Author: editor.udayarashmi@gmail.com

ಇಂಡಿ: ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಅಭದ್ರತೆ ಕಾಡುತ್ತಿದೆ. ಶಾದಿ‌ ಮಹಲ್ ಕಟ್ಟಿ ಕೊಡುವುದರಿಂದ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಮುಸ್ಲಿಂ ಸಮುದಾಯದ ಮೀಸಲಾತಿ ಕಿತ್ತು ಹಾಕಿದ್ದಾರೆ. ಇನ್ನೂ ಬಲಗೈ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಸತತ ಮೋಸ ಮಾಡಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷ ಒಂದೇ ‌ನಾಣ್ಯದ ಎರಡು ಮುಖಗಳು ಎಂದು ಬಿಎಸ್ಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.‌ದಸ್ತಗೀರ ಮುಲ್ಲಾ ಆರೋಪಿಸಿದರು. ಪಟ್ಟಣದಲ್ಲಿ ಜ್ಯೋತಿಬಾ ಪುಲೆ 196 ರ ಜಯಂತಿ ಹಾಗೂ ಬಿಸ್ಪಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಬಿಸ್ಪಿ ಪಕ್ಷದ ಘೋಷಿತ ಅಭ್ಯರ್ಥಿ ನಾಗೇಶ ಶಿವಶರಣ ಪರ ಮತಯಾಚನೆ ಮಾಡಿದರು.ಬಿಜೆಪಿ ಸರ್ಕಾರ ಒಳ ಮೀಸಲಾತಿಯಲ್ಲಿ ಕಂದಕ‌ ಸೃಷ್ಟಿ ಮಾಡಿ ಜಗಳ ಹಚ್ಚುವ ಕೆಲಸ ಮಾಡಿದರು. ಸಂವಿಧಾನದ ತಳಹದಿ ಮೇಲೆ ಬಹುಜನ ಸಮಾಜ ಪಕ್ಷ ನಿಂತಿದ್ದು ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳಿಗೆ ಧ್ವನಿಯಾಗಿ ನಿಲ್ಲುವ ಪಕ್ಷವಾಗಿದೆ. ಈ ಬಾರಿ ಸರಕಾರ ರಚಿಸುವಲ್ಲಿ ಬಹುಜನ ಸಮಾಜ ಪಕ್ಷ ಮಹತ್ತರ ಪಾತ್ರ ವಹಿಸಲಿದೆ ಎಂದು ಹೇಳಿದರು.…

Read More

ಕೊಲ್ಹಾರ: ಮಟ್ಟಿಹಾಳ ಗ್ರಾಮದಲ್ಲಿ ಪಡಿತರ ವಿತರಣಾ ಕೇಂದ್ರ ಪ್ರಾರಂಭಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯರೈತ ಸಂಘ, ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟ ಮತ್ತು ಮಟ್ಟಿಹಾಳ ಗ್ರಾಮಸ್ಥರು ಕೊಲ್ಹಾರ ತಹಸೀಲ್ದಾರ ಹಾಗೂ ತಾಲೂಕಾ ಆಹಾರ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.ಮಂಗಳವಾರ ಪಟ್ಟಣದ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ತಹಸೀಲ್ದಾರ ಎಮ್.ರೇಣುಕಾರವರಿಗೆ ಮನವಿ ಸಲ್ಲಿಸಿ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದ ಕೊಲ್ಹಾರ ತಾಲೂಕಾಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ನಾಗರದಿನ್ನಿ ಗ್ರಾಮವು ಮಟ್ಟಿಹಾಳದಿಂದ ೨.೫ ಕಿ.ಮೀ ದೂರವಿದ್ದು ತಿಂಗಳ ಪಡಿತರ ತರಲು ಒಂದು ದಿನ ತಮ್ಮ ಕೆಲಸಗಳನ್ನು ಬಿಟ್ಟು ತರುವಂತಾಗಿದ್ದು ೩೫೦ ಕ್ಕಿಂತಲೂ ಅಧಿಕವಿರುವ ಪಡಿತರದಾರರಿಗೆ ಅನುಕೂಲವಾಗಲು ಮಟ್ಟಿಹಾಳ ಗ್ರಾಮದಲ್ಲಿಯೇ ಸರಕಾರವು ಪಡಿತರ ವಿತರಣಾ ಕೇಂದ್ರವನ್ನು ತೆರಯಬೇಕೆಂದು ಹೇಳಿದರು.ಮಟ್ಟಿಹಾಳ ಗ್ರಾಮದ ಪಡಿತರರಾದ ಶೋಭಾ ಸೊನ್ನದ ಮಾತನಾಡಿ, ವಯಸ್ಸಾದವರಿಗೆ, ಮಹಿಳೆಯರಿಗೆ, ಮಕ್ಕಳಿಗೆ ನಾಗರದಿನ್ನಿ ಗ್ರಾಮಕ್ಕೆ ಹೋಗಿ ರೇಶನ್ ತರುವುದು ಬಹಳ ಕಷ್ಟಕರವಾಗಿದೆ. ಹೋಗಿ ಬರಲು ಸರಿಯಾದ ವಾಹನ…

