Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ನಡೆಯುತ್ತಿದ್ದ ಗೋಲ್ಲಾಳೇಶ್ವರ ಜಾತ್ರೆಯ ರಥೋತ್ಸವದ ವೇಳೆ ಆಯತಪ್ಪಿ ಮೇಲಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ.ಗೋಲಗೇರಿಯ ಗ್ರಾಪಂ ಮಾಜಿ ಸದಸ್ಶ ಸಾಹೇಬ ಪಟೇಲ (ಮುದುಕಣ್ಣ) ಖಾಜಾಪಟೇಲ ಕಾಚಾಪೂರ (55) ಮೃತ ದುದೈ೯ವಿ. ಈತ ಮೇಲಿಂದ ಕೆಳಕ್ಕೆ ಬಿದ್ದ ಸಂದಭ೯ದಲ್ಲಿ ರಥದ ಬಳಿ ನಿಂತಿದ್ದ ನಿಜಣ್ಣ ಬಡಿಗೇರ ಅವರ ಕಾಲು ಮುರಿದಿದ್ದು, ಕೂಡಲೇ ಆತನ್ನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಮೃತನನ್ನು ಊರ ಜನರು ಮುದುಕಪ್ಪ ಅಂತಲೇ ಕರೆಯುತ್ತಿದ್ದರು. ಈತ ತನ್ನ 18ನೇ ವಯಸ್ಸಿನಿಂದಲೂ ಜಾತ್ರೆಯ ಸಂದರ್ಬ ತೇರಿನ ಕಳಶ ಮತ್ತು ಕೊಡೆಯನ್ನು ಕಟ್ಟುತ್ತಿದ್ದ. ಪ್ರತಿ ವರ್ಷದಂತೆ ಈ ಸಲವೂ ಕಟ್ಟುತ್ತಿದ್ದ ವೇಳೆ, ಕೈಯಲ್ಲಿದ್ದ ಹಗ್ಗ ಕೊಸರಿದ ಪರಿಣಾಮ ಸುಮಾರು 70 ಅಡಿ ಎತ್ತರದ ರಥದ ಮೇಲಿಂದ ಕೆಳಗೆ ಬೀಳುವ ವೇಳೆ ರಥವು ಬಡಿದು ಸಾವನ್ನಪ್ಪಿದ್ದಾನೆ. ಘಟನೆ ಹಿನ್ನೆಲೆ ರಥೋತ್ಸವವನ್ನು ರದ್ದುಗೊಳಿಸಲಾಗಿದೆ. ಏ.6ರಂದು ಗೋಲ್ಲಾಳೇಶ್ವರ ಜಾತ್ರೆ ರಥೋತ್ಸವದೊಂದಿಗೆ ಆರಂಭಗೊಂಡು ಐದು ದಿನಗಳ…
-ಶೈಲಾ ಇಂದುಶೇಖರವಿಜಯಪುರ: ತಾನು ಇಷ್ಟಪಡುವ ರಾಜಕಾರಣಿಯೋರ್ವ ಈ ಬಾರಿಯ ವಿದಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಶಾಸಕನಾಗಬೇಕೆಂದು ದೇವರಿಗೆ ಹರಕೆ ಹೊತ್ತು ಕೂಲಿ ಕಾರ್ಮಿಕನೋರ್ವ ಕಠಿಣ ವ್ರತ ಕೈಗೊಂಡ ವಿನೂತನ ಸಂಗತಿ ಇದೀಗ ಬೆಳಕಿಗೆ ಬಂದಿದೆ.ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಇಂಗಳಗಿ ಎಂಬ ಪುಟ್ಟ ಗ್ರಾಮದ 21 ವರ್ಷದ ತರುಣ ಆಕಾಶ ಸಣ್ಣಪ್ಪ ಪೂಜಾರಿ ಹರಕೆ ಹೊತ್ತ ಯುವಕ. ಇವನು ಆರಾಧಿಸುವ ರಾಜಕಾರಣಿ ಸಿಂದಗಿಯ ಕಾಂಗ್ರೆಸ್ ನೇತಾರ ಅಶೋಕ ಮನಗೂಳಿ.ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಆಕಾಶ್ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸುವ ಅರ್ಹತೆ ಹೊಂದಿದ್ದಾನೆ. ಇವನಿಗೆ ತಾನು ಆರಾಧಿಸುವ ಅಶೋಕ ಮನಗೂಳಿ ಅವರಿಗೆ ಮತ ಹಾಕಲು ಸಾಧ್ಯವಾಗದು. ಕಾರಣ ಇವನದು ದೇವರಹಿಪ್ಪರಗಿ ಮತಕ್ಷೇತ್ರ. ತನ್ನ ಮತಕ್ಷೇತ್ರಕ್ಕೆ ಸಂಬಂಧಿಸಿರದಿದ್ದರೂ ಆಕಾಶ್ ಪೂಜಾರಿ ತಾನು ಆರಾಧಿಸುವ ನಾಯಕ ಅಶೋಕ ಮನಗೂಳಿ ಈ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ವಿಧಾನಸೌಧ ಪ್ರವೇಶಿಸಬೇಕೆಂದು ಗ್ರಾಮದ ಆರಾಧ್ಯ ಧೈವಗಳಾದ ಅಮೋಘಸಿದ್ದೇಶ್ವರ ಮತ್ತು ಸನಗೊಂಡ ಸಿದ್ದೇಶ್ವರ…
ಮುದ್ದೇಬಿಹಾಳ: ರಥೋತ್ಸವದ ವೇಳೆ ರಥದ ಕೆಳಗೆ ಜಾರಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ಬಸರಕೋಡದಲ್ಲಿ ಗುರುವಾರ ಸಂಜೆ ನಡೆದಿದೆ.ಬಸರಕೋಡ ಪವಾಡ ಬಸವೇಶ್ವರ ಜಾತ್ರೋತ್ಸವದ ಅಂಗವಾಗಿ ಗುರುವಾರ ಸಂಜೆ ರಥೋತ್ಸವ ಜರುಗುತ್ತಿದ್ದ ವೇಳೆ ಗ್ರಾಮಸ್ಥ ನಾಗಪ್ಪ ಯಲ್ಲಪ್ಪ ವಣಕ್ಯಾಳ (24) ಎಂಬಾತ ರಥಕ್ಕೆ ಕಟ್ಟಿದ್ದ ಹಗ್ಗ ಹಿಡಿದ ವೇಳೆ ಆಯತಪ್ಪಿ ಜಾರಿ ಬಿದ್ದಿದ್ದಾನೆ ಎನ್ನಲಾಗಿದೆ. ರಥದ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಅಕ್ಕಪಕ್ಕದಲ್ಲಿದ್ದ ಜನರು, ಪೊಲೀಸರು ತಕ್ಷಣ ರಕ್ಷಿಸಿ ತಾಲೂಕಾಸ್ಪತ್ರೆಗೆ ಕಳುಹಿಸಿದ್ದಾರೆ. ಚಕ್ರ ಹರಿದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಆತ ಬಾಗಲಕೋಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮುದ್ದೇಬಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಸ್ಥಳಕ್ಕೆ ಪಿಎಸೈ ಆರೀಫ ಮುಶಾಪುರಿ ಸಿಬ್ಬಂದಿ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಸತತ 11 ವರ್ಷ ಪಾದಯಾತ್ರಿಗಳೊಂದಿಗೆ ಶ್ರೀಶೈಲಕ್ಕೆ ಪಯಣ | ಭವ್ಯ ಮೆರವಣಿಗೆಯೊಂದಿಗೆ ಅಂತ್ಯಸಂಸ್ಕಾರ | ಭಕ್ತರ ಅಶ್ರುತರ್ಪಣ ಕೊಲ್ಹಾರ: ಹೋಳಿ ಹುಣ್ಣಿಮೆಯ ಮರುದಿನ ಬೂದಿಚೆಲ್ಲುವ (ದೂಳವಾಡ) ದಿನದಂದು ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳ, ಪಟ್ಟಣಗಳ ಜನರು ಕಂಬಿ ದೇವರನ್ನು ಹೊತ್ತುಕೊಂಡು ಪ್ರತಿ ವರ್ಷ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲ ಜ್ಯೋತಿರ್ಲಿಂಗದ ದರ್ಶನ ಪಡೆಯಲು ಪಾದಯಾತ್ರೆಯ ಮೂಲಕ ಹೊರಡುವದು ವಾಡಿಕೆಯಾಗಿದೆ.