Author: editor.udayarashmi@gmail.com

ಇಂಡಿ: ಮಹಿಳೆಯರು ಸರಳ, ಸ್ವಾವಲಂಬನೆಯ ಜೀವನಶೈಲಿಗೆ ಒತ್ತು ನೀಡಿದರೆ ಕುಟುಂಬ ಹಾಗೂ ಸಮಾಜದಲ್ಲಿ ಸಮೃದ್ಧಿ ನೆಲೆಸಲಿದೆ ಎಂದು ಶಿಕ್ಷಕಿ, ಸಾಹಿತಿ ಪಾರ್ವತಿ ಸೊನ್ನದ ತಿಳಿಸಿದರು.ಭಾನುವಾರ ಪಟ್ಟಣದ ಸಿಂದಗಿ ರಸ್ತೆಯ ಖಾಸಗಿ ಸಭಾಭವನದಲ್ಲಿ ತಳವಾರ ಮಹಿಳಾ ಸ್ವ ಸಹಾಯ ಸಂಘದ ಅಡಿಯಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಆಚರಣೆ ಹಾಗೂ ರಂಗು ರಂಗಿನ ಹೋಳಿ ಹಬ್ಬವನ್ನು ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದರು.‘ಬೆಲೆ ಬಾಳುವ ವಸ್ತ್ರ ಹಾಗೂ ಒಡವೆ ಧರಿಸಿದರೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಲಭಿಸುವುದಿಲ್ಲ. ಸಾಧನೆಯಿಂದ ಮಹಿಳೆಯರಿಗೆ ಘನತೆ ಲಭಿಸುತ್ತದೆ. ಮಹಿಳೆಯರು ಜೀವನದಲ್ಲಿ ಯಾವುದೇ ಸಂಕಷ್ಟ ಎದುರಾದರೂ ಎದೆಗುಂದಬಾರದು. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುವ ಮನೋಬಲ ರೂಢಿಸಿಕೊಳ್ಳಬೇಕು’ ಎಂದರು.ಸಂಘದ ಅಧ್ಯಕ್ಷೆ ಭಕ್ತಿ ಜಮಾದಾರ, ಉಪಾಧ್ಯಕ್ಷೆ ಪವಿತ್ರ ನಾಲವರ, ಕಾರ್ಯದರ್ಶಿ ದೀಪಿಕಾ ಸಾತಿಹಾಳ, ಕವಿತಾ ಭೋಮ್ಮನಳ್ಳಿ, ಲಕ್ಷ್ಮಿ ಸೊನ್ನದ, ಪ್ರಜಾತಾ ಜಮಾದಾರ, ರೇಣುಕಾ ವಗ್ಗಿ, ಲಕ್ಷ್ಮಿ ನಾಟಿಕಾರ, ಸರೋಜನಿ ವಾಲಿಕಾರ, ಸವಿತಾ ಕೋಳಿ, ಭಾಗೀರಥಿ ವಿಭೂತಿಹಳ್ಳಿ, ಜಯಶ್ರೀ ಹುನಳ್ಳಿ, ಮಾಯಾ ಸಾತಿಹಾಳ, ನಯನಾ…

