Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ: ಗರ್ಭಿಣಿಯರು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಂಡು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಡಾ|| ಪ್ರೀತಿ ಕೋಳೆಕರ ಹೇಳಿದರು.ಪಟ್ಟಣದ ತಾಲೂಕ ಸಾರ್ವಜನಿಕ ಆಸ್ಪತ್ರೆ, ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕ ಬೇವನೂರು ಹಾಗೂ ಸರಕಾರೇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕ ಆಸ್ಪತ್ರೆ ಇಂಡಿ ಸಭಾಭವನದಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ, ಜೊತೆಗೆ ಎಚ್ಐವಿ, ಸಿಪಿಲಿಸ್, ಹೆಪಟೈಟಿಸ್ ಕಾಯಿಲೆಯ ಕುರಿತು ಜಾಗೃತಿ ಆಂದೋಲನ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದರು.ಸೀಮಂತ ಕಾರ್ಯ ಒಂದು ಭಾವನಾತ್ಮಕ ಸಂಬಂಧ ಹೊಂದಿದ್ದು, ಮಹಿಳೆ ತನ್ನ ಚೊಚ್ಚಲ ಕುಡಿಯನ್ನು ಗರ್ಭದಲ್ಲಿ ಹೊತ್ತು ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಕಾರ್ಯಕ್ರಮ ಎಂದ ಅವರು, ಗರ್ಭಿಣಿಯರು ಟಿವಿ ವೀಕ್ಷಣೆಯಿಂದ ದೂರವಿರಬೇಕು. ಅದು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ. ಸರಕಾರ ಗರ್ಭಿಣಿಯರ ದೈಹಿಕ ಆರೋಗ್ಯದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು, ಮಾನಸಿಕ ಆರೋಗ್ಯದ ಕಡೆಗೂ ಅತಿ ಹೆಚ್ಚಿನ ಗಮನ ಕೊಡಬೇಕಿದೆ. ಗರ್ಭಿಣಿಯರು ಧನಾತ್ಮಕವಾಗಿ, ಉತ್ತಮ ಆಲೋಚನೆ ಹೊಂದಬೇಕು ಎಂದರು.ದಂತ ವೈದ್ಯಾಧಿಕಾರಿ…
ಇಂಡಿ: ತಾನು ಕೇವಲ ತುಂಬಿದ ಹೊಳೆಯಲ್ಲಿ ಡೋಣಿಗೆ ಹುಟ್ಟು ಹಾಕುವ ಅಂಬಿಗ ಮಾತ್ರವಲ್ಲ ಭವಸಾಗರದಲ್ಲಿ ಹುಟ್ಟು ಹಾಕುವ ಕೌಶಲ್ಯ ಉಳ್ಳವರು ಎಂದು ತೋರಿಸಿದವರು ನಿಜಶರಣ ಅಂಬಿಗರ ಚೌಡಯ್ಯ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ರವಿವಾರ ತಾಲೂಕಾ ಆಡಳಿತ ವತಿಯಿಂದ ಮಿನಿ ವಿಧಾನಸೌಧದಲ್ಲಿ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವೃತ್ತಿಯಲ್ಲಿ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ ನೇರ ನಿರ್ಭೀತ ವಚನಗಳನ್ನು ಬರೆದಿದ್ದಾರೆ ಎಂದರು.ಶಿಕ್ಷಕ ಬಸವರಾಜ ಗೊರನಾಳ ಮಾತನಾಡಿದರು.