ಇಲ್ಲೊಂದು ಸೋಜಿಗದ ವಿಷಯವೆಂದರೆ ಕೊಲ್ಹಾರ ಪಟ್ಟಣದಿಂದ ಪಾದಯಾತ್ರೆಯ ಕೈಗೊಳ್ಳುವ ಭಕ್ತರ ಸಂಪ್ರದಾಯಕ್ಕೆ ಶತಮಾನಗಳ ಇತಿಹಾಸವಿದೆ.ಪಾದಯಾತ್ರೆ ಮಾಡುವ ಭಕ್ತರ ಜೊತೆಯಲ್ಲಿ ನಿರಂತರವಾಗಿ ೧೫ ದಿನಗಳ ಕಾಲ ಕಂಟ್ಲಿ ಎತ್ತು ಎನ್ನುವ ಎತ್ತೊಂದು ಬಸವ ಭಕ್ತರ ಜೊತೆಜೊತೆಯಲ್ಲಿ ಹೆಜ್ಜೆ ಹಾಕುತ್ತಾ, ಭಕ್ತರಿಗೆ ದಾರಿಯನ್ನು ದೇವನ ಸ್ವರೂಪದಂತೆ ತೋರಿಸುವ ಶಿವನ ನಂದಿ ಅವತಾರದಂತಿತ್ತು ಈ ಕಂಟ್ಲಿ ಎತ್ತು.ಕಾಕತಾಳೀಯ ಎಂಬAತೆ ಈ ವರ್ಷ ಶ್ರೀಶೈಲಕ್ಕೆ ತೆರಳಿದ್ದ ಕಂಟ್ಲಿ ಎತ್ತು ಮರಳಿ ಕೊಲ್ಹಾರ ಪಟ್ಟಣಕ್ಕೆ ಆಗಮಿಸಿದ ಬುಧವಾರ ದಿನದಂದೆ ತನ್ನ ದೇಹ ತ್ಯಾಗವನ್ನು ಮಲ್ಲಯ್ಯನ ಸನ್ನಿಧಿಗೆ ಸಮರ್ಪಿಸಿದೆ. ಪುಣ್ಯದ ಬಸವ…
ಪ್ರಮುಖ ರಸ್ತೆಗಳಲ್ಲೇ ಕತ್ತಲು |ಸ್ಥಗಿತಗೊಂಡ ಟ್ರಾಫಿಕ್ ಸಿಗ್ನಲ್ ದೀಪಗಳು | ಜಾಣ ಕುರುಡಿನ ಅಧಿಕಾರಿಗಳು -ಶಂಕರಲಿಂಗ ಜಮಾದಾರಇಂಡಿ: ಕತ್ತಲೆ.. ಕತ್ತಲೆ.. ಬರೀ ಕತ್ತಲೆ.. ಇದು ಇಂಡಿ ಮಿನಿ ವಿಧಾನಸೌಧದ ರಸ್ತೆಯ ಹಣೆಬರಹ.ಹೌದು! ಕತ್ತಲಿನ ದಾರಿಯಲ್ಲಿ ಹಲವು ತಾಲ್ಲೂಕು ಕಛೇರಿ ಹಾಗೂ ತಾಲ್ಲೂಕು ಆಡಳಿತದ ಚಂದದ ಮಿನಿ ವಿಧಾನ ಸೌಧದ ರಸ್ತೆ ಮತ್ತು ಕಛೇರಿಗಳು ಕಡು ಕತ್ತಲಲ್ಲಿ ನಿಂತಿವೆ. ಭವಿಷ್ಯದ ಜಿಲ್ಲಾ ಕೇಂದ್ರದ ಕನಸು ಕಾಣುತ್ತಿರುವ ಇಂಡಿ ತಾಲ್ಲೂಕು ಜನಸಂಖ್ಯೆಯಲ್ಲಿ ಜಿಲ್ಲೆಯಲ್ಲಿಯೇ ಮೊದಲ ಸ್ಥಾನ ಹೊಂದಿದೆ. ಆದರೆ ಸೌಲಭ್ಯಗಳಲ್ಲಿ ಹಿಂದುಳಿದದ್ದು ವಿಪರ್ಯಾಸವಾಗಿದೆ.ಇಂಡಿ ಪಟ್ಟಣದ ಕತ್ತಲೆಯ ರಸ್ತೆಯ ಸಂಚಾರದ ನೈಜ ಕಥೆ ಇದಾಗಿದೆ. ಪಟ್ಟಣದ ಮೂಲಭೂತ ಸೌಕರ್ಯಗಳಲ್ಲಿ ಅತೀ ಅಗತ್ಯವಾದವುಗಳಲ್ಲಿ ಬೀದಿ ದೀಪದ ಸೌಕರ್ಯವೂ ಪ್ರಮುಖವಾಗಿದೆ. ಆದರೆ ಇಂಡಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಲ್ಲಲ್ಲಿ ವಿದ್ಯುತ್ ದೀಪದ ಸಮರ್ಪಕ ನಿರ್ವಹಣೆ ಕೊರತೆಯಿಂದ ಬೀದಿ ದೀಪಗಳು ನೋಡಲು ಮಾತ್ರ ಎನ್ನುವಂತಿವೆ. ಆದರೆ ಉರಿಯುವುದಿಲ್ಲ. ಜನನಿಬಿಡ ರಸ್ತೆಗಳಲ್ಲಿ ಸುಮಾರು ದಿನಗಳಿಂದ ಜನರು ಕತ್ತಲಲ್ಲಿಯೇ ತಿರುಗಾಡುವಂತಹ ಕೆಟ್ಟ ಪರಿಸ್ಥಿತಿ…
