Author: editor.udayarashmi@gmail.com

ದೇವರಹಿಪ್ಪರಗಿ: ಸಾಮರಸ್ಯದಿಂದ ಬದುಕಲು ಸಂಸ್ಕಾರ ಹಾಗೂ ಶಿಕ್ಷಣ ಅತ್ಯಗತ್ಯವಾಗಿವೆ ಎಂದು ಸ್ಥಳೀಯ ಗದ್ದುಗೆಮಠ ಮಡಿವಾಳೇಶ್ವರ ಸ್ವಾಮೀಜಿ ಹೇಳಿದರು.ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಮಸೀದೆ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಸಮುದಾಯದ ಸಂಸ್ಕಾರ ಹಾಗೂ ಅನುಕೂಲಕ್ಕಾಗಿ ವಕೀಲ ಎ.ಎಂ. ತಾಂಬೋಳಿ ತಮ್ಮ ಧರ್ಮಪತ್ನಿ ಸ್ಮರಣಾರ್ಥ ೨೫ ಲಕ್ಷ.ರೂಗಳ ವೆಚ್ಚದಲ್ಲಿ ಸ್ವಂತ ಮಸೀದಿ ನಿರ್ಮಾಣ ಮಾಡಿರುವ ಕಾರ್ಯ ಶ್ಲಾಘನೀಯ. ಆಧುನಿಕತೆಯ ಧಾವಂತದಲ್ಲಿ ಇಂದು ಧಾರ್ಮಿಕ ಚಿಂತನೆ ಕಡಿಮೆ ಆಗುತ್ತಿದೆ. ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ, ಸಭ್ಯತೆ ರೂಡಿಯಾಗಬೇಕು. ಧಾರ್ಮಿಕ ಚಿಂತನೆಯ ಕಲ್ಪನೆ ಮೂಡಬೇಕು. ಯುವ ಜನಾಂಗಕ್ಕೆ ಮಾದರಿಯಾಗಿ ಇದರ ಸದುಪಯೋಗವಾಗಲಿ ಎಂದರು.ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಹಾಗೂ ರಾಜ್ಯ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ (ಗಣಿಹಾರ)ಮಾತನಾಡಿ, ಸಮಾಜದ ಸಾಮರಸ್ಯಕ್ಕೆ ಮೊದಲು ಶಿಕ್ಷಣ ಅಗತ್ಯ. ಅದಕ್ಕಾಗಿ ಉತ್ತಮ ಶಿಕ್ಷಣ ಕೊಡಿಸಲು ಪಾಲಕರು ಪ್ರಯತ್ನಿಸಬೇಕು. ಶಿಕ್ಷಣದಿಂದಲೇ ಎಲ್ಲವೂ ಸಾಧ್ಯ. ಮಸೀದೆ ಜೊತೆಗೆ ಉತ್ತಮ ಶಿಕ್ಷಣ ಸಂಸ್ಥೆ ಕಟ್ಟಿ, ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮ ಸಂಘಟಕ ನ್ಯಾಯವಾದಿ…

Read More

ಕನಮಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿದ ಸಚಿವ ಎಂ. ಬಿ. ಪಾಟೀಲ ಅಭಿಮತ ವಿಜಯಪುರ: ಮೋದಿ ನೇತೃತ್ವದ ಕೇಂದ್ರ ಸರಕಾರದ ದೂರದೃಷ್ಠಿಯ ಕೊರತೆಯಿಂದಾಗಿ ಇಂದು ದೇಶದಲ್ಲಿ ರೂಪಾಯಿ ಮೌಲ್ಯ ಕುಸಿದು ಬೆಲೆ ಏರಿಕೆಯಿಂದ ಜನರು ತತ್ತರಿಸುವಂತಾಗಿದೆ ಎಂದು ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಬುಧವಾರ ಮುಸ್ಸಂಜೆ ಲೋಕಸಭೆ ಚುನಾವಣೆ ಹಿನ್ನೆಲೆ ತಿಕೋಟಾ ತಾಲೂಕಿನ ಕನಮಡಿಯಲ್ಲಿ ಜಿ. ಪಂ. ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಬಿಜೆಪಿಯವರು ಪ್ರಶ್ನಿಸುತ್ತಾರೆ. ಆದರೆ, ಕಾಂಗ್ರೆಸ್ ದೇಶಕ್ಜೆ ಸ್ವಾತಂತ್ರ್ಯ ತಂದು ಕೊಟ್ಟು ಸ್ವಾತಂತ್ರ್ಯ ನಂತರ ದೇಶವನ್ನು ಕಟ್ಟುವ ಕೆಲಸ ಮಾಡಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಕ್ಷದ ಲಕ್ಷಾಂತರ ಹಿರಿಯರು ತ್ಯಾಗ ಮತ್ತು ಬಲಿದಾನ ಮಾಡಿ ಹುತಾತ್ಮರಾಗಿದ್ದಾರೆ. ಆದರೆ, ಇದೇ ಬಿಜೆಪಿಯವರು ಬ್ರಿಟೀಷರಿಗೆ ಬೆಂಬಲವಾಗಿ ನಿಂತಿದ್ದರು. ಸ್ವಾತಂತ್ರ್ಯದ ನಂತರ ದೇಶದ ಆಹಾರದ ಕೊರತೆ ನೀಗಿಸಲು ಜವಾಹರಲಾಲ ನೆಹರು ಮತ್ತು ಲಾಲ ಬಹಾದ್ದೂರ ಶಾಸ್ತ್ರಿ ಅವರು ಹಸಿರು…

