Author: editor.udayarashmi@gmail.com

ವಿಜಯಪುರದಲ್ಲಿ ಶ್ವಾನಗಳ ಪ್ರದರ್ಶನಕ್ಕೆ ಶಾಸಕರಾದ ಯತ್ನಾಳ, ಕಟಕದೊಂಡರಿಂದ ಚಾಲನೆ ವಿಜಯಪುರ: ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪೊಲೀಸ್ ಪರೇಡ್ ಗ್ರೌಂಡನಲ್ಲಿ ಭಾನುವಾರ ಏರ್ಪಡಿಸಿದ ಶ್ವಾನ ಪ್ರದರ್ಶನಕ್ಕೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಚಾಲನೆ ನೀಡಿದರು.ಈ ಪ್ರದರ್ಶನದಲ್ಲಿ ಸುಮಾರು ೨೪ ತಳಿಯ ಶ್ವಾನಗಳು ಪಾಲ್ಗೊಂಡು, ಸಾರ್ವಜನಿಕರ ಗಮನ ಸೆಳೆದವು. ಪ್ರದರ್ಶನಕ್ಕೆ ೨೫೦ ಶ್ವಾನಗಳ ಮಾಲೀಕರು ಪ್ರದರ್ಶನಕ್ಕೆ ನೋಂದಣಿ ಮಾಡಿಕೊಂಡು ಪಾಲ್ಗೊಂಡರು. ಗ್ರೇಟ್ ಫೇನ್, ಬೀಗಲ್, ಬಾಕ್ಸರ್, ಪೂಡಲ್, ಬೆಲ್ಜಿಯಂ ಮಾಸ್ಟಿಪ್, ಪಸ್ಮಿ ಪಂಜಾಬಿ, ಮಿನಿಯೇಚರ್ ಪಮೇರಿಯನ್, ಸ್ವಿಡ್ಜು, ಕಾಕರ್ ಸ್ಫೇನಿಯಲ್, ಮುದೋಳ ಹೌಂಡ, ಲ್ಯಾಬ್ರಡಾರ್, ಡಾಬರ್ ಮನ್, ಕೇನ್ ಕಾರ್ಸೋ, ಸೈಬೇರಿಯನ್ ಹಸ್ಕಿ,ಗೋಲ್ಡನ್ ರಿಟ್ರೆಂವರ್ ಗ್ರೇ ಹೌಂಡ್ ಹೀಗೆ ವಿವಿಧ ತಳಿಯ ಮುದ್ದು ಸ್ವಾನಗಳು ಎಲ್ಲರ ಗಮನ ಸೆಳೆದವು. ಅಪರೂಪದ ಶ್ವಾನಗಳನ್ನು ಸಾರ್ವಜನಿಕರು ಕಣ್ತುಂಬಿಕೊಂಡರು.ವಿವಿಧ ತಳಿಯ ಶ್ವಾನಗಳು ಅಬಾಲವೃದ್ಧರಾದಿಯಾಗಿ ನೆರೆದ ಜನರಿಗೆ…

