ಇಂಡಿ: ಬಿಜೆಪಿ ಪಕ್ಷದ ಪ್ರಧಾನಿಯ ಗುರಿ, ಇಚ್ಛೆ, ಕನಸು ನನಸು ಮಾಡಿರುವ ಕರ್ನಾಟಕದ ಒಬ್ಬ ಸಂಸದ ಎಂದರೇ ತಪ್ಪೇನಿಲ್ಲ. ಅಂತಹ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವ ಬಗ್ಗೆ ಅನುಮಾನಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಪತ್ರಿಕಾ ಮಾದ್ಯಮದ ಮೂಲಕ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡಲು ಸಂಘದ ಪದಾಧಿಕಾರಿಗಳು ಬುಧವಾರ ಆಗ್ರಹಿಸಿದರು.
ಸುಮಾರು ವರ್ಷಗಳ ಪ.ಪಂ ಮೀಸಲಾತಿಗಾಗಿ ಅನೇಕ ರೀತಿಯಲ್ಲಿ ತಳವಾರ & ಪರಿವಾರ ಸಮುದಾಯ ಹೋರಾಟ, ಪ್ರತಿಭಟನೆ ಮಾಡಿದ್ರೂ ಯಾರೂ ನ್ಯಾಯ ಕೊಡಿಸುವ ಪ್ರಯತ್ನ ಮಾಡಿರಲಿಲ್ಲ. ಆದರೆ ಸಂಸದ ಪ್ರತಾಪ್ ಸಿಂಹ ನುಡಿದಂತೆ ನಡೆದು ಈ ಸಮುದಾಯಕ್ಕೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಶೋಷಿತ ಸಮುದಾಯ ಬಗ್ಗೆ ಇರುವ ಕಾಳಜಿ ಅರ್ಥವಾಗುತ್ತೆ. ಬೆಂಗಳೂರು ಮತ್ತು ಮೈಸೂರು ದಶಪಥ ಹೆದ್ದಾರಿ, ಐತಿಹಾಸಿಕ ಮೈಸೂರು ಜಿಲ್ಲೆಗೆ 13 ರೈಲುಗಳು ಪ್ರಯಾಣ ಬೆಳೆಸುವಂತೆ ಮಾಡಿರುವ ಕೀರ್ತಿ ಸಂಸದರಿಗೆ ಸಲ್ಲುತ್ತದೆ. ರಾಜಕೀಯ ಮಾಡುವವರ ರಾಜಕಾರಣಿಗಳ ಮಧ್ಯೆ, ಸಾಮಾಜಿಕ ಮತ್ತು ಅಭಿವೃದ್ಧಿ ಪ್ರಗತಿಯ ಕೆಲಸ ಕಾರ್ಯ ಮಾಡಿರುವ ಹೃದಯವಂತ, ರಾಜ್ಯದಲ್ಲಿ ಒಂದು ಪ್ರಬಲ ಸಮುದಾಯದಲ್ಲಿ ಹುಟ್ಟಿದರೂ ಜಾತಿ ರಾಜಕೀಯ ಮಾಡದ ರಾಜಕಾರಣಿ. ಹಾಗಾಗಿ ಇಂತಹ ” ಯಂಗ್ ಲೀಡರ್, ಫಯರ್ ಬ್ರಾಂಡ್ ಯುವಕರಿಗೆ ಮಾದರಿಯಾಗಿರುವ ಒಬ್ಬ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ಕೊಡಲು ಮನವಿ ಮಾಡಿಕೊಳ್ಳುತ್ತೇವೆ. ಒಂದು ವೇಳೆ ಟಿಕೇಟ್ ನೀಡದಿದ್ದಲ್ಲಿ ನಾವು ಕೂಡಾ ಖಡಾಖಂಡಿತವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿರಾಸೆ ಮೂಡಿಸುತ್ತೇವೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಸಿದ್ದಪ್ಪ ತಳವಾರ, ನ್ಯಾಯವಾದಿ ಎಸ್ ಬಿ ಕೆಂಬೊಗಿ, ಡಾ. ಸುರೇಶ್ ವಿಜಯಪುರ, ಶಂಕರಲಿಂಗ ಜಮಾದಾರ, ಗ್ರಾ.ಪಂ ಮಾಜಿ ಸದಸ್ಯ ಬಿ.ಟಿ, ನಾಯಕೋಡಿ, ದ್ಯಾಮಣ್ಯ ಜಮಾದಾರ, ಸೋಮು ಜಮಾದಾರ, ಮಲ್ಲಿಕಾರ್ಜುನ ಹೋರ್ತಿ, ನಿಂಗಪ್ಪ ತಿಳಗೋಳ, ಶಿವಶರಣ ನಾಟೀಕಾರ, ಸುರೇಶ ತಳವಾರ, ಸುರೇಶ ಡೊಂಗೊಜ್, ಈರಣ್ಯ ಕೋಳಿ (ಹಡಲಸಂಗ) ರವಿ ರಾಯಜಿ, ಸಂತೋಷ ಕೋಳಿ, ಸುನೀಲ ವಾಲಿಕಾರ, ಕಾಶಿನಾಥ ನಾಯಕೋಡಿ, ಚಂದ್ರು ತಳವಾರ, ಬಸವರಾಜ ನಾಯಕೋಡಿ, ರೇವಣ್ಣ ಹತ್ತಳ್ಳಿ, ರಾಮಚಂದ್ರ ಕೋಳಿ, ವಿಶ್ವನಾಥ ಮಣಗಿರಿ,ಶಿವರಾಯ ಕೋಳಿ, ಸೋಮು ಕೋಳಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