Read More

ಪುಣೆ ನಮ್ಮವರು ಸಂಘದಿಂದ ಮಹಿಳಾ ದಿನಾಚರಣೆ | ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಪುಣೆ ಘಟಕದ ವಾರ್ಷಿಕೋತ್ಸವ ಪುಣೆ: ನಗರದಲ್ಲಿ ’ನಮ್ಮವರು ಸಂಘ’ದಿಂದ ಮಹಿಳಾ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಪುಣೆ ಘಟಕ ದ ಎರಡನೆಯ ವಾರ್ಷಿಕೋತ್ಸವವನ್ನು ಏ.೧೩ರಂದು ತಾರಂಗಣ ಸಭಾಗೃಹದಲ್ಲಿ ಆಚರಿಸಲಾಯಿತು.ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಹಾಗೂ ಮುಖ್ಯ ಅತಿಥಿಗಳು ದೀಪ ಬೆಳಗಿಸಿ, ನಾಡಗೀತೆ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ವಿರಜಾ ಭಟ್ ಮತ್ತು ಚಂದ್ರಕಾಂತ ಹಾರಕುಡೆ ಅವರು ನಮ್ಮವರು ಸಂಘದ ಎಲ್ಲಾ ಕೆಲಸ ಕಾರ್ಯಗಳನ್ನು ಹೊಗಳಿ ಹಾರೈಸಿದರು. ಬಸವರಾಜ ಹಿರೇಮಠ ನಮ್ಮವರು ಸಂಘ ಮತ್ತು ಮಕ್ಕಳ ಸಾಹಿತ್ಯ ಸಮ್ಮೇಳನದ ಬಗ್ಗೆ ವಿವರಣೆ ನೀಡಿ ಮುಂಬರುವ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ನಮ್ಮವರು ಸಂಘದ ನೂತನ ಕಾರ್ಯಕಾರಿ ಸಮಿತಿಯಲ್ಲಿ ಭಾರ್ಗವ, ವೇಣು ಅಚ್ಯುತ್, ಶಿವಣ್ಣ ಪಟ್ಟಣ, ಸತೀಶ್ ಮೆಣಸಿಗಿ, ವೆಂಕಟೇಶ ಕುಲ್ಕರ್ಣಿ, ಶ್ರೀ ಅಂಕಿತ, ಹಾಗೂ ಸಂಗಮೇಶ…