Read More

ಮುದ್ದೇಬಿಹಾಳ: ಆನೆಕಾಲು ರೋಗವು ಪೈಲೇರಿಯಾ ಸೊಂಕುವುಳ್ಳ ಕ್ಯೂಲೆಕ್ಸ್ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹಾಗಾಗಿ ಮುಖ್ಯವಾಗಿ ನಾವು ವಾಸಿಸುವ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಎಮ್.ಎಸ್.ಗೌಡರ ಹೇಳಿದರು.ತಾಲೂಕಿನ ಕೊಳೂರು ಗ್ರಾಮದಲ್ಲಿ ಆನೆಕಾಲು ರೋಗ ತಪಾಸಣೆ ವೇಳೆ ಅವರು ಮಾತನಾಡಿದರು.ರೋಗದ ನಿಯಂತ್ರಣಕ್ಕಾಗಿ ಹಾಗೂ ರೋಗಿಗಳ ಪತ್ತೆ ಮಾಡುವುದು ಅತ್ಯಂತ ಕಷ್ಟಕರವಾಗಿದ್ದು, ಆನೆಕಾಲು ರೋಗದ ಪತ್ತೆಗಾಗಿ ರಾತ್ರಿ ವೇಳೆಯಲ್ಲಿಯೇ ರಕ್ತದ ಮಾದರಿ ಸಂಗ್ರಹಿಸಬೇಕಾಗುತ್ತದೆ. ಆರೋಗ್ಯ ಇಲಾಖೆಯ ನಿರ್ದೇಶನದಂತೆ ತಾಲೂಕಿನಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರವಾರು ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ. ಆನೆಕಾಲು ರೋಗದವರಿಗೆ ಕಚ್ಚಿದ ಸೊಳ್ಳೆ, ಆರೋಗ್ಯವಂತರಿಗೆ ಕಚ್ಚಿದರೂ ರೋಗ ಹರಡುತ್ತದೆ. ಈ ರೋಗವು ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಸೊಳ್ಳೆ ಕಚ್ಚಿ ೫ ರಿಂದ ೭ ವರ್ಷಗಳವರೆಗೆ ಸೋಂಕಿರುವುದು ಕಾಣುವುದಿಲ್ಲ. ಮೊದಲ ಹಂತದಲ್ಲಿ ಆಗಾಗ್ಗೆ ಜ್ವರ ಕಾಣಿಸಿಕೊಳ್ಳುತ್ತದೆ. ಹಂತ ಹಂತವಾಗಿ, ಕಾಲು, ಕೈ, ವೃಷಣ, ಸ್ತನಗಳಲ್ಲಿ ಊತ ಕಂಡು ಬರುತ್ತಿರುತ್ತದೆ. ರಕ್ತ ಪರೀಕ್ಷೆಯಲ್ಲಿ ಆನೆಕಾಲು ರೋಗದ ರೋಗಾಣು ಪತ್ತೆಯಾದಲ್ಲಿ ಅದನ್ನು ಡಿಇಸಿ ಮಾತ್ರೆಗಳ…

Read More

ಮುದ್ದೇಬಿಹಾಳ: ತಮ್ಮ ಮಕ್ಕಳ ಜೀವಕ್ಕಿಂತ ನಮಗೆ ವಚನಗಳೇ ಮಿಗಿಲು. ವಚನಗಳ ಸಂರಕ್ಷಣೆಗಾಗಿ ನಮ್ಮ ಮಕ್ಕಳ ಜೊತೆ ಜೊತೆಗೆ ನಾವು ನಮ್ಮ ಪ್ರಾಣವನ್ನೂ ಪಣಕ್ಕಿಟ್ಟು ಹೋರಾಡಿ ಪ್ರಾಣ ಬಿಡುತ್ತೇವೆ ಎಂದು ೧೨ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಕ್ರಾಂತಿಯಾದಾಗ ಈ ರೀತಿ ದಿಟ್ಟ ಉತ್ತರ ನೀಡಿ ಶರಣರು ಶಪಥ ಮಾಡಿ ಹೋರಾಡಿದ್ದರು. ಶರಣರಿಗೆ ಮರಣವೇ ಮಹಾನವಮಿಯಾಗಿತ್ತೆಂದು ಉಪ್ಪಿನಬೆಟಗೇರಿಯ ಮ.ನಿ.ಪ್ರ.ಸ್ವ.ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ನುಡಿದರು.ಪಟ್ಟಣದ ಹುಡ್ಕೋದಲ್ಲಿರುವ ಜೆ.ಸಿ.ಶಾಲೆಯಲ್ಲಿ ಬಸವ ಬೆಳಗು ಪಥಸಂಚಲನ ಸಂಪನ್ನಗೊಂಡ ನಂತರ ಅವರು ಆಶೀರ್ವಚನ ನೀಡಿದರು.೧೨ನೇ ಶತಮಾನದಲ್ಲಿ ಬಸವೇಶ್ವರರು ಅಂತರ್ ಜಾತೀಯ ವಿವಾಹ ಮಾಡಿಸಿದರೆಂದು ಇಲ್ಲಸಲ್ಲದ ಅಪವಾದವನ್ನು ಅವರ ಮೇಲೆ ಹೊರಿಸಿ, ಬಿಜ್ಜಳ ರಾಜನ ಕಿವಿ ಊದಿ ಕೆಲವೊಂದು ದುಷ್ಟರಕೂಟ ಕ್ರಾಂತಿಯ ಕಹಳೆ ಮೊಳಗಿಸಿತು. ಶರಣರನ್ನು ಕೊಲ್ಲುವುದರ ಜೊತೆಗೆ ಅವರು ರಚಿಸಿರುವ ವಚನಗಳನ್ನು ಸರ್ವನಾಶ ಮಾಡಬೇಕೆಂಬುದು ಬಿಜ್ಜಳನ ಸೈನ್ಯದ ಮೂಲ ಉದ್ದೇಶವಾಗಿತ್ತು. ಇದರ ಒಳಮರ್ಮ ಅರಿತ ಶರಣರು ಜೀವದ ಹಂಗುದೊರೆದು ಹೋರಾಡಿ, ಶ್ರೀಶೈಲ ಹಾಗೂ ಉಳವಿಯ ಕಡೆಗೆ ವಚನಗಳನ್ನು ಸಂರಕ್ಷಿಸುತ್ತ ಕಲ್ಯಾಣ ತೊರೆದು ಹೊರಟು…