Read More

ವಿಜಯಪುರ: ಶನಿವಾರದಂದು ಸಂಜೆ ಸುರಿದ ಮಳೆ ಹಾಗೂ ವಿಪರಿತ್ ಗಾಳಿಯಿಂದ ಜಿಲ್ಲೆಯಲ್ಲಿ ಸಾಕಷ್ಟು ನಷ್ಟವಾಗಿದೆ, ಸಮೀಪದ ಜಂಬಗಿ(ಆ)s ಗ್ರಾಮದಲ್ಲಿ ಸುಮಾರು ೫೦ ಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಲಿಂಬೆ ಗಿಡಗಳು ಬುಡಸಮೇತ ಕಿತ್ತುಬಿದ್ದು ನಷ್ಟಗೊಂಡ ನಡೆದಿದೆ.ಬರಗಾಲದಿಂದ ಇರುವ ಅಲ್ಪ ಸ್ವಲ್ಪ ನೀರು ಸಾಲದೇ ಟ್ಯಾಂಕರ್ ಮೂಲಕ ಹೆಚ್ಚಿನ ಹಣ ಕೊಟ್ಟು ನೀರು ಹಾಕಿಸಿಕೊಂಡು ಲಿಂಬೆ ಗಿಡವನ್ನು ಕಾಪಾಡಿಕೊಂಡು ಬಂದಿರುವ ರೈತರಿಗೆ ನಿನ್ನೆಯ ದಿನ ಬೆಳಗಾಗುವುದರೊಳಗೆ ಎಲ್ಲಾ ಲಿಂಬೆ ಗಿಡಗಳು ಗಾಳಿಯಿಂದ ನೆಲಕ್ಕೆ ಊರುಳಿರುವುದನ್ನು ನೋಡಿ ದಿಕ್ಕು ತೋಚದಂತಾಗಿ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ, ಬೆಳಿಗ್ಗೆ ರೈತರು ಕರೆ ಮಾಡಿದಾಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಒತಿಯಿಂದ ನಷ್ಗೊಂಡ ರೈತರ ಹೊಲಕ್ಕೆ ಬೇಟಿ ನೀಡಿ ಸರಕಾರಕ್ಕೆ ಪರಿಹಾರಕ್ಕಾಗಿ ಒತ್ತಾಯಿಸಲಾಗುವುದು ಎಂದು ವಿಜಯಪುರ ತಾಲೂಕಾ ಉಪಾಧ್ಯಕ್ಷ ಮಹಾದೇವಪ್ಪ ತೇಲಿ ಹೇಳಿದರು.ಲಿಂಬೆಗೆ ಬೇಸಿಗೆಯಲ್ಲಿ ಒಳ್ಳೆಯ ಬೆಲೆ ಬರುವ ವೇಳೆಯಲ್ಲಿ ಈ ರೀತಿ ಅವಘಡಕ್ಕೆ ಸಿಲುಕಿ ಈ ಭಾಗದ ಹಲವಾರು ರೈತರಿಗೆ ನಷ್ಟವಾಗಿದೆ,…

Read More

ಕಲಕೇರಿ: ಶ್ರೀ ಗುರು ಮರುಳಾರಾಧ್ಯಸಂಸ್ಥಾನ ಹಿರೇಮಠ ಮೂಲ ಪುರುಷರಾದ ಲಿಂಗೈಕ್ಯ ಗುರು ಮರುಳಾರಾಧ್ಯರ ಅಮೃತ ಶೀಲಾಮೂರ್ತಿ ಮೆರವಣಿಗೆಯು ಗ್ರಾಮದ ಯಲ್ಲಾಲಿಂಗ ಮಹಾರಾಜರ ಮಠದಿಂದ ಪ್ರಮುಖ ಬೀದಿಗಳಲ್ಲಿ ಹಾದು ಗುರುಮರುಳಾರಾಧ್ಯ ಸಂಸ್ಥಾನ ಹಿರೇಮಠದವರೆಗೆ, ವಿವಿಧ ವಾಧ್ಯಗಳೊಂದಿಗೆ ನೂರಾರು ಮಹಿಳೆಯರ ಕುಂಭಮೇಳವನ್ನು ಹೊತ್ತುಕೊಂಡು ಅತ್ಯಂತ ಸಡಗರ ಸಂಭ್ರಮದಿಂದ ಅದ್ದೂರಿ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಮೂರ್ತಿಯನ್ನು ಬರಮಾಡಿಕೊಳ್ಳಲಾಯಿತು.ಬರಲಿರುವ ಎಪ್ರಿಲ್ ೫ ರಂದು ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಾನವನ್ನು ಅತ್ಯಂತ ಭಕ್ತಿಭಾವದಿಂದ ಉಜೈನಿ ಜಗದ್ಗುರುಗಳು ಹಾಗೂ ನಾಡಿನ ಮಠಾಧೀಶರು ಹಾಗೂ ಮುಖಂಡರ ನೇತೃತ್ವದಲ್ಲಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಆ ಕಾರ್ಯಕ್ರಮದಲ್ಲಿ ಕಲಕೇರಿ ಹಾಗೂ ಸತ್ತಮುತ್ತಲಿನ ಗ್ರಾಮಸ್ಥರು ಹಾಗೂ ಶ್ರೀಮಠದ ಶಿಷ್ಯರು ಹಾಗೂ ಭಕ್ತಾಧಿಗಳು ಭಾಗವಹಿಸಲಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಸುಧಾಕರ ಅಡಕಿ ಅವರು ಮಾತನಾಡಿದರು.ಈ ವೇಳೆ ಗುರು ಮರುಳಾರಾದ್ಯ ಸಂಸ್ಥಾನ ಹಿರೇಮಠ ಪೀಠಾಧಿಪತಿ ಸಿದ್ದರಾಮ ಶಿವಾಚಾರ್ಯರು, ಪಂಚರಂಗ ಸಂಸ್ಥಾನ ಗದ್ದುಗೆಮಠದ ಪೀಠಾಧಿಪತಿಗಳಾದ ಗುರು ಮಡಿವಾಳೇಶ್ವರ ಶಿವಾಚಾರ್ಯರು, ಹಲಕರ್ಟಿ ಕಟ್ಟಿಮನಿ ಹಿರೇಮಠದ ಪೀಠಾಧಿಪತಿಗಳಾದ…

