Author: editor.udayarashmi@gmail.com

ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರು ಈ ಬಾರಿಯ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ದೇವರ ಹಿಪ್ಪರಗಿ ಮತಕ್ಷೇತ್ರದಿಂದ ತಮ್ಮ ಅದೃಷ್ಠ ಪರೀಕ್ಷಿಸಲು ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ.ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಘಟಾನುಘಟಿಗಳ ಸ್ಪರ್ಧೆಯಿಂದ ಕಣ ರಂಗೇರಿದೆ. ಇವರಿಗೆ ಎದುರಾಳಿಗಳಾಗಿ ಕಾಂಗ್ರೆಸ್ ಪಕ್ಷದಿಂದ ಸಿಂದಗಿಯ ಮಾಜಿ ಶಾಸಕ ಶರಣಪ್ಪ ಸುಣಗಾರ, ಜೆಡಿಎಸ್ ಪಕ್ಷದಿಂದ ಭೀಮನಗೌಡ (ರಾಜುಗೌಡ) ಪಾಟೀಲ ಕುದರಿಸಾಲವಾಡಗಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ “ಉದಯರಶ್ಮಿ” ಶಾಸಕ ಸೋಮನಗೌಡ ಪಾಟೀಲರನ್ನು ಕಂಡು ಅವರ ಮುಂದೆ ಕೆಲ ಪ್ರಶ್ನೆಗಳನ್ನು ಹರವಿದಾಗ ಅವರು ತಮ್ಮ ಅಂತರಂಗವನ್ನು ಬಹಿರಂಗಗೊಳಿಸಿದ್ದು ಹೀಗೆ.. ಉದಯರಶ್ಮಿ: ಕ್ಷೇತ್ರದಲ್ಲಿ ತಮ್ಮ ಚುನಾವಣೆ ಪ್ರಚಾರದ ವೈಖರಿ ಹೇಗಿದೆ?ಸೋಮನಗೌಡ: ವ್ಯವಸ್ಥಿತವಾಗಿ ಸಾಗಿದೆ. ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಮತದಾರರನ್ನು ಸಂಪರ್ಕಿಸುತ್ತಿರುವೆ. ದೇವರಹಿಪ್ಪರಗಿ ಮತಕ್ಷೇತ್ರ ನಾಲ್ಕು ತಾಲೂಕುಗಳಲ್ಲಿ ಹಂಚಿ ಹೋಗಿದ್ದು ೧೨೦ಕೀ.ಮಿ ಉದ್ದದ ವಿಸ್ತಾರ ಹೊಂದಿದೆ. ವಿಶಾಲ ಕ್ಷೇತ್ರವಾದರೂ ಪ್ರತಿ ಹಳ್ಳಿಗೂ ಭೇಟಿ…

