Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ಸೈನಿಕನ ಹೆಂಡತಿ ನಾನು ಡೀಲ್ ಆಗುವ ಮಾತೇ ಇಲ್ಲ ಎಂದು ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ ಹೇಳಿದರು.ಸಿಂದಗಿ ತಾಲೂಕಿನ ಖೈನೂರ ಗ್ರಾಮದಲ್ಲಿ ಪ್ರಚಾರ ವೇಳೆ ಮಾತನಾಡಿದ ಅವರು ಕೈಲಾಗದ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ದೇಶಕ್ಕಾಗಿ ದುಡಿದ ಸೈನಿಕನ ಪತ್ನಿ ನಾನು ನನಗೆ ದುಡ್ಡಿನ ಅವಶ್ಯಕತೆಯಿಲ್ಲ ನನ್ನ ಪತಿ ಶಿವಾನಂದ ಪಾಟೀಲ ಅಧಿಕಾರವಿಲ್ಲದೇ ಹಲವಾರು ಜನಪರ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿದ್ದಾರೆ. ಡೀಲ್ ಆಗೋ ಇರಾದೆ ನನಗಿಲ್ಲ ಹಾಗೇನಾದರೂ ಇದ್ದರೆ ಇಂತಹ ಬಿರು ಬಿಸಿಲಿನಲ್ಲಿ ಪ್ರಚಾರ ಮಾಡುತ್ತಿರಲಿಲ್ಲ ಸಿಂದಗಿ ತಾಲೂಕಿನ ಜನತೆ ಊಹಾಪೋಹಗಳಿಗೆ ಕಿವಿ ಕೊಡಬೇಡಿ ಕ್ಷೇತ್ರದ ಜನತೆ ನನ್ನ ಮೇಲೆ ಭರವಸೆ ಇಟ್ಟಿದ್ದಾರೆ. ನಾನು ಇದ್ದರೂ ಜೆಡಿಎಸ್ ಪಕ್ಷದಲ್ಲೇ ಸತ್ತರೂ ಜೆಡಿಎಸ್ ಪಕ್ಷದಲ್ಲೇ ಎಂದು ಹೇಳಿದರು.ಈ ವೇಳೆ ಮಲ್ಲು ಹಡಪದ, ಶೈಲಜಾ ಸ್ಥಾವರಮಠ, ಎ.ಡಿ.ಕೋರವಾರ, ನಾಗೇಶ ಪೂಜಾರಿ, ರಕ್ಷೀತ ಪಾಟೀಲ, ಮಾಂತು ಪರಗೊಂಡ, ಅಪ್ಪುಗೌಡ ಪಾಟೀಲ, ರವಿರಾಜ ರೆಡ್ಡಿ ಯಾಳವಾರ, ಸಿದ್ದು ತಮದೊಡ್ಡಿ ಇದ್ದರು. ಸಾಮಾಜಿಕ ಜಾಲತಾಣ ಹಾಗೂ ಸಿಂದಗಿ ಸಾರ್ವಜನಿಕ…
ನೀರಿಲ್ಲದೇ ಒಣಗುತ್ತಿರುವ ಕಟಾವಿಗೆ ಬಂದ ಬೆಳೆ ವಿಜಯಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಪದಾಧಿಕಾರಿಗಳು ರೈತರೊಡಗೂಡಿ ಕೋಲಾರ ತಾಲೂಕಿನಾಧ್ಯಂತ ಕಾಲುವೆಗೆ ನೀರು ಹರಿಸಬೇಕೇಂದು ಆಗ್ರಹಿಸಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿ ಶೀಘ್ರದಲ್ಲಿ ನೀರು ಬಿಡುವಂತೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹಾಗೂ ಕೋಲಾರ ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಕೋಲಾರ ಹಾಗೂ ಬಬಲೇಶ್ವರ ತಾಲೂಕಿನಾಧ್ಯಂತ ಕೆಲವೇ ದಿನಗಳಲ್ಲಿ ಕಟಾವಿಗೆ ಬಂದು ನಿಂತಿರುವ ಸೆಂಗಾ, ಉಳ್ಳಾಗಡ್ಡಿ, ಮೆಕ್ಕೆಜೋಳದ ಸೇರಿದಂತೆ ಇನ್ನಿತರ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ಈ ಭಾಗದ ರೈತರು ಸಾಲ ಸೋಲ ಮಾಡಿ ಬೆಳೆದ ಬೆಳೆ ನೀರಿಲ್ಲದೇ ನಷ್ಟ ಹೊಂದುತ್ತಿರುವುದು ದುಃಖದ ವಿಷಯ. ಆದ್ದರಿಂದ ತಾವುಗಳು ಈ ಕೂಡಲೇ ಇನ್ನು ಒಂದು ವಾರಗಳ ಕಾಲ ನೀರನ್ನು ಕಾಲುವೆಗೆ ಹರಿಸಬೇಕು. ಇದರಿಂದ ಸಾಕಷ್ಟು ರೈತರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದಲ್ಲಿ ರೈತರು ಆತ್ಮಹತೈ ಮಾಡಿಕೊಳ್ಳುವ ಸಂದರ್ಭ ಎದುರಾಗಬಹುದು ಎಂದರು.ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳೊಡನೆ ಮಾತನಾಡಿ ಸಾಧ್ಯವಿದ್ದರೆ…
ಆಮಿಷಗಳಿಗೆ ಬಲಿಯಾಗದಿರಿ | ಮೊಸಳೆ ಕಣ್ಣೀರನ್ನು ನಂಬಬೇಡಿ ವಿಜಯಪುರ: ಕಣ್ಣೀರು ಹಾಕುತ್ತ ಕಾಲಿಗೆ ಬಿದ್ದು, ಕಾಲುಂಗುರ ಕಿತ್ತು ಕೊಳ್ಳುವವರನ್ನು ನಂಬಬಾರದು ಅಂಥವರು ಆಯ್ಕೆಯಾದರೆ ವಿರೋಧಿಗಳ ಜೊತೆ ಮತ ಹಾಕಿದವರೂ ಕೂಡ ಪೋಲೀಸ್ ಠಾಣೆಗಳಿಗೆ ಅಲೆದಾಡಬೇಕಾಗುತ್ತದೆ. ಎಂದು ಕಾಂಗ್ರೆಸ್ ಮುಖಂಡ ಚನ್ನಪ್ಪ ಕೊಪ್ಪದ ಎಚ್ಚರಿಕೆ ನೀಡಿದ್ದಾರೆ. ಬಬಲೇಶ್ವರ ತಾಲೂಕಿನ ಅಡವಿ ಸಂಗಾಪುರದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,ಶ್ರೀಮಂತ ಜಮೀನುದಾರರು ತಮ್ಮ ಹೊಲಗಳಿಗೆ ನೀರಿಲ್ಲದ ಕಾರಣ ಸಂಕಷ್ಟ ಎದುರಿಸುತ್ತಿದ್ದರು. ಕೂಲಿಗೆ ಹೋಗಲು ಪ್ರತಿಷ್ಠೆ ಅಡ್ಡಿಯಾಗಿತ್ತು. ಆದರೆ, ಈಗ ಎಂ. ಬಿ. ಪಾಟೀಲರು ಮಾಡಿರುವ ನೀರಾವರಿ ಯೋಜನೆಗಳಿಂದಾಗಿ ಉತ್ತಮ ಬೆಳೆ ಬೆಳೆಯುವಂತಾಗಿದೆ. ಇದನ್ನು ನೆನಪಿಸಿಕೊಂಡು ಎಲ್ಲರೂ ಎಂ.ಬಿ.ಪಾಟೀಲರಿಗೆ ಸಂಪೂರ್ಣ ಬೆಂಬಲ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮಾತನಾಡಿ,ಸುಳ್ಳು, ಮೋಸ, ಆಸೆ, ಆಮಿಷ ತೋರಿಸುವವರಿಗೆ ಮತದಾರರು ಬಲಿಯಾಗದೇ ಅಭಿವೃದ್ಧಿಗೆ ಆದ್ಯತೆ ನೀಡುವವರಿಗೆ ಮತ ಹಾಕಬೇಕು ಎಂದು ಹೇಳಿದರು.ಮೂರು…
ಮುದ್ದೇಬಿಹಾಳ: ಮತಕ್ಷೇತ್ರದಲ್ಲಿ ಶಾಸಕ ನಡಹಳ್ಳಿಯವರ ದುರಾಡಳಿತಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಅವರ ದಬ್ಬಾಳಿಕೆಗೆ ಬೇಸತ್ತು ದಿನೇ ದಿನೇ ಕಾಂಗ್ರೇಸ್ ಸೇರ್ಪಡೆಗೊಳ್ಳುತ್ತಿರುವ ಸಂಖ್ಯೆ ನೋಡಿದರೆ ಈ ಬಾರಿ ಕಾಂಗ್ರೇಸ್ ಪಕ್ಷಕ್ಕೆ ಲಕ್ಷಕ್ಕೂ ಅಧಿಕ ಮತಗಳು ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅವರ ಪುತ್ರಿ ಪಲ್ಲವಿ ನಾಡಗೌಡ ಹೇಳಿದರು.