Read More

ಚಡಚಣ: ಪಟ್ಟಣದ ಬಿಜೆಪಿ ಯುವ ಮುಖಂಡ ಅಮನ್ ಅಶ್ವಥ್ ಕುಲಕರ್ಣಿ ಅವರನ್ನು ವಿಜಯಪುರ ಜಿಲ್ಲಾ ಸಾಮಾಜಿಕ ಜಾಲತಾಣ ಸಮಿತಿಯ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಿ, ನೇಮಕ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಸಮಿತಿ ಅಧ್ಯಕ್ಷ ಸಮೀರ ನರಸಿಂಹ ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರದ ಸಂಸ್ಕೃತಿ ಕಾಲೊನಿಯಲ್ಲಿ ಮಾಹೂರಿ ಜಿ-ಫ್ರೆಶ್ ಸೂಪರ್ ಮಾರ್ಕೆಟ್ ಮಳಿಗೆಗೆ ಚಾಲನೆ ವಿಜಯಪುರ: ಉಪಾಯಗಳು ಜಗತ್ತನ್ನೇ ಬೆಳಗುತ್ತವೆ. ಹಾಗೆ ಮುಳವಾಡದ ಪ್ರತಿಷ್ಠಿತ ದೇಶಪಾಂಡೆ ಮನೆತನವು ತಮ್ಮ ಉನ್ನತ ವಿಚಾರಗಳಿಂದ ಹಲವು ಕ್ವೇತ್ರಗಳಲ್ಲಿ ಯಶಸ್ಸು ಸಾಧಿಸಿದ್ದಾರೆಂದು ಆಕ್ಸಪರ್ಡ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಗುರುವಾರ ನಗರದ ಸಂಸ್ಕೃತಿ ಕಾಲೊನಿಯಲ್ಲಿ ಮಾಹೂರಿ ಜಿ-ಫ್ರೆಶ್ ಸೂಪರ್ ಮಾರ್ಕೆಟ್ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.ಹತ್ತಾರು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಜನೋಪಯೋಗಿ ಉದ್ದಿಮೆ ಆರಂಭಿಸಿದ ದೇಶಪಾಂಡೆ ಅವರು ಇದರಲ್ಲಿ ಯಶಸ್ಸು ಕಾಣಲಿ ಎಂದು ಬಬಲೇಶ್ವರ ಹಾರೈಸಿದರು.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಕ್ಕಳ ಸಾಹಿತಿ ಪ.ಗು.ಸಿದ್ದಾಪೂರ ಮಾತನಾಡಿ, ಆದರ್ಶ ಕುಟುಂಬಗಳು ಇನ್ನೂ ನಶಿಸಿಲ್ಲ ಎನ್ನುವುದಕ್ಕೆ ದೇಶಪಾಂಡೆ ಮನೆತನವೇ ಸಾಕ್ಷಿ. ದೇಶಪಾಂಡೆ ಅವರು ಮುಳವಾಡದೊಂದಿಗೆ ಈಗ ವಿಜಯಪುರದಲ್ಲೂ ತಮ್ಮ ಹೆಜ್ಜೆಗುರುತು ಮೂಡಿಸಿದ್ದಾರೆ. ತಾವಷ್ಟೇ ಉದ್ಯೋಗಿಗಳಾಗದೇ ಹಲವರಿಗೆ ಉದ್ಯೋಗ ನೀಡುವ ಸುಪರ್ ಮಾರ್ಕೆಟ್ ಆರಂಭಿಸಿದ್ದು ಶ್ಲಾಘನೀಯ ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಮಾತನಾಡಿ, ಈ ಭಾಗದ…

Read More

ಚಹಾ ಹೋಟೆಲಲ್ಲಿ ಚೂಡಾ ತಿನ್ನುವಾಗಲೇ ಆಲಗೂರರಿಗೆ ಬಂತು ಖರ್ಗೆ ಕರೆ! ವಿಜಯಪುರ: ತಮ್ಮ ಸರಳತೆ, ಸಜ್ಜನಿಕೆಯಿಂದಲೇ ಮತದಾರರ ಮನಸ್ಸು ಗೆಲ್ಲುತ್ತಿರುವ ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಗುರುವಾರ ಬೆಳಗ್ಗೆ ಸಾಮಾನ್ಯರ ಜತೆಗೇ ಕುಳಿತು ಉಪಹಾರ ಸೇವಿಸಿದ್ದು ವಿಶೇಷವಾಗಿತ್ತು.ಹೀಗೆ ಜನಸಾಮಾನ್ಯರ ಜತೆ ಪ್ರಚಾರಕ್ಕೂ ಮುನ್ನ ನಗರದ ಸೊಲ್ಲಾಪುರ ರಸ್ತೆಯ ಬಿಎಲ್ಡಿಇ ಆವರಣದ ಮುಂದಿನ ಕ್ಯಾಂಟೀನ್‌ವೊಂದರಲ್ಲಿ ಚಹಾ ಕುಡಿಯುತ್ತ ಚರ್ಚಿಸುತ್ತಿದ್ದಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕರೆ ಬಂದಿದ್ದು ಮತ್ತೂ ವಿಶೇಷವಾಗಿತ್ತು. ಖರ್ಗೆಯವರು ಚುನಾವಣೆ ಕುರಿತು ಮಾಹಿತಿ ಪಡೆದು, ಹೇಗೆ ನಡೆಯುತ್ತಿದೆ ಪ್ರಚಾರ? ನಿಮ್ಮ ಬಗ್ಗೆ ಹೈಕಾಮಂಡ್‌ಗೆ ಒಳ್ಳೆಯ ವರದಿ ಬಂದಿದೆ. ನೀವು ಗೆಲ್ಲುವ ಅಭ್ಯರ್ಥಿಯಾಗಿದ್ದೀರಿ. ಎಲ್ಲರ ಸಹಕಾರ ಪಡೆಯಿರಿ ಎಂದು ಹೇಳಿದರು. ಹೋಟೆಲ್‌ವೊಂದರಲ್ಲಿ ಇರುವುದಾಗಿ ಹೇಳಿದ ಆಲಗೂರರು, ಜಿಲ್ಲೆಯ ಎಲ್ಲ ಪ್ರಮುಖ ನಾಯಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಎಲ್ಲರೂ ಒಮ್ಮತ ಹಾಗೂ ಉತ್ಸಾಹದಿಂದ ಬೆನ್ನಿಗಿದ್ದು ಪಕ್ಷದ ಗೆಲುವಿಗಾಗಿ ಶತ ಪ್ರಯತ್ನ ಮಾಡುತ್ತಿದ್ದಾರೆ. ಕೆಳ ಹಂತದಿಂದ ಮತದಾರರನ್ನು ತಲುಪುತ್ತಿದ್ದೇವೆ ಎಂದು ವಿವರಿಸಿದರು.ಖರ್ಗೆಯವರು ಇದಕ್ಕುತ್ತರಿಸಿ,…

