ಮೋರಟಗಿ: ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಸಂಸ್ಕೃತಿ ಹೊಂದಿದಂತ ನಾಡು ನಮ್ಮದು. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಯುವ ಪೀಳಿಗೆಗೆ ದಾರಿದೀಪವಾಗುತ್ತವೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಗ್ರಾಮದ ಆರಾಧ್ಯದೇವ ಶ್ರೀವೀರಭದ್ರೇಶ್ವರ ಜಾತ್ರೆಯ ಪ್ರಯುಕ್ತ ಗುರುವಾರ ರಾತ್ರಿ ಹಮ್ಮಿಕೊಂಡ ಧರ್ಮ ಸಭೆಯಲ್ಲಿ ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದಂತೆ ಜಾತ್ರೆಗಳು ಸಂಸ್ಕೃತಿಕ ಕಾರ್ಯಕ್ರಮಗಳು ಸಂಸಾರಿಕ ನಾಟಕ, ಬಯಲಾಟ ಗಳು ಮಾಯವಾಗುತ್ತಿವೆ. ನಮ್ಮ ಹಿರಿಯರ ಕಾಲದಲ್ಲಿ ಒಡೆದು ಹೋದಂತ ಸಂಸಾರಗಳು ಒಳ್ಳೆಯ ನಾಟಕಗಳು ನೋಡಿ ಅದರಲ್ಲಿ ಬರುವಂತಹ ದೃಶ್ಯಗಳನ್ನು ವೀಕ್ಷಿಸಿ ತಮ್ಮಷ್ಟಕ್ಕೆ ತಾವೇ ಒಗ್ಗೂಡಿದ್ದಾರೆ. ಆ ನಿಟ್ಟಿನಲ್ಲಿ ಇಂದಿನ ಯುವಕರು ಅನವಶ್ಯಕವಾಗಿ ಮೊಬೈಲ್ ಉಪಯೋಗಿಸದೆ, ಸತ್ಯ ಶರಣರ ಸಂತರ, ದಾಸರ ಪುರಾಣ ಪ್ರವಚನಗಳನ್ನು ಆಲಿಸಿ ಉತ್ತಮ ನಾಗರೀಕರಾಗಿ ಹೊರಹೊಮ್ಮಬೇಕು ಎಂದು ಹೇಳಿದ ಅವರು, ಈ ಗ್ರಾಮದಲ್ಲಿ ವರ್ಷದೊಳಗೆ ತಿಂಗಳಿಗೊಂದು ಜಾತ್ರೆಗಳು ಹಮ್ಮಿಕೊಂಡು ಜಾತ್ಯತೀತವಾಗಿ ಧಾರ್ಮಿಕ ಸಮಾರಂಭಗಳು ಹಮ್ಮಿಕೊಳ್ಳುತ್ತಿರುವ ಗ್ರಾಮಸ್ಥರ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಕನ್ನಯ್ಯ ಮುತ್ಯಾ ಸಾನಿಧ್ಯ ವಹಿಸಿದ್ದರು, ಮಾಜಿ ಗ್ರಾ. ಪಂ. ಅಧ್ಯಕ್ಷ ಬಿ. ಟಿ. ಬೋನಾಳ, ಮಾಜಿ ತಾ. ಪಂ. ಸದಸ್ಯ ಜಿ. ಕೆ. ನೆಲ್ಲಗಿ, ಸಂತೋಷ ಶಾಬಾದಿ, ರೇವಣಸಿದ್ಧ ಮಸಳಿ, ಡಾ, ರವೀಂದ್ರ ಕುಲಕರ್ಣಿ, ಡಾ, ರಾಜಶೇಖರ ಪತ್ತಾರ, ನಾಗೇಶ ಶ್ಯಾಬಾದಿ ಸೇರಿದಂತೆ ಹಲವರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

