Subscribe to Updates
Get the latest creative news from FooBar about art, design and business.
Author: editor.udayarashmi@gmail.com
ದೇವರಹಿಪ್ಪರಗಿ: ವೀರಭದ್ರೇಶ್ವರ ೧೧ನೇ ವರ್ಷದ ಕಾರ್ತೀಕೋತ್ಸವ ಪುರವಂತರ ಸೇವೆ ಹಾಗೂ ಪಲ್ಲಕ್ಕಿ ಉತ್ಸವದೊಂದಿಗೆ ಸಂಪನ್ನಗೊಂಡಿತು.ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಕಾರ್ತೀಕೋತ್ಸವ ಹಾಗೂ ಪ್ರವಚನ ಮಂಗಲದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಪುರವಂತರ ಸೇವೆ ಹಾಗೂ ಪಲ್ಲಕ್ಕಿ ಉತ್ಸವ ಭಕ್ತ ಸಮೂಹದ ಸಮ್ಮುಖದಲ್ಲಿ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭಗೊಂಡಿತು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಲ್ಮೇಶ್ವರ ದೇವಸ್ಥಾನದ ಗಂಗಾಸ್ಥಳ ತಲುಪಿತು. ಪುನಃ ವೀರಭದ್ರೇಶ್ವರ ದೇವಸ್ಥಾನಕ್ಕೆ ಮರಳಿತು. ನಂತರ ಮಹಾಪ್ರಸಾದ ವಿತರಣೆಯಾಯಿತು. ಸಾಯಂಕಾಲ ಭಕ್ತರು ಭಕ್ತಿ, ಭಾವದೊಂದಿಗೆ ದೀಪ ಬೆಳಗಿಸಿ ಕಾರ್ತೀಕೋತ್ಸವ ಆಚರಿಸಿದರು.ಸಮಿತಿಯ ಸಿ.ಕೆ.ಕುದರಿ, ಪ್ರಭುದೇವ ಹಿರೇಮಠ, ಜಗದೇವಪ್ಪ ಬಿರಾದಾರ, ಯಲಗೂರೇಶ ದೇವೂರ, ಮಡಿವಾಳಪ್ಪ ಮಣೂರ, ರಮೇಶ ಮಶಾನವರ, ರವಿ ಯಾಳಗಿ, ಈರಣ್ಣ ಧುತ್ತರಗಾಂವಿ, ವಿನೋದ ನಾಶಿಮಠ, ಮಡಿವಾಳಯ್ಯ ನಾಶೀಮಠ, ಸಂಗನಗೌಡ ಪಾಟೀಲ, ಬಾಬುಗೌಡ ಪಾಟೀಲ ತೇಜಪ್ಪ ಕಕ್ಕಳಮೇಲಿ, ವೀರಭದ್ರಯ್ಯ ಮಲ್ಲಿಕಾರ್ಜುನಮಠ, ಪ್ರಕಾಶ ಮಾಳನೂರ, ಈರಪ್ಪ ಹೊಸಮನಿ, ಪ್ರಸಾದ ಬಡಿಗೇರ, ಪ್ರಕಾಶ ಮಣೂರ, ವೀರಣ್ಣ ಮಣೂರ, ರಾಜು ಮಿರಗಿ, ಶೇಖರ ವಾಡೇದಮನಿ, ತುಕಾರಾಮ ಮಾಳದಕರ, ಅಜ್ಜಯ್ಯ ಹಿರೇಮಠ, ಗುರುಪಾದ ಬುದ್ನಿ,…
ವಿಜಯಪುರ: ವೃಕ್ಷೊಥಾನ್ ಹೆರಿಟೇಜ್ ರನ್- 2023 ಕ್ರೇಜ್ ಹೆಚ್ಚಾಗತೊಡಗಿದ್ದು, ದೇಶದ ಮೂಲೆ ಮೂಲೆಗಳಿಂದ ಈಗಲೂ ಕೂಡ ಹಿರಿಯ ನಾಗರಿಕರು ಪಾಲ್ಗೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.ಪುಣೆಯ 66 ವರ್ಷದ ಶರದ ಚವ್ಹಾಣ ಈಗ ಮ್ಯಾರಾಥಾನ್ ನಲ್ಲಿ ಹಿರಿಯರ ವಿಭಾಗದಲ್ಲಿ ಅವರದೇ ಆದ ಸಾಧನೆಯ ಮೂಲಕ ಹೆಸರು ಮಾಡಿದ್ದಾರೆ. ಸೇವಾ ನಿವೃತ್ತಿಯ ಬಳಿಕ 60ನೇ ವಯಸ್ಸಿಗೆ ಮ್ಯಾರಾಥಾನ್ ಕುರಿತು ಆಸಕ್ತಿ ಬೆಳೆಸಿಕೊಂಡಿರುವ ಎಂಬುವರು ಈಗ ಈ ಬಾರಿಯ ವೃಕ್ಷೊಥಾನ್ ಹೆರಿಟೇಜ್ ರನ್- 2023ರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 2017ರಲ್ಲಿ ಮಹಾರಾಷ್ಟ್ರದ ಸಾತಾರದಲ್ಲಿ ನಡೆದ ಗುಡ್ಡಗಾಡು ಮ್ಯಾರಾಥಾನ್ ನಲ್ಲಿ ಪಾಲ್ಗೊಂಡು ಗಮನ ಸೆಳೆದ ನಂತರ ಇವರು ಈಗ ಹಲವಾರು ಓಟಗಳಲ್ಲಿ ಪಾಲ್ಗೊಂಡಿದ್ದಾರೆ.