ಇಂಡಿ: ಪಟ್ಟಣದ ಶ್ರೀ ಸತ್ಯ ನಾರಾಯಣ ದೇವಸ್ಥಾನದಲ್ಲಿ ವಿಪ್ರ ಬಾಂಧವರೆಲ್ಲ ಸೇರಿಕೊಂಡು ಬೆಳಿಗ್ಗೆ ೯:೦೦ ಘಂಟೆಗೆ ಶ್ರೀರಾಮನ ಭವ್ಯವಾದ ಮೆರವಣಿಗೆಯೊಂದಿಗೆ ಭಜನೆ, ನೃತ್ಯ ಗೀತಾದಿಗಳೊಂದಿಗೆ, ಬಾಲರಾಮನ ವೇಷಧಾರಿಗಳೊಂದಿಗೆ ರಾಮನಾಮ ಸಂಕೀರ್ತನೆ ಮಾಡಿ, ಸಂಭ್ರಮಿಸಿದರು.ನಂತರ ರಾಮನ ಮಹಿಮೆ ಮತ್ತು ರಾಮಾಯಣದ ಅನೇಕ ದೃಷ್ಠಾಂತಗಳನ್ನು ತಮ್ಮ ಪ್ರವಚನದ ಮೂಲಕ ಪಂಡಿತ ಸರ್ವೇಶಾಚಾರ್ಯ ಅಕಮಂಚಿಯವರು ರಾಮನಲ್ಲಿರುವ ಪಿತೃಭಕ್ತಿ ಹಾಗೂ ರಾಮರಾಜ್ಯದ ಕಲ್ಪನೆಯನ್ನು ತಿಳಿ ಹೇಳಿದರು.ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ಸಾಯಂಕಾಲ ದೀಪೋತ್ಸವದ ಮೂಲಕ ಶ್ರೀರಾಮನನ್ನು ಭಕ್ತಿ ಭಾವದಿಂದ ಪೂಜಿಸಿದರು.
ಇಂಡಿ: ತಾಲೂಕಿನ ಮಸಳಿ ಬಿ.ಕೆ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಡಾ. ಶಿವಕುಮಾರ ಮಹಾಶಿವಯೋಗಿಗಳ ೫ ನೇ ವಷದ ಪುಣ್ಯಸ್ಮರಣೆ ಕಾರ್ಯಕ್ರಮ ಆಚರಿಸಲಾಯಿತು.ಕಾರ್ಯಕ್ರಮದ ಪಾವನ ಸಾನಿಧ್ಯವಹಿಸಿದ್ದ ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೆಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಸಿಧ್ಧಗಂಗಾ ಮಠ ರಾಜ್ಯದಲ್ಲಿಯೇ ಲಕ್ಷಾಂತರ ಮಕ್ಕಳಿಗೆ ಉಚಿತ ವಿದ್ಯಾದಾನ, ಅನ್ನದಾನ ಮಾಡಿದ ಮಠವಾಗಿದೆ. ಆ ಮಠದಲ್ಲಿ ಕೇವಲ ಶಿಕ್ಷಣ ಮಾತ್ರ ಸಿಗಲ್ಲ, ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು, ಸಮಾಜದಲ್ಲಿ ಬದುಕುವ ಬಗೆ, ಸಂಸ್ಕಾರ ಇವೆಲ್ಲವನ್ನೂ ನೀಡಲಾಗುತ್ತದೆ. ಗೀಗಾಗಿ ಅಲ್ಲಿ ಕಲಿತ ಮಕ್ಕಳು ಸಂಸ್ಕಾರವಂತರಾಗಿ ಬಾಳಿ ಬದುಕುತ್ತಾರೆ. ಅಂತಹ ಮಠದ ಲಿಂಗೈಕ್ಯ ಶ್ರೀಗಳ ಪುಣ್ಯಸ್ಮರಣೆ ಆಚರಿಸುತ್ತಿರುವುದು ನಿಮ್ಮ ಸೌಭಾಗ್ಯವೇ ಸರಿ ಎಂದರು.ಸಿದ್ದಗಂಗಾ ಮಠದಲ್ಲಿ ಕಲಿತ ವಿದ್ಯಾರ್ಥಿ ಹಣಮಂತ್ರಾಯ ಹೊನ್ನಳ್ಳಿ ಅವರಿಗೆ ಶ್ರೀಗಳು ಸತ್ಕರಿಸಿದರು.ಮಲ್ಲನಗೌಡ ಪಾಟೀಲ, ಸಂಜು ಸೋಲಾಪೂರ, ಶಿವಾನಂದ ಕ್ಷತ್ರಿ, ಸಂಜು ರಜಪೂರ, ಚಂದು ಅಗಸರ, ಬೋಜೆಪ್ಪ ಚಾಂದಕವಠೆ, ಗುರುರಾಜಗೌಡ ಲೋಣಿ, ಅದೃಷ್ಯಪ್ಪ ವಾಲಿ, ರವಿ ರಾಯಜಿ, ಬಸವರಾಜ ಪಟ್ಟಣಶೆಟ್ಟಿ, ಸಿದ್ದು ಸೋಲಾಪೂರ, ಮತ್ತಿತರರಿದ್ದರು.
