Author: editor.udayarashmi@gmail.com

ವಿಜಯಪುರ: ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ಶ್ರೀನಾಥ ಪೂಜಾರಿ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗುತ್ತಿದೆ ಎಂದು ಪ್ರಚಾರ ಸಮಿತಿಯ ಸಹ ಅಧ್ಯಕ್ಷ ಹೆಚ್.ಪಿ. ಸುಧಾಮ್ ದಾಸ್ ಘೋಷಿಸಿದರು.ನಗರದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಶ್ರೀನಾಥ ಅವರಿಗೆ ಆದೇಶ ಪ್ರತಿ ನೀಡಿ ಅವರು ಮಾತನಾಡಿದರು.ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅದ್ಯಕ್ಷ ಎಂ.ಬಿ ಪಾಟೀಲ ಅವರ ಮಾರ್ಗದರ್ಶನದಲ್ಲಿ, ಸ್ಥಳೀಯ ನಾಯಕರ ಸಹಯೋಗದೊಂದಿಗೆ ಪಕ್ಷದ ಬಲವರ್ಧನೆ ಮಾಡುವಂತೆ ಈ ಜವಾಬ್ದಾರಿಯನ್ನು ನೀಡಲಾಗುತ್ತಿದೆ ಎಂದರು.ಕೆ.ಪಿ.ಸಿ.ಸಿ ರಾಜ್ಯ ಉಪಾಧ್ಯಕ್ಷ ಡಿ.ಗೋಪಾಲ ಮಾತನಾಡಿ, ಹಿಂದಿನ ಸರಕಾರದಲ್ಲಿ ಎಸ್.ಸಿ, ಎಸ್.ಟಿ ಹಾಗೂ ಹಿಂದೂಳಿದÀ ವರ್ಗದವರಿಗೆ ಮಿಸಲಾತಿ ಭರವಸೆ ಕೊಟ್ಟು ಅನ್ಯಾಯ ಮಾಡಿರುವುದಲ್ಲದೇ, ಪದೇ ಪದೇ ಸಂವಿಧಾನ ತಿದ್ದುಪಡಿ ಮಾಡಲು ಹೋರಟಿರುವ ಬಿ.ಜೆ.ಪಿ ಪಕ್ಷ ಮುಂದೊAದು ದಿನ ಮತದಾನದ ಹಕ್ಕನ್ನು ಕಸಿದುಕೊಳ್ಳುವುದರಲ್ಲಿ ಸಂಶಯವಿಲ್ಲ, ಆದ್ದರಿಂದ ಬಿ.ಜೆ.ಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ತರಬೇಕಿದೆ ಎಂದರು.ಈ ವೇಳೆ ಡಿ.ಸಿ.ಸಿ…

Read More

ಸಿಂದಗಿ: ತಾಲೂಕಿನ ಸಾಸಾಬಾಳ ಮತ್ತು ಡಂಬಳ ತಾಂಡಾಗಳಲ್ಲಿ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ ಪರವಾಗಿ ಸುನೀತಾ ದೇವಾನಂದ ಚವ್ಹಾಣ ಮತಯಾಚನೆ ಮಾಡಿದರು.ಈ ವೇಳೆ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ, ಶೈಲಜಾ ಸ್ಥಾವರಮಠ, ಎ.ಡಿ.ಕೋರವಾರ, ನಾಗೇಶ ಪೂಜಾರಿ, ಜೆಡಿಎಸ್ ವಕ್ತಾರ ಇಮಾಮ್ ನದಾಫ್, ಮಹಾಂತೇಶ ಪರಗೊಂಡ, ಸೇರಿದಂತೆ ಕಾರ್ಯಕರ್ತರು ಇದ್ದರು.