ಜಗತ್ತಿನಲ್ಲಿಯೇ ಅತೀ ಹೆಚ್ಚಿನ ಎತ್ತರ ಪ್ರದೇಶಗಳಲ್ಲೊಂದು ಹಾಗೂ ಓಟಗಾರರಿಗೆ ಅತ್ಯಂತ ಕಠಿಣವಾಗಿರುವ ಲಡಾಕ್ ಸೇರಿದಂತೆ ಈವರೆಗೆ ಇವರು 32 ನಾನಾ ಮ್ಯಾರಾಥಾನ್ ಗಳಲ್ಲಿ ಪಾಲ್ಗೋಂಡ ಹಿರಿಯ ಓಟಗಾರ ಎಂದೂ ಹೆಸರು ಮಾಡಿದ್ದಾರೆ. ಟಾಟಾ ಪ್ರೊಕ್ಯಾಮ್ ಆಯೋಜಿಸುವ ಫುಲ್ ಮ್ಯಾರಾಥಾನ್ ಗಳಲ್ಲಿಯೂ ಪಾಲ್ಗೊಂಡಿರುವ ಅವರು, ಬೆಂಗಳೂರು, ದೆಹಲಿ, ಕೊಲ್ಕೊತಾ…
ವಿಜಯಪುರ: ನಗರದ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ 1993ರಲ್ಲಿ ಎಂಬಿಬಿಎಸ್ ಪ್ರವೇಶ ಪಡೆದ ವೈದ್ಯಕೀಯ ವಿದ್ಯಾರ್ಥಿಗಳ 30ನೇ ವರ್ಷದ ಸ್ನೇಹ ಸಂಗಮ (1993-2023) ಮತ್ತು ಗುರುವಂದನೆ ಕಾರ್ಯಕ್ರಮ ಡಿಸೆಂಬರ್ 23 ರಂದು ಶನಿವಾರ ನಡೆಯಲಿದೆ.ಬಿ.ಎಲ್.ಡಿ.ಇ ಆಸ್ಪತ್ರೆಯ ಹೊಸ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗ ಕಟ್ಟಡದ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇಶದ ನಾನಾ ಭಾಗಗಳಲ್ಲಿ ಮತ್ತು ವಿದೇಶಗಳಲ್ಲಿ ನೆಲೆಸಿರುವ 1993ನೇ ಬ್ಯಾಚಿನ ಸುಮಾರು 100 ವಿದ್ಯಾರ್ಥಿಗಳು ಪಾಲ್ಗೋಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾರ್ಜನೆ ಮಾಡಿಸಿದ ಸುಮಾರು 35 ಜನ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಗುವುದು ಎಂದು ಎಂದು 1993ನೇ ಬ್ಯಾಚಿನ ವಿದ್ಯಾರ್ಥಿ ಮತ್ತು ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ…
Udayarashmi kannada daily newspaper
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಭೀತಿ ಹಿನ್ನೆಲೆ ಸರ್ಕಾರದ ಮಾರ್ಗಸೂಚಿಯಂತೆ ಕೆಎಲ್ ಆರ್ ಟಿಸಿ ಮತ್ತಿ ಬಿಎಂಟಿಸಿ ಬಸ್ಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ, ಸರ್ಕಾರದ ಆದೇಶವನ್ನು ನಾವು ಕಟ್ಟನಿಟ್ಟಾಗಿ ಪಾಲನೆ ಮಾಡುತ್ತೇವೆ. ಇಂದು ಕೇಂದ್ರ ಆರೋಗ್ಯ ಸಚಿವರ ಜೊತೆ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆದಿದೆ. ಸಭೆಯಲ್ಲಿ ಸಲಹೆ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.ಕೇಂದ್ರ ಸರ್ಕಾರದ ಆದೇಶದಂತೆ ಮುಜರಾಯಿ ಇಲಾಖೆ ಹಾಗೂ ಸಾರಿಗೆ ನಿಗಮಗಳಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರೂ ಮಾಸ್ಕ್ ಧರಿಸಿ ಪ್ರಯಾಣಿಸಿ ಎಂದು ಮನವಿ ಮಾಡಿದರು.