Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಜಾಲವಾದ ಗ್ರಾಪಂ ಸದಸ್ಯರು ವಿವಿಧ ಸಮುದಾಯಗಳ ಯುವಕರು ಬಿಜೆಪಿ ಸೇರ್ಪಡೆ ದೇವರಹಿಪ್ಪರಗಿ: ಪಟ್ಟಣದ ವಿವಿಧ ಸಮುದಾಂiÀಗಳÀ ಯುವಕರು ಹಾಗೂ ಜಾಲವಾದ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಉಪಸ್ಥಿತಿಯಲ್ಲಿ ಬಿಜೆಪಿ ಸೇರಿದರು.ಪಟ್ಟಣದಲ್ಲಿ ಸೋಮವಾರ ಬಿಜೆಪಿ ಚುನಾವಣಾ ಕಾರ್ಯಾಲಯಕ್ಕೆ ಬಿಜೆಪಿ ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಾಯತ್ರಿ ದೇವೂರ ನೇತೃತ್ವದಲ್ಲಿ ಆಗಮಿಸಿದ ಜಾಲವಾದ ಗ್ರಾಮದ ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯ ವಿವಿಧ ಸಮುದಾಯಗಳ ಯುವಕರು ಬಿಜೆಪಿ ಸೇರಿದರು.ಈ ಸಂದರ್ಭದಲ್ಲಿ ಶಾಸಕ ಸೋಮನಗೌಡ ಮಾತನಾಡಿ, ಕ್ಷೇತ್ರದಲ್ಲಿ ಸುಮಾರು ೩ ಸಾವಿರ ಕೋಟಿ ಅನುದಾನದ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದ್ದು ಅದರ ಫಲವಾಗಿ ಇಂದು ನೀವೆಲ್ಲಾ ಬಿಜೆಪಿ ಸೇರುವುದರ ಮೂಲಕ ಪಕ್ಷಕ್ಕೆ ಹಾಗೂ ನನಗೆ ಇನ್ನಷ್ಟು ಶಕ್ತಿ ತುಂಬಿದ್ದೀರಿ ಎಂದರು.ಜಾಲವಾದ ಗ್ರಾಮ ಪಂಚಾಯಿತಿ ಸದಸ್ಯ ನೀಲಪ್ಪ ಸಜ್ಜನ ಹಾಗೂ ಕುಂಬಾರ ಸಮುದಾಯದ ಉಮಾಕಾಂತ ಕುಂಬಾರ ಮಾತನಾಡಿ, ಬಿಜೆಪಿ ಶಾಸಕರ ಅಭಿವೃದ್ಧಿಪರ ವಿಚಾರ ಹಾಗೂ ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ ಇಂದು ಯಾವುದೇ ಷರತ್ತುಗಳಿಲ್ಲದೇ…
ಬಸವನಬಾಗೇವಾಡಿ: ವಿಧಾನಸಭಾ ಮತಕ್ಷೇತ್ರದ ಮಲಘಾಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ವಠಾರ ಸೇರಿದಂತೆ ಅನೇಕರು ಮಂಗಳವಾರ ಜೆಡಿಎಸ್ ಅಭ್ಯರ್ಥಿ ಸೋಮನಗೌಡ ಪಾಟೀಲ ಮನಗೂಳಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.ಬಸವನಬಾಗೇವಾಡಿ: ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೋಮನಗೌಡ (ಅಪ್ಪುಗೌಡ) ಪಾಟೀಲ (ಮನಗೂಳಿ) ಅವರ ಸಮ್ಮುಖದಲ್ಲಿ ಮಂಗಳವಾರ ಮತಕ್ಷೇತ್ರದ ಮಲಘಾಣ ಗ್ರಾಮ ಪಂಚಾಯತಿ ಅಧ್ಯಕ್ಷ ಸುರೇಶ ಹಣಮಂತ ವಠಾರ,ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ ಕಾಮರಡ್ಡಿ ಮತ್ತು ಮಸೂತಿ ಗ್ರಾಮದ ಹಿರಿಯರು, ಯುವಕರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ನಿಂಗನೂರ, ಮುಖಂಡರಾದ ಈರಯ್ಯ ಕಟಗೇರಿಮಠ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಶೇಖರ ಕಾಮರೆಡ್ಡಿ ,ಸದಸ್ಯರಾದ ರಮೇಶ ಜಾಧವ, ಪಾಂಡು ಬಿರಾದಾರ, ಅಖಂಡಪ್ಪ ಕೋರಿ ಮಲಘಾಣ ಮತ್ತು ಮಸೂತಿ ಗ್ರಾಮದ ಹಿರಿಯರು, ಯುವಕರು ಉಪಸ್ಥಿತರಿದ್ದರು.