ಪಟ್ಟಣದ ಗಣೇಶ ನಗರದಲ್ಲಿ ಕಾಂಗ್ರೆಸ್ ಪಕ್ಷದ ಪರ ಮತಯಾಚನೆ ನಡೆಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಬಿಜೆಪಿಯವರು ಇಲ್ಲದ ಆಮಿಷ ತೋರಿಸಿ ಮತಗಳನ್ನು ಪಡೆಯಬೇಕೆಂದು ಹರ ಸಾಹಸ ಪಡುತ್ತಿರುವ ಬಗ್ಗೆ ಮಾಹಿತಿಗಳು ಬರುತ್ತಿವೆ. ಆದರೆ ಮತದಾರರು ಮಾತ್ರ ಇವರ ಯಾವುದೇ ಆಮೀಷಕ್ಕೆ ಒಳಗಾಗುವದಿಲ್ಲ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ. ನಮ್ಮ ಬಳಿ ಬರುವವರು ಅಭಿಮಾನದ ಜನ. ದುಡ್ಡಿಗಾಗಿ ಆಸೆ ಪಡುವವರಲ್ಲ ಎಂದರು.ಯುವ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದ ರಫೀಕ ಶಿರೋಳ ಮಾತನಾಡಿ, ಸ್ವತಂತ್ರ ಬಂದಾಗಿನಿAದಲೂ ಕಾಂಗ್ರೇಸ್ ಪಕ್ಷ ಬಡವರ, ದೀನದಲಿತರ ಪರವಾಗಿಯೇ ಶ್ರಮಿಸಿದೆ. ಸಧ್ಯದ ಪರಿಸ್ಥಿತಿಯಲ್ಲಿ ಅಡುಗೆ ಎಣ್ಣೆ ಸೇರಿದಂತೆ ಗ್ಯಾಸ್ ನ ಬೆಲೆ…
ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಬಬಲೇಶ್ವರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ ಅವರ ಪತ್ನಿ ಆಶಾ ಎಂ. ಪಾಟೀಲ ಅವರು ಮಂಗಳವಾರ ತಿಕೋಟಾ ತಾಲೂಕಿನ ಹಬನೂರ ಎಲ್.ಟಿ ಯಲ್ಲಿ ಪ್ರಚಾರ ಮಾಡುವ ಸಂದರ್ಭ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ಅವರ ಬೆಂಬಲಿಗರು ಅಡ್ಡಿಪಡಿಸಿ ದಾಂಧಲೆ ಮಾಡಿರುವುದು ಹೇಡಿತನದ ಕೃತ್ಯವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಖಂಡಿಸಿದರು.ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಆಶಾ ಎಂ.ಪಾಟೀಲ ಅವರು ಸೇರಿದಂತೆ ಆ ಸಂದರ್ಭ ಸ್ಥಳದಲ್ಲಿ ಮೂವರು ಮಹಿಳೆಯರಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಧ್ವಜವಿರುವ ಬೈಕ್ಗಳಲ್ಲಿ ಬಂದ ಕೆಲವು ಪುಂಡರು ಅಸಭ್ಯವಾಗಿ ವರ್ತಿಸಿ ದಬ್ಬಾಳಿಕೆ ನಡೆಸಿದ್ದಾರೆ. ಬೈಕಿನ ಹಾರ್ನ್ ನಿರಂತರ ಹಾಕುತ್ತ,ವಿಜುಗೌಡರ ಪರವಾಗಿ ಘೋಷಣೆ ಕೂಗುತ್ತ ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆ. ರಾಜ್ಯದ ಮಾಜಿ ಗೃಹಮಂತ್ರಿಯವರ ಪತ್ನಿಗೇ ಈ ಗತಿಯಾದರೆ ಇನ್ನು ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.ಇದು ಖಂಡಿತವಾಗಿ ವಿಜುಗೌಡ ಪಾಟೀಲರ ಬೆಂಬಲಿಗರದೇ ಕೃತ್ಯ ಎಂದು ಸಮರ್ಥಿಸಿಕೊಂಡ…
