Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದಿಂದ ಸುಮಾರು ಮುನ್ನೂರಕ್ಕೂ ಹೆಚ್ಚು ಜನ ಭಕ್ತಾದಿಗಳು ಗ್ರಾಮದಿಂದ ಆಂದ್ರಪ್ರದೇಶದ ಶ್ರೀಶೈಲಂ ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ತೆರಳಿದರು.ಹೋಳಿ ಹುಣ್ಣಿಮೆಯ ಸೋಮವಾರ ರಾತ್ರಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಜಮಾವಣೆಗೊಂಡ ಭಕ್ತಾಧಿಗಳೀಗೆ ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ವಿಶೇಷವಾದ ಕಂಬಿಮಲ್ಲಯ್ಯ ದೇವರಿಗೆ ವಿಶೇಷ ಪೂಜೆ ನೆರವೇರಿದ ನಂತರ ಗ್ರಾಮದ ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಮಾರ್ಗವಾಗಿ ಶ್ರೀಶೈಲ ಕ್ಷೇತ್ರಕ್ಕ ಪಾದಯಾತ್ರೆ ನಡೆಸಿದರು, ಗ್ರಾಮಸ್ಥರು ಪಾದಯಾತ್ರಿಗಳಿಗೆ ಹಣ್ಣು, ನೀರು, ಅಲ್ಪೋಪಹಾರ ವಿತರಿಸುವ ಮೂಲಕ ತಮ್ಮ ಭಕ್ತಿಸೇವೆ ಸಲ್ಲಿಸಿದರು.ಗ್ರಾಮದ ಶ್ರೀ ಭ್ರಮರಾಂಬಾ ಮಲ್ಲಿಕಾರ್ಜುನ ಅನ್ನದಾಸೋಹ ಸೇವಾ ಸಮೀತಿಯಿಂದ ಪ್ರತೀ ವರ್ಷದಂತೆ ಈ ಬಾರಿಯೂ ಈ ಭಾಗದ ಶ್ರೀಶೈಲ ಪಾದಯಾತ್ರಿಗಳಿಗೆ ಉಚಿತ ಅನ್ನದಾಸೋಹ ಹಾಗೂ ವೈದ್ಯಕೀಯ ಸೇವೆ ಮಾ. ೫ (ಗುರುವಾರ) ರಿಂದ ನಿರಂತರವಾಗಿ ಐದು ದಿನಗಳಕಾಲ ಆದ್ರಪ್ರದೇಶದ ಗಡಿ ಬಾಗದ ಕರಿಹೊಳಿ ಹತ್ತಿರ ನಡೆಯುತ್ತದೆ.

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮೀಣ ಭಾಗದಲ್ಲಿ ಹಲಿಗೆ ಹಬ್ಬವೆಂದೆ ಖ್ಯಾತಿ ಪಡೆದ ಹೋಳಿ ಹಬ್ಬವನ್ನು ಸಡಗರದೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಯಿತು, ಯುವಕರು ವಿವಿಧ ಬಣ್ಣಗಳಲ್ಲಿ ಮಿಂದೆದ್ದು ಸಂಭ್ರಮಪಟ್ಟರು.ಮಕ್ಕಳು ಗುಂಪಾಗಿ ಹಲಿಗೆ ಬಾರಿಸುತ್ತ ಖುಷಿ ಅನುಭವಿಸಿದರೆ. ರೈತರು, ಕಾರ್ಮಿಕರು ಹೊಸ ಬಟ್ಟೆ ತೊಟ್ಟು ಹೋಳಿ ಹಾಡುಗಳನ್ನು ಹಾಡುತ್ತಾ ಆನಂದ ಪಟ್ಟರು. ಯುವಕರು ಬಣ್ಣಧಾಟ ನಿಷೇಧದ ಛಾಯೆ ಇದ್ದರೂ ತಮ್ಮ ಪಾಡಿಗೆ ಬಣ್ಣಗಳಲ್ಲಿ ಮಿಂದೆದ್ದು ಹೋಳಿ ಹಬ್ಬಕ್ಕೆ ರಂಗು ನೀಡಿದರು.