ದೇವರಹಿಪ್ಪರಗಿ: ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪಟ್ಟಣದ ಹನುಮಾನ, ವಿಠ್ಠಲ ಮಂದಿರ, ಕೆಇಬಿ ಆಂಜನೇಯ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಿ, ಪ್ರಸಾದ ವಿತರಿಸಲಾಯಿತು.ಪಟ್ಟಣದ ಮೇನ್ ಬಜಾರಿನ ಹನುಮಾನ ದೇವಸ್ಥಾನದಲ್ಲಿ ಜಡಿಮಠದ ಜಡೇಸಿದ್ಧೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಹಾಗೂ ವಠಾರದ ವಿಠ್ಠಲ ಮಂದಿರದಲ್ಲಿ ವಿಪ್ರ ಸಮುದಾಯದ ಶಿವಚಿದಂಬರ್ ಸೇವಾ ಸಮೀತಿಯವರು ಹಾಗೂ ಇಂಡಿ ರಸ್ತೆಯ ಕೆಇಬಿ ಆಂಜನೇಯ ದೇವಾಲಯದಲ್ಲಿ ಹೆಸ್ಕಾಂ ಸಿಬ್ಬಂದಿ ಶ್ರೀಪಾದ ಜೋಷಿಯವರ ಮೂಲಕ ಶ್ರೀರಾಮನಿಗೆ ಭಜನೆ, ಭಕ್ತಿಗೀತೆಗಳ ಸಹಿತ ಶಾಸ್ತ್ರೋಕ್ತ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ನಂತರ ಸೇರಿದ ಭಕ್ತಸಮೂಹಕ್ಕೆ ಪ್ರಸಾದ ವಿತರಿಸಲಾಯಿತು.ತಾಲ್ಲೂಕಿನ ಕೋರವಾರ ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ಸಹ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಶ್ರೀರಾಮನ ಭಾವಚಿತ್ರ ಹಾಗೂ ಕಟೌಟಗಳಿಗೆ ಪೂಜೆ ನೆರವೇರಿಸಿ ಮಹಾಪ್ರಸಾದ ವಿತರಿಸಲಾಯಿತು. ಇನ್ನು ಮನೆಗಳಲ್ಲಿ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ ನಂತರ ಸಿಹಿಅಡುಗೆ ಮಾಡಿ ಪ್ರಸಾದ ಸ್ವೀಕರಿಸಿದ್ದು ಕಂಡು ಬಂತು. ಬೆಳಿಗ್ಗೆಯಿಂದ ಮಧ್ಯಾನ್ಹದವರೆಗೆ ಪ್ರಾಣ ಪ್ರತಿಷ್ಠಾಪನೆಯ ನೇರಪ್ರಸಾರವನ್ನು ಟಿ.ವ್ಹಿ ಯ ಮೂಲಕ ವೀಕ್ಷಿಸಿದ ಮಹಿಳೆಯರು, ಮಕ್ಕಳು…
– ಸಂಪದಾ ಹಿರೇಮಠಆಲಮಟ್ಟಿ: ಶ್ರೀ ರಾಮಚಂದ್ರನ ಜನ್ಮಸ್ಥಳ ಅಯೋಧ್ಯೆಯಲ್ಲಿ ಸೋಮವಾರ ನವ್ಯೋತ್ತರದ ಭವ್ಯೋತ್ತರ ಐತಿಹ ಕನಸಿನ ರಾಮ ಮಂದಿರ ತಲೆ ಎತ್ತಿದೆ. ವೈವಿಧ್ಯಮಯ ರಾಮ ದೇಗುಲ ಲೋಕಾರ್ಪಣೆಗೊಂಡು ರಾಮನ ಪಟ್ಟಾಭಿಷೇಕದ ಸಂಭ್ರಮ ದೇಶದೆಲ್ಲೆಡೆ ಮೊಳಗಿದೆ. ಆ ನಿಮಿತ್ಯ ಈ ಭಕ್ತಿಭಾವದ ಸಂತಸ,ಸಡಗರ ಇಲ್ಲಿ ಪುಟ್ಟ ಬಾಲ ಜೀವಭಾವದಲ್ಲಿ ಪೂಜ್ಯನೀಯವಾಗಿ ಮೂಡಿಬಂದಿದೆ.ಇಲ್ಲಿನ ಎಂ.ಎಚ್.ಎಂ.ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಪುಟ್ಟ ಬಾಲಕರು ರಾಮ, ಲಕ್ಷ್ಮಣನ ಹಾಗೂ ಬಾಲೆಯೊಬ್ಬಳು ಸೀತೆಯ ರೂಪ ಸಾಂಗತ್ಯದಲ್ಲಿ ಮಿನುಗಿ ಗಮನ ಸೆಳೆದರು.ರಾಮೋತ್ಸವಕ್ಕೆ ಬಾಲೋತ್ಸವದ ಕಲರಫುಲ್ ಮೆರುಗು ನೀಡಿ ಸಂಭ್ರಮಿಸಿದರು. ಜೈ ಸಿಯಾರಾಮ ಸ್ಮರಣೆಯಲ್ಲಿ ಮಿಂದೆದ್ದರು. ರಾಮನಾಮ ಆದರ್ಶಕ್ಕೆ ಸಾಕ್ಷಿಯಾದರು. ರಾಮ,ಸೀತೆ,ಲಕ್ಷ್ಮಣ ಕಾಡಿನಲ್ಲಿನ ವನವಾಸದ ದೃಶ್ಯ ಕಾವ್ಯದಲ್ಲಿ ಈ ಚಿಣ್ಣರು ಗೋಚರಿಸಿ ಜನಮನ ಸೆಳೆದರು. ಮನೋಜ್ಞ ಭಾವಭಂಗಿಯಲ್ಲಿ ಹಾವಭಾವ ಬೀರಿ ನೋಡುಗರ ಹೃನ್ಮನ ಗೆದ್ದರು.ಅಖಿಲ ಮುಳವಾಡ, ರಾಜೇಶ್ವರಿ ಮುಳವಾಡ, ಸ್ವಾತಿಕ ಬೂದಿಹಾಳ, ಹೇಮಂತ ಒನಕ್ಯಾಳ, ಸಾನ್ವಿ ರಾಠೋಡ, ಲಕ್ಷ್ಮೀ ಕುಂದರಗಿ ಮೊದಲಾದ ಚಿಣ್ಣರು ರಾಮನಾಮದಲ್ಲಿ ವೇಷಭೂಷಣ ಧರಿಸಿ ಎಲ್ಲರ…
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಎಲ್ಲ ಗ್ರಾಮಗಳಲ್ಲಿರುವ ಹನುಮಂತ ದೇವಸ್ಥಾನ ಸೇರಿದಂತೆ ಬಹುತೇಕ ದೇವಸ್ಥಾನಗಳಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಂಗವಾಗಿ ಸೋಮವಾರ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ರಾಮನ ಜಪ, ಘೋಷಣೆ ಕೇಳಿಬಂದಿತ್ತು. ಎಲ್ಲೆಡೆ ಪ್ರಸಾದ ವ್ಯವಸ್ಥೆ ಮಾಡಿದ್ದು ಕಂಡುಬಂದಿತ್ತು.ಪಟ್ಟಣದ ಶಿವಾಜಿ ಗಲ್ಲಿಯಲ್ಲಿರುವ ಅಂಭಾಭವಾನಿ ದೇವಸ್ಥಾನದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ವಿಜಯಪುರ ಸೌಹಾರ್ದ ಬ್ಯಾಂಕಿನ ನಿರ್ದೇಶಕ ಜಟ್ಟಿಂಗರಾಯ ಮಾಲಗಾರ ಮಾತನಾಡಿ, ಕಳೆದ ಐದು ಶತಮಾನಗಳ ಹೋರಾಟ ಮತ್ತು ದಶಕಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾನಗೊಂಡು ಪ್ರಾಣ ಪ್ರತಿಷ್ಠಾಪನೆವಾಗುತ್ತಿರುವುದು ಸಮಸ್ತ ಹಿಂದು ಬಾಂಧವರಿಗೆ ಸಂತಸ, ಸಂಭ್ರಮ ಉಂಟು ಮಾಡಿದೆ. ಅಸಂಖ್ಯಾತ ಹಿಂದು ಭಕ್ತರ ತ್ಯಾಗ-ಬಲಿದಾನಕ್ಕೆ ಇದೀಗ ತಕ್ಕ ಪ್ರತಿಫಲ ಸಿಕ್ಕಂತಾಗಿದೆ ಎಂದರು.ಕಾರ್ಯಕ್ರಮದಲ್ಲಿ ರಾಮ,ಸೀತೆ, ಲಕ್ಷ್ಮಣ, ಹನುಮಂತ ವೇಷಧಾರಿ ಮಕ್ಕಳು ಗಮನ ಸೆಳೆದರು.ಈ ಸಂದರ್ಭದಲ್ಲಿ ರಾಜು ಬಿಜಾಪುರ, ರಮೇಶ ಮೊರೆ, ಬಸವರಾಜ ಬಿಜಾಪುರ, ಅಶೋಕ ಬಿಜಾಪುರ, ಅಂಬೋಜಿ ಬಿದರಕುಂದಿ,…
ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ರಾಜ್ಯಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಕಾಲೇಜಿನ ವಿಧ್ಯಾರ್ಥಿ ವಿದ್ಯಾರ್ಥಿನಿಯರೊಂದಿಗೆ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಸುಮಾರು ೨ ಗಂಟೆಗಳ ಕಾಲ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ಶಾಸಕ ರಾಜುಗೌಡ ಪಾಟೀಲ, ರಾಜಕೀಯ ಕ್ಷೇತ್ರ, ಶಿಕ್ಷಣ ಕ್ಷೇತ್ರ. ಸಾರಿಗೆ, ಮೂಲಭೂತ ಸೌಕರ್ಯಗಳ ಕುರಿತು ಕೇಳಿದ ಹತ್ತು ಹಲವು ಪ್ರಶ್ನೆಗಳಿಗೆ ಶಾಂತ ರೀತಿಯಿಂದ ವಿಧ್ಯಾರ್ಥಿಗಳಿಗೆ ಉತ್ತರ ನೀಡಿದರು,ಸಂವಾದದ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶಾಸಕ ರಾಜುಗೌಡ ಕುದರಿಸಾಲೋಡಗಿ ಅವರು, ಇಂದಿನ ವಿಧ್ಯಾರ್ಥಿಗಳು ಮುಖ್ಯವಾಗಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಗುರು ಹಿರಿಯರನ್ನು ಗೌರವಿಸುವ, ಮಾತಾಪಿತರನ್ನು ಪೂಜ್ಯನೀಯ ಬಾವದಿಂದ ಕಾಣುವುದನ್ನು ಕಲಿಯಬೇಕು. ಇದರಿಂದ ಎಂತಹುದೇ ಸಾಧನೆ ಮಾಡಲು ಸಾಧ್ಯವಿದೆ ಎಂದು ಹೇಳಿದರು.ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ಆಗಬೇಕಿದೆ. ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆಧ್ಯತೆ ನೀಡುತ್ತೇನೆ ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಾಂತಗೌಡ ಪಾಟೀಲ, ಪ್ರಾಚಾರ್ಯ ಸಿ ಎಸ್ ಹಿರೇಮಠ, ಬಸವಂತಪ್ಪ ಚನಗೊಂಡ,…
ವಿಜಯಪುರ: ಜಿಲ್ಲೆಯಲ್ಲಿ ನಡೆದ ವಾಣಿಜ್ಯ ತೆರಿಗೆ ಪರಿವೀಕ್ಷಕರ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಪರೀಕ್ಷಾರ್ಥಿಗಳು ಆರೋಪಿಸಿ ಪ್ರತಿಭಟನೆ ಮಾಡಿದ ಪ್ರಸಂಗ ಜರುಗಿದೆ.ಜ. 21 ರಂದು ಭಾನುವಾರ ನಡೆದ ವಾಣಿಜ್ಯ ತೆರಿಗೆ ಪರಿವೀಕ್ಷಕರ ಪರೀಕ್ಷೆಯು ವಿಜಯಪುರ ಜಿಲ್ಲೆಯ ಎಸ್ ಎಸ್ ಪ್ರೌಢಶಾಲೆಯಲ್ಲಿ ನಡೆದಿದ್ದು, ಅದು ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆ ಅಡಿಯಲ್ಲಿ ಬರುವ ಶಿಕ್ಷಣ ಸಂಸ್ಥೆಯಾಗಿದೆ.