ಸಿಂದಗಿ: ಆಳುವ ಬಿಜೆಪಿ ಸರ್ಕಾರದಿಂದ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ದಸ್ತಗೀರ ಮುಲ್ಲಾ ಆರೋಪಿಸಿದರು.ಬುಧವಾರ ಪಟ್ಟಣದ ಖಾಸಗಿ ಹೋಟೆಲನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಡಳಿತಾರೂಢ ಸರ್ಕಾರ ಒಂದು ಸಮುದಾಯವನ್ನು ಗುರಿಯಾಗಿ ಇಟ್ಟುಕೊಂಡು ಅಸಂವಿಧಾನಿಕವಾಗಿ ಮುಸ್ಲಿಂರ ಮೀಸಲಾತಿಯನ್ನು ಕಿತ್ತು ಎಸೆದು, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ. ಬಿಜೆಪಿ ಸರ್ಕಾರ ಸಮುದಾಯಗಳನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿ ಕೋಮುವಾದವನ್ನು ಪ್ರದರ್ಶನ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಮ್ಮ ಮೀಸಲಾತಿಯನ್ನು ಕಿತ್ತುಕೊಂಡಿದೆ. ಒಕ್ಕಲಿಗರಿಗೆ ಮತ್ತು ಪಂಚಮಸಾಲಿಗರಿಗೆ ಮೀಸಲಾತಿ ಕೊಟ್ಟಿದ್ದು ಸ್ವಾಗತಿಸುತ್ತೇವೆ. ಆದರೆ ಒಂದು ಸಮುದಾಯದ ಮೀಸಲಾತಿಯನ್ನು ಕಿತ್ತುಕೊಂಡು ಸರ್ಕಾರವು ಮುಸಲ್ಮಾನ್ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ವಿರೋಧಿಸಬೇಕಾದ ವಿರೋಧ ಪಕ್ಷಗಳು ಸುಮ್ಮನೆ ಇರುವುದು ಏಕೆ ? ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಮುಸ್ಲಿಮರ ವೋಟ್ ಬೇಕು, ಆದರೆ ಮುಸ್ಲಿಮರ ಸಮಸ್ಯೆಗಳು ಬೇಡವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮೀಸಲಾತಿ ವಿಷಯವಾಗಿ ರಾಜ್ಯದಲ್ಲಿ ಮತ್ತು ಸಿಂದಗಿ ಮತಕ್ಷೇತ್ರದಲ್ಲಿ ಮುಸ್ಲಿಮರು ಎಚ್ಚರ…