ಸಾಂಸ್ಕೃತಿಕ ಕಾರ್ಯಕ್ರಮ; ಸೋಮವಾರ ಬೆಳಗ್ಗೆ ೬ ಗಂಟೆಗೆ ರಾಣಿ ಚನ್ನಮ್ಮ ವೃತ್ತದಲ್ಲಿರುವ ಕಾಮಣ್ಣನ ಕಟ್ಟೆ ಮೇಲೆ ರತಿ ಕಾಮರ ಮೂರ್ತಿ ಪ್ರತಿಷ್ಠಾಪಣೆ ಮಾಡಿದ ಗ್ರಾಮಸ್ಥರು ಇಡೀ ದಿನ ರೈತರು ಮಹಿಳೆಯರು ರತೀ ಕಾಮರಿಗೆ ವಿಶೇಷ ಪೂಜೆ ಸಲ್ಲಿಸಿದರು, ಗ್ರಾಮದ ಗಣಪತಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಳಿ ಹಾಗೂ ಕರ್ಬಲಾ ಪದಗಳ ಗಾಯಣ ರಾತ್ರಿ ೯.ಘಂಟೆಯವರೆಗೆ ನಡೆದವು, ಕಾಮಣ್ಣ ಸೇವಾ ಸಮೀತಿ ನೇತ್ರತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಷ್ಮಣ ಕಣದಾಳ ಹಾಗೂ ಭಾಗ್ಯಶ್ರೀ ಕುಂಬಾರಹಳ್ಳರವರ ತಂಡಗಳಿಂದ ಗೀಗಿ ಪದಗಳ ಗಾಯಣ…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಫೆಬ್ರುವರಿ ತಿಂಗಳು ಬಂತೆಂದರೆ ಸಾಕು ಎಲ್ಲರ ಮನೆಗಳಲ್ಲೂ ಒಂದು ರೀತಿಯ ಗಂಭೀರ ಆತಂಕದ ವಾತಾವರಣ. ಮಕ್ಕಳಿಂದ ಹಿಡಿದು ಮನೆಯ ಹಿರಿಯರವರೆಗೆ ಎಲ್ಲರಲ್ಲೂ ಒಂದು ರೀತಿಯ ಮೌನ. ಇಡೀ ಮನೆಯಲ್ಲಿ ಕರ್ಫ್ಯೂ ವಿಧಿಸಿದ ಹಾಗೆ ತೋರುವ ಭಾವ. ಮನೆಯಲ್ಲಿ ಮಕ್ಕಳು ಯಾವ ಯಾವ ಸಮಯಕ್ಕೆ ಏನೇನು ಮಾಡಬೇಕು ಎಂಬುದರ ಕುರಿತಾದ ಟೈಮ್ ಟೇಬಲ್ ಗಳು ಮಕ್ಕಳ ಕೊಠಡಿಯ ಬಾಗಿಲುಗಳ ಹಿಂದೆ ಮಾತ್ರವಲ್ಲ ಬದಲಾಗಿ ಮನೆಯ ಊಟದ ಮೇಜಿನ ಬಳಿ, ಫ್ರಿಜ್ಜಿನ ಬಾಗಿಲ ಬಳಿ ಮತ್ತು ಹಲವೆಡೆ ಅಂಟಿಸಲ್ಪಡುತ್ತದೆ. ಪದೇ ಪದೇ ಮಕ್ಕಳಿಗೆ ಬೋರ್ಡ್ ಎಕ್ಸಾಮ್ ಹತ್ತಿರ ಬರುತ್ತಿರುವ ಕುರಿತು ನೆನಪಿಸುತ್ತ ಪಾಲಕರು ಒಂದು ವಿಧವಾದ ಅಶಾಂತತೆಯನ್ನು ತಾವು ಅನುಭವಿಸುವ ಮೂಲಕ ಮಕ್ಕಳಲ್ಲೂ ಭಯವನ್ನು ಬಿತ್ತುವಂತಹ ವಾತಾವರಣ. ಇನ್ನು ಸಂಬಂಧಿಗಳು ಯಾವುದಾದರೂ ಮದುವೆ, ಮುಂಜಿ, ಗೃಹಪ್ರವೇಶದಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ನೋಡಿದಾಗ ಅರೆ ಬೋರ್ಡ್ ಎಕ್ಸಾಮ್ ಇದೆ. ಸಮಾರಂಭಕ್ಕೆ ಕರೆದುಕೊಂಡು ಬಂದಿದ್ದೀರಲ್ಲ ಎಂದು ಪಾಲಕರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹ ನಿರ್ದೇಶಕರು ಹಾಗೂ ಸ್ಥಳೀಯ ಪತ್ರಿಕೆಗಳ ಹಿತ ಚಿಂತಕರಾದ ಅಮರೇಶ ದೊಡಮನಿಯವರಿಗೆ ’ಉದಯರಶ್ಮಿ’ ದಿನಪತ್ರಿಕೆ ವತಿಯಿಂದ ಸೋಮವಾರ ಆದರಪೂರ್ವಕವಾಗಿ ಸನ್ಮಾನಿಸಲಾಯಿತು.’ಉದಯರಶ್ಮಿ’ ಸಂಪಾದಕ ಇಂದುಶೇಖರ ಮಣೂರ ಮತ್ತು ಪ್ರಕಾಶಕಿ ಶ್ರೀಮತಿ ಶೈಲಾ ಇಂದುಶೇಖರ ಅವರು ವಾರ್ತಾಧಿಕಾರಿ ಅಮರೇಶ ದೊಡಮನಿ ಅವರ ಪಾರದರ್ಶಕ ವ್ಯಕ್ತಿತ್ವ ಮತ್ತು ಕರ್ತವ್ಯದಕ್ಷತೆಗೆ ಅಭಿನಂದನೆ ಸಲ್ಲಿಸಿ ಗೌರವಿಸಿದರು.