Read More

ವಿಜಯಪುರ: ಆರೋಗ್ಯ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಪ್ರಾರಂಭಗೊಂಡಾಗಿನಿಂದಲೂ ತನ್ನ ದಕ್ಷತೆಯ ಮೂಲಕ ಜನಪ್ರೀಯಗೊಳ್ಳುತ್ತಲಿದೆ. ಇದರ ಲಾಭವನ್ನು ಪಡೆದುಕೊಂಡು ಕೆಲವು ವಿರೋಧಿಗಳು ಹಾಗೂ ಸಮಾಜಘಾತುಕ ಶಕ್ತಿಗಳು ನನಗೆ ಸಿದ್ಧೇಶ್ವರ ಸಂಸ್ಥೆಯ ಅವರು ಗೊತ್ತು, ಇವರು ಗೊತ್ತು ಎಂದು ಹೇಳಿಕೊಳ್ಳುತ್ತ, ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿಕೊಂಡು ದುಡ್ಡು ಕೇಳುತ್ತಿದ್ದಾರೆ ಎನ್ನುವ ಮಾಹಿತಿಯು ನಮಗೆ ಲಭ್ಯವಾಗಿದ್ದು ನಮ್ಮ ಆಸ್ಪತ್ರೆಯಲ್ಲಿ ದುಡ್ಡು ಕೊಟ್ಟವರಿಗೆ ಕೆಲಸ ನೀಡುವ ಕೆಟ್ಟ ವ್ಯವಸ್ಥೆ ಇರುವುದಿಲ್ಲ. ಯಾರಲ್ಲಿ ಪ್ರತಿಭೆ ಇದೆಯೋ ಮತ್ತು ಕಾರ್ಯ ಕ್ಷಮತೆ ಇದೆಯೋ ಅಂಥಹ ಪ್ರತಿಭೆಗಳನ್ನು ಹೆಕ್ಕಿ ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳುತ್ತೇವೆಯೇ ಹೊರತು ಯಾರದೇ ಒತ್ತಡಕ್ಕೆ ಮಣಿದು ಯಾರನ್ನೂ ಸಹ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ. ಸಂಸ್ಥೆಯ ಸದಸ್ಯರು ಯಾರೂ ಸಹ ಈ ವಿಷಯದಲ್ಲಿ ತಲೆ ಹಾಕುವುದಿಲ್ಲ. ಹೀಗಾಗಿ ಜನಪ್ರೀಯತೆ ಪಡೆದುಕೊಳ್ಳುತ್ತಿರುವ ಆಸ್ಪತ್ರೆಯ ಹೆಸರನ್ನು ಹಾಳು ಮಾಡುವುದಕ್ಕೆಂದು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಮತ್ತೆ ಕೆಲವರು ಆಸ್ಪತ್ರೆಯ ಹೆಸರು ಹೇಳಿಕೊಂಡು…