ಎಸ್ ಎಸ್ ಪ್ರೌಢಶಾಲೆಯ ಪರೀಕ್ಷಾ ಕೊಠಡಿ ಸಂಖ್ಯೆ 8 ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಕೊಠಡಿಗೆ ಬರುವ ಮುಂಚೆಯೇ ಪ್ರಶ್ನೆ ಪತ್ರಿಕೆಯ ಕವರ್ ತೆರೆಯಲಾಗಿದ್ದು ಇದು ವಿದ್ಯಾರ್ಥಿಗಳ ಗಮನಕ್ಕೆ ಬಂದಿದೆ. ಪರೀಕ್ಷಾ ಕೊಠಡಿಯಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಇದಕ್ಕೆ ವಿರೋಧಿಸಿದರೂ ಇದನ್ನು ಗಣನೆಗೆ ತೆಗೆದುಕೊಳ್ಳದ ಕೊಠಡಿ ಮೇಲ್ವಿಚಾರಕರು ಒತ್ತಾಯಪೂರ್ವಕ್ಕಾಗಿ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಯ ಬಂಡಲ್ ಗೆ ಸಹಿ ಪಡೆಯಲು ಮುಂದಾದಾಗ ವಿದ್ಯಾರ್ಥಿಗಳು ಇದಕ್ಕೆ ನಿರಾಕರಿಸಿದ್ದಾರೆ. ಪರೀಕ್ಷೆಗೆ ನಿಯೋಜನೆಗೊಂಡ ಸಿಬ್ಬಂದಿ ವರ್ಗದವರು ಮತ್ತು ಕೆಪಿಎಸ್ಸಿ ನೋಡಲ್ ಅಧಿಕಾರಿಗಳು ಬಂದು ಸಹಿ ಪಡೆಯದೆ…
ವಿಜಯಪುರ: ನಗರದ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ, ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಅವರ ನಿರ್ದೇಶನದಂತೆ ಅತ್ಯಂತ ವಿಜೃಂಭಣೆಯಿಂದ ರಾಮೋತ್ಸವ ಜರುಗಿತು.ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ರಾಮನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ, ಬೆಳಿಗ್ಗೆ ಸಿದ್ದೇಶ್ವರ ದೇವಸ್ಥಾನದಲ್ಲಿ ಹೋಮ, ಹವನ ಮತ್ತು ವಿಶೇಷ ಪೂಜೆ ನೇರವೇರಿಸಿ, ನಾಡಿಗೆ ಸು:ಖ, ಶಾಂತಿ, ಸಮೃದ್ಧಿ ಕರುಣಿಸಲೆಂದು ಪ್ರಾರ್ಥಿಸಲಾಯಿತು. ನಂತರ ಸಿಹಿ ವಿತರಿಸಿ, ಸಂಭ್ರಮಿಸಲಾಯಿತು.ಸಂಜೆ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ರಾಮನಗೌಡ ಪಾಟೀಲ ಯತ್ನಾಳ ಮತ್ತು ಸಿದ್ಧಸಿರಿ ಸೌಹಾರ್ದದ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ್ ಅಣ್ಣಿಗೇರಿ ಅವರ ನೇತೃತ್ವದಲ್ಲಿ, ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ವಿಶೇಷ ದೀಪೋತ್ಸವದಲ್ಲಿ, 1,200 ದೀಪಗಳಲ್ಲಿ ಅರಳಿದ ಶ್ರೀರಾಮಚಂದ್ರ ರೂಪಕ ನೆರೆದ ಸಾವಿರಾರು ಶ್ರೀರಾಮ ಭಕ್ತರ ಕಣ್ಮನ ಸೆಳೆಯಿತು.ನಂತರ ನಡೆದ ಆಕರ್ಷಕ ಮದ್ದು ಸುಡುವ ಕಾರ್ಯಕ್ರಮ ಉತ್ಸವದ ಮೆರಗು ಹೆಚ್ಚಿಸಿತು.ಎಲ್ಲಿ ನೋಡಿದರಲ್ಲಿ…
