Author: editor.udayarashmi@gmail.com

ಡಬಲ್ ಎಂಜಿನ್ ಸರಕಾರದ ಹೆಸರಿನಲ್ಲಿ ಸಿಂಗಲ್ ಡ್ರೈವರ್ ಇದ್ದರೆ ಪ್ರಜಾಪ್ರಭುತ್ವಕ್ಕೆ ಮಾರಕ ವಿಜಯಪುರ: ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದ ಬೇಕಾದರೆ ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳುತ್ತಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಮತದಾರರ ತೀರ್ಪಿಗೆ ವಿರುದ್ಧವಾದ ಹೇಳಿಕೆಯಾಗಿದೆ ಎಂದು ಭಾರತದ ಪ್ರಧಾನಮಂತ್ರಿಗಳ ಕಾರ್ಯಾಲಯದ ಕಾರ್ಯಾಚರಣೆ ವಿಭಾಗದ ಮಾಜಿ ನಿರ್ದೇಶಕಸುಧೀಂದ್ರ ಕುಲಕರ್ಣಿ ಅಭಿಪ್ರಾಯಪಟ್ಟರು.ಭಾನುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಬಿಜೆಪಿ ಈಗ ವಾಜಪೇಯಿ ಮತ್ತು ಅಡ್ವಾಣಿ ಪಕ್ಷವಾಗಿ ಉಳಿದಿಲ್ಲ. ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿರುವ ನಾನು 2012ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೂ ಮುಂಚೆ ಬಿಜೆಪಿ ಬಿಟ್ಟು ಬಂದಿದ್ದೇನೆ. ಈಗ ಯಾವ ಪಕ್ಷದಲ್ಲಿಯೂ ಗುರುತಿಸಿಕೊಂಡಿಲ್ಲ ಎಂದು ಹೇಳಿದರು. ಬದಲಾವಣೆಗಾಗಿ ಬಿಜೆಪಿ ಎಂದು ಹೇಳಿಕೊಂಡು ಚುನಾವಣೆ ಎದುರಿಸಿದ ಬಿಜೆಪಿ ಅಧಿಕಾರಕ್ಕಾಗಿ ಆಪರೇಷನ್ ಕಮಲದ ಮೂಲಕ ಆರ್ಥಿಕ ಮತ್ತು ರಾಜಕೀಯ ಭ್ರಷ್ಟಾಚಾರ ನಡೆಸಿದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ನೀಡಬೇಕು. ಇಲ್ಲದಿದ್ದರೆ, ಅತಂತ್ರ ಪರಿಸ್ಥಿತಿ ಎದುರಾಗಿ…

Read More

ಬಸವನಬಾಗೇವಾಡಿ: ಬಿಜೆಪಿ ಸರ್ಕಾರ ಬಂಜಾರ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆದು ಹಾಕುವ ಹುನ್ನಾರ ನಡೆಸಿದೆ. ಬಂಜಾರ ಸಮಾಜಕ್ಕೆ ಬಿಜೆಪಿ ಅನ್ಯಾಯ ಮಾಡಿದೆ. ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ರಾಜ್ಯದಲ್ಲಿನ ಭ್ರಷ್ಟ ಸರ್ಕಾರ ತೊಲಗಬೇಕು. ಪರಿಶಿಷ್ಟ ಜಾತಿಯಲ್ಲಿ ಒಡಕು ತಂದ ಬಿಜೆಪಿಗೆ ತಕ್ಕ ಉತ್ತರ ನೀಡಬೇಕು ಎಂದು ವಿಧಾನ ಪರಿಷತ್ ಸಚೇತಕ ಪ್ರಕಾಶ ರಾಠೋಡ ಹೇಳಿದರು. ಪಟ್ಟಣದ ವೀರಭದ್ರೇಶ್ವರ ನಗರದ ಉದ್ಯಾನದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಶಿವಾನಂದ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಸಂತ ಸೇವಾಲಾಲರ ಜಯಂತಿ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ, ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡಿದ್ದು ನಮ್ಮ ಸರ್ಕಾರ. ಕಾಂಗ್ರೆಸ್ ಸರ್ಕಾರದಲ್ಲಿ ಬಂಜಾರ ಅಭಿವೃದ್ಧಿ ನಿಗಮಕ್ಕೆ ರೂ.470 ಕೋಟಿ ಅನುದಾನ ನೀಡಿತ್ತು. ಆದರೆ ಬಿಜೆಪಿ ಸರ್ಕಾರ ಕೇವಲ ರೂ.70 ಕೋಟಿ ಅನುದಾನ ನೀಡುವ ಮೂಲಕ ಬಂಜಾರ ಸಮಾಜಕ್ಕೆ ಅನ್ಯಾಯ ಮಾಡಿದೆ. ಶಾಸಕ ಶಿವಾನಂದ ಪಾಟೀಲರು ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ಅವರನ್ನು…