ಬಸವನಬಾಗೇವಾಡಿ: ಪಟ್ಟಣದ ತೆಲಗಿ ರಸ್ತೆಯಲ್ಲಿರುವ ಬಿಜೆಪಿ ಚುನಾವಣಾ ಕಾರ್ಯಾಲಯದಿಂದ ಬಿಜೆಪಿ ಪಕ್ಷದ ಅಭ್ಯರ್ಥಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರು ಮತ ಯಾಚಿಸುವ ಪಾದಯಾತ್ರೆ ಆರಂಭಿಸಿದ ಅವರು ಗಣಪತಿ ವೃತ್ತ,ಮಹಾರಾಜ ಮಠದ ಮಾರ್ಗ, ಗೌರಿ-ಶಂಕರ ದೇವಸ್ಥಾನದ ಮಾರ್ಗ, ಶಿವಾಜಿ ಗಲ್ಲಿ, ಸಂಗೊಳ್ಳಿ ರಾಯಣ್ಣ ವೃತ್ತ, ಶಿವಾಜಿ ಗಲ್ಲಿ, ಗಣಪತಿ ಚೌಕ, ಸಂಗೊಳ್ಳಿ ರಾಯಣ್ಣ ಸರ್ಕಲ್, ಅಂಬಿಗರ ಚೌಡಯ್ಯ ಸರ್ಕಲ್, ಯಲ್ಲಾಲಿಂಗ ಮಠ, ಅರಳಿಕಟ್ಟಿ, ಪಲ್ಲೇ ಕಟ್ಟಿ, ಸ್ಮಾರಕ ಭವನ, ಗೊಳಸಂಗಿ ಓಣಿ, ಪವಾಡಬಸವೇಶ್ವರ ಓಣಿ,ಜೈನಾಪೂರ ಗ್ರಾಮ ಸೇರಿದಂತೆ ವಿವಿಧೆಡೆ ಮನೆ ಮನೆಗೆ ತೆರಳಿ ಕರ ಪತ್ರ ನೀಡುವ ಮೂಲಕ ಮತಯಾಚಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಪರವಾಗಿ ಅಪಾರ ಸಂಖ್ಯೆಯ ಯುವಕರು ಸೇರಿದಂತೆ ಅಪಾರ ಸಂಖ್ಯೆಯ ಜನರು ವ್ಯಾಪಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಾನು ನಾಮಪತ್ರ ಸಲ್ಲಿಕೆಯಾದ ನಂತರ ಕ್ಷೇತ್ರದ ತುಂಬಾ ಯುವಕರಪಡೆ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರ ಪ್ರೇರಣೆಯಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದಾಗಿ ಕ್ಷೇತ್ರದಲ್ಲಿ…
ಸಿಂದಗಿ: ನಗರದ ವಾರ್ಡ ನಂ.01ರ ಹಡಪದ ಸಮಾಜದ ತಾಲೂಕಾಧ್ಯಕ್ಷ ಮಹಾಂತೇಶ ಮೂಲಿಮನಿ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷ ಸಿದ್ದಾಂತಗಳನ್ನು ಒಪ್ಪಿ ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ ಅವರು ನೇತೃತ್ವದಲ್ಲಿ ಪಕ್ಷ ಸೇರ್ಪಡೆಗೊಂಡರು.ಈ ವೇಳೆ ಮಲ್ಲಿಕಾರ್ಜುನ ಪಡಶೆಟ್ಟಿ, ಬಿಜೆಪಿ ಮಂಡಲ ಮಾಧ್ಯಮ ಸಂಚಾಲಕ ಶಿವಕುಮಾರ ಬಿರಾದಾರ, ಚಂದ್ರಶೇಖರ ಅಮಲಿಹಾಳ, ಡಿ.ಚಿದಾನಂದಶಾಸ್ತ್ರಿ, ವೆಂಕಟೇಶ್ ಕುಮಸಿಗಿ, ಗುರುಪಾದ ಹಂದಿಗನೂರ, ರವಿ ನಾವಿ, ಲಕ್ಷಿ ಹಡಪದ, ಕವಿತಾ ಹಡಪದ ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.