ಕೇರಳದಲ್ಲಿ ಕೋವಿಡ್ ಆರ್ಭಟ ಹಿನ್ನೆಲೆ ಕೆಎಸ್ಆರ್ಟಿಸಿ ಮತ್ತೆ ಅಲರ್ಟ್ ಆಗಿದ್ದು, ಕೇರಳದಿಂದ ಬರುವ ಹಾಗೂ ಹೋಗುವ ಬಸ್ಸುಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಿಸಲು ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ. ಅದರಂತೆ ಅಧಿಕಾರಿಗಳು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.
ಬುಧವಾರ 20 ಪ್ರಕರಣಗಳು ಪತ್ತೆ | ಇಬ್ಬರು ಸಾವು | ಸಕ್ರೀಯ ಪ್ರಕರಣಗಳ ಸಂಖ್ಯೆ 92ಕ್ಕೆ ಏರಿಕೆ | ಪಾಸಿಟಿವಿಟಿ ಪ್ರಮಾಣ ಶೇ.2.49 ಬೆಂಗಳೂರು: ಕಳೆದ ಎರಡು ವರ್ಷಗಳಿಂದ ದೂರವಾಗಿದ್ದ ಮಹಾಮಾರಿ ಕೊರೋನಾ ಇದೀಗ ಮತ್ತೆ ತನ್ನ ಆರ್ಭಟ ಶುರು ಮಾಡಿಕೊಂಡಿದೆ.ಬುಧವಾರ ರಾಜ್ಯದಲ್ಲಿ 20 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.ಈ ಮಧ್ಯೆ ರಾಜ್ಯದಲ್ಲಿ ಬುಧವಾರ ಒಂದೇ ದಿನ 22 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಕೊರೋನಾ ಸಕ್ರೀಯ ಪ್ರಕರಣಗಳ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 19, ಬಳ್ಳಾರಿಯಲ್ಲಿ 2, ದಕ್ಷಿಣ ಕನ್ನಡದಲ್ಲಿ 1 ಪ್ರಕರಣ ಪತ್ತೆಯಾಗಿದೆ.ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 808 ಪರೀಕ್ಷೆಗಳನ್ನು ಮಾಡಲಾಗಿದ್ದು, ಇವುಗಳಲ್ಲಿ 407 ಆರ್ಟಿ-ಪಿಸಿಆರ್ ಮತ್ತು 401 ರಾಪಿಡ್ ಆಂಟಿಜೆನ್ ಪರೀಕ್ಷೆಗಳಾಗಿವೆ. ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣವು 2.49 ಪ್ರತಿಶತದಷ್ಟಿದ್ದರೆ, ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 10 ರಷ್ಟಿದೆ ಎಂದು ಅದು ಹೇಳಿದೆ.ಈ ಪೈಕಿ 72 ಮಂದಿಗೆ ಹೋಮ್ ಐಸೋಲೇಷನ್ನಲ್ಲಿ…
ಚಿಮ್ಮಡ: ಅರಣ್ಯ ಇಲಾಖೆಯಿಂದ ಬೆಳಗಾವಿ ಜಿಲ್ಲೆಯ ಘಟಪ್ರಭಾ ಪಕ್ಷಿಧಾಮದಲ್ಲಿ ಉತ್ತಮ ಕಾರ್ಯನಿರ್ವಹಿಸಿದಕ್ಕಾಗಿ ಗ್ರಾಮದ ವಾಸುದೇವ ಇಗವೆಯವರಿಗೆ ಮಾನವರತ್ನ ರಾಜ್ಯ ಪ್ರಶಸ್ತಿ ನೀಡಲಾಗಿದೆ.ಮೈಸೂರಿನ ಮಾನವ ಹಕ್ಕುಗಳ ಸೇವಾ ಸಮೀತಿ ತನ್ನ ಏಳನೇಯ ವಾರ್ಷಿಕೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಬ್ರಹತ್ ಕಾರ್ಯಕ್ರಮದಲ್ಲಿ ಘಟಪ್ರಭಾ ಪಕ್ಷಿಧಾಮದಲ್ಲಿ ಕಳೆದ ಹಲವು ವರ್ಷಗಳ ಉತ್ತಮ ಸೇವೆಯನ್ನು ಪರಿಗಣಿಸಿ ಸೇವಾಕ್ಷೇತ್ರದ “ಮಾನವರತ್ನ” ಪ್ರಶಸ್ತಿ ನೀಡಿ ಗೌರವಿಸಿದೆ.