ವಿಜಯಪುರ: ಈ ಚುನಾವಣೆಯಲ್ಲಿ ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಹಾಗೂ ಸಾಮಾಜಿಕ ನ್ಯಾಯ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕಿದೆ ಎಂದು ಕೆಪಿಸಿಸಿ ಮುಖ್ಯ ವಕ್ತಾರ ಹಾಗೂ ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ ಹೇಳಿದರು.ಬುಧವಾರ ನಗರದ ಕಾಂಗ್ರೆಸ್ ಪ್ರಚಾರ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಇಡೀ ಕರ್ನಾಟಕದಲ್ಲಿಯೇ ವಿಜಯಪುರ ನಗರ ಕ್ಷೇತ್ರ ತುಂಬ ಸೆನ್ಸಿಟಿವ್ ಕ್ಷೇತ್ರವಾಗಿದೆ. ಇಲ್ಲಿ ಸಮಾಜ ವಿರೋಧಿ, ಸಂವಿಧಾನ ವಿರೋಧಿ ಕೃತ್ಯಗಳು ನಡೆಯುತ್ತಿವೆ. ಸಂವಿಧಾನ ಬೇರೆಯಲ್ಲ, ಬಸವಾದಿ ಶರಣರು ಬೇರೆಯಲ್ಲ. ಇಲ್ಲಿಯ ಶಾಸಕರು ಬಸವಾದಿ ಶರಣರ, ಸಂವಿಧಾನದ ಆಶಯಗಳಿಗೆ ವಿರುದ್ಧ ಮಾತುಗಳನ್ನಾಡುತ್ತಾರೆ. ಧರ್ಮ-ಜಾತಿ-ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಕಾರಣವಾಗಿಯೇ ಅಲೆಮಾರಿ, ತಳಸಮುದಾಯಗಳಿಗೆ ಅರಿವು ಮೂಡಿಸಲು ಹಾಗೂ ಕಾಂಗ್ರೆಸ್ ಬಲಪಡಿಸಲು ತಾವು ಬಂದಿರುವುದಾಗಿ ತಿಳಿಸಿದರು.ಒಳಮೀಸಲಾತಿ ಕುರಿತ ಪ್ರಶ್ನೆಗೆ ಉತ್ತರಿಸಿದ ದ್ವಾರಕಾನಾಥ ಅವರು, ಹಿಂದುಳಿದ ವರ್ಗದ ಆಯೋಗದ ಶಿಫಾರಸು ಪಡೆಯದೇ ಬಿಜೆಪಿ ಒಳಮೀಸಲಾತಿ ಜಾರಿ ಮಾಡಿರುವುದು ಸಂವಿಧಾನ ಪೀಠಕ್ಕೆ…
ಲಿಂ.ಮಲ್ಲಪ್ಪ ಸಿಂಹಾಸನ ಪುಣ್ಮಸ್ಮರಣೆ | ಕೂಡಲಸಂಗಮ ಅಭಿವೃದ್ಧಿ ಮಂಡಳಿ ಕಾರ್ಯಕ್ರಮ ಬಸವನಬಾಗೇವಾಡಿ: ಬಸವೇಶ್ವರ ದೇವಾಲಯ ಸಂಸ್ಥೆಯ ಮೂಲಸಂಸ್ಥಾಪಕರಾಗಿ ಬಸವೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿರುವ ಲಿಂ.ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಸೇವೆ ಸ್ಮರಣೀಯವಾಗಿದೆ ಎಂದು ಜಯಶ್ರೀ ಮೊಕಾಶಿ ಹೇಳಿದರು.ಪಟ್ಟಣದ ಅಕ್ಕನಾಗಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯು ಹಮ್ಮಿಕೊಂಡಿದ್ದ ಬಸವೇಶ್ವರ ದೇವಾಲಯ ಸಂಸ್ಥೆಯ ಮೂಲ ಸಂಸ್ಥಾಪಕ ಲಿಂ.ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಆಗಿನ ಕಾಲದಲ್ಲಿ ಮಾಮಲೇದಾರರಾಗಿ ಜನಪರ ಕಾರ್ಯಗಳನ್ನು ಲಿ.