ಚಡಚಣ: ಕಾಂಗ್ರೆಸ್ ಮುಕ್ತ ಮಾಡಲು ಹೊರಟಿರುವ ಬಿಜೆಪಿಯೇ ಮೇ.೧೩ರ ನಂತರ ರಾಜ್ಯದಿಂದಲೇ ಮುಕ್ತವಾಗಲಿದೆ ಎಂದು ನಾಗಠಾಣದ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಭವಿಷ್ಯ ನುಡಿದರು .ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಆಯೋಜಿಸಲಾದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ ಎಲ್ಲರ ಅಭಿವೃದ್ಧಿ ಜೊತೆಗೆ ರೈತರ ಹಾಗೂ ಬಡವರ ಬದುಕು ಹಸನು ಮಾಡುವ ಪಕ್ಷ. ಬಿಜೆಪಿ ಉದ್ಯೋಗ ಕಸಿದುಕೊಳ್ಳುವ ಪಾರ್ಟಿ. ಬೆಲೆ ಹೆಚ್ಚಳ ಮಾಡಿ ಬಡವರ ಜೀವನ ಹಾಳು ಮಾಡಿರುವ ಬಿಜೆಪಿ ಪಕ್ಷವನ್ನು ರಾಜ್ಯದಿಂದ ಕಿತ್ತೆಸೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕು ಎಂದು ಅವರು, ತಮ್ಮ ಅಮೂಲ್ಯವಾದ ಮತವನ್ನು ನೀಡಿ ಆರಿಸಿ ತಂದರೆ ಪ್ರಾಮಾಣಿಕತೆಯಿಂದ ತಮ್ಮ ಮನೆ ಮಗನಾಗಿ, ಸೇವಕನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಪ್ರಾಮಾಣಿಕರಿಸಿ ಹೇಳುತ್ತೇನೆ ಎಂದರು.ಕಾಂಗ್ರೆಸ್ ಮುಖಂಡ ತಾ. ಪಂ ಮಾಜಿ ಸದಸ್ಯ ಭೀಮುಗೌಡ ಬಿರಾದಾರ ಹಾಗೂ ಮುಖಂಡ ಮಿರಸಾಬ ಶೇಖ ಮಾತನಾಡಿ, ಮತಕ್ಷೇತ್ರದ ಅಭಿವೃದ್ಧಿ ಮಾಡಲು ಪ್ರಾಮಾಣಿಕ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷದ ಮುಖಂಡರು ನೀಡಿದ್ದಾರೆ. ಅವರನ್ನು ಅತೀ ಹೆಚ್ಚು ಮತಗಳಿಂದ ಆರಿಸಿ…
ತಾಳಿಕೋಟೆ: ಬಿಜೆಪಿಯಲ್ಲಿ ನಾನು ಲಿಂಗಾಯತರ ಹಿರಿಯ ನಾಯಕನಾಗಿದ್ದೆ. ಬಿಜೆಪಿ ಪಕ್ಷ ಗೆದ್ದರೆ ದೊಡ್ಡ ಪ್ರಮಾಣದ ಅಧಿಕಾರ ಕೊಡಬೇಕಾಗುತ್ತದೆ ಎಂದು ಕೆಲವರು ಬಿಜೆಪಿ ಪಕ್ಷವನ್ನು ಸ್ವಾಧೀನ ಪಡೆದುಕೊಳ್ಳಲು ನನಗೆ ಟಿಕೇಟ್ ತಪ್ಪಿಸಿದರು. ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರಿಂದ ಆತ್ಮ ಗೌರವ ಉಳಿಸಿಕೊಳ್ಳಲು ನಾನು ಕಾಂಗ್ರೇಸ್ ಪಕ್ಷವನ್ನು ಸೇರಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.