Read More

ವಿಜಯಪುರ: ಕಾಂಗ್ರೆಸ್ ಗೆ ಮತ ಹಾಕಿದರೆ, ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವತ್ತೇ ಹೇಳಿದ್ದಾರೆ. ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಹತ್ತು ಅಡಿ ಜಾಗ ಕೊಡಲಿಲ್ಲ ಕಾಂಗ್ರೆಸ್. ಮತ್ಯಾಕೆ ಆ ಪಕ್ಷಕ್ಕೆ ಮತ ಹಾಕಬೇಕು ಎಂದು ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಹೇಳಿದರು. ನಗರ ಮತಕ್ಷೇತ್ರ ವ್ಯಾಪ್ತಿಯ ತೊರವಿ ಲಕ್ಷ್ಮಿ ದೇವಸ್ಥಾನ ಹತ್ತಿರ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಕನಸು ನನಸು ಮಾಡಿದವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ನಾನು ಕೂಡ ಅಂಬೇಡ್ಕರ್ ಅವರ ಪರಮ ಭಕ್ತ ಎಂದು ಹೇಳಿದರು. ಕಾಂಗ್ರೆಸ್ ನವರು ಹೇಳಿರುವ ಭಜರಂಗ ದಳ ನಿಷೇಧ ಹೇಳಿಕೆಗೆ ಜಗಳಾಡುವುದು, ಆರೋಪ ಪ್ರತ್ಯಾರೋಪ ಮಾಡುವುದು ಬೇಡವೇ ಬೇಡ. ಮೇ 10 ರಂದು ಜೈ ಭಜರಂಗಿ ಬಲಿ ಅನ್ನುವುದು ಕಮಲಕ್ಕೆ ಮತ ಒತ್ತಿ ಉತ್ತರ ನೀಡಬೇಕು. ನಗರದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಪರವಾನಗಿ ಪಡೆಯಲು ಅಲೆಯುವುದು, ಹಣ ತುಂಬುವುದು ಬಂದ್ ಮಾಡಲಾಗಿದೆ. ಪೊಲೀಸ್ ಇಲಾಖೆ, ಹೆಸ್ಕಾಂ ಸಿಬ್ಬಂದಿ…

