Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಕವಿರತ್ನ ಕಾಳಿದಾಸನ ಕಾವ್ಯ ರಸಾಸ್ವಾದ-೮,ಸಾಹಿತ್ಯ ಸಂಭ್ರಮ ಹಾಗೂ ಭಾರತೀಯ ಕೃಷಿ ಸಂಸ್ಕೃತಿ ವಿಶೇಷ ಕಾರ್ಯಕ್ರಮವನ್ನು ವಿಜಯಪುರದಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಡಿ.೨೨ ಹಾಗೂ ೨೩ ರಂದು ತೊರವಿ ರಸ್ತೆಯ ಶ್ರೀಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪದವಿಕಾಲೇಜ ಚೇರಮನ್ ಪ್ರೊ. ವಿ. ಡಿ.ವಸ್ತ್ರದ ಹೇಳಿದರು.ಸೋಮವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀ ಸಿದ್ದೇಶ್ವರ ಶ್ರೀಗಳ ಆಶಯದಂತೆಪ್ರತಿ ತಿಂಗಳು ದೇಶದ ಸಂಸ್ಕೃತಿ ಉಳಿವಿಗಾಗಿ ಪ್ರತಿ ತಿಂಗಳು ವಿಶೇಷ ಉಪನ್ಯಾಸಗಳನ್ನುಹಮ್ಮಿಕೊಳ್ಳಲಾಗುತ್ತಿದ್ದು, ಅದರಂತೆ ಪ್ರತಿ ವರ್ಷ ಇಂತಹ ಕಾರ್ಯಕ್ರಮನಡೆಸಲಾಗುತ್ತಿದೆ ಎಂದರು.ಇದರ ಉದ್ಘಾಟನೆಯು ೨೨ ರಂದು ನಡೆಯಲಿದೆ. ಜ್ಞಾನಯೋಗಾಶ್ರಮದಅಧ್ಯಕ್ಷ ಗುರುಗಳಾದ ಶ್ರೀ ಬಸವಲಿಂಗ ಸ್ವಾಮಿಗಳ ಪಾವನ ಸಾನಿಧ್ಯದಲ್ಲಿ, ಪರಮಪೂಜ್ಯಶ್ರೀ ನಿತ್ಯಾನಂದ ಮಹಾಸ್ವಾಮಿಗಳ ಸಮ್ಮುಖದಲ್ಲಿ ಉದ್ಘಾಟನೆಯನ್ನು ಶ್ರೀ ಸಿದ್ಧಯ್ಯಆಧುನಿಕ ಒಡೆಯರು, ಬೀದರ ಇವರು ನಡೆಸಿಕೊಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನುಎಸ್. ಎ. ಜಿದ್ದಿ ವಹಿಸಲಿದ್ದಾರೆ ಎಂದರು.ಕವಿರತ್ನ ಕಾಳಿದಾಸನ ಕಾವ್ಯ ರಸಾಸ್ವಾದ-೮ ಮೇಘದೂತ ಖಂಡಕಾವ್ಯದ ಪೂರ್ವಭಾಗದಉಪನ್ಯಾಸವನ್ನು ಸಿಕ್ಯಾಬ ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾದ ಡಾ. ಶ್ರೀಕೃಷ್ಣಕಾಖಂಡಕಿ ಅವರು ನಡೆಸಿಕೊಡಲಿದ್ದಾರೆ. ಮೇಘದೂತ…