ಅವರು ಸೋಮವಾರ ಪಟ್ಟಣದ ಸಂಗಮೇಶ್ವರ ಸಭಾ ಭವನದಲ್ಲಿ ಮುದ್ದೇಬಿಹಾಳ ಕಾಂಗ್ರೇಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರ ಪರವಾಗಿ ಮತ ಯಾಚಿಸಿ ಮಾತನಾಡಿದರು.ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ೩೦ ವರ್ಷಗಳಿಂದ ಪಕ್ಷವನ್ನು ಕಟ್ಟಿದೇನೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನನಗೆ ಲಿಂಗಾಯತ ಕೋಟಾದಲ್ಲಿ ಮುಖ್ಯಮಂತ್ರಿ ಆಗುವ ಅಂಜಿಕೆಯಿAದ ನನ್ನನ್ನು ಹೊರಹಾಕಿದರು. ನನಗೆ ಅಧಿಕಾರ ಬೇಡ ಕೇವಲ ಶಾಸಕನಾಗಿ ಇದ್ದರೆ ಸಾಕು ಎಂದರೂ ಸಹ ಟಿಕೇಟ್ ಇಲ್ಲಾ, ರಾಜಕೀಯದಿಂದ ನಿವೃತ್ತಿ ಆಗಿ ಎಂದು ಹೇಳಿದರು. ನಾನು ಯಾವ ತಪ್ಪಿಗೆ ನನಗೆ ಟಿಕೇಟ್ ಇಲ್ಲಾ ಅಂತಾ ಹೇಳಿದರೆ ಅವರ ಬಳಿ ಉತ್ತರ ಇಲ್ಲಾ, ಬಿಜೆಪಿಯಲ್ಲಿ…
ತಿಕೋಟಾ: ಬರುವ ಮೇ 10 ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಬೂತನಲ್ಲಿ ಗರಿಷ್ಠ ಮತದಾನ ಆಗಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಹಂತದಿಂದ ಗ್ರಾಮ ಪಂಚಾಯತಿ ಹಂತದವರೆಗಿನ ಸ್ವೀಪ್ ಸಮಿತಿಯ ಮತದಾನ ಜಾಗೃತಿ ತಂಡವು ಕಾರ್ಯನಿರ್ವಹಿಸುತ್ತಿದೆ. ತಾಲ್ಲೂಕಿನಲ್ಲಿ ಬರುವ ಹದಿನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಬೂತಗಳಲ್ಲಿ ಶನಿವಾರ ಚುನಾವಣಾ ಆಯೋಗವು ಪ್ರಜಾಪ್ರಭುತ್ವ ಹಬ್ಬದ ಹೆಸರಿನಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಎಂಬ ನೂತನ ಕಾರ್ಯಕ್ರಮ ನೆರವೇರಿಸಿ ಮತದಾನ ಎಂಬ ಘೋಷ ವಾಕ್ಯ ಒಳಗೊಂಡಿರುವ ಭಾವುಟವನ್ನು ದ್ವಜಾರೋಹಣ ಮಾಡಲಾಯಿತು. ಘೋಣಸಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ ಸಂಖ್ಯೆ 4, 5 ಹಾಗೂ 6 ರಲ್ಲಿ ಪಿಡಿಓ ಸದಾಶಿವ ಬೊವಿನ್ ದ್ವಜಾರೋಹಣ ನೆರವೇರಿಸಿ ಮಾತನಾಡಿ ಮತದಾನದಲ್ಲಿ ಭಾಗವಹಿಸಿವದು ಎಲ್ಲ ಮತದಾರರ ಸಾಮಾಜಿಕ ಜವಾಬ್ದಾರಿಯಾಗಿದೆ. ಪ್ರತಿ ಮತದಾರ ತಮ್ಮ ಮತದ ಮೌಲ್ಯ ಅರಿತು ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಮತದಾನ ಮಾಡುವ ಮೂಲಕ ಪಾಲ್ಗೊಂಡು ಬಲಿಷ್ಟ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ಹೇಳಿದರು.…