Read More

ಸಿಂದಗಿ: ಪ್ರಜಾಪ್ರಭುತ್ವದ ಆಶಯದಂತೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಸ್ವೀಪ್ ಸಮಿತಿ ಅಧ್ಯಕ್ಷ, ತಾಪಂ ಇಓ ಬಾಬು ರಾಠೋಡ ಹೇಳಿದರು.ಗುರುವಾರ ನಗರದಲ್ಲಿ ತಾಲೂಕಾಡಳಿತ, ತಾಲೂಕು ಸ್ವೀಪ್ ಸಮಿತಿ, ತಾಲೂಕು ಪಂಚಾಯತ್, ಪುರಸಭೆ ಮತ್ತು ಕೃಷಿ ಇಲಾಖೆಯ ಸಹಯೋಗದೊಂದಿಗೆ ಮೇ.೧೦ ರಂದು ಜರುಗುವ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯ ನಿಮಿತ್ಯವಾಗಿ ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸಲು ಎತ್ತಿನ ಬಂಡಿಯ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾನ ಹಕ್ಕು ನಮ್ಮೆಲ್ಲರ ಹಕ್ಕು. ಆದ್ದರಿಂದ ಎಲ್ಲರೂ ತಪ್ಪದೇ ಜವಾಬ್ದಾರಿಯಿಂದ ಮತ ಚಲಾಯಿಸಿ ಮತ್ತು ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಿಸಿ ಎಂದರು.ಈ ಜಾಥಾ ಕಾರ್ಯಕ್ರಮವು ತಹಸೀಲ್ದಾರ್ ಕಚೇರಿಯಿಂದ ಆರಂಭಗೊAಡು ಬಸವೇಶ್ವರ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಡಾ.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದವರೆಗೆ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಸಾಗಿಬಂದಿತು.ಇದೇ ಸಂದರ್ಭದಲ್ಲಿ ಆಲಮೇಲ ತಹಶೀಲ್ದಾರ್ ಸುರೇಶ ಚಾವಲರ, ತಾಲೂಕು ಜಂಟಿ ನಿರ್ದೇಶಕ ಪ್ರಕಾಶ್ ಸಿಂಗೆಗೋಳ, ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಪುರಸಭೆ ಮುಖ್ಯಾಧಿಕಾರಿ…

Read More

ವಿಜಯಪುರ: ಔದ್ಯೋಗಿಕ ನಗರವನ್ನಾಗಿ ಮಾಡುವ ಯೋಜನೆಯನ್ನು ತಂದೆಯವರು ಹಾಕಿಕೊಂಡಿದ್ದು, ತಾವು ಆಶೀರ್ದಿಸುವ ಮೂಲಕ ಯೋಜನೆ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಮನವಿ ಮಾಡಿದರು. ತಂದೆ ಪರ ನಗರ ಮತಕ್ಷೇತ್ರ ವ್ಯಾಪ್ತಿಯ ವಾ.ನಂ.23 ರ ಪುಲಕೇಶಿ ನಗರ, ಕೀರ್ತಿ ನಗರ, ಅಂಬೇಡ್ಕರ್ ಕಾಲೊನಿ, ನಿಸರ್ಗ ಕಾಲೊನಿ, ತೊರವಿ ಸೇರಿದಂತೆ ವಿವಿಧೆಡೆ ಸಭೆ ಹಾಗೂ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿ ಅವರು ಮಾತನಾಡಿದರು. ಹಿಂದಿನ ಅವಧಿಯಲ್ಲಿ ಸಾಕಷ್ಟು ಅನುದಾನ ತಂದು ರಸ್ತೆ, ಚರಂಡಿ ಸೇರಿದಂತೆ ಅವಶ್ಯಕ ಮೂಲಸೌಕರ್ಯ ಕಲ್ಪಿಸಲಾಗಿದೆ. ಬೆಂಗಳೂರು, ಹುಬ್ಬಳ್ಳಿಯಂತೆ ಔದ್ಯೋಗಿಕ ನಗರವನ್ನಾಗಿ ಮಾಡುವ ಮೂಲಕ ಉದ್ಯೋಗ ಸೃಷ್ಟಿಸಿ, ನಮ್ಮ ಭಾಗದ ಯುವಕರು ಪಾಲಕರನ್ನು ಬಿಟ್ಟು ದೂರದ ಊರುಗಳಿಗೆ ಹೋಗಿ ದುಡಿಯುವ ಬದಲಾಗಿ, ನಮ್ಮಲ್ಲೇ ಕೆಲಸ ಸಿಗುವಂತೆ ಮಾಡಲಾಗುವುದು. ಅದಕ್ಕೆ ತಮ್ಮ ಆಶೀರ್ವಾದ ಅವಶ್ಯ ಎಂದು ಹೇಳಿದರು. ಅಭಿವೃದ್ಧಿ ಮಾಡುವ ಇಚ್ಛಾಶಕ್ತಿ ಇರುವ ನಾಯಕರನ್ನು ಬೆಂಬಲಿಸಿದರೆ ಮಾತ್ರ ನಾವು ಕಂಡ ಕನಸು ನನಸಾಗಲು ಸಾಧ್ಯ. ಅದು…

