ಕೊಲ್ಹಾರ: ಪಟ್ಟಣಕ್ಕೆ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿ ೨೧೮ರಲ್ಲಿ ವಾಹನಗಳ ದಟ್ಟಣೆ ಸಂಚಾರದಿಂದ ಸರಣಿ ಅಪಘಾತಗಳಾಗುತ್ತಿದ್ದು ಕೆಲವು ಕಡೆ ಹಂಪ್ಸ್ಗಳನ್ನು ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಾವುಗಳು ಸೂಚಣೆ ಕೊಡಬೇಕೆಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಪಟ್ಟಣದ ಸಾರ್ವಜನಿಕರು ಮನವಿ ಸಲ್ಲಿಸಿದರು.
ಕಾರ್ಯನಿಮಿತ್ಯ ಜಿಲ್ಲಾಧಿಕಾರಿ ಟಿ. ಭೂಬಾಲನ್ ಕೊಲ್ಹಾರ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಹಶೀಲ್ದಾರ ಕಚೇರಿಯಲ್ಲಿ ಅವರನ್ನು ಚಂದ್ರಶೇಖರಯ್ಯ ಹಿರೇಮಠ ನೇತೃತ್ವದಲ್ಲಿ ಭೇಟಿಯಾದ ಸ್ಥಳೀಯ ಮುಖಂಡರು ಬೀಳಗಿ ತಾಲೂಕಿನ ಗೋವಿನದಿನ್ನಿ ಟಕ್ಕಳಕಿ ವಸ್ತಿ ಪ್ರದೇಶದಿಂದ ಸೇತುವೆಯು ಸೇರಿದಂತೆ ಕೊಲ್ಹಾರ ತಾಲೂಕಿನ ಮುಳವಾಡ ಕ್ರಾಸ್ ತನಕ ಮತ್ತು ಕೊಲ್ಹಾರ ಪಟ್ಟಣಕ್ಕೆ ಪುರ ಪ್ರವೇಶ ಮಾಡುವ ಗಾಣಸಿರಿ ವೃತ್ತ ತಹಶೀಲ್ದಾರ ಕಾರ್ಯಾಲಯ ಸಮೀಪ ರಾಷ್ಟ್ರೀಯ ಹೆದ್ದಾರಿಯನ್ನು ದಾಟುವಾಗ ಅಪಘಾತಗಳು ಹೆಚ್ಚಿನಸಂಖ್ಯೆಯಲ್ಲಿ ಸಂಭವಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಹಂಪ್ಸ್ಗಳ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ ಎಂದು ಮನವಿ ಸಲ್ಲಿಸಿದರು.
ಈ ವ್ಯಾಪ್ತಿಯಲ್ಲಿ ನಾಮಫಲಕ, ಜಾಗೃತ ಫಲಕ, ಯುಕೆಪಿಯಿಂದ ಕೊಲ್ಹಾರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಲು ಪ್ರತ್ಯೇಕವಾದ ಒಳಮಾರ್ಗದ ಸರ್ವಿಸ್ ರಸ್ತೆ ನಿರ್ಮಿಸುವ ಮೂಲಕ ಅಪಘಾತಗಳು ಸಂಭವಿಸುವದನ್ನು ನಿಯಂತ್ರಿಸಬಹುದು ಹಾಗಾಗಿ ತಾವುಗಳು ಕೂಡಲೇ ಕ್ರಮ ಕೈಗೊಳ್ಳಲು ಮುಂದಾಗುತ್ತೀರಿ ಎಂದು ತಮ್ಮಲ್ಲಿ ಭರವಸೆಯನ್ನು ಇಟ್ಟುಕೊಂಡಿದ್ದು ತಕ್ಷಣವೇ ನ್ಯಾಯಸಮ್ಮತವಾದ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದರು.
ತಹಶೀಲ್ದಾರ ಎಸ್.ಎಸ್.ನಾಯಕಲಮಠ, ಪಪಂ ಸದಸ್ಯ ನಿಂಗಪ್ಪ ಗಣಿ, ಚಂದ್ರಶೇಖರ್ ಹಿರೇಮಠ, ರಾಮಣ್ಣ ಉಪ್ಪಲದಿನ್ನಿ, ವೀರಭದ್ರಪ್ಪ ಬಾಗಿ, ಬನಪ್ಪ ಬಾಲಗೊಂಡ, ಸಮಾಜ ಸೇವಕ ಈರಯ್ಯ ಗಣಕುಮಾರ ಸೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

