್ನು ಮೂಡಿಸುವ ಅದ್ಭುತ ಶಕ್ತಿಯನ್ನು ಹೊಂದಿವೆ ಎಂದು ಹೇಳಿದರು.ಗೌರವ ಉಪಸ್ಥಿತರಾಗಿ ಅಂಜುಮನ್ B.Ed ಕಾಲೇಜು ಪ್ರಾಚಾರ್ಯೆ ಡಾ.ಶಾರದಾಮಣಿ ಹುಣಶಾಳ ಅವರು, ಬೇಂದ್ರೆ ಅವರಿಗೆ ಜೀವನವೇ ಕಾವ್ಯ – ಕಾವ್ಯವೇ ಜೀವನವಾಗಿತ್ತು. ಕುವೆಂಪು, ಬೇಂದ್ರೆ ಇವರು ಕನ್ನಡ ಸಾರಸ್ವತ ಲೋಕದ ಎರಡು ಕಣ್ಣುಗಳು. ಅವರು ಸಾಗಿ ಬಂದ ಧಿವ್ಯಪಥ ನಮ್ಮ ಮುಂದೆ ಇದೆ. ಅವರ ನೆನಪು ನಮ್ಮಲ್ಲಿ ನಾಡು-ನುಡಿಯ ಅಭಿಮಾನವನ್ನು ಉಕ್ಕಿಸಲಿ ಎಂದು ಆಶಿಸಿದರು.ಅಧ್ಯಕ್ಷ ಸ್ಥಾನ ವಹಿಸಿದ, ಮಹಾವಿದ್ಯಾಲಯ ಆಡಳಿತಗಾರ ಕು.ಮುಬೀನಾ ಮುಶ್ರೀಫ್ ಮಾತನಾಡಿದರು.ಕನ್ನಡ ವಿಭಾಗದ…
ಉದಯರಶ್ಮಿ ದಿನಪತ್ರಿಕೆ ಸರಗೂರು: ಹೆಚ್ ಡಿ ಕೋಟೆ ತಾಲೂಕಿನ ಜನರ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಹುತಾತ್ಮ ಅರ್ಜುನ ಆನೆಯ ನೆನಪಿಗಾಗಿ ಮಾವುತ ಸಿನಿಮಾ ಮಾಡಿದ್ದೇವೆ. ತೆರೆ ಮೇಲೆ ಅದ್ಭುತವಾಗಿ ಮೂಡಿಬಂದಿದೆ. ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ನೋಡದೆ ಇರುವವರು, ಅರ್ಜುನ ಆನೆಯನ್ನು ಮತ್ತೊಮ್ಮೆ ನೋಡಬೇಕು ಎನ್ನುವವರು ದಯವಿಟ್ಟು ಥಿಯೇಟರ್ ಗೆ ಬಂದು ಸಿನಿಮಾ ನೋಡಿ, ರೈತನ ಮಗನಿಗೆ ಆಶೀರ್ವಾದ ಮಾಡಿ ಬೆಳೆಸಬೇಕೆಂದು ನಟ ಲಕ್ಷ್ಮೀಪತಿ ಬಾಲಾಜಿ ಮನವಿ ಮಾಡಿದರು.ಚಿತ್ರತಂಡದ ಜೊತೆ ಸರಗೂರು ಪಟ್ಟಣದ ಶಂಕರ್ ಥಿಯೇಟರ್ ಗೆ ಆಗಮಿಸಿ ನಟ ಲಕ್ಷ್ಮೀಪತಿ ಬಾಲಾಜಿ ಪ್ರೇಕ್ಷಕರ ಜೊತೆ ಸಿನಿಮಾ ನೋಡಿದರು.ಅಭಿಮಾನಿಗಳ ಪ್ರೀತಿ, ವಿಶ್ವಾಸ ಕಂಡು ಭಾವುಕರಾದರು.ಈ ವೇಳೆ ಮಾತನಾಡಿದ ಲಕ್ಷ್ಮೀಪತಿ ಬಾಲಾಜಿ, ಸರಗೂರಿನಲ್ಲಿ ಹೌಸ್ ಫುಲ್ ಆಗಿರೋದು ತುಂಬಾ ಖುಷಿಯಾಗಿದೆ. ಅರ್ಜುನನ್ನು ಮತ್ತೆ ತೆರೆ ಮೇಲೆ ತರಲು ಬಹಳ ಇಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಕಾಡಿನ ಸಂರಕ್ಷಣೆ ಮಾತ್ರವಲ್ಲ. ಸಿನಿಮಾದಲ್ಲಿ ಕೊನೆವರೆಗೂ ಸಸ್ಪೆನ್ಸ್ ಕಾಪಾಡಿಕೊಂಡು ಬಂದಿದ್ದೇವೆ. ಕ್ಯೂಟ್ ಲವ್ ಸ್ಟೋರಿ ಇದೆ.…