Read More

ಕೊಲ್ಹಾರ: ಪಟ್ಟಣ ವಿಶ್ವಕರ್ಮ ಸಮಾಜದ ಗುರುಹಿರಿಯರು ಹಾಗೂ ಬಂಧುಗಳು ಗುರುವಾರ ಕೊಲ್ಹಾರ ಪಟ್ಟಣದಲ್ಲಿ ಸಭೆ ನಡೆಸಿ ವಿಧಾನಸಭೆ ಚುನಾವಣೆಯಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರಿಗೆ ಬೆಂಬಲ ಸೂಚಿಸಿ ಆತ್ಮೀಯವಾಗಿ ಸನ್ಮಾನಿಸಿದರು.ಈ ವೇಳೆ ಹಿರಿಯರಾದ ಸಿ.ಎಂ ಗಣಕುಮಾರ, ವಿಶ್ವಕರ್ಮ ಸಮಾಜದ ಹಿರಿಯರಾದ ಯಂಕಪ್ಪ ಕಂಬಾರ, ಪುಂಡಲೀಕ್ ಕಂಬಾರ, ಮಳೆಪ್ಪ ಬಡಿಗೇರ, ಮೌನೇಶ್ವರ ಹಾಗೂ ಕಾಳಿಕಾದೇವಿ ದೇವಸ್ಥಾನದ ಅರ್ಚಕ ಮೌನೇಶ ಬಡಿಗೇರ, ಲಕ್ಷ್ಮಣ ಕಂಬಾರ, ಶಂಕರ ಬಡಿಗೇರ ಹಾಗೂ ಹಲವರಿದ್ದರು.

Read More

ವಿಜಯಪುರ: ಯೋಜನೆ ರೂಪಿಸಿ ಐದು ವರ್ಷಗಳಲ್ಲಿ ಅನುಷ್ಠಾನಗೊಳಿಸಿ ಭೂ ಪರಿಹಾರವನ್ನೂ ನೀಡಿ ಎಂ. ಬಿ. ಪಾಟೀಲರು ಛಲದಂಕಮಲ್ಲರಾಗಿದ್ದಾರೆ ಎಂದು ರೈತ ಶಿವಾನಂದ ಸಸಾಲಟ್ಟಿ ಹೇಳಿದರು. ತಿಕೋಟಾ ತಾಲೂಕಿನ ರಾಂಪೂರದಲ್ಲಿ ಎಂ. ಬಿ. ಪಾಟೀಲರು ಕೈಗೊಂಡ ಪ್ರಚಾರದಲ್ಲಿ ಮಾತನಾಡಿದ ಅವರು, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಜನೋಪಯೋಗಿ ಕಾರ್ಯಗಳ ಮೂಲಕ ರೈತರು, ಯುವಕರು, ಮಹಿಳೆಯರ ಬಾಳನ್ನು ಹಸನಾಗಿಸಿದ್ದಾರೆ. ಇಂಥ ಜನ ನಾಯಕರನ್ನು ಪಕ್ಷಾತೀತವಾಗಿ ಬಹುಮತದೊಂದಿಗೆ ಆಯ್ಕೆ ಮಾಡೋಣ ಎಂದು ಮತದಾರರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮಜರೆ ಹಳ್ಳಿಯಾಗಿದ್ದ ರಾಂಪೂರ ಗ್ರಾಮ ಈಗ ಕಂದಾಯ ಗ್ರಾಮವಾಗಿದೆ.ತಿಕೋಟಾ ಹೋಬಳಿ ನೀರಾವರಿಗಾಗಿ ರೂ. 3600 ಕೋಟಿ ಖರ್ಚು ಮಾಡಿ ದೇಶದಲ್ಲಿಯೇ ಹೋಬಳಿಯೊಂದರಲ್ಲಿ ನ ಭೂತೋ ನ ಭವಿಷ್ಯತಿ ಎಂಬಂತೆ ಕೆಲಸ ಮಾಡಿದ ಸಂತೃಪ್ತಿ ಇದೆ ಎಂದು ಹೇಳಿದರು. ಮತಕ್ಷೇತ್ರವನ್ನು ಬಂಗಾರದ ಬಬಲೇಶ್ವರವನ್ನಾಗಿ ಮಾಡಲು ಅಭಿವೃದ್ಧಿಯ ಸಾಕಷ್ಟು ಕನಸುಗಳನ್ನು ಹೊಂದಿದ್ದೇವೆ. ಅವುಗಳನ್ನು ನನಸು…