Read More

ವಿಜಯಪುರ: ಬಸವರಾಜ ಕಟ್ಟೀಮನಿ ಕಥಾ ಪ್ರಶಸ್ತಿಗೆ ಭಾಜನರಾದ ಕಥೆಗಾರ ಚನ್ನಪ್ಪ ಕಟ್ಟಿ ಅವರ ಕಥೆಗಳ ಬೇರುಗಳು ನಮ್ಮ ಬದುಕಿನ ನೆಲದಾಳಕ್ಕೆ ಇಳಿದಿವೆ ಎಂದು ನಾಡಿನ ಹಿರಿಯ ಕಾದಂಬರಿಕಾರರಾದ ರಾಘವೇಂದ್ರ ಪಾಟೀಲ ಅಭಿಪ್ರಾಯಪಟ್ಟರು.ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಕೊಡಮಾಡುವ ‘ಕಥಾ ಪ್ರಶಸ್ತಿ ಹಾಗೂ ‘ಯುವ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಅವರು ಮಾತನಾಡಿದರು.ಕಥಾ ಪ್ರಶಸ್ತಿಗೆ ಭಾಜನರಾದ ಡಾ.ಚನ್ನಪ್ಪ ಕಟ್ಟಿ ಅವರನ್ನು ಅಭಿನಂದಿಸಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಾಧ್ಯಾಪಕರಾದ ಡಾ.ವೆಂಕಟಗಿರಿ ದಳವಾಯಿ ಮಾತನಾಡಿ, ಕಥೆಗಾರ ಕಟ್ಟಿ ಅವರು ಸಿದ್ಧಾಂತಗಳ ಕನ್ನಡಿಯ ಮೂಲಕ ಬದುಕನ್ನು ಗ್ರಹಿಸದೆ ಅಂತಃಕರಣದಕಣ್ಣಿನಿಂದ ನೋಡಿ ಕತೆ ಕಟ್ಟುತ್ತಾರಾದ್ದರಿಂದ ಅವರ ಕತೆಗಳಿಗೆ ಅಪಾಂಥಿಕ ಚಹರೆ ಮೂಡಿದೆ ಹಾಗೂ ಕನ್ನಡ ಕಥಾಲೋಕದಲ್ಲಿ ಅವರ ಕತೆಗಳಿಗೆ ಒಂದು ಮಹತ್ವದ ಸ್ಥಾನವಿದೆ ಎಂದು ವಿಶ್ಲೇಷಿಸಿದರು.ಬುದ್ಧನ ಕಿವಿ ಕಥಾ ಸಂಕಲನ ಕೃತಿಗೆ ಯುವ ಸಾಹಿತ್ಯ ಪುರಸ್ಕಾರ ಪಡೆದ ದಯಾನಂದ ಅವರನ್ನು ಅಭಿನಂದಿಸಿ, ಯುವ ವಿಮರ್ಶಕರಾದ ಸಿ.ಎಸ್.ಭೀಮರಾಯ…