Read More

ವಿಜಯಪುರ: ಸಮಾಜದ ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬಡವರು,ದಲಿತರು ಮೇಲ್ವರ್ಗದವರು ಸೇರಿದಂತೆ ಎಲ್ಲರನ್ನೂ ಗೌರವ ಭಾವನೆ ಹೊಂದಿದರೆ ರಾಜಕಾರಣ ಮಾಡಲು ಸಾಧ್ಯ ಎಂಬದನ್ನು ಅರಿಯಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ನಗರದಲ್ಲಿ ಭಾನುವಾರ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದ ಮಹಾಶಕ್ತಿ ಕೇಂದ್ರಗಳ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ರಾಜಕಾರಣ ಮಾಡಲು ಕಾರ್ಯಕರ್ತರು ಬೇಕು ಅವರು ಇಲ್ಲದಿದ್ದರೆ ನಾವು ಸೊನ್ನೆ ಇದ್ದಂತೆ ಅವರಿಂದ ಬಹಳಷ್ಟು ಕಲಿತಿದ್ದೇನೆ. ಬೂತ್‌ಗಳಲ್ಲಿನ ಶಕ್ತಿಯೂ ಎಲ್ಲಿಯೂ ಎಲ್ಲಿಯೂ ಇಲ್ಲ. ಎಲ್ಲಾ ಬೂತ್‌ಗಳಲ್ಲಿ ಕಾಯಕರ್ತರು ಸರಿಯಾಗಿ ಪ್ರಚಾರ ಮಾಡಿದರೆ ಎಂದಿಗೂ ಸೋಲಾಗುವದಿಲ್ಲ. ಬೂತಗಳಲ್ಲಿ ಹೆಚ್ಚಿನ ಜವಾಬ್ದಾರಿಂದ ಕಾರ್ಯನಿರ್ವಹಿಸುವಂತೆ ಕಾಯಕರ್ತರಿಗೆ ಕರೆ ನೀಡಿದರು. ಕಳೆದ ೧೫ ವರ್ಷಗಳಿಂದ ಜಿಲ್ಲೆಯ ಸಂಸದನಾಗಿ ಕೇಂದ್ರ ಸಚಿವನಾಗಿ ರೈಲ್ವೇ ಹಳಿಗಳ ವಿದ್ಯುತ್ತಿಕರಣ, ರಾಷ್ಟ್ರೀಯ ಹೆದ್ದಾರಿ, ಎನ್.ಟಿ.ಪಿಸಿ ಸೇರಿದಂತೆ ಕಳೆದ ೧೦ ವರ್ಷಗಳಲ್ಲಿ ೧ ಲಕ್ಷ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳಾಗಿವೆ ಎಂದು ಸಮರ್ಥಿಸಿಕೊಂಡರು. ಲಂಬಾಣಿ ಜನರ ಅತ್ಯಂತ ವಿಶ್ವಾಸ ಪ್ರೀತಿಯಿಂದ ಇದ್ದೇನೆ. ನನ್ನ ಮತ…