ಬೆಂಗಳೂರು: ರಾಜ್ಯದಲ್ಲಿ ಭ್ರೂಣ ಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಮುಂದಾಗಿರುವ ಆರೋಗ್ಯ ಇಲಾಖೆ ಭ್ರೂಣ ಹತ್ಯೆ ಸುಳಿವು ನೀಡಿದವರಿಗೆ ರೂ.1 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಇದಲ್ಲದೇ ಸುಳಿವು ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದೆ.ರಾಜ್ಯದ ಯಾವುದೇ ಭಾಗದ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಸ್ಪಷ್ಟವಾಗಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದವರಿಗೆ ಒಂದು ಲಕ್ಷಣ ರೂಪಾಯಿ ಬಹುಮಾನ ಹಣ ನೀಡುತ್ತೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಇನ್ನು ಸಾರ್ವಜನಿಕರ ಸಹಾಯಕ್ಕಾಗಿ ಆರೋಗ್ಯ ಇಲಾಖೆ ಸಹಾಯವಾಣಿ ತೆರೆದಿದ್ದು, 080-25202264/65ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದೆ.ಹೆಣ್ಣು ಭ್ರೂಣ ಹತ್ಯೆ ತಡೆಗೆ ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ, ರಾಜ್ಯಮಟ್ಟದ ಕಾರ್ಯಪಡೆ ರಚನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಲಿಂಗ ಪತ್ತೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಚಿವರು, ಕಳೆದ ವರ್ಷ 1,000 ಪುರುಷರಿಗೆ 947 ಮಹಿಳೆಯರಿದ್ದರು.…
ಜಾತಿ ಗಣತಿ ಅವೈಜ್ಞಾನಿಕ | ಹೊಸ ಸಮೀಕ್ಷೆಗೆ ಪಟ್ಟು | ಮನವಿ ಪತ್ರಕ್ಕೆ 30ಕ್ಕೂ ಹೆಚ್ಚು ಶಾಸಕರ ಸಹಿ ಬೆಳಗಾವಿ: ಒಕ್ಕಲಿಗರ ಬಳಿಕ ಲಿಂಗಾಯತ ಸಮುದಾಯದ ನಾಯಕರೂ 2015ರ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ(ಜಾತಿ) ಗಣತಿ ವರದಿಯನ್ನು ವಿರೋಧಿಸಿದ್ದಾರೆ. ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ಅದನ್ನು ಸ್ವೀಕರಿಸದಂತೆ ಆಗ್ರಹಿಸಿದ್ದಾರೆ.ಶುಕ್ರವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ನಾಯಕರು ಜಾತಿ ಗಣತಿ ವರದಿ ಅಂಗೀಕರಿಸದಂತೆ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಪತ್ರಕ್ಕೆ ಸಿದ್ದರಾಮಯ್ಯ ಸರ್ಕಾರದ ಸಚಿವರಾದ ಎಂ.