Read More

ದೇವರಹಿಪ್ಪರಗಿ: ಅಕಾಲಿಕ ಮಳೆಯಿಂದ ಹಾನಿಯಾದ ಬೆಳೆಗಳಿಗೆ ಸರಕಾರ ತಕ್ಷಣವೇ ಸಮೀಕ್ಷೆ ನಡೆಸಿ, ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ರೈತರೊಂದಿಗೆ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.ಮಂಗಳವಾರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ರೈತ ಸಂಘದ ಪದಾಧಿಕಾರಿಗಳು, ಅಕಾಲಿಕ ಮಳೆಯಿಂದ ಜಿಲ್ಲೆಯಾದ್ಯಂತ ಕೋಟ್ಯಾಂತರ ರೂ. ಬೆಳೆ ಹಾನಿಯಾಗಿದೆ ತಕ್ಷಣವೇ ಸೂಕ್ತ ಪರಿಹಾರ ನೀಡಿ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಈರಪ್ಪ ಕುಳೆಕುಮಟಗಿ ಗೌರವಾಧ್ಯಕ್ಷ ಶಿವಾನಂದ ಹಿರೇಮಠ ಮಾತನಾಡಿ, ಪ್ರತಿ ವರ್ಷ ಮಾರ್ಚ ಏಪ್ರೀಲ್ ತಿಂಗಳಲ್ಲಿ ಅಕಾಲಿಕ ಮಳೆಯಿಂದ ರೈತರು ಬೆಳೆದ ದ್ರಾಕ್ಷಿ, ಲಿಂಬೆ, ಈರುಳ್ಳಿ, ಮಾವಿನಹಣ್ಣು, ಟೊಮೆಟೊ, ಮೆಣಸಿನಕಾಯಿ, ಮೆಕ್ಕೆಜೋಳ, ಗೋದಿ ಹಾಳಾಗುತ್ತಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆದ ಬೆಳೆಗೆ ಬೆಲೆಯಿಲ್ಲದಂತಾಗಿ ಆಕಸ್ಮಿಕ ಎಲ್ಲವೂ ಹಾಳಾಗಿ ಹೋಗುತ್ತಿದೆ. ವಿಶೇಷವಾಗಿ ದ್ರಾಕ್ಷಿ ಕಟಾವು ಸಂದರ್ಭ ಇರುವುದರಿಂದ ದ್ರಾಕ್ಷಿ ಬೆಳೆಯೆಲ್ಲ ಹಾಳಾಗಿ ಲಕ್ಷಾಂತರ ರೂ.…

Read More

ಬಸವನಬಾಗೇವಾಡಿ: ಕಳೆದೆರಡು ವರ್ಷಗಳಿಂದ ಗುರುವೀರಸಿದ್ಧ ಶಿವಯೋಗಿಗಳ ಜಾತ್ರಾ ಮಹೋತ್ಸವದಂಗವಾಗಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಉಚಿತ ಆರೋಗ್ಯ ಶಿಬಿರ ಆಯೋಜನೆ ಮಾಡುತ್ತಾ ಬರಲಾಗುತ್ತಿದೆ. ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕೆಂದು ನಂದಿ ಮಠದ ವೀರಸಿದ್ಧ ಸ್ವಾಮೀಜಿ ಹೇಳಿದರು.ತಾಲೂಕಿನ ಶರಣಕ್ಷೇತ್ರ ವಡವಡಗಿ ಗ್ರಾಮದ ನಂದಿ ಮಠದ ಗುರುವೀರಸಿದ್ಧ ಶಿವಯೋಗಿಗಳ ೭೩ ನೇ ಜಾತ್ರಾಮಹೋತ್ಸವ ಹಾಗೂ ಲಿಂ. ಮಲ್ಲಿಕಾರ್ಜುನ ಸ್ವಾಮೀಜಿಗಳ ಪ್ರಥಮ ಪುಣ್ಯಾರಾಧನೆಯಂಗವಾಗಿ ಮಂಗಳವಾರ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ವಿವಿಧ ತಜ್ಞ ವೈದ್ಯರಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ನಡೆಯುವ ಉಚಿತ ಆರೋಗ್ಯ ಶಿಬಿರದಲ್ಲಿ ನಾನಾ ತಜ್ಞ ವೈದ್ಯರು ಇರುವದರಿಂದಾಗಿ ಜನರು ತಮ್ಮ ಆರೋಗ್ಯ ಸಮಸ್ಯೆಗಳನ್ನು ತೋರಿಸಿ ಗುಣಮುಖರಾಗಿ ಆರೋಗ್ಯಯುತ ಜೀವನ ನಡೆಸುವಂತರಾಗಬೇಕೆಂದರು.ಡಾ.ಎಸ್.ಎಸ್.ಪಾಟೀಲ ಮಾತನಾಡಿ, ಗ್ರಾಮೀಣ ಭಾಗದ ಜನರ ಆರೋಗ್ಯಕ್ಕಾಗಿ ಬಿಎಲ್‌ಡಿಇ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯದಿಂದ ವಿವಿಧೆಡೆ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ. ಬಿಎಲ್‌ಡಿಇ ಆಸ್ಪತ್ರೆಯು ಸರ್ಕಾರಿ ಆಸ್ಪತ್ರೆಯಂತೆ ಉಚಿತವಾಗಿ ತಪಾಸಣೆ ಮಾಡಿ ಉಚಿತ ಔಷಽಗಳನ್ನು ನೀಡುತ್ತಿದೆ. ಕೆಲ…