ವಿಜಯಪುರ : ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಗೆ ಬರುವ ಎಲ್ಲ ಕಾಲುವೆಗಳಿಗೆ ಎಪ್ರೀಲ್ ೨೦೨೩ರ ಅಂತ್ಯದವರೆಗೆ ನೀರು ಹರಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ (ರಿ) ಜಿಲ್ಲಾ ಘಟಕ ವಿಜಯಪುರ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಪ್ರಾದೇಶಿಕ ಆಯುಕ್ತರು ಬೆಳಗಾವಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಗೆ ಬರುವ ಎಲ್ಲ ಕಾಲುವೆಗಳಿಗೆ ಏಪ್ರಿಲ್ ಅಂತ್ಯದವರೆಗೆ ನೀರು ಹರಿಸುವುದನ್ನು ಮುಂದುವರೆಸಿ, ಬೇಸಿಗೆ ಸಂದರ್ಭದಲ್ಲಿ ಬೆಳೆಯುವ ಬೆಳೆಗಳಿಗೆ ಅನುವು ಮಾಡಿ ಕೊಡಬೇಕು. ಹಾಗೂ ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳನ್ನು ಹಾಗೂ ಬಾಂದಾರಗಳನ್ನು ಸಂಪೂರ್ಣ ಭರ್ತಿ ಮಾಡಬೇಕು. ಈ ಮೊದಲು ಮಾರ್ಚ್ ೩೦ ರವರೆಗೆ ಮಾತ್ರ ಕಾಲುವೆಗೆ ನೀರು ಹರಿಸುವುದಾಗಿ ನವೆಂಬರ ೨೩ ರಂದು ಬೆಂಗಳೂರಿನಲ್ಲಿ ನಡೆಸಿದ್ದ ಐ.ಸಿ.ಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಎಪ್ರೀಲ್ ಅಂತ್ಯದವರೆಗೂ ಎಲ್ಲ ಕಾಲುವೆಗಳಿಗೂ ನೀರು ಹರಿಸಲು ಸಂಘಟನೆ ವತಿಯಿಂದ ಹಲವು ಭಾರಿ…
ಕೆ.ಆರ್.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಯಡಹಳ್ಳಿ ವಿನೂತನ ಪ್ರತಿಭಟನೆ ದೇವರ ಹಿಪ್ಪರಗಿ: ಅಕ್ರಮ ಮರಳುಗಾರಿಕೆ ತಡೆಗಟ್ಟುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಜಿಲ್ಲಾದ್ಯಕ್ಷ ಹಾಗೂ ದೇವರ ಹಿಪ್ಪರಗಿ ಮತಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾದ ಶಿವಾನಂದ ಯಡಹಳ್ಳಿ ಅವರು ವಿನೂತನವಾಗಿ ಪ್ರತಿಭಟಿಸಿದ ಘಟನೆ ಬುಧವಾರ ನಡೆದಿದೆ.ಪಟ್ಟಣದ ಮೊಹರೆ ಹನುಮಂತರಾಯ ವೃತ್ತದಿಂದ ದೇವರ ಹಿಪ್ಪರಗಿ ಪೊಲೀಸ್ ಠಾಣೆಯವರೆಗೂ ಶಿವಾನಂದ ಅವರು ರಸ್ತೆಯಲ್ಲಿ ದೀರ್ಘದಂಡ ನಮಸ್ಕಾರ (ಉರುಳುಸೇವೆ) ಹಾಕುತ್ತ ಹೋಗಿ ಪೊಲೀಸರಿಗೆ ಸನ್ಮಾನ ಮಾಡಿದರು.ನಂತರ ಮಾತನಾಡಿದ ಅವರು, ಇನ್ನು ಮುಂದಾದರೂ ಪ್ರಾಮಾಣಿಕವಾಗಿ ಜೀವನ ಸಾಗಿಸುತ್ತ ಅಕ್ರಮ ಮರಳುಗಾರಿಕೆಯನ್ನು ಸಂಪೂರ್ಣ ತಡೆಗಟ್ಟುವಂತೆ ಮನವಿ ಮಾಡಿಕೊಂಡರು. ಈ ಹಿಂದೆ ಕಳೆದ ಒಂದು ತಿಂಗಳುಗಳಿAದ ಅಕ್ರಮ ಮರಳುಗಾರಿಕೆ ತಡೆಗಟ್ಟುವಂತೆ ದೇವರಹಿಪ್ಪರಗಿ ಪೋಲಿಸ್ ಠಾಣೆಗೆ ಕರ್ನಾಟಕ ರಾಷ್ಟç ಸಮಿತಿ ಪಕ್ಷವು ಮನವಿಯನ್ನು ಸಲ್ಲಿಸಲಾಗಿದ್ದು, ಠಾಣೆಯ ಪೊಲೀಸ್ ಅಧಿಕಾರಿಗಳಿಂದ ಯಾವುದೇ ಕ್ರಮ ಇಲ್ಲಿಯವರೆಗೂ ಆಗಿರುವುದಿಲ್ಲ. ಕಳೆದ ೧೫ ದಿನದ ಹಿಂದೆ ಅಕ್ರಮ ಮರುಳುಗಾರಿಕೆ ನಡೆಸುವಾಗ ಕೆಸರಟ್ಟಿ ಗ್ರಾಮದ ಬಳಿಯಲ್ಲಿ ಮರಳು ಸಾಗಿಸುವಾಗ ಟಿಪ್ಪರ…
ರೂ.೧೪.೨೮ ಲಕ್ಷ ಮೌಲ್ಯದ ಅಬಕಾರಿ ವಸ್ತುಗಳ ಜಪ್ತಿ ವಿಜಯಪುರ: ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಏಪ್ರಿಲ್ ೪ರವರೆಗೆ ಜಿಲ್ಲೆಯಲ್ಲಿ ವಿವಿಧೆಡೆ ಅಬಕಾರಿ ದಾಳಿ ನಡೆಸಿ ೧೪,೨೮,೪೭೨ ರೂ. ಮೌಲ್ಯದ ಅಬಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತರು ತಿಳಿಸಿದ್ದಾರೆ.ಚುನಾವಣೆಯನ್ನು ಅತ್ಯಂತ ನಿಷ್ಪಕ್ಷಪಾತ ಹಾಗೂ ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಅಬಕಾರಿ ಇಲಾಖೆಯಿಂದ ವಿವಿಧ ಕ್ರಮ ಕೈಗೊಳ್ಳಲಾಗಿದ್ದು, ಈವರೆಗೆ ೭೪ ಅಬಕಾರಿ ದಾಳಿ ನಡೆಸಿ, ೨೯ ಘೋರ, ೦೫ ಬಿಎಲ್ಸಿ ಹಾಗೂ ೧೫(ಎ) ೨೧ ಪ್ರಕರಣಗಳು ಸೇರಿದಂತೆ ೫೫ ಪ್ರಕರಣಗಳನ್ನು ದಾಖಲಿಸಿ, ೩೩ ಆರೋಪಿಗಳನ್ನು ವಶಪಡಿಸಿಕೊಳ್ಳಲಾಗಿದೆ. ೧,೬೯,೨೬೪ ರೂ. ಮೌಲ್ಯದ ೩೮೬.೭೧ ಲೀ. ಮದ್ಯ, ೬೪೦೦ ರೂ. ಮೌಲ್ಯದ ೭.೨ ಲೀ. ಹೊರ ರಾಜ್ಯದ ಮದ್ಯ, ೮೫೬೦ ರೂ. ಮೌಲ್ಯದ ೩೫.೭೫ ಲೀ. ಬೀಯರ್, ೪೨೫೦ ರೂ. ಮೌಲ್ಯದ ೪೨.೫ ಲೀ. ಕಳಭಟ್ಟಿ ಸರಾಯಿ ಸೇರಿದಂತೆ ೧,೮೮,೪೭೪ ರೂ. ಮೌಲ್ಯದ ೪೭೨.೧೬ ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.ಅದರಂತೆ…
ಸಿಂದಗಿ: ತಾಲೂಕಿನ ರಾಂಪೂರ ಪಿಎ ಗ್ರಾಮದ ಹತ್ತಿರ ಕಾರಿನ ಟೈರ್ ಸ್ಫೋಟಗೊಂಡ ಪರಿಣಾಮ ಕಾರು ಪಲ್ಟಿಯಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.ಕಾರಿನ ಒಳಗಡೆ ಇದ್ದ ನಿಂಗಪ್ಪ ಕುಡಕಿ (೭೫), ಪಾರ್ವತಿ ಕುಡಕಿ (೬೦), ಅಯ್ಯಪ್ಪ ಕುಡಕಿ (೩೬), ಸಿದ್ದಾರೂಢ ಕುಡಕಿ (೨೦) ಎಂಬುವವರು ಗಂಬೀರ ಗಾಯಗೊಂಡಿದ್ದಾರೆ.ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.