Read More

ಇಂಡಿ: ಜಿಲ್ಲೆಯಲ್ಲಿ ಬಂಜಾರ ಸಮುದಾಯ ನೂರಕ್ಕೆ ನೂರರಷ್ಟು ಬಿಜೆಪಿಗೆ ಬೆಂಬಲಿಸಿ‌, ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಂಜಾರ ಸಮುದಾಯದ ಮುಖಂಡ ಹಾಗೂ ಜಿಲ್ಲಾ ಪ್ರಕೋಷ್ಟ ಸಹ ಸಂಚಾಲಕ ಭೀಮಸಿಂಗ್ ರಾಠೋಡ ಹೇಳಿದರು.ಭಾನುವಾರ ಪಟ್ಟಣದ ಖಾಸಗಿ ಹೋಟೆಲನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಂಜಾರ ಸಮುದಾಯದ ಮೇಲೆ ಅತ್ಯಂತ ಕಾಳಜಿ ಹೊಂದಿದ್ದರುವ ಬಗ್ಗೆ ಕಾಂಗ್ರೆಸ್ ಪಕ್ಷ ವ್ಯಕ್ತಪಡಿಸುತ್ತದೆ. ಆದರೆ ರಾಜ್ಯದ 5 ಮೀಸಲು ಕ್ಷೇತ್ರದಲ್ಲಿ ಬಂಜಾರ ಸಮುದಾಯಕ್ಕೆ ಒಂದು ಕ್ಷೇತ್ರದಲ್ಲಿಯೂ ಅವಕಾಶ ನೀಡದೆಯಿರುವ ಅವರ ಕಾಳಜಿ ಅರ್ಥವಾಗುತ್ತದೆ. ಅದಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಏಕೈಕ ಶಾಸಕ ಹಾಗೂ ಉಪಸಭಾಪತಿ ರುದ್ರಪ್ಪ ಲಮಾಣಿ ಸಚಿವ ಸ್ಥಾನ ನೀಡಬೇಕಾಗಿತ್ತು. ಆದರೆ ‌ಮಾಡಿದ್ದೇನು ಪ್ರಶ್ನೆ ಮಾಡಿದರು. ಇನ್ನು ಸಂಸದರ ಸುಖಾ ಸುಮ್ನೆ ಸುಳ್ಳು ಆರೋಪ ಮಾಡುವುದು, ಅಪಪ್ರಚಾರ ಮಾಡುವ ಕಾರ್ಯ ಕೈ ಬಿಡಬೇಕು. ಬಂಜಾರ ಸಮುದಾಯಕ್ಕೆ ಕಾಂಗ್ರೆಸ್‌ ‌ಪಕ್ಷದಿಂದ ಅನ್ಯಾಯವಾಗಿದೆ. ವಿನಃ ಬಿಜೆಪಿ ಪಕ್ಷದಿಂದ ಇಲ್ಲಾ..! ಆದರೆ ಬಿಜೆಪಿ ಪಕ್ಷ ಎರಡು ಶಾಸಕ ಸ್ಥಾನಕ್ಕೆ ಟಿಕೆಟ್…