Read More

ವಿಜಯಪುರ: ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ನಾವು ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುವುದು ನಿಶ್ಚಿತ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ನಗರದಲ್ಲಿ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಮತ್ತು ಭಗೀರಥ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಫನಮನ ಸಲ್ಲಿಸಿ ಅವರು ಮಾತನಾಡಿದರು. ಮತಕ್ಷೇತ್ರದ ಜನರಿಗಾಗಿ ಹಗಲು ರಾತ್ರಿ ದುಡಿದಿದ್ದೇನೆ. ಐದು ವರ್ಷ ಸಚಿವನಾಗಿದ್ದಾಗ ವೈಯಕ್ತಿಕ ಜೀವನ ಬದಿಗೊತ್ತಿ, ವಿಶ್ರಮಿಸದೇ ನೀರಾವರಿ ಕೆಲಸ ಮಾಡಿದ್ದೇನೆ. ಮುಂದೆಯೂ ಜನರ ಅಭಿವೃದ್ಧಿಗೆ ದುಡಿಯಲು ಪಣತೊಟ್ಟಿದ್ದೇನೆ ಎಂದು ಅವರ ಹೇಳಿದರು. ಜಗತ್ತು ನಂಬಿಕೆ ಮತ್ತು ವಿಶ್ವಾಸದ ಮೇಲೆ ನಿಂತಿದೆ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರರ ಸಂಪೂರ್ಣ ಬೆಂಬಲದಿಂದ 50 ಸಾವಿರ ಹೆಚ್ಚು ಮತಗಳ ಅಂತರದಿಂದ ಗೆಲುವು ವಿಶ್ವಾಸ ನನಗಿದೆ ಎಂದು ಅವರು ತಿಳಿಸಿದರು. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮನೆ ಮನೆಗೆ ತೆರಳಿ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಕಾಂಗ್ರೆಸ್ ಗ್ಯಾರಂಟಿ ಸ್ಕೀಂ…

Read More

ಇಂಡಿ: ಕೊಳೆತ ಮೊಟ್ಟೆಗಳನ್ನು ಅಂಗನವಾಡಿ ಮಕ್ಕಳಿಗೆ ನೀಡಿರುವ ಆರೋಪ ತಾಲೂಕಿನಲ್ಲಿ ಕೇಳಿಬಂದಿದೆ.ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಝಳಕಿ ಸಮೀಪದ ಜೇವೂರ ಗ್ರಾಮದ ಶಾಂತಿನಗರ ಅಂಗನವಾಡಿ ಕೇಂದ್ರದಲ್ಲಿ ಕೊಳೆತ ಮೊಟ್ಟೆಗಳನ್ನು ಮಕ್ಕಳಿಗೆ ನೀಡುತ್ತಿದ್ದ ವೇಳೆ ಜೇವೂರ ಗ್ರಾಮದ ಗ್ರಾಮಸ್ಥರ ಗಮನಕ್ಕೆ ಬಂದಿದೆ. ಇದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಛೀಮಾರಿ ಹಾಕಿದ್ದಾರೆ. ಕೂಡಲೆ ಅಲ್ಲಿನ ಅಕ್ಕಪಕ್ಕದ ಮಹಿಳೆಯರು ಸೇರಿ ಅಂಗನವಾಡಿಗೆ ಬೀಗ ಹಾಕಿದ್ದಾರೆ. ನಂತರ ಅಂಗನವಾಡಿ ಸಹಾಯಕಿಗೆ ಈ ಕುರಿತು ಕೇಳಿದಾಗ, ನನಗೆ ಮೇಲಿಂದ ಹಿಂಗೆ ಕೊಟ್ಟಿದ್ದಾರೆ. ನಾ ಏನ್ ಮಾಡಲಿ, ನಾ ಮನೆಯಿಂದ ತಂದಿಲ್ಲಾ ಎಂದು ವಾದ ಮಾಡಿದ್ದಾಳೆ.‌ಇಷ್ಟೆಲ್ಲಾ ಆದ್ರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದೇ ಇರುವುದು ವಿಪರ್ಯಾಸದ ಸಂಗತಿ. ಕೂಡಲೆ ಮೇಲಾಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Read More

