Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿದ್ಯಾರ್ಥಿ ನಿಧಿ»ಲಕ್ಷ್ಮಣನ ಮಂದಹಾಸ
ವಿದ್ಯಾರ್ಥಿ ನಿಧಿ

ಲಕ್ಷ್ಮಣನ ಮಂದಹಾಸ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

– ಮಂಡ್ಯ ಮ.ನಾ.ಉಡುಪ

ವಾಲ್ಮೀಕಿ ರಾಮಾಯಣದಲ್ಲಿ ರಾವಣ ವಧೆಯ ನಂತರ
ನಡೆಯುವ ಪ್ರಸಂಗವಿದು. ರಾಮ, ಲಕ್ಷ್ಮಣ, ಸೀತೆ,
ಹನುಮಂತ ಎಲ್ಲರೂ ಅಯೋಧ್ಯೆಗೆ ಬರುತ್ತಾರೆ. ಭರತ
ಮತ್ತು ಶತೃಘ್ನರು ಪ್ರೀತಿಯಿಂದ ಎಲ್ಲರನ್ನೂ ಸ್ವಾಗತಿಸುತ್ತಾರೆ.
ಹೀಗೆ ಎಲ್ಲರೂ ಆನಂದದಿಂದ ಇರುವಾಗ ಲಕ್ಷ್ಮಣನು
ತನ್ನೊಳಗೆ ತಾನೇ ನಗುತ್ತಾನೆ. ಆ ಸಮಯದಲ್ಲಿ ಅಲ್ಲಿದ್ದ ಕೈಕೇಯಿ ತನ್ನ ಮನದಲ್ಲಿ ಅಂದುಕೊಳ್ಳುತ್ತಾಳೆ.
” ಅಂದು ರಾಮನನ್ನು ವನವಾಸಕ್ಕೆ ಕಳುಹಿಸಿ ಪತಿಯ ಸಾವಿಗೆ ಕಾರಣಳಾದ ನೀನು ಈ ದಿವಸ ನೀನು ರಾಮನನ್ನು ಸ್ವಾಗತಿಸುತ್ತೀಯಾ? “
ಎಂದು ಪರಿಹಾಸ್ಯಮಾಡಿ ನಗುತ್ತಿದ್ದಾನೆ ಎಂದುಕೊಂಡಳು. ವಿಭೀಷಣ ತನ್ನ ಮನಸ್ಸಿನಲ್ಲಿ
” ಮನೆಯ ಗುಟ್ಟನ್ನು ರಾಮನಿಗೆ ಹೇಳಿ ಲಂಕೆಗೆ ಕೇಡುಬಯಸಿ ಅಣ್ಣನನ್ನು ಕೊಲ್ಲಿಸಿ ಲಂಕಾಧಿಪತಿಯಾದೆನೆಂದು ?’ “
ನಗುತ್ತಿರಬಹುದು ಎಂದುಕೊಂಡನು.
ಸುಗ್ರೀವ ತನ್ನ ಮನಸ್ಸಿನಲ್ಲಿ
“ ಅಣ್ಣನನ್ನು ಮೋಸದಿಂದ ಕೊಂದು ರಾಜ್ಯ ಸಂಪಾದಿಸಿ
ರಾಮನ ಜೊತೆಯಲ್ಲಿ ಅನಂದದಿಂದ ಇರುವೆಯಾ “‘
ಎಂದು ಲಕ್ಷ್ಮಣ ಪರಿಹಾಸ್ಯ ಮಾಡಿ ನಗುತ್ತಿರಬಹುದು ಎಂದುಕೊಂಡನು.
ಸೀತೆ ತನ್ನ ಮನಸ್ಸಿನಲ್ಲಿ
“ ರಾಮ ಚಿನ್ನದ ಜಿಂಕೆ ತರಲು ಹೋದಾಗ ಮೂರುಗೆರೆಗಳನ್ನು ಎಳೆದು ಹೊರಬರಬೇಡವೆಂದು ಸಾರಿಸಾರಿ ಹೇಳಿದ್ದರೂ ತನ್ನ ದಾಟಿ ಮಾತು ಕೇಳದೇ ಬಂದಿರುವುದಕ್ಕೆ ತಾನೇ ರಾಮ-ರಾವಣ ಯುದ್ದಕ್ಕೆ ಕಾರಣವೆಂದು ಲಕ್ಷ್ಮಣ ತನ್ನನ್ನು ನೋಡಿ ನಗುತ್ತಿರಬಹುದು “
ಎಂದುಕೊಳ್ಳುತ್ತಾಳೆ ಸೀತೆ. ಶ್ರೀರಾಮಚಂದ್ರನು