Read More

ಬಸವನಬಾಗೇವಾಡಿ: ಪಟ್ಟಣದ ಸಮೀಪವಿರುವ ನಾಗೂರ ಗ್ರಾಮದ ಆರಾಧ್ಯದೈವ ಯಮನೂರೇಶ್ವರ ಜಾತ್ರೆಯಂಗವಾಗಿ ಭಾನುವಾರ ವಿವಿಧ ಕಸರತ್ತಿನ ಸ್ಪರ್ಧೆ, ಜಂಗೀ ಕುಸ್ತಿ ಸ್ಪರ್ಧೆಗಳು ಗಮನ ಸೆಳೆದವು.ಬೆಳಗ್ಗೆ ಜರುಗಿದ ಕಸರತ್ತಿನ ಸ್ಪರ್ಧೆಯಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಫೈಲ್ವಾನರು ಭಾಗವಹಿಸಿದ್ದರು. ಸಾಗ ಕಲ್ಲೆತ್ತುವ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಜತ್ತ ತಾಲೂಕಿನ ಆಸಂಗಿ ಗ್ರಾಮದ ಅಫ್ಜಲಖಾನ ಮುಜಾವರ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ರಿಯಾಜ ಜಮದಾರ,ತೃತೀಯ ಸ್ಥಾನವನ್ನು ರಾಜು ತಾಳಿಕೋಟಿ ಪಡೆದುಕೊಂಡರು. ಒತ್ತುಗಲ್ಲು ಸ್ಪರ್ಧೆಯಲ್ಲಿ ಶಿವಾನಂದ ಗೋಕಾಕ ಪ್ರಥಮ ಸ್ಥಾನ, ವಿಠ್ಠಲ ಮನ್ನಿಕೇರಿ ದ್ವಿತೀಯ ಸ್ಥಾನ, ಮುತ್ತಪ್ಪ ಮತ್ತು ಸಂತೋಷ ತೃತೀಯ ಸ್ಥಾನ ಪಡೆದುಕೊಂಡರು.ಸಂಜೆ ಜರುಗಿದ ಜಂಗೀ ಕುಸ್ತಿ ಸ್ಪರ್ಧೆಯಲ್ಲಿ ದ್ಯಾಬೇರಿ, ಮಾಲ, ಸೋಲಾಪೂರ, ನಿಪ್ಪಾಣಿ, ಲಚ್ಯಾಣ, ನಿಂಬಾಳ, ಹೊರ್ತಿ, ಚಾಂದಕೋಟೆ, ವಿಜಯಪುರ, ಮಸ್ಕಿ, ಇಂಡಿ, ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಜಟ್ಟಿಗಳು ಭಾಗವಹಿಸಿದ್ದರು. ಜಂಗೀ ಕುಸ್ತಿ ಸ್ಪರ್ಧೆ ಜನರನ್ನು ರೋಮಾಂಚನಗೊಳಿಸಿತು. ಕಡೆ ಕುಸ್ತಿಯು ದ್ಯಾಬೇರಿಯ ಗೋಪಾಲ ಹಾಗೂ ಉಮದಿಯ ಅಶೋಕ ನಡುವೆ ಜರುಗಿ ದ್ಯಾಬೇರಿಯ ಗೋಪಾಲ ಜಯಶಾಲಿಯಾಗಿ ನಗದು ಐದು ಸಾವಿರ…

Read More

ಸಿಂದಗಿ: ಭಾರತದಲ್ಲಿ ತಾಯಿಗೆ ಪವಿತ್ರವಾದ ಸ್ಥಾನವಿದೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ಎಸ್.ತಂಗಡಗಿಯವರ ತಾಯಿಯನ್ನು ಹೀನಾ ಪದ ಬಳಸಿ ಹಿಯ್ಯಾಳಿಸಿ ಅಪಮಾನ ಮಾಡಿರುವ ಬಿಜೆಪಿಯ ಸಿ.ಟಿ.ರವಿ ಯವರು ಈ ಕೂಡಲೇ ಇಡೀ ಹೆಣ್ಣು ಕುಲಕ್ಕೆ ಕ್ಷಮೆ ಕೇಳಬೇಕು, ಇಲ್ಲದೇ ಹೋದರೆ ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಭೋವಿ ವಡ್ಡರ ಸಮಾಜದ ತಾಲೂಕಾಧ್ಯಕ್ಷ ಪಂಡಿತ ಯಂಪೂರೆ ಎಚ್ಚರಿಕೆ ನೀಡಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಟೀಕೆ ಮಾಡುವುದು ಸರ್ವ ಸಾಮಾನ್ಯ, ಟೀಕೆ ಜೊತೆಯಲ್ಲಿ ಆರೋಪ-ಪ್ರತ್ಯಾರೋಪ ಮಾಡುವುದು ನಿರಂತರವಾಗಿ ನಡೆಯುತ್ತಿರುವುದನ್ನು ಗಮನಿಸುತ್ತಿದ್ದೇವೆ. ಆದರೆ ಹೆಣ್ಣು ಸಂಕುಲವನ್ನು ಕೀಳಾಗಿ ಕಂಡು ಅವಮಾನಿಸಿ ಮಾತನಾಡಿರುವುದು ಕಾಣಲು ಸಾಧ್ಯವಿಲ್ಲ. ಶಿಸ್ತಿನ ಪಕ್ಷವೆಂದು ಹೇಳಿಕೊಂಡಿರುವ ಸಿ.ಟಿ.ರವಿ ಯವರ ಬಾಯಿಯಿಂದ ಇಂತಹ ಕೆಟ್ಟ ಪದಗಳನ್ನು ಬಳಸಿರುವುದು ಇಡೀ ಅವರ ಪಕ್ಷಕ್ಕೆ, ಅವರ ರಾಜಕೀಯ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ. ಭಾರತಾಂಭೆಯನ್ನು ಅವಮಾನಿಸಿರುವ ಹೀನ ಮನಸ್ಥಿತಿಯ ವಿಕೃತ ಆಲೋಚನೆಯ ಸಿ.ಟಿ.ರವಿ ಯವರನ್ನು ಗಡಿಪಾರು…