ಈ ವೇಳೆ ವಾರ್ತಾಧಿಕಾರಿ ಅಮರೇಶ ದೊಡಮನಿ ಅವರು ಮಾತನಾಡಿ, ’ಉದಯರಶ್ಮಿ’ ಪತ್ರಿಕೆಯ ಗುಣಮಟ್ಟದ ಬಗ್ಗೆ ಮೆಚ್ಚುಗೆ ಸೂಚಿಸಿ, ಪತ್ರಿಕೆಯ ಬೆಳವಣಿಗೆಗೆ ಸಹಕರಿಸುವುದಾಗಿ ಭರವಸೆ ನೀಡಿದರಲ್ಲದೆ, ಪತ್ರಿಕಾ ಧರ್ಮ ಪಾಲನೆ ಕೈಬಿಡದಂತೆ ಸಂಪಾದಕರಿಗೆ ಕಿವಿಮಾತು ಹೇಳಿದರು.

Read More

ಸಿಂದಗಿಯ ಎಸ್ ಎಮ್.ಮಣೂರ ಎಸ್ ಬಿ ಮಾಡೆಲ್ ಪಬ್ಲಿಕ್ ಸ್ಕೂಲ್ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಶಾಸಕ ಅಶೋಕ ಮನಗೂಳಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಎಸ್ ಎಮ್.ಮಣೂರ ಎಸ್ ಬಿ ಮಾಡಲ ಪಬ್ಲಿಕ್ ಸ್ಕೂಲ್ ನಲ್ಲಿ ಇತ್ತೀಚೆಗೆ ವಾರ್ಷಿಕ ಸ್ನೇಹ ಸಮ್ಮೇಳನ ಅರ್ಥಪೂರ್ಣವಾಗಿ ಜರುಗಿತು.ಸಿಂದಗಿ ಶಾಸಕರಾದ ಅಶೋಕ್ ಮನಗೂಳಿಯವರು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮುಖಾಂತರ ಹೆಮ್ಮರವಾಗಿ ಬೆಳೆದ ಈ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ಸುಂದರ ಪರಿಸರದ ಶೈಕ್ಷಣಿಕ ವಾತಾವರಣ ಮಕ್ಕಳಿಗೆ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಪ್ರೊ.ರವಿ ಗೋಲಾ ಮಾತನಾಡಿ, ಈ ಸಂಸ್ಥೆಯು ಶಿಕ್ಷಣ ಹಾಗೂ ಸಮಾಜಸೇವೆಗಾಗಿ ಮುಡುಪಾಗಿಟ್ಟಿರುವುದು ಶ್ಲಾಘನೀಯ ಎಂದರು.ನಗರ ಸಭೆಯ ಉಪಾಧ್ಯಕ್ಷ ಸಂದೀಪ್ ಚೌರ, ಬಿಜೆಪಿ ಮುಖಂಡ ರಾಜು ಪೂಜಾರಿ, ಅಶೋಕ ಕಮರಡ್ಡಿ ಹಾಗೂ ಇತರ ಗಣ್ಯರು ವೇದಿಕೆ ಮೇಲಿದ್ದರು.ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಮಣೂರ ಸರ್ವರಿಗೂ ಸ್ವಾಗತ ಕೋರಿದರು.ಶಾಲಾ ಆಡಳಿತ ಅಧಿಕಾರಿ ಎಸ್ ಎನ್ ಹೊಳಿ ಮಾತನಾಡಿ,…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ :ತಾಲೂಕಿನ ಕೃಷ್ಣಾತಟದ ಪುಣ್ಯಕ್ಷೇತ್ರ ಚಿಕ್ಕಪಡಸಲಗಿ ಗ್ರಾಮದ ಪುನರ್ವಸತಿ ಕೇಂದ್ರದ ಚಿಕ್ಕಲಕಿ ಕ್ರಾಸ್ ಹತ್ತಿರವಿರುವ ಶ್ರೀ ಸಿದ್ಧಲಿಂಗೇಶ್ವರ ಮಹಾರಾಜರ ಕಮರಿಮಠದಲ್ಲಿ ವಿಶ್ವಶಾಂತಿಗಾಗಿ 14ನೇಯ ವೇದಾಂತ ಪರಿಷತ್ ಕಾರ್ಯಕ್ರಮವು ಇಂಚಲದ ಪರಮ ಪೂಜ್ಯ ಶ್ರೀ ಸದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಮತ್ತು