ಬಿ ಪಾಟೀಲ್, ಈಶ್ವರ ಖಂಡ್ರೆ, ಶಿವಾನಂದ ಪಾಟೀಲ್ ಸೇರಿದಂತೆ, ವಿವಿಧ ಪಕ್ಷಗಳ ಸುಮಾರು 30ಕ್ಕೂ ಹೆಚ್ಚು ಶಾಸಕರು ಸಹಿ ಹಾಕಿದ್ದಾರೆ ಎನ್ನಲಾಗಿದೆ.ಬಿಜೆಪಿ ಶಾಸಕರಾದ ಬಿವೈ ವಿಜಯೇಂದ್ರ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಲಕ್ಷಣ ಸವದಿ , ವಿಜಯಾನಂದ ಕಾಶಪ್ಪನವರ್, ಪಕ್ಷದ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್ ಕೂಡ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.ಹಿರಿಯ ಕಾಂಗ್ರೆಸ್ ಶಾಸಕ ಮತ್ತು ವೀರಶೈವ-ಲಿಂಗಾಯತ ಮಹಾಸಭಾದ…
ಭದ್ರತಾ ಲೋಪದ ಬಗ್ಗೆ ಅಮಿತ್ ಶಾ ಪ್ರತಿಕ್ರಿಯೆಗೆ ಪಟ್ಟು | ಲೋಕಸಭೆಯ ಇತಿಹಾಸದಲ್ಲೇ ಅಚ್ಚರಿಯ ಬೆಳವಣಿಗೆ! ನವದೆಹಲಿ: ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನವನ್ನು ಉದ್ದೇಶಿಸಿ ಮಾತನಾಡಬೇಕೆಂದು ಒತ್ತಾಯಿಸಿ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದ 30 ಪ್ರತಿಪಕ್ಷಗಳ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಅಮಾನತುಗೊಳಿಸಲಾಗಿತ್ತು. ಇದೀಗ ರಾಜ್ಯ ಸಭೆಯಿಂದ ಕೂಡ 46 ಸಂಸದರನ್ನು ಅಮಾನತು ಮಾಡಲಾಗಿದೆ. ಈ ಮೂಲಕ ಒಟ್ಟು 90 ಸಂಸದರನ್ನು ಅಧಿವೇಶನದಿಂದ ಅಮಾನತು ಮಾಡಲಾಗಿದ್ದು, ಲೋಕಸಭೆಯ ಇತಿಹಾಸದಲ್ಲೇ ಅಚ್ಚರಿಯ ಬೆಳವಣಿಗೆ ಎಂದು ಹೇಳಲಾಗಿದೆ.ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಗೃಹ ಸಚಿವರ ಹೇಳಿಕೆಗೆ ಒತ್ತಾಯಿಸಿದ 13 ವಿರೋಧ ಪಕ್ಷದ ಸಂಸದರನ್ನು ಕಳೆದ ವಾರ ಅಮಾನತು ಮಾಡಲಾಗಿತ್ತು. ಇದಲ್ಲದೆ ಇನ್ನೂ ಮೂವರು ಸಂಸದರನ್ನು ವಿಶೇಷಾಧಿಕಾರ ಸಮಿತಿ ವರದಿ ಬರುವವರೆಗೆ ಅಮಾನತುಗೊಳಿಸಲಾಗಿತ್ತು. ಇಂದು ಬೆಳಿಗ್ಗೆ ಸಂಸತ್ತಿನಲ್ಲಿ ಭದ್ರತಾ ಲೋಪದ ಬಗ್ಗೆ ಗೃಹ ಸಚಿವ ಅಮಿತ್ ಶಾ ಮಾತನಾಡುವಂತೆ ಪಟ್ಟು ಹಿಡಿದ 30 ಸಂಸದರನ್ನು…