Read More

ವಡವಡಗಿ ನಂದಿ ಮಠದ ಶತಮಾನೋತ್ಸವದ ಸ್ಮರಣ ಸಂಚಿಕೆ ಲೋಕಾರ್ಪಣೆ ಬಸವನಬಾಗೇವಾಡಿ: ನಾಡಿನಲ್ಲಿ ವಿರಕ್ತಮಠಗಳು ಇರುವುದರಿಂದಾಗಿ ಬಸವಾದಿ ಶರಣರ ತತ್ವ ಸಂದೇಶಗಳು ಉಳಿದುಕೊಂಡಿವೆ. ಪುಸ್ತಕಗಳಿಗೆ ಎಂದಿಗೂ ಸಾವಿಲ್ಲ, ಕೇಡಿಲ್ಲ. ಇವು ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಈ ದಿಸೆಯಲ್ಲಿ ನಂದಿ ಸಿರಿ ಸ್ಮರಣ ಸಂಚಿಕೆಯು ವಡವಡಗಿ ನಂದಿ ಮಠದ ಇತಿಹಾಸವನ್ನು ತೆರೆದಿಡುತ್ತದೆ ಎಂದು ಮಕ್ಕಳ ಸಾಹಿತಿ ಪ.ಗು.ಸಿದ್ದಾಪೂರ ಹೇಳಿದರು.ತಾಲೂಕಿನ ಶರಣ ಕ್ಷೇತ್ರ ವಡವಡಗಿ ಗ್ರಾಮದ ನಂದಿ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಂದಿ ಮಠದ ಶತಮಾನೋತ್ಸವ ಸ್ಮರಣ ಸಂಚಿಕೆ ನಂದಿ ಸಿರಿಯನ್ನು ಲೋಕಾರ್ಪಣೆಗೊಳಿಸಿದ ನಂತರ ಮಾತನಾಡಿದ ಅವರು, ಮನುಷ್ಯ ಅಳಿದು ಹೋದರೂ ಪುಸ್ತಕಗಳು ಎಂದಿಗೂ ಅಳಿದು ಹೋಗುವದಿಲ್ಲ. ಅವು ಮುಂದಿನ ಜನಾಂಗಕ್ಕೆ ಗತ ಕಾಲದ ಇತಿಹಾಸವನ್ನು ತಿಳಿಸಿಕೊಡುತ್ತವೆ. ಸಾಹಿತ್ಯದಿಂದ ಮನುಷ್ಯನು ನೆಮ್ಮದಿ ಜೀವನ ಮಾಡಬಹುದು. ೧೨ ನೇ ಶತಮಾನದ ಶರಣರು ಜನರ ಸರಳ ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿರುವ ಮೂಢನಂಬಿಕೆ, ಸಮಾಜದ ಸುಧಾರಣೆಗೆ ಶ್ರಮಿಸಿದರು. ಬಸವೇಶ್ವರರು…