Read More

ಬಸವನಬಾಗೇವಾಡಿ: ಪಟ್ಟಣದ ತೆಲಗಿ ರಸ್ತೆಯಲ್ಲಿರುವ ಬಸವ ನಗರದ ಹನುಮಂತ ದೇವಸ್ಥಾನದಿಂದ ಬಸವೇಶ್ವರ ದೇವಸ್ಥಾನದವರೆಗೆ ಭಾನುವಾರ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರ ಗೆಲುವು ಸಾಽಸಬೇಕೆಂದು ಪ್ರಾರ್ಥಿಸಿ ಅವರ ಅಭಿಮಾನಿ ಬಸವರಾಜ ಭಜಂತ್ರಿ ದೀಡ್ ನಮಸ್ಕಾರ ಹಾಕಿದನು.ಬಸವೇಶ್ವರ ದೇವಸ್ಥಾನದ ತಲುಪಿದ ನಂತರ ಬಿಜೆಪಿ ಮುಖಂಡರು ಬಸವರಾಜ ಭಜಂತ್ರಿಯನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಗೋಪಾಲ ಚಿಂಚೋಳಿ, ಸಿದ್ದನಗೌಡ ಪಾಟೀಲ, ಮುತ್ತು ಕಿಣಗಿ, ಸಾವಿತ್ರಿ ಕಲ್ಯಾಣಶೆಟ್ಟಿ ಮಾತನಾಡಿ, ಎಸ್.ಕೆ.ಬೆಳ್ಳುಬ್ಬಿ ಅವರು ಎರಡು ಸಲ ಕ್ಷೇತ್ರದ ಶಾಸಕರಿದ್ದ ಸಂದರ್ಭದಲ್ಲಿ ಬಸವನಬಾಗೇವಾಡಿಯಲ್ಲಿ ಬಸ್ ಡಿಪೋ, ೨೨೦ ಮೆಗಾ ವ್ಯಾಟ್ ವಿದ್ಯುತ್ ಸ್ಟೇಶನ್, ಕುಡಿಯುವ ನೀರಿನ ವ್ಯವಸ್ಥೆ, ಬಸವೇಶ್ವರ ದೇವಸ್ಥಾನವನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ಸೇರ್ಪಡೆ, ಮಿನಿ ವಿಧಾನಸೌಧ ಉದ್ಘಾಟನೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಚುನಾವಣೆಯಲ್ಲಿ ೧೦ ಸಾವಿರ ಮತಗಳ ಅಂತರದಿಂದ ಎಸ್.ಕೆ.ಬೆಳ್ಳುಬ್ಬಿ ಅವರು ಆಯ್ಕೆಯಾಗುವುದು ನಿಶ್ಚಿತ ಎಂದರು.ಈ ಸಂದರ್ಭದಲ್ಲಿ ಬಸವರಾಜ ಬಿಜಾಪುರ, ರಾಜು ಮುಳವಾಡ,ಹುಲಗಾಜಿ ಕಲಾಲ,…

Read More

ವಿಜಯಪುರ: ನಗರ ಮತಕ್ಷೇತ್ರದ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ರವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿರುವ, ಖಾಜಾ ಅಮೀನ್ ದರ್ಗಾದ ಹಾಲುಮತ ಸಮಾಜ ಬಾಂಧವರು ಬಿಜೆಪಿಗೆ ಬೆಂಬಲ ನೀಡಿ ಘೋಷಣಾ ಪತ್ರವನ್ನು ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಅವರಿಗೆ ಶನಿವಾರ ನೀಡಿದರು. ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿರುವ ನಗರ ಶಾಸಕರು, ಸಮುದಾಯ ಏಳಿಗೆಗಾಗಿ ಶ್ರಮಿಸಿದಲ್ಲದೇ, ಈಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಸಮಾಜದ ನಾಲ್ವರಿಗೆ ಬಿಜೆಪಿ ಟಿಕೆಟ್ ಕಲ್ಪಿಸಿದ್ದಾರೆ. ಅದರ ಫಲವಾಗಿ ಸಮಾಜದ ಇಬ್ಬರು ಪಾಲಿಕೆ ಸದಸ್ಯರಾಗಿ ಜನಸೇವೆ ಮಾಡುತ್ತಿದ್ದಾರೆ. ಖಾಜಾ ಅಮೀನ ದರ್ಗಾದಲ್ಲಿ ಕರಿ ಸಿದ್ದೇಶ್ವರ ದೇವಸ್ಥಾನಕ್ಕೆ ರೂ.25 ಲಕ್ಷ ಅನುದಾನ, ವಿಜಯಪುರ ನಗರದಲ್ಲಿ ಅಹಿಲ್ಯಾಬಾಯಿ ಹೊಳ್ಕರ್ ವೃತ್ತ ನಿರ್ಮಾಣ, ಖಾಜಾ ಅಮಿನ್ ದರ್ಗಾದಲ್ಲಿ ಸಂಗೋಳ್ಳಿ ರಾಯಣ್ಣ ವೃತ್ತ ನಿರ್ಮಾಣ, ಕನಕದಾಸ ವೃತ್ತ ನಿರ್ಮಾಣಕ್ಕೆ ಅನುದಾನ ಹೀಗೆ ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಹೀಗಾಗಿ ವಾ.ನಂ.2ರ ಖಾಜಾ ಅಮಿನ್ ದರ್ಗಾದ ಹಾಲುಮತ ಸನಾಜ ಬಾಂಧವರು ಸಂಪೂರ್ಣ ಬೆಂಬಲ ಘೋಷಿಸಿರುವುದಾಗಿ ಸಂಘದ…