– ದೇವೇಂದ್ರ ಕ. ಹೆಳವರ*ಪತ್ರಕರ್ತರು, ವಿಜಯಪುರ.ಮೊ.9900762949 ನಿಮ್ಮತನು ಶುದ್ಧಭಾವ ಶುದ್ಧನಡೆ ಶುದ್ಧನುಡಿ ಶುದ್ಧನುಡಿದಂತೆ ನಡೆದುತೋರಿದ ಜ್ಞಾನಯೋಗಿಯೇನಿಮಗೆ ಕೋಟಿ ಕೋಟಿ ನಮನ ನೀವುಎಂದೂಪ್ರಶಸ್ತಿ – ಪುರಸ್ಕಾರ ನಿರೀಕ್ಷಿಸಿದವರಲ್ಲಸನ್ಮಾನ ಉಡುಗೊರೆ ಬಯಸಿದವರಲ್ಲಯಾರ ಮನವೂ ನೋಯಿಸಿದವರಲ್ಲಬಿರುನುಡಿಗಳೆಂದೂಆಡಿದವರಲ್ಲ.ಬದುಕಿದರೆ ಹೀಗೆ ಬದುಕಬೇಕೆಂಬಜೀವನಪಾಠ ಕಲಿಸಿಕೊಟ್ಟಜ್ಞಾನಯೋಗಿಯೇನಿಮಗೆ ಕೋಟಿ ಕೋಟಿ ನಮನ ನೀವುಜ್ಞಾನದ ಗಣಿಶಾಂತಮೂರ್ತಿಗಿಡ- ಮರಪಶು – ಪಕ್ಷಿಪ್ರಕೃತಿಯಲ್ಲಿದೇವನ ರೂಪಕಂಡವರು.ಜಾತಿ-ಮತಪಂಥವನ್ನುಮೀರಿ ನಿಂತುಸರ್ವರನ್ನು ಸಮಭಾವದಿಂದಕಂಡ ಜ್ಞಾನಯೋಗಿಯೇ ನಿಮಗೆ ಕೋಟಿ ಕೋಟಿ ನಮನ ನೀವುಅಜ್ಞಾನದ ಅಂಧಕಾರದೂರ ಮಾಡಿ ಎಲ್ಲರಹೃದಯ- ಹೃದಯಗಳಲ್ಲಿ ಜ್ಞಾನದ ಜ್ಯೋತಿ ಬೆಳಗಿದವರು.ಎಲ್ಲರಿಗೂ ಮಧುರ ಪ್ರೀತಿಯನ್ನೇ ಹಂಚಿದವರು.ಆಧ್ಯಾತ್ಮಿಕ ಪ್ರವಚನದ ಮೂಲಕ ಜ್ಞಾನಾಮೃತ ನೀಡಿದ ಜ್ಞಾನಯೋಗಿಯೇನಿಮಗೆ ಕೋಟಿ ಕೋಟಿ ನಮನ ನಿಮ್ಮಸರಳ ಜೀವನವೇಮನುಕುಲಕೆ ಒಂದುಒಳ್ಳೆಯ ಸಂದೇಶಜಗತ್ತಿನ ಎಲ್ಲೆಡೆಆಧ್ಯಾತ್ಮಿಕ ಕಂಪು ಸೂಸಿಬಸವನಾಡಿನಕೀರ್ತಿ ಹೆಚ್ಚಿಸಿದಜ್ಞಾನಯೋಗಿಯೇನಿಮಗೆ ಕೋಟಿ ಕೋಟಿ ನಮನ
ವೀಣಾಂತರಂಗ*- ವೀಣಾ ಹೇಮಂತಗೌಡ ಪಾಟೀಲ್,* ಮುಂಡರಗಿ-ಗದಗ ಪ್ರೀತಿ ಏಕೆ ಭೂಮಿ ಮೇಲಿದೆ?? ಎಂದ ತಕ್ಷಣ ಬರುವ ಮುಂದಿನ ಸಾಲು ಬೇರೆ ಎಲ್ಲೂ ಜಾಗವಿಲ್ಲದೆ!! ಎಂದು. ಚಲನಚಿತ್ರದ ಈ ಗೀತೆ ಖಂಡಿತವಾಗಿಯೂ ನಿಜ. ಏಕೆಂದರೆ ಭೂಮಿಯನ್ನು ಹೊರತುಪಡಿಸಿ ಬೇರೆಲ್ಲೂ ಜೀವ ಸಂಕುಲದ ಉಳಿವಿನ ಅವಶೇಷಗಳು ನಮಗೆ ಪತ್ತೆಯಾಗಿಲ್ಲ. ಚಂದ್ರ ಗ್ರಹ ಮಂಗಳ ಗ್ರಹಗಳಲ್ಲಿ ಜೀವಿಗಳು ಜೀವಿಸಲು ಬೇಕಾದ ಅವಶ್ಯಕತೆಗಳು ಇವೆ ಎಂಬುದೇನೋ ಪತ್ತೆಯಾಗಿದೆ ಆದರೆ ಯಾರಾದರೂ ಜೀವಿಸಿದ್ದರೆ ಎಂದರೆ ನಮಗೆ ಇನ್ನೂ ಅದರ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಇಲ್ಲ ..