“ ಸೀತೆ ಚಿನ್ನದ ಜಿಂಕೆ ಕೇಳಿದಾಗ ಅದು ರಾಕ್ಷಸ ಮಾಯೆಯೆಂದು ಗೊತ್ತಿದ್ದರೂ ಸಹ ಸೀತೆಗೆ ತಿಳಿಹೇಳದೇ ಮಾಯಾಜಿಂಕೆಯ ಹಿಂದೆ ಹೋಗಿರುವುದು ಬುದ್ದಿವಂತರ ಲಕ್ಷಣವಲ್ಲವೆಂದು ” ಲಕ್ಷ್ಮಣನು ನಗುತ್ತಿರಬಹುದು ಎಂದುಕೊಂಡನು.
ಮಂಥರೆಯು
“ಇಡೀ ತುಂಬು ಕುಟುಂಬಕ್ಕೆ ಹುಳಿಹಿಂಡಿ ಸಾಮರಸ್ಯ ಹಾಳು ಮಾಡಿದ ಪಾತಕಿ ಈಗ ಎಕೆ ಬಂದಿರುವಳೆಂದು’ ತನ್ನನ್ನು ನೋಡಿ ನಗುತ್ತಿರಬಹುದು “
ಎಂದುಕೊಂಡಳು.
ಹೀಗೆ ಎಲ್ಲರೂ ತಮ್ಮ ಕುರಿತೇ ಯೋಚಿಸುತ್ತಿರುವಾಗ ಕೌಸಲ್ಯ ಕೇಳುತ್ತಾಳೆ.
“ಮಗೂ ಲಕ್ಷ್ಮಣ ಹಾಗೇಕೆ ನಗುತ್ತಿರುವೆ? ಇಷ್ಟು ದೊಡ್ಡ ರಾಜ ಸಭೆಯಲ್ಲಿ ಒಬ್ಬನೇ ನಗುವುದು ಸರಿಯೇ? ನೀನು ಯಾರನ್ನು ನೋಡಿ ನಗುತ್ತಿರುವೆ? “
ಎಂದು ಲಕ್ಷ್ಮಣನನ್ನು ಕೇಳುತ್ತಾಳೆ. ಆಗ ಲಕ್ಷ್ಮಣ ಹೇಳುತ್ತಾನೆ
“ಅಮ್ಮಾ, ನಾನು ನಕ್ಕಿರುವುದು ಇಲ್ಲಿರುವ ಸಭಾಜನರನ್ನು ನೋಡಿ ಅಲ್ಲ. ನಾವು ಹದಿನಾಲ್ಕು ವರ್ಷ ವನವಾಸ ಮಾಡಿದೆವು. ಆ ಸಮಯದಲ್ಲಿ ಯಾವತ್ತೂ ನನ್ನ ಹತ್ತಿರ ಸುಳಿಯದ ನಿದ್ರೆ ಈ ದಿನ ಇಷ್ಟು ಆನಂದದ ಸಮಯದಲ್ಲಿ ನಿದ್ರೆಯು ಬಹುವಾಗಿ ಕಾಡುತ್ತಿರುವಾಗ ಈ ನಗು ಬಂದಿತು” ಎಂದನು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!
    In (ರಾಜ್ಯ ) ಜಿಲ್ಲೆ
  • ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ :ಎಸಿ ಅನುರಾಧ
    In (ರಾಜ್ಯ ) ಜಿಲ್ಲೆ
  • ಮಹಿಳೆಯರ ಸ್ವಾವಲಂಬನೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿ
    In (ರಾಜ್ಯ ) ಜಿಲ್ಲೆ
  • ವೈಜ್ಞಾನಿಕ ಮನೋಭಾವದ ಕೊರತೆಯಿಂದ ಮೌಢ್ಯಗಳ ಹೆಚ್ಚಳ
    In (ರಾಜ್ಯ ) ಜಿಲ್ಲೆ
  • ಕೊಂಡಗೂಳಿಗೆ ಸರ್ಕಾರಿ ಪ್ರೌಢಶಾಲೆ ಮಂಜೂರಿಗೆ ಆಗ್ರಹಿಸಿ ಸಚಿವರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಬಸವ ಚೇತನ ಪ್ರಶಸ್ತಿಗೆ ಕೆ.ಎಸ್.ಕೋರಿ ಆಯ್ಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.