Read More

ಮುದ್ದೇಬಿಹಾಳ: ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿ ರೂ.೩೪೯ಕ್ಕೆ ಹೆಚ್ಚಳವಾಗಿದ್ದು, ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕು ನೂರು ದಿನಗಳ ಅನುಭವ ವಿಲ್ಲದ ಕೆಲಸ ನೀಡಲಾಗುವುದು. ನರೇಗಾ ಕೂಲಿಕಾರರು ಗ್ರಾಮ ಪಂಚಾಯತಿಗಳಿಗೆ ಕೆಲಸದ ಬೇಡಿಕೆ ಅರ್ಜಿಗಳನ್ನು ಸಲ್ಲಿಸಿ ಯೋಜನೆಯ ಪಾಲುದಾರರಾಗಿ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಕಲ್ಮನಿ ಕರೆ ನೀಡಿದರು.ತಾಲೂಕಿನ ಬಸರಕೋಡ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತ ಹಾಗೂ ತಾಲೂಕು ಮಾಹಿತಿ, ಶಿಕ್ಷಣ ಹಾಗೂ ಸಂವಹನ ಕಾರ್ಯಕ್ರಮ ಸಹಯೋಗದಲ್ಲಿ ಬುಧವಾರ ನಡೆದ ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕೂಲಿಕಾರರ ದಿನದ ಕೂಲಿ ೩೧೬ ರಿಂದ ೩೪೯ಕ್ಕೆ ಏರಿಕೆಯಾಗಿದೆ. ವರ್ಷಕ್ಕೆ ೧೦೦ ದಿನ ಕೆಲಸ ಮಾಡಿದರೆ ರೂ. ೩೪,೯೦೦ ಕೂಲಿ ಹಣ ಪಡೆದುಕೊಳ್ಳಬಹುದು. ಗ್ರಾಮೀಣ ಕುಟುಂಬಗಳಿಗೆ ನರೇಗಾ ಯೋಜನೆ ಸಹಕಾರಿಯಾಗಿದೆ. ಯೋಜನೆ ಬಗ್ಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚು ಪ್ರಚಾರ ಮಾಡಿ ಕೂಲಿಕಾರರು ಕೆಲಸಕ್ಕೆ ಬರುವಂತೆ ಪ್ರೇರೆಪಿಸಬೇಕು. ಬರಗಾಲವನ್ನು ಸಮರ್ಥವಾಗಿ ಎದುರಿಸಲು ನರೇಗಾ ಯೋಜನೆ ಸಹಕಾರಿಯಾಗಿದೆ.…

Read More

ಪುರಸಭೆ ಅಧಿಕಾರಿಗಳ ಧಿವ್ಯನಿರ್ಲಕ್ಷ್ಯ | ವರ್ಷಗಳಾದರೂ ದುರಸ್ತಿಯಾಗದ ಚರಂಡಿ ಚೇತನ ಶಿವಶಿಂಪಿಮುದ್ದೇಬಿಹಾಳ: ಸ್ವಚ್ಛ ಭಾರತ ಅಭಿಯಾನದ ಮೂಲಕ ಸರ್ಕಾರ ದೇಶವನ್ನು ಸ್ವಚ್ಛಗೊಳಿಸುವ ಕನಸು ಕಾಣುತ್ತಿದೆ. ಆದರೆ ಕೆಲ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಆ ಕನಸು ಕನಸಾಗಿಯೇ ಉಳಿದಿದೆ ಹೊರತು ನನಸಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ ಎನ್ನುವ ಸಾರ್ವಜನಿಕರ ಆರೋಪಕ್ಕೆ ಸಾಕ್ಷಿಯಾದ ಉದಾಹರಣೆಯೊಂದು ಇಲ್ಲಿದೆ.ಚರಂಡಿ ತುಂಬಿ ರಸ್ತೆಯಲ್ಲೆಲ್ಲಾ ಕೊಳಕು ನೀರು, ಆ ನೀರನ್ನೇ ತುಳಿದುಕೊಂಡು ಓಡಾಡುವ ಸಾರ್ವಜನಿಕರು, ವಾಯು ವಿಹಾರಿಗಳು, ವಿದ್ಯಾರ್ಥಿಗಳು. ಚರಂಡಿ ಒಡೆದು ವರ್ಷಗಳೇ ಕಳೆದರೂ ಬಂದು ನೋಡದ ಅಧಿಕಾರಿಗಳು, ಜನಪ್ರತಿನಿಧಿಗಳು. ದಿನ ನಿತ್ಯ ಸಾವಿರಾರು ಜನ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಲೇ ಓಡಾಟ.ಈ ಸಮಸ್ಯೆ ಕಂಡು ಬಂದಿದ್ದು ಪಟ್ಟಣದ ವಿಬಿಸಿ ಹೈಸ್ಕೂಲ್ ನ ಮುಖ್ಯ ದ್ವಾರದ ಎದುರು. ಈ ಶಾಲಾ ಆವರಣದ ಮೂಲಕ ದಿನನಿತ್ಯ ವಾಯುವಿಹಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಓಡಾಡುತ್ತಾರೆ. ಆದರೆ ಈ ಶಾಲಾ ಆವರಣದ ಮುಖ್ಯ ದ್ವಾರದ ಬಳಿ ಇರೋ ಚರಂಡಿ ಮೇಲಿಂದ ಮೇಲೆ ತುಂಬಿ…

Read More

ಬಿಜೆಪಿ ಚುನಾವಣಾ ಉಸ್ತುವಾರಿ, ರಾಷ್ಟ್ರೀಯ ಪ್ರ.ಕಾರ್ಯದರ್ಶಿ ರಾಧಾ ಮೋಹನದಾಸ್ ಅಗರವಾಲ್ ಕರೆ ವಿಜಯಪುರ: ಹಣ ಇದ್ದವರು ರಾಜಕಾರಣಕ್ಕೆ ಬರುವುದು ಪುನಃ ಹಣ ಗಳಿಸುವುದಕ್ಕೆ, ಆದರೆ ಹಣ ಇರದವರು ರಾಜಕಾರಣಕ್ಕೆ ಬರುವುದು ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸುವುದಕ್ಕಾಗಿ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನದಾಸ್ ಅಗರವಾಲ್ ಹೇಳಿದರು.ನಗರದ ಸಂಗನಬಸವನ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ಈಗಾಗಲೇ ಸಂಸದನಾಗಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮುಂದಿನ ೫ ವರ್ಷಗಳ ಕಾಲ ಬಾಕಿ ಉಳಿದಿರುವ ಎಲ್ಲಾ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.ಬೂತ ಮಟ್ಟದ ಕಾರ್ಯಕರ್ತರು ನಿಮ್ಮ ಬೂತ್ ಗಟ್ಟಿ ಮಾಡಿಕೊಂಡರೆ ಚುನಾವಣೆ ಗೆಲುವು ಸರಳವಾಗಿ ಆಗುತ್ತದೆ. ಕಾರ್ಯಕರ್ತರು ತಮ್ಮ ಬಂಧು ಮಿತ್ರರನ್ನು ಫೋನ್ ಮೂಲಕ ಸಂಪರ್ಕಿಸಿ ಬಿಜೆಪಿಗೆ ಮತ ಹಾಕಲು ಮನವಿ ಮಾಡಲು ಕಾರ್ಯಕರ್ತರು ಶ್ರಮಿಸಬೇಕೆಂದರು.ಚುನಾವಣೆಯಲ್ಲಿ ಹಣ ಖರ್ಚು ಮಾಡದೇ ಪುಕ್ಸಟ್ಟೆ…

Read More