ಮಲ್ಲಪ್ಪ ಸಿಂಹಾಸನ ಅವರು ಮಾಡಿದರು. ಇವರ ಸೇವೆಯನ್ನು ಗುರುತಿಸಿ ಆಗಿನ ಬ್ರಿಟಿಷರ ಸರ್ಕಾರ ರಾವ್ ಸಾಹೇಬ ಎಂಬ ಸನ್ನದು ನೀಡಿ ಗೌರವಿಸಿತ್ತು. ತಮ್ಮ ಸರ್ಕಾರಿ ನೌಕರಿಯಿಂದ ನಿವೃತ್ತರಾದ ನಂತರ ಬಸವೇಶ್ವರ ದೇವಾಲಯ ಸಂಸ್ಥೆಯನ್ನು ಸ್ಥಾಪಿಸಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾದರು. ಜನರ ವಂತಿಗೆ ಹಣ ಸಂಗ್ರಹಿಸಿ ದೇವಾಲಯದ ಸುತ್ತಲಿನ ಪರಿಸರ, ದೇವಾಲಯದ ಜೀರ್ಣೋದ್ಧಾರ ಕಾರ್ಯಕೈಗೊಳ್ಳುವ ಮೂಲಕ ಮನದ ಸೇವೆ ಸಲ್ಲಿಸಿದರು. ಇವರ…
ದೇವರಹಿಪ್ಪರಗಿಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆ | ಕಾಂಗ್ರೆಸ್ ನಿಂದ ಲಿಂಗಾಯತರಿಗೆ ಅವಮಾನ ದೇವರಹಿಪ್ಪರಗಿ: ಕರ್ನಾಟಕದ ಸಮಗ್ರ ಅಭಿವೃದ್ಧಿ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಹಳೆಯ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಜರುಗಿದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.ವಿಜಯಪುರ ಜಿಲ್ಲೆಯ ಜನತೆಯೇ ನಿಮಗೆ ಪೂರ್ಣ ಬಹುಮತದ ಸರ್ಕಾರ ಬೇಕೆ? ಬೇಡವೇ? ಎಂಬ ಪ್ರಶ್ನೇಯಿಂದ ಮಾತು ಆರಂಭಿಸಿದ ಸಚಿವರು ಪಟ್ಟಣದ ಆರಾಧ್ಯ ದೇವರುಗಳಾದ ರಾವುತರಾಯ, ಮಲ್ಲಯ್ಯ, ಕಲ್ಮೇಶ್ವರನನ್ನು ನೆನೆದು ಪ್ರಣಾಮ ಸಲ್ಲಿಸಿದರು. ಜೊತೆಗೆ ಬಸವಣ್ಣ, ಸಿದ್ಧೇಶ್ವರಸ್ವಾಮೀಜಿ ನೆನೆದು ಮುಂದಿನ ಚುನಾವಣೆ ಕರ್ನಾಟಕದ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖವಾಗಿದೆ. ಕರ್ನಾಟಕದಲ್ಲಿ ಮೀಸಲಾತಿ ವಿಷಯ ಪ್ರಮುಖವಾಗಿ ಚರ್ಚಿತ ವಿಷಯವಾಗಿದೆ.ನಮ್ಮ ಬಿಜೆಪಿ ಸರ್ಕಾರ ಮುಸ್ಲೀಂ ಸಮುದಾಯದ ಶೇ೪ ರ ಮೀಸಲಾತಿ ರದ್ದು ಮಾಡಿ ಅದನ್ನು ಲಿಂಗಾಯತ, ಒಕ್ಕಲಿಗ, ತಳವಾರ ಪರಿವಾರ ಸಮುದಾಯಗಳ ಅಭಿವೃದ್ಧಿಗಾಗಿ ಬಳಕೆ ಮಾಡಿದೆ, ಇದು ಉತ್ತಮ ಕಾರ್ಯವಲ್ಲವೇ ಎಂದು ಪ್ರಶ್ನಿಸಿ,…
– ಮುರಳಿ ಆರ್, ಬೆಂಗಳೂರು ಕರ್ನಾಟಕ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಮಿತ್ ಶಾ ಮಾರ್ಗದರ್ಶನದಲ್ಲಿ ಭಾರತೀಯ ಜನತಾ ಪಕ್ಷ ಬಿರುಸಿನ ಪ್ರಚಾರ ಆರಂಭಿಸಿದೆ. ರಾಜ್ಯದ ಎಲ್ಲಾ 224 ಸ್ಥಾನಗಳಿಗೆ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ. ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಖಚಿತಪಡಿಸಿಕೊಳ್ಳಲು ಮತ್ತು ಬಿಜೆಪಿ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಪಕ್ಷದ ಮುಖ್ಯ ಕಾರ್ಯತಂತ್ರ ನಿರೂಪಕ ಮತ್ತು ಭಾಜಪದ ಕಠಿಣ ಪರಿಶ್ರಮಿ ನಾಯಕ ಅಮಿತ್ ಶಾ ಕರ್ನಾಟಕದಲ್ಲಿಯೇ ಬೀಡು ಬಿಟ್ಟಿದ್ದಾರೆ. ಚುನಾವಣಾ ಕಾರ್ಯತಂತ್ರಗಳಲ್ಲಿ ಹೆಸರುವಾಸಿಯಾಗಿರುವ ಅಮಿತ್ ಶಾ, ದಿನವಿಡೀ ರೋಡ್ ಶೋಗಳು, ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಪಕ್ಷವನ್ನು ಒಗ್ಗೂಡಿಸಿ ಚುನಾವಣೆಯಲ್ಲಿ ಭಾಜಪದ ಬಾವುಟನ್ನು ಹಾರಿಸಲು ಕಾರ್ಯತಂತ್ರಗಳನ್ನು ರೂಪಿಸಲು ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ತಡರಾತ್ರಿಯವರೆಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಈ ವರ್ಷದಲ್ಲಿ ಈಗಾಗಲೇ ಸುಮಾರು ಹದಿನಾಲ್ಕು ದಿನಗಳಿಗಿಂತಲೂ ಹೆಚ್ಚು ಸಮಯವನ್ನು ಕರ್ನಾಟಕದಲ್ಲಿ ಕಳೆದಿರುವ ಅಮಿತ್ ಶಾ, ಕರುನಾಡಿನಲ್ಲಿ ಮತ್ತೊಮ್ಮೆ ಕಮಲನವನ್ನು ಅರಳಿಸಲೇ ಬೇಕು ಎಂದು…
ವಿಜಯಪುರ :ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಐಹೋಳೆ ಪರವಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಅವರು ಚಡಚಣ ಮಂಡಳ ವ್ಯಾಪ್ತಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಿದರು.ಇಂಚಗೇರಿ, ಕನಕನಾಳ, ಲಮಾನ ಹಟ್ಟಿ, ಕಾತ್ರಾಳ, ಜಿಗಜೀವಣಗಿ, ಸಾತಲಗಾಂವ, ಧುಮಕನಾಳ, ಶಿಗಣಾಪೂರ, ನಂದರಗಿ, ದೇವರನಿಂಬರಗಿ, ಜೀರಂಕಲಗಿ, ಬರಡೋಲ, ಗೋಡಿಹಾಳ, ಕಂಚನಾಳ ಮೊದಲಾದ ಗ್ರಾಮದಲ್ಲಿ ಮತಯಾಚಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ ಕಾರಜೋಳ, ಬಿಜೆಪಿ ಸಾಮಾನ್ಯ ಕಾರ್ಯಕರ್ತನಿಗೆ ಮಣೆ ಹಾಕಿದೆ, ಜನತೆ ಬಿಜೆಪಿ ಅಭ್ಯರ್ಥಿಗೆ ಆಶೀರ್ವಾದ ರೂಪದ ಮತ ಕರುಣಿಸಬೇಕು, ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನತೆ ಅಪಾರವಾಗಿ ಮೆಚ್ಚಿಕೊಂಡಿದ್ದಾರೆ, ಮುಂದೆಯೂ ಸಹ ಈ ಜನಪರ ವಿಚಾರಧಾರೆ, ಪ್ರಗತಿ ಪರಂಪರೆಯ ಮುಂದುವರೆಯಲು ಜನತೆ ಬಿಜೆಪಿಯನ್ನು ಬೆಂಬಲಿಸಬೇಕು, ಜನಸೇವೆ, ದೇಶಾಭಿಮಾನವೇ ಬಿಜೆಪಿ ಉಸಿರು ಎಂದರು.ಅನೇಕ ಮಹತ್ವದ ಯೋಜನೆ ಜಾರಿ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನ ಪ್ರಗತಿಗೆ ಶ್ರಮಿಸುತ್ತಿವೆ, ಹೀಗಾಗಿ ಜನತೆ ಬಿಜೆಪಿ ಅಭ್ಯರ್ಥಿಗೆ…