ಮಹಾಲಿಂಗಪೂರದ ಪರಮ ಪೂಜ್ಯ ಶ್ರೀ ಸಹಜಾನಂದ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಮಾತೋಶ್ರೀ ಅಕ್ಕಮಹಾದೇವಿ ತಾಯಿಯವರ ಸದೀಚ್ಛೆಯ ಮೇರೆಗೆ ಇದೆ ಶುಕ್ರವಾರ ದಿನಾಂಕ ಫೆ.6 ಮತ್ತು 7 ರಂದು ಎರಡು ದಿನಗಳ ಕಾಲ ಜರುಗಲಿದೆ ಎಂದು ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯ ಮಾತೋಶ್ರೀ ಅಕ್ಕಮಹಾದೇವಿ ಅಮ್ಮನವರು ಹೇಳಿದರು. ಅವರು ಇಂಚಲದ ಸಾಧು ಸಂಸ್ಥಾನ ಮಠದ ಸಾಧು ಚಕ್ರವರ್ತಿ ಸದ್ಗುರು ಶ್ರೀ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳ ಕಿರೀಟ ಪೂಜೆ ಮತ್ತು ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಲಿದೆ ಎಂದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಲಿದೆ ಎಂದರು.ಈಗಾಗಲೇ ಕಾರ್ಯಕ್ರಮಕ್ಕೆ ಸರ್ವ ಪೂಜ್ಯರನ್ನು ಆಮಂತ್ರಿಸಿದ್ದು ಇಂಚಲದ ಪರಮ ಪೂಜ್ಯಶ್ರೀ ಸದ್ಗುರು ಡಾ. ಶಿವಾನಂದಭಾರತಿ…

Read More

ಉದಯರಶ್ಮಿ ದಿನಪತ್ರಿಕೆಜಮಖಂಡಿ : ತಾಲೂಕಿನ ಅಡಿಹುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೂತನವಾಗಿ ಎಸ್‌ಡಿಎಂಸಿ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಸಂಗಪ್ಪ ಕೋಟ್ಯಾಳ, ಉಪಾಧ್ಯಕ್ಷರಾಗಿ ಗೀತಾ ಶಿಂಧೆ, ಸದಸ್ಯರಾಗಿ ಭೀಮಪ್ಪ ಚೌರಿ, ಲಕ್ಕಪ್ಪ ಬೆಳಗಲಿ, ಹಾಸಿಮ್ ಜಮಖಂಡಿ, ಸರ್ದಾರ್ ಯಡವೆ, ಶಿವಾನಂದ ವಾಲಿಕಾರ, ಶಾರದಾ ಆಕಳೆ, ಮೀನಾಕ್ಷಿ ಭಜಂತ್ರಿ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯ ಗುರುಗಳಾದ ವಿಜಯಕುಮಾರ ಲಿಗಾಡಿ, ತಾಲೂಕ ಪಂಚಾಯತ ಸದಸ್ಯ, ಧರೇಪ್ಪ ಗುಗ್ಗರಿ, ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಭರತ್ ಗುಗ್ಗರಿ, ಉಪಾಧ್ಯಕ್ಷ ಅಬ್ದುಲ್ ಜಮಖಂಡಿ, ಬಿ ಎಸ್ ಸವಾಸೆ, ಬೀರಪ್ಪ ಸನದಿ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹುಸೇನ್‌ ಜಮಖಂಡಿ, ಸದಾಶಿವ ಚೌರಿ, ಶಿವಪ್ಪ ಗಳವೆˌ ಮುತ್ತು ಚೌವ್ಹಾಣ, ಅಲ್ಲಾಭಕ್ಷ ಜಮಖಂಡಿ, ರವಿ ಗುಗ್ಗರಿ, ಕಾಸು ಬಿರಡಿ, ಅಶೋಕ ಗುಗ್ಗರಿ, ಭೀಮಪ್ಪ ಚೌರಿ ಸೇರಿದಂತೆ ಇತರರು ಹಾಜರಿದ್ದರು.