ಚಿಮ್ಮಡ: ಶಫರ್ಡ ಇಂಡಿಯಾ ಇಂಟರನ್ಯಾಶನಲ್ ಸಂಘಟಣೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಇಲ್ಲಿನ ಗ್ರಾಪಂ ಸದಸ್ಯ ಮಹಾಲಿಂಗ ಮಾಯಣ್ಣವರರನ್ನು ನೇಮಕಗೊಳಿಸಲಾಗಿದೆ.ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥರವರು ರಾಷ್ಟ್ರೀಯ ಅಧ್ಯಕ್ಷರಾಗಿರುವ ಈ ಸಂಘಟನೆಯಿಂದ ಇತ್ತೀಚೆಗೆ ಲೋಕಾಪುರದಲ್ಲಿ ನಡೆದ ಬ್ರಹತ್ ಸಮಾವೇಶದಲ್ಲಿ ಎಚ್ ವಿಶ್ವಣಾಥರವರು ಕಾಶೀನಾಥ ಹುಡೇದರನ್ನು ಜಿಲ್ಲಾಧ್ಯಕ್ಷರನ್ನಾಗಿ, ಮಹಾಲಿಂಗ ಮಾಯಣ್ಣವರರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೆಮಕಗೊಳಿಸಿದ್ದಾರೆ.
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯತಿ ವ್ಶಾಪ್ತಿಯ ಬಸವ ವಸತಿ ಯೋಜನೆಯಡಿ ಆಶ್ರಯ ಮನೆಗಳ ಫಲಾನುಭವಿಗಳ ಆಯ್ಕೆ ವಿಶೇಷ ಗ್ರಾಮ ಸಭೆ ಗ್ರಾಪಂ ಅಧ್ಶಕ್ಷ ಸಂಗನಗೌಡ ಬಿರಾದಾರ ಅವರ ಅಧ್ಶಕ್ಷತೆಯಲ್ಲಿ ಶ್ರೀ ಕಲ್ಶಾಣದ್ದೇಶ್ವರ ಮಠದ ಆವರಣದಲ್ಲಿ ಬುಧವಾರ ನಡೆಯಿತು.ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ ಮಾತನಾಡಿ, ಗ್ರಾಪಂ ವ್ಶಾಪ್ತಿಯ ಹೊನ್ನಳ್ಳಿ, ಬ್ರಹ್ಮದೇವನಮಡು, ಖಾನಾಪೂರ, ಕರವಿನಾಳ ಗ್ರಾಮಗಳಲ್ಲಿ ಬಸವ ವಸತಿ ಯೋಜನೆಯಡಿ ೭೬ ಮನೆಗಳ ಹಂಚಿಕೆ ಪ್ರಕ್ರಿಯೆ ಪಾರದಶ೯ಕವಾಗಿ ಅಹ೯ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ ಎಂದರು.ಈ ಸಂದಭ೯ದಲ್ಲಿ ತಾಲೂಕು ಅರಣ್ಶಾಧಿಕಾರಿ, ಗ್ರಾಪಂ ನೋಡಲ್ ಅಧಿಕಾರಿ ಎಂ.ವೈ.ಮಲ್ಕಣ್ಣನವರ, ಗ್ರಾಪಂ ಉಪಾಧ್ಶಕ್ಷೆ ಮುನ್ನಿ ಸಾಹೇಪಟೇಲ ಮುರಡಿ, ಕಾಯ೯ದಶಿ೯ ಚಾಂದಾಬಾಷಾ ಕೊರಬು, ತಿಪ್ಪಯ್ಶ ನೆಲ್ಲಗಿಮಠ, ಸೋಮನಗೌಡ ಚಿರಲದಿನ್ನಿ, ದೇವಿಂದ್ರ ತೊನಶ್ಶಾಳ, ಕಲ್ಲಪ್ಪಗೌಡ ಪಾಟೀಲ, ಮರೇಪ್ಪ ಚಲುವಾದಿ, ಕಂಪ್ಶೂಟರ್ ಆಪರೇಟರ್ ಅಂಬ್ರಿಶ ಪಾಟೀಲ, ಹಣಮಂತ್ರಾಯಗೌಡ ಬಿರಾದಾರ, ಸಂಗನಗೌಡ ಪಾಟೀಲ, ಬಸನಗೌಡ ಉಳ್ಳೆಸೂರ, ಚಂದ್ರು ಕೆಂಭಾವಿ, ಹಣಮಂತ ಯಂಟಮಾನ, ಬಂದೇನಮಾಜ ಸೀತನೂರ, ಡಿ.