ವಿಜಯಪುರ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಬ್ಬಳ್ಳಿ ಹಾಗೂ ಬಿ.ಎಲ್.ಡಿ.ಇ.ಎ ಸಂಸ್ಥೆಯ ಕಾನೂನು ಕಾಲೇಜಿನ ಸಹಯೋಗದಲ್ಲಿ ಅಂತ ಕಾಲೇಜು ಮಟ್ಟದಲ್ಲಿ ಕಾನೂನು ವಿದ್ಯಾರ್ಥಿ ವಿದ್ಯಾರ್ಥಿಣಿಯರಿಗಾಗಿ ಆಯೋಜಿಸಿದ ಚೆಸ್ ಟೋರ್ನಾಮೆಂಟ್ ಹಮ್ಮಿಕೊಂಡ ಸಂದರ್ಭದಲ್ಲಿ ವಿಜಯಪುರದ ಅಂಜುಮನ್ ಕಾನೂನು ಕಾಲೇಜಿನ ಐದು ವಿದ್ಯಾರ್ಥಿಗಳಾದ ಸಮೀರ್ ಖಾಜಿ (ಕ್ಯಾಪ್ಟನ್), ಅಮೀರ ಎನ್. ಕೋರ್ತಿ, ಪ್ರದೀಪ ಬಳಗಾನೂರ, ಆನಂದ ಕಾಳಗಿ, ಶಶಿಕುಮಾರ ನುಗ್ಗಿ ಇವರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
ಸಮೀರ ಖಾಜಿ ಇವರು ಪ್ರಥಮ ಅತ್ಯುತ್ತಮ ಆಟಗಾರರೆಂದು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದೈಹಿಕ ನಿರ್ದೇಶಕರಾದ ತೌಪಿಕ್ ಅಹ್ಮದ ಕೂಡಗಿ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿ ಹರ್ಷವ್ಯಕ್ತಪಡಿಸಿದ್ದರು.
ಇದೇ ಸಂದರ್ಭದಲ್ಲಿ ಅಂಜುಮನ್ ಕಾನೂನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಂತರ ಕಾಲೇಜು ಚೆಸ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಲ್ಲಾ ಚೆಸ್ ಆಟಗಾರರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಿಗೆ ಅಭಿನಂದಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