Read More

ವಿಜಯಪುರ: ನಗರಕ್ಕೆ ಕೊಲ್ಹಾರ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜು ಆಗುವ ಪ್ರದೇಶಗಳಿಗೆ ಡಿ.೨೦ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಮುಳವಾಡ ಮಧ್ಯಂತರ ಪಂಪಿನ ಮನೆಯಿಂದ ಜಲನಗರ ಪಂಪಿನ ಮನೆಯವರೆಗೆ ಅಳವಡಿಸಿರುವ ೯೦೦ಎಂ.ಎಂ ವ್ಯಾಸದ ಪಿ.ಎಸ್.ಸಿ ಮುಖ್ಯ ಏರು ಕೊಳವೆ ಮಾರ್ಗದ ಚೈನೇಜ್ ೩೮.೦೦೦ ಕಿ.ಮೀ ಪ್ರಾರ್ಥನಾ ಶಾಲೆ ಹತ್ತಿರ, ಚೈನೇಜ್ ೩೮.೧೦೦ ಕಿ.ಮೀ ಪ್ರಾರ್ಥನಾ ಶಾಲೆ ಹತ್ತಿರ ಮತ್ತು ಚೈನೇಜ್ ೩೯.೫೦೦ ಕಿ.ಮೀ ಕರ್ಮಾ ಕೆಫೆ ಹತ್ತಿರದ ಕೊಳವೆ ಮಾರ್ಗದಲ್ಲಿ ನೀರು ಸೋರುತ್ತಿದ್ದು, ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

Read More

ವಿಜಯಪುರ: ೨೦೨೪-೨೫ನೇ ಸಾಲಿನ ಜಿಲ್ಲಾ ಕ್ರೀಡಾ ಶಾಲೆ ಮತ್ತು ವಸತಿ ನಿಲಯಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಡಿ.೧೮ರಿಂದ ಪ್ರಾರಂಭಗೊಂಡಿದ್ದು, ಜ.೨ರವರೆಗೆ ಆಯಾ ತಾಲೂಕಿನಲ್ಲಿ ಬೆಳಿಗ್ಗೆ ೯:೩೦ರಿಂದ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.ಡಿ. ೧೯ರಂದು ಚಡಚಣ ತಾಲೂಕಿನ ಚಡಚಣ ಶ್ರೀ ಸಂಗಮೇಶ್ವರ ಪ್ರೌಢಶಾಲೆ ಮೈದಾನದಲ್ಲಿ ತರಬೇತಿದಾರ ಸಲ್ಲಾವುದ್ದೀನ ಮಳಗಿ (ಮೊ: ೯೯೦೧೭೪೭೮೬೬), ದೇವರಹಿಪ್ಪರಗಿ ತಾಲೂಕಿನ ದೇವರಹಿಪ್ಪರಗಿ ಬಿಎಲ್‌ಡಿಇ ಕಾಲೇಜು ಆವರಣದಲ್ಲಿ ಬಸವರಾಜ ಬೆಳ್ಳುಬ್ಬಿ (ಮೊ:೯೯೭೨೬೯೧೧೭೯) ಹಾಗೂ ಬಬಲೇಶ್ವರ ತಾಲೂಕಿನ ಬಬಲೇಶ್ವರದ ಶಾಂತವೀರ ಪ್ರೌಢಶಾಲೆ ಮೈದಾನದಲ್ಲಿ ಸದಾಶಿವ ಅಮರಪ್ಪಗೋಳ (ಮೊ:೯೭೪೨೬೮೧೯೯೪), ಡಿ.೨೦ ರಂದು ವಿಜಯಪುರ ತಾಲೂಕಿಗೆ ಸಂಬಂಧಿಸಿದಂತೆ ನಗರದ ಜಿಲ್ಲಾ ಕ್ರೀಡಾಂಗಣ ಮೈದಾನದಲ್ಲಿ ತರಬೇತಿದಾರ ರಾಜು ಚವ್ಹಾಣ (ಮೊ: ೭೦೧೯೧೬೭೨೪೩) ಹಾಗೂ ಇಂಡಿ ತಾಲೂಕು ಕ್ರೀಡಾಂಗಣದಲ್ಲಿ ಯಲ್ಲಪ್ಪ ಜಂಪ್ಲೆ (ಮೊ:೯೮೪೫೦೦೭೩೪೨), ಡಿ.೨೧ ರಂದು ಕೋಲ್ಹಾರ ತಾಲೂಕಿನ ಕೋಲ್ಹಾರ ಶ್ರೀ ಸಂಗಮೇಶ್ವರ ಪ್ರೌಢಶಾಲೆ ಮೈದಾನದಲ್ಲಿ ತರಬೇತಿದಾರ ಸದಾಶಿವ ಅಮರಪ್ಪಗೋಳ (ಮೊ:೯೭೪೨೬೮೧೯೯೪) ಹಾಗೂ ತಿಕೋಟಾ…