ಹಾಗಾಗಿ ಸದ್ಯಕ್ಕೆ ಪ್ರೀತಿ ಏಕೆ ಭೂಮಿ ಮೇಲಿದೆ ಎಂದು ಕೇಳಿದರೆ ಬೇರೆ ಎಲ್ಲೂ ಜಾಗವಿಲ್ಲದೆ ಎಂಬುದೇ ಸರಿ. ಜಗದ ಸಾಮಾನ್ಯ ಜನರ ಪಾಲಿಗೆ ಪ್ರೀತಿ ಎನ್ನುವುದು ಮಾಯೆಯಾದರೆ , ತಾಯಂದಿರ ಪಾಲಿಗೆ ಪ್ರೀತಿ ಮಮತೆಯ ರೂಪ, ಪತಿ- ಪತ್ನಿಯರ ನಡುವಿನ ಪ್ರೀತಿಗೆ ಪ್ರೇಮ, ಅಣ್ಣ ತಮ್ಮಂದಿರ, ಅಕ್ಕ ತಂಗಿಯರ ನಡುವಿನ ಪ್ರೀತಿ ಸಹೋದರ ವಾತ್ಸಲ್ಯ ಎಂದೂ , ಹಿರಿ ಕಿರಿಯರ…
ಕೊಲ್ಹಾರ: ಹಳೇ ಗ್ರಾಮ ಕೃಷ್ಣಾ ಮೇಲ್ದಂಡೆ ಯೋಜನೆಯ ಅಡಿ ಮುಳಗಡೆಯಾಗಿ ಹೊಸ ಭರವಸೆಯಲ್ಲಿ ಪುನರ್ವಸತಿ ಕೇಂದ್ರ ನಿರ್ಮಾಣವಾಗಿ ೨೫ ವರ್ಷಗಳು ಗತಿಸುವ ಸಂದರ್ಭದಲ್ಲಿ ಕೆಲವು ಅಡೆ ತಡೆಗಳ ಮಧ್ಯದಲ್ಲಿಯೂ ಅಭಿವ್ರದ್ದಿ ಪಥದತ್ತ ಕೊಲ್ಹಾರ ಪಟ್ಟಣ ಸಾಗುತ್ತಿರುವುದು ಇಲ್ಲಿನ ಸಾರ್ವಜನರಲ್ಲಿ ಒಂದು ಕಡೆ ಸಂತಸವಾದರೆ ಇನ್ನೊಂದು ಕಡೆ ಆಗಬೇಕಾದ ಕಾಮಗಾರಿಗಳ ಪಟ್ಟಿ ದೊಡ್ಡದಾಗಿದೆ.ಬಸವನ ಬಾಗೇವಾಡಿ ಮತಕ್ಷೇತ್ರದ ನಾಲ್ಕು ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಶಿವಾನಂದ ಪಾಟೀಲರ ಪರಿಶ್ರಮದ ಫಲವಾಗಿ ವಿವಿಧ ಇಲಾಖೆಗಳ ನೂರಾರು ಕೋಟಿ ಅನುದಾನ ಮಂಜೂರಾಗಿ ಕಾಮಗಾರಿಗಳು ಭರಪೂರ ಸಾಗುತ್ತಿರುವಾಗ ಸಾರ್ವಜನಿಕರ ಸಹಕಾರ ಒಮ್ಮತದಿಂದ ಮೂಡುತ್ತಿರುವದು ಸ್ಥಳಿಯ ನಾಗರಿಕರು ಕೂಡ ಶಾಸಕರಿಗೆ ಸಹಕಾರ ಕೊಟ್ಟಂತಾಗಿದೆ ಆದರೆ ಇಲ್ಲೊಂದು ಪ್ರಶ್ನೆ ಉದ್ಬವಿಸಿದೆ.ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು ೧೭ ವಾರ್ಡುಗಳು ಇದರಲ್ಲಿ ಮೂರು ಜನ ಬಿಜೆಪಿ ಪಕ್ಷವನ್ನು ಪ್ರತಿನಿಧಿಸುವ ಸದಸ್ಯರು, ಉಳಿದಂತೆ ೧೪ ಜನ ಕಾಂಗ್ರೆಸ್ ಪಕ್ಷದ ಸದಸ್ಯರು ತಮ್ಮ ತಮ್ಮ ವಾರ್ಡುಗಳನ್ನು ಪ್ರತಿನಿಧಿಸುತ್ತಾರೆ. ಅಭಿವೃದ್ದಿ ಎಂದರೆ ಎಲ್ಲ ವಾರ್ಡುಗಳು…