ಕೆ.ಸೀತನೂರ, ಮಶ್ಶಾಕ ನಾಯ್ಕೋಡಿ, ನಜೀರಸಾಬ ನಾಯ್ಕೋಡಿ, ಆನಂದ ದೊಡ್ಡಮನಿ…
ಅಮೋಘಸಿದ್ದೇಶ್ವರ ಪುರಾಣ ಮಂಗಲ | ಕಾಂಗ್ರೆಸ್ ಮುಖಂಡ ರವಿರಾಜ ದೇವರಮನಿ ಅಭಿಮತ ಬ್ರಹ್ಮದೇವನಮಡು: ಸಮಾಜದಲ್ಲಿ ಪ್ರತಿಯೊಬ್ಬರೂ ಧಾಮಿ೯ಕ ಕಾಯ೯ಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದು ಎಂದು ಗೋಲಗೇರಿಯ ಕಾಂಗ್ರೆಸ್ ಮುಖಂಡ ರವಿರಾಜ ದೇವರಮನಿ ಹೇಳಿದರು.ಸಿಂದಗಿ ತಾಲೂಕಿನ ಸುಕ್ಷೇತ್ರ ಯಂಕಂಚಿ ಕುಂಟೋಜಿ ಹಿರೇಮಠದಲ್ಲಿ ೪೬ನೇ ವಷ೯ದ ಲಿಂ.ಶ್ರೀ ರುದ್ದಮುನಿ ಶಿವಾಚಾಯ೯ರ ಪುಣ್ಶಾರಾಧನೆ ಅಂಗವಾಗಿ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಅಮೋಘಸಿದ್ದೇಶ್ವರ ಪುರಾಮ ಮಹಾಮಂಗಲ ಕಾಯ೯ಕ್ರಮದಲ್ಲಿ ಮಾತನಾಡಿದರು.ವಿವಿಧ ಜಾತಿ, ಧಮ೯, ಮತ, ಜನಾಂಗದ ಮಧ್ಶೆ ಭಾವೈಕ್ಶ ಹಾಗೂ ಸೌಹಾದ೯ ಮೂಡಿಸಲು ಪುರಾಣ-ಪ್ರವಚನ ಕಾಯ೯ಕ್ರಮಗಳು ಅವಶ್ಶ. ಕೃಷಿ ಪ್ರಧಾನವಾದ ನಾಡಿನಲ್ಲಿ ಸಂಪ್ರದಾಯ, ಧಮಾ೯ಚರಣೆಗಳು, ಪುರಾಣ ಪ್ರವಚನ ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಧಾಮಿ೯ಕ ಸಂಸ್ಕಾರ, ನೈತಿಕ ಮೌಲ್ಯಗಳು ಮನವರಿಕೆ ಮಾಡುವುದು ಅವಶ್ಶವಾಗಿದೆ ಎಂದರು.ಕಡಕೋಳ ಮಡಿವಾಳೇಶ್ವರ ಮಹಾ ಮಠದ ಡಾ.ರುದ್ರಮುನಿ ಶಿವಾಚಾಯ೯ರು, ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾಯ೯ರು ಆಶೀವ೯ಚನ ನೀಡಿ, ಮಠ ಮಂದಿರಗಳಲ್ಲಿ ಇಂತಹ ಆಧ್ಶಾತ್ಮಿಕ ಚಿಂತನೆ, ಮಹಾಪುರುಷರ ಜೀವನ ಚರಿತ್ರೆಯ ಪುರಾಣ ಪ್ರವಚನದಿಂದ ಆಧ್ಶಾತ್ಮಿಕ ಚಿಂತನೆ…