ವಿಜಯಪುರ: ಸ್ವಾತಂತ್ರ್ಯ ನಂತರದ ದಿನಗಳಿಂದಲೂ ಕಾಂಗ್ರೆಸ್ ಪಕ್ಷ ದಲಿತರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ದಲಿತರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸವನ್ನು ಮಾಡಿದೆ. ಆ ಮೂಲಕ ದಲಿತರನ್ನು ಸಬಲೀಕರಣವನ್ನು ಮಾಡಿದೆ ಎಂದು ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ರಮೇಶ ಗುಬ್ಬೇವಾಡ ಹೇಳಿದರು.ಮಂಗಳವಾರ ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ವತಿಯಿಂದ ನಡೆದ ಪತ್ರಿಕಾಘೋಷ್ಠಿಯಲ್ಲಿ ಅವರು ಮಾತನಾಡಿದರು.ಕಾಲ ಕಾಲಕ್ಕೆ ದಲಿತರು ನಿರಂತರವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಕೂಡ ದಲಿತರು ಸೇರಿದಂತೆ ಎಲ್ಲ ಜಾತಿ ಜನಾಂಗಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿದೆ. ಎಂದಿನಂತೆ ಈ ಚುನಾವಣೆಯಲ್ಲಿ ಕೂಡ ದಲಿತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಜಿಲ್ಲೆಯ ಎಂಟೂ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.ರಾಜ್ಯದ ಬಿಜೆಪಿ ಸರ್ಕಾರ ದಲಿತರಿಗೆ ಒಳಮೀಸಲಾತಿ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸು ಈ ಚುನಾವಣೆಯಲ್ಲಿ ಪರಿಣಾಮ ಬೀರುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ…
ವಿಜಯಪುರ: ನಗರ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಸನಗೌಡ ರಾ. ಪಾಟೀಲ ಯತ್ನಾಳ ಅವರ ಪರವಾಗಿ ಪುತ್ರ ರಾಮನಗೌಡ ಪಾಟೀಲ ಯತ್ನಾಳ ಅವರು ನಗರದ ವಿವಿಧೆಡೆ ಪಾದಯಾತ್ರೆ ಹಾಗೂ ಸಭೆ ನಡೆಸುವ ಮೂಲಕ ಮತಯಾಚಿಸಿದರು.ಬೆಳಿಗ್ಗೆ ಈಶ್ವರ ಮಂದಿರ, ಸಾಂಸ್ಕøತಿಕ ಭವನ ಶಿವಾಜಿ ಪೇಠೆಯಿಂದ ಕುಂಬಾರ ಗಲ್ಲಿ, ವಿಠ್ಠಲ ಮಂದಿರ ರಸ್ತೆ ಹತ್ತಿರ ಮತಯಾಚನೆ ಮಾಡಿದರು. ಸಂಜೆ ಉಪ್ಪಾರ ಸಮಾಜದ ಸಭೆ ನಡೆಸಿದ ಅವರು, ನಂತರ ಸಿಎಂಸಿ ಕಾಲೊನಿ, ಡಾ.