Read More

ಸಿಂದಗಿ: ಕಾಂಗ್ರೆಸ್ ಪಕ್ಷದ ಮುಂದಾಲೋಚನೆ, ನಾಯಕರ ಸಮಯಪ್ರಜ್ಞೆ ಹಾಗೂ ಕೊಟ್ಟ ಭರವಸೆಗಳನ್ನು ಈಡೇರಿಸಿ ಕೊಟ್ಟ ಮಾತಿನಂತೆ ನಡೆದ ಸರಕಾರ ಕಾಂಗ್ರಸ್ ಸರಕಾರವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ತಾಲೂಕಾಧ್ಯಕ್ಷ ಸುರೇಶ ಪೂಜಾರ ಹೇಳಿದರು.ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವ್ಯಕ್ತಿಯೊರ್ವನನ್ನು ತೋರಿಸಿ ಮತ ಕೇಳುತ್ತಿದೆ. ಹಾಗಾಗಿ ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ಏಕೆಂದರೆ ಎಲ್ಲ ಪಕ್ಷದಲ್ಲಿ ಟಿಕೆಟಗಾಗಿ ಪೈಪೋಟಿ ಇತ್ತು. ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಪಕ್ಷದ ಗೆಲುವು ಸಾಧಿಸುವ ನಿಟ್ಟಿನಲ್ಲಿ ಎಲ್ಲರೂ ಒಮ್ಮತದಿಂದ ರಾಜೂ ಆಲಗೂರ ಅವರನ್ನು ಆಯ್ಕೆ ಮಾಡಲಾಗಿದೆ.ಸಿಂದಗಿ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಪಂಚಾಯತ್ ಮತಕ್ಷೇತ್ರಗಳಲ್ಲಿ ಎ.೦೨ರಿಂದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಳ್ಳಲಾಗುವುದು. ಎ.೦೨ರಂದು ಕನ್ನೊಳ್ಳಿ ಗ್ರಾಮದ ಬೆಳಿಗ್ಗೆ ೧೦ಗಂಟೆಗೆ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪ, ಮದ್ಯಾಹ್ನ ೧ಗಂಟೆಗೆ ಯಂಕಂಚಿಯ ಬೀರಲಿಂಗೇಶ್ವರ ಕಲ್ಯಾಣ ಮಂಟಪ, ಸಾಯಂಕಾಲ ೪ಗಂಟೆಗೆ ಮೋರಟಗಿಯಲ್ಲಿ, ೬ಗಂಟೆಗೆ ದೇವಣಗಾವ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುವುದು. ಎ.೦೩ರಂದು ತಾಂಬಾ ಗ್ರಾಮದ ಶಾದಿ ಮಹಲನಲ್ಲಿ,…