Read More

ಹುಣಸಗಿ: ತಾಲೂಕಿನ ವಜ್ಜಲ ಗ್ರಾಮದ ಶರಣಗೌಡ ಶಾಂತಗೌಡ ಪಾಟೀಲ ಅವರನ್ನು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ, ಹಾಗೂ ಹುಣಸಗಿ ಪಟ್ಟಣದ ಬಸವರಾಜ ಗುರುಸಂಗಪ್ಪ ಸಜ್ಜನ ಅವರನ್ನು ಜಿಲ್ಲಾ ನೂತನ ಪ್ರಧಾನ ಕಾರ್ಯದರ್ಶಿಯನ್ನಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸರೆಡ್ಡಿ ಎಂ ಪಾಟೀಲ ಅವರು ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ ಒಪ್ಪಿಗೆ ಮೇರೆಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ತಾವೀರ್ವರು ತಕ್ಷಣದಿಂದಲೆ ಅಧಿಕಾರ ವಹಿಸಿಕೊಂಡು, ಪಕ್ಷದ ತತ್ವಸಿದ್ದಾಂತಗಳನ್ನು ಅಳವಡಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರೊಂದಿಗೆ ಶ್ರಮಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.ನೂತನ ಪದಾಧಿಕಾರಿಗಳಿಗೆ ಸನ್ಮಾನ :ಸುರಪುರದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಹುಣಸಗಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಪಕ್ಷದ ಜಿಲ್ಲಾ ಪದಾಧಿಕಾರಿಗಳನ್ನು ಸನ್ಮಾನಿಸಿದರು.ಈ ಸಂದರ್ಭ ಮಾತನಾಡಿದ ಶರಣಗೌಡ ಪಾಟೀಲ ಮತ್ತು ಬಸವರಾಜ ಸಜ್ಜನ ಅವರು, ತಮ್ಮನ್ನು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾಗಿ ನೇಮಕ ಮಾಡಲು ಕಾರಣಿಭೂತರಾದ ಮಾಜಿ ಶಾಸಕ ರಾಜಾ ವೇಂಕಟಪ್ಪ ನಾಯಕ, ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಹಾಗೂ…

Read More

ಆಲಮಟ್ಟಿ: ಇಲ್ಲಿನ ಆಲಮಟ್ಟಿ ಆರ್.ಎಸ್. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ  ಸಮುದಾಯದತ್ತ ಶಾಲಾ ಕಾರ್ಯಕ್ರಮ ಜರುಗಿತು.    ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿ ಸೇರಿದಂತೆ ಶಿಕ್ಷಣ ರಂಗದ ಹಲ ಚಟುವಟಿಕೆಗಳ ಪರಿಶೀಲನೆ ನಡೆಯಿತು. ಸಮರ್ಪಕವಾಗಿ ಶಾಲಾ ಚಟುವಟಿಕೆ ಇಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ಮುಖ್ಯ ಗುರು ಬಿ.ಡಿ.ಚಲವಾದಿ ತಿಳಿಸಿದರು.     ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಜಿ.ಆರ್.ಜಾಧವ ಮಾರ್ಗದರ್ಶಿ ಮೇಲ್ವಿಚಾರಕರಾಗಿ ಭಾಗವಹಿಸಿದ್ದರು. ಹಿರಿಯ ಶಿಕ್ಷಕ ಎಲ್.ಸಿ.ಚಲವಾದಿ, ಎಂ.ಟಿ.ಲಮಾಣಿ, ರಾಘವೇ0ದ್ರ ವಂದಗನೂರ, ಗುರುಮಾತೆ ಶ್ರೀಮತಿ ಎಸ್.ಜಿ.ಗಂಟಿ, ಶ್ರೀಮತಿ ಕೆ.ಎಸ್.ಧನಶೆಟ್ಟಿ ಸೇರಿದಂತೆ ಎಲ್ಲ ಶಿಕ್ಷಕ, ಸಿಬ್ಬಂದಿ ಹಾಜರಿದ್ದರು. ಚುನಾವಣಾ ಜಾಗೃತಿ ಅಂದೋಲನದೊAದಿಗೆ ಕಾರ್ಯಕ್ರಮ ಆರಂಭವಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಪ್ರಗತಿ ಆವಲೋಕಿಸಿ,ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಯಶಸ್ವಿಯಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲಕ,ಪೋಷಕರು ಮಕ್ಕಳ ಪ್ರಗತಿಯ ಬಗ್ಗೆ ತೃಪ್ತಿದಾಯಕ ಸಂತಸ ವ್ಯಕ್ತಪಡಿಸಿದರು.