Read More

ಸಿಂದಗಿ: ನಗರದ ಜೆಡಿಎಸ್ ಪಕ್ಷದ ತಾಲೂಕು ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡ ಬಸವ ಜಯಂತಿಯ ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಂತೋಷ ಹರನಾಳ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಬಳಿಕ ಮಾತನಾಡಿದ ಅವರು, ಸಮಾನತೆಯ ಹರಿಕಾರ ಬಸವಣ್ಣ ನಮಗೆಲ್ಲ ಇಂದು ಮಾದರಿಯಾಗಿದ್ದಾರೆ. ೧೨ನೇ ಶತಮಾನದಲ್ಲಿ ಅನಿಷ್ಟ ಪದ್ದತಿಯ ವಿರುದ್ಧ ಹೋರಾಟ ಮಾಡಿ ಸಮಾಜಕ್ಕೆ ಒಂದು ಸಮಾನತೆಯನ್ನು ಸಾರಿದ್ದು ಬಸವಣ್ಣ, ಅವರ ಒಂದು ಕ್ರಾಂತಿ ಇಂದಿನ ಪ್ರಜಾಪ್ರಭುತ್ವಕ್ಕೆ ನಾಂದಿ. ಅವರು ಇಂದು ಎಂದೆAದಿಗೂ ಶಾಶ್ವತವಾಗಿ ನಮ್ಮೊಂದಿಗಿದ್ದಾರೆ ಎಂದರು.ಈ ವೇಳೆ ರಕ್ಷೀತ ಪಾಟೀಲ, ಹಿಂದುಳಿದ ವರ್ಗದ ಅಧ್ಯಕ್ಷ ಸಿದ್ದು ತಮದೊಡ್ಡಿ, ಇಮಾಮ್ ನಧಾಪ್, ಮಹಾಂತೇಶ ಪರಗೊಂಡ, ಶೈಲಜಾ ಸ್ಥಾವರಮಠ, ಬಿ.ಎನ್.ಪಾಟೀಲ, ಮಲ್ಲನಗೌಡ ಪಾಟೀಲ, ಭೀಮನಗೌಡ ಬಿರಾದಾರ ಸೇರಿದಂತೆ ಹಲವರು ಇದ್ದರು.

Read More

ಸಿಂದಗಿ: ಬಸವೇಶ್ವರರು ಎಲ್ಲಾ ಸಮಾಜದವರನ್ನೂ ಅನುಭವ ಮಂಟಪದ ಪ್ರಜಾಪ್ರಭುತ್ವದ ವೇದಿಕೆಗೆ ತಂದು ಅಭಿವ್ಯಕ್ತಿ ಸ್ವಾತಂತ್ರ‍್ಯದ ಚರ್ಚಾ ವೇದಿಕೆಯಾಗಿ ಬೆಳೆಸಿದರು ಎಂದು ತಹಶೀಲ್ದಾರ್ ನಿಂಗಪ್ಪ ಬಿರಾದಾರ ಹೇಳಿದರು.ನಗರದ ತಾಲೂಕು ಕಚೇರಿಯಲ್ಲಿ ಭಾನುವಾರದಂದು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ತಾಲೂಕು ದಂಡಾಧಿಕಾರಿ ನಿಂಗಪ್ಪ ಬಿರಾದಾರ ಪುಷ್ಪನಮನ ಸಲ್ಲಿಸಿ, ಮಾತನಾಡಿದರು.ಈ ವೇಳೆ ಚುನಾವಣಾಧಿಕಾರಿ ಸಿದ್ರಾಮ ಮಾರಿಹಾಳ, ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ, ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ, ಗುರು ತಾರಾಪೂರ, ಸಿದ್ದಬಸಪ್ಪ ಕುಂಬಾರ, ಜಗದೀಶ ಕಲಬುರ್ಗಿ, ಡಾ.ಅರವಿಂದ ಮನಗೂಳಿ, ಮಂಜುನಾಥ್ ಭೂಸನೂರ, ಗಂಗಾಧರ ಸೋಮನಾಯಕ್, ರಾಜಕುಮಾರ ನರಗೋದಿ, ಆರ್.ಆರ್.ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Read More