Read More

ವಿಜಯಪುರ: ಕೆಪಿಟಿಸಿಎಲ್ ವತಿಯಿಂದ ೧೧೦/೧೧ ಕೆವಿ ದೇವರ ಗೆಣ್ಣೂರ, ಬಬಲೇಶ್ವರ, ಶಿರಬೂರು ಹಾಗೂ ೩೩/೧೧ ಕೆವಿ ದೇವರ ಗೆಣ್ಣೂರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ೧೧ ಕೆವಿ ಬೇಗಳ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರಡುವ ಎಲ್ಲ ೧೧ ಕೆವಿ ವಿದ್ಯುತ್ ಮಾರ್ಗಗಳಲ್ಲಿ ಡಿ.೨೦ರ ಬೆಳಿಗ್ಗೆ ೧೦ ರಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್  ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹರಿಸುವಂತೆ ವಿಜಯಪುರ ಹೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ವಿಜಯಪುರ: ಇಂಡೋ-ಪಾಕ್ ೧೯೭೧ರ ಯುದ್ಧದಲ್ಲಿ ಭಾಗವಹಿಸಿದ ಕೊಡುಗೆ ಯೋಧರು ಇಂದಿನ ವಿಜಯ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ನಮ್ಮೆಲ್ಲರಿಗೂ ಹೆಮ್ಮೆ ಹಾಗೂ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.ನಗರದ ಸೈನಿಕ ಶಾಲೆಯ ಸಭಾಭವನದಲ್ಲಿ ಇತ್ತಿಚಿಗೆ ಹಮ್ಮಿಕೊಂಡ ವಿಜಯ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆ, ಯುದ್ಧದಲ್ಲಿ ಪಾಲ್ಗೊಂಡ ಯೋಧರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಸೈನಿಕ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ, ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಅಧಿಕಾರಿಗಳು ಮಾಜಿ ಸೈನಿಕರು ಸೈನಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Read More

