ವಿಜಯಪುರ: ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಜಯಪುರ ತಾಲೂಕಿನ ಜಂಬಗಿ (ಆ) ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭಾವ್ಯಕತ್ಯೆಯ ಹಜರತ್ ಪೀರ ಬಡೇಸಾಹೇಬ ದರ್ಗಾ (ಉರುಸು) ಕಾರ್ಯಕ್ರಮವು ದಿ ೦೧-೦೭-೨೦೨೪ ರಿಂದ ೦೩-೦೭-೨೦೨೪ರ ವರೆಗೆ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ.
ದಿನಾಂಕ : ೦೧-೦೭-೨೦೨೪ ರಂದು ಸೋಮವಾರ ದಿವಸ ರಾತ್ರಿ ೧೦.೩೦ ಗಂಟೆಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಹಾಯ್ದು ಹಜರತ್ ಪೀರ ಬಡೇಸಾಹೇಬ ಹಾಗೂ ಮೂಕಮತಾಯಿ ಗಂಧ ಏರಿಸುವ ಕಾರ್ಯಕ್ರಮ ಜರುಗುವದು.
ದಿನಾಂಕ : ೦೨-೦೭-೨೦೨೪ ರಂದು ಮಂಗಳವಾರ ಹಜರತ್ ಪೀರ ಬಡೇಸಾಹೇಬ ದೇವರಿಗೆ ನೈವಿದ್ಯ ಹಾಗೂ ದೀಡ ನಮಸ್ಕಾರ ಕಾರ್ಯಕ್ರಮ ಜರುಗುವದು. ದಿನಾಂಕ : ೦೩-೦೭-೨೦೨೪ ರಂದು ಬುಧವಾರ ದಿವಸ ಹಜರತ್ ಪೀರ ಬಡೇಸಾಹೇಬ ದೇವರ ಬಾಸಿ ದೀಪ ಇಳಿಸುವ ಹಾಗೂ ಅನ್ನಪ್ರಸಾದ ಕಾರ್ಯಕ್ರಮ ಜರುಗುವದು ಎಂದು ಹಜರತ್ ಪೀರ ಬಡೇಸಾಹೇಬ ಉರುಸ ಕಮೀಟಿಯ ಮಹಾಂತರಾವ ದೇಶಮುಖ, ಮುತ್ತುವಲ್ಲಿ ಮಹ್ಮದ ಪೈಗಂಬರ ಮುಲ್ಲಾ ಹಾಗೂ ಸಿದ್ದು ಗೇರಡೆ, ಹಾಜಿಮಲಂಗ ಮುಲ್ಲಾ, ಕಲ್ಲಪ್ಪ ತಳವಾರ, ಸೈಪನಸಾಬ ಬೆನಕನಹಳ್ಳಿ, ಮಹ್ಮದ ರಫೀಕ ಮುಲ್ಲಾ, ಅಜೀಜ ಮುಲ್ಲಾ, ಇನ್ನಿತರರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