ಕಲಕೇರಿ: ಕಳೆದ ೧೦ ವರ್ಷಗಳಿಂದ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಹಗಲು ರಾತ್ರಿ ಎನ್ನದೇ ಪ್ರತಿಯೊಂದು ಮನೆ-ಮನಗಳನ್ನು ಮುಟ್ಟಿರುವ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ ಅವರಿಗೆ ಮತ ಚಲಾಯಿಸಿ ಅವರನ್ನು ವಿಧಾನಸಭೆಗೆ ಆರಿಸಿ ಕಳಿಸಲು ಜನತೆ ತುದಿಗಾಲಲ್ಲಿ ನಿಂತಿರುವುದನ್ನು ನೋಡಿದರೆ ತುಂಬಾ ಸಂತೋಷ ಆಗುತ್ತಿದೆ ಎಂದು ರಾಜುಗೌಡ ಪಾಟೀಲ ಅವರ ಧರ್ಮಪತ್ನಿಯ ಜಯಶ್ರೀ ಪಾಟೀಲ ಹೇಳಿದರು.ಕಲಕೇರಿ ಗ್ರಾಮದಲ್ಲಿ ಪತಿಯ ಪರವಾಗಿ ಪ್ರಚಾರ ಮಾಡಲು ಆಗಮಿಸಿರುವ ವೇಳೆ ಮಾತನಾಡಿದ ಅವರು, ಪ್ರತಿಯೊಂದು ಗ್ರಾಮದಲ್ಲಿ ನಮ್ಮ ಗ್ರಾಮಕ್ಕೆ ಯಾವಾಗ ಬರ್ತಿರಾ, ನಿಮ್ಮ ಜೊತೆಗೆ ಗ್ರಾಮದ ಪ್ರತಿ ಮನೆಮನೆಗೆ ನಾವು ತಿರುಗಾಡುತ್ತೇವೆ. ನಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಚುನಾವಣೆಯವರಿಗೂ ಸದಾಕಾಲವೂ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಉತ್ಸಾಹದಿಂದ ಮಾತನಾಡುತ್ತಿದ್ದಾರೆ. ಇಂದು ಕಲಕೇರಿ ಗ್ರಾಮದಲ್ಲಿ ಪ್ರಚಾರಕ್ಕೆ ಹೋದಾಗ ಯಾವ ಮಹಿಳೆಯರು ಕೂಡ ಮನೆಯಲ್ಲಿ ಕೂಡದೇ ರಾಜುಗೌಡರೆಂಬ ಶಾಂತಿಧೂತ ದೇವರಹಿಪ್ಪರಗಿ ಕ್ಷೇತ್ರದ ಶಾಸಕರಾಗಲೆಂದು ಹಾರೈಸುತ್ತಿದ್ದಾರೆ ಎಂದರು.ಈ ವೇಳೆ ಜೆಡಿಎಸ್ ಪಕ್ಷದ ಚಿನ್ಹೆಯಾದ ಭತ್ತದ ಹೊರೆಯನ್ನು ತಲೆಯ ಮೇಲೆ ಹೊತ್ತು ಪ್ರಚಾರಕ್ಕೆ…