ಇಂಡಿ: ಸಮಾಜದಲ್ಲಿ ಆಡಂಬರದ ಮದುವೆಗಳು ಕಡಿಮೆಯಾದರೆ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದ ದಂಪತಿ ಅನೋನ್ಯವಾಗಿ ಬಾಳುವ ಮೂಲಕ ಈ ಕಾರ್ಯಕ್ರಮದ ಉದ್ದೇಶವನ್ನು ಸಾರ್ಥಕಪಡಿಸಬೇಕು ಎಂದು ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.ಅವರು ತಾಲೂಕಿನ ಶಿರಶ್ಯಾಡ ಗ್ರಾಮದಲ್ಲಿ ಲಿಂ. ಮುರುಘೇಂದ್ರ ಶಿವಾಚಾರ್ಯರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದ ನೇತೃತ್ವವಹಿಸಿ ಆಶೀರ್ವಚನ ನೀಡಿದರು.ಶ್ರೀ ಮಠಕ್ಕೆ ಭಕ್ತರೇ ಆಸ್ತಿ. ನಾವು ೨೦೦೯ರಿಂದ ಪ್ರತೀ ವರ್ಷ ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಶ್ರೀ ಮಠದ ಭಕ್ತರೇ ಎಲ್ಲ ಕಾರ್ಯಕ್ರಮಗಳಿಗೆ ಹಣ ಸಂಗ್ರಹಿಸಿ, ಕೆಲವರಿಗೆ ಜವಾಬ್ದಾರಿ ನೀಡಿ ಎಲ್ಲ ಕಾರ್ಯಕ್ರಮ ಯಶಸ್ವಿಗೊಳಿಸುತ್ತಾರೆ ಎಂದರು.ಗಡಿ ಗೌಡಗಾಂವ ಮಠದ ಶಾಂತವೀರ ಶಿವಾಚಾರ್ಯರು ಮಾತನಾಡಿ, ಮಠಗಳು ಭಕ್ತರ ಉದ್ಧಾರಕ್ಕಾಗಿ ದುಡಿಯುವ ಕೇಂದ್ರಗಳಿದ್ದಂತೆ ಮಠಗಳಿಗೆ ಭಕ್ತರಿಂದ ಬಂದ ಭಕ್ತಿಯ ಕಾಣಿಕೆಯನ್ನು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತ್ತೆ ಭಕ್ತರಿಗೆ ಮುಟ್ಟಿಸಬೇಕು. ಅದು ಸ್ವಾಮೀಜಿಗಳ ಕೆಲಸ. ಆ ಕೆಲಸವನ್ನು ಚಾಚೂ ತಪ್ಪದೆ ಶಿರಶ್ಯಾಡದ ಅಭಿನವ…

Read More

ದೇವರಹಿಪ್ಪರಗಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದಂತೆ ಸಂಸ್ಕೃತಿಕ ಕಾರ್ಯಕ್ರಮಗಳು ಸಂಸಾರಿಕ ಆಟಗಳು, ನಾಟಕಗಳು ಬಯಲಾಟಗಳು, ಸಂಪೂರ್ಣ ಮಾಯವಾಗುತ್ತಿವೆ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.ತಾಲೂಕಿನ ಯಲಗೋಡ ಗ್ರಾಮದ ಶ್ರೀ ಹಜರತ್ ಲಾಡ್ಲೆ ಮಶ್ಯಾಕ ಉರಿಸ್ ಪ್ರಯುಕ್ತ ಶ್ರೀ ಭಾಗ್ಯವಂತಿ ಸಾಂಸ್ಕೃತಿಕ ನಾಟ್ಯ ಕಲಾವಿದರ ಸಂಘ ( ರಿ ) ಮೋರಟಗಿ ಇವರ ಮಗ ಹೋದರು ಮಾಂಗಲ್ಯ ಬೇಕು ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.ಪಟ್ಟಣಗಳಲ್ಲಿ ಯುವಕರು ಅನವಶ್ಯಕ ಮೊಬೈಲ್ ಬಳಸಿ ಅದರಲ್ಲಿ ಬರುವಂತಹ ದೃಶ್ಯಗಳನ್ನು ಅಳವಡಿಸಿಕೊಂಡು ಜೀವನವೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಇಂತಹ ದಿನಮಾನದಲ್ಲಿ ಗ್ರಾಮೀಣ ಭಾಗದ ಜನರು ಜಾತ್ರಾ ಪ್ರಯುಕ್ತವಾಗಿ ಸುಂದರ ನಾಟಕ ಹಮ್ಮಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ. ಸಂಸಾರಿಕ ನಾಟಕಗಳಲ್ಲಿ ಬರುವಂತಹ ಸನ್ನಿವೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳಬೇಕು. ತಮ್ಮ ತಂದೆ ತಾಯಿಗಳು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ದ್ರೋಹ ಬಗೆಯದೆ ದುಶ್ಚಟಗಳಿಂದ ದೂರವಿದ್ದು ಸುಂದರ ಜೀವನ ಸಾಗಿಸಬೇಕು ಎಂದರು.ಕಾರ್ಯಕ್ರಮದಲ್ಲಿ ವೇದಮೂರ್ತಿ ನಿಂಗಯ್ಯ ಸ್ವಾಮಿ ಸಾನಿಧ್ಯ…

Read More