ಆಲಮೇಲದಲ್ಲಿ ನಡೆದ ವಿರಾಟ ಹಿಂದೂ ಸಮ್ಮೇಳನ ಸಮಾವೇಶದಲ್ಲಿ ರಾಮಚಂದ್ರ ಏಡಕೆ ಅಭಿಮತ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಹಿಂದೂಸ್ಥಾನದಲ್ಲಿ ಬಿರುವರೆಲ್ಲರೂ ಹಿಂದೂಗಳೆ. ಈ ಹಿಂದೂ ಧರ್ಮ ನಾಶ ಮಾಡಲು ಸಾವಿರಾರು ವರ್ಷಗಳಿಂದ ನಿರಂತರವಾಗಿ ಪ್ರಯತ್ನಗಳು ಮಾಡಲಾಗಿದೆ ಆದರೂ ಹಿಂದೂ ಧರ್ಮ ನಾಶ ಮಾಡಲು ಆಗಿಲ್ಲ ಮುಂದೆಯು ಆಗೋದಿಲ್ಲ ಎಂದು ಉತ್ತರ ಕರ್ನಾಟಕ ಪ್ರಾಂತ ಸಹ ಬೌಧಿಕ ಪ್ರಮುಖ ರಾಮಚಂದ್ರ ಏಡಕೆ ಹೆಳಿದರು.ಪಟ್ಟಣದ ವಿರಾಟ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಹಮ್ಮಿಕೊಂಡ ಹಿಂದೂ ಸಮ್ಮೇಳನ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತ ಹೆಳಿದರು.ಹಿಂದೂ ಧರ್ಮ ನಾಶ ಮಾಡಲು ಹಿಂದೂಗಳ ಮೇಲೆ ನಡೆದಿರುವ ಅಕ್ರಮಗಳು ಹಿಂದೂ ಧರ್ಮದ ಇತಿಹಾಸ ತಿಳಿದುಕೊಳ್ಳಬೇಕು ಎಂದರು.ಹಿಂದೂ ಸಮಾಜಕ್ಕೆ ಸ್ವಾರ್ಥ ದೊಡ್ಡ ರೋಗವಾಗಿದೆ ತಮ್ಮ ಸ್ವಾರ್ಥಕ್ಕಾಗಿ ದೇಶ ಮತ್ತು ಧರ್ಮದ ಒಳಿತನ್ನೆ ಮರೆತು ಸ್ವಾರ್ಥಿಗಳಾಗುತ್ತಿದ್ದಾರೆ. ಭಾರತಿಯರು ಹಾವಾಡಿಗರು ಎಂದು ಅಗೌರವನ್ನು ಕಾಣುವದನ್ನು ದೂರ ಮಾಡಿದ್ದು ಸ್ವಾಮಿ ವಿವೇಕಾನಂದರು. ಅವರ ಜ್ಞಾನದಿಂದ ಜಗತ್ತಿಗೆ ಭಾರತಿಯರ ಸಂಸ್ಕಾರ ಜ್ಞಾನ ತೋರಿಸಿಕೊಟ್ಟಿದೆ ಎಂದರು.ತಾರಾಪೂರ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಗುರು…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಟಿಪ್ಪರ್ ಅಡಿ ಸಿಲುಕಿ ಬೈಕ್ ಸವಾರನೊಬ್ಬ ಮೃತಪಟ್ಟು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜರುಗಿದೆ.ಪಟ್ಟಣದ ರಾಷ್ಟ್ರೀಯ ಹೆದ್ದಾರಿ ೫೦ರಲ್ಲಿ ಶುಕ್ರವಾರ ಮಧ್ಯಾನ್ಹ ಈ ಘಟನೆ ಜರುಗಿದೆ. ಘಟನೆಯಲ್ಲಿ ದೇವೂರ ತಾಂಡಾ ನಿವಾಸಿ ಅನೀಲ ಕೇಸು ರಾಠೋಡ(೩೫) ಸ್ಥಳದಲ್ಲಿಯೇ ಮೃತಪಟ್ಟರೆ, ಇನ್ನೊಬ್ಬ ಸವಾರ ಅವಿನಾಶ ಮನ್ನು ರಾಠೋಡ(೨೫) ತೀವೃವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಬೈಕ್ ಸವಾರರು ದೇವೂರ ತಾಂಡಾದಿಂದ ಪಡಗಾನೂರ ಗ್ರಾಮಕ್ಕೆ ತೆರಳುತ್ತಿದ್ದರೆನ್ನಲಾಗಿದೆ. ಇದೇ ಸಮಯದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಹೊರಟ ಟಿಪ್ಪರ(ಕೆ.ಎ.೨೮ ಎಎ ೫೭೨೪) ಒಮ್ಮೆಲೆ ಇಂಡಿ ಕಡೆಗೆ ತೆರಳಲು ಬಲಭಾಗಕ್ಕೆ ತಿರುಗಿಸಿದಾಗ ಅದರ ಚಕ್ರಗಳಡಿ ಸಿಲುಕಿ ಈ ದುರ್ಘಟನೆ ಸಂಭವಿಸಿದೆ.ಘಟನೆ ಜರುಗುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಕೂಡಲೇ ಆಗಮಿಸಿ ಜನರನ್ನು ನಿಯಂತ್ರಿಸಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿದರು. ನಂತರ ಪ್ರಕರಣ ದಾಖಲಿಸಿಕೊಂಡರು.ತಾಂಡಾ ನಿವಾಸಿ ಮೃತ ಅನೀಲ ಕುಟುಂಬದ ಒಬ್ಬನೇ ಮಗನಾಗಿದ್ದು ತಂದೆ, ತಾಯಿ ತೀರಿಹೋಗಿದ್ದಾರೆ. ಈಗ ಇವನ ನಿಧನದಿಂದ ಇವನ ಪತ್ನಿ, ಇಬ್ಬರು ಪುತ್ರರು ಹಾಗೂ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶ್ರೀ ಸದ್ಗುರು ಪತ್ತಿನ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ನೂತನವಾಗಿ ಬೆಳಗಾವಿಯ ಸಹಕಾರಿ ಸಂಘದ ಜಂಟಿ ನಿಬಂಧಕರಾಗಿ ಪದನ್ನೋತಿ ಹೊಂದಿದ ಕಲ್ಲಪ್ಪ ಓಬಣ್ಣಗೋಳ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಶ್ರೀ ಸದ್ಗುರು ಪತ್ತಿನ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಸಬರದ, ಚಂದ್ರಶೇಖರ ನಾಗರಬೆಟ್ಟ, ಸಂಗನಗೌಡ ಪಾಟೀಲ ಅಗಸಬಾಳ, ಆನಂದ ಶಾಬಾದಿ, ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಮಲ್ಲು ಹಡಪದ, ಅಬ್ದುಲಗಪುರ ಭಾಗವಾನ, ಪಂಡಿತ ಯಂಪುರೆ, ಶಿವಾನಂದ ಬಡಾನೂರ, ಮಹಾಂತೇಶ ನೂಲಾನವರ ಸೇರಿದಂತೆ ಅನೇಕರು ಇದ್ದರು.