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಸುಕ್ಷೇತ್ರ ಬ್ರಹ್ಮದೇವನಮಡು ಗ್ರಾಮದ ಆರಾಧ್ಶ ದೈವ ಶ್ರೀ ಬಲಭೀಮೇಶ್ವರ (ಹನುಮಾನ) ದೇವರ (ಚಟ್ಟಿ) ಕಾತಿ೯ಕೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ರಾತ್ರಿ ನೆರವೇರಿತು.ಕಾತಿ೯ಕೋತ್ಸವ ನಿಮಿತ್ಶ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಸ್ಥಾನ ವಿವಿಧ ಬಣ್ಣದ ವಿದ್ಶುತ್ ಅಲಂಕಾರ,ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ರಾತ್ರಿ ೮ ಗಂಟೆಯಿಂದ ಭಕ್ತರಿಗೆ ಭಜ್ಜಿ, ರೊಟ್ಟಿ ಪ್ರಸಾದ ವ್ಶವಸ್ಥೆ ಮಾಡಲಾಗಿತ್ತು. ಇಡೀ ರಾತ್ರಿ ಖಾನಾಪೂರ,ಹಿರೇ ಅಲ್ಲಾಪೂರ, ಹೊನ್ನಳ್ಳಿ, ಮಾಗಣಗೇರಾ, ಕಣಮೇಶ್ವರ ಭಜನಾ ಮಂಡಳಿಯವರು ಭಜನಾ ಸೇವೆ ಸಲ್ಲಿಸಿದರು.ಅಚ೯ಕರಾದ ನಿಂಗಣ್ಣಾಚಾಯ೯ ಜೋಶಿ,ಸಿದ್ದಯ್ಶ ಮಠ, ಮುಖಂಡ ರುದ್ರಣ್ಣಸಾಹು ಮಾನಶೆಟ್ಟಿ, ಕಮೀಟಿ ಅಧ್ಶಕ್ಷ ರೇವಣಸಿದ್ದಸಾಹು ಕೋರವಾರ, ಮಲ್ಲಿಕಾಜು೯ನ ಮನಗೂಳಿ, ದೇವಿಂದ್ರ ತೊನಶ್ಶಾಳ, ಚಂದ್ರಶೇಖರ ಮನಗೂಳಿ, ಎಚ್.ಕೆ.ಸೀತನೂರ, ಬಾಲಚಂದ್ರ ಕರಿಕಲ್ಲ್, ಎಸ್.ವೈ.ಅಮರಗೋಳ, ನಡಗೇರಪ್ಪ ತಳವಾರ, ಮಲ್ಲಿಕಾಜು೯ನ ಕೊಟಾರಗಸ್ತಿ, ನಾನಾಗೌಡ ಪಾಟೀಲ, ಮಲ್ಲಪ್ಪ ಪೂಜಾರಿ, ನಾಗಣ್ಣ ಪಡೆಕನೂರ, ಕರೇಪ್ಪ ಅಮರಗೋಳ, ಶಿವಪ್ಪ ಕರಿಕಲ್ಲ್, ಡಿ.ಬಿ.ಸೀತನೂರ, ವೀರಭದ್ರ ಬಡಿಗೇರ, ಪತ್ರಕತ೯ ಮಲ್ಲು ಕೆಂಭಾವಿ, ಲಾಲಸಾ ರಾಜಾಕೋಳ, ಚಂದ್ರಶೇಖರ…
ಮೋರಟಗಿ: ಗ್ರಾಮದ ಆರಾಧ್ಯದೇವ ಶ್ರೀ ವೀರಭದ್ರೇಶ್ವರ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವಾದ್ಯ ವೈಭವದೊಂದಿಗೆ ಬಹಳಷ್ಟು ವಿಜೃಂಭಣೆಯಿಂದ ಜರುಗಿತು. ಜಾತ್ರೆಯಲ್ಲಿ ಸಿಂದಗಿ ಶಾಸಕ ಅಶೋಕ ಮನಗೂಳಿ ಪಾಲ್ಗೊಂಡಿದ್ದರು.ಶನಿವಾರ ಭಕ್ತರು ಶ್ರೀ ವೀರಭದ್ರೇಶ್ವರ ಮೂರ್ತಿ ಪಲ್ಲಕ್ಕಿಯೊಂದಿಗೆ ಸಮೀಪದ ಭೀಮಾ ನದಿಯಲ್ಲಿ ಗಂಗಾಸ್ನಾನ ಮುಗಿಸಿಕೊಂಡು ಪಲ್ಲಕ್ಕಿ ಮೂಲ ಸ್ಥಳಕ್ಕೆ ತಲುಪಿತು ರವಿವಾರ ಬೆಳಗಿನಜಾವ ೫.