Read More

ಇಂಡಿ: ಹಾಲುಮತ ಸಮಾಜದ ಪಟ್ಟದ ದೇವರಿಗೆ ಮತ್ತು ಮಠದ ಪೂಜ್ಯರಿಗೆ ಶನಿವಾರ ಸುರಪುರ ಪಂಕ್ಸನ ಹಾಲ್ ನಲ್ಲಿ ನಡೆದ ಸಭೆಗೆ ತಪ್ಪು ಸಂದೇಶ ನೀಡಿ ಕರೆಸಲಾಗಿತ್ತು ಎಂದು ಎಲ್ಲ ಹಾಲಮತ ಸಮಾಜದ ಪಟ್ಟದ ದೇವರು ಮತ್ತು ಮಠದ ಪೂಜ್ಯರು ಭಾನುವಾರ ಸ್ಪಷ್ಟನೆ ನೀಡಿದ್ದಾರೆ.ಸಭೆಯಲ್ಲಿ ಜೆಡಿಎಸ್ ಮುಖಂಡ ರೇವಣಸಿದ್ದ ಗೋಡಕೆ ಮಾತನಾಡಿ, ಕಾಂಗ್ರೆಸಿನ ಕೆಲವು ಮುಖಂಡರು ಶಾಸಕರ ಜೊತೆಗೂಡಿ ಹಾಲುಮತ ಸಮಾಜದ ದುರ್ಬಳಕೆ ಮಾಡಿಕೊಂಡು, ಸಮಾಜದ ಮತಗಳನ್ನು ಒಡೆಯುವ ಹುನ್ನಾರ ಮಾಡಿ, ಕೆಲವು ವ್ಯಕ್ತಿಗಳು ಸಮಾಜಕ್ಕೆ ಕೆಟ್ಟ ಹೆಸರು ತರುವ ಮತ್ತು ಸಮಾಜದಲ್ಲಿ ರಾಜಕೀಯ ಮಾಡಿ ಅದರ ಲಾಭ ತರುವ ಪ್ರಯತ್ನ ಮಾಡಿ ತಪ್ಪು ಸಂದೇಶ ನೀಡಿದ್ದಾರೆ ಎಂದು ಆರೋಪಿಸಿದರು.ಸಮಾಜದ ಮುಖಂಡ ಬಿ.ಬಿ. ಪಾಟೀಲ ತಾಂಬಾ ಮಾತನಾಡಿ, ಈಗಾಗಲೇ ಎಲ್ಲ ಪೂಜ್ಯರು ನಮಗೆ ಎಲ್ಲ ಪಕ್ಷಗಳು ಅಷ್ಟೆ, ನಾವು ಯಾರು ಬಂದರೂ ಆಶೀರ್ವಾದ ಮಾಡುತ್ತೇವೆ. ನಾವು ಜಾತಿ ರಾಜಕಾರಣ ಮಾಡುವದಿಲ್ಲ. ಎಲ್ಲ ಸಮುದಾಯ ಬೆಂಬಲದಿAದ ಮಾತ್ರ ವಿಧಾನಸಭೆಗೆ ಆಯ್ಕೆಯಾಗಲು ಸಾಧ್ಯ ಎಂದು ಸ್ಪಷ್ಟನೆ…