ಬಿ.ಆರ್.ಅಂಬೇಡ್ಕರ್ ಕಾಲೊನಿ, ಭಜಂತ್ರಿ ಕಾಲೊನಿಯಲ್ಲಿ ಮತಯಾಚಿಸಿ, ಗಣೇಶ ನಗರ, ಲಕ್ಷ್ಮೀ ನಗರ, ರಾಧಾಕೃಷ್ಣನ್ ನಗರ, ಗುರುಪಾದೇಶ್ವರ ನಗರಗಳಲ್ಲಿ ಸಭೆ ನಡೆಸಿ, ಮತಯಾಚನೆ ಮಾಡಿದರು.ಈ ವೇಳೆ ಮಾತನಾಡಿದ ಅವರು, ಯಾರು ನಿರೀಕ್ಷೆ ಮಾಡದ ಪ್ರದೇಶಗಳಲ್ಲಿಯೂ ಒಂಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಉದ್ಯಾನವನ, ಓಪನ್ ಜಿಮ್, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಅಭಿವೃದ್ಧಿ ಜೊತೆಗೆ ಸಂಕಷ್ಟದಲ್ಲಿದ್ದ ನಮ್ಮ ಹಿಂದೂಗಳು ನಿರ್ಭಯವಾಗಿ ಓಡಾಡುವ ಉತ್ತಮ ವಾತಾವರಣ ತರಲಾಗಿದೆ. ಚುನಾವಣೆಯಲ್ಲಿ ಕೊಟ್ಟ ಭರವಸೆಗಳಲ್ಲಿ ಒಂದೂ…
ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರು ಮತ್ತು ಇಬ್ಬರು ಸಹ ಪ್ರಾಧ್ಯಾಪಕರಿಗೆ ಪಿಎಚ್.ಡಿ ಪದವಿ ಲಭಿಸಿದೆ. ರಾಜಸ್ಥಾನದ ಜಗದೀಶ್ ಪ್ರಸಾದ್ ಜಬರ್ ಮಾಲ್ ಟಿಬರೆವಾಲಾ ವಿಶ್ವವಿದ್ಯಾಲಯ ಮೂವರಿಗೆ ಪಿಎಚ್.ಡಿ ಪ್ರಧಾನ ಮಾಡಿದೆ. ಕಾಲೇಜಿನ ಪ್ರಾಚಾರ್ಯ ಪ್ರೊ. ಶಾಲಮೊನ ಚೋಪಡೆ ಅವರು ಮಂಡಿಸಿದ “ಹೃದಯ ಸಂಬಂಧಿ ಪರಿಧಮನಿಯ ಕಾಯಿಲೆಯ ಹೆಚ್ಚಿನ ಅಪಾಯದ ಗುಂಪಿನ ಆರೋಗ್ಯಕರ ಹೃದಯ ಜೀವನ ಶೈಲಿಗೆ ಸಂಬಂಧಿಸಿದ ಅರಿವು ಮತ್ತು ದೃಷ್ಟಿಕೋನಗಳ ಮೇಲೆ ರಚನಾತ್ಮಕ ಜಾಗೃತಿ ಕಾರ್ಯಕ್ರಮದ ಪರಿಣಾಮ” ಮಹಾಪ್ರಬಂಧಕ್ಕೆ ಪಿಎಚ್.ಡಿ ಲಭಿಸಿದ್ದು, ಡಾ.ಅನುಪಮಾ ಓಕ್ ಅವರು ಮಾರ್ಗದರ್ಶಕರಾಗಿದ್ದಾರೆ. ಇದೇ ಕಾಲೇಜಿನ ಕಮ್ಯೂನಿಟಿ ನರ್ಸಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಸಂತೋಷ ಇಂಡಿ ಅವರು ಮಂಡಿಸಿದ “ಅಂಗನವಾಡಿ ಮತ್ತು ಶಾಲಾಪೂರ್ವ ಮಕ್ಕಳ ಆಹಾರ ಪದ್ಧತಿ, ಆಂಥ್ರೊಪೆಮೆಟ್ರಿಕ್ ಅಳತೆಗಳು ಮತ್ತು ಬೆಳವಣಿಗೆ ಮತ್ತು ಅಭಿವೃದ್ಧಿಯ ಅಭಿವೃದ್ಧಿಯಲ್ಲಿ ಅವರ ಪೋಷಕರ ಪಾತ್ರವನ್ನು ಮೌಲ್ಯಮಾಪನ ಮಾಡಲು ತುಲನಾತ್ಮಕ ಅಧ್ಯಯನ” ಮಹಾಪ್ರಬಂಧಕ್ಕೆ ಪಿಎಚ್.ಡಿ ಲಭಿಸಿದ್ದು, ಡಾ. ರಾಜೇಶ್ ಕೊಣ್ಣೂರಅವರು ಮಾರ್ಗದರ್ಶಕರಾಗಿದ್ದಾರೆ.…