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತದಿಂದ ಭಾರತವು ಆರ್ಥಿಕವಾಗಿ ಸದೃಡಗೊಳ್ಳುತ್ತಿದ್ದು, ದೇಶದ ನಾಗರಿಕರ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿ ದೇಶ ಗೌರವ ಮತ್ತು ವಿಶ್ವಗೌರವಕ್ಕೆ ಮಾನ್ಯರಾಗಿದ್ದಾರೆ ಎಂದು ಮಹಾರಾಷ್ಟçದ ಅರಣ್ಯ ಮತ್ತು ಮೀನುಗಾರಿಕೆ ಸಚಿವ ಸುಧೀರ್ ಮನಗಂಟಿವಾರ್ ಹೇಳಿದರು.ಗುರುವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರದಾನಿ ನರೇಂದ್ರ ಮೋದಿಯವರು ಜಾರಿಗೆ ತಂದ ಕೃಷಿ ಸಮ್ಮಾನ್, ಜಲ ಜೀವನ್ ಮೊದಲಾದ ಪ್ರಮುಖ ಯೋಜನೆಗಳು ದೇಶದ ಚಿತ್ರಣವನ್ನೇ ಬದಲಾಯಿಸಿವೆ. ಕಾಂಗ್ರೆಸ್ ಸರಕಾರ ಆಡಳಿತ ನಡೆಸಿದ ಸುಮಾರು ೬೦ ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಸರಕಾರದ ಕೇವಲ ಎರಡು ಅವಧಿಯಲ್ಲೇ ಆಗಿವೆ. ಕಾಂಗ್ರೆಸ್ ಕೇವಲ ಕುಟುಂಬ ರಾಜಕಾರಣ, ಸ್ವ ಅಭಿವೃದ್ಧಿ ಕುರಿತು ಯೋಜಿಸಿದರೆ ಮೋದಿಯವರು ದೇಶದ ಹಿತಕ್ಕಾಗಿ ಯೋಚಿಸಿ, ಯೋಚಿಸಿದರು. ಮೋದಿಯವರು ಅಭಿವೃದ್ಧಿಯ ಹರಿಕಾರರಾದರೆ ಕಾಂಗ್ರೆಸ್ನವರು ಭ್ರಷ್ಟಾಚಾರದ ಹರಿಕಾರರಾಗಿದ್ದರು ಎಂದು ಆರೋಪಿಸಿದರು.ನರೇಂದ್ರ ಮೋದಿಯವರು ಜಾರಿ ಮಾಡಿದ ಯೋಜನೆಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸಲು ರಾಜ್ಯದಲ್ಲೂ ಬಿಜೆಪಿ ಸರ್ಕಾರ ಬೇಕು. ಮತ್ತೆ ಡಬಲ್…

Read More