Read More

ಉದಯರಶ್ಮಿ ದಿನಪತ್ರಿಕೆಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಬುಧವಾರ ಭೇಟಿ ನೀಡಿ ತಾಲ್ಲೂಕಾ ಆಡಳಿತದ ಕಾರ್ಯವೈಖರಿ, ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ಕೊಲ್ಹಾರ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಅವರು, ಆಧಾರ ನೋಂದಣಿ, ಕಂದಾಯ ಗ್ರಾಮ ಮಾಹಿತಿ, ಭೂಮಿ ಪ್ರಗತಿ, ಈ-ಪೌತಿ ಖಾತೆ ಪ್ರಗತಿ, ಪ್ರಮಾಣ ಪತ್ರ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆ ಕುರಿತು ಪರಿಶೀಲನೆ ನಡೆಸಿದರು. ಸರಕಾರದ ಮಹತ್ವದ ಭೂ-ಸುರಕ್ಷಾ ಯೋಜನೆಯಡಿ ಭೂ-ದಾಖಲೆಗಳು ಸಾರ್ವಜನಿಕರಿಗೆ ದಾಖಲೆಗಳನ್ನು ಪಡೆದುಕೊಳ್ಳುವ ಬಗ್ಗೆ ಪರಿಶೀಲನೆ ಮಾಡಿದರು ಮತ್ತು ಹಕ್ಕು ಪತ್ರ ಕೋರಿ ಸಲ್ಲಿಸಿದ ಅರ್ಜಿಗಳನ್ನು ತಂತ್ರಾಂಶದಲ್ಲಿ ದಾಖಲಿಸಿ ಆನ್-ಲೈನ್ ಹಕ್ಕು ಪತ್ರ ನೀಡುವ ಕುರಿತಾಗಿ ನಿರ್ದೇಶನ‌ ನೀಡಿದರು. ಭೂಮಿ ಕೇಂದ್ರದಲ್ಲಿ ದರಖಾಸ್ ಪೋಡಿ ಪ್ರಗತಿ ಕುರಿತು ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಗಳು, ತದನಂತರ ರೋಣಿಹಾಳ ಗ್ರಾಮದಲ್ಲಿನ ಕೊಲ್ಹಾರ ಪಟ್ಟಣದ ಕಸ ವಿಲೇವಾರಿ ಘಟಕದ ಸ್ಥಳ ಪರಿಶೀಲನೆ ನಡೆಸಿದರು. ತಾಲ್ಲೂಕಿನಲ್ಲಿರುವ ಕೂಡಗಿಯ ಎನ್ ಟಿ ಪಿ ಸಿಗೆ ಭೇಟಿ ನೀಡಿ…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಬದುಕು ಪ್ರತಿಕ್ಷಣ ಬದಲಾಗುತ್ತಲೇ ಇರುತ್ತದೆ. ಬದುಕಿನ ದಾರಿ ನೇರವಾಗಿ ಇಲ್ಲ. ಹಾಗಂತ ಸಂಪೂರ್ಣವಾಗಿ ಅಂಕು ಡೊಂಕಾಗಿಯೂ ಇಲ್ಲ. ಅಲ್ಲಲ್ಲಿ ಏರು ತಗ್ಗುಗಳಿಂದ ಕೂಡಿದೆ. ಆಕಸ್ಮಿಕಗಳು ಸಮಸ್ಯೆಗಳು ಸರ್ವೇಸಾಮಾನ್ಯ. ಹೀಗಾಗಿ ಕೆಲವು ಸಂದರ್ಭಗಳಲ್ಲಿ ಪ್ರಮುಖ ಘಟ್ಟಗಳಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ನಮ್ಮ ನಿರ್ಧಾರಗಳು ನಮ್ಮ ಜೀವನವನ್ನು ರೂಪಿಸುತ್ತವೆ. ಎಂಬುದು ಒಪ್ಪಲೇಬೇಕಾದ ಮಾತು. ವಿಶೇಷವಾಗಿ ಹೆಚ್ಚಿನ ಪ್ರಸಂಗಗಳಲ್ಲಿ ನಾವು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಸಮಸ್ಯೆಗಳನ್ನು ಸನ್ನಿವೇಶಗಳನ್ನು ಹಾಗೂ ಅದರ ಸ್ವರೂಪಗಳನ್ನು ಒಳಗೊಂಡಿರುತ್ತದೆ. ಕಾಲಾನಂತರದಲ್ಲಿ ಹಿಂದಿನ ಅನುಭವಗಳು ಮತ್ತು ಯಾವುದೇ ಹೊರ ಜ್ಞಾನದ ಆಧಾರದ ಮೇಲೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೌಶಲ್ಯಗಳನ್ನು ನಾವು ಬೆಳೆಸಿಕೊಳ್ಳಬೇಕು. ನಮ್ಮ ಭವಿಷ್ಯಕ್ಕಾಗಿ ಮತ್ತು ನಮ್ಮ ಕೆಲಸದ ಸ್ಥಳಕ್ಕಾಗಿ ಉತ್ತಮ ನಿರ್ಧಾರಗಳನ್ನು ಹೇಗೆ ಮಾಡಬೇಕೆಂದು ತಿಳಿಯಲು ಅನೇಕ ವಿಧಾನಗಳನ್ನು ಅನ್ವೇಷಿಸಿದರೆ ಹಲವು ಮಾರ್ಗಗಳು ಸಿಗುತ್ತವೆ. ಅದರಲ್ಲಿ ಕೆಲವು ಇಲ್ಲಿವೆ. ಅದಕ್ಕೂ ಮೊದಲು ಉತ್ತಮ ನಿರ್ಧಾರ ಏಕೆ ಮುಖ್ಯ ಅನ್ನೋದನ್ನು ತಿಳಿಯೋಣ.ಏಕೆ ಮುಖ್ಯಉತ್ತಮ…

Read More

ಕಾಡಾನೆ ದಾಳಿಗೆ ರೈತ ಬಲಿ, ಅರಣ್ಯಾಧಿಕಾರಿಗಳ ವಿರುದ್ದ ಆಕ್ರೋಶ ಉದಯರಶ್ಮಿ ದಿನಪತ್ರಿಕೆಸರಗೂರು : ತಾಲೂಕಿನಲ್ಲಿ ಮಾನವ-ಕಾಡುಪ್ರಾಣಿ ಸಂಘರ್ಷಕ್ಕೆ ತಡೆ ಬೀಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಒಂದೇ ತಿಂಗಳಲ್ಲಿ ಹುಲಿ ನಾಲ್ವರ ಮೇಲೆ ದಾಳಿ ನಡೆಸಿ, ಮೂವರನ್ನು ಬಲಿ ಪಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಆನೆ ದಾಳಿಗೆ ರೈತನೋರ್ವ ಬಲಿಯಾಗಿದ್ದಾನೆ. ಗುರುವಾರ ಬೆಳಗ್ಗೆ ಬಹಿರ್ದೆಸೆಗೆ ತೆರಳಿದ ರೈತನ ಮೇಲೆ ಆನೆ ದಾಳಿ ನಡೆಸಿ, ತುಳಿದು ಸಾಯಿಸಿದೆ. ತಾಲೂಕಿನ ಬಿ.ಮಟಕೆರೆ ಎಸ್ಟಿ ಕಾಲೋನಿ ಹಾಡಿ ನಿವಾಸಿ ಮಾದ(70) ಕಾಡಾನೆ ದಾಳಿಗೆ ಬಲಿಯಾದ ರೈತ. ಎಂದಿನಂತೆ ಮೃತ ಮಾದ ಹಾಡಿ ಸಮೀಪದ ವಾಟರ್‌ಟ್ಯಾಂಕ್‌ ಕೆಳಗಡೆ ಮಲಗಿದ್ದ. ಬುಧವಾರ ರಾತ್ರಿ ಅಲ್ಲೇ ಮಲಗಿ ಬೆಳಗ್ಗೆ 5.30ರ ಸುಮಾರಿಗೆ ಬಯಲು ಬಹಿರ್ದೆಸೆಗೆ ಬಂದಿದ್ದಾನೆ. ಈ ವೇಳೆ ಮಾದನ ಮೇಲೆ ಆನೆ ಅಟ್ಯಾಕ್ ಮಾಡಿದೆ. ಗಂಭೀರ ಗಾಯಗೊಂಡಿದ್ದ ರೈತ ಮಾದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಮೃತದೇಹ ನೋಡಿ ಹಾಡಿ ಜನರಿಗೆ…

Read More