Read More

ಬೆಳ್ಳುಬ್ಬಿಯವರಿಗೆ ಬೆಂಬಲ ಸೂಚಿಸಿದ ಕೊಲ್ಹಾರದ ಅಂಬೀಗರ ಸಮಾಜ ಕೊಲ್ಹಾರ: ಕಳೆದ ನನ್ನ ಅಧಿಕಾರವಧಿಯಲ್ಲಿ ಆಶ್ರಯ ಯೋಜನೆಯಡಿ ಮನೆಗಳ ಹಂಚಿಕೆ ವೇಳೆ ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ಮುಸ್ಲಿಂ ಸಮುದಾಯಕ್ಕಾಗಿ 518 ಮನೆಗಳನ್ನು ನೀಡಿದ್ದೆ. ಆದರೆ ಠರಾವು ಪ್ರಕ್ರಿಯೆ ತಡವಾದ ಕಾರಣ ಹಿಂದೂ ಸಮುದಾಯದ ಬಡವರಿಗೆ ಮನೆಗಳನ್ನು ಹಂಚಿಕೆ ಮಾಡಲಾಗಿರಲಿಲ್ಲ. ಹಾಗಾಗಿ ಈ ಬಾರಿ ಪಟ್ಟಣದ ಎಲ್ಲಾ ಸಮುದಾಯದ ಬಡವರಿಗಾಗಿ ಕನಿಷ್ಠ 4-5 ಸಾವಿರ ಮನೆಗಳನ್ನು ನೀಡುವ ಗುರಿ ಇದೆ. ಯಾರು ಶೆಡ್ ನಲ್ಲಿ ವಾಸಿಸಬಾರದೆಂಬುದು ನನ್ನ ಆಸೆ ಎಂದು ಬಸವನಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಅವರು ವಾಗ್ದಾನ ಮಾಡಿದರು. ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದಲ್ಲಿ ಭಾನುವಾರ ಕೊಲ್ಹಾರದ ತಳವಾರ ಸಮಾಜದ ಗುರುಹಿರಿಯರು ಹಾಗೂ ಸಮಾ ಜಬಂಧುಗಳು ಸಭೆ ಸೇರಿ ವಿಧಾನಸಭಾ ಚುನಾವಣೆಯಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಅವರಿಗೆ ಪೂರ್ಣ ಬೆಂಬಲ ಸೂಚಿಸಿದರು. ಈ ವೇಳೆ ಬೆಳ್ಳುಬ್ಬಿಯವರು ಮಾತನಾಡಿ, ಕೊಲ್ಹಾರವಷ್ಟೇ ಅಲ್ಲ ಬಸವನ ಬಾಗೇವಾಡಿ ಮತಕ್ಷೇತ್ರದ ಎಲ್ಲಾ ಬಡವರಿಗೆ ಸೂರು…

Read More

ವಿಜಯಪುರದಲ್ಲಿ ನಡೆದ ಕಾರ್ಪೊರೇಟರ್ ಪತಿ ಹೈದರ್ ಅಲಿ ಕೊಲೆ ಪ್ರಕರಣ | ಕಾಣದ ಕೈಗಳ ಕೈವಾಡ | ವಿಜಯಪುರ ನಗರ ಕ್ಷೇತ್ರದಿಂದ ಎಐಎಂಐಎಂ ಟಿಕೆಟ್ ಕೇಳಿದ್ದ ಹೈದರ್| ಆಡಿಯೋ ಬಹಿರಂಗ | ಮತದಾನ ದಿನ ಪೊಲೀಸ್ ಭದ್ರತೆ ಹೆಚ್ಚಿಸಲು ಆಗ್ರಹ ವಿಜಯಪುರ: ನಗರದಲ್ಲಿ ಶನಿವಾರ ಬೆಳಗ್ಗೆ ನಡೆದ ಶೂಟೌಟ್‌ನಲ್ಲಿ ಕೊಲೆಗೀಡಾಗಿರುವ ವ್ಯಕ್ತಿ ಸಾರ್ವತ್ರಿಕ ವಿಧಾನÀಸಭೆ ಚುನಾವಣೆಯಲ್ಲಿ ವಿಜಯಪುರ ನಗರದಿಂದ ಎಐಎಂಐಎA ಟಿಕೇಟ್ ಆಕಾಂಕ್ಷಿಯಾಗಿದ್ದ, ಈಗ ಆ ವ್ಯಕ್ತಿಯ ಕೊಲೆ ನಡೆದಿರುವುದು ವಿಧಾನಸಭೆ ಚುನಾವಣೆ ದೃಷ್ಟಿಕೋನವನ್ನಿರಿಸಿಕೊಂಡು ನಡೆದ ಕೊಲೆಯಾಗಿದೆ ಎಂದು ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಗಂಭೀರವಾಗಿ ಆರೋಪಿಸಿದರು.ಭಾನುವಾರ ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಕೊಲೆಗೀಡಾಗಿರುವ ವ್ಯಕ್ತಿ ಹಾಗೂ ಎಐಎಂಐಎA ಪಕ್ಷದ ಅಧ್ಯಕ್ಷರು ಮಾತನಾಡಿರುವ ಆಡಿಯೋ ಬಿಡುಗಡೆಗೊಳಿಸಿದರು. ಈ ಆಡಿಯೋ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದರು.ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬAಧಿಸಿದAತೆ ತಮಗೆ ಬಿ-ಫಾರ್ಮ್ ತಪ್ಪಿರುವ ವಿಷಯವಾಗಿ ಕೊಲೆಗೀಡಾಗಿರುವ…