Read More

ವಿಜಯಪುರ: ನುಡಿದಂತೆ ನಡೆಯುವುದು, ಕೊಟ್ಟ ಭರವಸೆಗಳನ್ನು ಈಡೇರಿಸುವುದು ನಮ್ಮ ಜಾಯಮಾನವಾಗಿದೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದ್ದಾರೆ. ಬಬಲೇಶ್ವರ ತಾಲೂಕಿನ ಬಬಲಾದಿ, ಕೆಂಗಲಗುತ್ತಿ, ಖಿಲಾರಹಟ್ಟಿ, ಕಾಖಂಡಕಿ ಮತ್ತು ಅಗಸನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಅವರು ಗ್ರಾಮಸ್ಥರೊಂದಿಗೆ ಮಾತನಾಡಿದರು. ಸುಳ್ಳು ಹೇಳುವುದು, ಪೊಳ್ಳು ಭರವಸೆಗಳನ್ನು ನೀಡುವುದು ನನಗೆ ಗೊತ್ತಿಲ್ಲ. ಆಡಿದ ಮಾತುಗಳನ್ನು ಪಾಲಿಸುತ್ತೇನೆ. ನೀಡಿದ ಭರವಸೆಗಳನ್ನು ಈಡೇರಿಸುತ್ತೇನೆ. ಜನಸಾಮಾನ್ಯರು, ರೈತರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಈ ಮೂಲಕ ಮತದಾರರ ಋಣ ತೀರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಅವರು ಹೇಳಿದರು. ಬಬಲಾದಿ ಶ್ರೀ ಸದಾಶಿವ ಮುತ್ಯಾನ ಆಶೀರ್ವಾದ ನನ್ನ ಮೇಲಿದೆ. ಮತಕ್ಷೇತ್ರದ ಜನರ ಸಂಪೂರ್ಣ ಬೆಂಬಲವೂ ನನಗಿದೆ. ಹೀಗಾಗಿ ಎಲ್ಲ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗುತ್ತಿವೆ ಎಂದು ಅವರು ಹೇಳಿದರು. ಕೆ.ಬಿ.ಜೆ.ಎನ್.ಎಲ್ ಭೂಸ್ವಾಧೀನ ಪರಿಹಾರದಲ್ಲಿ ವಿಜಯಪುರ ಜಿಲ್ಲೆ ರೈತರಿಗೆ ಅನ್ಯಾಯವಾಗಿದೆ. ಮಾರ್ಗಸೂಚಿ ಬೆಲೆಯಲ್ಲಿ ತಾರತಮ್ಯ ಮಾಡಲಾಗಿದ್ದು, ಕನ್ಸೆಂಟ್ ಹೆಸರಿನಲ್ಲಿ ಜಿಲ್ಲೆಯ ರೈತರು ಒಪ್ಪಿಗೆ ನೀಡಿದರೆ ಮೂರ್ಖರಾಗಬೇಕಾಗುತ್ತದೆ. ಈ…

Read More

ವಿಜಯಪುರ: ವಿಧಾನ ಸಭೆ ಚುನಾವಣೆ ಹಿನ್ನೆಲೆದಾಖಲೆ ಇಲ್ಲದೆ ಸಾರಿಗೆ ಬಸ್‌ನಲ್ಲಿ ಸಾಗಿಸುತ್ತಿದ್ದ ರೂ.9.95 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದ ಯಲಗೂರು ಕ್ರಾಸ್ ಚೆಕ್‌ಪೋಸ್ಟ್ ಬಳಿ ಮಂಗಳವಾರ ನಡೆದಿದೆ.ಹೊಸಪೇಟೆಯಿಂದ ವಿಜಯಪುರಕ್ಕೆ ಹೊರಟಿದ್ದ KSRTC ಬಸ್‌ನಲ್ಲಿ ಈ ಹಣವನ್ನು ಜಪ್ತಿಗೈದಿದ್ದಾರೆ. ನೂರ್‌ಖಾನ್ ಧಪೇದಾರ್ ಎಂಬಾತನ ಬಳಿ ಈ ಹಣ ಪತ್ತೆಯಾಗಿದೆ. ಈರುಳ್ಳಿ ಮಾರಾಟ ಮಾಡಿ ಬಂದ ಹಣವಿದು ಎಂದು ನೂರ್‌ಖಾನ್ ಹೇಳಿಕೊಂಡಿದ್ದಾನೆ. ಅದಕ್ಕೆ ಸಂಬಂಧಿಸಿದ ದಾಖಲೆ ನೀಡಿ ಹಣ ಪಡೆದುಕೊಳ್ಳುವಂತೆ ತಹಶಿಲ್ದಾರ ಸೂಚಿಸಿದ್ದಾರೆ.ನಿಡಗುಂದಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Read More