Read More

ದೇವರಹಿಪ್ಪರಗಿ: ಶಾಸಕ ಸೋಮನಗೌಡ ಪಾಟೀಲ ಅವರು ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ಮುಂದಿಟ್ಟುಕೊAಡು ಈ ಬಾರಿಯ ಚುನಾವಣೆ ಎದುರಿಸುತ್ತೇವೆ ಎಂದು ಬಿಜೆಪಿ ಧುರೀಣ ಸುರೇಶಗೌಡ ಪಾಟೀಲ ಸಾಸನೂರ ಹೇಳಿದರು.ಪಟ್ಟಣದಲ್ಲಿ ಭಾನುವಾರ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಲಾಗಿದೆ. ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಸಿ.ಸಿ ರಸ್ತೆಗಳು, ರೈತರ ಅನುಕೂಲಕ್ಕಾಗಿ ಕಾಲುವೆಗಳ ಮೂಲಕ ಕೆರೆಗಳ ಭರ್ತಿ ಸೇರಿದಂತೆ ಹತ್ತು ಹಲವು ಕಾರ್ಯಗಳನ್ನು ಮಾಡಲಾಗಿದೆ. ಮುಖ್ಯವಾಗಿ ಬಿಜೆಪಿ ಕಾರ್ಯಕರ್ತರು ತಲೆತಗ್ಗಿಸುವ ಯಾವುದೇ ಕಾರ್ಯ ಮಾಡದೇ ತಲೆ ಎತ್ತಿ ಮತ ಕೇಳುವಂತೆ ನಡೆದುಕೊಂಡಿದ್ದೇವೆ. ಈ ಚುನಾವಣೆಯಲ್ಲಿ ೨೦ ಸಾವಿರಕ್ಕೂ ಅಧಿಕ ಮತಗಳಿಂದ ಎರಡನೆಯ ಬಾರಿಗೆ ಗೆಲ್ಲುವ ವಿಶ್ವಾಸ ಹೊಂದಿದ್ದೇವೆ ಎಂದರು.ಉತ್ತರಪ್ರದೇಶದ ಮಾಜಿ ಶಾಸಕ ಆನಂದ ಸ್ವರೂಪ ಶುಕ್ಲಾ, ಬಿಜೆಪಿ ಮುಖಂಡರಾದ ಸುರೇಶಗೌಡ ಪಾಟೀಲ(ಜಿಡ್ಡಿಮನಿ), ಶಂಕರಗೌಡ ಕೋಟಿಖಾನಿ(ಹರನಾಳ), ದಲಿತ ಸುಧಾರಣಾ ಸಮಿತಿ ಅಧ್ಯಕ್ಷ ಕಾಶೀನಾಥ ತಳಕೇರಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ ಮಾತನಾಡಿದರು.ಮಂಡಲ…

Read More

ಯಡ್ರಾಮಿ: ವಿಶ್ವ ಜಾಗತಿಕ ಇತಿಹಾಸದಲ್ಲಿ ಧರ್ಮ, ಸಮಾಜ, ಸಾಹಿತ್ಯ ಸಂವರ್ಧನೆಗಾಗಿ ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದವನು ಬಸವಣ್ಣ ಎಂದು ಯಡ್ರಾಮಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ವಿರಕ್ತಮಠದಲ್ಲಿ ರವಿವಾರದಂದು ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವದ ಪ್ರಯುಕ್ತ ನಡೆದ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಸವಣ್ಣನವರು ಕಾಯಕವೇ ದ್ಯೇಯವಾಗಿಸಿಕೊಂಡÀರು, ಮಹಿಳೆಯರಿಗೆ ಮನ್ನಣೆಯಾದÀರು, ದಾಸೋಹಕ್ಕೆ ಆಡಂಬೋಲಾದರು. ಜನರಾಡುವ ಭಾಷೆಯಲ್ಲಿಯೇ ವಚನಗಳನ್ನು ರಚಿಸಿ, ಜಗತ್ತಿನಲ್ಲಿಯೇ ಪ್ರಪ್ರಥಮವಾಗಿ ಅನುಭವ ಮಂಟಪ ಎನ್ನುವ ಪಾರ್ಲಿಮೆಂಟ್ ಸ್ಥಾಪಿಸಿದರು. ವಚನಗಳ ಮೂಲಕ ಸಮಾಜವನ್ನು ತಿದ್ದಿ ಚಿರಸ್ಥಾಯಿಯಾದರು. ಇದರ ಪರಿಣಾಮವಾಗಿಯೇ ಸಪ್ತ ಸಾಗರದಾಚೆ ಮೊದಲ ಕನ್ನಡಿಗನಾಗಿ ಇಂಗ್ಲೆAಡಿನ ಥೇಮ್ಸ್ ನದಿಯ ದಡದಲ್ಲಿ ನಿಂತಿದ್ದಾರೆ. ಪ್ರಸಕ್ತ ದಿನಗಳಲ್ಲಿ ವಚನಗಳನ್ನು ನಾವು ಅನುಕರಣೆ ಮಾಡಿಕೊಂಡು ನಡದದ್ದೇ ಆದಲ್ಲಿ ಜೀವನ ಸಾರ್ಥಕವಾಗುವದು ಎಂದರು.ನAತರ ಸಿಂಗಾರಗೊAಡ ಎತ್ತಿನ ಬಂಡಿಯಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ಯಡ್ರಾಮಿ ವಿರಕ್ತಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಮೆರವಣಿಗೆಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸುಮಾರು ೨೧ ಜೊತೆ ಎತ್ತುಗಳ ಮೆರವಣಿಗೆ ನೋಡುಗರ ಗಮನ…