Read More

ಆಲಮೇಲ: ಡಬಲ್ ಎಂಜಿನ್ ಸರಕಾರದ ಸಾಧನೆಗಳನ್ನು ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ ಶಾಸಕ ರಮೇಶ ಭೂಸನೂರ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರರು ಬಿಜೆಪಿಯನ್ನು ಗೆಲ್ಲಿಸಲು ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ ಹೇಳಿದರು.ಭಾನುವಾರ ಮತಕ್ಷೇತ್ರದ ಬ್ಯಾಡಗಿಹಾಳ, ಕುರುಬತಳ್ಳಿ, ಮಡ್ನಳ್ಳಿ, ಅಲಹಳ್ಳಿ, ಹೊಸೂರ, ಗುಂದಗಿ ಗ್ರಾಮಗಳಲ್ಲಿ ಮತ್ತು ಆಲಮೇಲ ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರ ಪರ ಮತಯಾಚಿಸಿ ಅವರು ಮಾತನಾಡಿದರು.ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ಶತಸಿದ್ಧ. ವಿವಿಧ ಪಕ್ಷಗಳಿಂದ ಮುಖಂಡರ ಮತ್ತು ಕಾರ್ಯಕರ್ತರ ದಂಡೇ ಬಿಜೆಪಿಯತ್ತ ಹರಿದು ಬರುತ್ತಿರುವುದೇ ಬಿಜೆಪಿಯ ಗೆಲುವಿನ ಮುನ್ಸೂಚನೆಯಾಗಿದೆ ಎಂದರು.ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸ್ವಚ್ಛ, ದಕ್ಷ ಆಡಳಿತಕ್ಕೆ ಜನತೆ ಫಿದಾ ಆಗಿದ್ದು ತಮಗೆ ಬಿಜೆಪಿಯೇ ಭರವಸೆ ಎಂದು ಖಾತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ ಪ್ರಣಾಳಿಕೆಗೆ ಮತದಾರರಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದು ಇದು ಮತಗಳಾಗಿ ಪರಿವರ್ತನೆಯಾಗಿ ಭೂಸನೂರ ಅವರು ಮತ್ತೊಮ್ಮೆ ವಿಜಯ ಪತಾಕೆ ಹಾರಿಸಿ ಸಚಿವರಾಗಿ ಬರಲಿದ್ದಾರೆ ಎಂದು ಭವಿಷ್ಯ ನುಡಿದರು.ಜಿಪಂ…

Read More

ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಗ್ರಾಮದ ಯುವಕ ಸಂಗಮೇಶ ನಿಂಬಾಗೋಳ ಅದೇ ಗ್ರಾಮದ ಪಾದಗಟ್ಟಿಯಿಂದ ಮಹಿಮಾ ಪುರುಷ ಪವಾಡ ಬಸವೇಶ್ವರರ ಸನ್ನಿಧಾನದವರೆಗೆ ಬಿಜೆಪಿ ಪಕ್ಷದ ಅಭ್ಯರ್ಥಿ ಎ.ಎಸ್.ಪಾಟೀಲ ನಡಹಳ್ಳಿ ಅವರು ಚುನಾವಣೆಯಲ್ಲಿ ಜಯಶಾಲಿಯಾಗಲಿ ಎಂದು ಪ್ರಾರ್ಥಿಸಿ ದೀರ್ಘದಂಡ ನಮಸ್ಕಾರಗಳನ್ನು ಸಲ್ಲಿಸಿದರು.ಈ ವೇಳೆ ಮುಖಂಡರಾದ ಶ್ರೀಶೈಲ್ ಮೇಟಿ, ಮಂಜುನಾಥ ಚಲವಾದಿ, ಶಿವಾನಂದ ಬಿರಾದಾರ, ಶರಣು ಮೇಟಿ ಸೇರಿದಂತೆ ಮತ್ತಿತರರು ಇದ್ದರು.

Read More