ಶಾಲೆಗೆ ಅಧಿಕಾರಿಗಳ ಭೇಟಿ | ಪರಿಶೀಲನೆ ಮಾಡಿ ಸ್ಪಷ್ಟನೆ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಆಲಬಾಳ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳ ಊಟದ ತಟ್ಟೆಗಳನ್ನು ಕೊಳಚೆ ನೀರಿನಲ್ಲಿ ತೊಳೆಯಲಾಗುತ್ತಿದೆ ಎಂಬ ಆರೋಪದ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸದರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪರಿಶೀಲನೆ ವೇಳೆ ಮಕ್ಕಳ ಊಟದ ತಟ್ಟೆಗಳನ್ನು ಕೊಳಚೆ ನೀರಿನಿಂದ ತೊಳೆಯಲಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಕೊಳಚೆ ನೀರಿನ ಬದಲಾಗಿ, ಫಿಲ್ಟರ್ ಯಂತ್ರದಿಂದ ಹೊರಹೋಗುವ ತ್ಯಾಜ್ಯ ನೀರನ್ನು ಪ್ರತ್ಯೇಕ ಪೈಪ್ ಮುಖಾಂತರ ತರಲಾಗಿದ್ದು, ಅದೇ ನೀರನ್ನು ತಟ್ಟೆ ತೊಳೆಯಲು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶಾಲಾ ಆವರಣದಲ್ಲಿ ಮಕ್ಕಳ ಊಟದ ತಟ್ಟೆಗಳನ್ನು ತೊಳೆಯಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಶಾಲೆಯಲ್ಲಿ ಮಕ್ಕಳಿಗೆ ಪ್ರತ್ಯೇಕ ಕುಡಿವ ನೀರಿನ ವ್ಯವಸ್ಥೆಯೂ ಲಭ್ಯವಿದೆ ಎಂದು ಪರಿಶೀಲನೆ ವೇಳೆ ತಿಳಿದುಬಂದಿದೆ. “ಈ ಸಂಬಂಧ ಸದರಿ ಶಾಲೆಯ ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನನ್ನವಳೆ ನನ್ನವಳೆ,ವಾಚನಾಲಯದ ಪುಸ್ತಕದಲ್ಲಿ ಮುಖ ಹುದುಗಿಸಿ ಕುಳಿತರೆ ಸಾಕು ಸಮಯ ಸರಿದಿದ್ದೇ ಗೊತ್ತಾಗುತ್ತಿರಲಿಲ್ಲ. ಎಮ್ ಎ ಕೊನೆ ವರ್ಷದ ಪರೀಕ್ಷೆ ಸಮೀಪಿಸುತ್ತಿದ್ದರಿಂದ ಎಂದಿಗಿಂತ ಓದು ಮತ್ತಷ್ಟು ಜೋರಾಗಿಯೇ ಇತ್ತು. ‘ಸ್ಸಾರಿ ತಮಗೆ ನನ್ನಿಂದ ಲೇಟ್ ಆಯಿತು ಅನಿಸುತ್ತೆ.’ ಎಂದು ಗ್ರಂಥಪಾಲಕರಿಗೆ ನುಡಿಯುತ್ತ ಸರಸರನೆ ದಾಪುಗಾಲು ಹಾಕುತ್ತ ಬಸ್ ಸ್ಟಾಪ್ ಮುಟ್ಟುವಷ್ಟರಲ್ಲಿ ಮಳೆಯ ತುಂತುರು ಹನಿಗಳು ಹಣೆಯನ್ನು ಮುತ್ತಿಕ್ಕಹತ್ತಿದವು. ಮಳೆ ಬರುವ ಯಾವುದೇ ಮುನ್ಸೂಚನೆ ಇರದಿದ್ದರೂ ವರುಣನ ಆಗಮನ ಒಂದು ತರಹ ಖುಷಿ ತಂದಿತ್ತು. ಮರುಕ್ಷಣವೇ ನೆನಪಾಯಿತು ಮಳೆ ಜೋರಾದರೆ ನನ್ನ ಬಳಿ ಛತ್ರಿ ಇಲ್ಲವೆಂದು. ಹೆಚ್ಚಾದರೆ ಏನಾಗುತ್ತೆ ಮಳೆರಾಯ ನನ್ನನ್ನು ಸ್ನಾನ ಮಾಡಿಸುತ್ತಾನೆ ಎನ್ನುತ್ತ ಸಣ್ಣ ಸಣ್ಣ ಮಳೆ ಹನಿಗಳಿಗೆ ಕೈ ಒಡ್ಡುತ್ತ ಮನದೊಳಗೆ ನಕ್ಕೆ. ಪುಣ್ಯಕ್ಕೆ ಮಿಂಚಿತು, ಗುಡುಗಿತು, ಆದರೆ ದಪ್ಪ ದಪ್ಪ ಹನಿಗಳು ಸುರಿಯಲಿಲ್ಲವೆಂದು ಖುಷಿ ಪಡುತ್ತ ಬಸ್ ಹತ್ತಿ ಕೂತೆ. ಮನೆಗೆ ಬಂದು ಬಿಸಿನೀರಿನಲ್ಲಿ ಮುಖ ತೊಳೆದು…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಪಾಲಕರು ತಮ್ಮ ಸಮಾನ ವಯಸ್ಕರೊಂದಿಗೆ ಮಾತನಾಡುವಾಗ ಮಕ್ಕಳೊಂದಿಗೆ ವಿಪರೀತ ಶಿಸ್ತಿನಿಂದ ಮತ್ತು ಕಠಿಣತೆಯಿಂದ ನಡೆದುಕೊಳ್ಳಬೇಕು ಎಂದು ಹೇಳುವುದನ್ನು ನಾವು ಬಹುತೇಕ ಕೇಳಿದ್ದೇವೆ.ಮಕ್ಕಳೊಂದಿಗೆ ಶಿಸ್ತಿನಿಂದ ನಡೆದುಕೊಳ್ಳಲು ನಾವು ಬಯಸಿದಾಗ ನಮ್ಮದೇ ಆದ ಕಿಲ ನಿಯಮಾವಳಿಗಳನ್ನು ಮಾಡಿಕೊಂಡು ಅವುಗಳನ್ನು ಮಕ್ಕಳು ಪಾಲಿಸಲಿ ಎಂದು ಅಪೇಕ್ಷಿಸುತ್ತೇವೆ, ಆಶಿಸ್ತುಕ್ರಮಗಳನ್ನು ಮಕ್ಕಳ ಮೇಲೆ ಒತ್ತಾಯಪೂರ್ವಕವಾಗಿ ಹೇರುತ್ತೇವೆ. ಅವುಗಳನ್ನು ಮಕ್ಕಳು ಪಾಲಿಸದೆ ಹೋದಾಗ ಅವರನ್ನು ದಂಡಿಸುತ್ತೇವೆ ಕಠಿಣವಾಗಿ ಮಾತನಾಡುತ್ತೇವೆ, ಆದರೆ ಅವರು ನಮ್ಮ ಮಕ್ಕಳು ನಮ್ಮದೇ ಪ್ರತಿರೂಪ. ಅತಿಯಾದ ಶಿಸ್ತು ಮಕ್ಕಳು ಪಾಲಕರ ವಿರುದ್ಧ ತಿರುಗಿ ಬೀಳುವಂತೆ ಮಾಡುತ್ತದೆ. ಅವರು ಪಾಲಕರ ಮಾತನ್ನು ಮೀರಬಹುದು. ವಿದ್ಯಾಭ್ಯಾಸದಲ್ಲಿ, ಆಟೋಟಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದು. ಆದರೆ ಇಲ್ಲಿ ಇನ್ನೊಂದು ಪದ ಇದೆ.. ಅದುವೇ ಬದ್ಧತೆ. ಬದ್ಧತೆ ಎಂದರೆ ಯಾವುದೇ ಒಂದು ವಿಷಯಕ್ಕೆ ದೃಢವಾಗಿ ಕಚ್ಚಿಕೊಂಡು ನಿಲ್ಲುವುದು, ನಿಲುವಿಗೆ ಬದ್ಧರಾಗುವುದು. ಇಂಥವರು ನನ್ನ ಜೊತೆಗಿದ್ದರೆ ನಾನು ಪರ್ವತವನ್ನೇ ಕಿತ್ತಿ ತರಬಲ್ಲೆ ಎಂಬ ಭಾವವನ್ನು ಮಕ್ಕಳಲ್ಲಿ…