Read More

ಮುದ್ದೇಬಿಹಾಳ: ಮತಕ್ಷೇತ್ರದ ನೂತನ ಯುವ ಕಾಂಗ್ರೇಸ್ ಕಾರ್ಯದರ್ಶಿಯಾಗಿ ಬಸವರಾಜ ಕೊಳೂರ ಅವರನ್ನು ನೇಮಿಸಿ ಪ್ರದೇಶ ಯುವ ಕಾಂಗ್ರೇಸ್ ನ ರಾಜ್ಯಾಧ್ಯಕ್ಷ ಮಹಮ್ಮದ ಹ್ಯಾರೀಸ್ ನಲಪಾಡ, ವಿಜಯಪುರ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಸಿದ್ದಪ್ಪ ಛಾಯಾಗೋಳ, ಯುವ ಕಾಂಗ್ರೇಸ್ ತಾಲೂಕು ಅಧ್ಯಕ್ಷ ಮಹಮ್ಮದ ರಫೀಕ ಶಿರೋಳ ಆದೇಶಿಸಿದ್ದಾರೆ.

Read More

ಮುದ್ದೇಬಿಹಾಳ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ನಡೆಸುವ ಮೂಲಕ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.ಬಜಾರ್ ನ ದ್ಯಾಮವ್ವನ ಕಟ್ಟೆಗೆ ಮೆರವಣಿಗೆ ಆಗಮಿಸಿದಾಗ ಮುಸ್ಲಿಂ ಬಾಂಧವರು ಸುರಕುರಮಾ ವಿತರಿಸಿ ಸೌಹಾರ್ದತೆಗೆ ಸಾಕ್ಷಿಯಾದರು. ಬಸವೇಶ್ವರ ವೃತ್ತದಲ್ಲಿ ನೂರಾರು ಬಸವಾಭಿಮಾನಿಗಳ ಸಮ್ಮುಖದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಪು.ಮಾಜಿ ಸದಸ್ಯ ಕಾಮರಾಜ ಬಿರಾದಾರ, ಪ್ರಮುಖರಾದ ಜಗದೀಶ ಲಕ್ಷಟ್ಟಿ, ರಾಜು ರಾಯಗೊಂಡ, ಸಂಗಣ್ಣ ಜಿಟಿಸಿ, ರಾಜಶೇಖರ ಮ್ಯಾಗೇರಿ, ಸದಾಶಿವ ಮಠ, ಗೌರಿಶಂಕರ ಪುರಾಣಿಕಮಠ, ಭೋವಿ ಸಮಾಜದ ಮಾಜಿ ಅಧ್ಯಕ್ಷ ಪರಶುರಾಮ ನಾಲತವಾಡ, ಸಿ.ಪಿ.ಸಜ್ಜನ, ಶಂಕರ ಡಮನಾಳ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಬಾಂಧವರು, ಬಸವಾಭಿಮಾನಿಗಳು, ಅಕ್ಕನ ಬಳಗ, ಸಾಧನಾ ಮಹಿಳಾ ಒಕ್ಕೂಟದ ಸದಸ್ಯರು ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು.

Read More