Read More

ಮುದ್ದೇಬಿಹಾಳ: ಅಗ್ನಿಶಾಮಕದಳದ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಪಟ್ಟಣದ ಬಿದರಕುಂದಿ ರಸ್ತೆಯ ಪೆಟ್ರೋಲ್ ಪಂಪ ಬಳಿಯ ಗುಜರಿ ಅಂಗಡಿಯಲ್ಲಿ ನಡೆದಿದೆ.ಅಬ್ದುಲಹಮೀದ ಢವಳಗಿ ಎಂಬುವವರಿಗೆ ಸೇರಿದ ಗುಜರಿ ಸರಕಿಗೆ ಏಕಾಏಕಿ ಬೆಂಕಿ ಹತ್ತಿದ್ದು, ಅಗ್ನಿಶಾಮಕದವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಹಾಜರಾದ ಸಿಬ್ಬಂದಿಗಳಾದ ರಮೆಶ ಚಳ್ಳಣ್ಣವರ, ಸುಭಾಷ್ ರಾಠೋಡ, ಭೀಮರಾವ ನಾಟೆಕಾರ, ಮಸ್ತಾನ್ ಮುಲ್ಲಾಗೋಳ, ಪ್ರಕಾಶ ಸುಬ್ಬಣ್ಣಗೋಳ, ಮಹೇಶ ಕರಡ್ಡಿ, ಸಿದ್ದಣ್ಣ ಪೊಲೇಶಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಪರಿಶೀಲಿದ್ದಾರೆ.

Read More

ಮುದ್ದೇಬಿಹಾಳ: ಮೇ.೭ ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ ನಿಮ್ಮ ಹಕ್ಕು ಚಲಾಯಿಸಿ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಕಲ್ಮನಿ ಹೇಳಿದರು.ತಾಲೂಕಿನ ಗೋನಾಳ ಗ್ರಾಮದಲ್ಲಿ ಪ್ರಗತಿಯಲ್ಲಿದ್ದ ನರೇಗಾ ಕಾಮಗಾರಿ ಸ್ಥಳದಲ್ಲಿ ಹಿರೇಮುರಾಳ ಗ್ರಾಮ ಪಂಚಾಯತಿ ಮತ್ತು ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಭಾನುವಾರ ನಡೆದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಮತದಾನ ಬಹುಮುಖ್ಯ ಪಾತ್ರ ವಹಿಸಿದೆ. ಪ್ರತಿಯೊಬ್ಬ ಪ್ರಜೆಗೂ ತನ್ನ ಹಕ್ಕನ್ನು ಚಲಾಯಿಸಲು ಅವಕಾಶ ನೀಡಲಾಗಿದೆ. ಪ್ರಜೆಗಳ ಆಯ್ಕೆಯಿಂದ ಸದೃಢ ಸರ್ಕಾರಗಳ ರಚನೆಯಾಗುತ್ತದೆ. ಆದ್ದರಿಂದ ಯಾರು ಮತದಾನದಿಂದ ವಂಚಿತರಾಗದೆ ನಿಮ್ಮ ಹಕ್ಕು ಚಲಾಯಿಸಿ ಎಂದು ಮನವಿ ಮಾಡಿದರು.ಹಿರೇಮುರಾಳ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಕೆ.ಎಚ್.ಕುಂಬಾರ ನರೇಗಾ ಕೂಲಿಕಾರರಿಗೆ “ಮತದಾನ ಪ್ರತಿಜ್ಞೆ ವಿಧಿ” ಬೋಧಿಸಿದರು. ಈ ವೇಳೆ ಗ್ರಾ.ಪಂ. ಎಸ್‌ಡಿಎ ಎನ್.ಜಿ.ಬಿರಾದಾರ, ತಾಂತ್ರಿಕ ಸಹಾಯಕ ಆಶೀಫ್ ಗೋಗಿ, ಜಿಕೆಎಂ ಶಿವಲೀಲಾ ಪಾಟೀಲ್ ಸೇರಿದಂತೆ ಗ್ರಾ.ಪಂ.ಸಿಬ್ಬಂದಿ ಇದ್ದರು.

Read More