೩೦ ಗಂಟೆಗೆ ಮೋರಟಗಿ ಸೇರಿದಂತೆ ವಿವಿಧ ಜಿಲ್ಲೆಯ ವೀರಭದ್ರೇಶ್ವರ ಭಕ್ತಾದಿಗಳು ಅಗ್ನಿ ಸ್ಪರ್ಶ ಮಾಡಿದರು ಅಗ್ನಿ ಸ್ಪರ್ಶದಲ್ಲಿ ಮಹಿಳೆಯರು ಕೂಡಾ ಇದ್ದರು.*ಪುರವಂತರ ಆಗಮನ*:ಗುಲ್ಬರ್ಗ, ವಿಜಯಪುರ ಶಾಹಾಪುರ ಇಂಡಿ ಮಂದೇವಾಲ, ಜೇವರ್ಗಿ ಕಕ್ಕಳಮೆಲಿ, ಹಂಚಿನಾಳ, ನ್ಯಾವನೂರ, ಮಲಘಾಣ ಗಾಬಸಾವಳಗಿ, ಸೇರಿದಂತೆ ವಿವಿಧ ತಾಲೂಕಿನಿಂದ ಪುರವಂತರು ಆಗಮಿಸಿ ವಿಶಿಷ್ಟ ರೀತಿಯಲ್ಲಿ ಸಸ್ತ್ರ ಹಾಕಿ ಗಮನ ಸೆಳೆದರು.*ವೀರಭದ್ರೇಶ್ವರ ಪಲ್ಲಕ್ಕಿ ಮೆರವಣಿಗೆ:* ಬೆಳಗಿನ ಜಾವ ಅಗ್ನಿಸ್ಪರ್ಶ ಮುಗಿದ ನಂತರ ಪಲ್ಲಕ್ಕಿ ಮೆರವಣಿಗೆ ಪ್ರಾರಂಭವಾಗಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಡೊಳ್ಳು ಕುಣಿತ, ಕುದುರೆ ಕುಣಿತದೊಂದಿಗೆ ಸಂಚರಿಸಿ ಮದ್ಯಾನ್ಹ ೨ ಗಂಟೆಗೆ ಗುಡಿ ಸೇರಿತು. ನಂತರ…
ವಿಜಯಪುರ: ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ ಹಾಗೂ ನಗರದವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ವತಿಯಿಂದ ನಡೆದ ತಾಲ್ಲೂಕ ಮಟ್ಟದ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಿಇಓ ಬಸವರಾಜ ತಳವಾರ ಪ್ರಶಸ್ತಿ ಪತ್ರ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಪ್ರತಿ ಮಗುವಿನಲ್ಲೂ ಒಂದು ವಿಶೇಷ ಪ್ರತಿಭೆ ಇದ್ದೇ ಇರುತ್ತದೆ. ಆ ಪ್ರತಿಭೆಯನ್ನು ಹೊರ ಹಾಕಲು ಪ್ರತಿಭಾ ಕಾರಂಜಿ ವೇದಿಕೆ ಸಹಕಾರಿಯಾಗಿದ್ದು, ಜಿಲ್ಲಾ ಮಟ್ಟದಲ್ಲೂ ಸಹ ಆಯ್ಕೆಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಶಡಶ್ಯಾಳ, ಖಜಾಂಚಿ ಜುಬೇರ ಕೇರೂರ, ನಾರಾಯಣ ಬಂಡಗಾರ, ಎ.ಎಪ್.ಅರಳಿಮಟ್ಟಿ, ಬಸಿರ್ ನದಾಪ್, ಎ.ಎಸ್.ಹಕ್ಕಿ, ವೀರಭದ್ರಪ್ಪ, ಬಸವರಾಜ ಗಿರಿನಿವಾಸ, ಶಿಕ್ಷಕರು ಹಾಗೂ ಮಕ್ಕಳು ಇದ್ದರು.
